Published : Mar 06, 2026, 07:29 AM ISTUpdated : Mar 06, 2026, 10:48 PM IST

State News Live: ಎಚ್‌ಎನ್ ವ್ಯಾಲಿ, ಕೆಸಿ ವ್ಯಾಲಿ ನೀರಿಗೆ 3ನೇ ಹಂತದ ಶುದ್ಧೀಕರಣ ಬೇಕು - ಸಂಸದ ಡಾ.ಕೆ.ಸುಧಾಕರ್‌

ಸಾರಾಂಶ

ಬೆಂಗಳೂರು (ಮಾ.6):ಪರಿಶಿಷ್ಟ ಜಾತಿಗೆ ಇರುವ ಶೇ.15ರಷ್ಟು ಮೀಸಲಾತಿಯಲ್ಲಿ ಒಳ ಮೀಸಲಾತಿ ಜಾರಿ ಮಾಡಲು ದಲಿತ ಸಚಿವರಲ್ಲಿ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಅಪೂರ್ಣವಾಗಿದ್ದು, ಮುಂದೆ ಇದೇ ವಿಷಯ ಬಗ್ಗೆ ವಿಶೇಷ ಸಂಪುಟ ಸಭೆ ನಡೆಸಲು ತೀರ್ಮಾನಿಸಲಾಗಿದೆ. ಒಳ ಮೀಸಲಾತಿ ಜಾರಿ ಕುರಿತು ದಲಿತ ಗುಂಪುಗಳಲ್ಲಿ ಉಂಟಾಗಿರುವ ತಿಕ್ಕಾಟ ಸರ್ಕಾರಕ್ಕೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಸಂಪುಟ ಸಭೆಯಲ್ಲಿ ದಲಿತ ಸಮುದಾಯದ ಎಡಗೈ, ಬಲಗೈ, ಸ್ಪಶ್ಯ ವರ್ಗಗಳ ಸಚಿವರಿಂದ ಈ ವಿಚಾರವಾಗಿ ಭಿನ್ನ ಅಭಿಪ್ರಾಯ ವ್ಯಕ್ತವಾಗಿದೆ. ರೋಸ್ಟರ್‌ ಬಿಂದು ಮರುನಿಗದಿ ಮಾಡದೆ ಒಳಮೀಸಲು ಜಾರಿ ಮಾಡಿದರೆ ಬಲಗೈಗೆ ಅನ್ಯಾಯ ಎಂದು ಆಕ್ಷೇಪ ಎತ್ತಲಾಗಿದೆ.

 

10:48 PM (IST) Mar 06

ಎಚ್‌ಎನ್ ವ್ಯಾಲಿ, ಕೆಸಿ ವ್ಯಾಲಿ ನೀರಿಗೆ 3ನೇ ಹಂತದ ಶುದ್ಧೀಕರಣ ಬೇಕು - ಸಂಸದ ಡಾ.ಕೆ.ಸುಧಾಕರ್‌

ಕೆಸಿ ವ್ಯಾಲಿಯಿಂದ ಬರುವ ನೀರನ್ನು ಹೆಚ್ಚು ಶುದ್ಧ ಮಾಡಲು 3ನೇ ಹಂತದ ಸಂಸ್ಕರಣೆ ಯೋಜನೆ ಜಾರಿ ಮಾಡದೇ ಇದ್ದಲ್ಲಿ ದೊಡ್ಡಮಟ್ಟದ ಹೋರಾಟ ರೂಪಿಸಬೇಕಾಗುತ್ತದೆ ಎಂದು ಸಂಸದ ಡಾ.ಕೆ.ಸುಧಾಕರ್‌ ಹೇಳಿದರು.

Read Full Story

10:28 PM (IST) Mar 06

ಮಾ.11ರಂದು ವೈದ್ಯರು ಮುಷ್ಕರ ಮಾಡದಿರುವ ವಿಶ್ವಾಸವಿದೆ - ಸಚಿವ ದಿನೇಶ್ ಗುಂಡೂರಾವ್‌

ಮಾ.11ರಿಂದ ಮುಷ್ಕರಕ್ಕೆ ಕರೆ ನೀಡಿದ್ದು, ಮುಷ್ಕರದಿಂದ ಜನರಿಗೆ ಸಮಸ್ಯೆಯಾಗುವ ಹಿನ್ನೆಲೆಯಲ್ಲಿ ವೈದ್ಯರು ಮುಷ್ಕರ ಮಾಡುವುದಿಲ್ಲ ಎಂಬ ವಿಶ್ವಾಸವಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್‌ ಹೇಳಿದ್ದಾರೆ.

Read Full Story

09:50 PM (IST) Mar 06

ಬೆಂಗಳೂರು - ಹೆರಿಗೆಗಾಗಿ ಪತ್ನಿ ಊರಿಗೆ, ಮತ್ತೊಬ್ಬಳ ಜತೆ ಸಂಬಂಧ, ಹೆಂಡತಿ ಮರಳಿದಾಗ ತಿಳಿಯಬಾರದೆಂದು ಕೊಂದೇ ಬಿಟ್ಟ ರಾಯಚೂರಿನ ಸೆಕ್ಯೂರಿಟಿ ಗಾರ್ಡ್!

ದೇವನಹಳ್ಳಿ ರಾಜಕಾಲುವೆಯಲ್ಲಿ ಪತ್ತೆಯಾದ ಸುಟ್ಟ ಮಹಿಳೆಯ ಶವದ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ತನ್ನ ಪತ್ನಿಯಿಂದ ದೂರವಾಗುವ ಭಯದಲ್ಲಿ, ಆರೋಪಿ ಮೌನೀಶ್ ಮೈತ್ರಿ ಎಂಬಾತ ನಿರ್ಮಲಾ ಎಂಬ ಮಹಿಳೆಯನ್ನು ಹತ್ಯೆ ಮಾಡಿ, ಸಾಕ್ಷ್ಯ ನಾಶಪಡಿಸಲು ಶವಕ್ಕೆ ಬೆಂಕಿ ಹಚ್ಚಿದ್ದನು. ಪೊಲೀಸರು ಆರೋಪಿಯನ್ನು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ.
Read Full Story

09:36 PM (IST) Mar 06

ಜೀವನದಲ್ಲಿ ಏನಾದ್ರೂ ಮಾಡ್ಬೇಕು; ರಿಸ್ಕ್‌ ತಗೊಂಡು, ಹೊಸ ಹೆಜ್ಜೆ ಇಟ್ಟ ನಿರೂಪಕ ನಿರಂಜ್‌ ದೇಶಪಾಂಡೆ

Anchor Niranjan Deshapande: ನಿರೂಪಕ ನಿರಂಜನ್‌ ದೇಶಪಾಂಡೆ ಅವರು ಈಗಾಗಲೇ ಬೆಟ್ಟ ಗುಡ್ಡ ರೆಸಾರ್ಟ್‌ ನಡೆಸುತ್ತಿದ್ದಾರೆ. ಈಗ ಇನ್ನೊಂದು ಸಾಹಸಕ್ಕೆ ಕೈ ಹಾಕಿದ್ದಾರೆ. ಹೌದು, ನಿರೂಪಣೆ ಜೊತೆಗೆ ಉದ್ಯಮಿಯಾಗಲು ರೆಡಿ ಆಗಿದ್ದಾರೆ.

 

Read Full Story

09:15 PM (IST) Mar 06

ಯುಪಿಎಸ್‌ಸಿಯಲ್ಲಿ ರಾಜ್ಯ ಗೆದ್ದ PWD ಇಂಜಿನಿಯರ್ ಕಿರಣ್ ಕಮತೆ! ಫಸ್ಟ್ ರ‍್ಯಾಂಕ್ ಪಡೆದ ಉತ್ತರ ಕರ್ನಾಟಕದ ಹಮ್ಮೀರ

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕಿರಣ್ ಕಮತೆ, ಯುಪಿಎಸ್‌ಸಿ ಪರೀಕ್ಷೆಯಲ್ಲಿ 53ನೇ ರ್ಯಾಂಕ್ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಸದ್ಯ PWD ಇಲಾಖೆಯಲ್ಲಿ ಜೂನಿಯರ್ ಇಂಜಿನಿಯರ್ ಆಗಿರುವ ಇವರು, ತಮ್ಮ ಕೊನೆಯ ಪ್ರಯತ್ನದಲ್ಲಿ ಈ ಸಾಧನೆ ಮಾಡಿದ್ದು, ಗ್ರಾಮೀಣ ಯುವಕರಿಗೆ ಸ್ಫೂರ್ತಿಯಾಗಿದ್ದಾರೆ.
Read Full Story

09:13 PM (IST) Mar 06

ಚಿತ್ರದುರ್ಗ - ಬೈಕ್‌ಗೆ ಸಾರಿಗೆ ಬಸ್ ಡಿಕ್ಕಿ - ಜಾತ್ರೆಗೆ ಹೋಗಿ ಬರ್ತಿದ್ದ ಇಬ್ಬರು ತರುಣರು ಸಾವು

ಚಿತ್ರದುರ್ಗ: ಬೈಕ್‌ಗೆ ಸಾರಿಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ನಲ್ಲಿದ್ದ ಇಬ್ಬರು ಹದಿಹರೆಯದ ಹುಡುಗರು ಸಾವನ್ನಪ್ಪಿದ ಆಘಾತಕಾರಿ ಘಟನೆ ನಡೆದಿದೆ. ತಿಪ್ಪೇರುದ್ರಸ್ವಾಮಿಯ ಜಾತ್ರೆಗೆ ಭೇಟಿ ನೀಡಿ ವಾಪಸ್ ಬರುವ ವೇಳೆ ಈ ದುರಂತ ಸಂಭವಿಸಿದೆ.

Read Full Story

09:02 PM (IST) Mar 06

ಬೆಂಗಳೂರಲ್ಲಿ 23ಕಿ.ಮಿ ದೂರದ ಪ್ರಯಾಣಕ್ಕೆ ಮ್ಯಾಪ್ ಹಾಕಿ 47 ಕಿ.ಮಿ ಸುತ್ತಾಡಿದ ಮಹಿಳೆ, ಕಾರಣವೇನು?

ಬೆಂಗಳೂರಲ್ಲಿ 23ಕಿ.ಮಿ ದೂರದ ಪ್ರಯಾಣಕ್ಕೆ ಮ್ಯಾಪ್ ಹಾಕಿ 47 ಕಿ.ಮಿ ಸುತ್ತಾಡಿದ ಮಹಿಳೆ, ಕಾರಣವೇನು? ಈಕೆ ಘಟನೆ ಹೇಳಿದ ಬೆನ್ನಲ್ಲೇ ಮಹಿಳೆ ಆಯ್ಕೆ ಮಾಡಿಕೊಂಡ ಮಾರ್ಗ ಸರಿ ಎಂದು ಹಲವರು ಹೇಳಿದ್ದಾರೆ. ಏನಿದು ಘಟನೆ

 

Read Full Story

09:01 PM (IST) Mar 06

ಮಮಿತಾ ಬಗ್ಗೆ ಮೊದಲಿಗೆ ಅನುಮಾನವಿತ್ತು, ನಂತರ ಶಾಕ್ ಆದೆ - ರಾಧಿಕಾ ಶರತ್‌ಕುಮಾರ್ ಹೇಳಿದ್ದೇನು?

ಸೂರ್ಯ ನಟನೆಯ ಸಿನಿಮಾದಲ್ಲಿ 'ಪ್ರೇಮಲು' ಸಿನಿಮಾ ಮೂಲಕ ಸೌತ್ ಇಂಡಿಯಾದಲ್ಲೇ ಫೇಮಸ್ ಆದ ನಟಿ ಮಮಿತಾ ನಾಯಕಿ ಎಂದಾಗ ರಾಧಿಕಾಗೆ ಅನುಮಾನವಿತ್ತು. ಆದರೆ, ಆಕೆಯ ನಟನೆ ನೋಡಿ ಶಾಕ್ ಆಗಿದ್ದಾಗಿ ಹಿರಿಯ ನಟಿ ಹೇಳಿಕೊಂಡಿದ್ದಾರೆ.

Read Full Story

08:32 PM (IST) Mar 06

ರಾಜಕಾರಣದಲ್ಲಿ ಧರ್ಮ ಇರಬೇಕು, ಧರ್ಮದಲ್ಲಿ ರಾಜಕಾರಣ ಇರಬಾರದು - ಡಿ.ಕೆ.ಶಿವಕುಮಾರ್

ದೇವರು ವರವನ್ನೂ ಕೊಡುವುದಿಲ್ಲ. ಶಾಪವನ್ನೂ ಕೊಡುವುದಿಲ್ಲ. ಅವಕಾಶವನ್ನು ಮಾತ್ರ ಕೊಡುತ್ತಾನೆ. ನಾವು ಎಷ್ಟು ದಿನ ಇರುತ್ತೇವೆ ಅನ್ನುವುದು ಮುಖ್ಯವಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.

Read Full Story

08:30 PM (IST) Mar 06

ಬಂಗಾರ ಮೈಮೇಲಿದ್ರೆ ಜೀವಕ್ಕೆ ಕುತ್ತು - ಚಿನ್ನಕ್ಕಾಗಿ ವೃದ್ಧೆಯ ಕಿವಿಯನ್ನೆ ಕತ್ತರಿಸಿದ ಕಳ್ಳರ ಗ್ಯಾಂಗ್

ಚಿನ್ನದ ಆಭರಣಕ್ಕಾಗಿ ದುಷ್ಕರ್ಮಿಗಳು ಒಂಟಿ ವೃದ್ಧೆಯ ಮೇಲೆ ಹಲ್ಲೆ ಮಾಡಿ ಆಕೆಯ ಚಿನ್ನದ ಬೆಂಡೋಲೆಗಾಗಿ ಕಿವಿಯನ್ನೇ ಕತ್ತರಿಸಿದಂತಹ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಹೂವಳ್ಳಿಯಲ್ಲಿ ನಡೆದಿದೆ. 

Read Full Story

08:24 PM (IST) Mar 06

ಬೆಂಗಳೂರು - ಮನೆಯಲ್ಲಿ ಯಾರೂ ಇಲ್ಲವೆಂದು ಕ್ಯಾಬ್‌ನಲ್ಲಿ ಮಾತಾಡಿ ಕೆಟ್ಟ ಕುಟುಂಬ, ರಾತ್ರಿ ಮನೆ ದೋಚಿದ ಕ್ಯಾಬ್ ಡ್ರೈವರ್!

ರಂಜಾನ್ ಹಬ್ಬದ ಶಾಪಿಂಗ್‌ಗೆ ಮುಂಬೈಗೆ ತೆರಳಿದ್ದ ಕುಟುಂಬವೊಂದು, ತಮ್ಮ ಪ್ರಯಾಣದ ವಿವರಗಳನ್ನು ಕೇಳಿಸಿಕೊಂಡ ಕ್ಯಾಬ್ ಚಾಲಕನಿಂದಲೇ ದರೋಡೆಗೆ ಒಳಗಾಗಿದೆ. ಬೆಂಗಳೂರಿನ ಭುವನೇಶ್ವರಿನಗರದಲ್ಲಿ ನಡೆದ ಈ ಘಟನೆಯಲ್ಲಿ, ಚಾಲಕನು ಮನೆಯ ಬೀಗ ಮುರಿದು ₹25 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಕದ್ದಿದ್ದು, ನಂತರ ಹೆಬ್ಬಾಳ ಪೊಲೀಸರಿಂದ ಬಂಧಿಸಲ್ಪಟ್ಟಿದ್ದಾನೆ.
Read Full Story

08:21 PM (IST) Mar 06

ಹೈಕಮಾಂಡನ್ನು ಪ್ರಶ್ನಿಸುವಷ್ಟು ಎತ್ತರಕ್ಕೆ ಬೆಳೆದಿಲ್ಲ - ಸಚಿವ ಡಾ.ಎಂ.ಸಿ.ಸುಧಾಕರ್‌

ನಾವು ಹೈಕಮಾಂಡನ್ನೇ ಪ್ರಶ್ನಿಸುವಷ್ಟು ದೊಡ್ಡವರಲ್ಲ. ಜ್ಯೋತಿಷ್ಯ ಹೇಳಲು ನನಗೆ ಬರುವುದಿಲ್ಲ. ಒಂದು ಮಾತು ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ ಎಂದು ಸಚಿವ ಡಾ.ಎಂ.ಸಿ.ಸುಧಾಕರ್‌ ತಿಳಿಸಿದರು.

Read Full Story

08:18 PM (IST) Mar 06

ಬಿಗ್ ಬಾಸ್ ರಜತ್ ಮೇಲೆ 3ನೇ ಬಾರಿ ಪೊಲೀಸ್ ಕೇಸ್; ಡಾಗ್ ಸತೀಶ್‌ನನ್ನ ಕೆಣಕಿ ಜೈಲು ಸೇರ್ತಾನಾ ಬುಜ್ಜಿ!

ಬಿಗ್ ಬಾಸ್ ಕನ್ನಡದ ಮಾಜಿ ಸ್ಪರ್ಧಿ ರಜತ್ ಬುಜ್ಜಿ ವಿರುದ್ಧ ಪ್ರಾಣ ಬೆದರಿಕೆ ಆರೋಪದ ಮೇಲೆ ಎಫ್‌ಐಆರ್ ದಾಖಲಾಗಿದೆ. ಸಾಮಾಜಿಕ ಕಾರ್ಯಕರ್ತ ಗಿರೀಶ್ ಕುಮಾರ್ ಎಂಬುವವರಿಗೆ ಫೋನ್ ಕರೆ ಹಾಗೂ ಮೆಸೇಜ್ ಮೂಲಕ ಬೆದರಿಸಿದ್ದಾರೆ ಎಂದು ದೂರು ನೀಡಿದ್ದು, ಕೆ.ಆರ್. ಪುರಂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Read Full Story

08:01 PM (IST) Mar 06

ಬೆಂಗಳೂರು ನಮ್ಮ ಮೆಟ್ರೋ - ಜಯನಗರ-ಆರ್.ವಿ. ರಸ್ತೆ ನಡುವಿನ ಮೆಟ್ರೋ ರೈಲುಗಳ ವೇಗಕ್ಕೆ ಬ್ರೇಕ್ ಹಾಕಿದ ಬಿಎಂಆರ್‌ಸಿಎಲ್!

ಬೆಂಗಳೂರಿನ 'ನಮ್ಮ ಮೆಟ್ರೋ' ಹಸಿರು ಮಾರ್ಗದಲ್ಲಿ, ಆರ್.ವಿ. ರಸ್ತೆ ಮತ್ತು ಜಯನಗರ ನಿಲ್ದಾಣಗಳ ನಡುವೆ ನಿರ್ವಹಣಾ ಕಾಮಗಾರಿಯಿಂದಾಗಿ ರೈಲುಗಳ ವೇಗವನ್ನು ತಾತ್ಕಾಲಿಕವಾಗಿ ಕಡಿಮೆ ಮಾಡಲಾಗಿದೆ. ಈ ಕಾರಣದಿಂದ ಪ್ರಯಾಣಿಕರು ಕೆಲವು ನಿಮಿಷಗಳು ಹೆಚ್ಚುವರಿ ಕಾಯಬೇಕಾಗಬಹುದು.

Read Full Story

07:42 PM (IST) Mar 06

Rakshit Shetty ಫೇಸ್​ಬುಕ್​ ಕವರ್​ ಫೋಟೋ 3 ವರ್ಷದ ಬಳಿಕ ಚೇಂಜ್! ಒಂದು ಚಿತ್ರ, ನೂರೆಂಟು ಅರ್ಥ

ರಶ್ಮಿಕಾ ಮಂದಣ್ಣ ಮದುವೆ ಸುದ್ದಿಯ ನಡುವೆ, ನಟ ರಕ್ಷಿತ್ ಶೆಟ್ಟಿ ಮೂರು ವರ್ಷಗಳ ನಂತರ ತಮ್ಮ ಫೇಸ್‌ಬುಕ್ ಕವರ್ ಫೋಟೋ ಬದಲಿಸಿದ್ದಾರೆ. '777 ಚಾರ್ಲಿ' ಸಿನಿಮಾದ ಫೋಟೋವನ್ನು ಹಂಚಿಕೊಂಡಿದ್ದು, ಇದು ಅವರ ಮುರಿದುಬಿದ್ದ ಮದುವೆಯ ಬಗ್ಗೆ ಪರೋಕ್ಷ ಸಂದೇಶವೇ ಎಂದು ಅಭಿಮಾನಿಗಳು ಚರ್ಚಿಸುತ್ತಿದ್ದಾರೆ.
Read Full Story

07:41 PM (IST) Mar 06

ಸಿದ್ದರಾಮಯ್ಯಗೆ ರಾಜಕೀಯ ಆಪತ್ತು ಬಂದಾಗ ಅಷ್ಟೇ ಅಹಿಂದ ನೆನಪು - ಎಚ್‌.ಡಿ.ಕುಮಾರಸ್ವಾಮಿ

ಸಾಮಾಜಿಕ ನ್ಯಾಯ ಎನ್ನುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಚುನಾವಣೆ ಬಂದಾಗ ಅಥವಾ ರಾಜಕೀಯ ಆಪತ್ತು ಬಂದಾಗ ಅಷ್ಟೇ ಅಹಿಂದ ನೆನಪಾಗುತ್ತದೆ. ಎಂದು ಕೇಂದ್ರ ಕೈಗಾರಿಕಾ ಸಚಿವ ಎಚ್‌.ಡಿ.ಕುಮಾರಸ್ವಾಮಿ ತೀಕ್ಷ್ಣವಾಗಿ ಹೇಳಿದ್ದಾರೆ.

Read Full Story

07:32 PM (IST) Mar 06

ನದಿ ನೀರು ಕೊಡುವ ಭರವಸೆ ನೀಡಿ ಕೊಚ್ಚೆ ನೀರು ಹರಿಸಿದ್ದಾರೆ - ಸಿಎಂ ವಿರುದ್ಧ ದೇವೇಗೌಡ ವಾಗ್ದಾಳಿ

ಹದಿನಾರು ಬಜೆಟ್‌ಗಳನ್ನು ಮಂಡಿಸಿ ಹದಿನೇಳನೇ ಬಜೆಟ್ ಮಂಡಿಸಲು ಹೊರಟಿರುವ ಭೂಪರು ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಬೆಂಗಳೂರಿನ ಕೊಳಚೆ ನೀರು ಹರಿಸಿದರು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದರು.

Read Full Story

07:17 PM (IST) Mar 06

ಪೋಷಕರಿಂದ ಮಗು ನಾಪತ್ತೆ ದೂರು - ಚೆಕ್‌ಪೋಸ್ಟ್ ನಿರ್ಮಿಸಿ ಪೊಲೀಸರ ಶೋಧ - 5 ಗಂಟೆ ಬಳಿಕ ಮನೆಯಲ್ಲೇ ಸಿಕ್ಕಿದ ಮಗು

Dandeli news: ದಾಂಡೇಲಿಯಲ್ಲಿ 4 ವರ್ಷದ ಮಗು ನಾಪತ್ತೆಯಾಗಿದೆ ಎಂದು ಪೋಷಕರು ಮತ್ತು ಪೊಲೀಸರು ಸುಮಾರು 5 ಗಂಟೆಗಳ ಕಾಲ ಹುಡುಕಾಡಿದ್ದಾರೆ. ಇಡೀ ಊರೇ ಆತಂಕದಲ್ಲಿದ್ದಾಗ, ಬಾಲಕ ತನ್ನದೇ ಮನೆಯ ಮೆಟ್ಟಿಲಿನ ಹಿಂಭಾಗದಲ್ಲಿ ನಿದ್ದೆ ಮಾಡುತ್ತಿರುವುದು ಕಂಡುಬಂದಿದ್ದು, ಎಲ್ಲರೂ ನಿಟ್ಟುಸಿರು ಬಿಟ್ಟಿದ್ದಾರೆ.

Read Full Story

07:07 PM (IST) Mar 06

ಹೈಕಮಾಂಡ್‌ ತೀರ್ಮಾನಕ್ಕೆ ಸಿಎಂ, ಡಿಸಿಎಂ ಒಪ್ಪಿದ್ದಾರೆ - ಸಚಿವ ಎಂ.ಬಿ.ಪಾಟೀಲ

ಮುಖ್ಯಮಂತ್ರಿಗಳ ಡಿನ್ನರ್ ಸಭೆ ವಿಚಾರವಾಗಿ ಮುಖ್ಯಮಂತ್ರಿ ಕರೆದರೂ ಹೋಗುತ್ತೇವೆ. ಉಪಮುಖ್ಯಮಂತ್ರಿ ಕರೆದರೂ ಹೋಗುತ್ತೇವೆ ಎಂದು ಸಚಿವ ಎಂ.ಬಿ.ಪಾಟೀಲ ಹೇಳಿದರು. ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಡೂರ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

Read Full Story

06:51 PM (IST) Mar 06

ಯುಪಿಎಸ್‌ಸಿ ಪರೀಕ್ಷೆಯಲ್ಲಿ ಕನ್ನಡಿಗರ ಕೀರ್ತಿ ಪತಾಕೆ, 22 ಜನ ಪಾಸ್, ಬೆಳಗಾವಿಯ ಕಿರಣ್ ರಾಜ್ಯಕ್ಕೆ ಟಾಪ್!

ಲೋಕಸೇವಾ ಆಯೋಗ (UPSC) ಪ್ರಕಟಿಸಿದ ಸಿವಿಲ್ ಸರ್ವಿಸ್ ಪರೀಕ್ಷೆಯ ಫಲಿತಾಂಶದಲ್ಲಿ 20ಕ್ಕೂ ಹೆಚ್ಚು ಕನ್ನಡಿಗರು ಯಶಸ್ಸು ಸಾಧಿಸಿದ್ದಾರೆ. ಬೆಳಗಾವಿಯ ಕಿರಣ್ ಕಾಮಟೆ 53ನೇ ರ್ಯಾಂಕ್ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದರೆ, ಸಂದೀಪ್ ಬಾದಾದ್ 82ನೇ ರ್ಯಾಂಕ್ ಪಡೆದಿದ್ದಾರೆ.
Read Full Story

06:41 PM (IST) Mar 06

ಅಷ್ಟು ಹಣ ಮಾಡಿದ್ದ ವ್ಯಕ್ತಿಗೆ ಕರ್ಮ, ಬಡ್ಡಿಸಮೇತ ಕೊಡ್ತು - ಸಿಡಿದೆದ್ದ ವಿಷ್ಣು, ರವಿಚಂದ್ರನ್‌ ಸಿನಿಮಾ ನಟಿ!

Actress Kasthuri Shankar: ಕರ್ಮ ಎನ್ನೋದನ್ನು ಯಾರನ್ನೂ ಬಿಡೋದಿಲ್ಲ, ಎರಡು ದಿನ ಲೇಟ್‌ ಆಗಬಹುದು ಎಂದು ಕರ್ಮ ಹೇಗೆ ವರ್ಕ್‌ ಆಗುತ್ತದೆ ಎಂದು ಕಸ್ತೂರಿ ಶಂಕರ್‌ ಅವರು ತೆಲುಗು ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

Read Full Story

06:00 PM (IST) Mar 06

ಯುಪಿಎಸ್‌ಸಿ 2025 ಫಲಿತಾಂಶ ಪ್ರಕಟ, ಒಟ್ಟು 958 ಅಭ್ಯರ್ಥಿಗಳು ಆಯ್ಕೆ, ಯಾರು ಟಾಪರ್?

ಕೇಂದ್ರ ಲೋಕಸೇವಾ ಆಯೋಗ (UPSC) 2025ರ ನಾಗರಿಕ ಸೇವೆಗಳ ಪರೀಕ್ಷೆಯ ಅಂತಿಮ ಫಲಿತಾಂಶವನ್ನು ಪ್ರಕಟಿಸಿದೆ. ಈ ಪರೀಕ್ಷೆಯಲ್ಲಿ ಒಟ್ಟು 958 ಅಭ್ಯರ್ಥಿಗಳು IAS, IPS, IFS ಸೇರಿದಂತೆ ವಿವಿಧ ಉನ್ನತ ಹುದ್ದೆಗಳಿಗೆ ಆಯ್ಕೆಯಾಗಿದ್ದು, ಈ ಆಯ್ಕೆಯು ಲಿಖಿತ ಪರೀಕ್ಷೆ ಮತ್ತು ಸಂದರ್ಶನದಲ್ಲಿ ಪಡೆದ ಅಂಕಗಳನ್ನು ಆಧರಿಸಿದೆ.
Read Full Story

04:53 PM (IST) Mar 06

ಆನೇಕಲ್ ಭೂ ವಿವಾದ - ಹೊಲದಲ್ಲೇ ಕುಟುಂಬಗಳ ಕಿತ್ತಾಟ, ಎರಡು ಗುಂಪುಗಳ ಬಡಿದಾಟಕ್ಕೆ ಹಿರಿಯರ ಸಮಾಧಿ ಧ್ವಂಸ!

ಆನೇಕಲ್‌ನ ಮಹಂತ ಲಿಂಗಾಪುರ ಗ್ರಾಮದಲ್ಲಿ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಎರಡು ಕುಟುಂಬಗಳ ನಡುವೆ ಮಾರಾಮಾರಿ ನಡೆದಿದೆ. ಮುತ್ತರಾಯಪ್ಪ ಮತ್ತು ಮುನಿರಾಜು ಕುಟುಂಬಗಳು ಹೊಲದಲ್ಲೇ ಪರಸ್ಪರ ಬಡಿದಾಡಿಕೊಂಡಿದ್ದು, ಘಟನಾ ಸ್ಥಳಕ್ಕೆ ಜಿಗಣಿ ಪೊಲೀಸರು ಭೇಟಿ ನೀಡಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ.
Read Full Story

04:34 PM (IST) Mar 06

ಮುಂದಿನ ಬಜೆಟ್ ಮಂಡಿಸೋರು ಸಿಎಂ ಡಿ.ಕೆ. ಶಿವಕುಮಾರ್! ರಾಜಕೀಯ ಕಿಚ್ಚು ಹತ್ತಿಸಿದ ಕೈ ಮುಖಂಡ ಸಚಿನ್ ಮೀಗಾ ಪೋಸ್ಟ್!

ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್ ಮಂಡಿಸಿದ ಬೆನ್ನಲ್ಲೇ, ಮುಂದಿನ ಬಜೆಟ್ ಅನ್ನು ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಿ ಮಂಡಿಸಲಿದ್ದಾರೆ ಎಂದು ಅವರ ಆಪ್ತ ಸಚಿನ್ ಮೀಗಾ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್, ಕಾಂಗ್ರೆಸ್ ಪಕ್ಷದೊಳಗಿನ ಅಧಿಕಾರ ಹಂಚಿಕೆ ಒಪ್ಪಂದದ ಚರ್ಚೆಯನ್ನು ಮತ್ತೆ ಮುನ್ನೆಲೆಗೆ ತಂದಿದ್ದಾರೆ.

Read Full Story

04:25 PM (IST) Mar 06

ನಟಿ ಭವ್ಯಾ ಗೌಡಗೆ ರಕ್ತದ ಭಾವಚಿತ್ರ ಉಡುಗೊರೆ - Karna Serial ನಿಧಿ ಭಾವುಕ- ಅಬ್ಬಾ! ಇದೆಂಥ ಅಭಿಮಾನ

'ಕರ್ಣ' ಸೀರಿಯಲ್ ಖ್ಯಾತಿಯ ನಟಿ ಭವ್ಯಾ ಗೌಡ ಅವರ ಹುಟ್ಟುಹಬ್ಬಕ್ಕೆ ಅಭಿಮಾನಿಯೊಬ್ಬರು ರಕ್ತದಲ್ಲಿ ಭಾವಚಿತ್ರ ಬಿಡಿಸಿ ಉಡುಗೊರೆ ನೀಡಿದ್ದಾರೆ. ಈ ವಿಚಿತ್ರ ಪ್ರೀತಿಗೆ ಭಾವುಕರಾದ ನಟಿಯ ವೃತ್ತಿಜೀವನ ಹಾಗೂ ಅವರ ಐದು ವರ್ಷಗಳ ರಹಸ್ಯ ಕ್ರಶ್ ಬಗ್ಗೆ ಈ ಲೇಖನ ಬೆಳಕು ಚೆಲ್ಲುತ್ತದೆ.
Read Full Story

04:16 PM (IST) Mar 06

ಇದಪ್ಪಾ ಸಾಧನೆ ಅಂದ್ರೆ; ಡುಪ್ಲೆಕ್ಸ್‌ ಮನೆಗೆ ಕಾಲಿಟ್ಟ Bigg Boss ಸ್ಪರ್ಧಿ ತುಕಾಲಿ ಸ್ಟಾರ್‌ ಸಂತು!

ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ಶೋನಲ್ಲಿ ಭಾಗವಹಿಸಿದ್ದ ತುಕಾಲಿ ಸ್ಟಾರ್‌ ಸಂತು ಅವರೀಗ ಹೊಸ ಮನೆಗೆ ಕಾಲಿಟ್ಟ ಖುಷಿಯಲ್ಲಿದ್ದಾರೆ. ಈ ಶೋನಲ್ಲಿ ಭಾಗವಹಿಸಿದ್ದ ಬಳಿಕ ಅವರಿಗೆ ವರ್ತೂರು ಸಂತೋಷ್‌ ಅವರು ಬಂಗಾರದ ಸರ, ಜೋಡೆತ್ತು ಪೆಂಡೆಂಟ್‌ ಕೊಡಿಸಿದ್ದರು. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ. 

 

Read Full Story

04:02 PM (IST) Mar 06

16ರೊಳಗಿನ ಮಕ್ಕಳಿಗೆ ಜಾಲತಾಣ ನಿಷೇಧ - 18ವರ್ಷದೊಳಗಿನವರಿಗೆ ಸಿಗರೇಟ್ ಮಾರಾಟ ಬ್ಯಾನ್ ಎಷ್ಟು ಪರಿಣಾಮಕಾರಿಯಾಗಿದೆ - ಡಾ.ಪಿ.ವಿ.ಭಂಡಾರಿ

ರಾಜ್ಯ ಸರ್ಕಾರವು 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ನಿಷೇಧಿಸುವ ಕುರಿತು ರೂಪಿಸುತ್ತಿರುವ ಡಿಜಿಟಲ್ ನೀತಿಯನ್ನು ಮನೋವೈದ್ಯ ಡಾ. ಪಿ.ವಿ. ಭಂಡಾರಿ ಸ್ವಾಗತಿಸಿದ್ದಾರೆ. ಮಕ್ಕಳಲ್ಲಿ ಹೆಚ್ಚುತ್ತಿರುವ ಮೊಬೈಲ್ ಬಳಕೆಯು ಗಂಭೀರ ಮಾನಸಿಕ ಸಮಸ್ಯೆಗಳಿಗೆ ಕಾರಣವಾಗುತ್ತಿದ್ದು, ಈ ಕ್ರಮ ಸಮಯೋಚಿತವಾಗಿದೆ ಎಂದು ಅವರು ಹೇಳಿದ್ದಾರೆ.

Read Full Story

04:01 PM (IST) Mar 06

Toxic ಚಿತ್ರದ ಕಾರಿನ ಶೂಟಿಂಗ್​ ನಡೆದದ್ದು ಹೇಗೆ? ಅಂದು ಏನಾಯ್ತು? ಮೇಕಿಂಗ್​ ವಿಡಿಯೋ ವೈರಲ್​

ಯಶ್ ನಟನೆಯ 'ಟಾಕ್ಸಿಕ್' ಚಿತ್ರದ ಮೇಕಿಂಗ್ ವಿಡಿಯೋ ವೈರಲ್ ಆಗಿದ್ದು, ಇದರಲ್ಲಿ ವಿವಾದಿತ ಕಾರಿನ ದೃಶ್ಯದ ಚಿತ್ರೀಕರಣವನ್ನು ಬಹಿರಂಗಪಡಿಸಲಾಗಿದೆ. ಮಧ್ಯಪ್ರಾಚ್ಯದ ಯುದ್ಧದ ಕಾರಣ ಚಿತ್ರದ ಬಿಡುಗಡೆ ಮುಂದೂಡಲಾಗಿದ್ದು, ಯಶ್ ಅವರ ಸಂಭಾವ್ಯ ದ್ವಿಪಾತ್ರ ಮತ್ತು ಚಿತ್ರದ ನಾಯಕಿಯರ ಬಗ್ಗೆಯೂ ಮಾಹಿತಿ ನೀಡಲಾಗಿದೆ.
Read Full Story

03:55 PM (IST) Mar 06

ಬೆಂಗಳೂರಲ್ಲಿ ವಾಕಿಂಗ್ ಹೋದ ಮಹಿಳೆ 25 ಅಡಿ ಗುಂಡಿಗೆ ಬಿದ್ದು ಪರದಾಟ; ಮೊಬೈಲ್ ಟ್ರ್ಯಾಕ್ ಲೊಕೇಶನ್ ಮೂಲಕ ರಕ್ಷಣೆ!

ಬೆಂಗಳೂರಿನ ನಾಗರಭಾವಿಯಲ್ಲಿ 56 ವರ್ಷದ ಮಹಿಳೆಯೊಬ್ಬರು 25 ಅಡಿ ಆಳದ ಗುಂಡಿಗೆ ಬಿದ್ದು ಅಪಾಯಕ್ಕೆ ಸಿಲುಕಿದ್ದರು. ಮಗ ನೀಡಿದ ದೂರಿನ ಮೇರೆಗೆ ಮೊಬೈಲ್ ಲೊಕೇಶನ್ ಟ್ರ್ಯಾಕ್ ಮಾಡಿದ ಚಂದ್ರಾ ಲೇಔಟ್ ಪೊಲೀಸರು, ಸಾರ್ವಜನಿಕರ ನೆರವಿನಿಂದ ಮಹಿಳೆಯನ್ನು ರಕ್ಷಿಸಿ ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ.
Read Full Story

03:28 PM (IST) Mar 06

ಬೆಂಗಳೂರು ಟ್ರಾಫಿಕ್ ನಿಯಮದಲ್ಲಿ ಭಾರಿ ಬದಲಾವಣೆ, ಅಮೆರಿಕ ರೀತಿ ಬಲಬದಿ ಚಾಲನೆ ಪ್ಲಾನ್

ಬೆಂಗಳೂರು ಟ್ರಾಫಿಕ್ ನಿಯಮದಲ್ಲಿ ಭಾರಿ ಬದಲಾವಣೆ, ಅಮೆರಿಕ ರೀತಿ ಬಲಬದಿ ಚಾಲನೆ ಪ್ಲಾನ್, ಬೆಂಗಳೂರು ರಸ್ತೆಯಲ್ಲಿ ಇನ್ನು ಸವಾರಿ ಮಾಡುವಾಗ ರಸ್ತೆಯ ಬಲಬದಿಯಲ್ಲಿ ಸಾಗಬೇಕೋ, ಎಡಬದಿಯಲ್ಲಿರಬೇಕು ಅನ್ನೋ ಕುರಿತು ತಿಳಿದುಕೊಳ್ಳಿ.

 

Read Full Story

03:15 PM (IST) Mar 06

ಚಿಕ್ಕಮಗಳೂರು ಖಾಸಗಿ ಕಾಫಿ ಕ್ಯೂರಿಂಗ್ ಎಡವಟ್ಟು; ಸುಡುವ ಬೂದಿ ತುಳಿದು ರೈತರ ಕಾಲುಗಳು ಭಸ್ಮ!

ಚಿಕ್ಕಮಗಳೂರಿನ ವಿದ್ಯಾ ಕಾಫಿ ಕ್ಯೂರಿಂಗ್ ಘಟಕವು ಬೇಜವಾಬ್ದಾರಿಯಿಂದ ಜಮೀನಿಗೆ ಸುರಿದ ಕೆಮಿಕಲ್ ಮಿಶ್ರಿತ ಬಿಸಿ ಬೂದಿಯ ಮೇಲೆ ಕಾಲಿಟ್ಟ ದೇವರಾಜ್ ಮತ್ತು ಈರೇಗೌಡ ಎಂಬ ಇಬ್ಬರು ರೈತರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕಾಲುಗಳು ಸಂಪೂರ್ಣ ಸುಟ್ಟುಹೋಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

Read Full Story

01:52 PM (IST) Mar 06

ರಾಜ್ಯದಲ್ಲೂ ಮಕ್ಕಳಿಗೆ ಸೋಷಿಯಲ್​ ಮೀಡಿಯಾ ಬ್ಯಾನ್​! ಆಂಧ್ರದ ಸ್ಥಿತಿ ಸದ್ಯ ಹೇಗಿದೆ? ತಜ್ಞರು ಹೇಳುವುದೇನು?

16 ವರ್ಷದೊಳಗಿನ ಮಕ್ಕಳಿಗೆ ಸೋಷಿಯಲ್ ಮೀಡಿಯಾ ನಿಷೇಧಿಸುವ ಮಹತ್ವದ ನಿರ್ಧಾರವನ್ನು ಕರ್ನಾಟಕ ಸರ್ಕಾರ ಪ್ರಸ್ತಾಪಿಸಿದೆ. ಮಕ್ಕಳ ಮಾನಸಿಕ ಮತ್ತು ದೈಹಿಕ ಆರೋಗ್ಯದ ಕಾಳಜಿಯಿಂದ ಈ ಕ್ರಮ ಕೈಗೊಳ್ಳಲಾಗಿದ್ದು, ಇದರ ಜಾರಿಯಲ್ಲಿನ ಸವಾಲುಗಳು ಮತ್ತು ತಜ್ಞರ ಅಭಿಪ್ರಾಯಗಳನ್ನು ಈ ಲೇಖನ ಚರ್ಚಿಸುತ್ತದೆ.
Read Full Story

01:40 PM (IST) Mar 06

Amruthadhaare Serial - ಬೆಂಗಳೂರಿನ 28000 ಕೋಟಿ ಉದ್ಯಮಿ‌ ನಿಖಿಲ್‌ ಕಾಮತ್ ಹಾದಿ ಹಿಡಿದ ಗೌತಮ್

Amruthadhaare Serial Episode: ಸ್ಟಾಕ್‌ ಮಾರ್ಕೆಟ್‌ನಲ್ಲಿ ದೊಡ್ಡ ಯಶಸ್ಸು ಪಡೆದು, ಇಂದು 28000 ಸಾವಿರ ಕೋಟಿ ರೂಪಾಯಿ ಒಡೆಯ ಎನಿಸಿಕೊಂಡಿರೋ ನಿಖಿಲ್‌ ಕಾಮತ್‌, ನಿತಿನ್‌ ಕಾಮತ್‌ ಅವರು ಮೂಲತಃ ಶಿವಮೊಗ್ಗದವರು. ಈಗ ಅಮೃತಧಾರೆ ಧಾರಾವಾಹಿಯ ಗೌತಮ್‌ ದಿವಾನ್‌ ಕೂಡ ಇದೇ ದಾರಿ ಹಿಡಿದಿದ್ದಾನೆ.

 

Read Full Story

01:00 PM (IST) Mar 06

Karnataka Budget 2026 - ರಾಜ್ಯಕ್ಕೆ 'ಸಾಲ'ದ ಭಾಗ್ಯ, ಅಭಿವೃದ್ಧಿಗೆ ಎಳ್ಳುನೀರು, ಇದೊಂದು ರೈತ ವಿರೋಧಿ ಬಜೆಟ್ -ಬೊಮ್ಮಾಯಿ ಕಿಡಿ

ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಸಿದ್ದರಾಮಯ್ಯನವರ ಬಜೆಟನ್ನು ಅಭಿವೃದ್ಧಿ ಶೂನ್ಯ ಮತ್ತು ಪ್ರಗತಿ ರಹಿತ ಎಂದು ಟೀಕಿಸಿದ್ದಾರೆ. ಈ ಬಜೆಟ್ ರಾಜ್ಯವನ್ನು ಸಾಲದ ಸುಳಿಗೆ ತಳ್ಳಿದ್ದು, ನೀರಾವರಿ ಯೋಜನೆಗಳನ್ನು ಕಡೆಗಣಿಸಿದೆ  ಒಳಮೀಸಲಾತಿ ವಿಚಾರದಲ್ಲಿ ದಲಿತ ಸಮುದಾಯಕ್ಕೆ ಅನ್ಯಾಯ ಎಂದು ಆರೋಪಿಸಿದರು.

Read Full Story

11:38 AM (IST) Mar 06

ಶಾರ್ಟ್ ಸರ್ಕ್ಯೂಟ್‌ನಿಂದ ಕುರಿ ಶೆಡ್‌ಗೆ ಬೆಂಕಿ - 700ಕ್ಕೂ ಹೆಚ್ಚು ಕುರಿಗಳು ಸಜೀವ ದಹನ

ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಮುಕ್ಕುಂದ ಗ್ರಾಮದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಕುರಿ ಶೆಡ್‌ಗೆ ಬೆಂಕಿ ಹೊತ್ತಿಕೊಂಡಿದೆ. ಈ ದುರಂತದಲ್ಲಿ ಮಧುಸೂದನ್ ರೆಡ್ಡಿ ಎಂಬುವರಿಗೆ ಸೇರಿದ 700ಕ್ಕೂ ಹೆಚ್ಚು ಕುರಿಗಳು ಸಜೀವ ದಹನವಾಗಿವೆ.

Read Full Story

10:37 AM (IST) Mar 06

Karnataka Budget 2026-27 - ಹಿಂದಿನ ಬಜೆಟ್‌ನಿಂದ ನಿರಾಸೆ, ಈ ಬಾರಿ ಹಾವೇರಿ ಜನರ ಬೇಡಿಕೆ ಈಡೇರುತ್ತಾ?

ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಲಿರುವ ರಾಜ್ಯ ಬಜೆಟ್‌ನತ್ತ ಹಾವೇರಿ ಜಿಲ್ಲೆಯು ದೊಡ್ಡ ನಿರೀಕ್ಷೆ ಇಟ್ಟುಕೊಂಡಿದೆ. ಹಿಂದಿನ ಬಜೆಟ್‌ ನಿರಾಸೆ ಅನುಭವಿಸಿದ್ದ ಜಿಲ್ಲೆಯು, ಈ ಬಾರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಪ್ರತ್ಯೇಕ ಡಿಸಿಸಿ ಬ್ಯಾಂಕ್, ಕೈಗಾರಿಕೆಗಳ ನೀರಾವರಿ ಯೋಜನೆ ಪ್ರಮುಖ ಬೇಡಿಕೆಗಳ ಈಡೇರುತ್ತಾ?

Read Full Story

10:20 AM (IST) Mar 06

ಕೈ ನಾಯಕರಿಂದ ಡಿನ್ನರ್ ಪಾಲಿಟಿಕ್ಸ್ - ಡಿಕೆಶಿ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಭರ್ಜರಿ ಔತಣಕೂಟ?

ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಶಾಸಕರಿಗೆ ಔತಣಕೂಟ ಆಯೋಜಿಸಿದ ಬೆನ್ನಲ್ಲೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಬಜೆಟ್ ಕಾರ್ಯಾಗಾರದ ನೆಪದಲ್ಲಿ ಡಿನ್ನರ್ ಪಾರ್ಟಿ ನೀಡಲು ಮುಂದಾಗಿದ್ದಾರೆ. ಡಿಕೆಶಿ ಪಾರ್ಟಿಗೂ  ಮುನ್ನವೇ ನಡೆಯಲಿರುವ ಈ ಔತಣಕೂಟವು ರಾಜ್ಯ ರಾಜಕಾರಣದಲ್ಲಿ ಕುತೂಹಲ ಮೂಡಿಸಿದೆ..

Read Full Story

10:17 AM (IST) Mar 06

ಬುಡಾಪೆಸ್ಟ್ ಮ್ಯೂಸಿಕ್‌ನಿಂದ ಪ್ರೈವೇಟ್ ಜೆಟ್‌ವರೆಗೆ..ಕನ್ನಡ ಚಿತ್ರರಂಗದ 8 ಶೋಕಿಗಳು!

ಸ್ಯಾಂಡಲ್‌ವುಡ್‌ನಲ್ಲಿ ಹೆಚ್ಚುತ್ತಿರುವ ದುಬಾರಿ ಶೋಕಿಗಳಾದ ವಿದೇಶಿ ಸಂಗೀತ ಸಂಯೋಜನೆ, ಪ್ರೀಮಿಯರ್ ಶೋ ಬಿಲ್ಡಪ್, ಪ್ಯಾನ್-ಇಂಡಿಯಾ ಆಸೆಗಳು ನಿರ್ಮಾಪಕರನ್ನು ಸಂಕಷ್ಟಕ್ಕೆ ದೂಡುತ್ತಿವೆ. ಕಥೆ ಹಾಗೂ ಚಿತ್ರಕಥೆಗೆ ಆದ್ಯತೆ ನೀಡದೆ ಮಾಡುವ ಇಂತಹ ಪ್ರಚಾರ ತಂತ್ರಗಳು ಬಗ್ಗೆ ಇಲ್ಲಿ ಚರ್ಚಿಸಲಾಗಿದೆ.

Read Full Story

10:01 AM (IST) Mar 06

Phone Tapping - ಎಚ್ಡಿಕೆ/ಬಿಜೆಪಿ ಬಳಿ ಫೋನ್‌ ಟ್ಯಾಪ್‌ ಬಗ್ಗೆ ದಾಖಲೆ ಇದ್ರೆ ಕೊಡಲಿ, ಸುಮ್ಮನೆ ಆರೋಪ ಬೇಡ - ಗೃಹಸಚಿವ

ಶಾಸಕರ ಫೋನ್‌ ಟ್ಯಾಪ್‌ ಮಾಡಲಾಗುತ್ತಿದೆ ಎಂಬ ಎಚ್‌.ಡಿ.ಕುಮಾರಸ್ವಾಮಿ ಮತ್ತು ಬಿಜೆಪಿ ಆರೋಪವನ್ನು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಳ್ಳಿಹಾಕಿದ್ದಾರೆ. ಸರ್ಕಾರ ಯಾರ ಫೋನ್‌ಗಳನ್ನೂ ಟ್ಯಾಪ್ ಮಾಡುತ್ತಿಲ್ಲ, ದಾಖಲೆ ಇದ್ದರೆ ನೀಡಲಿ ಎಂದು ಅವರು ಸವಾಲು ಹಾಕಿದ್ದಾರೆ

Read Full Story

08:53 AM (IST) Mar 06

World Dentist s Day 2026 - ನಿಮ್ಮ ಆರೋಗ್ಯಕ್ಕೆ ದಂತಪಂಕ್ತಿಗಳೇ ಭೂಷಣ!

ಮಾರ್ಚ್ 6 ರಂದು ಆಚರಿಸಲಾಗುವ ವಿಶ್ವ ದಂತ ವೈದ್ಯರ ದಿನದ ಮಹತ್ವವನ್ನು ಈ ಲೇಖನವು ವಿವರಿಸುತ್ತದೆ. ದಂತ ಚಿಕಿತ್ಸೆಯ ಬಗೆಗಿನ ಭಯವನ್ನು ಹೋಗಲಾಡಿಸಿ, ಆಧುನಿಕ ನೋವುರಹಿತ ಚಿಕಿತ್ಸೆಗಳು ಮತ್ತು ಸೌಂದರ್ಯವರ್ಧಕ ದಂತ ವೈದ್ಯಕೀಯದ ಬಗ್ಗೆ ತಿಳಿಸುತ್ತದೆ. .

Read Full Story

More Trending News