ಬೆಂಗಳೂರು: ದುಬೈನಿಂದ ಅಕ್ರಮವಾಗಿ ಚಿನ್ನ ಸಾಗಣೆ ಮಾಡಿ ಏರ್ಪೋರ್ಟ್ನಲ್ಲಿ ಸಿಕ್ಕಿಬಿದ್ದ ನಟಿ ರನ್ಯಾ ರಾವ್ಗೆ ಸಚಿವ ಜಿ. ಪರಮೇಶ್ವರ್ ತಮ್ಮ ಚಾರಿಟೇಬಲ್ ಟ್ರಸ್ಟ್ ನಿಂದ 25 ಲಕ್ಷರು. ಮತ್ತು 15 ಲಕ್ಷರು. ಒಟ್ಟು 40ಲಕ್ಷ ರೂ ಪ್ರತ್ಯೇಕವಾಗಿ ನೀಡಲಾಗಿದೆ ಎಂದು ಸಚಿವ ಡಾ.ಜಿ. ಪರಮೇಶ್ವರ್ ಅವರೇ ಸ್ವತಃ ತಿಳಿಸಿದ್ದಾರೆ. ಹೀಗೆಂದು ಉಪ ಮುಖ್ಯಮಂತ್ರಿ ಡಿ. ಕೆ.ಶಿವಕುಮಾರ್ ಗುರುವಾರ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಇದರಿಂದ ರನ್ಯಾ ರಾವ್ ಪ್ರಕರಣಕ್ಕೂ ಪರಮೇಶ್ವರ್ ಅವರ ಶಿಕ್ಷಣ ಸಂಸ್ಥೆಗಳ ಮೇಲಿನ ಜಾರಿ ನಿರ್ದೇಶನಾಲಯ (ಇ.ಡಿ) ದಾಳಿಗೂ ಸಂಬಂಧವಿದೆ ಎಂಬ ಶಂಕೆ ಮೂಡುವಂತಾಗಿದೆ

08:59 PM (IST) May 23
ಪರಿಷ್ಕೃತ ಬಂಡವಾಳ ಚೌಕಟ್ಟು ಮತ್ತು ಹೆಚ್ಚಿದ ಅಪಾಯದ ಬಫರ್ ಹಂಚಿಕೆಯ ನಂತರ, RBI, FY25 ಕ್ಕೆ ಸರ್ಕಾರಕ್ಕೆ ದಾಖಲೆಯ 2.69 ಲಕ್ಷ ಕೋಟಿ ರೂ. ಲಾಭಾಂಶವನ್ನು ವರ್ಗಾಯಿಸಲಿದೆ, ಇದು FY24 ಕ್ಕಿಂತ ಶೇಕಡಾ 27.4 ರಷ್ಟು ಹೆಚ್ಚಾಗಿದೆ.
06:46 PM (IST) May 23
05:54 PM (IST) May 23
05:22 PM (IST) May 23
04:47 PM (IST) May 23
02:49 PM (IST) May 23
ಬೆಂಗಳೂರಿನಲ್ಲಿ 9 ತಿಂಗಳ ಮಗುವಿಗೆ ಕೋವಿಡ್-19 ಸೋಂಕು ತಗುಲಿದ್ದು, ವೈದ್ಯಲೋಕದಲ್ಲಿ ಆತಂಕ ಮೂಡಿಸಿದೆ. ಮಗುವಿನ ಪೋಷಕರಿಗೆ ಯಾವುದೇ ಲಕ್ಷಣಗಳಿಲ್ಲದ ಕಾರಣ, ಅಕ್ಕಪಕ್ಕದ ಮನೆಯವರಿಂದ ಸೋಂಕು ಹರಡಿರಬಹುದು ಎಂದು ಶಂಕಿಸಲಾಗಿದೆ. ಮಕ್ಕಳಲ್ಲಿ ಕೋವಿಡ್ ಅಪರೂಪವಾದರೂ, ಈ ಘಟನೆ ಎಚ್ಚರಿಕೆಯ ಗಂಟೆಯಾಗಿದೆ.
ಪೂರ್ತಿ ಓದಿ02:04 PM (IST) May 23
ನನ್ನ ಕಂಪನಿಯಲ್ಲಿರುವ ಕನ್ನಡ ಭಾಷಿಕರಲ್ಲದ ಉದ್ಯೋಗಿಗಳು ನಾಳೆ ಕನ್ನಡ ಆತಂಕಕ್ಕೆ ತುತ್ತಾಗಬಾರದು. ಹೀಗಾಗಿ ಬೆಂಗಳೂರಿನ ಕಂಪನಿಯನ್ನು ಪುಣೆಗೆ ಸ್ಥಳಾಂತರಿಸಲು ನಿರ್ಧರಿಸಿದ್ದೇನೆ ಎಂದು ಟೆಕ್ ಸಂಸ್ಥಾಪಕ ಘೋಷಿಸಿದ್ದಾರೆ. ಇದಕ್ಕೆ ಹಲವರು ಪ್ರತಿಕ್ರಿಯಿಸಿದ್ದಾರೆ.
ಪೂರ್ತಿ ಓದಿ01:42 PM (IST) May 23
ಬೆಂಗಳೂರಿನಲ್ಲಿ ಭಾರೀ ಮಳೆಯಿಂದಾದ ಪ್ರವಾಹದ ಹಿನ್ನೆಲೆಯಲ್ಲಿ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಲೋಕಾಯುಕ್ತಕ್ಕೆ ದೂರು ದಾಖಲಾಗಿದೆ. ಲೋಕಾಯುಕ್ತರು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಬಿಬಿಎಂಪಿ ಅಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಿ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಪೂರ್ತಿ ಓದಿ01:16 PM (IST) May 23
ದೇಶದ್ರೋಹಿ ಎಂದೇ ಬಿಂಬಿತವಾಗಿರುವ ಜ್ಯೋತಿ ಮಲ್ಹೋತ್ರಾ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಜೊತೆ ಇರುವ ಫೋಟೋ ವೈರಲ್ ಆಗುತ್ತಿದ್ದು, ನೆಟ್ಟಿಗರ ಬಾಯಿಗೆ ಆಹಾರವಾಗಿದೆ. ಏನಿದರ ಅಸಲಿಯತ್ತು?
ಪೂರ್ತಿ ಓದಿ01:10 PM (IST) May 23
ಅಗ್ನಿಶಾಮಕ ದಳದಲ್ಲಿ ಫೈರ್ ಫೈಟರ್ ಆಗಿ ಗುರುತಿಸಿಕೊಂಡಿದ್ದ ನಾಯಿ ಇದೀಗ ಸೇವೆಯಿಂದ ನಿವೃತ್ತಿಯಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಭಾವುಕರಾಗಿದ್ದಾರೆ. ಬೀಳ್ಕೋಡುಗೆ ನೀಡುವ ವೇಳೆ ಫೈರ್ ಫೈಟರ್ ನಾಯಿ ಸಿಬ್ಬಂದಿಗಳ ಬಿಗಿದಪ್ಪಿದ ಕ್ಷಣ ಎಲ್ಲರ ಕಣ್ಣಾಲಿ ತೇವಗೊಳಿಸಿತ್ತು.
ಪೂರ್ತಿ ಓದಿ01:06 PM (IST) May 23
ಐಪಿಎಲ್ ಪ್ಲೇ ಆಫ್ಗೂ ಮುನ್ನ ಆರ್ಸಿಬಿ ತಂಡಕ್ಕೆ ನ್ಯೂಜಿಲೆಂಡ್ನ ಸ್ಪೋಟಕ ಬ್ಯಾಟರ್ ಟಿಮ್ ಸೀಫರ್ಟ್ ಎಂಟ್ರಿ ನೀಡಿದ್ದಾರೆ. ಜೆಕೊಬ್ ಬೆಥೆಲ್ ನ್ಯಾಷನಲ್ ಡ್ಯೂಟಿಗಾಗಿ ಇಂಗ್ಲೆಂಡ್ ತಂಡ ಸೇರಿಕೊಳ್ಳಲಿದ್ದರಿಂದ ಸೀಫರ್ಟ್ ಅವರ ಬದಲಿ ಆಟಗಾರರಾಗಿ ಆರ್ಸಿಬಿಗೆ ಆಗಮಿಸಿದ್ದಾರೆ.
ಪೂರ್ತಿ ಓದಿ12:20 PM (IST) May 23
ಬಾಂಗ್ಲಾದೇಶದಲ್ಲಿ ರಾಜಕೀಯ ಕೋಲಾಹಲ ಸೃಷ್ಟಿಯಾಗಿದೆ. ಪ್ರದಾನಿ ಶೇಕ್ ಹಸೀನಾ ಪದಚ್ಯುತ ಗೊಳಿಸಿ ಅಧಿಕಾರದ ಗದ್ದುಗೆ ಏರಿದ ಹಂಗಾಮಿ ಸರ್ಕಾರದ ಮುಖ್ಯಸ್ಥ ಮೊಹಮ್ಮದ್ ಯೂನಸ್ ಇದೀಗ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಯೂನಸ್ ಶೀಘ್ರದಲ್ಲೇ ತಮ್ಮ ಸ್ಥಾನದಿಂದ ಕೆಳಗಿಳಿಯುವ ಸಾಧ್ಯತೆ ಇದೆ.
ಪೂರ್ತಿ ಓದಿ12:08 PM (IST) May 23
ಇನ್ನೇನು ತಾಳಿ ಕಟ್ಟಬೇಕು ಅನ್ನುವಷ್ಟರಲ್ಲಿ ವಧು ಮದುವೆ ಬೇಡ ಎಂದು ಘಟನೆ ಹಾಸನದಲ್ಲಿ ನಡೆದಿದೆ. ಕೊನೆಯ ಕ್ಷಣದಲ್ಲಿ ಮದುವೆ ಮುರಿದು ಬಿದ್ದಿದೆ. ವಧು ಫೋಷಕರು ಕಣ್ಣೀರಿಟ್ಟರೆ, ಇತ್ತ ವರನ ಕಣ್ಣಾಲಿ ತೇವಗೊಂಡಿದೆ.
11:47 AM (IST) May 23
ನೇಪಾಳದಲ್ಲಿ 4.3 ತೀವ್ರತೆಯ ಭೂಕಂಪ ಸಂಭವಿಸಿದ್ದು, ಟಿಬೆಟ್ನಲ್ಲಿ 4.2 ತೀವ್ರತೆಯ ಭೂಕಂಪ ಸಂಭವಿಸಿದೆ. ಇಂಡೋನೇಷ್ಯಾದಲ್ಲೂ 5.9 ತೀವ್ರತೆಯ ಭೂಕಂಪನ ದಾಖಲಾಗಿದೆ.
ಪೂರ್ತಿ ಓದಿ11:47 AM (IST) May 23
ಕರ್ನಾಟಕದ ಆಲಮಟ್ಟಿ ಅಣೆಕಟ್ಟು ಮಹಾರಾಷ್ಟ್ರದ ಕೊಲ್ಹಾಪುರ-ಸಾಂಗ್ಲಿ ಪ್ರದೇಶದಲ್ಲಿ ಪ್ರವಾಹಕ್ಕೆ ಕಾರಣವಾಗುತ್ತಿದೆ ಎಂದು ಸ್ಥಳೀಯ ಕಾರ್ಯಕರ್ತರು ದೂರಿದ್ದಾರೆ.
11:41 AM (IST) May 23
ವಕ್ಫ್ ತಿದ್ದುಪಡಿ ಕಾಯ್ದೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಧ್ಯಂತರ ಆದೇಶವನ್ನು ಕಾಯ್ದಿರಿಸಿದೆ.
ಪೂರ್ತಿ ಓದಿ10:58 AM (IST) May 23
ಟರ್ಬುಲೆನ್ಸ್ನಿಂದ ಪ್ರಯಾಣಿಕರು ಚೀರಾಡುತ್ತಿದ್ದಾರೆ, ವಿಮಾನ ನಿಯಂತ್ರಣ ಕಳೆದುಕೊಳ್ಳುತ್ತಿದೆ. ಎಲ್ಲಾ ಪ್ರಯತ್ನಗಳು ವಿಫಲವಾಗುತ್ತಿದೆ. ಕೊನೆಗೆ ಪ್ರಯಾಣಿಕರ ಜೀವ ಉಳಿಸಲು ಇಂಡಿಗೋ ವಿಮಾನ ಪೈಲೆಟ್ ಪಾಕಿಸ್ತಾನಕ್ಕೆ ಒಂದು ಮನವಿ ಮಾಡಿದ್ದರು. ಆದರೆ ಪಾಕಿಸ್ತಾನ ಈ ಮನವಿ ತಿರಸ್ಕರಿಸಿತ್ತು ಅನ್ನೋ ಮಾಹಿತಿ ಬಯಲಾಗಿದೆ.
ಪೂರ್ತಿ ಓದಿ10:50 AM (IST) May 23
ಅಮೆರಿಕದ ಟ್ರಂಪ್ ಆಡಳಿತ ಹಾರ್ವರ್ಡ್ ವಿಶ್ವವಿದ್ಯಾಲಯಕ್ಕೆ ವಿದೇಶಿ ವಿದ್ಯಾರ್ಥಿಗಳ ಪ್ರವೇಶವನ್ನು ನಿಷೇಧಿಸಿದೆ. ಈ ಕ್ರಮದಿಂದಾಗಿ ಸಾವಿರಾರು ವಿದೇಶಿ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದ್ದು, ಹಾರ್ವರ್ಡ್ ನ್ಯಾಯಾಲಯದ ಮೊರೆ ಹೋಗಿದೆ.
ಪೂರ್ತಿ ಓದಿ10:04 AM (IST) May 23
ಪಡಿತರ ಚೀಟಿ ದತ್ತಾಂಶವನ್ನು ಜನನ ಮತ್ತು ಮರಣ ನೋಂದಣಿ ತಂತ್ರಾಂಶದೊಂದಿಗೆ ಸಂಯೋಜಿಸುವುದು, ಎಲ್ಲ ಇಲಾಖೆಗಳಲ್ಲಿ ಖಾಲಿ ಇರುವ 15000 ಹುದ್ದೆಗಳನ್ನು ಆದ್ಯತೆ ಮೇರೆಗೆ ಭರ್ತಿ ಮಾಡುವುದು ಸೇರಿ 189 ಹೊಸ ಶಿಫಾರಸುಗಳನ್ನು ಸರ್ಕಾರಕ್ಕೆ ರಾಜ್ಯ ಆಡಳಿತ ಸುಧಾರಣಾ ಆಯೋಗ ಸಲ್ಲಿಸಿದೆ.
09:31 AM (IST) May 23
ಸದನದಿಂದ ಅಮಾನತುಗೊಂಡಿರುವ ಬಿಜೆಪಿಯ ಹದಿನೆಂಟು ಮಂದಿ ಶಾಸಕರ ಕುರಿತು ತೀರ್ಮಾನ ಮಾಡಲು ಮೇ.25ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ವಿಧಾನಸಭೆ ಸಭಾಧ್ಯಕ್ಷರಾದ ಯು.ಟಿ. ಖಾದರ್ ನೇತೃತ್ವದಲ್ಲಿ ಸಭೆ ನಡೆಯಲಿದೆ ಎಂದು ಸಚಿವ ಎಚ್.ಕೆ. ಪಾಟೀಲ್ ತಿಳಿಸಿದ್ದಾರೆ.
ಪೂರ್ತಿ ಓದಿ09:19 AM (IST) May 23
ಜನರಿಗೆ ಸಮಸ್ಯೆ ಬಂದಾಗ ನಾವೆಲ್ಲ ಭಾರತೀಯರು ಎಂಬಂತೆ ಕೆಲಸ ಮಾಡಬೇಕು. ಅದನ್ನೇ ನಾವು ಮಾಡಿದ್ದೇವೆ. ನೆರೆ ರಾಜ್ಯದೊಂದಗಿನ ಸಂಬಂಧ ಉತ್ತಮಗೊಳಿಸಲು ಇದೊಂದು ಹೆಜ್ಜೆಯಾಗಿದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ.
09:00 AM (IST) May 23
ಐಪಿಎಲ್ನಲ್ಲಿ ಲಖನೌ ಸೂಪರ್ ಜೈಂಟ್ಸ್ನ ಮಿಚೆಲ್ ಮಾರ್ಷ್ ಗುಜರಾತ್ ಟೈಟಾನ್ಸ್ ವಿರುದ್ಧ ಶತಕ ಸಿಡಿಸಿದರು. ಇದು ಈ ಐಪಿಎಲ್ನ ಏಳನೇ ಶತಕವಾಗಿದ್ದು, ವಿದೇಶಿ ಆಟಗಾರನಿಂದ ಬಂದ ಮೊದಲ ಶತಕವಾಗಿದೆ. ಮಾರ್ಷ್ ಅವರ ಶತಕದ ನೆರವಿನಿಂದ ಲಖನೌ 33 ರನ್ಗಳ ಜಯ ಸಾಧಿಸಿತು.
ಪೂರ್ತಿ ಓದಿ08:41 AM (IST) May 23
ಬೆಂಗಳೂರು ನಗರದಲ್ಲಿ ತ್ಯಾಜ್ಯ ಸಂಗ್ರಹ ಮತ್ತು ವಿಲೇವಾರಿ ಸಂಬಂಧ 7 ವರ್ಷಕ್ಕೆ 4,791.95 ಕೋಟಿ ರು. ವೆಚ್ಚದ ಟೆಂಡರ್ ಪ್ರಕ್ರಿಯೆ ನಡೆಸಲು ಸಚಿವ ಸಂಪುಟ ಸಭೆ ತೀರ್ಮಾನ ಮಾಡಲಾಗಿದೆ.
ಪೂರ್ತಿ ಓದಿ08:11 AM (IST) May 23
ಕ್ಯಾನ್ಸರ್ ರೋಗಿಗಳ ಅನುಕೂಲಕ್ಕಾಗಿ ಗುಣಮಟ್ಟದ ಕೀಮೋಥೆರಪಿ ಚಿಕಿತ್ಸೆ ಒದಗಿಸುವ ಉದ್ದೇಶದಿಂದ ರಾಜ್ಯದ 16 ಜಿಲ್ಲಾಸ್ಪತ್ರೆಗಳಲ್ಲಿ ಶುಕ್ರವಾರದಿಂದ ಡೇ ಕೇರ್ ಕೀಮೋಥೆರಪಿ ಕೇಂದ್ರಗಳನ್ನು ರಾಜ್ಯ ಸರ್ಕಾರವು ಆರಂಭಿಸಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
08:00 AM (IST) May 23
ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ನಾಯಿಗೆ ಹೋಲಿಸಿರುವ ವಿಚಾರದಲ್ಲಿ ವಿವಾದ ಭುಗಿಲೆದ್ದ ಬೆನ್ನಲ್ಲೆ ಸಚಿವ ಪ್ರಿಯಾಂಕ್ ಬೆಂಬಲಿಗರ ಆಕ್ರೋಶ.
ಪೂರ್ತಿ ಓದಿ07:31 AM (IST) May 23
ಮೆಟ್ರೋ ಟಿಕೆಟ್ ದರವನ್ನು ಶೇ.70ರಷ್ಟು ಏರಿಸಿ ಪ್ರಯಾಣಿಕರ ಆಕ್ರೋಶಕ್ಕೆ ಗುರಿಯಾಗಿದ್ದ ಬೆಂಗಳೂರು ಮೆಟ್ರೋ ರೈಲು ನಿಗಮ ಈಗ ತನ್ನ ವ್ಯಾಪ್ತಿಯ 12 ಶೌಚಾಲಯ ಬಳಕೆಗೆ ಶುಲ್ಕ ನಿಗದಿಸಿದೆ. ಬಿಎಂಆರ್ಸಿಎಲ್ ಈ ನಡೆಯೂ ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ಪೂರ್ತಿ ಓದಿ