Published : Nov 07, 2025, 06:46 AM ISTUpdated : Nov 07, 2025, 10:33 PM IST

Karnataka News Live: Bigg Bossನಿಂದ ನರಕ ಅನುಭವಿಸಿದೆ, ನನ್ನ ಚಪ್ಪಲಿಯಿಂದ ನಾನೇ ಹೊಡೆದುಕೊಳ್ಳಬೇಕು ಎನ್ನೋದಾ ಈ ಖ್ಯಾತ ನಟಿ?

ಸಾರಾಂಶ

ಬೆಂಗಳೂರು : ಟನ್‌ ಕಬ್ಬಿಗೆ 3500 ರು. ನೀಡುವಂತೆ ಆಗ್ರಹಿಸಿ ಉತ್ತರ ಕರ್ನಾಟಕದ ರೈತರು ಬೀದಿಗಿಳಿದು ತೀವ್ರ ಸ್ವರೂಪದ ಹೋರಾಟ ನಡೆಸುತ್ತಿರುವಾಗಲೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಸಕ್ಕರೆ ಕಾರ್ಖಾನೆಗಳ ಮಾಲೀಕರು ಹಾಗೂ ರೈತ ಮುಖಂಡರ ಪ್ರತ್ಯೇಕ ಸಭೆ ಕರೆದಿದ್ದಾರೆ. ಈ ಸಭೆಯಲ್ಲಿ ಕಗ್ಗಂಟಿಗೆ ಪರಿಹಾರ ಸಿಗಬಹುದು ಎಂದು ನಿರೀಕ್ಷಿಸಲಾಗಿದೆ. ‘ಕಬ್ಬು ಎಫ್ಆರ್‌ಪಿ (ನ್ಯಾಯ ಮತ್ತು ಮೌಲ್ಯವರ್ಧಿತ ಬೆಲೆ) ಬೆಲೆ ನಿಗದಿ ಮಾಡಿರುವುದು ಕೇಂದ್ರ ಸರ್ಕಾರ. ಕೇಂದ್ರ ಬಿಜೆಪಿ ಸರ್ಕಾರ ರಾಜ್ಯ ರೈತರ ಬದುಕಿನೊಂದಿಗೆ ಚೆಲ್ಲಾಟ ಆಡುತ್ತಿದ್ದು, ರೈತರ ಸಮಸ್ಯೆ ಬಗೆಹರಿಸಲು ಶುಕ್ರವಾರ ಸಕ್ಕರೆ ಕಾರ್ಖಾನೆಗಳ ಮಾಲೀಕರು ಹಾಗೂ ರೈತ ಮುಖಂಡರೊಂದಿಗೆ ಪ್ರತ್ಯೇಕ ಸಭೆ ನಡೆಸಲಾಗುವುದು’ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

Bigg Boss Vishnupriya

10:33 PM (IST) Nov 07

Bigg Bossನಿಂದ ನರಕ ಅನುಭವಿಸಿದೆ, ನನ್ನ ಚಪ್ಪಲಿಯಿಂದ ನಾನೇ ಹೊಡೆದುಕೊಳ್ಳಬೇಕು ಎನ್ನೋದಾ ಈ ಖ್ಯಾತ ನಟಿ?

ತೆಲುಗು ಬಿಗ್‌ಬಾಸ್‌ಗೆ ಹೋಗಿದ್ದಕ್ಕೆ ತೀವ್ರ ಪಶ್ಚಾತ್ತಾಪ ವ್ಯಕ್ತಪಡಿಸಿರುವ ನಟಿ ವಿಷ್ಣುಪ್ರಿಯ, ಅದೊಂದು ನರಕದ ಅನುಭವ ಎಂದಿದ್ದಾರೆ. ನಿದ್ದೆ, ಊಟ, ಕಾಫಿ ಇಲ್ಲದೆ ಹಿಂಸೆ ಅನುಭವಿಸಿದ್ದಾಗಿ ಹೇಳಿದ್ದು, ಹೊಸ ಮನೆ ಖರೀದಿಸುವ ಆಸೆ ಈಡೇರದೇ, 'ನನ್ನ ಚಪ್ಪಲಿಯಲ್ಲಿ ನಾನೇ ಹೊಡೆದುಕೊಳ್ಳಬೇಕು' ಎಂದಿದ್ದಾರೆ.

Read Full Story

10:18 PM (IST) Nov 07

Amruthadhaare - ತಮ್ಮಂಗೆ ಮುದ್ದು ಮಾಡಿದ್ರೆ ಈ ಅಕ್ಕಂಗೆ ಸಿಕ್ಕಾಪಟ್ಟೆ ಕೋಪ- ಒಂದಾಗೋ ಕಾಲ ಬಂದೇ ಬಿಡ್ತಾ?

'ಅಮೃತಧಾರೆ' ಧಾರಾವಾಹಿಯಲ್ಲಿ, ಗೌತಮ್ ಮತ್ತು ಭೂಮಿಕಾಳ ಮದುವೆಯ ವಾರ್ಷಿಕೋತ್ಸವದಂದು ಅವರನ್ನು ಒಂದು ಮಾಡಲು ಮಲ್ಲಿ ಮತ್ತು ಆನಂದ್ ಹೋಟೆಲ್‌ಗೆ ಕರೆದೊಯ್ಯುತ್ತಾರೆ. ಅಲ್ಲಿ ಗೌತಮ್-ಭೂಮಿಕಾ ಹುಸಿ ಮುನಿಸು ತೋರಿದರೆ, ಇನ್ನೊಂದೆಡೆ ಆಕಾಶ್ ಮತ್ತು ಮಿಂಚು ನಡುವೆ ಮುದ್ದಾದ ಜಗಳ ನಡೆಯುತ್ತದೆ.
Read Full Story

10:15 PM (IST) Nov 07

ಪ್ರೀತಿಸಿದ ಯುವಕನಿಂದ ಮೋಸ.. ಮನನೊಂದ ಯುವತಿ ಆ*ಹತ್ಯೆಗೆ ಶರಣು - ಪೋಷಕರ ಆಕ್ರಂದನ

ಪ್ರೀತಿಸಿದ ಯುವಕ ಮೋಸ ಮಾಡಿದ ಎಂದು ಮನನೊಂದು ಯುವತಿ ಆ*ಹತ್ಯೆಗೆ ಶರಣಾದ ಘಟನೆ ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ಕುದರಿಹಾಳ ಗ್ರಾಮದಲ್ಲಿ ನಡೆದಿದೆ. ಸಿಂಧು ಪರಣ್ಣನವರ್ ಆ*ಹತ್ಯೆಗೆ ಮಾಡಿಕೊಂಡ ಯುವತಿ.

Read Full Story

09:50 PM (IST) Nov 07

ಶಿಕ್ಷಕರ ಸಂಬಳಕ್ಕೆ ನನ್ನ ವೇತನ ಮೀಸಲು - ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಭರವಸೆ

ಸಿಎಸ್‌ಆರ್ ಅನುದಾನದಿಂದ ಶಿಕ್ಷಕರ ವೇತನ ನೀಡುವುದಕ್ಕೆ ಅವಕಾಶವಿಲ್ಲದಿರುವುದರಿಂದ ಲೋಕಸಭೆ ಸದಸ್ಯನಾಗಿ ತಮ್ಮ ಈವರೆಗಿನ ವೇತನವನ್ನು ಶಿಕ್ಷಕರ ವೇತನ ಪಾವತಿಸಲು ಕೊಡುವುದಾಗಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದರು.

Read Full Story

09:48 PM (IST) Nov 07

Karna - ಏನಾಗ್ಬಾರ್ದು ಎಂದು ವೀಕ್ಷಕರು ಅಂದುಕೊಂಡಿದ್ರೋ ಅದೇ ಆಗೋಯ್ತು! ಕರ್ಣ-ನಿಧಿ ಒಂದಾಗೋದು ಇನ್ನು ಕನಸೇ

ತಾನು ಗರ್ಭಿಣಿ ಎಂದು ತಿಳಿದು ಮಗುವನ್ನು ತೆಗೆಸಲು ನಿತ್ಯಾ ನಿರ್ಧರಿಸುತ್ತಾಳೆ. ಆದರೆ, ಅನಾಥ ಮಗುವಿನ ನೋವನ್ನರಿತ ಕರ್ಣ, ತಾನೇ ಆ ಮಗುವಿಗೆ ಅಪ್ಪನಾಗುವುದಾಗಿ ಹೇಳಿ ನಿತ್ಯಾಗೆ ಆಘಾತ ನೀಡುತ್ತಾನೆ. ಈ ಬೆಳವಣಿಗೆಯು ಕರ್ಣ ಮತ್ತು ನಿಧಿ ಒಂದಾಗುವ ಅಭಿಮಾನಿಗಳ ಆಸೆಗೆ ತಣ್ಣೀರೆರಚಿದೆ.
Read Full Story

09:42 PM (IST) Nov 07

ರಾಮ್ ಚರಣ್ ಬೀಡಿ ಡ್ಯಾನ್ಸ್, ರೆಹಮಾನ್ ಬೀಟ್ಸ್, ಜಾನ್ವಿ ಗ್ಲಾಮರ್.. ಇಂಟರ್ನೆಟ್‌ನಲ್ಲಿ ಚಿಕಿರಿ ಚಿಕಿರಿ ಸಾಂಗ್ ಹವಾ!

ರಾಮ್ ಚರಣ್ ಅವರ ಪೆದ್ದಿ ಸಿನಿಮಾದಿಂದ 'ಚಿಕಿರಿ' ಹಾಡು ರಿಲೀಸ್ ಆಗಿದೆ. ಪ್ರೋಮೋದಲ್ಲಿ ರಾಮ್ ಚರಣ್ ತಮ್ಮ ಡ್ಯಾನ್ಸ್‌ನಿಂದ ಇಂಟರ್ನೆಟ್‌ನಲ್ಲಿ ಹವಾ ಎಬ್ಬಿಸಿದ್ದರು. ಇದೀಗ ಪೂರ್ತಿ ಹಾಡು ಬಂದಿದೆ. ಹಾಡು ಹೇಗಿದೆ ಅಂತ ಈ ಸುದ್ದಿಯಲ್ಲಿ ನೋಡೋಣ.

Read Full Story

09:12 PM (IST) Nov 07

ಮತಗಳ್ಳತನ ಬಗ್ಗೆ ರಾಹುಲ್‌ ಗಾಂಧಿ ಆರೋಪ ನಿಜ - ಗೃಹ ಸಚಿವ ಪರಮೇಶ್ವರ್

ರಾಹುಲ್‌ ಗಾಂಧಿ ಮಾಡಿರುವ ಮತಗಳ್ಳತನ ಆರೋಪ ಅಲ್ಲಗೆಳೆಯಲು ಸಾಧ್ಯವಿಲ್ಲ. ಎಲ್ಲ ರೀತಿಯ ದಾಖಲೆಗಳನ್ನು ಅವರು ಬಹಿರಂಗ ಪಡಿಸಿದ್ದು, ಮತಗಳ್ಳತನ ಆಗಿರುವುದು ನಿಜ ಎಂದು ಗೃಹ ಸಚಿವ ಪರಮೇಶ್ವರ್ ಸಮರ್ಥಿಸಿಕೊಂಡರು.

Read Full Story

09:06 PM (IST) Nov 07

2014ರಿಂದ ಎಲ್ಲಾ ಚುನಾವಣೆಗಳಲ್ಲೂ ಬಿಜೆಪಿ ಮತಗಳವು ಕುತಂತ್ರ - ಸಚಿವ ರಾಮಲಿಂಗಾರೆಡ್ಡಿ

ಬಿಜೆಪಿಯವರಿಗೆ ಮತಗಳವು ಹೊಸದಲ್ಲ. 2014ರಿಂದಲೇ ಮತಗಳವು ಪ್ರಾರಂಭವಾಗಿದೆ, ನಂತರದ ಎಲ್ಲಾ ಚುನಾವಣೆಗಳಲ್ಲೂ ಬಿಜೆಪಿಯವರು ಮತಗಳವು ಕುತಂತ್ರ ನಡೆಸಿರುವ ಸಾಧ್ಯತೆ ಇದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ವಾಗ್ದಾಳಿ ನಡೆಸಿದ್ದಾರೆ.

Read Full Story

08:13 PM (IST) Nov 07

ರುಕ್ಮಿಣಿ ವಸಂತ್ ಹೆಸರಿನಲ್ಲಿ ಅನಾಮಿಕ ವ್ಯಕ್ತಿಯಿಂದ ಹಣ ಸುಲಿಗೆ - ಅಭಿಮಾನಿಗಳಿಗೆ ಮನವಿ ಮಾಡಿದ ನಟಿ!

ನಟಿ ರುಕ್ಮಿಣಿ ವಸಂತ್ ಹೆಸರಿನಲ್ಲಿ ಅನಾಮಿಕ ವ್ಯಕ್ತಿಯೊಬ್ಬ ಸಾರ್ವಜನಿಕರಿಂದ ಹಣ ಕೇಳುತ್ತಿರುವ ವಿಚಾರವೊಂದು ಇದೀಗ ಬೆಳಕಿಗೆ ಬಂದಿದೆ. ಈ ಬಗ್ಗೆ ರುಕ್ಮಿಣಿ ವಸಂತ್ ಅವರೇ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.

Read Full Story

07:51 PM (IST) Nov 07

ಚಿಕ್ಕ ವಯಸ್ಸಿನಲ್ಲೇ ಬಂದ ಆಸೆ! ಅದಕ್ಕಾಗಿ ಚಿಂತಿಸಲ್ಲ... ಜಿಂಕೆ ಮರಿ ನಂದಿತಾ ಶ್ವೇತಾ ಓಪನ್ ಟಾಕ್!

ಕನ್ನಡದ 'ನಂದ ಲವ್ಸ್ ನಂದಿತಾ' ಚಿತ್ರದ ಮೂಲಕ ನಟಿ ನಂದಿತಾ ಶ್ವೇತಾ ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದರು. ಅವರು ತಮ್ಮ ಬಾಲ್ಯದ ಆಸೆ ಮತ್ತು ಕೈತಪ್ಪಿ ಹೋದ ಹಿಟ್ ಸಿನಿಮಾಗಳ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

Read Full Story

07:42 PM (IST) Nov 07

Photos - ದಾವಣಗೆರೆಯಲ್ಲಿ ನಡೆದ 'ಪದ್ಮಾವತಿ' ಕಲ್ಯಾಣ; ಕನ್ನಡ ಸೀರಿಯಲ್ ನಟಿ ದೀಪ್ತಿ ಮನ್ನೆ ಮದುವೆ ಫೋಟೋಗಳಿವು

‘ಪದ್ಮಾಪತಿ’ ಧಾರಾವಾಹಿಯಲ್ಲಿ ತುಳಸಿ ಎನ್ನುವ ಮುಗ್ಧೆ, ಸಂಪ್ರದಾಯಸ್ಥೆ ಹುಡುಗಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನಟಿ ದೀಪ್ತಿ ಮನ್ನೆ ಅವರು ಕೆಲ ವರ್ಷಗಳಿಂದ ತೆಲುಗು ಕಿರುತೆರೆಯಲ್ಲಿ ಬ್ಯುಸಿ ಆಗಿದ್ದಾರೆ. ಈಗ ತವರೂರಿನಲ್ಲಿ ಮದುವೆಯಾಗಿದ್ದಾರೆ.

 

Read Full Story

07:12 PM (IST) Nov 07

ಮುರುಡೇಶ್ವರದಲ್ಲಿ ಕಟ್ಟಡ ಕಾಮಗಾರಿ ವೇಳೆ ತಾತ್ಕಾಲಿಕ ಲಿಫ್ಟ್ ಕುಸಿತ - ಇಬ್ಬರು ಕಾರ್ಮಿಕರ ದಾರುಣ ಸಾವು

ಕಟ್ಟಡ ಕಾಮಗಾರಿಯ ವೇಳೆ ತಾತ್ಕಾಲಿಕ ಲಿಫ್ಟ್ ಕುಸಿದು, ಇಬ್ಬರು ಕಾರ್ಮಿಕರು ದಾರುಣವಾಗಿ ಸಾವನಪ್ಪಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರದಲ್ಲಿ ನಡೆದಿದೆ. ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read Full Story

06:58 PM (IST) Nov 07

ತುಮಕೂರು ಜಿಲ್ಲಾಸ್ಪತ್ರೆಯ ಕಟ್ಟಡದ ಮೇಲಿಂದ ಬಿದ್ದು ಅಪರಿಚಿತ ವ್ಯಕ್ತಿ ಸಾವು - ಅಷ್ಟಕ್ಕೂ ಆಗಿದ್ದೇನು?

ತುಮಕೂರು ಜಿಲ್ಲಾಸ್ಪತ್ರೆಯ ಕಟ್ಟಡದ ಮೇಲಿಂದ ಬಿದ್ದು ಅಪರಿಚಿತ ವ್ಯಕ್ತಿ ಸಾವನಪ್ಪಿದ ಘಟನೆ ಟ್ರಾಮಾ ಕೇರ್ ಸೆಂಟರ್ ಆಸ್ಪತ್ರೆ ಕಟ್ಟಡದಲ್ಲಿ ನಡೆದಿದೆ. ಇಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಘಟನೆ‌ ನಡೆದಿದೆ.

Read Full Story

06:47 PM (IST) Nov 07

ಡಾರ್ಲಿಂಗ್ ಪ್ರಭಾಸ್ ಕೆರಿಯರ್‌ನ ಬೆಸ್ಟ್ ನಿರ್ಧಾರ - ಈ ಸಿನಿಮಾ ರಿಜೆಕ್ಟ್ ಮಾಡಿದ್ದೇ ಅದೃಷ್ಟವಂತೆ!

ಪ್ರಭಾಸ್ ತಮ್ಮ ವೃತ್ತಿಜೀವನದಲ್ಲಿ ಹಲವು ಸೂಪರ್ ಹಿಟ್ ಚಿತ್ರಗಳನ್ನು ಕೈಬಿಟ್ಟಿದ್ದಾರೆ. ಸಿಂಹಾದ್ರಿ, ಕಿಕ್‌ನಂತಹ ಚಿತ್ರಗಳು ಆ ಪಟ್ಟಿಯಲ್ಲಿವೆ. ಆದರೆ ಈ ಒಂದು ಚಿತ್ರವನ್ನು ತಿರಸ್ಕರಿಸಿ ಒಳ್ಳೆಯ ಕೆಲಸ ಮಾಡಿದ್ದಾರೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಆ ವಿವರಗಳನ್ನು ಈ ಲೇಖನದಲ್ಲಿ ನೋಡೋಣ.

Read Full Story

06:17 PM (IST) Nov 07

ಕೊನೆಗೂ ರೈತರ ಹೋರಾಟಕ್ಕೆ ಮಣಿದ ಸರ್ಕಾರ, ಟನ್ ಕಬ್ಬಿಗೆ 3300 ನಿಗದಿ - ಎಚ್‌.ಕೆ. ಪಾಟೀಲ್ ಹೇಳಿದ್ದೇನು?

ಕಬ್ಬಿಗೆ 3500 ರೂಪಾಯಿ ದರ ನಿಗದಿ ಮಾಡಬೇಕು ಎಂದು ಆಗ್ರಹಿಸಿದ ರೈತರ ಹೋರಾಟಕ್ಕೆ ಕೊನೆಗೂ ಸರ್ಕಾರ ಮಣಿದಿದೆ. ಈ ಬಗ್ಗೆ ಮಾಹಿತಿ ನೀಡಿದ ಸಚಿವ ಎಚ್‌.ಕೆ. ಪಾಟೀಲ್ 1 ಟನ್ ಕಬ್ಬಿಗೆ 3300 ನಿಗದಿ ಮಾಡಲಾಗಿದೆ.

Read Full Story

06:04 PM (IST) Nov 07

ಚಿತ್ತಾಪುರ ಆರ್‌ಎಸ್‌ಎಸ್‌ ಪಥಸಂಚಲನ - ವಿಚಾರಣೆ ಮತ್ತೆ ನ.13ಕ್ಕೆ ಮುಂದೂಡಿದ ಹೈಕೋರ್ಟ್

ಚಿತ್ತಾಪುರದಲ್ಲಿ ಆರ್‌ಎಸ್‌ಎಸ್‌ ಪಥಸಂಚಲನ ನಡೆಸುವ ಕುರಿತ ವಿಚಾರಣೆಯನ್ನು ಮತ್ತೆ ನ.13ಕ್ಕೆ ಹೈಕೋರ್ಟ್ ಮುಂದೂಡಿದೆ. ಅನುಮತಿ ಕೋರಿದ್ದ ಆರ್‌ಎಸ್‌ಎಸ್‌ ನ.13 ಅಥವಾ 16ಕ್ಕೆ ಪಥ ಸಂಚಲನ ಅನುಮತಿ ಕೋರಿತ್ತು.

Read Full Story

05:44 PM (IST) Nov 07

ಶಂಕರ್‌ನಾಗ್‌ ಜನ್ಮದಿನದ ಪ್ರಯುಕ್ತ ನ.9 ರಂದು ಚಾಲಕರ ದಿನಾಚರಣೆ - ಆಟೋ ರಾಯಭಾರಿಯಾಗಿ ನಟಿ ರಚಿತಾ ರಾಮ್‌

ಮೇರುನಟ ದಿ. ಶಂಕರ್‌ನಾಗ್‌ ಅವರ ಜನ್ಮದಿನದ ಪ್ರಯುಕ್ತ ಈ ಬಾರಿಯ ಚಾಲಕರ ದಿನಾಚರಣೆಗೆ 'ಆಟೋ ರಾಯಭಾರಿ'ಯಾಗಿ ಡಿಂಪಲ್‌ ಕ್ವೀನ್‌ ನಟಿ ರಚಿತಾ ರಾಮ್‌ ಆಯ್ಕೆಯಾಗಿದ್ದಾರೆ. ಸುಮಾರು 4 ಸಾವಿರ ಚಾಲಕರಿಗೆ ಸಮವಸ್ತ್ರ ವಿತರಣೆ ಮಾಡಲಾಗುತ್ತದೆ.

Read Full Story

05:18 PM (IST) Nov 07

ಉಪೇಂದ್ರ ನನ್ನ ಗುರು.. ರಾಜಕೀಯದ ಆಕರ್ಷಣೆಯಿಂದ ಸಿನಿಮಾಕ್ಕೆ ಬಂದೆ - ರವಿ ಗೌಡ ಹೇಳಿದ್ದೇನು?

ರವಿ ಗೌಡ ನಟನೆ, ನಿರ್ದೇಶನ, ನಿರ್ಮಾಣದ ರೊಮ್ಯಾಂಟಿಕ್‌ ಥ್ರಿಲ್ಲರ್‌ ಐ ಆ್ಯಮ್‌ ಗಾಡ್‌. ಉಪೇಂದ್ರ ಗರಡಿಯಿಂದ ಬಂದ ರವಿ ಗೌಡ ಐ ಆ್ಯಮ್‌ ಗಾಡ್‌ ಎಂಬ ರೊಮ್ಯಾಂಟಿಕ್‌ ಥ್ರಿಲ್ಲರ್‌ ಕಥೆಯೊಂದಿಗೆ ಬಂದಿದ್ದಾರೆ. ಅವರೊಂದಿಗೆ ಮಾತುಕತೆ.

Read Full Story

05:00 PM (IST) Nov 07

ಸುದೀಪ್‌ಗೆ ಸ್ಪರ್ಧೆ ಕೊಡುವಷ್ಟು ದೊಡ್ಡವನಲ್ಲ, ನೀವು ನನ್ನ ಸಿನಿಮಾ ನೋಡಿ - ಅರ್ಜುನ್‌ ಜನ್ಯ ಸಂದರ್ಶನ

‘45’ ಚಿತ್ರ ಡಿ.25ಕ್ಕೆ ತೆರೆ ಕಾಣಲಿದೆ. ಚಿತ್ರದ ಮೇಕಿಂಗ್‌, ಬಜೆಟ್‌, ತೆಗೆದುಕೊಳ್ಳುತ್ತಿರುವ ಸಮಯ ನೋಡಿ ಸಾಕಷ್ಟು ಪ್ರಶ್ನೆಗಳು ಹುಟ್ಟಿಕೊಂಡಿವೆ. ಈ ಹಿನ್ನೆಲೆ ಚಿತ್ರದ ನಿರ್ದೇಶಕ ಅರ್ಜುನ್‌ ಜನ್ಯ ಮಾತನಾಡಿದ್ದಾರೆ.

Read Full Story

04:47 PM (IST) Nov 07

Vegetarian Alert! ನಿಮ್ಮ ಆಹಾರದ ಜೊತೆ ಪ್ರತಿದಿನ ನೀವು ಎಷ್ಟು ‘ಕೀಟಗಳನ್ನು’ ತಿನ್ನುವಿರಿ ಗೊತ್ತಾ?

Vegetarians Alert: ನಾವು ಪ್ರತಿದಿನ ತಿನ್ನುವ ಆಹಾರದಲ್ಲಿ ಕೀಟಗಳು ಇರೋದು ಸಾಮಾನ್ಯ.. ಎಷ್ಟೊಂದು ಕೀಟಗಳು ನಮ್ಮ ಹೊಟ್ಟೆಯನ್ನು ಸೇರುತ್ತೆ ಅನ್ನೋದು ನಿಮಗೆ ಗೊತ್ತಿದ್ಯಾ? ಇಲ್ಲ ಅಂದ್ರೆ ಇದನ್ನು ನೀವು ಓದಲೇಬೇಕು. ಇದು ನಿಮಗೆ ಶಾಕಿಂಗ್ ಅನಿಸಬಹುದು. ಆದರೆ ಇದು ಸತ್ಯವಾದ ವಿಷಯ.

Read Full Story

04:42 PM (IST) Nov 07

BBK 12 - ಏನಮ್ಮ ರಕ್ಷಿತಾ ಶೆಟ್ಟಿ! ಭೂಮಿ ತೂಕದ ತಾಳ್ಮೆ, ಪ್ರೌಢಿಮೆ ತೋರಿಸಿದ್ಯಲ್ಲ ತಾಯಿ...!

Bigg Boss Kannada Season 12: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ರಕ್ಷಿತಾ ಶೆಟ್ಟಿ ಆಟಕ್ಕೆ ತಕ್ಕಂತೆ ಮಾತನಾಡುತ್ತಾರೆ, ಪಾಯಿಂಟ್ಸ್‌ ಹೇಳಿ ಮಾತಾಡ್ತಾರೆ. ಈಗ ಇವರ ಭೂಮಿ ತೂಕದ ತಾಳ್ಮೆ, ಪ್ರೌಢಿಮೆಯು ಕನ್ನಡಿಗರ ಮನಸ್ಸನ್ನು ಗೆದ್ದಿದೆ.

 

Read Full Story

03:50 PM (IST) Nov 07

ಮಂಗಳೂರು - ಶಾಂಭವಿ ನದಿಗೆ ಹಾರಿ ಯುವ ಉದ್ಯಮಿ ಅಭಿಷೇಕ್ ಆಳ್ವ ಸಾವಿಗೆ ಶರಣು

Young businessman death: ಪುತ್ತೂರಿನ ನೆಲ್ಯಾಡಿ ಮೂಲದ ಯುವ ಹೊಟೇಲ್ ಉದ್ಯಮಿ ಅಭಿಷೇಕ್ ಆಳ್ವ ಅವರು ಮೂಲ್ಕಿ ಸಮೀಪದ ಬಪ್ಪನಾಡು ಸೇತುವೆಯಿಂದ ಶಾಂಭವಿ ನದಿಗೆ ಹಾರಿ  ಸಾವಿಗೆ ಶರಣಾಗಿದ್ದಾರೆ.

Read Full Story

03:20 PM (IST) Nov 07

BBK 12 - ಅದೊಂದು ಪದ ಬಳಸಿ ಗಿಲ್ಲಿ ನಟನ ಪಿತ್ತ ನೆತ್ತಿಗೇರಿಸಿದ ಧ್ರುವಂತ್;‌ ಕಿರುಚಾಡಿದ ಕಾವ್ಯ ಶೈವ

Bigg Boss Kannada Season 12 Show: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಈ ವಾರದ ಕಳಪೆ ಯಾರು? ಗಿಲ್ಲಿ ನಟ ಯಾರು? ಎಂಬ ಪ್ರಶ್ನೆ ಇತ್ತು. ಇದೇ ವೇಳೆ ಧ್ರುವಂತ್‌ ಅವರು ಕಾವ್ಯ ಶೈವ, ಗಿಲ್ಲಿ ನಟನ ಬಗ್ಗೆ ಮಾತನಾಡಿದ್ದು, ದೊಡ್ಡ ಜಗಳ ಆಗಿದೆ.

 

Read Full Story

02:42 PM (IST) Nov 07

ನಾಗರಹೊಳೆ, ಬಂಡೀಪುರ ಸಫಾರಿ, ಚಾರಣ ಇಂದಿನಿಂದಲೇ ಬಂದ್ - ಸಚಿವ ಈಶ್ವರ್ ಖಂಡ್ರೆ

ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಅರಣ್ಯದಂಚಿನಲ್ಲಿ ಹುಲಿ ದಾಳಿಯಿಂದ ಮೂವರು ಮೃತಪಟ್ಟ ಹಿನ್ನೆಲೆಯಲ್ಲಿ, ಸಚಿವ ಈಶ್ವರ ಖಂಡ್ರೆ ನಾಗರಹೊಳೆ ಮತ್ತು ಬಂಡೀಪುರದಲ್ಲಿ ಸಫಾರಿ ಹಾಗೂ ಚಾರಣವನ್ನು ತಕ್ಷಣದಿಂದಲೇ ಸ್ಥಗಿತಗೊಳಿಸಲು ಆದೇಶಿಸಿದ್ದಾರೆ. 

Read Full Story

02:20 PM (IST) Nov 07

ನೇಪಾಳದಲ್ಲಿ GenZ ದಂಗೆಯೆದ್ರು; ಭಾರತದಲ್ಲಿ ಮಹಿಳಾ ಸಾಧಕರ ಜೊತೆ ನರೇಂದ್ರ ಮೋದಿ ಸಾಮಾನ್ಯರಂತೆ ಸಂವಾದ ಮಾಡಿದ್ರು

ವಿಶ್ವಕಪ್‌ ಗೆದ್ದ ಭಾರತೀಯ ಮಹಿಳಾ ಟೀಂ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಒಂದಿಷ್ಟು ಸಮಯ ಮಾತನಾಡಿದ್ದಾರೆ, ಕೈಯಾರೆ ಊಟ ಬಡಿಸಿದ್ದಾರೆ. ಈ ಸಂವಾದದ ಪ್ರಶ್ನೆಗಳು, ಮೋದಿ ಅವರ ಉತ್ತರಗಳ ಬಗ್ಗೆ ಅವಿನಾಶ್‌ ನೀರಹಳ್ಳಿ ಅವರು ಬರೆದ ಬರಹವೊಂದು ವೈರಲ್‌ ಆಗ್ತಿದೆ.

Read Full Story

01:45 PM (IST) Nov 07

ದಯವಿಟ್ಟು ನಮ್ಮನ್ನು ಕ್ಷಮಿಸಿಬಿಡಿ - Zee Kannada ವಾಹಿನಿಯಿಂದ ಕ್ಷಮಾಪನಾ ಪತ್ರ

ಮನರಂಜನಾ ವಾಹಿನಿ ಜೀ ಕನ್ನಡವು ತನ್ನ ವೀಕ್ಷಕರಿಗೆ ಬಹಿರಂಗ ಪತ್ರ ಬರೆದು ಕ್ಷಮೆ ಕೋರಿದೆ. ತಮ್ಮ ಕಾರ್ಯಕ್ರಮಗಳು ತುಂಬಾ ಮನರಂಜನೀಯವಾಗಿದ್ದು, ಬೇರೆ ಚಾನೆಲ್‌ಗಳನ್ನು ಮರೆಯುವಂತೆ ಮಾಡಿದ್ದಕ್ಕಾಗಿ ಕ್ಷಮೆಯಿರಲಿ ಎಂದು ಪತ್ರದಲ್ಲಿ ತಿಳಿಸಿದೆ. ಈ ಪತ್ರಕ್ಕೆ ವೀಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
Read Full Story

01:44 PM (IST) Nov 07

ಶಾಪದಿಂದ ಕಲ್ಲು ಒಡೆಯತ್ತಂತೆ; ಸೀರಿಯಲ್‌ ಸೆಟ್‌ನಲ್ಲಿ ಪ್ರೀತಿಸಿ ಮದುವೆಯಾಗಿದ್ದ ಈ ನಟ-ನಟಿಗೆ ಈಗ ಡಿವೋರ್ಸ್

 Celebrity Divorce: ಸೂಪರ್‌ ಹಿಟ್‌ ಧಾರಾವಾಹಿಯಲ್ಲಿ ಅತ್ತಿಗೆ-ಮೈದುನ ಪಾತ್ರದಲ್ಲಿ ನಟಿಸಿದ ಕಲಾವಿದರು ರಿಯಲ್‌ ಲೈಫ್‌ನಲ್ಲಿ ಪ್ರೀತಿಸಿ ಮದುವೆಯಾಗಿದ್ದರು, ಅಂದು ಹಾಕಿದ ಶಾಪದ ಫಲವೋ ಏನೋ ಈ ಜೋಡಿ ಡಿವೋರ್ಸ್‌ ಪಡೆಯುತ್ತಿದೆ. ಹಾಗಾದರೆ ಯಾರದು?

 

Read Full Story

01:12 PM (IST) Nov 07

ಪುಟ್ಟಕ್ಕನ ಹರಕೆ ಫಲಿಸಲಿಲ್ಲ, ಜೀವದ ಗೆಳತಿ ಉಳಿಯಲಿಲ್ಲ - ಬಡ್ಡಿ ಬಂಗಾರಮ್ಮ ಇನ್ನಿಲ್ಲ

‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯಲ್ಲಿ, ಬಿಗ್‌ಬಾಸ್‌ನಿಂದ ಮಂಜು ಭಾಷಿಣಿ ವಾಪಸ್ಸಾದರೂ ಬಂಗಾರಮ್ಮ ಪಾತ್ರವು ಸಾವಿನೊಂದಿಗೆ ಅಂತ್ಯಗೊಂಡಿದೆ. ಈ ಅನಿರೀಕ್ಷಿತ ಬೆಳವಣಿಗೆಯಿಂದ ಕಂಠಿ ತಬ್ಬಲಿಯಾಗಿದ್ದು, ಕಥೆಯು ಎಳೆಯುತ್ತಿರುವುದರಿಂದ ವೀಕ್ಷಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
Read Full Story

12:17 PM (IST) Nov 07

ರಕ್ಷಿತಾ ಶೆಟ್ಟಿಯ 'ನೀರುಳ್ಳಿ' ರಾಗ! ಹಾಡು ಹೇಳುತ್ತಾ ತಾನೇ ಕನ್ಫ್ಯೂಸ್ ಅದ್ರು ಬಿಗ್‌ಬಾಸ್ ಮನೆಯ ಪುಟ್ಟಿ

ಬಿಗ್‌ಬಾಸ್ ಮನೆಯಲ್ಲಿ ತನ್ನ ತುಳು-ಹಿಂದಿ ಮಿಶ್ರಿತ ಕನ್ನಡದಿಂದ ಗಮನ ಸೆಳೆಯುತ್ತಿರುವ ರಕ್ಷಿತಾ ಶೆಟ್ಟಿ, ಇದೀಗ ಅಡುಗೆ ಮನೆಯಲ್ಲಿ ಈರುಳ್ಳಿಗಾಗಿ ಹಾಡು ಹಾಡಿದ್ದಾರೆ. 'ನೀರುಳ್ಳಿ, ನೀರುಳ್ಳಿ' ಎಂದು ಹಾಡುವ ಮೂಲಕ ಅವರು ಮನೆಯವರನ್ನು ರಂಜಿಸಿದ್ದಾರೆ.

Read Full Story

11:34 AM (IST) Nov 07

ಕರ್ನಾಟಕದ ಈ ದೇವಸ್ಥಾನದಿಂದ ಕತ್ರಿನಾ ಕೈಫ್‌ಗೆ ಕಾರ್ತಿಕ ಮಾಸದಲ್ಲೇ 42ನೇ ವರ್ಷಕ್ಕೆ ಮಗು ಜನನ; ಎಂಥ ಶುಭದಿನ!

Actress Katrina Kaif Son Photo: ನಟಿ ಕತ್ರಿನಾ ಕೈಫ್‌ ಹಾಗೂ ವಿಕ್ಕಿ ಕೌಶಲ್‌ ಅವರಿಗೆ ಬೆಳ್ಳಂ ಬೆಳಗ್ಗೆ ಗುಡ್‌ನ್ಯೂಸ್‌ ಸಿಕ್ಕಿದೆ. ಇವರ ಮನೆಗೆ ಹೊಸ ಸದಸ್ಯರ ಆಗಮನವಾಗಿದೆ. ಅನೇಕರು ಈ ಸ್ಟಾರ್‌ ದಂಪತಿಗೆ ಸೋಶಿಯಲ್‌ ಮೀಡಿಯಾದಲ್ಲಿ ಹಾರೈಕೆಗಳನ್ನು ತಿಳಿಸುತ್ತಿದ್ದಾರೆ. 

Read Full Story

10:41 AM (IST) Nov 07

Shri Gandhada Gudi serial - ಇನ್‌ಸ್ಪೆಕ್ಟರ್‌ ಕಾಳೆಯಿಂದ ಚಂದನಾ, ಹರಿಶ್ಚಂದ್ರ ಬದುಕೇ ಬದಲಾಯ್ತು!

Shri Gandhada Gudi serial Today Episode: ‘ಶ್ರೀಗಂಧದ ಗುಡಿ’ ಧಾರಾವಾಹಿಯಲ್ಲಿ ಅಣ್ಣನಿಗೆ ಮದುವೆ ಮಾಡಬೇಕು ಎಂದು ಹರಿಶ್ಚಂದ್ರ ಒದ್ದಾಡುತ್ತಿದ್ದಾನೆ. ಹೀಗಿರುವಾಗ ಇನ್‌ಸ್ಪೆಕ್ಟರ್‌ ಕಾಳೆಯಿಂದ ಸೀರಿಯಲ್‌ನಲ್ಲಿ ದೊಡ್ಡ ತಿರುವು ಸಿಕ್ಕಿದೆ. ಹಾಗಾದರೆ ಏನಾಗುವುದು?

 

Read Full Story

10:13 AM (IST) Nov 07

BBK 12 - ವೀಕೆಂಡ್‌ ಎಪಿಸೋಡ್‌ನಲ್ಲಿ ಅಶ್ವಿನಿ ಗೌಡ ಮಾಡೋ ಕಿತಾಪತಿ ಬಯಲು ಮಾಡಿದ ಸ್ಪಂದನಾ ಸೋಮಣ್ಣ

Bigg Boss Kannada 12 ವೀಕೆಂಡ್‌ ಎಪಿಸೋಡ್‌ನಲ್ಲಿ ಕೆಲವು ವಿಷಯಗಳ ಬಗ್ಗೆ ಕ್ಲಾರಿಟಿ ಸಿಗುವುದು. ಕೆಲ ಗೊಂದಲಗಳು, ಸಮಸ್ಯೆಗಳನ್ನು ಕಿಚ್ಚ ಸುದೀಪ್‌ ಅವರು ಅಡ್ರೆಸ್‌ ಮಾಡಿ ಮಾತನಾಡುತ್ತಾರೆ. ಆ ವೇಳೆ ಅಶ್ವಿನಿ ಗೌಡ ಮ್ಯಾನಿಪ್ಯುಲೇಶನ್‌ ಮಾಡೋದರ ಬಗ್ಗೆ ಸ್ಪಂದನಾ ಸೋಮಣ್ಣ, ಧನುಷ್‌ ಗೌಡ ಚರ್ಚೆ ಮಾಡಿದ್ದಾರೆ.

Read Full Story

09:58 AM (IST) Nov 07

ಎಂಇಎಸ್ ಪುಂಡನ ಜೊತೆ ಸೆಲ್ಫಿ - ಇನ್‌ಸ್ಪೆಕ್ಟರ್‌ ಕಾಲಿಮಿರ್ಚಿಗೆ ಶಾಕ್ ಕೊಟ್ಟ ಸರ್ಕಾರ

ಕರ್ನಾಟಕ ರಾಜ್ಯೋತ್ಸವದಂದು ಕರಾಳ ದಿನ ಆಚರಿಸಿದ ಎಂಇಎಸ್ ಮುಖಂಡ ಶುಭಂ ಶೆಳ್ಕೆ ಜೊತೆ ಸೆಲ್ಫಿ ತೆಗೆದುಕೊಂಡಿದ್ದಕ್ಕೆ ಮಾಳಮಾರುತಿ ಠಾಣೆ ಇನ್‌ಸ್ಪೆಕ್ಟರ್‌ ಜೆ.ಎಂ.ಕಾಲಿಮಿರ್ಚಿ ಅವರನ್ನು ಸ್ಥಳ ತೋರಿಸದೆ ವರ್ಗಾವಣೆ ಮಾಡಲಾಗಿದೆ. 

Read Full Story

09:33 AM (IST) Nov 07

BBK 12 - ಗಿಲ್ಲಿ ಅಂದ್ರೆ ಸಿಲ್ಲಿನಾ? ಮುಗಿಬಿದ್ದ ಅಶ್ವಿನಿ ಗೌಡ, ರಿಷಾ, ಧ್ರುವಂತ್? ತಪ್ಪಾಗಿದ್ದು ಯಾರಿಂದ?

ಗಿಲ್ಲಿ ನಟ ತಮ್ಮ ಅಣಕು ಮಾತುಗಳಿಂದ ನೋವುಂಟು ಮಾಡುತ್ತಿದ್ದಾರೆಂದು ಅಶ್ವಿನಿ ಗೌಡ, ರಿಷಾ ಮತ್ತು ಧ್ರುವಂತ್ ಆರೋಪಿಸಿದ್ದಾರೆ. ಆದರೆ, ತಮ್ಮ ನೇರ ನುಡಿಗೆ ಸ್ಪಷ್ಟನೆ ನೀಡಿರುವ ಗಿಲ್ಲಿ ನಟ, ಅವರ ಆರೋಪಗಳಿಗೆ ತಿರುಗೇಟು ನೀಡಿದ್ದು, ವೀಕೆಂಡ್ ಸಂಚಿಕೆ ಕುತೂಹಲ ಹೆಚ್ಚಿದೆ.

Read Full Story

09:04 AM (IST) Nov 07

ಭಾರತದಲ್ಲಿ ಸಾಂಪ್ರದಾಯಿಕ ಆಭರಣಗಳ ಪುನರುಜ್ಜೀವನ

ಭಾರತದಲ್ಲಿ ಸಾಂಪ್ರದಾಯಿಕ ಆಭರಣಗಳು ಮತ್ತೆ ಜನಪ್ರಿಯವಾಗುತ್ತಿದ್ದು, ಮಹಿಳೆಯರು ಅದರ ಕರಕುಶಲತೆ ಮತ್ತು ಸಾಂಸ್ಕೃತಿಕ ಮಹತ್ವವನ್ನು ಮೆಚ್ಚುತ್ತಿದ್ದಾರೆ. 5,000 ವರ್ಷಗಳ ಇತಿಹಾಸವನ್ನು ಹೊಂದಿರುವ ಈ ಆಭರಣಗಳು, ಮೊಘಲ್ ಮತ್ತು ಬ್ರಿಟಿಷ್ ಯುಗಗಳ ಪ್ರಭಾವವನ್ನು ಒಳಗೊಂಡಿವೆ.

Read Full Story

08:27 AM (IST) Nov 07

Amruthdhaare Serial - ಅಂತೂ ಬಚ್ಚಿಟ್ಟ ಪ್ರೀತಿ ಮಾತು ಹೊರಬಂತು, ಈಗಲಾದರೂ ಅಮೃತಧಾರೆ ಹರಿಯತ್ತಾ?

Amruthadhaare Kannada Serial Today Episode: ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್‌ ಹಾಗೂ ಭೂಮಿಕಾಗೆ ವಿವಾಹ ವಾರ್ಷಿಕೋತ್ಸವದ ಸಂಭ್ರಮ. ಈ ದಿನವನ್ನು ಇನ್ನಷ್ಟು ವಿಶೇಷ ಮಾಡೋಣ ಎಂದು ಮಲ್ಲಿ, ಲಕ್ಷ್ಮೀಕಾಂತ್‌, ಆನಂದ್‌ ಸೇರಿಕೊಂಡು ಪ್ಲ್ಯಾನ್‌ ಮಾಡಿದ್ದರು. ಅದೀಗ ಫಲ ಕೊಡುವಂತೆ ಕಾಣುತ್ತಿದೆ.

 

Read Full Story

08:21 AM (IST) Nov 07

BJP - ಕರ್ನಾಟಕ ರಾಜಕಾರಣ ಕುರಿತು ಮಹತ್ವದ ಸುಳಿವು ನೀಡಿದ ಬಿಜೆಪಿ ಶಾಸಕ ಸುನಿಲ್ ಕುಮಾರ್

ಕಾರ್ಕಳ ಬಿಜೆಪಿ ಶಾಸಕ ಸುನಿಲ್‌ ಕುಮಾರ್‌ ಅವರು, ಕಾಂಗ್ರೆಸ್ ಸರ್ಕಾರ ಅಭಿವೃದ್ಧಿಯನ್ನು ಮರೆತು ಸಿಎಂ ಕುರ್ಚಿಗಾಗಿನ ಗೊಂದಲದಲ್ಲಿ ಕಾಲಹರಣ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಜನವರಿ ಹೊತ್ತಿಗೆ ಸರ್ಕಾರ ಪತನವಾಗಲಿದ್ದು, ಬಿಜೆಪಿ ಮಧ್ಯಂತರ ಚುನಾವಣೆಗೆ ಸಿದ್ಧತೆ ನಡೆಸುತ್ತಿದೆ ಎಂದು ಅವರು ಹೇಳಿದ್ದಾರೆ.
Read Full Story

08:02 AM (IST) Nov 07

ಬೆಳಗಾವಿ ಮರಾಠಿಗನಿಂದ ನಿರಂತರ ಕನ್ನಡ ಸೇವೆ

ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುವುದು ಎಂಬ ಕವಿವಾಣಿಯಂತೆಯೇ ಗಡಿನಾಡು ಬೆಳಗಾವಿಯಲ್ಲಿ ಅಪ್ಪಟ್ಟ ಮರಾಠಿ ಕುಟುಂಬದ ಯುವಕನೊಬ್ಬ ಕನ್ನಡ ನಾಡು, ನುಡಿಗಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮೂಲಕ ವೀರಕನ್ನಡಿಗನಾಗಿ ಹೊರಹೊಮ್ಮಿದ್ದಾನೆ.

Read Full Story

08:01 AM (IST) Nov 07

Karna Serial - ಕರ್ಣ ಏನಾದ್ರೂ ಅದೊಂದು ಮಾತು ಹೇಳಿದ್ರೆ ಮಾತ್ರ ವೀಕ್ಷಕರ ಆಸೆಗೆ ಎಳ್ಳು ನೀರು ಬಿಟ್ಟಂಗೆ!

Karna Serial Episode: ಕರ್ಣ ಧಾರಾವಾಹಿಯಲ್ಲಿ ನಿತ್ಯಾಗೆ ತಾನು ಪ್ರಗ್ನೆಂಟ್‌ ಎನ್ನೋದು ಗೊತ್ತಾಗಿದೆ. ತೇಜಸ್‌ ಕೂಡ ಈಗ ಕಾಣಿಸುತ್ತಿಲ್ಲ, ಈಗ ಹೊಟ್ಟೆಯಲ್ಲಿರುವ ಮಗುಗೆ ತಂದೆ ಪ್ರೀತಿ ಕೂಡ ಸಿಗೋದಿಲ್ಲ ಎಂದು ಅವಳು ಗರ್ಭಪಾತ ಮಾಡಿಸಲು ಮುಂದಾಗಿದ್ದಳು. ಇದನ್ನು ಕರ್ಣ ತಡೆಯುತ್ತಾನಾ?

Read Full Story

07:47 AM (IST) Nov 07

ಶಾಲೆಗಳಿಗೆ ಬಾಂಬ್‌ ಬೆದರಿಕೆ ಹಿಂದೆ ಭಗ್ನಪ್ರೇಮಿ ಕೈವಾಡ

ಕೆಲ ತಿಂಗಳಿಂದ ನಗರದ ಖಾಸಗಿ ಶಾಲೆಗಳಿಗೆ ಬಾಂಬ್ ಬೆದರಿಕೆಯ ಇ-ಮೇಲ್ ಕಳುಹಿಸಿ ಭೀತಿ ಸೃಷ್ಟಿಸಿದ್ದ ಮಹಿಳಾ ‘ಆತಂಕವಾದಿ’ ಕೊನೆಗೂ ಖಾಕಿ ಬಲೆಗೆ ಬಿದ್ದಿದ್ದಾಳೆ. ತಮಿಳುನಾಡು ಮೂಲದ ಸಾಫ್ಟ್‌ವೇರ್‌ ಕಂಪನಿಯ ಮಹಿಳಾ ಉದ್ಯೋಗಿ ರೆನೆ ಜೋಶಿಲ್ದಾ ಬಂಧಿತ ಆರೋಪಿ.

Read Full Story

More Trending News