Published : Apr 22, 2026, 06:40 AM ISTUpdated : Apr 22, 2026, 10:37 PM IST

Karnataka News Live: ಪತ್ನಿ ಕೊಲೆಗೈದು ಪತಿ ಆ*ತ್ಮಹ*ತ್ಯೆ; ಕೌಟುಂಬಿಕ ಕಲಹಕ್ಕೆ ಬಲಿಯಾಯ್ತಾ ದಂಪತಿ ಜೀವನ?

ಸಾರಾಂಶ

ಬೆಂಗಳೂರು: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟಗರು. ಅವರು ಮೊದಲು ಹೇಗಿದ್ದರೋ ಈಗಲೂ ಹಾಗೆಯೇ ಇದ್ದಾರೆ. ಟಗರು ಎಂದಿಗೂ ಟಗರೇ. ಅವರು ಸೈಲೆಂಟ್‌ ಆಗಿರಬಹುದು, ಅವರು ಮಾತನಾಡಿದರೆ ಬೇರೆ ರೀತಿಯೇ ಸೌಂಡ್ ಆಗುತ್ತದೆ’ ಎಂದು ವಸತಿ ಸಚಿವ ಜಮೀರ್‌ ಅಹ್ಮದ್‌ ಖಾನ್‌ ಹೇಳಿದ್ದಾರೆ.

‘ಸಿದ್ದರಾಮಯ್ಯ ಅವರಿಗೆ ಎಲ್ಲರೂ ಆಪ್ತರೇ. ಅವರು ನಮ್ಮ ಮುಖ್ಯಮಂತ್ರಿಗಳು, ಅವರು ಈಗ ಸೈಲೆಂಟ್ ಆಗಿರಬಹುದು. ಆದರೆ ಅವರು ಮಾತನಾಡಿದರೆ ಬೇರೆ ರೀತಿಯೇ ಸೌಂಡ್‌ ಬರುತ್ತದೆ. ಸದ್ಯ ಅವರು ಮಾತನಾಡುವ ಅಗತ್ಯವಿಲ್ಲ’ ಎಂದು ಹೇಳಿದರು.

ಪಕ್ಷದಲ್ಲಿ ಮುಸ್ಲಿಮರಿಗೆ ಯಾವುದೇ ತಾರತಮ್ಯ ಆಗಿಲ್ಲ. ಒಬ್ಬರು ನನ್ನ ಪರ ಮಾತನಾಡುತ್ತಾರೆ. ಇನ್ನೊಬ್ಬರು ಮತ್ತೊಬ್ಬರ ಪರ ಮಾತನಾಡುತ್ತಾರೆ. ಅದನ್ನೆಲ್ಲ ಪರಿಗಣಿಸಬೇಕಾಗಿಲ್ಲ ಎಂದು ಸಚಿವ ಜಮೀರ್‌ ಅಹ್ಮದ್‌ ಖಾನ್‌ ಹೇಳಿದರು.

10:37 PM (IST) Apr 22

ಪತ್ನಿ ಕೊಲೆಗೈದು ಪತಿ ಆ*ತ್ಮಹ*ತ್ಯೆ; ಕೌಟುಂಬಿಕ ಕಲಹಕ್ಕೆ ಬಲಿಯಾಯ್ತಾ ದಂಪತಿ ಜೀವನ?

ಬೆಂಗಳೂರಿನಲ್ಲಿ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ, ಪತಿ ಡೇವಿಡ್ ಪತ್ನಿ ಸುಮಿತ್ರಾಳನ್ನು ಕೊಲೆ ಮಾಡಿ ನಂತರ ತಾನೂ ಆ*ತ್ಮಹ*ತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ದಂಪತಿಗಳ ನಡುವೆ ನಿರಂತರ ಜಗಳ ನಡೆಯುತ್ತಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.

Read Full Story

09:51 PM (IST) Apr 22

ಪುತ್ತೂರು ಬಿಜೆಪಿ ಮುಖಂಡನ ಪುತ್ರನಿಂದ ಯುವತಿಗೆ ಮಗು ಪ್ರಕರಣ, ಆರೋಪಿ ತಂದೆ ಮಗುವಿನ ಆರೈಕೆ ಮಾಡೋದು ಕರ್ತವ್ಯ - ಹೈಕೋರ್ಟ್

ಪುತ್ತೂರಿನ ಬಿಜೆಪಿ ಮುಖಂಡರ ಪುತ್ರ ಕೃಷ್ಣ ಜೆ. ರಾವ್, ಯುವತಿಯೊಬ್ಬಳಿಗೆ ಮದುವೆ ಆಮಿಷವೊಡ್ಡಿ, ದೈಹಿಕ ಸಂಬಂಧ ಬೆಳೆಸಿ ವಂಚಿಸಿದ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿದೆ. ಏಳು ವರ್ಷಗಳ ಸಂಬಂಧದ ಬಳಿಕ ಮಗುವಿಗೆ ಜನ್ಮ ನೀಡಿದ ಯುವತಿಯನ್ನು ಮದುವೆಯಾಗಲು ನಿರಾಕರಿಸಿದ ಆರೋಪ ಎದುರಿಸುತ್ತಿದ್ದು, ಡಿಎನ್‌ಎ ಪರೀಕ್ಷೆಯಲ್ಲಿ ಮಗುವಿನ ತಂದೆ ತಾನೇ ಎಂದು ಸಾಬೀತಾಗಿದೆ.
Read Full Story

09:22 PM (IST) Apr 22

ಕೆರೆಗಳಿಗೆ ನೀರು ತುಂಬಿಸುವ ಕೀರ್ತಿ ಶಾಸಕ ಗಣೇಶ್‌ ಪ್ರಸಾದ್‌ಗೆ ಸಲ್ಲಲಿ - ಸಿಎಂ ಸಿದ್ದರಾಮಯ್ಯ

ಗುಂಡ್ಲುಪೇಟೆ ತಾಲೂಕಿನ 110 ಕೆರೆ ಕಟ್ಟೆಗಳಿಗೆ ನೀರು ತುಂಬಿಸುವ ಯೋಜನೆಯ ಕೀರ್ತಿ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಗೆ ಸಲ್ಲಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮೆಚ್ಚುಗೆ ವ್ಯಕ್ತಪಡಿಸಿದರು.

Read Full Story

08:55 PM (IST) Apr 22

ಬೆಂಗಳೂರು - ಪಾರಿವಾಳಕ್ಕಾಗಿ ಜಗಳ, 25 ವರ್ಷದ ಯುವಕನನ್ನು ಚಾಕು ಇರಿದು ಬರ್ಬರ ಹತ್ಯೆ!

ಬೆಂಗಳೂರಿನ ರಾಜಗೋಪಾಲನಗರದಲ್ಲಿ ಪಾರಿವಾಳ ಕಳ್ಳತನದ ಆರೋಪದ ಮೇಲೆ ನಡೆದ ಗಲಾಟೆಯು 25 ವರ್ಷದ ಮಲ್ಲಿಕಾರ್ಜುನ ಎಂಬ ಯುವಕನ ಕೊಲೆಯಲ್ಲಿ ಅಂತ್ಯವಾಗಿದೆ. ಚಾಕು ಇರಿತದಿಂದ ಗಂಭೀರವಾಗಿ ಗಾಯಗೊಂಡಿದ್ದ ಆತ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
Read Full Story

08:21 PM (IST) Apr 22

ನಾಳೆ SSLC ಫಲಿತಾಂಶ - ರಿಸಲ್ಟ್ ನೋಡಲು ಇದೇ 4 ಸುಲಭ ಮಾರ್ಗ; ಇಲ್ಲಿವೆ ಡೈರೆಕ್ಟ್ ಲಿಂಕ್ಸ್‌

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯು 2026ರ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಫಲಿತಾಂಶವನ್ನು ಏಪ್ರಿಲ್ 23ರಂದು ಪ್ರಕಟಿಸಲಿದೆ. ವಿದ್ಯಾರ್ಥಿಗಳು ವೆಬ್‌ಸೈಟ್, ಮೊಬೈಲ್ ಆಪ್, SMS/WhatsApp ಮೂಲಕ ಫಲಿತಾಂಶ ವೀಕ್ಷಿಸಬಹುದು.

Read Full Story

07:32 PM (IST) Apr 22

Breaking - ವಿದ್ಯಾರ್ಥಿಗಳೇ ಗಮನಿಸಿ, ನಾಳೆ SSLC ಪರೀಕ್ಷೆ ಫಲಿತಾಂಶ ಪ್ರಕಟ

ಹಿಂದಿ ಭಾಷೆಯ ಅಂಕಗಳ ವಿಚಾರದಲ್ಲಿ ಹೈಕೋರ್ಟ್‌ನಲ್ಲಿ ವಿಚಾರಣೆ ಬಾಕಿ ಇದ್ದ ಕಾರಣ ತಡೆಹಿಡಿಯಲಾಗಿದ್ದ SSLC ಪರೀಕ್ಷೆಯ ಫಲಿತಾಂಶವನ್ನು ನಾಳೆ ಪ್ರಕಟಿಸಲಾಗುವುದು. ಹೈಕೋರ್ಟ್ ತೀರ್ಪಿನ ನಂತರ, ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಗುರುವಾರ ಮಧ್ಯಾಹ್ನ 12 ಗಂಟೆಗೆ ಫಲಿತಾಂಶ ಪ್ರಕಟಿಸುವುದಾಗಿ ತಿಳಿಸಿದ್ದಾರೆ.
Read Full Story

07:07 PM (IST) Apr 22

ಬೇಸಿಗೆ ರಜೆ ನಾಲ್ಕೇ ದಿನಗಳಲ್ಲಿ 4 ಚಿಣ್ಣರ ಸಾವು; ಮಕ್ಕಳಿಗೆ ಒಂದು ಕ್ಷಣದ ಮೋಜು, ಪೋಷಕರಿಗೆ ಜೀವನವಿಡೀ ಶೋಕ!

ಚಿಕ್ಕಮಗಳೂರಿನಲ್ಲಿ ಬೇಸಿಗೆ ರಜೆಯ ಸಂಭ್ರಮದ ನಡುವೆ ಶೋಕದ ಛಾಯೆ ಆವರಿಸಿದೆ. ಕೇವಲ ನಾಲ್ಕು ದಿನಗಳ ಅಂತರದಲ್ಲಿ, ಜಿಲ್ಲೆಯ ವಿವಿಧ ಜಲಮೂಲಗಳಲ್ಲಿ ಈಜಲು ಹೋಗಿ ಬಾಲಕ ಸೇರಿದಂತೆ ನಾಲ್ವರು ಪ್ರಾಣ ಕಳೆದುಕೊಂಡಿದ್ದಾರೆ. ಈ ಸರಣಿ ದುರಂತಗಳು ಪೋಷಕರಿಗೆ ಮತ್ತು ಸಾರ್ವಜನಿಕರಿಗೆ ಎಚ್ಚರಿಕೆಯ ಗಂಟೆಯಾಗಿದೆ.
Read Full Story

06:40 PM (IST) Apr 22

ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವಿಳಂಬಕ್ಕೆ ಗುತ್ತಿಗೆದಾರರೇ ಕಾರಣ - ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಆರೋಪ

ಅಧಿಕಾರಿಗಳ ಸಮರ್ಥ ನಿರ್ವಹಣೆ ಮಾಡುವಲ್ಲಿ ವಿಫಲರಾಗಿರುವುದರಿಂದ ಶಿರಸಿ-ಹುಬ್ಬಳ್ಳಿ ಮತ್ತು ಹಾವೇರಿ-ಶಿರಸಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಲ್ಲಿ ವಿಳಂಬವಾಗಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಆರೋಪ ಮಾಡಿದರು.

Read Full Story

06:30 PM (IST) Apr 22

ಕಾಂಗ್ರೆಸ್‌ಗೆ ತಟ್ಟಲಿದೆ ಮಹಿಳೆಯರ ಶಾಪ - ಶಾಸಕ ಸಿ.ಸಿ.ಪಾಟೀಲ ವಿವಾದಾತ್ಮಕ ಹೇಳಿಕೆ!

ಮಹಿಳಾ ಮೀಸಲಾತಿ ವಿಧೇಯಕವನ್ನು ಸೋಲಿಸಿರುವ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳ ವಿರುದ್ಧ ದೇಶದ ಮಹಿಳೆಯರು ತೀವ್ರ ಆಕ್ರೋಶ ಹೊಂದಿದ್ದು, ಅವರಿಗೆ ಮಹಿಳೆಯರ ಶಾಪ ತಟ್ಟಲಿದೆ ಎಂದು ಶಾಸಕ ಸಿ.ಸಿ.ಪಾಟೀಲ ತಿಳಿಸಿದರು.

Read Full Story

06:16 PM (IST) Apr 22

ಬಸವ ವಸತಿ ಯೋಜನೆಯ ಹಣ ಮಂಜೂರು ಮಾಡಲು ಲಂಚಕ್ಕೆ ಬೇಡಿಕೆ - ಗ್ರಾ.ಪಂ. ಕಂಪ್ಯೂಟರ್ ಆಪರೇಟರ್ ಲೋಕಾಬಲೆಗೆ

ಕಲಬುರಗಿಯ ಯಡ್ರಾಮಿ ತಾಲೂಕಿನಲ್ಲಿ ಬಸವ ವಸತಿ ಯೋಜನೆಯ ಸಹಾಯಧನ ಮಂಜೂರು ಮಾಡಲು ₹20,000 ಲಂಚಕ್ಕೆ ಬೇಡಿಕೆಯಿಟ್ಟಿದ್ದ ಗ್ರಾಮ ಪಂಚಾಯತಿ ಕಂಪ್ಯೂಟರ್ ಆಪರೇಟರ್‌ನನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಫಲಾನುಭವಿಯೊಬ್ಬರ ದೂರಿನ ಮೇರೆಗೆ ಈ ದಾಳಿ ನಡೆದಿದೆ. 

Read Full Story

06:15 PM (IST) Apr 22

ಕಾವೇರಿ ನದಿಯಲ್ಲಿ ಅಪರಿಚಿತ ಶವ ಪತ್ತೆ - ಹಲವು ಅನುಮಾನಗಳಿಗೆ ಕಾರಣ? ತನಿಖೆ ಶುರು!

ಸುಮಾರು ಒಂದು ತಿಂಗಳ ಹಿಂದೆ ಸಾವನ್ನಪ್ಪಿರುವ 50 ರಿಂದ 70 ವರ್ಷದ ಅಪರಿಚಿತ ಪುರುಷನ ಶವವು ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಬೂದುಗಟ್ಟೆ ದೊಡ್ಡಿಯ ಕಾವೇರಿ ನದಿಯ ಬಳಿ ಪತ್ತೆಯಾಗಿದೆ.

Read Full Story

06:11 PM (IST) Apr 22

ಒಟಿಟಿ ದೈತ್ಯರಾದ ನೆಟ್‌ಫ್ಲಿಕ್ಸ್-ಅಮೆಜಾನ್ ಪ್ರೈಮ್ ನಡುವೆ 'ಟಾಕ್ಸಿಕ್‌'ಗೆ ಯುದ್ಧ; ಯಾರ ಪಾಲಾಗಲಿದೆ ಯಶ್ ಸಿನಿಮಾ?

ಯಶ್ ಕೇವಲ ಭಾರತೀಯ ಪ್ರೇಕ್ಷಕರನ್ನು ಮಾತ್ರವಲ್ಲದೆ, ಇಡೀ ವಿಶ್ವದ ಸಿನಿಮಾ ಮಾರುಕಟ್ಟೆಯನ್ನು ಗುರಿಯಾಗಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಲಾಸ್ ವೇಗಾಸ್‌ನಲ್ಲಿ ನಡೆದ ಪ್ರತಿಷ್ಠಿತ 'ಸಿನಿಮಾಕಾನ್ 2026' ಕಾರ್ಯಕ್ರಮದಲ್ಲಿ ಯಶ್ ಮಿಂಚಿದ್ದು, ಅಲ್ಲಿ 'ಟಾಕ್ಸಿಕ್' ಬಗ್ಗೆ ದೊಡ್ಡ ಮಟ್ಟದ ಮಾತುಕತೆ ನಡೆಸಿದ್ದಾರೆ.

Read Full Story

05:45 PM (IST) Apr 22

ಬೆಂಗಳೂರಿನ HAL ಏರ್‌ಪೋರ್ಟ್‌ ಇನ್ಮುಂದೆ 'ಜಾಗತಿಕ ಏರೋಸ್ಪೇಸ್ ಹಬ್' - 700 ಎಕರೆ ಪ್ರದೇಶದಲ್ಲಿ ತಲೆಯೆತ್ತಲಿದೆ ಬೃಹತ್ ಏರೋಸ್ಪೇಸ್ ಸಿಟಿ!

ಕರ್ನಾಟಕ ಸರ್ಕಾರವು ಬೆಂಗಳೂರಿನ ಹಳೆಯ ಹೆಚ್‌ಎಎಲ್ ವಿಮಾನ ನಿಲ್ದಾಣವನ್ನು 'ಜಾಗತಿಕ ಏರೋಸ್ಪೇಸ್ ಹಬ್' ಆಗಿ ಪರಿವರ್ತಿಸಲು ಬೃಹತ್ ಯೋಜನೆ ರೂಪಿಸಿದೆ. 'ಹೆಚ್‌ಎಎಲ್ ಏರೋಸ್ಪೇಸ್ ನವೋದಯ ಮಾಸ್ಟರ್‌ಪ್ಲಾನ್' ಹೆಸರಿನ ಯೋಜನೆ ಇದಾಗಿದೆ.

Read Full Story

05:43 PM (IST) Apr 22

ಕಾರವಾರ - ಉಳ್ಳಾಲಕ್ಕೆ ಹಿಂಸಾತ್ಮಕವಾಗಿ ಒಂಟೆಗಳ ಸಾಗಿಸುತ್ತಿದ್ದ ಮೂವರ ಬಂಧನ - 8 ಒಂಟೆಗಳ ರಕ್ಷಣೆ

ಭಟ್ಕಳದಲ್ಲಿ ಅಕ್ರಮವಾಗಿ ಒಂಟೆಗಳನ್ನು ಸಾಗಿಸುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಹಿಂಸಾತ್ಮಕವಾಗಿ ಲಾರಿಯಲ್ಲಿ ಸಾಗಿಸುತ್ತಿದ್ದ 8 ಒಂಟೆಗಳನ್ನು ರಕ್ಷಿಸಲಾಗಿದ್ದು, ಆರೋಪಿಗಳ ವಿರುದ್ಧ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
Read Full Story

05:41 PM (IST) Apr 22

ಹಳೆ ಹುಡುಗಿ ವಿಷಯ ಎತ್ಬೇಡಿ; ಹೊಸ ಹುಡುಗಿ ಬಗ್ಗೆ ಹೇಳ್ತೀನಿ - ಬೃಂದಾವನ ಧಾರಾವಾಹಿ ನಟ ವರುಣ್‌ ಆರಾಧ್ಯ

ಬೃಂದಾವನ ಧಾರಾವಾಹಿ ನಟ, ಕನ್ನಡ ಯುಟ್ಯೂಬರ್‌ ವರುಣ್‌ ಆರಾಧ್ಯ ಅವರು ಹೊಸ ಹುಡುಗಿಯ ಜೊತೆ ಎಂಗೇಜ್‌ ಆಗಿದ್ದಾರೆ. ಈ ಹಿಂದೆ ಅವರು ಓರ್ವ ಯುಟ್ಯೂಬರ್‌ನ್ನು ಲವ್‌ ಮಾಡಿದ್ದು, ಬ್ರೇಕಪ್‌ ಮಾಡಿಕೊಂಡಿದ್ದಾರೆ. ಅನೇಕರು ಈ ಬಗ್ಗೆ ನೆಗೆಟಿವ್‌ ಮಾತನಾಡಿದ್ದು, ವರುಣ್‌ ಅವರು ಬೇಸರ ಹೊರಹಾಕಿದ್ದಾರೆ.

 

Read Full Story

05:29 PM (IST) Apr 22

ಇಡಿ ದಾಳಿ ಮೂಲಕ ಕಾಂಗ್ರೆಸ್‌ ಟಾರ್ಗೆಟ್‌, ಬಿಜೆಪಿಯವರ ಮೇಲೆ ದಾಳಿ ಆಗುತ್ತಿಲ್ಲ - ಸಿಎಂ ಸಿದ್ದರಾಮಯ್ಯ ಆರೋಪ

ಚಾಮರಾಜನಗರಕ್ಕೆ ಭೇಟಿ ನೀಡಿದ ಸಿಎಂ ಸಿದ್ದರಾಮಯ್ಯ, ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ, ಇ.ಡಿ ದಾಳಿ ಮತ್ತು ಮಹಿಳಾ ಮೀಸಲಾತಿ ಬಗ್ಗೆ ಕೇಂದ್ರವನ್ನು ಟೀಕಿಸಿದರು. ಇದೇ ವೇಳೆ, ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಆಕ್ಸಿಜನ್ ದುರಂತದ ಸಂತ್ರಸ್ತ ಕುಟುಂಬಗಳಿಗೆ ಉದ್ಯೋಗ ಪತ್ರಗಳನ್ನು ವಿತರಿಸಿದರು.
Read Full Story

05:21 PM (IST) Apr 22

ಜೆರಾಕ್ಸ್ ಮಿಷನ್ ಮನುಷ್ಯನನ್ನು ಡುಪ್ಲಿಕೇಟ್ ಮಾಡಿದ್ರೆ ಏನಾಗುತ್ತೆ? ಒಟಿಟಿಗೆ ಬಂದ Xerox Kannada Series

ಡಾಲಿ ಧನಂಜಯ್ ನಿರ್ಮಾಣದ, ನಾಗಭೂಷಣ್ ನಟನೆಯ 'ಜೆರಾಕ್ಸ್' ವೆಬ್ ಸರಣಿ Zee5 ನಲ್ಲಿ ಬಿಡುಗಡೆಯಾಗುತ್ತಿದೆ. ಜೆರಾಕ್ಸ್ ಯಂತ್ರವು ಮನುಷ್ಯರನ್ನು ನಕಲು ಮಾಡಿದರೆ ಏನಾಗುತ್ತದೆ ಎಂಬ ವಿಶಿಷ್ಟ ಕಥಾಹಂದರವನ್ನು ಹೊಂದಿರುವ ಈ ಸರಣಿಯು ಸೈಫೈ ಮತ್ತು ಡಾರ್ಕ್ ಕಾಮಿಡಿ ಅಂಶಗಳನ್ನು ಒಳಗೊಂಡಿದೆ.
Read Full Story

05:04 PM (IST) Apr 22

High-Fiber Diet - ಜೀರ್ಣಕ್ರಿಯೆ ಸುಧಾರಿಸಲು ದಿನಕ್ಕೆ ಎಷ್ಟು ಫೈಬರ್ ಬೇಕು? ಇಲ್ಲಿದೆ ನೋಡಿ ಕಾರಣ

ಫೈಬರ್ ಹೆಚ್ಚಾಗಿರುವ ಆಹಾರ ತಿಂದರೆ ಜೀರ್ಣಕ್ರಿಯೆ ಸುಲಭವಾಗುತ್ತೆ ಮತ್ತು ಕರುಳಿನ ಆರೋಗ್ಯ ಚೆನ್ನಾಗಿರುತ್ತೆ. ಫೈಬರ್ ಇರುವ ಆಹಾರ ಸೇವಿಸಿದ ಮೇಲೆ ಹೊಟ್ಟೆ ತುಂಬಿದ ಹಾಗೆ ಅನಿಸುತ್ತೆ. ಇದರಿಂದ ಪದೇ ಪದೇ ಹಸಿವಾಗುವುದು ಕಡಿಮೆಯಾಗುತ್ತದೆ.

Read Full Story

04:42 PM (IST) Apr 22

ಹಾರ್ದಿಕ ಹೇಳಲು ಬರ್ತಿರಲಿಲ್ಲ, 'ದಿ' ಬದ್ಲು 'ತಿ' ಹೇಳಿ ಆದ ಅವಮಾನ ಅಷ್ಟಿಷ್ಟಲ್ಲ - Anchor Anushreeಯ ಆ ದಿನಗಳು

ಖ್ಯಾತ ನಿರೂಪಕಿ ಅನುಶ್ರೀ ತಮ್ಮ 20 ವರ್ಷಗಳ ವೃತ್ತಿ ಜೀವನದ ಆರಂಭದ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ದಕ್ಷಿಣ ಕನ್ನಡದವರಾದ ಕಾರಣ ಸರಿಯಾಗಿ ಕನ್ನಡ ಮಾತನಾಡಲು ಬಾರದೆ, 'ಹಾರ್ದಿಕ' ಪದ ಉಚ್ಚರಿಸಲಾಗದೆ ಅವಮಾನ ಅನುಭವಿಸಿ, ಆರ್ಥಿಕ ಸಂಕಷ್ಟದಲ್ಲಿದ್ದ ದಿನಗಳನ್ನು ಮೆಲುಕು ಹಾಕಿದ್ದಾರೆ.

Read Full Story

04:40 PM (IST) Apr 22

ಗೋಲ್ಡನ್‌ ಸ್ಟಾರ್‌ ಗಣೇಶ್‌ ಸಿನಿ ಪಯಣಕ್ಕೆ 20 ವರ್ಷ - ಅಭಿಮಾನಿಗಳಿಗೆ ಎಮೋಶನಲ್ ಸಂದೇಶ

ತನ್ನ ಎಕ್ಸ್‌ ಖಾತೆಯಲ್ಲಿ ಖುಷಿ ಹಂಚಿಕೊಂಡಿರುವ ಗೋಲ್ಡನ್‌ ಸ್ಟಾರ್‌ ಗಣೇಶ್‌, ನನ್ನ ಬದುಕಿನಲ್ಲಿ ಇದು ಮಹತ್ವದ ಮೈಲಿಗಲ್ಲು. ಮೊದಲ ಸಿನಿಮಾ ‘ಚೆಲ್ಲಾಟ’ದಿಂದ ಕನಸುಗಳಿಗೆ ರೆಕ್ಕೆ ಮೂಡಿತು.

Read Full Story

04:23 PM (IST) Apr 22

ಎದುರಿಗೆ ಇರೋ ವ್ಯಕ್ತಿ ಜೊತೆ ಎಲ್ಲಾನೂ ಕಳೆದುಕೊಳ್ಳೋಕೆ ರೆಡಿ ಇದ್ರೆ ಮ್ಯಾರೇಜ್ ಒಳ್ಳೇದು - ರಾಜ್ ಬಿ ಶೆಟ್ಟಿ!

ಬ್ರೇಕಪ್‌ ಆದ್ಮೇಲೆ ನನಗೆ ಗೊತ್ತಾಯ್ತು, ನನಗೆ ಪ್ರೀತಿನ ಕೊಡೋಕೆ ಬರ್ಲಿಲ್ಲ ಅಂತ.. ಬ್ರೇಕಪ್ ಆದ್ಮೇಲೆ ನಾನು ಪ್ರೀತಿ ವಿಷ್ಯದಲ್ಲಿ ಸಾಕಷ್ಟು ಬೆಳೆದೆ.. ಕಾರಣ, ಅವ್ಳು ತೋರಿಸಿದ್ಳು, ನಾನು ಪ್ರೀತಿ ಮಾಡೋದಕ್ಕೆ ಯೋಗ್ಯ ವ್ಯಕ್ತಿ ಅಲ್ಲ ಅಂತ.. ಸೋ, ನಾನು ಅವ್ಳಿಗೆ ಈಗ್ಲೂ ತುಂಬಾ ಗೌರವ ಕೊಡ್ತೀನಿ..

Read Full Story

04:22 PM (IST) Apr 22

ಬೆಂಗಳೂರು ಸುಡುತ್ತಿರುವುದು ಏಕೆ? ಈ ಬಿಸಿಲ ಧಗೆಯಿಂದ ಪಾರಾಗಲು ಏನು ಮಾಡಬೇಕು?

ಬೆಂಗಳೂರಿನಲ್ಲಿ ಬೇಸಿಗೆಯ ಬಿಸಿ ತಾರಕಕ್ಕೇರಿದೆ. ಕಳೆದ ಕೆಲವು ದಿನಗಳಿಂದ ನಗರದ ನಿವಾಸಿಗಳು ಬಿಸಿಲ ಧಗೆಯಿಂದ ತತ್ತರಿಸುತ್ತಿದ್ದಾರೆ. ಇಲ್ಲಿನವರು ಈ ಹಠಾತ್ ತಾಪಮಾನ ಏರಿಕೆಯಿಂದ ಕಿರಿಕಿರಿ ಅನುಭವಿಸುತ್ತಿದ್ದಾರೆ.

Read Full Story

04:21 PM (IST) Apr 22

ಬರೋಬ್ಬರಿ ಒಂದು ವರ್ಷ ಜೈಲುವಾಸ ಬಳಿಕ ನಟಿ ರನ್ಯಾ ರಾವ್ ಬಿಡುಗಡೆ, ಚಿನ್ನ ಸ್ಮಗ್ಲಿಂಗ್ ಕಥೆ ಮುಗಿಯಿತೇ?

ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಒಂದು ವರ್ಷದಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಸ್ಯಾಂಡಲ್‌ವುಡ್ ನಟಿ ರನ್ಯಾರಾವ್, ಕಾಫಿಪೋಸಾ ಕಾಯ್ದೆಯ ಅವಧಿ ಮುಗಿದ ಹಿನ್ನೆಲೆಯಲ್ಲಿ ಇಂದು ಬಿಡುಗಡೆಯಾಗಲಿದ್ದಾರೆ. 102 ಕೋಟಿ ರೂ. ಮೌಲ್ಯದ ಚಿನ್ನ ಸಾಗಣೆ ಆರೋಪದಲ್ಲಿ ಅವರನ್ನು ಬಂಧಿಸಲಾಗಿತ್ತು.
Read Full Story

04:10 PM (IST) Apr 22

ಮೋದಿ ನೀಡಿದ 10 ರೂ. ನೋಟಿಗೆ ಭಾರಿ ಬೇಡಿಕೆ - ದಾಖಲೆ ಬೆಲೆಗೆ ಕೇಳಿದ ಉದ್ಯಮಿ

ಪಶ್ಚಿಮ ಬಂಗಾಳದ ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ಮೋದಿ ಚುರುಮುರಿ ವ್ಯಾಪಾರಿಯೊಬ್ಬರಿಗೆ ನೀಡಿದ 10 ರೂಪಾಯಿ ನೋಟಿಗೆ, ಹರಿಯಾಣದ ವ್ಯಕ್ತಿಯೊಬ್ಬರು 1,11,000 ರೂ. ನೀಡುವುದಾಗಿ ಆಫರ್ ನೀಡಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. 

Read Full Story

04:07 PM (IST) Apr 22

ತುಮಕೂರು ರಥೋತ್ಸವದಲ್ಲಿ ಕಾಂಗ್ರೆಸ್​ ವಿರುದ್ಧ ಹರಕೆ ಸಲ್ಲಿಕೆ! ಬಾಳೆಹಣ್ಣಿನ ಮೇಲೆ ಹೀಗೊಂದು ಬರಹ

ಮಹಿಳಾ ಮೀಸಲಾತಿ ಕುರಿತ ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ರಾಜಕೀಯ ವಾಗ್ವಾದದ ನಡುವೆ, ತುಮಕೂರಿನ ರಥೋತ್ಸವದಲ್ಲಿ ವಿಶಿಷ್ಟ ಘಟನೆಯೊಂದು ನಡೆದಿದೆ. ಮಹಿಳಾ ಮೀಸಲಾತಿಯನ್ನು ವಿರೋಧಿಸುತ್ತಿದೆ ಎಂದು ಆರೋಪಿಸಿ, ಕಾಂಗ್ರೆಸ್ ವಿರುದ್ಧ ಬಾಳೆಹಣ್ಣಿನ ಮೇಲೆ ಸಂದೇಶ ಬರೆದು ರಥಕ್ಕೆ ಎಸೆಯಲಾಗಿದ್ದು, ಈ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
Read Full Story

03:38 PM (IST) Apr 22

ಸೈಕಲ್‌ಗೂ ಟೋಲ್‌ ಕಟ್ಟಬೇಕಾ? ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್‌ನಲ್ಲಿ ಸವಾರನಿಗೆ ಟೋಲ್‌ ಶಾಕ್!

ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಮೇಲ್ಸೇತುವೆಯಲ್ಲಿ 'ಆಲ್ ಇಂಡಿಯಾ ಟೂರ್'ನಲ್ಲಿದ್ದ ಸೈಕಲ್ ಸವಾರನೊಬ್ಬನಿಗೆ ಟೋಲ್ ಸಿಬ್ಬಂದಿ 25 ರೂಪಾಯಿ ಕೇಳಿ ಪೀಡಿಸಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Read Full Story

03:34 PM (IST) Apr 22

ಧಾರಾವಾಹಿಗಳಲ್ಲಿ ನಟಿಸುವಾಗಲೇ ಭಿನ್ನಾಭಿಪ್ರಾಯ ಹೊರಹಾಕಿದ ಸೆಲೆಬ್ರಿಟಿಗಳಿವರು! ಯಾಕೆ? ಅಂಥದ್ದೇನಾಯ್ತಿ?

ಧಾರಾವಾಹಿ ಎನ್ನೋದು ಒಂದು ತಂಡ, ತಿಂಗಳಲ್ಲಿ ಒಂದಿಷ್ಟು ದಿನ ಒಂದು ಧಾರಾವಾಹಿ ಶೂಟಿಂಗ್‌ ನಡೆಯುವುದು. ಒಂದು ಸೀರಿಯಲ್ ತಂಡದಲ್ಲಿ ಐವತ್ತು ಜನ ಇದ್ದೇ ಇರುತ್ತಾರೆ.‌ ಆ ವೇಳೆ ಮನಸ್ತಾಪ, ಭಿನ್ನಾಭಿಪ್ರಾಯ ಬರೋದು ಸಹಜ. ಅಂತೆಯೇ ಕನ್ನಡದ ಕೆಲ ಸೆಲೆಬ್ರಿಟಿಗಳು ಸೀರಿಯಲ್‌ ಟೀಂ ವಿರುದ್ಧ ಬೇಸರ ಹೊರಹಾಕಿದ್ದರು.

Read Full Story

02:57 PM (IST) Apr 22

ಸಿಇಟಿ ಅಭ್ಯರ್ಥಿಗಳೇ ಎಚ್ಚರ - 2 ಗಂಟೆ ಮುಂಚಿತವಾಗಿ ಬರುವುದು ಕಡ್ಡಾಯ, ಇದೇ ಮೊದಲ ಬಾರಿ ವಸ್ತ್ರಸಂಹಿತೆ ಅಧಿಕಾರಿ!

2026ನೇ ಸಾಲಿನ ಸಿಇಟಿ ಪರೀಕ್ಷೆಯು ಏಪ್ರಿಲ್ 23 ಮತ್ತು 24 ರಂದು ನಡೆಯಲಿದೆ. ಈ ಬಾರಿ ಪರೀಕ್ಷೆಯು ಸಿಸಿ ಕ್ಯಾಮೆರಾಗಳ ಕಣ್ಗಾವಲಿನಲ್ಲಿ ನಡೆಯಲಿದ್ದು, ಅಕ್ರಮ ತಡೆಗೆ ಕಠಿಣ ಕ್ರಮಗಳು ಹಾಗೂ ಮೊದಲ ಬಾರಿಗೆ ವಸ್ತ್ರ ಸಂಹಿತೆ ಅಧಿಕಾರಿಯನ್ನು ನೇಮಿಸಲಾಗಿದೆ.
Read Full Story

02:56 PM (IST) Apr 22

ಎಷ್ಟೇ ಪೂಜೆ, ಪ್ರಾರ್ಥನೆ ಮಾಡಿದ್ರೂ ಹಣ ನಿಲ್ಲುತ್ತಿಲ್ವಾ? ದೇವರ ಕೋಣೆಯಲ್ಲಿ ಈ ಬದಲಾವಣೆ ಮಾಡಿದ್ರೆ ಮಾತ್ರ ಅದೃಷ್ಟ!

Pooja Room Tips: ಎಷ್ಟೇ ಪೂಜೆ, ಪ್ರಾರ್ಥನೆ ಮಾಡಿದ್ರೂ ಮನೆಯಲ್ಲಿ ಹಣ ನಿಲ್ಲುತ್ತಿಲ್ಲವೇ? ಕೈಗೆ ಬಂದ ದುಡ್ಡು ಖರ್ಚಾಗಿ ಹೋಗುತ್ತಿದೆಯೇ? ಇದಕ್ಕೆಲ್ಲ ನಿಮ್ಮ ಪೂಜಾ ಕೋಣೆಯಲ್ಲಿ ನೀವು ತಿಳಿಯದೆ ಮಾಡುವ ಸಣ್ಣಪುಟ್ಟ ತಪ್ಪುಗಳೇ ಕಾರಣವಿರಬಹುದು.

 

Read Full Story

02:47 PM (IST) Apr 22

ಲೋಕಾಯುಕ್ತ ಬಲೆಗೆ ಬಿದ್ದ ಬಾಗಲಕೋಟೆ ಪಿಎಸ್‌ಐ ಮತ್ತು ಕಾನ್‌ಸ್ಟೇಬಲ್; ಲಂಚ ಪಡೆಯುತ್ತಿದ್ದಾಗ ರೆಡ್ ಹ್ಯಾಂಡ್ ಅರೆಸ್ಟ್!

ಬಾದಾಮಿ ತಾಲೂಕಿನ ಕೆರೂರು ಪೊಲೀಸ್ ಠಾಣೆಯ ಪಿಎಸ್‌ಐ ಮತ್ತು ಕಾನ್‌ಸ್ಟೇಬಲ್, ಪ್ರಕರಣವೊಂದರಿಂದ ಹೆಸರು ಕೈಬಿಡಲು ₹2 ಲಕ್ಷ ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ದೂರಿನ ಮೇರೆಗೆ ಕಾರ್ಯಪ್ರವೃತ್ತರಾದ ಲೋಕಾಯುಕ್ತ ಪೊಲೀಸರು, ₹1.70 ಲಕ್ಷ ಲಂಚ ಸ್ವೀಕರಿಸುವಾಗ ಇಬ್ಬರನ್ನೂ ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ.

Read Full Story

02:31 PM (IST) Apr 22

ನದಿಯಲ್ಲಿ ಮುಳುಗಿ ತಾಯಿ ಮಗು ಸಾವು - ಮುಳುಗುತ್ತಿದ್ದ ಮಗನ ರಕ್ಷಿಸಲು ಹೋದಾಗ ದುರಂತ

ಬೆಳಗಾವಿ ಜಿಲ್ಲೆಯ ಸಂಕೇಶ್ವರದ, ಹಿರಣ್ಯಕೇಶಿ ನದಿಯಲ್ಲಿ ಮುಳುಗುತ್ತಿದ್ದ ಮಗನನ್ನು ರಕ್ಷಿಸಲು ಹೋದ ತಾಯಿ ಕೂಡ ನೀರುಪಾಲಾಗಿದ್ದಾರೆ. ಈ ದುರಂತದಲ್ಲಿ ತಾಯಿ ಲಕ್ಷ್ಮಿ ಹಾಗೂ ಮಗ ಸುಪ್ರೀತ್ ಮೃತಪಟ್ಟಿದ್ದು, ತಾಯಿಯ ಮೃತದೇಹ ಪತ್ತೆಯಾಗಿದೆ ಮಗನಿಗಾಗಿ ಶೋಧ ಕಾರ್ಯ ಮುಂದುವರೆದಿದೆ.

Read Full Story

02:27 PM (IST) Apr 22

Cancer Causing Foods - ಕ್ಯಾನ್ಸರ್ ಅಪಾಯ ಹೆಚ್ಚಿಸುವ ಈ ಆಹಾರಗಳಿಂದ ದೂರವಿರಿ

ಅನಾರೋಗ್ಯಕರ ಜೀವನಶೈಲಿ, ಕೆಟ್ಟ ಆಹಾರ ಪದ್ಧತಿ, ಧೂಮಪಾನ, ವ್ಯಾಯಾಮದ ಕೊರತೆ, ಅತಿಯಾದ ಮದ್ಯಪಾನ ಇವೆಲ್ಲವೂ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸಬಹುದು. ಕೆಲವು ಆಹಾರಗಳ ಅತಿಯಾದ ಸೇವನೆಯು ಕ್ಯಾನ್ಸರ್ ಅಪಾಯವನ್ನು ಇನ್ನಷ್ಟು ಹೆಚ್ಚಿಸುತ್ತದೆ.
Read Full Story

02:23 PM (IST) Apr 22

Dream Science - ನಿದ್ದೆಯಲ್ಲಿ ಆ ರೀತಿ ಕನಸು ಬಿದ್ರೆ ಅಪಾಯದ ಮುನ್ಸೂಚನೆ! ಸ್ವಪ್ನ ಶಾಸ್ತ್ರ ಏನು ಹೇಳುತ್ತೆ?

Dream Science: ನಮಗೆ ಬೀಳುವ ಕನಸುಗಳು ನಮ್ಮ ಜೀವನದ ಮೇಲೆ ಹೆಚ್ಚು ಪ್ರಭಾವ ಬೀರುತ್ತವೆ. ಅದರಲ್ಲೂ ಕನಸಿನಲ್ಲಿ ಕಾಣುವ ಕೆಲವು ವಸ್ತುಗಳು ಭವಿಷ್ಯದಲ್ಲಿ ನಡೆಯುವ ಘಟನೆಗಳನ್ನು ಸೂಚಿಸುತ್ತವೆ ಅಂತಾರೆ. ಹಾಗಾದ್ರೆ ಕನಸಲ್ಲಿ ಕೂದಲು ಉದುರಿದ್ರೆ ಏನರ್ಥ?

 

Read Full Story

01:38 PM (IST) Apr 22

Loan App - ನಿಮಿಷದಲ್ಲೇ ಸಾಲ, ಆಮೇಲೆ ಜೀವಕ್ಕೇ ಕುತ್ತು! ಈ ಫೇಕ್ ಆ್ಯಪ್‌ಗಳಿಂದ ಹುಷಾರ್!

ದೇಶದಲ್ಲಿ ನಕಲಿ ಲೋನ್ ಆ್ಯಪ್‌ಗಳ ಹಾವಳಿ ಹೆಚ್ಚಾಗಿದೆ. ನಿಮಿಷಗಳಲ್ಲೇ ಸಾಲ ನೀಡುವುದಾಗಿ ಹೇಳಿ ಜನರನ್ನು ಬಲೆಗೆ ಬೀಳಿಸಿ, ನಂತರ ವಿಪರೀತ ಬಡ್ಡಿ, ಬ್ಲ್ಯಾಕ್‌ಮೇಲ್ ಮೂಲಕ ಕಿರುಕುಳ ನೀಡುತ್ತವೆ. ಇವುಗಳ ಕಾರ್ಯವೈಖರಿ ಮತ್ತು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ಇಲ್ಲಿದೆ ಮಾಹಿತಿ.
Read Full Story

01:19 PM (IST) Apr 22

ತಹಶೀಲ್ದಾರ್‌ಗಿಂತ ದೊಡ್ಡವನಾದನಾ ಸಚಿವ ಶಿವರಾಜ ತಂಗಡಗಿ ಪುತ್ರ? ಅಧಿಕಾರಿಗಳು ಕುರ್ಚಿ ಇಲ್ಲದೆ ನಿಂತರೆ, ಮಗನಿಗೆ ರಾಜ ಮರ್ಯಾದೆ!

ಕೊಪ್ಪಳ ಜಿಲ್ಲೆಯ ಕನಕಗಿರಿಯಲ್ಲಿ ನಿನ್ನೆ ನಡೆದ ಉತ್ಸವದ ಪೂರ್ವಭಾವಿ ಸಭೆಯು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಸಚಿವ ಶಿವರಾಜ ತಂಗಡಗಿ ಅವರ ಪುತ್ರ ಶಶಿಕಿರಣ್, ಜಿಲ್ಲಾಡಳಿತದ ಅಧಿಕೃತ ಸಭೆಯಲ್ಲಿ ವೇದಿಕೆ ಮೇಲೆ ಕುಳಿತು ದರ್ಬಾರ್ ನಡೆಸಿದ್ದಾರೆ

Read Full Story

01:12 PM (IST) Apr 22

ಚಿಕ್ಕಮಗಳೂರು - ಕಾಡಾನೆಗಳ ಬಳಿಕ ಕಾಡುಕೋಣಗಳ ಹಾವಳಿ - ಟೀ ಎಸ್ಟೇಟ್‌ನಲ್ಲಿ ದಾಂಧಲೆ - 1 ಕಾಟಿ ಸಾವು

ಚಿಕ್ಕಮಗಳೂರಿನಲ್ಲಿ ಕಾಡುಕೋಣಗಳ ಹಾವಳಿ ಹೆಚ್ಚಾಗಿದ್ದು, ಟೀ ಎಸ್ಟೇಟ್‌ಗಳಲ್ಲಿ ದಾಂಧಲೆ ನಡೆಸುತ್ತಿವೆ. ಇತ್ತೀಚೆಗೆ ಎರಡು ಕಾಡುಕೋಣಗಳ ನಡುವಿನ ಕಾದಾಟದಲ್ಲಿ ಒಂದು ಸಾವನ್ನಪ್ಪಿದ್ದು, ಮೂರು ದಿನಗಳ ಹಿಂದೆ ಕಾಡುಕೋಣ ದಾಳಿಗೆ ಯುವಕನೊಬ್ಬ ಬಲಿಯಾಗಿದ್ದು, ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ.
Read Full Story

01:04 PM (IST) Apr 22

Mandya - 18 ಅಡಿ ಉದ್ದದ ಸರಳಿನಿಂದ ಬಾಯಿ ಬೀಗ ಹಾಕಿಸಿಕೊಂಡು ಹರಕೆ ತೀರಿಸಿದ ಭಕ್ತರು

ಶ್ರೀರಂಗಪಟ್ಟಣದ ಬೆಳಗೊಳದಲ್ಲಿ ಭಕ್ತರು 18 ಅಡಿ ಉದ್ದದ ಸರಳಿನಿಂದ ಬಾಯಿ ಬೀಗ ಹಾಕಿಸಿಕೊಂಡು ಬನ್ನಾರಮ್ಮ ದೇವಿಗೆ ಹರಕೆ ಸಲ್ಲಿಸಿದರು. ಇದರೊಂದಿಗೆ ಪಟ್ಟಣದಲ್ಲಿ ಶಂಕರಾಚಾರ್ಯರ ಜಯಂತಿ ಆಚರಣೆ ಮತ್ತು ಶ್ರೀರಂಗನಾಥಸ್ವಾಮಿ ದೇವಾಲಯದಲ್ಲಿ ನಡೆಯಲಿರುವ ಶ್ರೀರಂಗಮುಡಿ ಮಹೋತ್ಸವದ ಕುರಿತು ವರದಿ ಇಲ್ಲಿದೆ.
Read Full Story

12:58 PM (IST) Apr 22

ಶೀಘ್ರದಲ್ಲಿ ರಾಜ್ಯ ಕಾಂಗ್ರೆಸ್​ ಇಬ್ಭಾಗ; ಬಿಜೆಪಿಯಿಂದ ಯೋಗಿ ಎಂಟ್ರಿ - ಪ್ರಶಾಂತ್​ ಕಿಣಿ ರೋಚಕ ಭವಿಷ್ಯವೇನು

ದಾವಣಗೆರೆ ಉಪಚುನಾವಣೆಯು ಕಾಂಗ್ರೆಸ್‌ನಲ್ಲಿ ಅಸಮಾಧಾನ ಸೃಷ್ಟಿಸಿದೆ. ಈ ನಡುವೆ, ಜ್ಯೋತಿಷಿ ಪ್ರಶಾಂತ್ ಕಿಣಿ ಅವರು ಚುನಾವಣೆಯ ನಂತರ ಕರ್ನಾಟಕ ಕಾಂಗ್ರೆಸ್ ಇಬ್ಭಾಗವಾಗಲಿದ್ದು, ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನ ಕಳೆದುಕೊಳ್ಳಲಿದ್ದಾರೆ ಎಂದು ಆಘಾತಕಾರಿ ಭವಿಷ್ಯ ನುಡಿದಿದ್ದಾರೆ. ಈ ಹಿಂದೆ ಅವರ ಕೆಲವು ಭವಿಷ್ಯವಾಣಿಗಳು ನಿಜವಾಗಿದ್ದವು.
Read Full Story

12:43 PM (IST) Apr 22

ಕೊಡಗಿನ ಹೋಂಸ್ಟೇಯಲ್ಲಿ ವಿದೇಶಿ ಮಹಿಳೆಯ ಅತ್ಯಾ*ಚಾರ ಪ್ರಕರಣ - ಗೃಹ ಸಚಿವ ಪರಮೇಶ್ವರ ಪ್ರತಿಕ್ರಿಯೆ ಇದು

ಕೊಡಗಿನ ಹೋಂಸ್ಟೇ ಒಂದರಲ್ಲಿ ವಿದೇಶಿ ಮಹಿಳೆಯ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಹೋಂಸ್ಟೇ ಮಾಲೀಕ ಸೇರಿದಂತೆ ಇಬ್ಬರನ್ನು ಬಂಧಿಸಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಗೃಹ ಸಚಿವ ಜಿ. ಪರಮೇಶ್ವರ ಪ್ರತಿಕ್ರಿಯಿಸಿದ್ದು, ಹೋಂಸ್ಟೇಗಳು ಸರ್ಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಮತ್ತು ನಿಯಮ ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
Read Full Story

12:38 PM (IST) Apr 22

ಸಿದ್ದಾಂತ ರಾಜಕಾರಣದ ನಿಖಿಲ್ ಕುಮಾರಸ್ವಾಮಿ ಹೇಳಿಕೆಗೆ ಟಾಂಗ್ ಕೊಟ್ಟ ಬಿಜೆಪಿಯ ಪ್ರೀತಂ ಗೌಡ

ಜೆಡಿಎಸ್ ಸಿದ್ಧಾಂತದಲ್ಲಿ ರಾಜಿಯಿಲ್ಲ ಎಂಬ ನಿಖಿಲ್ ಕುಮಾರಸ್ವಾಮಿ ಹೇಳಿಕೆಗೆ, ಬಿಜೆಪಿ ಮುಖಂಡ ಪ್ರೀತಂ ಗೌಡ ಹಾಸನದಲ್ಲಿ ಪ್ರತಿಕ್ರಿಯಿಸಿ ಟಾಂಗ್ ನೀಡಿದ್ದಾರೆ. ಎನ್‌ಡಿಎ ನೇತೃತ್ವದಲ್ಲಿ ಮುಂದಿನ ಸಿಎಂ ಯಾರು ಮತ್ತು ಹಾಸನದ ಮುಂದಿನ ಅಭ್ಯರ್ಥಿ ತಾವೇ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.
Read Full Story

More Trending News