LIVE NOW
Published : Feb 19, 2026, 06:45 AM ISTUpdated : Feb 19, 2026, 10:04 AM IST

Karnataka News Live: ಅಂಕೋಲಾದಲ್ಲಿ ಎರಡು ಖಾಸಗಿ ಬಸ್-ಲಾರಿ ನಡುವೆ ಭೀಕರ ಅಪಘಾತ! ವಾಹನ ನಜ್ಜುಗುಜ್ಜು, 12 ವಿದೇಶಿಗರಿಗೂ ಗಾಯ

ಸಾರಾಂಶ

ಚಿಕ್ಕಮಗಳೂರು: ಹಿಂದೂ ಮನೆಯ ಮೇಲೆ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ಆರು ಮಂದಿಯನ್ನು ಬಸವನಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ಜತೆಗೆ, ಹಿಂದೂ ಮತ್ತು ಎಸ್‌ಡಿಪಿಐ ಸಂಘಟನೆ, ಮುಖಂಡರ ವಿರುದ್ಧ ಪ್ರತ್ಯೇಕ ಎರಡು ಸೊಮೋಟೋ ಕೇಸ್‌ ದಾಖಲಾಗಿದೆ.

ಬಂಧಿತ ಆರೋಪಿಗಳಾದ ಯಾಸಿನ್‌, ಮೊಹಮದ್ ಮತೀನ್, ಅಯಾನ್, ಮುನ್ನಾವರ್ ಪಾಷಾ, ಆಕ್ಷದ್, ‌ಹಸೇನ್ ಬಂಧಿಸಲಾಗಿದೆ. ಮಂಗಳವಾರ ತಡರಾತ್ರಿಯೇ 6 ಆರೋಪಿಗಳನ್ನು ಚಿಕ್ಕಮಗಳೂರು ನ್ಯಾಯಾಧೀಶರ ನಿವಾಸಕ್ಕೆ ಹಾಜರು ಪಡಿಸಿದ ಪೊಲೀಸರು, ನಾಲ್ವರು ಅಪ್ರಾಪ್ತ ಆರೋಪಿಗಳನ್ನು ಹಾಸನದ ರಿಮ್ಯಾಂಡ್ ಹೋಮ್‌ಗೆ ಸ್ಥಳಾಂತರಿಸಿದರು. ಉಳಿದ ಇಬ್ಬರನ್ನು ಚಿಕ್ಕಮಗಳೂರು ಜೈಲಿಗೆ ಕಳುಹಿಸಲಾಗಿದೆ.

10:04 AM (IST) Feb 19

ಅಂಕೋಲಾದಲ್ಲಿ ಎರಡು ಖಾಸಗಿ ಬಸ್-ಲಾರಿ ನಡುವೆ ಭೀಕರ ಅಪಘಾತ! ವಾಹನ ನಜ್ಜುಗುಜ್ಜು, 12 ವಿದೇಶಿಗರಿಗೂ ಗಾಯ

ಅಂಕೋಲಾ ತಾಲೂಕಿನ ಸುಂಕಸಾಳ ಬಳಿ ರಾಷ್ಟ್ರೀಯ ಹೆದ್ದಾರಿ 52ರಲ್ಲಿ ಎರಡು ಬಸ್ ಹಾಗೂ ಲಾರಿ ನಡುವೆ ಭೀಕರ ಸರಣಿ ಅಪಘಾತ ಸಂಭವಿಸಿದೆ. ಈ ದುರ್ಘಟನೆಯಲ್ಲಿ 12 ವಿದೇಶಿಗರು ಸೇರಿದಂತೆ ಒಟ್ಟು 32 ಮಂದಿ ಗಾಯಗೊಂಡಿದ್ದು, ಹೆದ್ದಾರಿಯಲ್ಲಿ ಗಂಟೆಗಳ ಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು.
Read Full Story

08:31 AM (IST) Feb 19

Nikhil Kumaraswamy on BJP - ಮೈತ್ರಿ ಚರ್ಚೆ ನಾಲ್ಕು ಗೋಡೆ ನಡುವೆ ಇರಬೇಕು; ನಿಖಿಲ್‌ ಎಚ್ಚರಿಕೆ ಕೊಟ್ಟಿದ್ದು ಯಾರಿಗೆ?

Nikhil Kumaraswamy: ಬಿಜೆಪಿ-ಜೆಡಿಎಸ್ ಮೈತ್ರಿ ಚರ್ಚೆಗಳು ನಾಲ್ಕು ಗೋಡೆಗಳ ನಡುವೆ ನಡೆಯಬೇಕು, ಹಾದಿಬೀದಿಯಲ್ಲಲ್ಲ ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ. ಕೆಲವರು ಪ್ರಚಾರಕ್ಕಾಗಿ ಮೈತ್ರಿ ಮುರಿಯುವ ಹೇಳಿಕೆ ನೀಡುತ್ತಿದ್ದು, ಎರಡೂ ಪಕ್ಷಗಳ ನಾಯಕರು ಮೈತ್ರಿ ಧರ್ಮವನ್ನು ಗೌರವದಿಂದ ಪಾಲಿಸಬೇಕು ಎಂದರು.

Read Full Story

08:16 AM (IST) Feb 19

Apollo Robotic knee replacement for teens - 17ರ ಬಾಲಕನಿಗೆ ಯಶಸ್ವಿಯಾಗಿ ರೋಬೊಟಿಕ್ ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆ ಮಾಡಿದ ಅಪೋಲೋ!

ಬೆಂಗಳೂರಿನ ಅಪೋಲೋ ಆಸ್ಪತ್ರೆಯ ವೈದ್ಯರು, 'ಆಸ್ಟಿಯೋನೆಕ್ರೋಸಿಸ್' ಎಂಬ ವಿರಳ ಕಾಯಿಲೆಯಿಂದ ಬಳಲುತ್ತಿದ್ದ 17 ವರ್ಷದ ಬಾಲಕನಿಗೆ ರೋಬೊಟಿಕ್ ತಂತ್ರಜ್ಞಾನ ಬಳಸಿ ಮೊಣಕಾಲು ಬದಲಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಮಾಡಿದ್ದಾರೆ. ಈ ಅತ್ಯಾಧುನಿಕ ಚಿಕಿತ್ಸೆಯು ಬಾಲಕನಿಗೆ ನೋವುರಹಿತವಾಗಿ ಮತ್ತೆ ನಡೆಯುವಂತಾಗಿದೆ.

Read Full Story

08:02 AM (IST) Feb 19

Karnataka CM change politics - ಡಿಕೆಶಿಯನ್ನು ಸಿಎಂ ಮಾಡ್ತಾರೋ ಇಲ್ವೋ ಹೈಕಮಾಂಡ್‌ ಹೇಳ್ಲಿ, ಇಲ್ಲದಿದ್ರೆ...

Karnataka CM change politics ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡುವ ಬಗ್ಗೆ ಹೈಕಮಾಂಡ್ ಸ್ಪಷ್ಟನೆ ನೀಡಬೇಕೆಂದು ಮಂಡ್ಯ ಶಾಸಕ ಗಣಿಗ ರವಿಕುಮಾರ್ ಆಗ್ರಹಿಸಿದ್ದಾರೆ. ಈ ಗೊಂದಲದಿಂದ ಪಕ್ಷ ಹಾಗೂ ಸರ್ಕಾರದ ಇಮೇಜ್‌ಗೆ ಹಾನಿಯಾಗುತ್ತಿದೆ ಎಂದಿದ್ದಾರೆ.

Read Full Story

07:54 AM (IST) Feb 19

ಬೆಂಗಳೂರಿಗೆ ಮತ್ತೆ ಕಸಬಿಸಿ! ನಗರದಲ್ಲಿ ಪ್ರತಿದಿನ 6,000 ಟನ್‌ ಕಸ ಉತ್ಪತ್ತಿ!

ಬೆಂಗಳೂರಿನ ಹೊರವಲಯದ ಬೆಳ್ಳಹಳ್ಳಿ ಮತ್ತು ಮಿಟ್ಟಗಾನಹಳ್ಳಿ ಡಂಪಿಂಗ್ ಯಾರ್ಡ್‌ಗಳಲ್ಲಿ ಗ್ರಾಮಸ್ಥರು 150ಕ್ಕೂ ಹೆಚ್ಚು ಕಸದ ಲಾರಿಗಳನ್ನು ತಡೆದಿದ್ದಾರೆ. ಅಸಮರ್ಪಕ ನಿರ್ವಹಣೆ, ಅಭಿವೃದ್ಧಿ ಶುಲ್ಕ ಪಾವತಿಸದಿರುವುದು ಮತ್ತು ಇತ್ತೀಚಿನ ಅಪಘಾತಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Read Full Story

07:51 AM (IST) Feb 19

ಯಶ್ ಅಭಿನಯದ ಟಾಕ್ಸಿಕ್‌ ಸಿನಿಮಾ ಕಥೆ ಲೀಕ್; ವಿವರಗಳು ಫಿಲಂಸ್‌ ವಿತರಕರ ವೆಬ್‌ಸೈಟ್‌ನಲ್ಲಿ ಲಭ್ಯ

ಯಶ್ ಅಭಿನಯದ 'ಟಾಕ್ಸಿಕ್' ಸಿನಿಮಾದ ಕಥೆಯು ಯುಎಇ ವಿತರಕರ ವೆಬ್‌ಸೈಟ್‌ನಲ್ಲಿ ಸೋರಿಕೆಯಾಗಿದೆ ಎನ್ನಲಾಗಿದೆ. 1940-70ರ ದಶಕದ ಗೋವಾದ ಭೂಗತ ಲೋಕದಲ್ಲಿ, ಯುವಕನೊಬ್ಬ ರಕ್ತ, ಭಯ ಮತ್ತು ದ್ರೋಹದ ಮೂಲಕ ತನ್ನ ಸಾಮ್ರಾಜ್ಯವನ್ನು ಹೇಗೆ ರೂಪಿಸಿದ ಎಂಬುದು ಚಿತ್ರದ ಮುಖ್ಯ ಕಥಾವಸ್ತು ಎಂದು ವರದಿಯಾಗಿದೆ.

Read Full Story

07:47 AM (IST) Feb 19

ಕಸ ವಿಲೇಗೆ ಅಡ್ಡಿಯಾದ್ರೆ ಎಸ್ಮಾ ಅಡಿ ಕ್ರಮ - ಅಶೋಕ್, ವಿಜಯೇಂದ್ರ ಮನೆ ಮುಂದೆ ಸುರಿಬೇಕಾ? - ಡಿಕೆ ಶಿವಕುಮಾರ್

ಬೆಂಗಳೂರಿನಲ್ಲಿ ಕಸ ವಿಲೇವಾರಿಗೆ ಅಡ್ಡಿಪಡಿಸುವ ಶಾಸಕರು ಸೇರಿದಂತೆ ಯಾರೇ ಆದರೂ ಎಸ್ಮಾ ಕಾಯ್ದೆಯಡಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಡಿಸಿಎಂ ಡಿ.ಕೆ. ಶಿವಕುಮಾರ್ ಎಚ್ಚರಿಸಿದ್ದಾರೆ. ವಿರೋಧ ಮುಂದುವರೆದರೆ ಬಿಜೆಪಿ ಕಚೇರಿ ಅಥವಾ ಶಾಸಕರ ಮನೆ ಮುಂದೆ ಕಸ ಸುರಿಯಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

Read Full Story

07:35 AM (IST) Feb 19

ಮಂತ್ರಾಲಯ ಶ್ರೀಗುರು ವೈಭವೋತ್ಸವಕ್ಕೆ ಚಾಲನೆ । 405ನೇ ಪಟ್ಟಾಭಿಷೇಕ । ಫೆ.24ಕ್ಕೆ 431ನೇ ವರ್ಧಂತೋತ್ಸವ

Guru Vaibhavotsava 2026 ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ, ಶ್ರೀ ಗುರುರಾಯರ 405ನೇ ಪಟ್ಟಾಭಿಷೇಕ ಹಾಗೂ 431ನೇ ವರ್ಧಂತೋತ್ಸವದ ಅಂಗವಾಗಿ 'ಶ್ರೀ ರಾಘವೇಂದ್ರ ಗುರು ವೈಭವೋತ್ಸವ'ಕ್ಕೆ ಚಾಲನೆ ನೀಡಲಾಗಿದೆ.

Read Full Story

07:35 AM (IST) Feb 19

ರಣಜಿ ಟ್ರೋಫಿ ಸೆಮಿಫೈನಲ್ - ಎರಡು ಇನ್ನಿಂಗ್ಸ್‌ಗಳಲ್ಲಿ ಕರ್ನಾಟಕ ದಾಖಲೆಯ 1035 ರನ್! ಫೈನಲ್‌ಗೇರೋದು ಕನ್ಫರ್ಮ್

ಯುವ ಬ್ಯಾಟರ್ ಆರ್. ಸ್ಮರಣ್ ಅವರ ಭರ್ಜರಿ ಅವಳಿ ಶತಕಗಳ ನೆರವಿನಿಂದ ಕರ್ನಾಟಕ ತಂಡವು ರಣಜಿ ಟ್ರೋಫಿ ಸೆಮಿಫೈನಲ್‌ನಲ್ಲಿ ಉತ್ತರಾಖಂಡ ವಿರುದ್ಧ ಸಂಪೂರ್ಣ ಹಿಡಿತ ಸಾಧಿಸಿದೆ. ಬೃಹತ್ ಮುನ್ನಡೆಯೊಂದಿಗೆ, ದಶಕದ ಬಳಿಕ ತಂಡದ ಫೈನಲ್ ಪ್ರವೇಶ ಬಹುತೇಕ ಖಚಿತವಾಗಿದೆ.
Read Full Story

07:23 AM (IST) Feb 19

ಹೆಂಡತಿಯ ಕೊಂ*ದು ಮನೆ ಬಳಿಯೇ ಹೂತು ಕಣ್ಮರೆ ಅಂತ ದೂರು ಕೊಟ್ಟ ಪಾಪಿ ಪತಿ! 16 ದಿವಸ ಹುಡುಕಾಡಿದ ಬಳಿಕ ಪೊಲೀಸರಿಂದ ಸೆರೆ

ದೇವರಹಿಪ್ಪರಗಿಯಲ್ಲಿ, ಸಾಲದ ವಿಚಾರಕ್ಕೆ ಜಗಳವಾಗಿ ಪತಿಯೇ ಪತ್ನಿಯನ್ನು ಕೊಂ*ದು ಮನೆಯ ಆವರಣದಲ್ಲಿ ಹೂತುಹಾಕಿದ್ದಾನೆ. ನಂತರ ಆಕೆ ಕಾಣೆಯಾಗಿದ್ದಾಳೆಂದು ನಾಟಕವಾಡಿದ್ದು, 24 ದಿನಗಳ ಬಳಿಕ ಪೊಲೀಸರ ತನಿಖೆಯಲ್ಲಿ ಸತ್ಯಾಂಶ ಬಯಲಾಗಿದ್ದು, ಆರೋಪಿ ಪತಿಯನ್ನು ಬಂಧಿಸಲಾಗಿದೆ.

Read Full Story

07:20 AM (IST) Feb 19

Tejasvi Surya metro protest case - ಅನುಮತಿ ಇಲ್ಲದೆ ಪ್ರತಿಭಟನೆ; ಸಂಸದ ತೇಜಸ್ವಿ ಸೂರ್ಯ ಸೇರಿ 9 ಮಂದಿಗೆ ನೋಟಿಸ್‌!

Namma Metro fare hike protest ಜಯನಗರದ ಆರ್‌.ವಿ.ಮೆಟ್ರೋ ನಿಲ್ದಾಣದ ಬಳಿ ಅನುಮತಿ ಇಲ್ಲದೆ ಪ್ರತಿಭಟನೆ ನಡೆಸಿದ ಆರೋಪದ ಮೇಲೆ ಸಂಸದ ತೇಜಸ್ವಿ ಸೂರ್ಯ, ಶಾಸಕ ಸಿ.ಕೆ.ರಾಮಮೂರ್ತಿ ಸೇರಿದಂತೆ 9 ಮಂದಿಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನೋಟಿಸ್ ಜಾರಿ ಮಾಡಿದೆ. 

Read Full Story

07:18 AM (IST) Feb 19

ಕೆಲಸಕ್ಕೆ ಗುಡ್‌ಬೈ ಹೇಳೋ ಯೋಚನೆ ಇದ್ಯಾ? ತೆಂಗಿನಕಾಯಿ ತ್ಯಾಜ್ಯದಿಂದ ತಿಂಗಳಿಗೆ ಲಕ್ಷ ಗಳಿಸಿ!

ಕೆಲಸ ಮಾಡುವ ಬಹುತೇಕರಿಗೆ ಸ್ವಂತ ಬ್ಯುಸಿನೆಸ್ ಶುರು ಮಾಡಬೇಕೆಂಬ ಆಸೆ ಇರುತ್ತದೆ. ಆದರೆ, ನಷ್ಟದ ಭಯದಿಂದ ಹಿಂದೆ ಸರಿಯುತ್ತಾರೆ. ಹಾಗಿದ್ರೆ, ಕಡಿಮೆ ರಿಸ್ಕ್, ಹೆಚ್ಚು ಲಾಭ ತರುವ ಒಂದು ಸೂಪರ್ ಬ್ಯುಸಿನೆಸ್ ಐಡಿಯಾ ಇಲ್ಲಿದೆ.
Read Full Story

07:05 AM (IST) Feb 19

Karnataka Congress MLAs foreign tour - 'ನಮ್ಮನ್ನು ಯಾರೂ ಕರೆದಿಲ್ಲ, ಅವರದ್ದೇ ಒಂದು ಟೀಂ, ಮಜಾ ಮಾಡಿಕೊಂಡು ಬರ್ಲಿ ಬಿಡಿ ಎಂದ ಮಾಗಡಿ ಶಾಸಕ!

ಕಾಂಗ್ರೆಸ್ ಶಾಸಕರ ವಿದೇಶ ಪ್ರವಾಸದ ಕುರಿತು ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ ಪ್ರತಿಕ್ರಿಯಿಸಿದ್ದು, ನಮ್ಮನ್ನು ಯಾರೂ ಕರೆದಿಲ್ಲ, ಸ್ನೇಹಿತರು ಮಜಾ ಮಾಡಲು ಹೋಗಿದ್ದಾರೆ ಎಂದಿದ್ದಾರೆ. ಆದರೆ, ಈ ಪ್ರವಾಸದ ಉದ್ದೇಶದ ಬಗ್ಗೆ ಬಿಜೆಪಿ ಶಾಸಕ ಮಹೇಶ ಟೆಂಗಿನಕಾಯಿ ಅನುಮಾನ ವ್ಯಕ್ತಪಡಿಸಿದ್ದಾರೆ.

Read Full Story

07:01 AM (IST) Feb 19

ಕೈದಿಗಳಿಗೆ ಇನ್ನು ಜೈಲಿನಲ್ಲಿ ಡ್ರಗ್ಸ್‌ ಪರೀಕ್ಷೆ ಕಡ್ಡಾಯ, ಒಂದು ವಾರದಲ್ಲಿ ಅನುಷ್ಠಾನ - ಡಿಜಿಪಿ ಅಲೋಕ್‌ ಕುಮಾರ್

ಬೆಂಗಳೂರು ಮತ್ತು ಬೆಳಗಾವಿ ಜೈಲುಗಳಲ್ಲಿ ಮಾದಕ ವಸ್ತುಗಳ ಬಳಕೆ ಹೆಚ್ಚಿದ ಹಿನ್ನೆಲೆಯಲ್ಲಿ, ಡಿಜಿಪಿ ಅಲೋಕಕುಮಾರ ಅವರು ಹುಬ್ಬಳ್ಳಿ ಉಪಕಾರಾಗೃಹಕ್ಕೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಅಕ್ರಮ ಚಟುವಟಿಕೆಗಳಿಗೆ ಅವಕಾಶ ನೀಡದಂತೆ ಸಿಬ್ಬಂದಿಗೆ ಎಚ್ಚರಿಕೆ ನೀಡಿದರು.

Read Full Story

More Trending News