ಚಿಕ್ಕಮಗಳೂರು: ಹಿಂದೂ ಮನೆಯ ಮೇಲೆ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ಆರು ಮಂದಿಯನ್ನು ಬಸವನಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ಜತೆಗೆ, ಹಿಂದೂ ಮತ್ತು ಎಸ್ಡಿಪಿಐ ಸಂಘಟನೆ, ಮುಖಂಡರ ವಿರುದ್ಧ ಪ್ರತ್ಯೇಕ ಎರಡು ಸೊಮೋಟೋ ಕೇಸ್ ದಾಖಲಾಗಿದೆ.
ಬಂಧಿತ ಆರೋಪಿಗಳಾದ ಯಾಸಿನ್, ಮೊಹಮದ್ ಮತೀನ್, ಅಯಾನ್, ಮುನ್ನಾವರ್ ಪಾಷಾ, ಆಕ್ಷದ್, ಹಸೇನ್ ಬಂಧಿಸಲಾಗಿದೆ. ಮಂಗಳವಾರ ತಡರಾತ್ರಿಯೇ 6 ಆರೋಪಿಗಳನ್ನು ಚಿಕ್ಕಮಗಳೂರು ನ್ಯಾಯಾಧೀಶರ ನಿವಾಸಕ್ಕೆ ಹಾಜರು ಪಡಿಸಿದ ಪೊಲೀಸರು, ನಾಲ್ವರು ಅಪ್ರಾಪ್ತ ಆರೋಪಿಗಳನ್ನು ಹಾಸನದ ರಿಮ್ಯಾಂಡ್ ಹೋಮ್ಗೆ ಸ್ಥಳಾಂತರಿಸಿದರು. ಉಳಿದ ಇಬ್ಬರನ್ನು ಚಿಕ್ಕಮಗಳೂರು ಜೈಲಿಗೆ ಕಳುಹಿಸಲಾಗಿದೆ.
11:11 PM (IST) Feb 19
ಚಿಕ್ಕನಾಯಕನಹಳ್ಳಿಯ ಎಫ್ಡಿಎ ಅಧಿಕಾರಿ ಜಯಲಕ್ಷ್ಮಿ ಅವರ ಅನುಮಾನಾಸ್ಪದ ಸಾವು ಕೊಲೆ ಎಂದು ಸಾಬೀತಾಗಿದೆ. ಆಸ್ತಿಗಾಗಿ ಆಕೆಯ ಸ್ವಂತ ಸಹೋದರಿ ಮತ್ತು ದತ್ತು ಪುತ್ರನೇ ಉಸಿರುಗಟ್ಟಿಸಿ ಕೊಲೆ ಮಾಡಿ, ಸಹಜ ಸಾವು ಎಂದು ಬಿಂಬಿಸಲು ಯತ್ನಿಸಿದ್ದರು.
10:40 PM (IST) Feb 19
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್ಗೆ ಅರ್ಥಪೂರ್ಣ ಅಣು ಒಪ್ಪಂದಕ್ಕೆ ಒಪ್ಪಿಕೊಳ್ಳುವಂತೆ ಅಥವಾ ಕೆಟ್ಟ ಪರಿಣಾಮಗಳನ್ನು ಎದುರಿಸುವಂತೆ ಎಚ್ಚರಿಕೆ ನೀಡಿದ್ದಾರೆ. ಒಂದೆಡೆ ರಾಜತಾಂತ್ರಿಕ ಮಾತುಕತೆಗಳು ನಡೆಯುತ್ತಿದ್ದರೂ, ಅಮೆರಿಕ ಇರಾನ್ ಗಡಿಯ ಸುತ್ತಮುತ್ತ ಭಾರಿ ಸೇನಾ ಜಮಾವಣೆ ಮಾಡಿದೆ.
09:38 PM (IST) Feb 19
09:16 PM (IST) Feb 19
ನಟ ದರ್ಶನ್ ಜೈಲಿನಲ್ಲಿದ್ದರೆ, ಹೊರಗಡೆ ಅವರ ಆಪ್ತ ಬಳಗದ ಯುವ ನಟರಾದ ಧನ್ವೀರ್ ಮತ್ತು ಝೈದ್ ಖಾನ್ ನಡುವೆ ಮನಸ್ತಾಪ ಶುರುವಾಗಿದೆ. ದರ್ಶನ್ಗೆ ಕಷ್ಟಕಾಲದಲ್ಲಿ ಝೈದ್ ಖಾನ್ ಸಹಾಯ ಮಾಡಿಲ್ಲ ಮತ್ತು ಸಿನಿಮಾ ಪ್ರಚಾರಕ್ಕೆ ಮಾತ್ರ ಅವರ ಹೆಸರು ಬಳಸಿಕೊಂಡಿದ್ದಾರೆ ಎಂದು ಧನ್ವೀರ್ ಮಾತಿನಲ್ಲೇ ತಿವಿದಿದ್ದಾರೆ.
09:08 PM (IST) Feb 19
ಬೆಂಗಳೂರಿನ ಚರ್ಮರೋಗ ತಜ್ಞೆ ಡಾ.ಶರಣ್ಯಾ ಪದ್ಮಾ ಅವರು ನಂದಿನಿ ಉತ್ಪನ್ನಗಳು ವಿಷಕಾರಿ ಮತ್ತು ಕ್ಯಾನ್ಸರ್ಗೆ ಕಾರಣವಾಗುತ್ತವೆ ಎಂದು ರೀಲ್ಸ್ ಪೋಸ್ಟ್ ಮಾಡಿದ್ದರು. ಈ ಆರೋಪವನ್ನು ಆಧಾರರಹಿತ ಎಂದು ತಳ್ಳಿಹಾಕಿದ ಕೆಎಂಎಫ್, ತಮ್ಮ ಉತ್ಪನ್ನಗಳು ಸುರಕ್ಷಿತವೆಂದು ಹೇಳಿದೆ.
09:05 PM (IST) Feb 19
ದೆಹಲಿಯಲ್ಲಿ ಬ್ಯೂಟಿ ಪಾರ್ಲರ್ ಸೋಗಿನಲ್ಲಿ ಅಕ್ರಮ ಚಟುವಟಿಕೆ ನಡೆಸುತ್ತಿದ್ದ ಲೇಡಿ ಡಾನ್ ಖುಸ್ನುಮಾ ಅನ್ಸಾರಿ ಅಲಿಯಾಸ್ ನೇಹಾಳನ್ನು ಪೊಲೀಸರು ಬಂಧಿಸಿದ್ದಾರೆ. ಈಕೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ಗಾಗಿ ಮಾದಕವಸ್ತು ಜಾಲವನ್ನು ನಿರ್ವಹಿಸುತ್ತಿದ್ದಳು.
09:01 PM (IST) Feb 19
ಹಾವೇರಿ ಜಿಲ್ಲೆಯಲ್ಲಿ 'ಗುಡ್ಡದ ದುರಗಮ್ಮ' ದೇವಸ್ಥಾನದ ಹಕ್ಕಿಗಾಗಿ ಹಿರೇ ಯಡಚಿ ಮತ್ತು ಕ್ಯಾತನಕೇರಿ ಗ್ರಾಮಗಳ ನಡುವೆ ಭೀಕರ ಸಂಘರ್ಷ ನಡೆದಿದೆ. ಹೊಸ ದೇವಸ್ಥಾನ ನಿರ್ಮಾಣದ ವಿಚಾರವಾಗಿ ನಡೆದ ಕಲ್ಲು ತೂರಾಟದಲ್ಲಿ 10ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಹಲವು ವಾಹನಗಳು ಜಖಂಗೊಂಡಿವೆ.
08:36 PM (IST) Feb 19
Karnataka PDOs to be Upgraded to Group-B Officers: Big Relief for RDPR Staff ದಶಕಗಳ ಬೇಡಿಕೆಯಂತೆ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ (PDO) ಹುದ್ದೆಯನ್ನು 'ಗ್ರೂಪ್-ಬಿ'ಗೆ ಉನ್ನತೀಕರಿಸಲು ಸರ್ಕಾರ ಮುಂದಾಗಿದೆ. ಈ ಬದಲಾವಣೆಯು ಪಿಡಿಓಗಳ ಅಧಿಕಾರವನ್ನು ಹೆಚ್ಚಿಸಲಿದೆ.
08:20 PM (IST) Feb 19
ಚಿಕ್ಕಮಗಳೂರಿನಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಮುಸ್ಲಿಂ ಸ್ನೇಹಿತೆಯನ್ನು ಮನೆಗೆ ಬಿಡಲು ಹೋದ ಯುವಕನ ಮೇಲೆ ಅನ್ಯಕೋಮಿನ ಯುವಕರ ಗುಂಪು ನೈತಿಕ ಪೊಲೀಸ್ ಗಿರಿ ಪ್ರದರ್ಶಿಸಿ ಹಲ್ಲೆ ನಡೆಸಿದೆ. ಎಸ್ಸಿ/ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕೆಲವರನ್ನು ಬಂಧಿಸಿದ್ದಾರೆ.
08:18 PM (IST) Feb 19
ಕೆಡಿ ವೆಂಕಟೇಶ್ ಅವರು 400 ಸಿನಿಮಾಗಳಲ್ಲಿ ನಟಿಸಿದ್ದರೂ ಕೂಡ ಆರ್ಥಿಕ ಸ್ಥಿತಿಗತಿ ಚೆನ್ನಾಗಿಲ್ಲ. ಅವರ ಅನಾರೋಗ್ಯದ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. Beyond Limits ಯುಟ್ಯೂಬ್ ಚಾನೆಲ್ ಸಂದರ್ಶನದಲ್ಲಿ ಸಾಕಷ್ಟು ವಿಷಯಗಳನ್ನು ಮಾತನಾಡಿದ್ದಾರೆ.
08:04 PM (IST) Feb 19
ದಾಂಡೇಲಿಯ ಅತ್ಯಂತ ಬಡ ಚರ್ಮಕಾರ ಕುಟುಂಬದಲ್ಲಿ ಜನಿಸಿದ ಪದ್ಮಾವತಿ ನಾಗಣ್ಣ ಮಾದಿಗ, ಎಲ್ಲಾ ಅಡೆತಡೆಗಳನ್ನು ಮೀರಿ ಸಿವಿಲ್ ನ್ಯಾಯಾಧೀಶರ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ದಾಂಡೇಲಿ ತಾಲ್ಲೂಕಿನ ಮೊಟ್ಟಮೊದಲ ಹಾಗೂ ಉತ್ತರ ಕನ್ನಡ ಜಿಲ್ಲೆಯ ಮಾದಿಗ ಸಮಾಜದ ಪ್ರಥಮ ನ್ಯಾಯಾಧೀಶೆ ಎನಿಸಿದ್ದಾರೆ.
07:52 PM (IST) Feb 19
ಇತ್ತೀಚೆಗಿನ ದಿನಗಳಲ್ಲಿ 'ನೇಮ್ ಆಸ್ಟ್ರಾಲಜಿ' ಬಗ್ಗೆ ಜನರಿಗೆ ಹೆಚ್ಚು ಆಸಕ್ತಿ. ಹೆಸರಿನ ಮೊದಲ ಅಕ್ಷರದ ಆಧಾರದ ಮೇಲೆ ವ್ಯಕ್ತಿಯ ಭವಿಷ್ಯವನ್ನು ಅಂದಾಜಿಸಲಾಗುತ್ತೆ. ಜ್ಯೋತಿಷ್ಯದ ಪ್ರಕಾರ, ಈ ಅಕ್ಷರಗಳಿಂದ ಹೆಸರು ಶುರುವಾಗುವ ಗಂಡ ಸಿಕ್ಕರೆ, ಹೆಣ್ಣುಮಕ್ಕಳ ಜೀವನ ಚೆನ್ನಾಗಿರುತ್ತಂತೆ.
07:51 PM (IST) Feb 19
ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಶ್ರೀ ಪ್ರಸನ್ನಾನಂದ ಪುರಿ ಸ್ವಾಮೀಜಿ ಅವರಿಗೆ ಲಘು ಹೃದಯಾಘಾತವಾಗಿದ್ದು, ಹೈದರಾಬಾದ್ನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ. ಯಶಸ್ವಿ ಸ್ಟಂಟ್ ಅಳವಡಿಕೆ ನಂತರ ಶ್ರೀಗಳು ಚೇತರಿಸಿಕೊಳ್ಳುತ್ತಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ದೂರವಾಣಿ ಮೂಲಕ ಆರೋಗ್ಯ ವಿಚಾರಿಸಿದ್ದಾರೆ.
07:39 PM (IST) Feb 19
45 Movie Release Date: ನಟ ಡಾ. ಶಿವರಾಜ್ ಕುಮಾರ್, ಉಪೇಂದ್ರ, ರಾಜ್ ಬಿ.ಶೆಟ್ಟಿ ನಟನೆಯ ‘45 ‘ ಚಿತ್ರವು ಟಿವಿಯಲ್ಲಿ ಪ್ರಸಾರ ಆಗಲಿದೆ. 45 ಸಿನಿಮಾವು ಫ್ಯಾಂಟಸಿ ಆಕ್ಷನ್ ಡ್ರಾಮಾ ಆಗಿದ್ದು, ಇಲ್ಲಿ ಫಿಲಾಸಫಿ ಜೊತೆಗೆ ಆಕ್ಷನ್, ಭಾವನಾತ್ಮಕ ಅಂಶಗಳು ಕೂಡ ಇದ್ದು, ಮನಮುಟ್ಟುವಂತಿದೆ.
07:36 PM (IST) Feb 19
07:33 PM (IST) Feb 19
Bee Attack Disrupts ITF Women's Open Tennis in Bengaluru ಬೆಂಗಳೂರಿನ ಕಬ್ಬನ್ ಪಾರ್ಕ್ನಲ್ಲಿ ನಡೆಯುತ್ತಿದ್ದ ಐಟಿಎಫ್ ಮಹಿಳಾ ಓಪನ್ ಟೆನ್ನಿಸ್ ಪಂದ್ಯದ ವೇಳೆ ಜೇನು ಹುಳುಗಳ ಹಿಂಡು ದಾಳಿ ಮಾಡಿದೆ. ಈ ಘಟನೆಯಿಂದ ಆಟಗಾರರು ಮತ್ತು ಪ್ರೇಕ್ಷಕರು ಆತಂಕಕ್ಕೊಳಗಾದರು.
07:27 PM (IST) Feb 19
ದೇವನಹಳ್ಳಿ ಬಿಟ್ಟು ಯಲಹಂಕದಲ್ಲಿ ದೇಶದ ಅತೀ ದೊಡ್ಡ ಮೆಗಾ ರೈಲ್ವೆ ಕೋಚ್ ಟರ್ಮಿನಲ್ ನಿರ್ಮಿಸಲು ಭಾರತೀಯ ರೈಲ್ವೆ ನಿರ್ಧರಿಸಿದೆ. ₹5754 ಕೋಟಿ ವೆಚ್ಚದ ಈ ಯೋಜನೆಯು 16 ಪ್ಲಾಟ್ಫಾರ್ಮ್ಗಳೊಂದಿಗೆ ಕೆಎಸ್ಆರ್ ಬೆಂಗಳೂರು ಮತ್ತು ಯಶವಂತಪುರ ನಿಲ್ದಾಣಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡುವ ಗುರಿ ಹೊಂದಿದೆ.
07:24 PM (IST) Feb 19
07:17 PM (IST) Feb 19
Seyon Movie: 'ಅಮರನ್' ಚಿತ್ರದ ಯಶಸ್ಸಿನ ನಂತರ, ಕಮಲ್ ಹಾಸನ್ RKFI ಬ್ಯಾನರ್, ನಟ ಶಿವಕಾರ್ತಿಕೇಯನ್ 'ಸೆಯೋನ್' ಎಂಬ ಹೊಸ ಚಿತ್ರಕ್ಕಾಗಿ ಮತ್ತೆ ಕೈಜೋಡಿಸಿದ್ದಾರೆ. ಶಿವಕುಮಾರ್ ಮುರುಗೇಸನ್ ನಿರ್ದೇಶನದ ಈ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ಇದರಲ್ಲಿ ನಟ ರಗಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.
07:10 PM (IST) Feb 19
ಆ್ಯಂಕರ್ ಅನುಶ್ರೀ ಹಂಚಿಕೊಂಡ ವಿಡಿಯೋದಲ್ಲಿ, ನಟ ವಿಜಯ ರಾಘವೇಂದ್ರಗೆ ತಮ್ಮ ಸಿನಿಮಾ ಡೈಲಾಗ್ ಹೇಳಲು ಕೇಳುತ್ತಾರೆ, ಆದರೆ ಅವರಿಗೆ ಡೈಲಾಗ್ ನೆನಪಾಗುವುದಿಲ್ಲ. ಈ ತಮಾಷೆಯ ಸಂಭಾಷಣೆಯು ಅಂತಿಮವಾಗಿ ವಿಜಯ ರಾಘವೇಂದ್ರ ಅವರ ಬಗ್ಗೆ ಭರ್ಜರಿ ಗುಡ್ನ್ಯೂಸ್ ಕೊಟ್ಟಿದ್ದಾರೆ ಅನುಶ್ರೀ. ಏನದು?
07:08 PM (IST) Feb 19
ಬೆಂಗಳೂರು ಜಲಮಂಡಳಿ (BWSSB) ಅಧ್ಯಕ್ಷ ಡಾ. ರಾಮ್ ಪ್ರಸಾತ್ ಮನೋಹರ್ ಅವರು 'ಸ್ಮಾರ್ಟ್ ವಾಟರ್ ನೆಟ್ವರ್ಕ್ಸ್ ಫೋರಮ್' (SWAN) ನ ಪ್ರತಿಷ್ಠಿತ ಸಲಹಾ ಸಮಿತಿಗೆ ಆಯ್ಕೆಯಾಗಿದ್ದಾರೆ. ಈ ಅಂತರಾಷ್ಟ್ರೀಯ ಸಮಿತಿಗೆ ಆಯ್ಕೆಯಾದ ಭಾರತದ ಏಕೈಕ ಪ್ರತಿನಿಧಿ ಇವರಾಗಿದ್ದಾರೆ.
06:52 PM (IST) Feb 19
Gicchi Gili Gili Show chillar Manja: ಗಿಚ್ಚಿ ಗಿಲಿಗಿಲಿ ಖ್ಯಾತಿಯ ಶಿವು ಹಾಗೂ ಮಾನಸಾ ಅವರು ಇತ್ತೀಚೆಗಷ್ಟೇ ನಿಶ್ಚಿತಾರ್ಥ ಆಗಿ, ಮದುವೆಗೆ ರೆಡಿ ಆಗಿದ್ದಾರೆ. ಈಗ ಇನ್ನೊಂದು ಜೋಡಿ ಮದುವೆ ಆಗಲಿದೆ. ಹೌದು, ನಿಶ್ಚಿತಾರ್ಥ ಕೂಡ ಆಗಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.
06:36 PM (IST) Feb 19
ಯಶಸ್ಸು ಮಾತ್ರವಲ್ಲದೆ, ಅದಿತಿ ಕೆಲವು ವಿವಾದಗಳನ್ನೂ ಎದುರಿಸಿದ್ದಾರೆ. ಅವರ ಫ್ಯಾಷನ್ ಆಯ್ಕೆಗಳ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗಳು ನಡೆದಿದ್ದವು. ಕೆಲವು ಫೋಟೋಶೂಟ್ ಮತ್ತು ಬಟ್ಟೆಗಳ ವಿಚಾರದಲ್ಲಿ ನೆಟ್ಟಿಗರ ಟೀಕೆಗೂ ಇವರು ಗುರಿಯಾಗಿದ್ದರು. ಈಗೇನ್ ಮಾಡ್ತಿದಾರೆ?
05:11 PM (IST) Feb 19
05:01 PM (IST) Feb 19
ಬೆಂಗಳೂರು ಉಪನಗರ ರೈಲು ಯೋಜನೆಯ ಮಲ್ಲಿಗೆ ಮಾರ್ಗದ ಸಿವಿಲ್ ಕಾಮಗಾರಿಗಳಿಗೆ ಹೊಸ ಟೆಂಡರ್ ಪ್ರಕ್ರಿಯೆ ನಡೆದಿದೆ. ಎಲ್ & ಟಿ ಒಪ್ಪಂದದಿಂದ ಹೊರಬಂದ ನಂತರ, ಪಿಜೆಬಿ ಎಂಜಿನಿಯರ್ಸ್ ಮತ್ತು ಎನ್ಸಿಸಿ ಸಂಸ್ಥೆಗಳು ವಿವಿಧ ಪ್ಯಾಕೇಜ್ಗಳಿಗೆ ಅತ್ಯಂತ ಕಡಿಮೆ ಮೊತ್ತದ ಬಿಡ್ಡರ್ಗಳಾಗಿ ಹೊರಹೊಮ್ಮಿವೆ.
04:56 PM (IST) Feb 19
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್, ಪ್ರಕರಣದ ವಿಚಾರಣೆಯನ್ನು ಶೀಘ್ರವಾಗಿ ಮುಗಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ಪ್ರಾಸಿಕ್ಯೂಷನ್ ಉದ್ದೇಶಪೂರ್ವಕವಾಗಿ ವಿಚಾರಣೆಯನ್ನು ವಿಳಂಬ ಮಾಡುತ್ತಿದೆ ಎಂದು ಆರೋಪಿಸಿ, ದೈನಂದಿನ ವಿಚಾರಣೆ ನಡೆಸಲು ಕೋರಿದ್ದಾರೆ.
04:18 PM (IST) Feb 19
04:12 PM (IST) Feb 19
03:54 PM (IST) Feb 19
03:28 PM (IST) Feb 19
ಮುಡಾ ಮಾಜಿ ಆಯುಕ್ತ ಡಿ.ಬಿ. ನಟೇಶ್ ಅವರಿಗೆ ಮುಂಬಡ್ತಿ ನೀಡಲು ಹಣ ಪಡೆದಿದ್ದಾರೆ ಎಂಬ ಆರೋಪವನ್ನು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ತಳ್ಳಿಹಾಕಿದ್ದಾರೆ. ದೂರುದಾರ ಸ್ನೇಹಮಯಿ ಕೃಷ್ಣ ಮಾಡಿದ ಆರೋಪಗಳು ಆಧಾರರಹಿತವಾಗಿದ್ದು, ಈ ಬಗ್ಗೆ ಈಗಾಗಲೇ ಸ್ಪಷ್ಟನೆ ನೀಡಲಾಗಿದೆ.
02:51 PM (IST) Feb 19
ಪೊಲೀಸ್ ಸಮವಸ್ತ್ರದಲ್ಲಿ ಬಂದ ದುಷ್ಕರ್ಮಿಗಳು, ಮನೆಯಲ್ಲಿದ್ದವರನ್ನು ಕಟ್ಟಿಹಾಕಿ 20 ಲಕ್ಷ ನಗದು ಮತ್ತು ಅರ್ಧ ಕೆಜಿ ಚಿನ್ನ ದೋಚಿದ್ದಾರೆ. ತನಿಖೆ ವೇಳೆ, ಪೆರೋಲ್ ಮೇಲೆ ಹೊರಬಂದಿದ್ದ ಕೈದಿಯೊಬ್ಬ ಈ ಕೃತ್ಯ ಎಸಗಿ, ದರೋಡೆಯ ಮರುದಿನವೇ ಮತ್ತೆ ಜೈಲಿಗೆ ವಾಪಸ್ ಆಗಿರುವ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ.
02:48 PM (IST) Feb 19
ರಕ್ಷಿತ್ ಜೊತೆ ಸಪ್ತ ಸಾಗರದಾಚೆ ಎಲ್ಲೋ ಚಿತ್ರದಲ್ಲಿ ನಟಿಸಿ, ಮನೆ ಮಾತಾಗಿದ್ದು ರುಕ್ಮಿಣಿ ವಸಂತ್ಗೆ ಗೆ ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಹೆಸರು ತಂದು ಕೊಟ್ಟಿದ್ದು, ಕಾಂತಾರಾ ಚಾಪ್ಟರ್ 1. ಇದೀಗ ಈ ನಟಿಯನ್ನು ಮೃಣಾಲ್ ಠಾಕೂರ್ಗೆ ಹೋಲಿಸುತ್ತಿದ್ದಾರೆ.
02:43 PM (IST) Feb 19
ಬೆಂಗಳೂರಿನ 'ನಮ್ಮ ಮೆಟ್ರೋ' ಹಸಿರು ಮಾರ್ಗದ ಜಯನಗರ ಮತ್ತು ಆರ್.ವಿ.ರಸ್ತೆ ನಿಲ್ದಾಣಗಳ ನಡುವೆ ಸಿವಿಲ್ ನಿರ್ವಹಣಾ ಕಾಮಗಾರಿ ನಡೆಯುತ್ತಿದೆ. ಈ ಕಾರಣದಿಂದ, ಸುರಕ್ಷತೆಗಾಗಿ ರೈಲುಗಳ ವೇಗವನ್ನು ತಾತ್ಕಾಲಿಕವಾಗಿ ಕಡಿಮೆ ಮಾಡಲಾಗಿದೆ.
02:24 PM (IST) Feb 19
ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಮದುವೆಗೆ ಸಕಲ ಸಿದ್ಧತೆ ನಡೆದಿದೆ ಎನ್ನಲಾಗುತ್ತಿದೆ. ಈಗಾಗಲೇ ಇವರ ಮದುವೆಯ ಆಮಂತ್ರಣ ಪತ್ರಿಕೆಯೊಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಇದೀಗ ಜ್ಯೋತಿಷಿ ಹೇಳಿರೋ ಮಾತು
02:18 PM (IST) Feb 19
ಬಿಗ್ಬಾಸ್ ಗೆದ್ದ ನಂತರ ಸಖತ್ ಬ್ಯುಸಿಯಾಗಿರುವ ಗಿಲ್ಲಿ ನಟನಿಗೆ ಎಲ್ಲೆಡೆ ಮದುವೆಯದ್ದೇ ಪ್ರಶ್ನೆ ಎದುರಾಗುತ್ತಿದೆ. ಮದುವೆ ಬಗ್ಗೆ ಮಾತನಾಡಿರುವ ಅವರು, ಮದುವೆಯ ದಿನ ನೀಡುವ ಉಡುಗೊರೆ ಬಗ್ಗೆಯೂ ಹೇಳಿದ್ದಾರೆ. ಬೊಕೆ ಬೇಡ, ಮುಯ್ಯಿ ಕೊಡಿ ಸಾಕು ಎಂದಿದ್ದಾರೆ.
02:03 PM (IST) Feb 19
01:32 PM (IST) Feb 19
2023ರ ಕರ್ನಾಟಕ ಸಿವಿಲ್ ನ್ಯಾಯಾಧೀಶರ ನೇಮಕಾತಿ ಪರೀಕ್ಷೆಯಲ್ಲಿ ರಾಜ್ಯದ ಯುವ ಕಾನೂನು ಪದವೀಧರರು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಶಿರಸಿಯ ಸುಮಂತ್ ನಾಯ್ಕ್ ರಾಜ್ಯಕ್ಕೆ 2ನೇ ರ್ಯಾಂಕ್ ಪಡೆದರೆ, ಧಾರವಾಡದ ಮೂವರು ಸೇರಿದಂತೆ ಹಲವು ಯುವಕ-ಯುವತಿಯರು ಕಿರಿಯ ವಯಸ್ಸಿನಲ್ಲಿ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದಾರೆ.
12:52 PM (IST) Feb 19
ಇಂದು ಪ್ಯಾನ್ ಇಂಡಿಯಾ ಸ್ಟಾರ್ಗಳ ಕಾಲವಿರಬಹುದು. ಆದರೆ, ಸೋಶಿಯಲ್ ಮೀಡಿಯಾ ಇಲ್ಲದ, ಇಂಟರ್ನೆಟ್ ಇಲ್ಲದ ಆ ಕಾಲದಲ್ಲಿ ಕೇವಲ ತಮ್ಮ ಅಭಿನಯ ಮತ್ತು ವರ್ಚಸ್ಸಿನಿಂದ ಇಡೀ ರಾಜ್ಯದ ಜನರನ್ನು ಮಂತ್ರಮುಗ್ಧರನ್ನಾಗಿಸಿದ ಕೀರ್ತಿ ಮಾಲಾಶ್ರೀ ಅವರಿಗೆ ಸಲ್ಲುತ್ತದೆ. ಇಂಥ ಸಾಧನೆ ಇತಿಹಾಸದಲ್ಲೇ ಇಲ್ಲ..!
12:45 PM (IST) Feb 19
ಅಧಿಕಾರಿಯೊಬ್ಬರಿಗೆ ಭಡ್ತಿ ನೀಡಲು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ₹1.60 ಕೋಟಿ ಲಂಚ ಪಡೆದಿದ್ದಾರೆ ಎಂದು ದೂರುದಾರ ಸ್ನೇಹಮಯಿ ಕೃಷ್ಣ ಗಂಭೀರ ಆರೋಪ ಮಾಡಿದ್ದಾರೆ. ಈ ಸಂಬಂಧ ₹9 ಕೋಟಿ ಅಕ್ರಮ ಹಣ ವರ್ಗಾವಣೆ ನಡೆದಿದ್ದು, ಹಣ ಸಾಗಿಸಿದ ಕಾರಿನ ಫೋಟೋ ಸಹಿತ ದೂರು ಸಲ್ಲಿಸಿದ್ದಾರೆ.
12:26 PM (IST) Feb 19
ಕರ್ನಾಟಕದ ರಾಜಕಾರಣ ಹಾಗೂ ಜಗತ್ತಿನ ಬಗ್ಗೆ ಆಗಾಗ ಭವಿಷ್ಯ ನುಡಿಯುವ ಕೋಡಿಹಳ್ಳಿ ಶ್ರೀಗಳು ಇದೀಗ ರಾಜ್ಯ ರಾಜಕಾರಣದ ಬಗ್ಗೆ ಮತ್ತೊಮ್ಮೆ ತಮ್ಮ ಭವಿಷ್ಯ ನುಡಿದಿದ್ದಾರೆ. ಕರ್ನಾಟಕದ ಕಾಂಗ್ರೆಸ್ ಸರ್ಕಾರಕ್ಕೆ ಯಾವುದೇ ಆಪತ್ತಿಲ್ಲ ಎಂದಿದ್ದಾರೆ.