LIVE NOW
Published : Jun 14, 2026, 06:43 AM ISTUpdated : Jun 14, 2026, 04:25 PM IST

Karnataka News Live: ನಿಮ್ಮ ಕಳೆದ ಶತ್ರುವೇ ಈ ಜನ್ಮದಲ್ಲಿ ನಿಮ್ಮ ಗಂಡ / ಹೆಂಡತಿಯಾಗಿರ್ತಾರೆ; ಸತ್ಯ ಬಿಚ್ಚಿಟ್ಟ ಆಧ್ಯಾತ್ಮಿಕ ಗುರು

ಸಾರಾಂಶ

ಬೆಂಗಳೂರು: ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಅವರ ರಾಜೀನಾಮೆಗೆ ಆಗ್ರಹಿಸಿ ಕಾಕ್ರೋಚ್‌ ಜನತಾ ಪಾರ್ಟಿ(ಸಿಜೆಪಿ) ಭಾನುವಾರ ಸಂಜೆ 4 ಗಂಟೆಗೆ ನಗರದ ಸ್ವಾತಂತ್ರ ಉದ್ಯಾನದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದೆ.

ಈ ಕುರಿತು ಶನಿವಾರ ಸುದ್ದಿಗಾರರೊಂದಿಗೆ ಸಿಜೆಪಿ ಪಕ್ಷದ ರಾಷ್ಟ್ರೀಯ ಮುಖ್ಯ ವಕ್ತಾರ ಸೌರವ್‌ ದಾಸ್‌ ಮಾತನಾಡಿ, ಧರ್ಮೆಂದ್ರ ಪ್ರಧಾನ್‌ ಅವರ ರಾಜೀನಾಮೆಗೆ ಆಗ್ರಹಿಸಿ ಭಾನುವಾರ ಬೃಹತ್‌ ಪ್ರತಿಭಟನೆಗೆ ಕರೆ ನೀಡಲಾಗಿದೆ. ಬೆಳಗ್ಗೆ 11 ಗಂಟೆಗೆ ನಟ ಪುನೀತ್‌ ರಾಜ್‌ಕುಮಾರ್‌ ಅವರ ಸಮಾಧಿಗೆ ಪುಷ್ಪ ನಮನ ಸಲ್ಲಿಸಲಾಗುವುದು. ಸಂಜೆ 4 ಗಂಟೆಯಿಂದ 6 ಗಂಟೆ ವರೆಗೆ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.

04:25 PM (IST) Jun 14

ನಿಮ್ಮ ಕಳೆದ ಶತ್ರುವೇ ಈ ಜನ್ಮದಲ್ಲಿ ನಿಮ್ಮ ಗಂಡ / ಹೆಂಡತಿಯಾಗಿರ್ತಾರೆ; ಸತ್ಯ ಬಿಚ್ಚಿಟ್ಟ ಆಧ್ಯಾತ್ಮಿಕ ಗುರು

Enemy Of Your Past Life Is Your Husband or Wife: ಕಳೆದ ಜನ್ಮದ ಶತ್ರುವೇ ಈ ಜನ್ಮದ ಸಂಗಾತಿ! ಈ ಮಾತು ಕೇಳಿ ಕಂಗಾಲಾಗಬೇಡಿ. ಇದು ಮದುವೆಯೋ ಅಥವಾ ಕರ್ಮದ ಜಾಲವೋ? ಹೌದು, ಈ ಡೌಟ್‌ ಬರೋದು ಸಹಜ. Dr Manmit ಎನ್ನುವ ಆಧ್ಯಾತ್ಮಿಕ ಗುರು ಈ ಬಗ್ಗೆ ಮಾತನಾಡಿದ್ದಾರೆ.

Read Full Story

03:20 PM (IST) Jun 14

ಒಂದೇ ಒಂದು ಸಾಂಗ್ಸ್‌ಗೆ ಇಂದು ಕೋಟಿ ಸಂಭಾವನೆ ಪಡೆಯುವ ನಟಿ ಸಮಂತಾಗೆ ಬಾಲ್ಯದಲ್ಲಿ ಏನಾಗಿತ್ತು ಗೊತ್ತಾ?

ಬಾಲ್ಯದಲ್ಲಿ ಬಡತನವನ್ನು ಕಂಡು, ಇಂದು ಇಡೀ ಭಾರತೀಯ ಚಿತ್ರರಂಗವೇ ತನ್ನತ್ತ ತಿರುಗಿ ನೋಡುವಂತೆ ಮಾಡಿರುವ ನಟಿ ಸಮಂತಾ ರುತ್ ಪ್ರಭು ಅವರ ಜೀವನದ ಕಥೆ ಯಾವುದೇ ಸಿನಿಮಾ ಕಥೆಗಿಂತ ಕಡಿಮೆ ಇಲ್ಲ. ಈ ಸ್ಟೋರಿ ನೋಡಿ..

Read Full Story

01:46 PM (IST) Jun 14

ಡಿವೋರ್ಸ್ ಬಗ್ಗೆ ಇರೋ 'ಸತ್ಯ ಸಂಗತಿ' ಹೇಳಿ ಕೊನೆಗೂ ಮನಸ್ಸು ಹಗುರ ಮಾಡಿಕೊಂಡ ಚಂದನ್ ಶೆಟ್ಟಿ!

ನಮಗಿಬ್ಬರಿಗೂ ಮುಗಿದ ಹೋದ ಆ ಅಧ್ಯಾಯದ ಬಗ್ಗೆ ಮಾತನ್ನಾಡಲು ಈಗ ಏನೂ ಇಲ್ಲ, ಮಾತನ್ನಾಡುವ ಅಗತ್ಯವಾಗಲೀ ಮನಸ್ಸಾಗಲೀ ಇಲ್ಲ. ಆದರೂ ಈಗ ಕೇಳಿರೋದಕ್ಕೆ ಹೇಳಬೇಕಲ್ಲ ಎಂದು ಹೇಳುವುದಾದರೆ ಅದನ್ನು ಹೀಗೆ ಹೇಳಬಹುದು... ಕೊನೆಗೂ ಸತ್ಯ ಬಾಯ್ಬಿಟ್ಟ ಚಂದನ್ ಶೆಟ್ಟಿ..

Read Full Story

12:46 PM (IST) Jun 14

'ನಾನು ಅವರನ್ನು ಅಪ್ಪಿಕೊಳ್ಳಲ್ಲ..' ರಾಹುಲ್ ಗಾಂಧಿ ಹೊಸ ವಿವಾದ ಸೃಷ್ಟಿ, ಕಾಂಗ್ರೆಸ್ ವಿರುದ್ಧ ಸಿಪಿಎಂ ನಾಯಕರು ವಾಗ್ದಾಳಿ!

ಇಂಡಿಯಾ ಒಕ್ಕೂಟದ ಸಭೆಯಲ್ಲಿ ಕೇರಳದ ಮಾಜಿ ಸಿಎಂ ಪಿಣರಾಯಿ ವಿಜಯನ್ ಅವರನ್ನು ಅಪ್ಪಿಕೊಳ್ಳಲು ರಾಹುಲ್ ಗಾಂಧಿ ನಿರಾಕರಿಸಿದ್ದಾರೆ ಎನ್ನಲಾದ ಹೇಳಿಕೆ ತೀವ್ರ ವಿವಾದ ಸೃಷ್ಟಿಸಿದೆ. ಈ ಘಟನೆಯು ಇಂಡಿಯಾ ಮೈತ್ರಿಕೂಟದೊಳಗಿನ ಭಿನ್ನಾಭಿಪ್ರಾಯಗಳನ್ನು ಬಹಿರಂಗ.

Read Full Story

12:44 PM (IST) Jun 14

ತನಿಷಾ ಕುಪ್ಪಂಡಗೆ ಬಾಡಿ ಶೇಮಿಂಗ್ - ಟ್ರೋಲರ್ಸ್‌ಗಳಿಗೆ ಖಡಕ್ ಉತ್ತರ ನೀಡಿದ ಕಿಶನ್ ಬಿಳಗಲಿ

ಬಿಗ್‌ಬಾಸ್‌ ಖ್ಯಾತಿಯ ಕಿಶನ್ ಬಿಳಗಲಿ ಮತ್ತು ತನಿಷಾ ಕುಪ್ಪಂಡ ಅವರು ವಿಧಾನಸೌಧದ ಮುಂದೆ 'ದತ್ತ' ಚಿತ್ರದ ಹಾಡಿಗೆ ಮಾಡಿದ ನೃತ್ಯವು ವಿವಾದಕ್ಕೆ ಕಾರಣವಾಗಿದೆ. ಈ ವಿಡಿಯೋಗೆ ತನಿಷಾ ಅವರ ದೇಹದ ಬಗ್ಗೆ ನಕಾರಾತ್ಮಕ ಕಾಮೆಂಟ್‌ಗಳು ಬಂದಿದ್ದು, ಬಾಡಿ ಶೇಮಿಂಗ್ ಮಾಡದಂತೆ ಕಿಶನ್ ಮನವಿ ಮಾಡಿದ್ದಾರೆ.
Read Full Story

11:28 AM (IST) Jun 14

Karnataka Police - ಶಾಸಕರ ಶಿಫಾರಸಿಲ್ಲದೆ ಇನ್ನು ಪೊಲೀಸ್ ವರ್ಗಾವಣೆ? ಗೃಹ ಇಲಾಖೆ ಮಹತ್ವದ ಬದಲಾವಣೆ!

ರಾಜ್ಯ ಪೊಲೀಸ್ ಇಲಾಖೆಯಲ್ಲಿ ಶಾಸಕರ ಶಿಫಾರಸು ಪತ್ರಗಳ ಹಸ್ತಕ್ಷೇಪವಿಲ್ಲದೆ, ಪಾರದರ್ಶಕ ವರ್ಗಾವಣೆಗಾಗಿ ಕೌನ್ಸೆಲಿಂಗ್ ವ್ಯವಸ್ಥೆ ಜಾರಿಗೊಳಿಸಲು ಗೃಹ ಇಲಾಖೆ ಚಿಂತನೆ. ಗೃಹ ಸಚಿವ ಪ್ರಿಯಾಂಕ್ ಖರ್ಗೆ ಈ ಹೊಸ ನೀತಿ ಜಾರಿಗೆ ತರಲು ಉತ್ಸುಕರಾಗಿದ್ದು, ಇದು ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸುವ ಸಾಧ್ಯತೆಯಿದೆ.

Read Full Story

10:52 AM (IST) Jun 14

Cockroach janata party - ಬೆಂಗಳೂರಿನಲ್ಲಿಂದು 'ಜಿರಳೆ'ಗಳ ಪ್ರತಿಭಟನೆ; ನಟ ಪ್ರಕಾಶ್ ರಾಜ್ ಭಾಗಿ!

ನೀಟ್ ಪೇಪರ್ ಲೀಕ್ ವಿರೋಧಿಸಿ ಬೆಂಗಳೂರಿನಲ್ಲಿ ಇಂದು 'ಕಾಕ್ರೋಚ್ ಜನತಾ ಪಾರ್ಟಿ' (ಸಿಜೆಪಿ) ಪ್ರತಿಭಟನೆ ನಡೆಸಲಿದೆ. ಈ ಪ್ರತಿಭಟನೆಯಲ್ಲಿ ಖ್ಯಾತ ನಟ ಹಾಗೂ ಹೋರಾಟಗಾರ ಪ್ರಕಾಶ್ ರಾಜ್ ಭಾಗವಹಿಸಲಿದ್ದಾರೆ. ಈ ಬಗ್ಗೆ ಸಿಜೆಪಿ ಮತ್ತು ಪ್ರಕಾಶ್ ರಾಜ್ ಇಬ್ಬರೂ X (ಟ್ವಿಟರ್) ನಲ್ಲಿ ಖಚಿತಪಡಿಸಿದ್ದಾರೆ.
Read Full Story

10:26 AM (IST) Jun 14

ಬೆಂಗಳೂರು ನಗರದಲ್ಲಿ 1 ಲಕ್ಷ ಗಿಡಗಳ ನಾಟಿಗೆ ಸಿದ್ಧತೆ; ಪ್ರತಿ ಪಾಲಿಕೆಗೂ 30 ಸಾವಿರ ಸಸಿ ನೆಡಲು ಸೂಚನೆ!

ಬೆಂಗಳೂರು ನಗರದಲ್ಲಿ ಬೀಳುವ ಮರಗಳ ಸಮಸ್ಯೆ ತಡೆಯಲು ಅರಣ್ಯ ಇಲಾಖೆ ಹೊಸ ಯೋಜನೆ ರೂಪಿಸಿದೆ. ಗುಲ್ ಮೊಹರ್, ಸ್ಪೆತೋಡಿಯಾ ಬದಲಿಗೆ ನೇರಳೆ, ಬುಗುರಿಯಂತಹ ಸುಮಾರು 1 ಲಕ್ಷ ಉಪಯುಕ್ತ ಗಿಡಗಳನ್ನು ನೆಡಲು ತೀರ್ಮಾನ, ಇವುಗಳಿಂದ ಭವಿಷ್ಯದಲ್ಲಿ ನಗರದ ನಿವಾಸಿಗಳಿಗೆ ಉಚಿತ ಹಣ್ಣು ಮತ್ತು ಔಷಧೀಯ ಲಾಭಗಳು ದೊರೆಯಲಿವೆ.

Read Full Story

09:57 AM (IST) Jun 14

Kannada vs Hindi - ಕರ್ನಾಟಕದಲ್ಲಿ ನನ್ನ ಮೇಲೆ ದೌರ್ಜನ್ಯ ಆಗ್ತಿದೆ; ಕನ್ನಡ ಕಲಿತ ತಮಿಳು ಹುಡುಗಿ ಆರೋಪ

Kannada vs Hindi apartment issue: ಕರ್ನಾಟಕದಲ್ಲಿ ಅದರಲ್ಲಿ ಬೆಂಗಳೂರಿನಲ್ಲಿ ಅನೇಕ ಭಾಷೆಗಳನ್ನು ಮಾತನಾಡುವ ಜನರಿದ್ದಾರೆ. ಈಗ ಬೆಂಗಳೂರಿನಲ್ಲಿ ಕನ್ನಡ ಕಲಿಯುತ್ತಿರುವ ತಮಿಳುನಾಡಿನ ಮಹಿಳೆಗೆ ಹಿಂದಿ ಮಾತನಾಡಿ ಎಂದು ಸೆಕ್ಯೂರಿಟಿ ಗಾರ್ಡ್‌ ದೌರ್ಜನ್ಯ ಮಾಡಿದ್ದಾರೆ ಎಂಬ ಆರೋಪದ ವಿಡಿಯೋ ವೈರಲ್‌ ಆಗ್ತಿದೆ.

Read Full Story

09:28 AM (IST) Jun 14

Sri Raghavendra Mahathme Serial - ಕಲಿಯುಗದ ಕಲ್ಪತರು ಶ್ರೀ ಗುರು ರಾಘವೇಂದ್ರ ತೀರ್ಥ, ರಾಯರ ಪಟ್ಟಾಭಿಷೇಕದ ಎಪಿಸೋಡ್

Sri raghavendra mahatme serial director: ಶ್ರೀ ರಾಘವೇಂದ್ರ ಮಹಾತ್ಮೆ' ಧಾರಾವಾಹಿಯಲ್ಲಿ ರಾಯರ ಜೀವನದ ಪವಿತ್ರ ಪಯಣವಿದೆ. ಗುರು ರಾಯರ ಮಹಿಮೆಯನ್ನು ತೆರೆ ಮೇಲೆ ಅಚ್ಚುಕಟ್ಟಾಗಿ ತರುವ ಪ್ರಯತ್ನ ಮಾಡಲಾಗುತ್ತಿದೆ. ಈ ವಾರ ಕಲಿಯುಗದ ಕಲ್ಪತರು ಶ್ರೀ ಗುರು ರಾಘವೇಂದ್ರ ತೀರ್ಥ ಆಗಮನವಾಗಿದೆ.

Read Full Story

08:55 AM (IST) Jun 14

ಹೆದ್ದಾರಿ ಡಿವೈಡರ್ ಮಧ್ಯದಲ್ಲಿ ಹೊಸ ಮುರಿನಕಟ್ಟೆ ನಿರ್ಮಾಣಕ್ಕೆ ಸಿದ್ಧತೆ - ಹಿಂದೂ ಸಂಘಟನೆಗಳಿಂದ ವಿರೋಧ

ಭಟ್ಕಳದಲ್ಲಿ ಧ್ವಂಸಗೊಂಡಿದ್ದ ಮುರಿನಕಟ್ಟೆಯನ್ನು ರಾಷ್ಟ್ರೀಯ ಹೆದ್ದಾರಿಯ ಡಿವೈಡರ್ ಮಧ್ಯೆ ನಿರ್ಮಿಸಲು ಸಿದ್ಧತೆ ನಡೆಸಲಾಗುತ್ತಿದೆ. ಈ ಸ್ಥಳವು ಪೂಜೆಗೆ ಮತ್ತು 'ಮಾರಿ ಹೊರೆ' ಇಡಲು ಸೂಕ್ತವಲ್ಲ ಎಂದು ಹಿಂದೂ ಸಂಘಟನೆಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಈ ನಿರ್ಧಾರವನ್ನು ವಿರೋಧಿಸಿವೆ.
Read Full Story

08:32 AM (IST) Jun 14

ಸರ್ಕಾರಿ ಆಂಗ್ಲ ಶಾಲೇಲಿ ಕಲಿತ 30,000 ಮಕ್ಕಳು ಅತಂತ್ರ! ಬಿಇಒ, ಡಿಡಿಪಿಐ ಯಾರಿಂದಲೂ ಸ್ಪಷ್ಟ ಉತ್ತರವಿಲ್ಲ! ಯಾರನ್ನು ಕೇಳುವುದು?

2018-19ರಲ್ಲಿ ಆರಂಭವಾದ 1001 ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ 7ನೇ ತರಗತಿ ಪೂರೈಸಿದ ಸುಮಾರು 30 ಸಾವಿರ ವಿದ್ಯಾರ್ಥಿಗಳ ಭವಿಷ್ಯ ಅತಂತ್ರ. ಸರ್ಕಾರವು 8ನೇ ತರಗತಿಗೆ ಆಂಗ್ಲ ಮಾಧ್ಯಮ ಪ್ರೌಢಶಾಲೆ ಆರಂಭಿಸದ ಕಾರಣ, ಎಲ್ಲಿಗೆ ಪ್ರವೇಶ ಪಡೆಯಬೇಕೆಂಬ ಗೊಂದಲದಲ್ಲಿ ವಿದ್ಯಾರ್ಥಿಗಳು ಮತ್ತು ಪಾಲಕರಿದ್ದಾರೆ.

Read Full Story

08:25 AM (IST) Jun 14

ಕೇಂದ್ರ ಸರ್ಕಾರ ನೀಡುವ ವಿದ್ಯಾರ್ಥಿ ವೇತನಕ್ಕೆ ಮಂಡ್ಯದ ಮೂವರು ವಿದ್ಯಾರ್ಥಿಗಳು ಆಯ್ಕೆ

ಮಂಡ್ಯದ ವಿ.ಸಿ.ಫಾರಂ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮೂವರು ವಿದ್ಯಾರ್ಥಿನಿಯರು ಕೇಂದ್ರ ಸರ್ಕಾರದ ರಾಷ್ಟ್ರೀಯ ಮೀನ್ಸ್‌ ಕಮ್‌ ಮೆರಿಟ್‌ ಸ್ಕಾಲರ್‌ಷಿಪ್ (ಎನ್‌ಎಂಎಂಎಸ್‌) ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. 2025-26ನೇ ಸಾಲಿನ ಈ ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾಗುವ ಮೂಲಕ ಈ ವಿದ್ಯಾರ್ಥಿನಿಯರು ಶಾಲೆಗೆ ಕೀರ್ತಿ ತಂದಿದ್ದಾರೆ.
Read Full Story

08:12 AM (IST) Jun 14

Naxal - ನಕ್ಸಲ್ಸರಿಗೆ ₹92 ಕೋಟಿ ದೇಣಿಗೆ - ರಾಜ್ಯದ ಈ ನಾಲ್ವರು ಸೇರಿ 7 ಮಂದಿ ವಿರುದ್ಧ FIR!

ಭಾರತದಲ್ಲಿ ನಕ್ಸಲ್ ಚಟುವಟಿಕೆ ನಡೆಸಲು 92 ಕೋಟಿ ರೂ. ವಿದೇಶಿ ದೇಣಿಗೆ ನೀಡಿದ ಆರೋಪದ ಮೇಲೆ ಅಮೆರಿಕದ 'ದಿ ತಿಮೋತಿ ಇನಿಶಿಯೇಟಿವ್' (ಟಿಟಿಐ) ಕ್ರಿಶ್ಚಿಯನ್ ಮಿಷನರಿ ಸಂಸ್ಥೆ ಹಾಗೂ ಕರ್ನಾಟಕದ ನಾಲ್ವರು ಸೇರಿದಂತೆ ಒಟ್ಟು ಏಳು ಮಂದಿ ವಿರುದ್ಧ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

Read Full Story

08:07 AM (IST) Jun 14

10 ದಿನದಲ್ಲಿ ಪೂಜೆ ಮಾಡಿಸದಿದ್ರೆ ಸೋದರನ ಸಾವು - ಬೆಂಗಳೂರಿನ ಮಹಿಳಾ ಟೆಕ್ಕಿಗೆ ವಂಚನೆ

ವೈಟ್‌ಫೀಲ್ಡ್‌ನಲ್ಲಿ, ಸಹೋದರನಿಗೆ ಗಂಡಾಂತರವಿದೆ, ಪೂಜೆ ಮಾಡಿಸದಿದ್ದರೆ 10 ದಿನದಲ್ಲಿ ಸಾಯುತ್ತಾನೆ ಎಂದು ಹೆದರಿಸಿ ಮಹಿಳಾ ಟೆಕ್ಕಿಯೊಬ್ಬರಿಗೆ ವಂಚಿಸಲಾಗಿದೆ. ಪೂಜೆಯ ನೆಪದಲ್ಲಿ ಮನೆಗೆ ಬಂದ ಆರೋಪಿಗಳು, ಸುಮಾರು 7 ಲಕ್ಷ ಮೌಲ್ಯದ 35 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಈ ಸಂಬಂಧ ನವೀದಾ ಸುಲ್ತಾನ ಮತ್ತು ಪರ್ವೇಜ್​ ವಿರುದ್ಧ ಪ್ರಕರಣ ದಾಖಲಾಗಿದೆ.
Read Full Story

07:54 AM (IST) Jun 14

Haveri - ಮಕ್ಕಳನ್ನೇ ಜೋಡೆತ್ತು ಮಾಡಿ ಎಡೆಕುಂಟೆ ಹೊಡೆದ ಅಪ್ಪ; ಎತ್ತುಗಳ ಖರೀದಿಗಿಲ್ಲ ಹಣ

ಹಾವೇರಿ ಜಿಲ್ಲೆಯ ರೈತ ಶಂಕರಪ್ಪ ಲಮಾಣಿ, ಎತ್ತುಗಳನ್ನು ಖರೀದಿಸಲು ಹಣವಿಲ್ಲದೆ, ತಮ್ಮ ಎಲೆಕೋಸು ಬೆಳೆಯಲ್ಲಿನ ಕಳೆ ತೆಗೆಯಲು ಇಬ್ಬರು ಮಕ್ಕಳನ್ನೇ ಜೋಡೆತ್ತುಗಳಂತೆ ಬಳಸಿದ್ದಾರೆ. ಈ ಘಟನೆಯು ಸಾಲ ಮಾಡಿ ಕೃಷಿ ಮಾಡುವ ರೈತರ ಸಂಕಷ್ಟ ಮತ್ತು ಅಸಹಾಯಕ ಪರಿಸ್ಥಿತಿಯನ್ನು ಎತ್ತಿ ತೋರಿಸುತ್ತದೆ.
Read Full Story

07:38 AM (IST) Jun 14

ಗ್ರಾಮವನ್ನು ದೇವಸ್ಥಾನಕ್ಕೆ ದಾನ ನೀಡಿದ ಮಾಹಿತಿ ವಿಜಯನಗರ ಕಾಲದ ಶಾಸನ ಕಂಪ್ಲಿಯಲ್ಲಿ ಪತ್ತೆ

ವಿಜಯನಗರ ಸಾಮ್ರಾಜ್ಯದ 16ನೇ ಶತಮಾನದ ಅಪರೂಪದ ಶಾಸನವೊಂದು ಪತ್ತೆಯಾಗಿದೆ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಮೀಪ ಮಣ್ಣಿನಲ್ಲಿ ಹೂತು ಹೋಗಿದ್ದ ಈ ಶಾಸನವನ್ನು ಸ್ಥಳೀಯ ಗ್ರಾಮಸ್ಥರು ಇತ್ತೀಚೆಗೆ ಗುರುತಿಸಿ ಸುರಕ್ಷಿತವಾಗಿ ಸಂರಕ್ಷಿಸಿರುವುದು ಇತಿಹಾಸಾಸಕ್ತರ ಮೆಚ್ಚುಗೆಗೆ ಪಾತ್ರವಾಗಿದೆ.

Read Full Story

07:16 AM (IST) Jun 14

ಕಾಪು ವಿದ್ಯಾರ್ಥಿಗಳಿಂದ ‘ಡ್ಯುಯಲ್ ಆಕ್ಸಿಸ್ ಸೋಲಾರ್ ಟ್ರಾಕಿಂಗ್ ಸಿಸ್ಟಮ್’ ವಿನ್ಯಾಸ

ಬಂಟಕಲ್ಲಿನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು 'ಡ್ಯುಯಲ್ ಆಕ್ಸಿಸ್ ಸೋಲಾರ್ ಟ್ರಾಕಿಂಗ್ ಸಿಸ್ಟಮ್' ಅನ್ನು ಅಭಿವೃದ್ಧಿಪಡಿಸಿದ್ದಾರೆ. ಈ ವ್ಯವಸ್ಥೆಯು ಸೌರ ಫಲಕವನ್ನು ಸೂರ್ಯನ ಚಲನೆಗೆ ಅನುಗುಣವಾಗಿ ಸ್ವಯಂಚಾಲಿತವಾಗಿ ತಿರುಗಿಸಿ, ವರ್ಷಪೂರ್ತಿ ಗರಿಷ್ಠ ಸೌರ ವಿದ್ಯುತ್ ಉತ್ಪಾದಿಸಲು ನೆರವಾಗುತ್ತದೆ.
Read Full Story

07:06 AM (IST) Jun 14

ಮಂಗಳೂರು-ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿ ಬಳಿ ಕೆತ್ತಿಕಲ್ಲು ಗುಡ್ಡ ಕುಸಿತ; ಆತಂಕ ಸೃಷ್ಟಿ

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಶನಿವಾರ ಉತ್ತಮ ಮಳೆಯಾಗಿದ್ದು, ಮಂಗಳೂರು-ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿಯ ವಾಮಂಜೂರು ಸಮೀಪದ ಕೆತ್ತಿಕಲ್ಲು ಗುಡ್ಡ ಮತ್ತೆ ಕುಸಿದಿದೆ. ಈ ಘಟನೆಯಿಂದಾಗಿ ವಾಹನ ಸವಾರರಲ್ಲಿ ಆತಂಕ ಸೃಷ್ಟಿಯಾಗಿದ್ದು, ಒಂದು ಬದಿಯ ಸಂಚಾರವನ್ನು ನಿರ್ಬಂಧಿಸಲಾಗಿದೆ.

Read Full Story

More Trending News