Published : Feb 18, 2026, 06:46 AM ISTUpdated : Feb 18, 2026, 11:26 PM IST

Karnataka News Live: Zee ಸರಿಗಮಪ ಲಿಟಲ್ ಚಾಂಪ್ಸ್ - ವಾಟ್ಸ್​ಆ್ಯಪ್​, ಆನ್​ಲೈನ್​ನಲ್ಲೂ ಕಳಿಸ್ಬೋದು ಹಾಡು- ಡಿಟೇಲ್ಸ್​ ಇಲ್ಲಿದೆ

ಸಾರಾಂಶ

ಬೆಂಗಳೂರು: ಜೆಡಿಎಸ್‌ ಕಾರ್ಯಕರ್ತನ ಮೇಲೆ ಅಸಹಜ ಲೈಂ*ಕ ದೌರ್ಜನ್ಯ ಆರೋಪ ಪ್ರಕರಣದಲ್ಲಿ ತಮ್ಮನ್ನು ಕೈ ಬಿಡುವಂತೆ ಕೋರಿ ವಿಧಾನ ಪರಿಷತ್‌ ಸದಸ್ಯ ಡಾ.ಸೂರಜ್‌ ರೇವಣ್ಣ ಸಲ್ಲಿಸಿದ್ದ ಮರು ಪರಿಶೀಲನಾ ಅರ್ಜಿಯನ್ನು ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಜಾಗೊಳಿಸಿ ಆದೇಶಿಸಿದೆ.

ಆರೋಪಿ ಸೂರಜ್‌ ರೇವಣ್ಣ ಸಲ್ಲಿಸಿದ್ದ ಮರು ಪರಿಶೀಲನಾ ಅರ್ಜಿ ಕುರಿತು ಮಂಗಳವಾರ ವಿಚಾರಣೆ ನಡೆಸಿದ ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್‌ ಗಜಾನನ ಭಟ್‌ ಅವರು ಈ ಆದೇಶ ಪ್ರಕಟಿಸಿದರು. ಹೀಗಾಗಿ ಸೂರಜ್‌ ರೇವಣ್ಣಗೆ ಮುಂದಿನ ಕಾನೂನು ಸಂಕಷ್ಟ ಎದುರಿಸುವುದು ಅನಿವಾರ್ಯವಾಗಿದೆ.

11:26 PM (IST) Feb 18

Zee ಸರಿಗಮಪ ಲಿಟಲ್ ಚಾಂಪ್ಸ್ - ವಾಟ್ಸ್​ಆ್ಯಪ್​, ಆನ್​ಲೈನ್​ನಲ್ಲೂ ಕಳಿಸ್ಬೋದು ಹಾಡು- ಡಿಟೇಲ್ಸ್​ ಇಲ್ಲಿದೆ

ಜೀ ಕನ್ನಡದ ಜನಪ್ರಿಯ ಸಂಗೀತ ರಿಯಾಲಿಟಿ ಷೋ 'ಸರಿಗಮಪ ಲಿಟಲ್ ಚಾಂಪ್ಸ್' ಹೊಸ ಆವೃತ್ತಿ ಶೀಘ್ರದಲ್ಲೇ ಆರಂಭವಾಗಲಿದೆ.  ಆಡಿಷನ್‌ಗಳು ಇದೀಗ ಶುರುವಾಗಿದ್ದು, ಸ್ಥಳಕ್ಕೆ ಬರಲು ಸಾಧ್ಯವಾಗದ ಪ್ರತಿಭೆಗಳಿಗಾಗಿ ವಾಹಿನಿಯು ವಾಟ್ಸ್​ಆ್ಯಪ್​ ಹಾಗೂ ಆನ್‌ಲೈನ್‌ ಮೂಲಕ ಆಡಿಷನ್ ನೀಡುವ ವಿಶೇಷ ಅವಕಾಶವನ್ನು ಕಲ್ಪಿಸಿದೆ.

Read Full Story

11:03 PM (IST) Feb 18

ಶೀಘ್ರದಲ್ಲೇ ನಮ್ಮ ಮೆಟ್ರೋದಲ್ಲಿ ಮದ್ಯ ಸಾಗಿಸಲು ಅನುಮತಿ, ಷರತ್ತು ಅನ್ವಯ!

ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ ಮೆಟ್ರೋ ರೈಲುಗಳಲ್ಲಿ ಸೀಲ್‌ ಆಗಿರುವ ಮದ್ಯದ ಬಾಟಲಿಗಳನ್ನು ಅನುಮತಿಸುವ ಬಗ್ಗೆ ಪರಿಗಣಿಸುತ್ತಿದೆ, ಅಧಿಕಾರಿಗಳು ದೆಹಲಿ ಮೆಟ್ರೋ ಮಾದರಿಯನ್ನು ಉಲ್ಲೇಖಿಸಿ ಮತ್ತು ನಿಯಮಗಳನ್ನು ತಿದ್ದುಪಡಿ ಮಾಡುವ ಕುರಿತು ಚರ್ಚೆಗಳು ನಡೆಯುತ್ತಿವೆ.

 

Read Full Story

10:44 PM (IST) Feb 18

ಫ್ರೀ ಸಿಕ್ಕ ಸಿನಿಮಾ ಡೌನ್​ಲೋಡ್​ ಮಾಡ್ತಿದ್ದಂತೆಯೇ ಬೆಂಗಳೂರಿಗನ ಬ್ಯಾಂಕ್​ ಖಾತೆ ಖಾಲಿ! ಎಚ್ಚರ, ಎಚ್ಚರ

ಬೆಂಗಳೂರಿನ ನಿವಾಸಿಯೊಬ್ಬರು ವಾಟ್ಸ್​ಆ್ಯಪ್​ನಲ್ಲಿ ಬಂದ 'ಬಾರ್ಡರ್-2' ಸಿನಿಮಾದ ಉಚಿತ ಲಿಂಕ್ ಡೌನ್‌ಲೋಡ್ ಮಾಡಲು ಹೋಗಿ ಮೋಸ ಹೋಗಿದ್ದಾರೆ. ಎಪಿಕೆ ಫೈಲ್ ರೂಪದಲ್ಲಿದ್ದ ಲಿಂಕ್ ಕ್ಲಿಕ್ ಮಾಡುತ್ತಿದ್ದಂತೆ, ಸೈಬರ್ ವಂಚಕರು ಅವರ ಬ್ಯಾಂಕ್ ಖಾತೆಯಿಂದ 56 ಸಾವಿರ ರೂಪಾಯಿಗಳನ್ನು ಕದ್ದಿದ್ದಾರೆ.
Read Full Story

09:09 PM (IST) Feb 18

ಸಾರಿಗೆ ನೌಕರರ ಬೇಡಿಕೆಗೆ ಮಣಿದ ಸರ್ಕಾರ - 26 ತಿಂಗಳ ಹಿಂಬಾಕಿ ಪಾವತಿ, ವೇತನ ಪರಿಷ್ಕರಣೆಗೆ ಗ್ರೀನ್ ಸಿಗ್ನಲ್!

ರಾಜ್ಯದ ಸಾರಿಗೆ ನೌಕರರ 38 ತಿಂಗಳ ವೇತನ ಹಿಂಬಾಕಿ ಬೇಡಿಕೆಗೆ ಸರ್ಕಾರ ಸ್ಪಂದಿಸಿದ್ದು, ಪ್ರಾಥಮಿಕ ಹಂತದಲ್ಲಿ 26 ತಿಂಗಳ ಅರಿಯರ್ಸ್ ಪಾವತಿಸಲು ಆದೇಶಿಸಿದೆ. ಏಪ್ರಿಲ್ 2025 ರಿಂದ ವೇತನ ಪರಿಷ್ಕರಣೆಗೂ ಒಪ್ಪಿಗೆ ಸೂಚಿಸಿದ್ದು, ನೌಕರರು ನಡೆಸಲುದ್ದೇಶಿಸಿದ್ದ ಬೃಹತ್ ಪ್ರತಿಭಟನೆಗೆ ತಡೆ ಬಿದ್ದಿದೆ.

Read Full Story

09:00 PM (IST) Feb 18

Jayam Movie - ರೈಲ್ವೆ ಇಲಾಖೆಗೆ ಸೆಡ್ಡು ಹೊಡೆದ ಸಿನಿಮಾ; ಹಾಡನ್ನೇ ಬದಲಾಯಿಸಿದ್ರು, ಆದ್ರೂ ಸಿನಿಮಾ ಬ್ಲಾಕ್‌ಬಸ್ಟರ್!

ರೈಲ್ವೆ ಇಲಾಖೆಯ ಆಕ್ಷೇಪದಿಂದಾಗಿ ಒಂದು ಸೂಪರ್‌ಹಿಟ್ ಸಿನಿಮಾದ ಹಾಡನ್ನೇ ಸಂಪೂರ್ಣವಾಗಿ ಬದಲಾಯಿಸಬೇಕಾಯ್ತು. ಸಿನಿಮಾ ಹಿಟ್ ಆದ್ಮೇಲೆ ರೈಲ್ವೆ ಇಲಾಖೆ ಚಿತ್ರತಂಡಕ್ಕೆ ಶಾಕ್ ಕೊಟ್ಟಿತ್ತು. ಏನಿದು ವಿವಾದ? ಈ ಫೋಟೋ ಸ್ಟೋರಿ ನೋಡಿ.

Read Full Story

09:00 PM (IST) Feb 18

Bigg Boss ದುಡ್ಡು ನಿರ್ಮಲಾ ಸೀತಾರಾಮನ್‌ಗೆ! ಶಾಸಕ ಪ್ರದೀಪ್‌ ಮಾತಿಗೆ ಗಿಲ್ಲಿ ನಟ ಹೇಳಿದ್ದೇನು? ದುಡ್ಡು ಬಂತಾ?

ಬಿಗ್‌ಬಾಸ್‌ 12 ಗೆದ್ದು ಇತಿಹಾಸ ಸೃಷ್ಟಿಸಿರುವ ಗಿಲ್ಲಿ ನಟ, ಶಾಸಕ ಪ್ರದೀಪ್ ಈಶ್ವರ್ ಅವರ ತೆರಿಗೆ ಹೇಳಿಕೆಯಿಂದ ಉಂಟಾದ ಚರ್ಚೆಯ ಬಗ್ಗೆ ಮಾತನಾಡಿದ್ದಾರೆ. ತಮಗೆ ಇನ್ನೂ ಬಹುಮಾನದ ಹಣ ಬಂದಿಲ್ಲ ಮತ್ತು ಅದರಲ್ಲಿ ಜಮೀನು ಖರೀದಿಸುವ ಯೋಜನೆಗೆ ಮತ್ತಷ್ಟು ಹಣ ಬೇಕು ಎಂದು ಸ್ಪಷ್ಟಪಡಿಸಿದ್ದಾರೆ.
Read Full Story

08:30 PM (IST) Feb 18

ಬೆಂಗಳೂರಿನಲ್ಲಿ ಮತ್ತೆ ಶುರುವಾಯ್ತು 'ಕಸದ ಕ್ರಾಂತಿ' - ರಸ್ತೆಗಿಳಿದ ಲಾರಿಗಳಿಗೆ ದಿಗ್ಬಂಧನ; ಮನೆಗಳಲ್ಲಿ ದುರ್ವಾಸನೆ!

ಬೆಂಗಳೂರಿನಲ್ಲಿ ತ್ಯಾಜ್ಯ ವಿಲೇವಾರಿ ಘಟಕಗಳ ಬಳಿ ಪ್ರತಿಭಟನೆಗಳು ತೀವ್ರಗೊಂಡಿದ್ದು, ನಗರವು 'ಗಾರ್ಬೇಜ್ ಸಿಟಿ'ಯಾಗುವ ಭೀತಿ ಎದುರಿಸುತ್ತಿದೆ. ಈ ಕಸದ ಬಿಕ್ಕಟ್ಟು ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ತೀವ್ರ ವಾಕ್ಸಮರಕ್ಕೆ ಕಾರಣವಾಗಿದ್ದು, ಡಿ.ಕೆ. ಶಿವಕುಮಾರ್ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ.

Read Full Story

07:49 PM (IST) Feb 18

ಮೊಬೈಲ್ ದಾಸನಾದ ಮಗನಿಗೆ ಬುದ್ಧಿ ಹೇಳಿದ್ದೇ ತಪ್ಪಾಯ್ತು; ಕಾಲೇಜು ಕಟ್ಟಡದಿಂದ ಹಾರಿ ಪ್ರಾಣ ಬಿಟ್ಟ ಪಿಯು ವಿದ್ಯಾರ್ಥಿ!

ಮೊಬೈಲ್ ಗೀಳು ಬಿಡುವಂತೆ ಪೋಷಕರು ಮತ್ತು ಶಿಕ್ಷಕರು ನೀಡಿದ ಬುದ್ಧಿಮಾತಿಗೆ ಮನನೊಂದ ದ್ವಿತೀಯ ಪಿಯುಸಿ ವಿದ್ಯಾರ್ಥಿ ಕಾಲೇಜು ಕಟ್ಟಡದ ಮೇಲಿಂದ ಜಿಗಿದಿದ್ದಾನೆ. ಗಾಯಗೊಂಡವನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಂಗಳೂರಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ.

Read Full Story

07:22 PM (IST) Feb 18

ಧಾರಾವಾಹಿ ನಟಿಗೆ ಕಿರುಕುಳ ಕೊಟ್ಟ ಯ್ಯೂಟೂಬರ್‌ಗಳಿಗೆ ಕಂಟಕ; ಸಿಎಂಗೆ ದೂರು ಕೊಟ್ಟ ಬೆನ್ನಲ್ಲೇ ಕಠಿಣ ಕ್ರಮ!

ನಟಿ ರೇಖಾ ರತೀಶ್ ಅವರು ತಮ್ಮ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸಿದ ಕೆಲವು ಯೂಟ್ಯೂಬ್ ಚಾನೆಲ್‌ಗಳ ವಿರುದ್ಧ ಮುಖ್ಯಮಂತ್ರಿ ಕಚೇರಿಗೆ ದೂರು ನೀಡಿದ್ದಾರೆ. ಈ ಸೈಬರ್ ದಾಳಿಯಿಂದ ತಮಗೂ ಮತ್ತು ತಮ್ಮ ಮಗನಿಗೂ ಆಗಿರುವ ಮಾನಸಿಕ ಹಿಂಸೆಯನ್ನು ವಿವರಿಸಿದ ಅವರು, ತಮ್ಮನ್ನು ಬದುಕಲು ಬಿಡುವಂತೆ ಮನವಿ ಮಾಡಿದ್ದಾರೆ.

Read Full Story

07:03 PM (IST) Feb 18

ಡೈವೋರ್ಸ್‌ ಸುದ್ದಿಗೆ ಕೊನೆಗೂ ಸ್ಪಷ್ಟನೆ ಕೊಟ್ಟ ನಟಿ ಮಯೂರಿ ಕ್ಯಾತಾರಿ!

ನಟನೆಯಿಂದ ವಿರಾಮ ಪಡೆದು ಉದ್ಯಮಿಯಾಗಿರುವ ನಟಿ ಮಯೂರಿ, ತಮ್ಮ ವಿಚ್ಛೇದನದ ವದಂತಿಗಳ ಬಗ್ಗೆ ಮೊದಲ ಬಾರಿಗೆ ಮೌನ ಮುರಿದಿದ್ದಾರೆ. ತಮ್ಮ ವೈಯಕ್ತಿಕ ಜೀವನದ ಖಾಸಗಿತನವನ್ನು ಗೌರವಿಸುವಂತೆ ಕೋರಿರುವ ಅವರು, ಮಗ ಆರವ್‌ನ ಪಾಲನೆಯೇ ಸದ್ಯ ತಮ್ಮ ಆದ್ಯತೆ ಎಂದು ಸ್ಪಷ್ಟಪಡಿಸಿದ್ದಾರೆ.
Read Full Story

06:48 PM (IST) Feb 18

ಪ್ರವಾಸಿಗರಿಗೆ ಸಂತಸದ ಸುದ್ದಿ, ಕೊನೆಗೂ ಬಂಡೀಪುರ ಸಫಾರಿ ಪುನರಾರಂಭ ಆದರೆ ಷರತ್ತುಗಳು ಅನ್ವಯ

ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ಬಂಡೀಪುರ ಮತ್ತು ನಾಗರಹೊಳೆ ಅರಣ್ಯ ಸಫಾರಿಯನ್ನು ಪುನಾರಂಭಿಸಲು ಸರ್ಕಾರ ನಿರ್ಧರಿಸಿದೆ. ತಾಂತ್ರಿಕ ಸಮಿತಿಯ ವರದಿಯ ಆಧಾರದ ಮೇಲೆ, ಶೇ.50ರಷ್ಟು ಸಾಮರ್ಥ್ಯದೊಂದಿಗೆ, ಕಡಿಮೆ ಅವಧಿ ಮತ್ತು ವಾಹನಗಳ ಸಂಖ್ಯೆಯೊಂದಿಗೆ ಸಫಾರಿಯನ್ನು ಹಂತ ಹಂತವಾಗಿ ಆರಂಭಿಸಲಾಗುತ್ತಿದೆ.

Read Full Story

06:42 PM (IST) Feb 18

ಬೆಂಗಳೂರಲ್ಲಿ ತೆರಿಗೆ ಕಟ್ಟದ 71 ಆಸ್ತಿಗಳ ಬಹಿರಂಗ ಹರಾಜು; ಚೀಪ್ ರೇಟಿಗೆ ಪ್ರಾಪರ್ಟಿ ಸೇಲ್ ನಿಲ್ಲಿಸಲು ಕೊನೇ ಚಾನ್ಸ್!

ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಪಶ್ಚಿಮ ವಲಯವು, ಮಲ್ಲೇಶ್ವರಂ ವ್ಯಾಪ್ತಿಯಲ್ಲಿ 1.14 ಕೋಟಿ ರೂ. ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿರುವ 71 ಆಸ್ತಿಗಳನ್ನು ಫೆಬ್ರವರಿ 21 ರಂದು ಬಹಿರಂಗ ಹರಾಜು ಹಾಕಲು ನಿರ್ಧರಿಸಿದೆ. ಹಲವು ಬಾರಿ ನೋಟಿಸ್ ನೀಡಿದರೂ ತೆರಿಗೆ ಪಾವತಿಸದ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ.

Read Full Story

06:27 PM (IST) Feb 18

ಜೆಡಿಎಸ್ ಎಂಎಲ್‌ಸಿ ಸೂರಜ್ ರೇವಣ್ಣಗೆ ಮತ್ತೆ ಹಿನ್ನಡೆ - ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣ ಕೈಬಿಡಲು ಕೋರ್ಟ್‌ ನಕಾರ

ಸೂರಜ್ ರೇವಣ್ಣ ಅವರ ವಿರುದ್ಧದ ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ, ತಮ್ಮನ್ನು ಕೈಬಿಡುವಂತೆ ಕೋರಿ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಜಾಗೊಳಿಸಿದೆ. ಈ ಹಿಂದೆ ಎಸ್‌ಐಟಿ ಸಲ್ಲಿಸಿದ್ದ 'ಬಿ' ರಿಪೋರ್ಟ್ ತಿರಸ್ಕರಿಸಿ ಮರುತನಿಖೆಗೆ ಆದೇಶಿಸಿದ್ದ ನ್ಯಾಯಾಲಯ.

Read Full Story

06:00 PM (IST) Feb 18

ಕೋಲಾರ - ಪತ್ನಿ ಜೊತೆಗೆ ಮಾವನ ಅಕ್ರಮ ಸಂಬಂಧ, ಚಾಕುವಿನಿಂದ ಚುಚ್ಚಿ ಕೊಂದ ಅಳಿಯ

ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಿಟಗಾನಹಳ್ಳಿ ಗ್ರಾಮದಲ್ಲಿ, ಪತ್ನಿಯೊಂದಿಗೆ ಸೋದರ ಮಾವನಿಗೆ ಅಕ್ರಮ ಸಂಬಂಧವಿದೆ ಎಂಬ ಶಂಕೆಯಿಂದ ಅಳಿಯನೇ ಮಾವನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ. ಹೊಸಕೋಟೆಯಿಂದ ಬಂದಿದ್ದ ನಯಾಜ್ ಖಾನ್ ಎಂಬುವವರನ್ನು ಆರೋಪಿ ಶಾಹಿದ್ ಖಾನ್ ಕೊಲೆ ಮಾಡಿದ್ದಾನೆ.

Read Full Story

05:54 PM (IST) Feb 18

Bar Timings- ತಿಂಗಳಿಗೆ 60 ಗಂಟೆ ಹೆಚ್ಚುವರಿ, ಇದು 5 ದಿನಕ್ಕೆ ಸಮ - ಕೇರಳ ಸರ್ಕಾರದ ವಿರುದ್ಧ ಗುಡುಗಿದ ರಾಜೀವ್ ಚಂದ್ರಶೇಖರ್

ಕೇರಳದಲ್ಲಿ ಬಾರ್‌ಗಳ ಕಾರ್ಯನಿರ್ವಹಣೆ ಸಮಯವನ್ನು ಹೆಚ್ಚಿಸಿರುವ ಸರ್ಕಾರದ ನಿರ್ಧಾರದ ಹಿಂದೆ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ ನಡೆದಿದೆ. ಇದು ಎಡ ಮತ್ತು ಬಲಪಂಥೀಯ ರಂಗಗಳ ಒಳಒಪ್ಪಂದ, ಚುನಾವಣಾ ಫಂಡ್ ಸಂಗ್ರಹವೇ ಇದರ ಮುಖ್ಯ ಉದ್ದೇಶ ಎಂದು ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ ಆರೋಪಿಸಿದ್ದಾರೆ.

Read Full Story

05:16 PM (IST) Feb 18

ಜಮಖಂಡಿ ಹೆದ್ದಾರಿಯಲ್ಲಿ ಭೀಕರ ರಸ್ತೆ ಅಪಘಾತ ಗಂಡ-ಹೆಂಡತಿ-ಮಗು ಸ್ಥಳದಲ್ಲೇ ಸಾವು, ಕುಟುಂಬ ನಿರ್ನಾಮ!

ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಅಲಖನೋರ ಗ್ರಾಮದ ಬಳಿ ಲಾರಿ ಮತ್ತು ಬೈಕ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮಹಾರಾಷ್ಟ್ರದ ಜಯಸಿಂಗಪುರ ನಿವಾಸಿಗಳಾದ ದಂಪತಿ ಮತ್ತು ಅವರ ಮಗಳು ಜಮಖಂಡಿಗೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.
Read Full Story

05:03 PM (IST) Feb 18

ಹೊಸಮನೆಗೆ ಸಾಲ ಜಾಸ್ತಿ ಮಾಡಬೇಡಿ ಎಂದ ಹೆಂಡ್ತಿಯನ್ನ ಕೊ*ಲೆಗೈದು ಮನೆಯೊಳೆಗೆ ಹೂತು ಹಾಕಿದ ಗಂಡ!

ವಿಜಯಪುರದ ದೇವರಹಿಪ್ಪರಗಿ ಪಟ್ಟಣದಲ್ಲಿ, ಸಾಲದ ಬಾಧೆ ಮತ್ತು ಕೌಟುಂಬಿಕ ಕಲಹದಿಂದ ಪತಿಯೇ ಪತ್ನಿಯನ್ನು ಹತ್ಯೆ ಮಾಡಿದ್ದಾನೆ. ಬಳಿಕ ಸಾಕ್ಷ್ಯ ನಾಶಪಡಿಸಲು ಮೃತದೇಹವನ್ನು ಮನೆಯ ಆವರಣದಲ್ಲೇ ಹೂತುಹಾಕಿದ್ದು, 24 ದಿನಗಳ ನಂತರ ಈ ಭೀಕರ ಕೃತ್ಯ ಬೆಳಕಿಗೆ ಬಂದಿದೆ.
Read Full Story

04:48 PM (IST) Feb 18

ಭಾರತೀಯ ನೌಕಾಪಡೆ ರಹಸ್ಯ ಸೋರಿಕೆ, ಪಾಕಿಸ್ತಾನಕ್ಕೆ ರವಾನಿಸುತ್ತಿದ್ದ ದೇಶದ್ರೂಹಿ ಉಡುಪಿಯಲ್ಲಿ ಅರೆಸ್ಟ್!

ಭಾರತೀಯ ನೌಕಾ ಸೇನೆಯ ಗೌಪ್ಯ ಮಾಹಿತಿಯನ್ನು ಪಾಕಿಸ್ತಾನಕ್ಕೆ ರವಾನಿಸಿದ ಪ್ರಕರಣದಲ್ಲಿ ಉಡುಪಿ ಪೊಲೀಸರು ಮತ್ತೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಕೊಚ್ಚಿನ್ ಶಿಪ್‌ಯಾರ್ಡ್‌ಗೆ ಸಂಬಂಧಿಸಿದ ಈ ಜಾಲವು, ಹಡಗುಗಳ ರಹಸ್ಯ ವಿವರಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಸೋರಿಕೆ ಮಾಡುತ್ತಿತ್ತು. 

Read Full Story

04:31 PM (IST) Feb 18

ಡಿಕೆಶಿ ಅವರನ್ನ ಸಿಎಂ ಮಾಡ್ತಿರೋ ಇಲ್ವೋ? ಸರ್ಕಾರಕ್ಕೆ ಸಂಕಷ್ಟ ಗ್ಯಾರಂಟಿ - ಹೈಕಮಾಂಡ್‌ಗೆ ಗಣಿಗ ರವಿಕುಮಾರ್ ಎಚ್ಚರಿಕೆ!

ಮಂಡ್ಯ ಶಾಸಕ ಗಣಿಗ ರವಿಕುಮಾರ್, ರಾಜ್ಯ ಕಾಂಗ್ರೆಸ್‌ನಲ್ಲಿನ ನಾಯಕತ್ವದ ಚರ್ಚೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಡಿ.ಕೆ. ಶಿವಕುಮಾರ್ ಅವರ ಮುಖ್ಯಮಂತ್ರಿ ಹುದ್ದೆಯ ಬಗ್ಗೆ ಹೈಕಮಾಂಡ್ ಕೂಡಲೇ ಸ್ಪಷ್ಟನೆ ನೀಡಬೇಕು, ಇಲ್ಲದಿದ್ದರೆ ಪಕ್ಷ ಮತ್ತು ಸರ್ಕಾರಕ್ಕೆ ಹಾನಿಯಾಗಲಿದೆ ಎಂದು ಎಚ್ಚರಿಸಿದ್ದಾರೆ.

Read Full Story

04:00 PM (IST) Feb 18

ಸಿದ್ದಾಪುರ ವೃದ್ಧೆ ಹತ್ಯೆ ಪ್ರಕರಣ - ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿ ಶಿರಸಿ ನ್ಯಾಯಾಲಯದ ಐತಿಹಾಸಿಕ ತೀರ್ಪು

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಕಳ್ಳತನದ ಉದ್ದೇಶದಿಂದ ವೃದ್ಧೆ ಗೀತಾ ಹುಂಡೇಕರ್ ಅವರನ್ನು ಹತ್ಯೆಗೈದಿದ್ದ ಪ್ರಕರಣದಲ್ಲಿ, ಶಿರಸಿ ಜಿಲ್ಲಾ ನ್ಯಾಯಾಲಯವು ಅಪರಾಧಿ ಅಭಿಜಿತ್ ಮಡಿವಾಳನಿಗೆ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ತೀರ್ಪು ನೀಡಿದೆ.

Read Full Story

03:56 PM (IST) Feb 18

ದರ್ಶನ್ ಬಗ್ಗೆ ರವಿಮಾಮ ಹೇಳಿದ್ದು ನಿಜನಾ? 2 ತಿಂಗಳಲ್ಲಿ ದಾಸ ಹೊರಬರೋದು ಸತ್ಯಾನಾ? ಇಲ್ಲಿದೆ ಇಂಟ್ರೆಸ್ಟಿಂಗ್ ಡೀಟೈಲ್ಸ್

ನಟ ರವಿಚಂದ್ರನ್ ಅವರು ಇನ್ನೆರಡು ತಿಂಗಳಲ್ಲಿ ದರ್ಶನ್ ಜೈಲಿನಿಂದ ಹೊರಬರುತ್ತಾರೆ ಎಂದು ಹೇಳಿದ್ದಾರೆ. ಈ ಹೇಳಿಕೆಯಿಂದ ದರ್ಶನ್ ಅಭಿಮಾನಿಗಳು ಸಂತಸಗೊಂಡಿದ್ದರೂ, ರೇಣುಕಾಸ್ವಾಮಿ ಕೊ*ಲೆ ಪ್ರಕರಣದಲ್ಲಿ 272 ಸಾಕ್ಷಿಗಳಿರುವುದರಿಂದ ಇದು ಅಷ್ಟು ಸುಲಭವಲ್ಲ ಎಂದು ಈ ಲೇಖನವು ವಿಶ್ಲೇಷಿಸುತ್ತದೆ.

Read Full Story

03:53 PM (IST) Feb 18

ಬೆಂಗಳೂರು - ನಾನು ಸತ್ತ ಮೇಲೆ ಆಕೆಯನ್ನ ಯಾರು ನೋಡಿಕೊಳ್ತಾರೆಂದು ಪತ್ನಿ ಉಸಿರುಗಟ್ಟಿಸಿ ಕೊಂದ ನಿವೃತ್ತ ಇಸ್ರೋ ನೌಕರ!

ಬೆಂಗಳೂರಿನ ಅವಲಹಳ್ಳಿಯಲ್ಲಿ ನಿವೃತ್ತ ಇಸ್ರೋ ನೌಕರನೊಬ್ಬ ತನ್ನ ಪತ್ನಿಯನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾನೆ. ತಾನು ಸತ್ತ ನಂತರ ಪತ್ನಿಯನ್ನು ನೋಡಿಕೊಳ್ಳುವವರು ಯಾರು ಎಂಬ ಚಿಂತೆಯಿಂದ ಈ ಕೃತ್ಯ ಎಸಗಿದ್ದಾಗಿ ಆರೋಪಿ ಹೇಳಿಕೆ ನೀಡಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
Read Full Story

02:02 PM (IST) Feb 18

ಸರ್ಕಾರದ ಹುಳುಕು ಬಯಲು ಮಾಡಿದ್ದಕ್ಕೆ ನಡುಕ - ವಿಧಾನಸೌಧದಲ್ಲಿ ಮಾಧ್ಯಮ ನಿರ್ಬಂಧಕ್ಕೆ ವಿಪಕ್ಷಗಳ ಕೆಂಡಾಮಂಡಲ!

ರಾಜ್ಯ ಸರ್ಕಾರವು ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ನಿರ್ಬಂಧ ಹೇರಿದ್ದು, ಈ ನಿರ್ಧಾರವು ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಮತ್ತು ಜೆಡಿಎಸ್, ಸರ್ಕಾರದ ಈ ನಡೆಯನ್ನು ಪ್ರಜಾಪ್ರಭುತ್ವ ವಿರೋಧಿ ಎಂದು ಟೀಕಿಸಿದ್ದು, ಭ್ರಷ್ಟಾಚಾರ ಮುಚ್ಚಿಹಾಕುವ ಯತ್ನವೆಂದು ಆರೋಪಿಸಿದ್ದಾರೆ..

Read Full Story

01:46 PM (IST) Feb 18

ಮಕ್ಕಳಿಗೆ ಮೊಬೈಲ್ ಕೊಟ್ರೆ ಮಾತು ನಿಲ್ಲುತ್ತಾ? ಮೊಬೈಲ್ ರೇಡಿಯೇಷನ್‌ ಎಷ್ಟು ಡೇಂಜರ್ ಗೊತ್ತಾ? ಈ ತಪ್ಪು ಮಾಡ್ಬೇಡಿ

ಕೆಲಸದ ಮಧ್ಯೆ ಮಕ್ಕಳು ಕಾಟ ಕೊಟ್ಟರೆ ಅಥವಾ ಅಳುತ್ತಿದ್ದರೆ, ತಾಯಂದಿರು ಮೊಬೈಲ್ ಫೋನ್ ಕೈಗೆ ಕೊಡುತ್ತಾರೆ. ಹೀಗೆ ಪದೇ ಪದೇ ಮಾಡುವುದರಿಂದ, ಸೆಲ್ ಫೋನ್ ಮಕ್ಕಳಿಗೆ ಚಟವಾಗುವ ಅಪಾಯವಿದೆ. ಇದು ಮಕ್ಕಳಿಗೆ ಎಷ್ಟು ಅಪಾಯಕಾರಿ ಗೊತ್ತಾ?

Read Full Story

01:43 PM (IST) Feb 18

ಬಳ್ಳಾರಿ - ಪ್ರೇಮಿಗಳ ಸಾವು, ಹಣಕಾಸಿನ ವಿಚಾರಕ್ಕೆ ಮಂಗಳಮುಖಿ ಪ್ರಿಯತಮೆಯನ್ನು ಕೊಂದು ಸಾವಿಗೆ ಶರಣಾದ್ನಾ ಪ್ರೇಮಿ!

ಬಳ್ಳಾರಿಯಲ್ಲಿ ಹಣಕಾಸಿನ ವಿವಾದದ ಹಿನ್ನೆಲೆಯಲ್ಲಿ ಮಂಗಳಮುಖಿ ಸುಹಾಸಿನಿ ಮತ್ತು ಆಕೆಯ ಪ್ರಿಯಕರ ಶೇಖರ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.  ಸುಹಾಸಿನಿಯನ್ನು ಕೊಲೆ ಮಾಡಿ ಶೇಖರ್ ಆತ್ಮ*ಹತ್ಯೆ ಮಾಡಿಕೊಂಡಿರಬಹುದೆಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

Read Full Story

01:20 PM (IST) Feb 18

Ramadan 2026 - ಇಡೀ ದಿನ ಹಸಿವು ಆಗದಿರಲು ಸೆಹ್ರಿಗೆ ಇದನ್ನೆಲ್ಲಾ ತನ್ನಿ; ಇವುಗಳನ್ನು ಮುಟ್ಟಲೂಬೇಡಿ

ರಂಜಾನ್ ಉಪವಾಸದ ಸಮಯದಲ್ಲಿ, ದಿನವಿಡೀ ಚೈತನ್ಯದಿಂದಿರಲು ಬೆಳಗಿನ ಜಾವದ ಸೆಹ್ರಿ ಆಹಾರ ಬಹಳ ಮುಖ್ಯ. ಆರೋಗ್ಯಕರ ಸೆಹ್ರಿಗಾಗಿ ಪ್ರೋಟೀನ್, ಫೈಬರ್, ಮತ್ತು ಕಾರ್ಬೋಹೈಡ್ರೇಟ್‌ಯುಕ್ತ ಆಹಾರಗಳನ್ನು ಸೇವಿಸಿ ಹಾಗೂ ಎಣ್ಣೆಯುಕ್ತ, ಸಕ್ಕರೆಭರಿತ ಮತ್ತು ಸಂಸ್ಕರಿಸಿದ ಆಹಾರಗಳಿಂದ ದೂರವಿರಿ.
Read Full Story

01:08 PM (IST) Feb 18

ಬೆಂಗಳೂರು - ವೃದ್ಧೆಯ ಶೀಲ ಶಂಕಿಸಿ ಪತಿಯಿಂದಲೇ ಭೀಕರ ಕೊಲೆ; ಡ್ರೈವರ್ ಜೊತೆ ಮಾತನಾಡಿದ್ದೇ ತಪ್ಪಾಯ್ತಾ?

ಬೆಂಗಳೂರಿನ ಗೋವಿಂದರಾಜನಗರದಲ್ಲಿ, 65 ವರ್ಷದ ಪತಿಯೊಬ್ಬ ತನ್ನ 57 ವರ್ಷದ ಪತ್ನಿಯ ಶೀಲ ಶಂಕಿಸಿ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಇತ್ತೀಚೆಗೆ ಕೇರಳ ಪ್ರವಾಸಕ್ಕೆ ಹೋಗಿದ್ದಾಗ ಪತ್ನಿ ಡ್ರೈವರ್ ಜೊತೆ ಮಾತನಾಡಿದ್ದೇ ಈ ಕೃತ್ಯಕ್ಕೆ ಕಾರಣ ಎನ್ನಲಾಗಿದ್ದು, ಆರೋಪಿ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.
Read Full Story

01:07 PM (IST) Feb 18

ಬೆಂಗಳೂರು - ಹುಟ್ಟುಹಬ್ಬದ ದಿನವೇ ಭೀಕರ ಅಪಘಾತಕ್ಕೀಡಾಗಿ ಯುವಕ ಸಾವು! ಸಂಭ್ರಮದ ಮನೆಯಲ್ಲಿ ಸೂತಕ

ಬೆಂಗಳೂರಿನಲ್ಲಿ, ತನ್ನ 24ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡು ಮನೆಗೆ ಹಿಂದಿರುಗುತ್ತಿದ್ದ ಪವನ್ ಎಂಬ ಯುವಕ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾನೆ. ಸೋಲದೇವನಹಳ್ಳಿ ಬಳಿ ಆತನ ಬೈಕ್‌ಗೆ ಗೂಡ್ಸ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದ್ದು, ಸಂಭ್ರಮದ ಮನೆಯಲ್ಲಿ ಶೋಕ ಆವರಿಸಿದೆ.
Read Full Story

12:27 PM (IST) Feb 18

Naa Ninna Bidalaare - ದೆವ್ವ ಆದ್ರೆ ಏನಾಯ್ತು? ಗಂಡ-ಹೆಂಡ್ತಿ ಮಲಗಿರೋದನ್ನು ನೋಡೋದು ಎಷ್ಟು ಸರಿ?

'ನಾ ನಿನ್ನ ಬಿಡಲಾರೆ' ಧಾರಾವಾಹಿಯಲ್ಲಿ, ದೆವ್ವವಾಗಿರುವ ಅಂಬಿಕಾ, ಶರತ್ ಮತ್ತು ದುರ್ಗಾಳನ್ನು ಒಂದು ಮಾಡಲು ನಾನಾ ತಂತ್ರಗಳನ್ನು ಮಾಡುತ್ತಿದ್ದಾಳೆ. ಅವರಿಬ್ಬರು ಮಲಗಿದ್ದ ಕೋಣೆಗೆ ಬಂದು ಎಸಿ ತಾಪಮಾನ ಕಡಿಮೆ ಮಾಡಿ ಹತ್ತಿರ ತರುವ ಪ್ರಯತ್ನ ಮಾಡಿದ್ದಾಳೆ.

Read Full Story

12:27 PM (IST) Feb 18

ಬೆಂಗಳೂರಿನಲ್ಲಿ ಆನ್‌ಲೈನ್ ಬಾಡಿಗೆ ಮನೆ ಹುಡುಕುವವರೇ ಹುಷಾರ್, ಸೈಬರ್ ವಂಚಕರ ಜಾಲಕ್ಕೆ ನೀವೂ ಒಳಗಾಗೋದು ಪಕ್ಕಾ!

ಬೆಂಗಳೂರಿನಲ್ಲಿ ಆನ್‌ಲೈನ್ ಬಾಡಿಗೆ ಮನೆ ಹುಡುಕುವವರನ್ನು ಗುರಿಯಾಗಿಸಿ ಸೈಬರ್ ವಂಚಕರು ಎಐ ತಂತ್ರಜ್ಞಾನ ಬಳಸಿ ವಂಚಿಸುತ್ತಿದ್ದಾರೆ. ಐಷಾರಾಮಿ ಫ್ಲಾಟ್‌ಗಳ ನಕಲಿ ಫೋಟೋಗಳನ್ನು ಬಳಸಿ,  ವಿಸಿಟರ್ ಪಾಸ್' ಹಾಗೂ ಅಡ್ವಾನ್ಸ್ ನೆಪದಲ್ಲಿ ಹಣ ಪಡೆದು ಮೋಸ ಮಾಡುತ್ತಿದ್ದು, ವೈದ್ಯೆಯೊಬ್ಬರು ಹಣ ಕಳೆದುಕೊಂಡಿದ್ದಾರೆ.

Read Full Story

12:03 PM (IST) Feb 18

ರಮೇಶನ ಕುತಂತ್ರಕ್ಕೆ ಬಲಿಯಾದ ಕಂದಮ್ಮ - ಕರ್ಣ ಡೈರೆಕ್ಟರ್‌ಗೆ ಹಿಡಿ ಶಾಪ ಹಾಕಿದ ನೆಟ್ಟಿಗರು

ಸಾಕು ಮಗ ಕರ್ಣನ ಮೇಲಿನ ಸಿಟ್ಟಿಗೆ ಅವನಪ್ಪ ರಮೇಶ ಮಾಡುತ್ತಿರುವ ಕುತಂತ್ರ ಒಂದೆರಡಲ್ಲ. ಇದೀಗ ಕರ್ಣನ ಮೇಲಿನ ಸಿಟ್ಟಿಗೆ ಎರಡು ಮಕ್ಕಳನ್ನು ಬಲಿ ತೆಗೆದಿದ್ದು, ನೆಟ್ಟಿಗರು ನಿರ್ದೇಶಕರಿಗೇ ಉಗೀತಾ ಇದ್ದಾರೆ.

Read Full Story

11:49 AM (IST) Feb 18

ಅಭಿಮಾನ್ ಸ್ಟುಡಿಯೊ ಅರಣ್ಯ ಜಮೀನು ರದ್ದು ಪಡಿಸಲು ಸರ್ಕಾರ ಸೂಚನೆ, ಆದ್ರೆ ಕಂದಾಯ ಇಲಾಖೆ ಹಿಂದೇಟು!

ಕೆಂಗೇರಿಯ ಅಭಿಮಾನ್ ಸ್ಟುಡಿಯೋಗೆ ನೀಡಲಾಗಿದ್ದ ಭೂಮಿಯನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಲು ಸರ್ಕಾರ ಆದೇಶಿಸಿದೆ. ಆದರೆ, ಕಂದಾಯ ಇಲಾಖೆಯ ವಿಳಂಬ ಧೋರಣೆಯಿಂದಾಗಿ ಈ ಪ್ರಕ್ರಿಯೆ ನಿಂತಿದ್ದು, ಡಾ. ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಾಣದ ಕನಸು ನನೆಗುದಿಗೆ ಬಿದ್ದಿದೆ.
Read Full Story

11:49 AM (IST) Feb 18

ಮಾಧ್ಯಮಗಳನ್ನು ಹತ್ತಿಕ್ಕಲು ಮುಂದಾಯ್ತಾ ಸರ್ಕಾರ? ವಿಧಾನಸೌಧದಲ್ಲಿ 'ಫ್ರೀಡಂ ಆಫ್ ಪ್ರೆಸ್'ಗೆ ಬ್ರೇಕ್!

ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ನಿರ್ಬಂಧ! ಭದ್ರತೆಯ ನೆಪದಲ್ಲಿ DPAR ಹೊರಡಿಸಿದ ಹೊಸ ಆದೇಶದ ಹಿಂದಿನ ಅಸಲಿ ಕಾರಣವೇನು? ಸರ್ಕಾರದ ವೈಫಲ್ಯ ಮುಚ್ಚಿಕೊಳ್ಳುವ ತಂತ್ರವೇ? ಪೂರ್ಣ ವಿವರ ತಿಳಿಯಿರಿ.

Read Full Story

11:11 AM (IST) Feb 18

ಮತ್ತೆ ಶಬರಿಮಲೆ ಯಾತ್ರಿ ಕನ್ನಡಿಗರ ಮೇಲೆ ಪುಂಡಾಟ; ಕನ್ನಡ ಬಾವುಟ ಬಿಚ್ಚಿಸಿ ತಮಿಳಿಗರ ದಬ್ಬಾಳಿಕೆ!

ಶಬರಿಮಲೆ ಯಾತ್ರೆ ಮುಗಿಸಿ ಚಾಮರಾಜನಗರಕ್ಕೆ ಹಿಂತಿರುಗುತ್ತಿದ್ದ ಕನ್ನಡಿಗ ಯಾತ್ರಿಗಳ ಮೇಲೆ ತಮಿಳುನಾಡಿನ ತೂತುಕುಡಿ ಬಳಿ ಸ್ಥಳೀಯರು ದೌರ್ಜನ್ಯ ಎಸಗಿದ್ದಾರೆ. ಯಾತ್ರಿಗಳ ವಾಹನಕ್ಕೆ ಕಟ್ಟಿದ್ದ ಕನ್ನಡ ಬಾವುಟವನ್ನು ತೆಗೆಯುವಂತೆ ಒತ್ತಾಯಿಸಿ ತಮಿಳಿಗರು ಪುಂಡಾಟ ಮೆರೆದಿದ್ದಾರೆ.

Read Full Story

11:10 AM (IST) Feb 18

ಬ್ರಹ್ಮಗಂಟು - ಸೂತಕವಿದ್ರೆ ಗಂಡ-ಹೆಂಡ್ತಿ ಜೊತೆಯಾಗಿ ಮಲಗುವಂತಿಲ್ಲವಾ? ವಿರಹ ವೇದನೆಯಲ್ಲಿ ಚಿರು-ದೀಪಾ

'ಬ್ರಹ್ಮಗಂಟು' ಧಾರಾವಾಹಿಯಲ್ಲಿ, ಒಂದಾದ ಚಿರು ಮತ್ತು ದೀಪಾ ಜೋಡಿಯನ್ನು ದೂರದ ಸಂಬಂಧಿಯ ಸಾವಿನ ಸೂತಕದ ಕಾರಣ ನೀಡಿ ಪ್ರತ್ಯೇಕವಾಗಿ ಮಲಗಿಸಲಾಗುತ್ತದೆ. ಈ ಅನಿರೀಕ್ಷಿತ ಬೇರ್ಪಡುವಿಕೆಯಿಂದ ವಿರಹ ವೇದನೆ ಅನುಭವಿಸುವ ದಂಪತಿ, ವಿಡಿಯೋ ಕಾಲ್ ಮೂಲಕ ತಮ್ಮ ಪ್ರೀತಿಯನ್ನು ಹಂಚಿಕೊಳ್ಳುತ್ತಾರೆ. 

Read Full Story

10:56 AM (IST) Feb 18

ಡಾಲಿ ನಿರ್ಮಾಣದ ಚಿತ್ರದ ನಟನಿಗೆ ಶಾಕ್, ಅಭಿಮಾನಿ ಕೊಟ್ಟ ಮಚ್ಚು ಹಿಡಿದು ಎಡವಟ್ಟು, ಪೂಲೀಸರಿಂದ ನೋಟೀಸ್?

ಡಾಲಿ ಧನಂಜಯ್ ನಿರ್ಮಾಣದ 'JC: The University' ಚಿತ್ರದ ನಾಯಕ ನಟ ಪ್ರಖ್ಯಾತ್, ಚಿತ್ರಮಂದಿರದಲ್ಲಿ ಅಭಿಮಾನಿಯೊಬ್ಬ ನೀಡಿದ ಮಚ್ಚನ್ನು ಹಿಡಿದು ಪೋಸ್ ನೀಡಿದ್ದಾರೆ. ಈ ಘಟನೆಯು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದೀಗ ಪೊಲೀಸರು ನಟನಿಗೆ ನೋಟಿಸ್ ನೀಡಲು ಸಿದ್ಧತೆ ನಡೆಸಿದ್ದಾರೆ.

Read Full Story

10:24 AM (IST) Feb 18

ಆಟೋ ಓವರ್‌ಟೇಕ್ ಮಾಡಲು ಹೋಗಿ ಮಹಿಳೆ ಸೆಲ್ಫ್ ಆಕ್ಸಿಡೆಂಟ್, ಕಾರ್ ಪಲ್ಟಿ!

ಬೆಂಗಳೂರಿನ ಹೊಸ ರೋಡ್‌ನಲ್ಲಿ, ಆಟೋವನ್ನು ಓವರ್‌ಟೇಕ್ ಮಾಡಲು ಯತ್ನಿಸಿದ ಮಹಿಳಾ ಚಾಲಕಿಯ ಕಾರು ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಅಪಘಾತದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅದೃಷ್ಟವಶಾತ್ ಮಹಿಳೆ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.
Read Full Story

09:55 AM (IST) Feb 18

ರಂಜಾನ್ ಮಾಸದಲ್ಲಿ ರಿಫ್ರೆಶ್ ಅನುಭವ ನೀಡುವ ಮೊಹಬ್ಬತ್ ಕಾ ಶರಬತ್ ಪಾನೀಯ ತಯಾರಿಸುವ ವಿಧಾನ

ರಂಜಾನ್ ಮಾಸದಲ್ಲಿ ಉಪವಾಸದ ಸಮಯದಲ್ಲಿ ಸೇವಿಸುವ ವಿಶೇಷ ಪಾನೀಯವೇ ಮೊಹಬ್ಬತ್ ಕಾ ಶರಬತ್. ಹಾಲು, ಕಲ್ಲಂಗಡಿ, ಮತ್ತು ರೂಹ್‌ಅಫ್ಜಾ ಬಳಸಿ ತಯಾರಿಸುವ ಈ ಪಾನೀಯವು ದೇಹಕ್ಕೆ ತಂಪು ನೀಡಿ, ಹೊಟ್ಟೆ ತುಂಬಿದ ಅನುಭವ ನೀಡುತ್ತದೆ. ಈ ಲೇಖನದಲ್ಲಿ ಇದನ್ನು ತಯಾರಿಸುವ ಸರಳ ವಿಧಾನವನ್ನು ವಿವರಿಸಲಾಗಿದೆ.
Read Full Story

09:43 AM (IST) Feb 18

ಮಂಗಳೂರು ಪೊಲೀಸರಿಗೆ ವರ್ಷದೊಳಗೆ 100 ವಸತಿಗೃಹ - ಗೃಹಸಚಿವ ಪರಮೇಶ್ವರ್ ಭರವಸೆ

ಗೃಹ ಸಚಿವ ಡಾ.ಜಿ. ಪರಮೇಶ್ವರ್ ಮಂಗಳೂರಿಗೆ ಭೇಟಿ ನೀಡಿ, ನಗರ ಪೊಲೀಸ್‌ ಸಿಬ್ಬಂದಿಗೆ ಮುಂದಿನ ವರ್ಷದೊಳಗೆ 100 ಹೊಸ ವಸತಿಗೃಹಗಳನ್ನು ಮಂಜೂರು ಭರವಸೆ ನೀಡಿದ್ದಾರೆ. ಡ್ರಗ್ಸ್ ಮುಕ್ತ ಕರ್ನಾಟಕ ನಿರ್ಮಾಣ ಮತ್ತು ನಗರದ ಜಿಲ್ಲಾ ಕಾರಾಗೃಹವನ್ನು ಶೀಘ್ರದಲ್ಲೇ ಸ್ಥಳಾಂತರಿಸುವ ಬಗ್ಗೆಯೂ  ಮಾತನಾಡಿದರು.

Read Full Story

09:21 AM (IST) Feb 18

Valentine s Day Special - ಪ್ರೇಮಿಗಳ ದಿನಕ್ಕೆ ಬೆಂಗ್ಳೂರಿಂದ 6 ಕೋಟಿ ಗುಲಾಬಿ ರಫ್ತು!

ಪ್ರೇಮಿಗಳ ದಿನದ ಪ್ರಯುಕ್ತ ಬೆಂಗಳೂರಿನಿಂದ 6 ಕೋಟಿ ಗುಲಾಬಿ ಹೂವುಗಳನ್ನು ದೇಶ-ವಿದೇಶಗಳಿಗೆ ರಫ್ತು. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ನಡೆದ ಈ ಬೃಹತ್ ರಫ್ತು, ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.38ರಷ್ಟು ಹೆಚ್ಚಳ. ಸಿಂಗಾಪುರ, ಲಂಡನ್, ದೆಹಲಿ, ಕೋಲ್ಕತಾದಂತಹ ನಗರಗಳಿಗೆ ಹೂವುಗಳು ಪೂರೈಕೆ

Read Full Story

More Trending News