Published : Mar 12, 2025, 07:24 AM ISTUpdated : Mar 12, 2025, 11:12 PM IST

Karnataka News Live 12th March: ಗೆಳತಿ ಪಕ್ಕ ಮಲಗಿದ್ದ ಮಾಲೀಕನಿಗೆ ಗುಂಡಿಕ್ಕಿದ ಪಿಟ್‌ಬುಲ್ ನಾಯಿ

ಸಾರಾಂಶ

ಬೆಂಗಳೂರು (ಮಾ.11): ಗ್ಯಾರಂಟಿ ಜಾರಿ ಸಮಿತಿಗೆ ಕಾಂಗ್ರೆಸ್‌ ಕಾರ್ಯಕರ್ತರನ್ನು ನೇಮಿಸಿ ಅವರಿಗೆ ಸರ್ಕಾರದ ವತಿಯಿಂದಲೇ ಗೌರವಧನ ನೀಡುತ್ತಿರುವುದಕ್ಕೆ ವಿಪಕ್ಷ ಬಿಜೆಪಿ ಭಾರೀ ಆಕ್ರೋಶ ವ್ಯಕ್ತಪಡಿಸಿದೆ. ಸದನದಲ್ಲಿ ಇದೇ ವಿಚಾರವಾಗಿ ಭಾರೀ ಮಾತಿನ ಪ್ರಹಾರ ನಡೆದಿದೆ. ಯಾವ ನಿಯಮಾವಳಿಯಲ್ಲಿ ಅವಕಾಶವಿದೆ ಎಂದು ಪ್ರಶ್ನಿಸಿ ಬಿಜೆಪಿ ತರಾಟೆಗೆ ತೆಗೆದುಕೊಂಡಿದೆ. ಇನ್ನೊಂದೆಡೆ    ಗೋಲ್ಡ್‌ ಸ್ಮಗ್ಲರ್‌ ರನ್ಯಾರಾವ್‌ ಕೇಸ್‌ನಲ್ಲಿ ಆಕೆಯ ತಂದೆ ಡಿಜಿಪಿ ವಿರುದ್ಧ ಹೆಚ್ಚುವರಿ ಸಿಎಸ್‌ ತನಿಖೆ ಆರಂಭಿಸಿದ್ದಾರೆ. ಇಬ್ಬರು ಸಚಿವರ ಪಾತ್ರವೂ ಕೂಡ ಈ ಕೇಸ್‌ನಲ್ಲಿರುವುದು ಸರ್ಕಾರದ ಸಂಕಷ್ಟಕ್ಕೆ ಕಾರಣವಾಗಿದೆ.

Karnataka News Live 12th March: ಗೆಳತಿ ಪಕ್ಕ ಮಲಗಿದ್ದ ಮಾಲೀಕನಿಗೆ ಗುಂಡಿಕ್ಕಿದ ಪಿಟ್‌ಬುಲ್ ನಾಯಿ

11:12 PM (IST) Mar 12

ಗೆಳತಿ ಪಕ್ಕ ಮಲಗಿದ್ದ ಮಾಲೀಕನಿಗೆ ಗುಂಡಿಕ್ಕಿದ ಪಿಟ್‌ಬುಲ್ ನಾಯಿ

ಅಮೆರಿಕಾದಲ್ಲಿ ನಾಯಿಯೊಂದು ಆಕಸ್ಮಿಕವಾಗಿ ತನ್ನ ಮಾಲೀಕನಿಗೆ ಗುಂಡಿಕ್ಕಿದೆ. ಹಾಸಿಗೆಯಲ್ಲಿದ್ದ ಲೋಡೆಡ್ ಗನ್ ಮೇಲೆ ನಾಯಿಯ ಕಾಲು ಬಿದ್ದಿದ್ದರಿಂದ ಗುಂಡು ಹಾರಿದೆ. ಅದೃಷ್ಟವಶಾತ್ ಮಾಲೀಕ ಗಾಯದೊಂದಿಗೆ ಬದುಕುಳಿದಿದ್ದಾನೆ.

ಪೂರ್ತಿ ಓದಿ

10:15 PM (IST) Mar 12

ಪಾಕ್‌ನಲ್ಲಿ ರೈಲು ಅಪಹರಣ ಪ್ರಕರಣ: ಬಲೂಚಿಸ್ತಾನದಲ್ಲಿ ಗರಿಗೆದರಿದ ಬಿಕ್ಕಟ್ಟು

ಪಾಕಿಸ್ತಾನದ ಅತ್ಯಂತ ಸಕ್ರಿಯ ಪ್ರತ್ಯೇಕತಾವಾದಿ ಗುಂಪಾದ ಬಲೋಚ್ ಲಿಬರೇಶನ್ ಆರ್ಮಿ (ಬಿಎಲ್ಎ) ಮತ್ತೊಮ್ಮೆ ಸುದ್ದಿಯಲ್ಲಿದೆ.

ಪೂರ್ತಿ ಓದಿ

09:48 PM (IST) Mar 12

ನಟಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸ್: ಸಿಐಡಿ ತನಿಖೆ ಆದೇಶ ಹಿಂಪಡೆದ ರಾಜ್ಯ ಸರ್ಕಾರ!

ನಟಿ ರನ್ಯಾ ರಾವ್ ಚಿನ್ನ ಸಾಗಣೆ ಪ್ರಕರಣವನ್ನು ಸಿಐಡಿ ತನಿಖೆಯಿಂದ ರಾಜ್ಯ ಸರ್ಕಾರ ವಾಪಸ್ ಪಡೆದಿದೆ. ಪ್ರೊಟೋಕಾಲ್ ದುರ್ಬಳಕೆ ಬಗ್ಗೆ ತನಿಖೆ ನಡೆಸಲು ಗೌರವ್ ಗುಪ್ತ ಅವರನ್ನು ನಿಯೋಜಿಸಲಾಗಿದೆ.

ಪೂರ್ತಿ ಓದಿ

09:04 PM (IST) Mar 12

ಚಿಕ್ಕಮಗಳೂರು: ಬೇಸಿಗೆಗೂ ಮುನ್ನವೇ 56 ಕಾಡ್ಗಿಚ್ಚು, ನೂರಾರು ಎಕರೆ ಅರಣ್ಯ ನಾಶ!

ಚಿಕ್ಕಮಗಳೂರಿನಲ್ಲಿ ಬೇಸಿಗೆ ಆರಂಭಕ್ಕೂ ಮುನ್ನವೇ 56 ಕಾಡ್ಗಿಚ್ಚು ಪ್ರಕರಣಗಳು ವರದಿಯಾಗಿದ್ದು, ನೂರಾರು ಎಕರೆ ಅರಣ್ಯ ನಾಶವಾಗಿದೆ. ಕಿಡಿಗೇಡಿಗಳ ಕೃತ್ಯದಿಂದ ಅರಣ್ಯಕ್ಕೆ ಬೆಂಕಿ ಬಿದ್ದಿರುವುದು ಅತೀ ಹೆಚ್ಚು ಎಂದು ಅರಣ್ಯ ಇಲಾಖೆ ವರದಿಯಿಂದ ತಿಳಿದುಬಂದಿದೆ.

ಪೂರ್ತಿ ಓದಿ

08:35 PM (IST) Mar 12

ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಭಾರಿ ಮಳೆ, ಧರೆಗುರುಳಿದ ಮರ

ದಕ್ಷಿಣ ಕನ್ನಡ, ಚಿಕ್ಕಮಗಳೂರು, ಹಾಸನ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದೆ. ಇಂದು ಸಂಜೆಯಿಂದ ಆರಂಭಗೊಂಡ ಮಳೆಗೆ ಹಲವೆಡೆ ಅವಾಂತರಗಳು ಸೃಷ್ಟಿಯಾಗಿದೆ. ಬಿರುಗಾಳಿ, ಗುಡುಗು ಸಹಿತ ಮಳೆಯಿಂದ ಹಲವರು ಹೈರಾಣಾಗಿದ್ದಾರೆ.

ಪೂರ್ತಿ ಓದಿ

08:29 PM (IST) Mar 12

ಬಾಹ್ಯಾಕಾಶದಿಂದ ಭೂಮಿಗೆ ಮರಳಿದ ಬಳಿಕ ಸುನೀತಾ ವಿಲಿಯಮ್ಸ್‌ಗೆ ಆಗಲಿದೆ Baby Feet ಅನುಭವ!

ನಾಸಾದ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಸುಮಾರು 10 ತಿಂಗಳ ಬಳಿಕ ಭೂಮಿಗೆ ಮರಳಲಿದ್ದಾರೆ. ಅವರ ಪ್ರಯಾಣವು ಗುರುತ್ವಾಕರ್ಷಣೆಗೆ ಒಗ್ಗಿಕೊಳ್ಳುವ ಸವಾಲುಗಳನ್ನು ಹೊಂದಿದೆ, ಅದರಲ್ಲಿ 'ಬೇಬಿ ಫೂಟ್' ಒಂದು.

ಪೂರ್ತಿ ಓದಿ

07:56 PM (IST) Mar 12

ಬಾಂಗ್ಲಾ ಕ್ಷಿಪ್ರಕ್ರಾಂತಿಯಲ್ಲಿ ಪ್ರಧಾನಿಯಾಗಿ ಶೇಕ್ ಹಸೀನಾ ವಾಪಸ್? ಭಾರತಕ್ಕೆ ಧನ್ಯವಾದ ತಿಳಿಸಿದ ALB

ಬಾಂಗ್ಲಾದೇಶದಲ್ಲಿ ಕ್ಷಿಪ್ರ ಕ್ರಾಂತಿ ನಡೆಯುತ್ತಿದೆಯಾ? ಹೌದು ಎನ್ನುತ್ತಿದೆ ಬಾಂಗ್ಲಾದೇಶದ ಅವಾವಿ ಲೀಗ್ ಪಕ್ಷ. ಶೇಕ್ ಹಸೀನಾ ಪ್ರಧಾನಿಯಾಗಿ ಬಾಂಗ್ಲಾದೇಶಕ್ಕೆ ಮರಳುತ್ತಿದ್ದಾರೆ. ಸುರಕ್ಷಿತವಾಗಿ ನೋಡಿಕೊಂಡ ಭಾರತಕ್ಕೆ ಅವಾಮಿ ಲೀಗ್ ಧನ್ಯವಾದ ಹೇಳಿದೆ. ಏನಿದು ಬೆಳವಣಿಗೆ.
 

ಪೂರ್ತಿ ಓದಿ

07:46 PM (IST) Mar 12

ಮನೆ ಕಟ್ಟಿ ನೋಡು: ಕನಸನ್ನು ನನಸಾಗಿಸಿಕೊಳ್ಳಿ, ಭಾರತದಲ್ಲಿ ಆಸ್ತಿ ನೋಂದಣಿ ಕಾನೂನು ಹೇಗಿದೆ?

ಭಾರತದಲ್ಲಿ ಆಸ್ತಿ ನೋಂದಣಿ ಪ್ರಕ್ರಿಯೆ, ಕಾನೂನು ಸೂಕ್ಷ್ಮತೆಗಳು ಮತ್ತು ಅಗತ್ಯ ದಾಖಲೆಗಳ ಬಗ್ಗೆ ಈ ಲೇಖನ ವಿವರಿಸುತ್ತದೆ. ಆಸ್ತಿ ಖರೀದಿಸುವಾಗ ಅಥವಾ ಮಾರಾಟ ಮಾಡುವಾಗ ಗಮನಿಸಬೇಕಾದ ಅಂಶಗಳನ್ನು ಇದು ಒಳಗೊಂಡಿದೆ.

ಪೂರ್ತಿ ಓದಿ

07:40 PM (IST) Mar 12

ಕೊಡಗು ಭೂಕಂಪನ ಖಚಿತಪಡಿಸಿದ ವಿಪತ್ತು ನಿರ್ವಹಣಾ ಇಲಾಖೆ, ರಿಕ್ಟರ್ ಮಾಪಕದಲ್ಲಿ 1.6 ತೀವ್ರತೆ!

ಕೊಡಗು ಜಿಲ್ಲೆಯ ಹಲವೆಡೆ ಭೂಮಿ ಕಂಪಿಸಿದ್ದು, ಜನರು ಆತಂಕಗೊಂಡಿದ್ದಾರೆ. ರಿಕ್ಟರ್ ಮಾಪಕದಲ್ಲಿ 1.6 ತೀವ್ರತೆ ದಾಖಲಾಗಿದ್ದು, 2018ರ ಘಟನೆಗಳನ್ನು ನೆನಪಿಸಿದೆ.

ಪೂರ್ತಿ ಓದಿ

07:21 PM (IST) Mar 12

ಸಿನಿಮಾ ನಟ, ರಿಯಾಲಿಟಿ ಶೋ ಸ್ಟಾರ್ ಆಗಿದ್ದ ವರುಣ್ ಚಕ್ರವರ್ತಿ ಇದೀಗ ಟೀಂ ಇಂಡಿಯಾ ಹೀರೋ

ವರುಣ್ ಚಕ್ರವರ್ತಿ ಮಿಸ್ಟ್ರಿ ಸ್ಪಿನ್ ಮೋಡಿ ಭಾರತಕ್ಕೆ ಚಾಂಪಿಯನ್ಸ್ ಟ್ರೋಫಿ ತಂದುಕೊಡುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದೆ. ಈಗ ವರುಣ್ ಟೀಂ ಇಂಡಿಯಾದ ಹೀರೋ. ಆದೆರೆ ಇದಕ್ಕೂ ಮೊದಲು ವರುಣ್ ಸಿನಿಮಾದಲ್ಲಿ ನಟನಾಗಿ, ರಿಯಾಲಿಟಿ ಶೋದಲ್ಲಿ ಸ್ಟಾರ್ ಆಗಿ ಮಿಂಚಿದ್ದಾರೆ.

ಪೂರ್ತಿ ಓದಿ

07:18 PM (IST) Mar 12

ಮೂವರು ಹೆಂಡಿರ ಮುದ್ದಿನ ಗಂಡ, ಮೂರನೇ ಹೆಂಡ್ತಿಯಿಂದಲೇ ಸಾವು ಕಂಡ!

ಮಂಜುನಾಥ್ ಜಾದವ್ ಎಂಬ ವ್ಯಕ್ತಿಯನ್ನು ಆತನ ಮೂರನೇ ಹೆಂಡತಿ ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಆಸ್ತಿಗಾಗಿ ಸಂಚು ರೂಪಿಸಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪೂರ್ತಿ ಓದಿ

06:51 PM (IST) Mar 12

ಕೋಲಾರದಲ್ಲಿ ಅನಾಗರಿಕ ಕೃತ್ಯ; ಮದುವೆ ವಯಸ್ಸಿಗೆ ಬಂದ ಮಗಳನ್ನೇ ಗರ್ಭಿಣಿ ಮಾಡಿದ ಅಪ್ಪ!

ಕೋಲಾರದಲ್ಲಿ ತಂದೆಯೇ ಮಗಳನ್ನು ಅತ್ಯಾಚಾರ ಮಾಡಿ ಗರ್ಭಿಣಿ ಮಾಡಿರುವ ಅಮಾನವೀಯ ಘಟನೆ ನಡೆದಿದೆ. ಹೆಂಡತಿ ತೀರಿಕೊಂಡ ಬಳಿಕ ಮೂವರು ಹೆಣ್ಣು ಮಕ್ಕಳನ್ನು ಸಾಕುತ್ತಿದ್ದ ವ್ಯಕ್ತಿ, ಹಿರಿಯ ಮಗಳ ಮೇಲೆ ಅತ್ಯಾಚಾರ ಎಸಗಿದ್ದಾನೆ.

ಪೂರ್ತಿ ಓದಿ

06:08 PM (IST) Mar 12

ಕುತ್ತಿಗೆಗೆ ಆಭರಣ, ಕಣ್ಣಿಗೆ ಸ್ಟೈಲ್ ಆಗಿ ಗಾಗಲ್ಸ್ ಧರಿಸಿಯೇ ಮಕ್ಕಳಿಗೆ ಜನ್ಮ ನೀಡಿದ್ದರು ಖ್ಯಾತ ಗಾಯಕಿ!

ಹಾಲಿವುಡ್ ಗಾಯಕಿ ರಿಹಾನ್ನಾ ಇತ್ತೀಚೆಗೆ ತನ್ನ ಡೆಲಿವರಿ ರೂಮ್ ನ ಫೋಟೊಗಳನ್ನು ಶೇರ್ ಮಾಡಿದ್ದು, ರಿಹಾನ್ನಾ ಗಾಗಲ್ಸ್ ಧರಿಸಿ, ಕುತ್ತಿಗೆಯಲ್ಲಿ ಜ್ಯುವೆಲ್ಲರಿ ಧರಿಸಿ ಸ್ಟೈಲಿಶ್ ಆಗಿಯೇ ಮಗುವಿಗೆ ಜನ್ಮ ನೀಡಿದ್ದು ನೋಡಿ ಜನ ಶಾಕ್ ಆಗಿದ್ದಾರೆ. 
 

ಪೂರ್ತಿ ಓದಿ

06:04 PM (IST) Mar 12

ಪಾಕ್ ರೈಲಿನ ಮೇಲೆ ದಾಳಿ, ಪ್ರಯಾಣಿಕರ ಒತ್ತೆಯಾಳಾಗಿಸಿದ ಮೊದಲ ವಿಡಿಯೋ ಬಿಡುಗಡೆ

ಪಾಕಿಸ್ತಾನ ರೈಲಿನ ಮೇಲೆ ಬಲೂಚಿಸ್ತಾನ ಲಿಬರೇಶನ್ ಆರ್ಮಿ(BLA) ನಡೆಸಿದ ಭೀಕರ ದಾಳಿಯ ಮೊದಲ ವಿಡಿಯೋ ಬಿಡುಗಡೆ ಮಾಡಲಾಗಿದೆ. ಪಾಕಿಸ್ತಾನ ರೈಲು ಹೈಜಾಕ್ ಮಾಡಿದ ವಿಡಿಯೋವನ್ನು ಖುದ್ದು BLA ಬಿಡುಗಡೆ ಮಾಡಿದೆ. 

ಪೂರ್ತಿ ಓದಿ

06:04 PM (IST) Mar 12

ಆಟೋಮ್ಯಾಟಿಕ್ ಅಥವಾ ಮ್ಯಾನುವಲ್ ಗೇರ್ ಕಾರು; ಯಾವುದು ಹೆಚ್ಚು ಮೈಲೇಜ್ ಕೊಡುತ್ತದೆ?

ಆಟೋಮ್ಯಾಟಿಕ್ ಮತ್ತು ಮ್ಯಾನುಯಲ್ ಗೇರ್‌ಬಾಕ್ಸ್‌ಗಳನ್ನು ಹೊಂದಿರುವ ಕಾರುಗಳು ತಮ್ಮದೇ ಆದ ಅನುಕೂಲಗಳು ಮತ್ತು ಅನಾನುಕೂಲಗಳನ್ನು ಹೊಂದಿವೆ. ಆದರೆ, ಯಾವ ಕಾರುಗಳು ಅತಿಹೆಚ್ಚು ಇಂಧನ ದಕ್ಷತೆಯನ್ನು ಹೊಂದಿವೆ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ..

ಪೂರ್ತಿ ಓದಿ

06:03 PM (IST) Mar 12

ಚೆನ್ನೈ ಭೀಕರ ಕಾರು ಅಪಘಾತದಲ್ಲಿ ದಂಪತಿ ಸಾವು, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸಂಬಂಧಿ ಬಂಧನ!

ಚೆನ್ನೈನಲ್ಲಿ ಸಂಭವಿಸಿದ ಕಾರ್ ಅಪಘಾತದಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಅಪಘಾತಕ್ಕೆ ಕಾರಣನಾದ ವ್ಯಕ್ತಿಯು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಸಂಬಂಧಿ ಎಂದು ತಿಳಿದುಬಂದಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪೂರ್ತಿ ಓದಿ

05:56 PM (IST) Mar 12

ಭಾರತದಲ್ಲಿ ಟ್ರೇಡ್‌ಮಾರ್ಕ್ ನೋಂದಣಿ ಮಾಡುವುದು ಹೇಗೆ? ನಿಯಮಗಳೇನು?

ಭಾರತದಲ್ಲಿ ಟ್ರೇಡ್‌ಮಾರ್ಕ್ ನೋಂದಣಿ ಪ್ರಕ್ರಿಯೆ, ನಿಯಮಗಳು ಮತ್ತು ಅದರ ಮಹತ್ವದ ಬಗ್ಗೆ ತಿಳಿಯಿರಿ. ಉದ್ಯಮಿಗಳು ಟ್ರೇಡ್‌ಮಾರ್ಕ್ ಅನ್ನು ಹೇಗೆ ನೋಂದಾಯಿಸಬೇಕು, ಅದರ ಅವಧಿ, ನವೀಕರಣ ಮತ್ತು ಕಾನೂನು ರಚನೆಯ ಬಗ್ಗೆ ಈ ಲೇಖನದಲ್ಲಿ ಮಾಹಿತಿ ಇದೆ.

ಪೂರ್ತಿ ಓದಿ

05:46 PM (IST) Mar 12

ಭಾರತದಲ್ಲಿ ಕ್ರಾಂತಿ ಮಾಡಿದ ಡಿಜಿಟಲ್ ಇಂಡಿಯಾಗೆ 10 ವರ್ಷದ ಸಂಭ್ರಮ

'ಡಿಜಿಟಲ್ ಇಂಡಿಯಾ' ಅಭಿಯಾನದ ಅಡಿಯಲ್ಲಿ ಭಾರತವು ಅನೇಕ ಪ್ರಮುಖ ರಾಷ್ಟ್ರಗಳಿಗೆ ಸವಾಲು ಹಾಕುವ ರೀತಿಯಲ್ಲಿ ಬೆಳದು ನಿಂತಿದೆ. ದೇಶದ ಆರ್ಥಿಕ ಅಭಿವೃದ್ಧಿಗೆ ಡಿಜಿಟಲ್ ಇಂಡಿಯಾ ಪ್ರಮುಖ ಪಾತ್ರ ವಹಿಸಿದೆ. ಭಾರತದಲ್ಲಿ ಡಿಜಿಟಲ್ ಕ್ರಾಂತಿ ಮಾಡಿದ ಡಿಜಿಟಲ್ ಇಂಡಿಯಾಗೆ 10 ವರ್ಷದ ಸಂಭ್ರಮ.

ಪೂರ್ತಿ ಓದಿ

05:43 PM (IST) Mar 12

ಚಿನ್ನ, ಬೆಳ್ಳಿ, ಪ್ಲಾಟಿನಂ.. 2025ರಲ್ಲಿ ಹೂಡಿಕೆ ಮಾಡಲು ಟಾಪ್ 5 ಬೆಲೆಬಾಳುವ ಲೋಹಗಳು

ಆರ್ಥಿಕ ಬಿಕ್ಕಟ್ಟಿನಿಂದ ಚಿನ್ನಕ್ಕೆ ಬೇಡಿಕೆ ಹೆಚ್ಚಾಗಿದೆ. ಚಿನ್ನ, ಬೆಳ್ಳಿ, ಪ್ಲಾಟಿನಂ ಹೂಡಿಕೆಗೆ ಜನಪ್ರಿಯ ಲೋಹಗಳು. 2025ರಲ್ಲಿ ಹೂಡಿಕೆ ಮಾಡಲು ದುಬಾರಿ ಲೋಹಗಳ ಪಟ್ಟಿ ಇಲ್ಲಿದೆ.

ಪೂರ್ತಿ ಓದಿ

05:41 PM (IST) Mar 12

ಯಾವ ವಯಸ್ಸಿನವರು ಎಷ್ಟು ವಾಕ್ ಮಾಡಿದ್ರೆ ಆರೋಗ್ಯಕ್ಕೆ ಒಳ್ಳೆಯದು? ಇಲ್ಲಿದೆ ಗೈಡ್

ದೇಹಕ್ಕೆ ವ್ಯಾಯಾಮ ಮುಖ್ಯ, ಅದರಲ್ಲೂ ನಡಿಗೆ ಸುಲಭವಾದ ವ್ಯಾಯಾಮ. ವಯಸ್ಕರು 8 ಕಿ.ಮೀ ನಡೆಯಬೇಕು, ಮಕ್ಕಳು ಆಟವಾಡಬೇಕು, ವೃದ್ಧರು 1-3 ಕಿ.ಮೀ ನಡೆಯುವುದು ಆರೋಗ್ಯಕ್ಕೆ ಒಳ್ಳೆಯದು.

ಪೂರ್ತಿ ಓದಿ

04:57 PM (IST) Mar 12

ಭೂಮಿ ರೀತಿ ಜೀವಿಗಳು ವಾಸಿಸಲು ಯೋಗ್ಯವಾದ ಹೊಸ ಗ್ರಹ ಪತ್ತೆ, ಇಲ್ಲಿ ಏಲಿಯನ್ ಇದೆಯಾ?

ಭೂಮಿ ರೀತಿಯಲ್ಲೇ ಜೀವಿಗಳ ವಾಸಿಸಲು ಪೂರಕವಾದ ಪರಿಸರವಿರುವ ಹೊಸ ಗ್ರಹವನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಕಳೆದ 20 ವರ್ಷಗಳಿಂದ ನಡೆಸಿದ ಅಧ್ಯಯನಕ್ಕೆ ಫಲ ಸಿಕ್ಕಿದೆ. ಸೂಪರ್ ಅರ್ಥ್ ಎಂದು ಹೆಸರಿರುವ ಈ ಗ್ರಹ,ಭೂಮಿಯಿಂದ ಎಷ್ಟು ದೂರದಲ್ಲಿದೆ? ಇಲ್ಲಿ ಜನ ವಾಸಿಸಲು ಸಾಧ್ಯವೆ?

ಪೂರ್ತಿ ಓದಿ

04:51 PM (IST) Mar 12

DRDO ನೇಮಕಾತಿ 2025: ಸೈಂಟಿಸ್ಟ್ h 2.20 ಲಕ್ಷ ಸಂಬಳ, ಪರೀಕ್ಷೆ ಇಲ್ಲದೆ ನೇರ ಸಂದರ್ಶನ!

DRDO (ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ) ಪ್ರಾಜೆಕ್ಟ್ ಸೈಂಟಿಸ್ಟ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಏಪ್ರಿಲ್ 1, 2025ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ. ಆಯ್ಕೆಯು ಪರ್ಸನಲ್ ಇಂಟರ್‌ವ್ಯೂ ಮೂಲಕ ನಡೆಯಲಿದೆ.

ಪೂರ್ತಿ ಓದಿ

04:49 PM (IST) Mar 12

ಮಕ್‌ಬಂಗ್ ವೀಡಿಯೋಗಳಿಂದಲೇ ಫೇಮಸ್ ಅಗಿದ್ದ ಟಿಕ್‌ಟಾಕ್‌ ಸ್ಟಾರ್ ಸಾವು

ಅತೀಯಾಗಿ ತಿನ್ನುವ ವೀಡಿಯೋಗಳಿಂದ ಫೇಮಸ್ ಆಗಿದ್ದ ಟಿಕ್​ಟಾಕ್ ಸ್ಟಾರ್ ಎಫೆಕನ್ ಕುಲ್ತೂರ್ 24ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಬೊಜ್ಜುತನದ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಪೂರ್ತಿ ಓದಿ

04:09 PM (IST) Mar 12

ನಟಿ ರನ್ಯಾ ಆಯ್ತು, ಈಗ ಸ್ಯಾಂಡಲ್‌ವುಡ್‌ ನ ಇಬ್ಬರು ನಟಿಯರಿಗೆ ಸುಪ್ರೀಂನಿಂದ ಬಿಗ್‌ ಶಾಕ್!

ಸ್ಯಾಂಡಲ್‌ವುಡ್ ನಟಿಯರಾದ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿ ಅವರ ಡ್ರಗ್ಸ್ ಕೇಸ್ ಮತ್ತೆ ಮುನ್ನಲೆಗೆ ಬಂದಿದೆ. ಎಫ್‌ಐಆರ್ ರದ್ದು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಸಿಸಿಬಿ ಮೇಲ್ಮನವಿ ಸಲ್ಲಿಸಿದೆ. ಹೈಕೋರ್ಟ್ ಆದೇಶವನ್ನು ರದ್ದುಗೊಳಿಸುವಂತೆ ಸಿಸಿಬಿ ಸುಪ್ರೀಂ ಕೋರ್ಟ್ ಮೆಟ್ಟಲೇರಿದೆ.

ಪೂರ್ತಿ ಓದಿ

03:55 PM (IST) Mar 12

ಮುಂದಿನ 5 ವರ್ಷ ನಾನೇ ಮುಖ್ಯಮಂತ್ರಿ ಎಂದ ಸಿದ್ದರಾಮಯ್ಯ; ನುಚ್ಚು ನೂರಾಗುತ್ತಾ ಬಂಡೆ ಕನಸು!

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸಭೆಯಲ್ಲಿ ನಾನೇ 5 ವರ್ಷ ಮುಖ್ಯಮಂತ್ರಿ ಆಗಿರುತ್ತೇನೆ ಎಂದು ಹೇಳಿದ್ದಾರೆ. ಇದು ಡಿಕೆ ಶಿವಕುಮಾರ್ ಅವರ ಸಿಎಂ ಆಗುವ ಕನಸನ್ನು ನುಚ್ಚುನೂರು ಮಾಡಿದಂತಾಗಿದೆ. ಸಿದ್ದರಾಮಯ್ಯ ಬಣದ ಸದಸ್ಯರಿಗೆ ಆನೆ ಬಲ ಬಂದಂತಾಗಿದೆ.

ಪೂರ್ತಿ ಓದಿ

03:55 PM (IST) Mar 12

ನಾಲ್ಕು ಗ್ರಹಗಳ ಬಲ, ಆರು ರಾಶಿಗೆ ಲಾಟರಿ ಯೋಗ, ಅದೃಷ್ಟ

ಶುಕ್ರ ಮತ್ತು ಗುರು ಗ್ರಹಗಳ ಸಂಚಾರ ಮತ್ತು ಶನಿ ತಮ್ಮ ಮನೆಯಲ್ಲಿರುವುದರಿಂದ ಈ ಆರು ರಾಶಿಗೆ ಒಳ್ಳೆಯದಾಗುವ ಸಾದ್ಯತೆ ಇದೆ. 
 

ಪೂರ್ತಿ ಓದಿ

03:47 PM (IST) Mar 12

ಫೋನ್‌ನಲ್ಲಿ ಮುಳುಗಿದವನಿಗೆ ಪಕ್ಕದಲ್ಲಿದ ನಾಯಿನಾ ಚಿರತೆ ಹೊತ್ಕೊಂಡೋದ್ರು ಗೊತ್ತಾಗಿಲ್ಲ: ವೀಡಿಯೋ

ಪುಣೆಯಲ್ಲಿ ಫೋನ್ ನೋಡುತ್ತಾ ಮಲಗಿದ್ದ ಯುವಕನ ಪಕ್ಕದಲ್ಲೇ ಮಲಗಿದ್ದ ನಾಯಿಯನ್ನು ಚಿರತೆ ಹೊತ್ತೊಯ್ದಿದೆ. 

ಪೂರ್ತಿ ಓದಿ

03:42 PM (IST) Mar 12

ಪಾಸ್‌ಪೋರ್ಟ್ ನಿಯಮಗಳು ಬದಲಾವಣೆ: ನೀವು ತಿಳಿಯಬೇಕಾದ 5 ಅಂಶಗಳು!

ಭಾರತ ಸರ್ಕಾರವು ಹೊಸ ಪಾಸ್‌ಪೋರ್ಟ್ ನಿಯಮಗಳನ್ನು ಪರಿಚಯಿಸಿದೆ, ಇದು ಭದ್ರತೆ ಮತ್ತು ದಕ್ಷತೆಯನ್ನು ಹೆಚ್ಚಿಸುತ್ತದೆ. ಕಡ್ಡಾಯ ಜನನ ಪ್ರಮಾಣಪತ್ರ, ಡಿಜಿಟಲ್ ವಿಳಾಸ ಎಂಬೆಡಿಂಗ್, ಬಣ್ಣ-ಕೋಡೆಡ್ ವ್ಯವಸ್ಥೆ, ಪೋಷಕರ ಹೆಸರು ತೆಗೆಯುವಿಕೆ ಮತ್ತು ಪಾಸ್‌ಪೋರ್ಟ್ ಸೇವಾ ಕೇಂದ್ರಗಳ ವಿಸ್ತರಣೆ ಪ್ರಮುಖ ಬದಲಾವಣೆಗಳಾಗಿವೆ.

ಪೂರ್ತಿ ಓದಿ

03:36 PM (IST) Mar 12

Belagavi: ಶಾರ್ಕ್‌ ಟ್ಯಾಂಕ್‌ ಇಂಡಿಯಾದಲ್ಲಿ ಜಾಕ್‌ಪಾಟ್‌ ಹೊಡೆದ ಬೆಳಗಾವಿ ಮೂಲದ ಸ್ಟಾರ್ಟ್ಅಪ್ ವೇಲ್ ವೇರಬಲ್ಸ್!

ಬೆಳಗಾವಿ ಮೂಲದ ವೇಲ್ ವೇರಬಲ್ಸ್ ಶಾರ್ಕ್ ಟ್ಯಾಂಕ್ ಇಂಡಿಯಾದಲ್ಲಿ ಸ್ವರಕ್ಷಣಾ ಗ್ಯಾಜೆಟ್‌ಗಳೊಂದಿಗೆ 30 ಲಕ್ಷ ರೂಪಾಯಿ ಹೂಡಿಕೆ ಪಡೆದಿದೆ. ಮಹಿಳೆಯರ ಸುರಕ್ಷತೆಗಾಗಿ ನವೀನ ಧರಿಸಬಹುದಾದ ಉತ್ಪನ್ನಗಳನ್ನು ತಯಾರಿಸುವುದು ಇದರ ಉದ್ದೇಶ.

ಪೂರ್ತಿ ಓದಿ

03:31 PM (IST) Mar 12

ಡಿವೋರ್ಸ್ ಬಳಿಕ ಎಗೆಂಜ್‌ಮೆಂಟ್‌ನ ದುಬಾರಿ ಡೈಮಂಡ್ ರಿಂಗ್ ಏನು ಮಾಡಿದ್ರು ಸಮಂತಾ

ನಾಗ ಚೈತನ್ಯರಿಂದ ಡಿವೋರ್ಸ್ ಪಡೆದು ಸ್ವತಂತ್ರವಾಗಿರುವ ನಟಿ ಸಮಂತಾ ರುತ್ ಪ್ರಭು ಕುರಿತು ಇಂಟ್ರೆಸ್ಟಿಂಗ್ ಮಾಹಿತಿಯೊಂದು ಹೊರಬಿದ್ದಿದೆ. ಸಮಂತ ನಾಗ ಚೈತನ್ಯ ಎಂಗೇಜ್‌ಮೆಂಟ್ ವೇಳೆ ಹಾಕಿದ್ದ ಅತೀ ದುಬಾರಿ ಬೆಲೆಯ ಡೈಮಂಡ್ ರಿಂಗ್‌ನ್ನು ಡಿವೋರ್ಸ್ ಬಳಿಕ ಸಮಂತಾ ಏನು ಮಾಡಿದ್ದಾರೆ ಗೊತ್ತಾ?

ಪೂರ್ತಿ ಓದಿ

03:25 PM (IST) Mar 12

100 -200 ನೋಟಿನ ಬಗ್ಗೆ ಆರ್ ಬಿಐ ಮಹತ್ವದ ಮಾಹಿತಿ, ಮತ್ತೆ ನೋಟು ಎಕ್ಸ್ಚೇಂಜ್ ಮಾಡ್ಬೇಕಾ? ʻ

100, 200ರ ಮುಖಬೆಲೆ ನೋಟಿನ ಬಗ್ಗೆ ಆರ್ ಬಿಐ ಮಹತ್ವದ ಸೂಚನೆ ನೀಡಿದೆ. ಭಾರತದ ಪ್ರತಿಯೊಬ್ಬರೂ ಈ ಬಗ್ಗೆ ಮಾಹಿತಿ  ಪಡೆಯುವ ಅಗತ್ಯವಿದೆ.
 

ಪೂರ್ತಿ ಓದಿ

03:22 PM (IST) Mar 12

ಕೆಬಿಸಿ ಶೋ ಬಿಡಲು ಕಾರಣ ಇದಾ? ಶೂಟಿಂಗ್ ವೇಳೆ ಟಿಬಿಯಿಂದ ಬಳಲುತ್ತಿದ್ದ ಅಮಿತಾಭ್!

ಕೆಬಿಸಿ ಶೂಟಿಂಗ್ ಮಾಡುವಾಗ ಅಮಿತಾಭ್ ಬಚ್ಚನ್ ಅವರಿಗೆ ಟಿಬಿ ಆಗಿತ್ತು. ನೋವು ತಪ್ಪಿಸಲು ಪೇನ್ ಕಿಲ್ಲರ್ ತಿನ್ನುತ್ತಿದ್ದೆ, ಜನರಿಗೆ ಇದರ ಬಗ್ಗೆ ತಿಳುವಳಿಕೆ ಮೂಡಿಸಲು ನಿರ್ಧರಿಸಿದೆ ಎಂದು ಹೇಳಿದ್ದಾರೆ.

ಪೂರ್ತಿ ಓದಿ

03:17 PM (IST) Mar 12

ಡಿಮ್ಯಾಟ್ ಖಾತೆ: ತೆರೆಯುವುದು ಹೇಗೆ? ಏನೇನು ದಾಖಲೆ ಬೇಕು?

ಷೇರು ಮಾರುಕಟ್ಟೆಯಲ್ಲಿ ಷೇರುಗಳನ್ನು ಕೊಳ್ಳಲು, ಮಾರಲು ಡಿಮ್ಯಾಟ್ ಖಾತೆ ತುಂಬಾ ಮುಖ್ಯ. ಅದನ್ನು ಓಪನ್ ಮಾಡೋದು ಹೇಗೆ ಅಂತ ಈ ಲೇಖನದಲ್ಲಿ ನೋಡೋಣ.

ಪೂರ್ತಿ ಓದಿ

03:14 PM (IST) Mar 12

ಬೆಳಗಾವಿಯಲ್ಲಿ ಮತ್ತೆ ಮರಾಠಿಗರ ಪುಂಡಾಟ; ಕಂಡಕ್ಟರ್ ಆಯ್ತು, ಈಗ ಪಿಡಿಓಗೆ ಮರಾಠಿ ಮಾತನಾಡುವಂತೆ ಹಲ್ಲೆಗೆ ಯತ್ನ!

ಬೆಳಗಾವಿಯಲ್ಲಿ ಗ್ರಾಮ ಪಂಚಾಯಿತಿ ಪಿಡಿಓಗೆ ಮರಾಠಿ ಭಾಷೆಯಲ್ಲಿ ಮಾತನಾಡಲು ಆಗ್ರಹಿಸಿ ಯುವಕನೊಬ್ಬ ಹಲ್ಲೆಗೆ ಯತ್ನಿಸಿದ್ದಾನೆ. ಈ ಘಟನೆಯನ್ನು ಕರ್ನಾಟಕ ರಕ್ಷಣಾ ವೇದಿಕೆ ಖಂಡಿಸಿದ್ದು, ಆರೋಪಿಯನ್ನು ಬಂಧಿಸುವಂತೆ ಒತ್ತಾಯಿಸಿದೆ.

ಪೂರ್ತಿ ಓದಿ

03:00 PM (IST) Mar 12

ನನ್ನ ಉತ್ತರಾಧಿಕಾರಿ ಚೀನಾದ ಹೊರಗೆ ಸ್ವತಂತ್ರ ಜಗತ್ತಿನಲ್ಲಿ ಹುಟ್ಟುತ್ತಾನೆ: ದಲೈ ಲಾಮಾ ಭವಿಷ್ಯ

 ದಲೈ ಲಾಮಾ ಅವರ ಉತ್ತರಾಧಿಕಾರಿ ಚೀನಾದ ಹೊರಗಿನ 'ಸ್ವತಂತ್ರ ಜಗತ್ತಿನಲ್ಲಿ' ಜನಿಸುತ್ತಾರೆ ಎಂದು ಹೇಳಿದ್ದಾರೆ. ಉತ್ತರಾಧಿಕಾರಿಯ ಆಯ್ಕೆ ಚೀನೀ ಕಾನೂನಿನ ಪ್ರಕಾರ ನಡೆಯಬೇಕು ಎಂದು ಚೀನಾ ಹೇಳಿದೆ.

ಪೂರ್ತಿ ಓದಿ

02:59 PM (IST) Mar 12

ಹಳೆಯ ಷೇರು ಸರ್ಟಿಫಿಕೇಟ್‌ ಸಿಕ್ಕಿದ್ಯಾ? ಈ ಷೇರು ನಿಮ್ಮ ಹೆಸರಲ್ಲೇ ಇದೆ ಅನ್ನೋದನ್ನ ಚೆಕ್ ಮಾಡೋದು ಹೇಗೆ?

ಇತ್ತೀಚೆಗೆ ವ್ಯಕ್ತಿಯೊಬ್ಬರಿಗೆ ಮನೆಯಲ್ಲಿ ರಿಲಯನ್ಸ್‌ ಇಂಡಸ್ಟ್ರೀಸ್‌ನ ಷೇರುಗಳ ಪ್ರಮಾಣ ಪತ್ರ ಸಿಕ್ಕಿದ್ದು, ಅದರ ಬಗ್ಗೆ ಮಾಹಿತಿ ಇಲ್ಲದೆ ಸಹಾಯ ಕೋರಿದ್ದಾರೆ. ಹಳೆಯ ಷೇರು ಪತ್ರಗಳು ಸಿಕ್ಕರೆ, ಹೂಡಿಕೆದಾರರ ಶಿಕ್ಷಣ ಮತ್ತು ರಕ್ಷಣಾ ನಿಧಿ ಪ್ರಾಧಿಕಾರ (IEPFA) ವೆಬ್‌ಸೈಟ್‌ನಲ್ಲಿ ಪರಿಶೀಲಿಸಿ, ಕ್ಲೈಮ್‌ ಮಾಡಬಹುದು.

ಪೂರ್ತಿ ಓದಿ

02:40 PM (IST) Mar 12

ಸ್ಟಾರ್ಟಪ್ ಜಗತ್ತಿನಲ್ಲಿ LAT ಏರೋಸ್ಪೇಸ್, ಮಾಜಿ ಮುಖ್ಯಸ್ಥೆಯ ಕಂಪೆನಿಗೆ ಜೊಮ್ಯಾಟೊ ಸಿಇಒ ಹೂಡಿಕೆ!

ಜೊಮ್ಯಾಟೊದ ಮಾಜಿ ಸಿಒಒ ಸುರಭಿ ದಾಸ್ LAT ಏರೋಸ್ಪೇಸ್ ಎಂಬ ಹೊಸ ಏರೋಸ್ಪೇಸ್ ಸ್ಟಾರ್ಟಪ್ ಸ್ಥಾಪಿಸಿದ್ದಾರೆ. ದೀಪಿಂದರ್ ಗೋಯಲ್ 20 ಮಿಲಿಯನ್ ಡಾಲರ್ ಹೂಡಿಕೆ ಮಾಡಿದ್ದಾರೆ, ಇದು ಪ್ರಾದೇಶಿಕ ವಾಯು ಸಂಪರ್ಕ ಹೆಚ್ಚಿಸಲಿದೆ.

ಪೂರ್ತಿ ಓದಿ

02:36 PM (IST) Mar 12

ಮುಂದಿನ 49 ದಿನವರೆಗೆ ಈ ರಾಶಿಗೆ ರಾಜಯೋಗ, ಶನಿ ರಾಹುನಿಂದ ಕೋಟ್ಯಾಧಿಪತಿ ಯೋಗ

ಶನಿ ಮತ್ತು ರಾಹು ಎರಡು ಗ್ರಹಗಳ ಸಂಯೋಗವು ಕೆಲವು ರಾಶಿಚಕ್ರ ಚಿಹ್ನೆಗಳಿಗೆ  ಒಳ್ಳೆದನ್ನು ಮಾಡುವ ಸಾಧ್ಯತೆಯಿದೆ. 

ಪೂರ್ತಿ ಓದಿ

02:35 PM (IST) Mar 12

ಕೊಡಗಿನಲ್ಲಿ ಭೂಕಂಪದ ಅನುಭವ; ಮದೆನಾಡಿನ ಮನೆ, ಮಂಟಪಗಳೆಲ್ಲಾ ಗಡ-ಗಡ!

ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ಭೂಕಂಪನದ ಅನುಭವವಾಗಿದೆ. ಮನೆಯಲ್ಲಿದ್ದ ವಸ್ತುಗಳು ಅಲುಗಾಡಿದ್ದು, ಜನರು ಭಯದಿಂದ ಹೊರಗೆ ಓಡಿ ಬಂದಿದ್ದಾರೆ. ಯಾವುದೇ ಹಾನಿ ಸಂಭವಿಸಿಲ್ಲ.

ಪೂರ್ತಿ ಓದಿ

02:29 PM (IST) Mar 12

ಟಿಕೆಟ್‌ಗೆ 2 ಸಾವಿರ ಕೊಟ್ರೂ ಎಸಿ ರೈಲಿನಲ್ಲಿ ಬಂದ ವಿಶೇಷ ಅತಿಥಿಯಿಂದ ನಿದ್ದೆಯಿಲ್ಲದ ರಾತ್ರಿ ಕಳೆದ..!

ಪ್ರಯಾಣದಲ್ಲಿ ಆರಾಮವನ್ನು ಬಯಸಿ ಬಿಹಾರದ ವ್ಯಕ್ತಿಯೊಬ್ಬರು ಎಸಿ ಬೋಗಿಯಲ್ಲಿ ಸೀಟು ಬುಕ್ ಮಾಡಿದ್ದಾರೆ. ಇದಕ್ಕಾಗಿ 2000 ರೂಪಾಯಿ ಮೊತ್ತದ ದುವಾರಿ ಟಿಕೆಟನ್ನು ಕೂಡ ಖರೀದಿ ಮಾಡಿದ್ದಾರೆ. ಆದರೆ ಅವರಿಗೆ ಅಲ್ಲಿ ಸಿಕ್ಕಿದ್ದೇನು?

ಪೂರ್ತಿ ಓದಿ

More Trending News