Published : Jul 07, 2025, 07:21 AM ISTUpdated : Jul 07, 2025, 08:46 PM IST

Karnatata Latest News Live: Mandya - ಆಷಾಢ ಏಕಾದಶಿಯಂದು ಪುನೀತ್ ರಾಜ್‌ಕುಮಾರ್ ಫೋಟೋ ಮುಂದೆ ಎಡೆ ಇಟ್ಟು ಅಭಿಮಾನಿಯ ವಿಶೇಷ ಪೂಜೆ

ಸಾರಾಂಶ

ಬೆಂಗಳೂರು (ಜುಲೈ 7): ಕಾಂಗ್ರೆಸ್ಸಿನತ್ತ ದೇಶದ ಒಬಿಸಿ ಸಮುದಾಯಗಳನ್ನು ಸೆಳೆಯಲು ರಾಷ್ಟ್ರೀಯ ಸಲತಾ ಮಂಡಳಿಯನ್ನು ಎಐಸಿಸಿ ರಚನೆ ಮಾಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅದರ ನೇತೃತ್ವ ವಹಿಸಲಿದ್ದಾರೆ ಎಂಬ ಸುದ್ದಿ ರಾಜ್ಯ ರಾಜಕಾರಣದಲ್ಲಿ ಸಂಚಲನಕ್ಕೆ ಕಾರಣವಾಗಿದೆ. ಮುಖ್ಯಮಂತ್ರಿ ಪಟ್ಟದಿಂದ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸುವ ಯತ್ನ ಇದು ಎಂದು ಬಿಜೆಪಿ ನಾಯಕರು ಸಾಲುಸಾಲಾಗಿ ಹೇಳಿಕೆ ನೀಡಿದ್ದಾರೆ. ಈ ನಡುವೆ, ಒಬಿಸಿ ಸಲಹಾ ಮಂಡಳಿಗೆ ನಾನು ಮುಖ್ಯಸ್ಥ ಅಲ್ಲ, ನಾನೊಬ್ಬ ಸದಸ್ಯ. ಅದರ ನೇತೃತ್ವವನ್ನು ಬೇರೊಬ್ಬರು ಹೊತ್ತಿದ್ದಾರೆ. ನಾನು ಆತಿಥ್ಯ ಮಾತ್ರ ವಹಿಸುತ್ತಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಇದರ ಬೆನ್ನಲ್ಲಿಯೇ ರಾಜಕೀಯದಲ್ಲಿ ಕಾಂಗ್ರೆಸ್‌ ಹಾಗೂ ಸರ್ಕಾರದಲ್ಲಿ ಆಗಬಹುದಾದದ ಬದಲಾವಣೆಗಳ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ. ರಾಜ್ಯ ರಾಜಕೀಯ ಹಾಗೂ ರಾಜ್ಯದ ಇತರ ಸುದ್ದಿಗಳ ಬಗ್ಗೆ ಇಂದಿನ ನ್ಯೂಸ್‌ಲೈವ್‌ ಬ್ಲಾಗ್‌

 

08:46 PM (IST) Jul 07

Mandya - ಆಷಾಢ ಏಕಾದಶಿಯಂದು ಪುನೀತ್ ರಾಜ್‌ಕುಮಾರ್ ಫೋಟೋ ಮುಂದೆ ಎಡೆ ಇಟ್ಟು ಅಭಿಮಾನಿಯ ವಿಶೇಷ ಪೂಜೆ

Puneeth Rajkumar: ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಅಭಿಮಾನಿ ಬಳಗ ಅವರನ್ನು ಜೀವಂತ ದೇವರಂತೆ ಪೂಜಿಸುತ್ತಿದೆ. ಆಷಾಢ ಏಕಾದಶಿ ದಿನದಂದು ಮಂಡ್ಯ ಜಿಲ್ಲೆಯ ಅಭಿಮಾನಿಯೊಬ್ಬರು ಪುನೀತ್ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. 

Read Full Story

08:04 PM (IST) Jul 07

ದೇವಸ್ಥಾನ ಬಳಿ ಸಿಕ್ಕಿತ್ತು 2 ರೂಪಾಯಿ, 55 ವರ್ಷ ಬಳಿಕ 10 ಸಾವಿರ ರೂ ಹುಂಡಿಗೆ ಹಾಕಿದ ಭಕ್ತ

ದೇವಸ್ಥಾನದ ಆವರಣದಿಂದ 2 ರೂಪಾಯಿ ಸಿಕ್ಕಿತ್ತು. ಇದು ಯಾರ ಹಣ ಅನ್ನೋದು ಗೊತ್ತಾಗಿಲ್ಲ. ಹೀಗಾಗಿ ತಾನೆ ಇಟ್ಟುಕೊಂಡ ಭಕ್ತ, ಇದೀಗ 55 ವರ್ಷಗಳ ಬಳಿಕ 10,000 ರೂಪಾಯಿ ಹಣ ಹುಂಡಿಗೆ ಹಾಕಿ 5 ದಶಕಗಳ ಹಿಂದಿನ ಘಟನೆ ಹಾಗೂ ಇದೀಗ ಹುಂಡಿಗೆ ಹಾಕಿದ ಹಣದದ ಕಾರಣ ಬಹಿರಂಗಪಡಿಸಿದ್ದಾನೆ.

Read Full Story

07:58 PM (IST) Jul 07

ದೆವ್ವ ಬಿಡಿಸುವುದಾಗಿ ಕೋಲಿನಿಂದ ಹೊಡೆತ; ಶಿವಮೊಗ್ಗ ಮಹಿಳೆ ದಾರುಣ ಸಾವು!

ಶಿವಮೊಗ್ಗದಲ್ಲಿ ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆಯೊಬ್ಬರಿಗೆ ಕೋಲಿನಿಂದ ಥಳಿಸಿ ಕೊಲೆ ಮಾಡಲಾಗಿದೆ. ಹೊಸ ಜಂಬರಘಟ್ಟದಲ್ಲಿ ನಡೆದ ಈ ಘಟನೆಯಲ್ಲಿ ಗೀತಾ ಎಂಬ ಮಹಿಳೆ ಬಲಿಯಾಗಿದ್ದಾರೆ. ಮೂಢನಂಬಿಕೆಯಿಂದ ಈ ಘಟನೆ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Read Full Story

07:41 PM (IST) Jul 07

Apoorva Mukhija - ಹಗಲಿರುಳೂ ಓದಿ ಸಾಧಿಸಿದಾಗ ಸಿಕ್ಕಿದ್ದು ಶೂನ್ಯ - ರೀಲ್ಸ್​ನಿಂದ 41 ಕೋಟಿ ಸಾಮ್ರಾಜ್ಯದ ಒಡತಿ!

ಹಗಲಿರುಳೂ ಓದಿ ಅತ್ಯಂತ ಕಠಿಣ ಪರೀಕ್ಷೆಯಲ್ಲಿ ತೇರ್ಗಡೆಯಾದಾಗ ಕಣ್ಣೆತ್ತಿ ನೋಡದ ಅದೇ ಜನ ಇಂದು ಅರೆಬರೆ ಡ್ರೆಸ್​ನ ರೀಲ್ಸ್​ಗೆ ಫಿದಾ ಆಗಿ ಫಾಲೋವರ್ಸ್​ ಆಗಿದ್ದಾರೆ. ಯುವತಿಯ ಇಂಟರೆಸ್ಟಿಂಗ್​ ಕಥೆ ಕೇಳಿ!

 

Read Full Story

07:38 PM (IST) Jul 07

ಕಾರಿನ ನಂಬರ್ ಬದಲು ಮಿ.ಬಾಸ್, ದಂಡದ ಜೊತೆ ಸರ್ಪ್ರೈಸ್ ಕೊಟ್ಟ ಬೆಂಗಳೂರು ಪೊಲೀಸ್

ಕಾರಿನ ನಂಬರ್ ಪ್ಲೇಟ್ ಮೇಲೆ ರಿಜಿಸ್ಟ್ರೇಶನ್ ನಂಬರ್ ಬಿಟ್ಟು ಇನ್ನೇನು ಬರೆಯುವಂತಿಲ್ಲ. ಆದರೆ ಕೆಲವರು ಈ ನಿಯಮ ಉಲ್ಲಂಘಿಸುತ್ತಾರೆ.ಬೆಂಗಳೂರಿನಲ್ಲಿ ಹ್ಯುಂಡೈ ಕ್ರೆಟಾ ಮಾಲೀಕ ನಂಬರ್ ಬದಲು ಮಿಸ್ಟರ್ ಬಾಸ್ ಎಂದು ಹಾಕಿದ್ದಾನೆ.   ಬೆಂಗಳೂರು ಪೊಲೀಸರು ಮಾಲೀಕನಿಗೆ ಸರ್ಪ್ರೈಸ್ ನೀಡಿದ್ದಾರೆ.

 

Read Full Story

07:35 PM (IST) Jul 07

ವಿರಾಟ್ ಕೊಹ್ಲಿ ಇನ್ನೊಂದು ಮುಖದ ಅನಾವರಣ ಮಾಡಿದ ರವೀಂದ್ರ ಜಡೇಜ!

ರವೀಂದ್ರ ಜಡೇಜಾ ಅವರ ಥ್ರೋಬ್ಯಾಕ್ ವಿಡಿಯೋದಲ್ಲಿ ವಿರಾಟ್ ಕೊಹ್ಲಿ ಅವರ ಮತ್ತೊಂದು ಮುಖವನ್ನು ಬಹಿರಂಗಪಡಿಸಿದ್ದಾರೆ. ತಂಡದ ಪ್ರತಿಯೊಬ್ಬ ಆಟಗಾರನನ್ನೂ ಅನುಕರಿಸುವ ಕೊಹ್ಲಿ, ಮೈದಾನದಲ್ಲೂ ವಾತಾವರಣ ಹೇಗೆ ಇಡುತ್ತಿದ್ದರು ಎಂದು ಜಡೇಜಾ ಹೇಳಿದ್ದಾರೆ.

Read Full Story

07:19 PM (IST) Jul 07

ಹಾಸನ ಸಂಸದ ಶ್ರೇಯಸ್ ಪಟೇಲ್, ಅಕ್ಷತಾ ದಂಪತಿಗೆ ಅವಳಿ ಹೆಣ್ಣು ಮಕ್ಕಳು!

ಸಂಸದ ಶ್ರೇಯಸ್ ಪಟೇಲ್ ಮತ್ತು ಅಕ್ಷತಾ ಪಟೇಲ್ ದಂಪತಿಗೆ ಅವಳಿ ಹೆಣ್ಣು ಮಕ್ಕಳು ಜನಿಸಿವೆ. ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಜನನ. ಕುಟುಂಬಸ್ಥರು ಮತ್ತು ಹಾಸನ ಜನತೆ ಸಂತಸ ವ್ಯಕ್ತಪಡಿಸಿದ್ದಾರೆ.
Read Full Story

07:05 PM (IST) Jul 07

ಶೇ.35ರಷ್ಟು ತರಿಗೆ ಆದರೂ ಏನೂ ಸರಿಯಿಲ್ಲ, ವೈರಸ್ ಪೋಸ್ಟ್‌ನಿಂದ ಭಾರತ v ನಾರ್ಡಿಕ್ ಚರ್ಚೆ

ಭಾರತದಲ್ಲಿ ಕಟ್ಟುವ ತೆರಿಗೆ ಹಾಗೂ ಸಿಗುವ ಸೌಲಭ್ಯದ ಕುರಿತು ಹಲವು ಬಾರಿ ಚರ್ಚೆಯಾಗಿದೆ. ಇದೀಗ ವೈರಲ್ ಪೋಸ್ಟ್ ಭಾರತದ ನಾರ್ಡಿಕ್ ಕಂಟ್ರಿ ನಡುವಿನ ಚರ್ಚೆ ಹುಟ್ಟು ಹಾಕಿದೆ. ಏನಿದು ಹೊಸ ಚರ್ಚೆ

Read Full Story

07:02 PM (IST) Jul 07

IVF Mother - ಪ್ರೆಗ್ನೆನ್ಸಿ ವಿಷ್ಯ ಕೇಳಿ ಮುಖ್ಯಮಂತ್ರಿ ಶಾಕ್​ ಆಗೋದ್ರು ಎಂದ ನಟಿ ಭಾವನಾ!

ಅವಿವಾಹಿತೆಯಾಗಿರೋ ನಟಿ ಭಾವನಾ ಪ್ರೆಗ್ನೆನ್ಸಿ ವಿಷ್ಯ ಕೇಳಿ ಸಿಎಂ ಸಿದ್ದರಾಮಯ್ಯ ಶಾಕ್​ ಆದರಂತೆ. ಈ ಬಗ್ಗೆ ನಟಿ ಹೇಳಿದ್ದೇನು ಕೇಳಿ..

 

Read Full Story

06:40 PM (IST) Jul 07

ಎದೆನೋವೆಂದು ಆಸ್ಪತ್ರೆಗೆ ಬಂದರೆ ಡಾಕ್ಟ್ರೇ ಇರಲಿಲ್ಲ; ಹೃದಯಾಘಾತ ಹೊಡೆತಕ್ಕೆ ಪ್ರಾಣ ಉಳಿಯಲಿಲ್ಲ!

ಮಸ್ಕಿ  ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಿಲ್ಲದ ಕಾರಣ ಎದೆ ನೋವಿನಿಂದ ಬಳಲುತ್ತಿದ್ದ ಯುವಕನಿಗೆ ಪ್ರಾಥಮಿಕ ಚಿಕಿತ್ಸೆಯನ್ನೂ ನೀಡದೇ ಸಿಂಧನೂರಿಗೆ ಹೋಗುವಂತೆ ನರ್ಸ್ ತಿಳಿಸಿದ್ದಾರೆ. ಸಿಂಧನೂರಿಗೆ ಹೋಗುವ ದಾರಿ ಮಧ್ಯೆ ಹೃದಯಾಘಾತದಿಂದ ಯುವಕ ಸಾವನ್ನಪ್ಪಿದ್ದಾನೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Read Full Story

06:31 PM (IST) Jul 07

Sleeping Challenge - 9 ಗಂಟೆ ಮಲಗಿ 9 ಲಕ್ಷ ಗೆದ್ದಳು! ನೀವೂ ಗೆಲ್ಬೋದು ಈ ಬೃಹತ್​ ಮೊತ್ತ- ಡಿಟೇಲ್ಸ್​ ಇಲ್ಲಿದೆ...

ಬೆಂಗಳೂರಿನಲ್ಲಿ ಈಚೆಗೆ ನಡೆದ ಸ್ಲೀಪಿಂಗ್​ ಚಾಲೆಂಜ್​ನಲ್ಲಿ ಭಾಗವಹಿಸಿ ಪುಣೆಯ ಯುವತಿ 9.1 ಲಕ್ಷ ರೂಪಾಯಿ ಗೆದ್ದಿದ್ದಾರೆ. ಏನಿದು ಚಾಲೆಂಜ್​? ನೀವೂ ಗಳುಹಿಸಬಹುದು ಈ ಮೊತ್ತ!

 

Read Full Story

06:17 PM (IST) Jul 07

ದಾಖಲೆ ಬರೆದ ಟಾಟಾ ಹ್ಯಾರಿಯರ್ ಇವಿ ಕಾರು 24 ಗಂಟೆಯಲ್ಲಿ 10,000 ಬುಕಿಂಗ್

ಬಿಡುಗಡೆಯಾದ ಮೊದಲ ದಿನದಲ್ಲೇ 10,000 ಕ್ಕೂ ಹೆಚ್ಚು ಬುಕಿಂಗ್‌ಗಳೊಂದಿಗೆ, ಟಾಟಾ ಹ್ಯಾರಿಯರ್ EV ದಾಖಲೆ ಬರೆದಿದೆ.  ಈ ವಿಭಾಗದಲ್ಲಿ ಇದು ಎರಡನೇ ಅತ್ಯುತ್ತಮ ಬುಕಿಂಗ್. ಟಾಟಾ ಹ್ಯಾರಿಯರ್ ಈ ಮಟ್ಟಿಗೆ ಬುಕಿಂಗ್ ಪಡೆದುಕೊಳ್ಳಲು ಇದರ ಬೆಲೆ, ಮೈಲೇಜ್ ಹಾಗೂ ಮತ್ತೊಂದು ಕಾರಣವಿದೆ. 

Read Full Story

05:59 PM (IST) Jul 07

ಜಪಾನ್‌ಗಿಂತ ಹೆಚ್ಚಿನ ತಲಾ ಆದಾಯವನ್ನು ಹೊಂದಿರುವ ಭಾರತದ ಏಕೈಕ ಜಿಲ್ಲೆ!

ಗೌತಮ್ ಬುದ್ಧ ನಗರ ಜಿಲ್ಲೆ, ಉತ್ತರ ಪ್ರದೇಶದ ಅತ್ಯಂತ ಶ್ರೀಮಂತ ಜಿಲ್ಲೆಯಾಗಿದ್ದು, ರಾಜ್ಯದ ಸರಾಸರಿಗಿಂತ 10 ಪಟ್ಟು ಹೆಚ್ಚಿನ ತಲಾ ಆದಾಯವನ್ನು ಹೊಂದಿದೆ. ಜಿಲ್ಲೆಯ ಯಶಸ್ಸಿಗೆ ಕಾರಣಗಳನ್ನು ಮತ್ತು ರಾಜ್ಯದ ಇತರ ಜಿಲ್ಲೆಗಳೊಂದಿಗೆ ಆರ್ಥಿಕ ಅಂತರವನ್ನು ಈ ಲೇಖನ ವಿಶ್ಲೇಷಿಸುತ್ತದೆ.
Read Full Story

05:51 PM (IST) Jul 07

ಕೇವಲ 7,200 ರೂ ತಿಂಗಳ ಇಂಎಐ ಸಾಕು, ಮನೆಗೆ ತನ್ನಿ ಹೊಸ ಟಾಟಾ ಪಂಚ್ ಕಾರು

ಭಾರತದ ಅತಿ ಸುರಕ್ಷಿತ ಮತ್ತು ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಒಂದಾದ ಟಾಟಾ ಪಂಚ್ 2025 ಕಾರು ಕೇವಲ ಮಾಸಿಕ ಕಂತು 7200 ರೂಪಾಯಿಗೆ ಲಭ್ಯವಿದೆ. ಕಾರಿನ ಇಎಂಐ ಆಯ್ಕೆ, ಡೌನ್‌ಪೇಮೆಂಟ್ ಕುರಿತ ಡಿಟೇಲ್ಸ್ ಇಲ್ಲಿದೆ. 

Read Full Story

05:41 PM (IST) Jul 07

ಗಂಡನಿಂದಲೇ ಮಹಿಳಾ ಕಾರ್ಪೋರೇಟರ್ ಬರ್ಬರ ಹತ್ಯೆ

ತಮಿಳುನಾಡಿನಲ್ಲಿ ಅನೈತಿಕ ಸಂಬಂಧದ ಶಂಕೆಯಿಂದ ಪತಿಯೇ ಕಾರ್ಪೊರೇಟರ್ ಪತ್ನಿಯನ್ನು ಬರ್ಬರವಾಗಿ ಹತ್ಯೆಗೈದಿದ್ದಾನೆ. ಸಾರ್ವಜನಿಕ ಸ್ಥಳದಲ್ಲೇ ಚಾಕುವಿನಿಂದ ಇರಿದು ಕೊಂದ ಘಟನೆ ನಡೆದಿದ್ದು, ಆರೋಪಿ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.
Read Full Story

05:38 PM (IST) Jul 07

Sugar Level Control - ಶುಗರ್​ ನಿಯಂತ್ರಣಕ್ಕೆ ಊಟದ ಬಳಿಕ ಎರಡೇ ನಿಮಿಷ ಹೀಗೆ ಮಾಡಿ, ಮ್ಯಾಜಿಕ್​ ನೋಡಿ...

ಮಧುಮೇಹ ಎನ್ನುವುದು ಮಾಮೂಲಾಗಿರುವ ಈ ಕಾಲಘಟ್ಟದಲ್ಲಿ ಊಟದ ಬಳಿಕ ಎರಡೇ ಎರಡು ನಿಮಿಷ ಸಮಯ ಮೀಸಲಿಟ್ಟು ಹೀಗೆ ಮಾಡಿದರೆ, ಶುಗರ್​ ಲೆವೆಲ್​ ಕಂಟ್ರೋಲ್​ಗೆ ತರಬಹುದು ಎಂದಿದೆ ಅಧ್ಯಯನ, ಏನಿದು?

 

Read Full Story

05:28 PM (IST) Jul 07

ನಶೆಯಲ್ಲಿ ಮಹಿಳೆ ಕಾರಿಗೆ ಡಿಕ್ಕಿ ಬಳಿಕ ಬೆದರಿಕೆ, ಎಂಎನ್ಎಸ್ ನಾಯಕನ ಪುತ್ರನ ಪುಂಡಾಟಿಕೆ ವಿಡಿಯೋ ಸೆರೆ

ಕುಡಿದ ನಶೆಯಲ್ಲಿ ಎಂಎನ್ಎಸ್ ನಾಯಕನ ಪುತ್ರ ಪುಂಡಾಟಿಕೆ ನಡೆಸಿದ್ದಾನೆ. ಮಹಿಳೆ ಕಾರಿಗೆ ಡಿಕ್ಕಿಯಾಗಿ ಬಳಿಕ ಆಕೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಈತನ ವಿಡಿಯೋವನ್ನು ಮಹಿಳೆ ಸೆರೆ ಹಿಡಿದಿದ್ದು. ಇದೀಗ ಪ್ರಕರಣ ದಾಖಲಾಗಿದೆ.

 

Read Full Story

04:48 PM (IST) Jul 07

ಇಡೀ ಕುಟುಂಬನ್ನೇ ಆಹುತಿ ಪಡೆದ ಹಿಮಾಚಲ ಪ್ರವಾಹ - ತಬ್ಬಲಿಯಾದ 11 ತಿಂಗಳ ಕಂದನ ವೀಡಿಯೋ ವೈರಲ್

ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆ ಮತ್ತು ಭೂಕುಸಿತದಿಂದಾಗಿ ಉಂಟಾದ ದುರಂತದಲ್ಲಿ 11 ತಿಂಗಳ ಮಗು ಪವಾಡಸದೃಶವಾಗಿ ಬದುಕುಳಿದಿದೆ. ಮಗುವಿನ ಕುಟುಂಬದವರೆಲ್ಲರೂ ದುರಂತದಲ್ಲಿ ಸಾವನ್ನಪ್ಪಿದ್ದಾರೆ.

Read Full Story

04:44 PM (IST) Jul 07

ಕಾಂಗ್ರೆಸ್ ಹೇಳಿದಂತೆ ನನ್ನ ಶಾಸ್ತ್ರನೇ ನಿಜವಾಗಿ ಹೋಯ್ತಲ್ಲ - ವ್ಯಂಗ್ಯವಾಡಿದ ಆರ್ ಅಶೋಕ್!

ಆಲೂರು ತಾಲ್ಲೂಕಿನಲ್ಲಿ ಬಿಳಿಸುಳಿ ರೋಗದಿಂದ ಜೋಳದ ಬೆಳೆ ಹಾನಿಗೊಳಗಾದ ರೈತರನ್ನು ಆರ್. ಅಶೋಕ್ ಭೇಟಿ ಮಾಡಿ ಸಾಂತ್ವನ ಹೇಳಿದರು. ಕಾಂಗ್ರೆಸ್‌ನ ಸಿಎಂ ಸ್ಥಾನದ ಹಂಚಿಕೆ ವಿಚಾರವನ್ನು 'ಮ್ಯಾಚ್ ಫಿಕ್ಸಿಂಗ್' ಎಂದು ವ್ಯಂಗ್ಯವಾಡಿದರು.
Read Full Story

04:27 PM (IST) Jul 07

ದೇಶದ ಅತೀ ಸುಂದರ ಈ ಗ್ರಾಮಕ್ಕೆ ಭೇಟಿ ನೀಡಲು ಆನಂದ್ ಮಹೀಂದ್ರ ಪ್ಲಾನ್, ಇದು ಭೂಲೋಕದ ಸ್ವರ್ಗ

ಮಹೀಂದ್ರ ಚೇರ್ಮೆನ್ ಆನಂದ್ ಮಹೀಂದ್ರ ಸೋಶಿಯಲ್ ಮೀಡಿಯಾದಲ್ಲಿ ಕೆಲ ವಿಡಿಯೋ, ಫೋಟೋ, ಮಾಹಿತಿ ಹಂಚಿಕೊಳ್ಳುತ್ತಾರೆ. ಈ ಬಾರಿ ಆನಂದ್ ಮಹೀಂದ್ರ ಒಂದು ಗ್ರಾಮದ ವಿಡಿಯೋ ಹಂಚಿಕೊಂಡು, ಇಲ್ಲಿಗೆ ಭೇಟಿ ನೀಡಬೇಕು ಎಂದಿದ್ದಾರೆ. ಆನಂದ್ ಮಹೀಂದ್ರ ಹೇಳಿದ ಈ ಗ್ರಾಮ ನಿಜಕ್ಕೂ ಭೂಲೋಕದ ಸ್ವರ್ಗ.

Read Full Story

04:10 PM (IST) Jul 07

ಬಾಳೆಹಣ್ಣು ತಿನ್ನುವ ಸರಿಯಾದ ವಿಧಾನ ಕಲಿಸಿದ ಯುಟ್ಯೂಬರ್​ - ನಮ್ಗೇ ಗೊತ್ತೇ ಇರಲಿಲ್ಲ ನೋಡಿ ಎಂದ ನೆಟ್ಟಿಗರು!

ಅತ್ಯಂತ ಸಲೀಸಾಗಿ ತಿನ್ನಬಹುದಾದ ಹಣ್ಣುಗಳನ್ನು ಒಂದು ಬಾಳೆಹಣ್ಣು. ಆದರೆ ಅದನ್ನು ಸರಿಯಾದ ವಿಧಾನದಲ್ಲಿ ಹೇಗೆ ತಿನ್ನಬೇಕು ಎನ್ನುವುದನ್ನು ಕಲಿಸಿದ್ದಾರೆ ನೋಡಿ ಈ ಯುಟ್ಯೂಬರ್​. ವಿಡಿಯೋ ವೈರಲ್​ ಆಗಿದೆ.

 

Read Full Story

03:37 PM (IST) Jul 07

ಹಠಾತ್ ಹೃದಯಾಘಾತ ಸಾವಿನ ಅಧ್ಯಯನ ವರದಿ ಬಿಡುಗಡೆ; ಲಸಿಕೆಗೂ ಹಾರ್ಟ್‌ಅಟ್ಯಾಕ್‌ಗೂ ಸಂಬಂಧವಿಲ್ಲ-ದಿನೇಶ್ ಗುಂಡೂರಾವ್!

ರಾಜ್ಯದಲ್ಲಿ ಹೆಚ್ಚುತ್ತಿರುವ ಹಠಾತ್ ಹೃದಯಾಘಾತ ಪ್ರಕರಣಗಳಿಗೆ ಕೋವಿಡ್ ಲಸಿಕೆಗೆ ನೇರ ಸಂಬಂಧವಿಲ್ಲ ಎಂದು ತಜ್ಞರ ವರದಿ ತಿಳಿಸಿದೆ. ಧೂಮಪಾನ, ಒತ್ತಡ, ಮಧುಮೇಹ, ಬೊಜ್ಜು ಹಾಗೂ ವ್ಯಾಯಾಮದ ಕೊರತೆ ಪ್ರಮುಖ ಕಾರಣಗಳಾಗಿವೆ. ಹೃದಯ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ.
Read Full Story

03:34 PM (IST) Jul 07

ಸಿಎಂ ಬದಲಾವಣೆ ಕುರಿತು ನಮಗೆಲ್ಲ ಬಾಯಿ ಮುಚ್ಚಿಕೊಂಡು ಇರಲು ಹೇಳಿದ್ದಾರೆ - ಮಧು ಬಂಗಾರಪ್ಪ

ಸಿಎಂ ಬದಲಾವಣೆ ವಿಚಾರದಲ್ಲಿ ಮೌನ ವಹಿಸುವುದಾಗಿ ಕೊಪ್ಪಳದಲ್ಲಿ ಮಧು ಬಂಗಾರಪ್ಪ ಹೇಳಿಕೆ. ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಹಿಂದುತ್ವದ ಬಗ್ಗೆ ಬಿಜೆಪಿಗೆ ಏನು ಗೊತ್ತು ಎಂದು ಪ್ರಶ್ನಿಸಿದರು. ತಮ್ಮ ಹೇರ್‌ಸ್ಟೈಲ್‌ ಬಗ್ಗೆ ಮಾತನಾಡಿ ಜನರಿಂದ ಚಪ್ಪಾಳೆ ಗಿಟ್ಟಿಸಿಕೊಂಡರು.
Read Full Story

03:31 PM (IST) Jul 07

16 ಅಡಿ ಉದ್ದದ ಕಾಳಿಂಗ ಸರ್ಪ ರಕ್ಷಣೆ - ಕೇರಳ ಮಹಿಳಾ ಅರಣ್ಯಾಧಿಕಾರಿ ಕಾರ್ಯಕ್ಕೆ ಶ್ಲಾಘನೆ

ಕೇರಳದ ಅರಣ್ಯ ಇಲಾಖೆಯ ಮಹಿಳಾ ಅಧಿಕಾರಿಯೊಬ್ಬರು 16 ಅಡಿ ಉದ್ದದ ಕಾಳಿಂಗ ಸರ್ಪವನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಜಿ.ಎಸ್. ರೋಶ್ನಿ ಎಂಬುವವರು ಈ ಸಾಹಸ ಮೆರೆದಿದ್ದಾರೆ.

Read Full Story

03:16 PM (IST) Jul 07

ಒಂದೂವರೆ ತಿಂಗಳ ಹಸುಗೂಸನ್ನು ಬಿಸಿನೀರ ಹಂಡೆಯಲ್ಲಿ ಮುಳುಗಿಸಿ ಸಾಯಿಸಿದ ತಾಯಿ!

ನೆಲಮಂಗಲದಲ್ಲಿ ತಾಯಿಯೊಬ್ಬಳು ತನ್ನ 17 ತಿಂಗಳ ಮಗುವನ್ನು ಬಿಸಿನೀರಿನ ಹಂಡೆಯಲ್ಲಿ ಮುಳುಗಿಸಿ ಕೊಂದಿದ್ದಾಳೆ. ಗಂಡನ ಕುಡಿತದ ಚಟ ಮತ್ತು ಬಡತನದಿಂದ ಬೇಸತ್ತಿದ್ದಳು ಎನ್ನಲಾಗಿದೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
Read Full Story

03:09 PM (IST) Jul 07

WWE ಸ್ಟಾರ್ ಆಟಗಾರ ಅಂಡರ್‌ಟೇಕರ್ ಮೆಚ್ಚಿದ ಭಾರತೀಯ ಬಾಲಕನ ವಿಡಿಯೋ ವೈರಲ್!

ಡಬ್ಲ್ಯುಡಬ್ಲ್ಯುಇ ತಾರೆ ಅಂಡರ್‌ಟೇಕರ್‌ ಅವರನ್ನು ಅನುಕರಿಸುವ ಬಾಲಕನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಂಡರ್‌ಟೇಕರ್ ಸ್ವತಃ ಈ ವಿಡಿಯೋವನ್ನು ಮೆಚ್ಚಿಕೊಂಡು ಬಾಲಕನಿಗೆ ಶುಭ ಹಾರೈಸಿದ್ದಾರೆ. ಈ ವಿಡಿಯೋ ಲಕ್ಷಾಂತರ ವೀಕ್ಷಣೆಗಳನ್ನು ಗಳಿಸಿದೆ.

Read Full Story

03:06 PM (IST) Jul 07

ಬೇರ್ಪಟ್ಟ ಮರಿ ಆನೆ ಸ್ವೀಕರಿಸಲು ನಿರಾಕರಿಸಿದ ತಾಯಿ ಆನೆ, ಅಧಿಕಾರಿಗಳ ಪ್ರಯತ್ನಕ್ಕೆ ಸಿಕ್ಕಿತು ಫಲ

ಬೇರ್ಪಟ್ಟ ಮರಿ ಆನೆಯನ್ನು ರಕ್ಷಿಸಿದ ಅರಣ್ಯಾಧಿಕಾರಿಗಳು, ಮತ್ತೆ ತಾಯಿ ಆನೆ ಜೊತೆ ಸೇರಿಸಲು ಅರಣ್ಯಾಧಿಕಾರಿಗಳು ಪ್ರಯತ್ನಿಸಿದ್ದಾರೆ. ಆದರೆ ಕೆಲ ದಿನಗಳಿಂದ ದೂರವಾಗಿದ್ದ ಮರಿ ಆನೆಯನ್ನು ಸ್ವೀಕರಿಸಲು ತಾಯಿ ಆನೆ ನಿರಾಕರಿಸಿದೆ. ಆದರೆ ಅರಣ್ಯಾಧಿಕಾರಿ ಪ್ರಯತ್ನಕ್ಕೆ ಕೊನೆಗ ಫಲ ಸಿಕ್ಕಿದ್ದು ಹೇಗೆ?

Read Full Story

02:40 PM (IST) Jul 07

ಧಾರಾವಾಹಿಗಳು ಕಾರ್ಪೊರೇಟ್‌ ಸಂಸ್ಥೆಗಳ ಕೈಯಲ್ಲಿ ಸಿಲುಕಿವೆ - ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್‌

ಕಾರ್ಪೋರೇಟ್ ಸಂಸ್ಥೆಗಳ ಕೈಯಲ್ಲಿ ಧಾರಾವಾಹಿಗಳು ಸಿಲುಕಿಕೊಂಡಿವೆ. ಅವರು ಹೇಳಿದಂತೆ ಈಗ ಕೇಳಬೇಕು ಎಂದು ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್‌ ಅಭಿಪ್ರಾಯಪಟ್ಟರು.

Read Full Story

02:37 PM (IST) Jul 07

ಉಕ್ಕುತ್ತಿದ್ದ ಜ್ವಾಲಾಮುಖಿಯ ಮುಂದೆ ಗೆಳತಿಗೆ ಲವ್ ಪ್ರಪೋಸ್ ಮಾಡಿದ ಯುವಕ

ಹವಾಯ್‌ನಲ್ಲಿ ಕಿಲಾವಿಯಾ ಜ್ವಾಲಾಮುಖಿ ಮುಂದೆ ಯುವಕನೊಬ್ಬ ತನ್ನ ಪ್ರೇಯಸಿಗೆ ಪ್ರೇಮ ನಿವೇದನೆ ಮಾಡಿದ್ದಾನೆ. ಈ ವಿಶಿಷ್ಟ ಘಟನೆಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಯುವಕನ ಈ ಸಾಹಸಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
Read Full Story

02:35 PM (IST) Jul 07

ಸಿದ್ದರಾಮಯ್ಯನವರೇ ಮುಂದಿನ 3 ವರ್ಷ ಸಿಎಂ, ಗಂಡು ಮಕ್ಕಳಿಗೂ ಉಚಿತ ಬಸ್ ಪಾಸ್; ಬಸವರಾಜ ರಾಯರೆಡ್ಡಿ

ಮುಂದಿನ ಮೂರು ವರ್ಷಗಳ ಕಾಲ ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಖಚಿತಪಡಿಸಿದ್ದಾರೆ. ರಾಜ್ಯದ ಆರ್ಥಿಕ ಸ್ಥಿತಿ ಉತ್ತಮಗೊಂಡರೆ ಗಂಡು ಮಕ್ಕಳಿಗೂ ಉಚಿತ ಬಸ್ ಪಾಸ್ ಸೌಲಭ್ಯ ನೀಡುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದಿದ್ದಾರೆ.
Read Full Story

02:33 PM (IST) Jul 07

Chocolate dayಗೆ ಕಿರುತೆರೆ ತಾರೆಯರ ​ಶುಭಾಶಯ - ಮನೆಯಲ್ಲಿಯೇ ತಯಾರಿಸೋ ಸುಲಭದ 2 ವಿಧಾನ

ಜುಲೈ 7 ವಿಶ್ವ ಚಾಕೋಲೆಟ್​ ದಿನವಾಗಿದ್ದು, ಕಿರುತೆರೆ ಕಲಾವಿದೆಯರು ವೀಕ್ಷಕರಿಗೆ ವಿಶೇಷ ರೀತಿಯಲ್ಲಿ ಶುಭಾಶಯ ಕೋರಿದ್ದಾರೆ. ಈ ಸಂದರ್ಭದಲ್ಲಿ ಮನೆಯಲ್ಲಿಯೇ ಹೇಗೆ ಇದನ್ನು ತಯಾರಿಸಬಹುದು ಎನ್ನುವ ಎರಡು ಸುಲಭದ ವಿಧಾನವನ್ನು ಇಲ್ಲಿ ನೀಡಲಾಗಿದೆ.

 

Read Full Story

02:23 PM (IST) Jul 07

ರಾಜ್ಯದ ಡಿಸಿಎಂ ಆಗಿರುವುದಕ್ಕಿಂತ ಮಿಗಿಲಾಗಿ ನಾನು ನಿಮ್ಮ ಸೇವಕ - ಡಿ.ಕೆ.ಶಿವಕುಮಾರ್

ನಾನು ಈ ರಾಜ್ಯದ ಡಿಸಿಎಂ ಹಾಗೂ ಪಕ್ಷದ ರಾಜ್ಯಾಧ್ಯಕ್ಷನಾಗಿರುವುದಕ್ಕಿಂತ ಮಿಗಿಲಾಗಿ ನಿಮ್ಮ ಸೇವಕನಾಗಿ ಇಲ್ಲಿಗೆ ಬಂದಿದ್ದು ಈ ಕ್ಷೇತ್ರದ ಜನತೆಗೆ ನನ್ನ ಸೇವೆ ಸದಾ ಇರಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.

Read Full Story

02:18 PM (IST) Jul 07

ಯಾದಗಿರಿಯಲ್ಲಿ ಕಲುಷಿತ ನೀರು ಕುಡಿದು ಮೂವರ ಸಾವು! ಡಿಹೆಚ್ಒ ನಿರಾಕರಣೆ

ಯಾದಗಿರಿ ಜಿಲ್ಲೆಯ ತಿಪ್ಪನಟಗಿ ಗ್ರಾಮದಲ್ಲಿ ಕಲುಷಿತ ನೀರು ಸೇವನೆಯಿಂದ ಮೂವರು ಮೃತಪಟ್ಟಿದ್ದಾರೆ. ವಾಂತಿ-ಭೇದಿಯಿಂದ ಬಳಲುತ್ತಿದ್ದ ಇವರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಸಚಿವ ದರ್ಶನಾಪುರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Read Full Story

02:08 PM (IST) Jul 07

ನಾನು ಯಾವ ದೇವಸ್ಥಾನಕ್ಕೂ ಹಣ ಕೊಡೋದಿಲ್ಲ ಎಂದ ಶಿಕ್ಷಣ ಸಚಿವ ಮಧು ಬಂಗಾರಪ್ಪ!

ಶಿಕ್ಷಣ ಸಚಿವ ಮಧು ಬಂಗಾರಪ್ಪನವರು ದೇವಸ್ಥಾನಗಳಿಗಿಂತ ಶಾಲೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕೆಂದು ಪ್ರತಿಪಾದಿಸಿದ್ದಾರೆ. ಹಿರೇವಂಕಲಕುಂಟ ಗ್ರಾಮದಲ್ಲಿ ಬಾಲಕಿಯರ ಪ್ರೌಢಶಾಲೆ ಉದ್ಘಾಟಿಸಿದ ಅವರು, ದೇವಸ್ಥಾನಗಳಿಗೆ ಹಣ ನೀಡುವ ಬದಲು ಶಾಲೆಗಳ ಅಭಿವೃದ್ಧಿಗೆ ಒತ್ತು ನೀಡುವುದಾಗಿ ಹೇಳಿದರು. 

Read Full Story

01:46 PM (IST) Jul 07

ನೋಟಿನ ಮೇಲೆ ಗಾಂಧಿ ಫೋಟೋ ಮಾತ್ರ ಇರೋದು ಏಕೆ? ಸ್ಪಷ್ಟನೆ ನೀಡಿದ ಆರ್ ಬಿಐ

ಭಾರತೀಯ ನೋಟುಗಳಲ್ಲಿ ಮಹಾತ್ಮಾ ಗಾಂಧಿ ಫೋಟೊಗಳನ್ನು ನಾವು ಕಾಣ್ತೇವೆ. ಮಹಾತ್ಮರ ಸಾಲಿನಲ್ಲಿ ಬರೀ ಗಾಂಧಿ ಮಾತ್ರ ಇಲ್ಲ ಎನ್ನುವವರಿಗೆ ಆರ್ ಬಿಐ ಸ್ವಷ್ಟನೆ ನೀಡಿದೆ. ಯಾಕೆ ಗಾಂಧಿ ಮಾತ್ರ ಎನ್ನುವ ಪ್ರಶ್ನೆಗೆ ಉತ್ತರ ನೀಡಿದೆ.

 

Read Full Story

01:44 PM (IST) Jul 07

ಕ್ಯಾಬ್ ಬುಕ್ ಆಗಲ್ಲ, ಬೈಕ್ ಟ್ಯಾಕ್ಸಿ ಇಲ್ಲ, ಬೆಂಗಳೂರಿನಲ್ಲಿ ಸಾರಿಗೆ ಮಾಫಿಯಾ ಎಂದ ಪ್ರಯಾಣಿಕ

ಬೆಂಗಳೂರಲ್ಲಿ ಮೊದಲು ಬೈಕ್ ಟ್ಯಾಕ್ಸಿ ಬ್ಯಾನ್ ಮಾಡಿದ್ದರೆ, ಇದೀಗ ಯೂನಿಯನ್ ಓಲಾ ಉಬರ್ ಸೇರಿದಂತೆ ಟ್ಯಾಕ್ಸಿ ಎಗ್ರೇಟರ್‌ಗಳನ್ನೇ ಬ್ಯಾನ್ ಮಾಡಲು ಮುಂದಾಗಿದೆ ಎಂದು ಪ್ರಯಾಣಿಕನೊಬ್ಬ ಆಕ್ರೋಶ ಹೊರಹಾಕಿದ್ದಾನೆ.ಅಷ್ಟಕ್ಕೂ ಈ ಪ್ರಯಾಣಿಕ ಆಕ್ರೋಶ ಯಾಕೆ?

Read Full Story

01:23 PM (IST) Jul 07

ದರ್ಶನ್ ಫೈಲ್ಸ್ ಕಂಟಿನ್ಯೂ; ಅಶ್ಲೀಲ ಮೆಸೇಜ್ ಮಾಡಿದವನ ಬೆತ್ತಲೆಗೊಳಿಸಿ ಹಲ್ಲೆ, ಪ್ಲಾನ್ ಕೊಟ್ಟಿದ್ದೇ ಮಾಜಿ ಪ್ರೇಯಸಿ

ಬೆಂಗಳೂರಿನಲ್ಲಿ ಮಾಜಿ ಪ್ರೇಮಿಯನ್ನು ಬೆತ್ತಲೆಗೊಳಿಸಿ ಹಲ್ಲೆ ನಡೆಸಿದ ಘಟನೆ ಬೆಳಕಿಗೆ ಬಂದಿದೆ. ಯುವತಿಯೇ ಸೂತ್ರಧಾರಿಯಾಗಿ 6 ವಿದ್ಯಾರ್ಥಿಗಳು ಸೇರಿದಂತೆ 11 ಮಂದಿ ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ. ದರ್ಶನ್-ಪವಿತ್ರಾ ಗೌಡ ಮತ್ತು ರೇಣುಕಾಸ್ವಾಮಿ ಪ್ರಕರಣವನ್ನು ನೆನಪಿಸುವ ಈ ಘಟನೆ ನಡೆದಿದೆ.

Read Full Story

01:10 PM (IST) Jul 07

Rice Water for Tulsi - ಪಾಟ್​ನಲ್ಲಿರೋ ತುಳಸಿ ಗಿಡ ನಳನಳಿಸಲು ಅಕ್ಕಿ ನೀರು ಹೀಗೆ ಉಪಯೋಗಿಸಿ ನೋಡಿ...

ತುಳಸಿ ಗಿಡ ಪಾಟ್​ನಲ್ಲಿ ಚೆನ್ನಾಗಿ ಬೆಳೆಯುತ್ತಿಲ್ಲ ಎನ್ನುವ ಚಿಂತೆ ಬಿಡಿ, ಈ ರೀತಿ ಅಕ್ಕಿ ತೊಳೆದ ನೀರನ್ನು ಪ್ರತಿದಿನ ಉಪಯೋಗಿಸಿ ನೋಡಿ. ಅಕ್ಕಿ ನೀರಿನ ಮ್ಯಾಜಿಕ್​ ಏನು?

 

Read Full Story

12:53 PM (IST) Jul 07

ಐದೂವರೆ ಲಕ್ಷ ರೂ ಈ ಮಾರುತಿ ಕಾರಿಗೆ ಎಲ್ಲಿಲ್ಲದ ಬೇಡಿಕೆ, ಮಾರಾಟದಲ್ಲಿ ಮೊದಲ ಸ್ಥಾನ

ಮಾರುತಿ ಸುಜುಕಿ ಕಂಪನಿಯ ಐದೂವರೆ ಲಕ್ಷ ರೂಪಾಯಿ ಮೌಲ್ಯದ ವ್ಯಾಗನ್ ಆರ್ ಕಾರು ಇದೀಗ ಎಲ್ಲರ ನೆಚ್ಚಿನ ಕಾರಾಗಿ ಹೊರಹೊಮ್ಮಿದೆ, ಬೆಲೆಯೂ ಕಡಿಮೆ, ಉತ್ತಮ ಸ್ಥಳಾವಕಾಶ , ಅಡ್ವಾನ್ಸ್ ಫೀಚರ್ಸ್ ಸೇರಿದಂತೆ ಎಲ್ಲಾ ಸೌಲಭ್ಯ ಇದರಲ್ಲಿದೆ. ಇದೀಗ ವ್ಯಾಗನ್ಆರ್ ಕಾರು ಮಾರಾಟದಲ್ಲಿ ಮೊದಲ ಸ್ಥಾನದಲ್ಲಿದೆ. 

 

Read Full Story

12:50 PM (IST) Jul 07

ಮನೆ ಕಳೆದುಕೊಂಡವರಿಗೆ ಸರ್ಕಾರದ ಬರೀ 1 ಲಕ್ಷ ಪರಿಹಾರ, ಈ ದುಡ್ಡಲ್ಲಿ ದನದ ದೊಡ್ಡಿನೂ ಕಟ್ಟೋಕೆ ಆಗಲ್ಲ!

ಶಿರಸಿಯಲ್ಲಿ ಧರೆ ಕುಸಿತದಿಂದ ಮನೆ ಕಳೆದುಕೊಂಡ ಕುಟುಂಬಕ್ಕೆ ಸರ್ಕಾರ ಕೇವಲ 1 ಲಕ್ಷ ರೂ. ಪರಿಹಾರ ನೀಡಿದೆ. ಶಾಸಕ ಭೀಮಣ್ಣ ನಾಯ್ಕ್‌ ಪರಿಹಾರ ವಿತರಿಸಿದ್ದು, ಬಿಜೆಪಿ ಮುಖಂಡರು ಸರ್ಕಾರದ ನಿರ್ಲಕ್ಷ್ಯವನ್ನು ಖಂಡಿಸಿದ್ದಾರೆ.
Read Full Story

More Trending News