ಬೆಂಗಳೂರು: ಕರಾವಳಿ, ಮಲೆನಾಡು ಭಾಗದಲ್ಲಿ ಮಳೆ ಅಬ್ಬರಿಸುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಶಾಲೆಗಳಿಗೆ ಹಾಗೂ ಉತ್ತರ ಕನ್ನಡ ಜಿಲ್ಲೆಯ ಮೂರು ತಾಲೂಕುಗಳ ಶಾಲೆಗಳಿಗೆ ಶುಕ್ರವಾರ ರಜೆ ಘೋಷಿಸಲಾಗಿತ್ತು. ಮುಂಜಾಗ್ರತಾ ಕ್ರಮವಾಗಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ (ಪಿಯುಸಿವರೆಗೆ) ಶನಿವಾರ ರಜೆ ಘೋಷಿಸಲಾಗಿದೆ.
ಶೃಂಗೇರಿ ತಾಲೂಕಿನಾದ್ಯಂತ ಸುರಿಯುತ್ತಿರುವ ಮಳೆಯಿಂದಾಗಿ ತುಂಗಾ, ನಂದಿನಿ, ನಳಿನಿ ನದಿಗಳು ತುಂಬಿ ಹರಿಯುತ್ತಿವೆ. ಕೊಡಗಿನಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಹಾರಂಗಿ ಜಲಾಶಯ ಭರ್ತಿಯಾಗಿದ್ದು, ಶನಿವಾರ ಹೆಚ್ಚುವರಿ ನೀರನ್ನು ನದಿಗೆ ಹರಿಸಲಾಗುವುದು. ಈ ಹಿನ್ನೆಲೆಯಲ್ಲಿ ಅಣೆಕಟ್ಟಿನ ಕೆಳ ಭಾಗದ ನದಿ ಪಾತ್ರದ ಜನರು ಮುನ್ನೆಚ್ಚರಿಕೆ ವಹಿಸುವಂತೆ ಹಾರಂಗಿ ಅಣೆಕಟ್ಟು ಅಧಿಕಾರಿಗಳು ತಿಳಿಸಿದ್ದಾರೆ.
10:53 PM (IST) Jul 25
ಬೆಂಗಳೂರಿನ ಬನಶಂಕರಿ 6ನೇ ಹಂತದ ಜನನಿಬಿಡ ಪ್ರದೇಶದಲ್ಲಿ ಚಿರತೆಯೊಂದು ಪ್ರತ್ಯಕ್ಷವಾಗಿ ಸ್ಥಳೀಯರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ. ಚಿರತೆಯ ಓಡಾಟದ ದೃಶ್ಯಗಳು ಮೊಬೈಲ್ನಲ್ಲಿ ಸೆರೆಯಾಗಿದ್ದು, ಅರಣ್ಯ ಇಲಾಖೆಯು ಪಟಾಕಿ ಸಿಡಿಸಿ ಅದನ್ನು ಓಡಿಸಲು ಯತ್ನಿಸಿದೆ.
10:37 PM (IST) Jul 25
Yash Prestige Golfshire Home: ನಗರದ ಗದ್ದಲದಿಂದ ದೂರವಾಗಿ, ಉತ್ತರ ಬೆಂಗಳೂರಿನಲ್ಲಿ ನಟ ಯಶ್ ಅವರು ತಮ್ಮ ಕುಟುಂಬಕ್ಕಾಗಿ ಸುಂದರ ಹಾಗೂ ಶಾಂತಿಯುತವಾದ ಐಷಾರಾಮಿ ಮನೆಯನ್ನು ನಿರ್ಮಿಸಿಕೊಂಡಿದ್ದಾರೆ.
09:19 PM (IST) Jul 25
Chamarajanagar: ಯಾರೋ ಮಾಡಿದ ತಪ್ಪಿಗೆ ಯಾರಿಗೋ ಶಿಕ್ಷೆ ಅಂತಾರಲ್ಲ,ಆಗಾಗಿದೆ ಈ ಭಾಗದ ರೈತರು ಹಾಗೂ ಕಾಡುಪ್ರಾಣಿಗಳ ಬದುಕು. ಈ ಜಲಾಶಯದ ನೀರು ಯಾವಾಗಲೂ ಖಾಲಿಯಾದ ನಿದರ್ಶನ ಕೂಡ ಇಲ್ಲ.
08:55 PM (IST) Jul 25
ಕೆಜಿಎಫ್ ಸರಣಿ ಸಿನಿಮಾಗಳ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಭಾರೀ ಜನಪ್ರಿಯತೆ ಗಳಿಸಿರುವ ನಟ ಯಶ್, ಇದೀಗ ಬಹುನಿರೀಕ್ಷಿತ ಪೌರಾಣಿಕ ಸಿನಿಮಾ 'ರಾಮಾಯಣ'ದಲ್ಲಿ ರಾವಣನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
08:23 PM (IST) Jul 25
ನೀಟ್ ಹಗರಣದ ಈ ಹೈ-ವೋಲ್ಟೇಜ್ ಡ್ರಾಮಾ ಈಗ ಸಚಿವರ ರಾಜೀನಾಮೆ ಮೂಲಕ ಒಂದು ಹಂತಕ್ಕೆ ಬಂದು ತಲುಪಿದ್ದು, ಮುಂದಿನ ಬೆಳವಣಿಗೆಗಳು ಯಾವ ಕಡೆ ಸಾಗುತ್ತವೆ ಎಂಬುದು ಕುತೂಹಲಕಾರಿಯಾಗಿದೆ. ಪ್ರಕಾಶ್ ರಾಜ್ ಅವರ ಈ 'ವಿಕ್ಟರಿ ಪೋಸ್ಟ್' ಸದ್ಯ ಸಂಚಲನ ಸೃಷ್ಟಿಸಿದೆ.
08:16 PM (IST) Jul 25
Karavali Kannada Movie: ನಟ ಪ್ರಜ್ವಲ್ ದೇವರಾಜ್ ಅವರ ಪಾಲಿಗೆ 40ನೇ ಸಿನಿಮಾ 'ಕರಾವಳಿ' ಕೂಡ ಅಂತಹದ್ದೇ ಒಂದು ಮಹತ್ವದ ಚಿತ್ರ. ಸುಮಾರು ಮೂರು ವರ್ಷಗಳ ಕಾಲ ಈ ಸಿನಿಮಾ ಅವರ ಜೀವನದ ಭಾಗವಾಗಿತ್ತು.
07:48 PM (IST) Jul 25
'ಕರ್ನಾಟಕ ಕಲಾಶ್ರೀ' ಪ್ರಶಸ್ತಿ ಪುರಸ್ಕೃತ, ಪ್ರಸಿದ್ಧ ಮ್ಯಾಂಡೋಲಿನ್ ವಾದಕ ಎನ್.ಎಸ್. ಪ್ರಸಾದ್ (66) ಹೃದಯಾಘಾತದಿಂದ ನಿಧನರಾದರು. ಕನ್ನಡ ಸುಗಮ ಸಂಗೀತ ಮತ್ತು ಚಲನಚಿತ್ರ ರಂಗಕ್ಕೆ ಅಪಾರ ಕೊಡುಗೆ ನೀಡಿದ್ದ ಅವರು, ಸಿ. ಅಶ್ವಥ್ ಅವರೊಂದಿಗೆ ದೀರ್ಘಕಾಲ ಕೆಲಸ ಮಾಡಿದ್ದರು.
07:35 PM (IST) Jul 25
Ashada Ekadashi: ಆಷಾಢ ಏಕಾದಶಿಯ ಪವಿತ್ರ ಸಂದರ್ಭದಲ್ಲಿ ಬೆಂಗಳೂರಿನ ಜಯನಗರದಲ್ಲಿರುವ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಭಕ್ತಿಭಾವದಿಂದ ಜರುಗಿದವು.
07:19 PM (IST) Jul 25
“ತಮ್ಮನ್ನು ತಾವು ಜಾನಕಿ ಅಮ್ಮನವರ “ಅಭಿಮಾನಿಗಳು” ಎಂದು ಕರೆದುಕೊಳ್ಳುವವರು, ಅವರ ಹೆಸರಿನಲ್ಲಿ ಮತ್ತೊಬ್ಬರನ್ನು ಅವಮಾನಿಸುವ ಮೊದಲು ಜಾನಕಿ ಅಮ್ಮನವರ ಸರಳತೆ, ವಿನಯ ಮತ್ತು ಮಾನವೀಯತೆಯನ್ನು ಅನುಸರಿಸಲು ಪ್ರಯತ್ನಿಸಿದ್ದರೆ ಅದೇ ಅವರಿಗೆ ಸಲ್ಲಿಸುವ ನಿಜವಾದ ಗೌರವವಾಗುತ್ತಿತ್ತು..”
07:19 PM (IST) Jul 25
Gangavathi: ವಿಜಯನಗರ ಕಾಲುವೆಗೆ ತುಂಗಭದ್ರಾ ನದಿಯಿಂದ ಸಮರ್ಪಕವಾಗಿ ನೀರು ಹರಿಯದ ಕಾರಣ ರೈತರು ಅಣೆಕಟ್ಟಿನ ಕೆಳ ಭಾಗದ ಮೋರೆ (ತಡೆಗೋಡೆ)ಗಳನ್ನು ಮುಚ್ಚಿ ನೀರು ಹರಿಸುವ ಪ್ರಯತ್ನ ನಡೆಸುತ್ತಿದ್ದಾರೆ.
07:14 PM (IST) Jul 25
ತಂದೆ-ತಾಯಿ ತಮ್ಮ ಆಸ್ತಿಯನ್ನು ಮಕ್ಕಳಲ್ಲಿ ಒಬ್ಬರಿಗೆ ಮಾತ್ರ ನೀಡಬಹುದೇ ಎಂಬ ಪ್ರಶ್ನೆಗೆ ಈ ಸ್ಟೋರಿ ಕಾನೂನಾತ್ಮಕ ಉತ್ತರ ನೀಡುತ್ತದೆ. ಸ್ವಾರ್ಜಿತ ಮತ್ತು ಪಿತ್ರಾರ್ಜಿತ ಆಸ್ತಿಗಳ ನಡುವಿನ ವ್ಯತ್ಯಾಸವನ್ನು ವಿವರಿಸಿ, ಹಿಂದೂ ಉತ್ತರಾಧಿಕಾರ ಕಾಯ್ದೆಯ ಅಡಿಯಲ್ಲಿ ಮಕ್ಕಳ, ವಿಶೇಷವಾಗಿ ಹೆಣ್ಣುಮಕ್ಕಳ ಹಕ್ಕುಗಳನ್ನು ಇದು ಸ್ಪಷ್ಟಪಡಿಸುತ್ತದೆ.
07:07 PM (IST) Jul 25
Gangavathi: ಇಲ್ಲಿಯ ಗ್ರಾಮೀಣ ಪೊಲೀಸ್ ಠಾಣೆ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದ್ದು, ಈಗ ಗ್ರಾಮೀಣ ಭಾಗದಿಂದ ದೂರು ಕೊಡಲು ಬರುವ ಜನರು 3 ಕಿ ಮೀ ದೂರು ಹೋಗಿ ಪರದಾಡುವ ಪ್ರಸಂಗ ಒದಗಿದೆ.
06:47 PM (IST) Jul 25
'ಅಂಬಿ ನಿಂಗ್ ವಯಸ್ಸಾಯ್ತೋ' ಚಿತ್ರದ ಮೂಲಕ ಭರವಸೆಯ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದ ಗುರುದತ್ ಗಾಣಿಗ ಈಗ ಸುಮಾರು ಆರು ವರ್ಷಗಳ ಬಳಿಕ ತಮ್ಮ ಹೊಸ ಚಿತ್ರ 'ಕರಾವಳಿ'ಯೊಂದಿಗೆ ಪ್ರೇಕ್ಷಕರ ಮುಂದೆ ಬಂದಿದ್ದಾರೆ.
06:44 PM (IST) Jul 25
ಆರ್ಟಿಐ ಅರ್ಜಿಯೊಂದರಿಂದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆಘಾತಕಾರಿ ನಿರ್ಲಕ್ಷ್ಯ ಬಯಲಾಗಿದೆ. ಕೆಆರ್ಎಸ್ ಹೂಳಿನ ಪ್ರಮಾಣದ ಬಗ್ಗೆ ಯಾವುದೇ ದತ್ತಾಂಶವಿಲ್ಲದಿದ್ದರೂ, ಹಳೆಯ ಲೆಕ್ಕಾಚಾರದ ಆಧಾರದ ಮೇಲೆ ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ.
06:29 PM (IST) Jul 25
ನೀಟ್ ಪರೀಕ್ಷಾ ಹಗರಣದ ಹಿನ್ನೆಲೆಯಲ್ಲಿ ನಡೆದ ತೀವ್ರ ಪ್ರತಿಭಟನೆಗೆ ಮಣಿದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ. ಸಾರ್ವಜನಿಕ ಚಳವಳಿಯ ಒತ್ತಡಕ್ಕೆ ಸಿಲುಕಿ ಮೋದಿ ಸರ್ಕಾರದಲ್ಲಿ ರಾಜೀನಾಮೆ ನೀಡಿದ ಎರಡನೇ ಸಚಿವರಾಗಿದ್ದು, ಈ ಹಿಂದೆ ಇದೇ ರೀತಿ ಹುದ್ದೆ ತೊರೆದ ನಾಯಕ ಯಾರು ಗೊತ್ತಾ?
06:16 PM (IST) Jul 25
Ashika Ranganath: ಕ್ರಿಸ್ಟೋಫರ್ ನೋಲನ್ ನಿರ್ದೇಶನದ 'ದಿ ಒಡಿಸ್ಸಿ' (The Odyssey) ಸಿನಿಮಾ ಕಳೆದ ವಾರ ಬಿಡುಗಡೆಯಾದ ಬಳಿಕ ವಿಶ್ವದಾದ್ಯಂತ ಬಾಕ್ಸ್ ಆಫೀಸ್ನಲ್ಲಿ ದಾಖಲೆಗಳನ್ನು ಬರೆಯುತ್ತಿದೆ.
06:09 PM (IST) Jul 25
05:59 PM (IST) Jul 25
"ತದ್ವಿರುದ್ಧ ಸಿನಿಮಾ ಜುಲೈ 31 ರಂದು ಬಿಡುಗಡೆಯಾಗಲು ನಿಗದಿಯಾಗಿದೆ. ಬಿಡುಗಡೆಗೆ ಇನ್ನು ಕೆಲವೇ ದಿನಗಳಷ್ಟೇ ಬಾಕಿ ಇದ್ದು, ಪ್ರಚಾರಕ್ಕೆ ಪ್ರಮುಖ ನಟಿ ಸುಮನ್ ರಂಗನಾಥ್ ಲಭ್ಯವಿಲ್ಲದಿರುವುದು ಚಿತ್ರಕ್ಕೆ ದೊಡ್ಡ ಮಟ್ಟದ ಆರ್ಥಿಕ ನಷ್ಟ ತರುವ ಸಾಧ್ಯತೆಯಿದೆ. ಇದೀಗ ನಟಿ ಮೇಲೆ ದೂರು ದಾಖಲಾಗುವಸುದ್ದಿ ಬಂದಿದೆ.
05:41 PM (IST) Jul 25
Ragini Dwivedi: ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಸಿನಿಮಾದಲ್ಲಿ ರಾಗಿಣಿ ಮತ್ತು ಕುಮಾರ್ ಬಂಗಾರಪ್ಪ ಫೋಟೋ ನೋಡಿ ಇಬ್ಬರೂ ಮದುವೆ ಆಗುತ್ತಿದ್ದಾರೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು.
05:32 PM (IST) Jul 25
Save Sandalwood: ಹೆಸರು ಹೇಳದೆ, ಹೆಸರು ತಿಳಿಸದೆ ಗಾಳಿಯಲ್ಲಿ ಗುಂಡು ಹಾರಿಸುವವರು ಸಾಕಷ್ಟಿದ್ದಾರೆ. ಯಾವುದೋ ಒಂದು ಸಮಸ್ಯೆ ಕೇಳಿದರೆ, ಅದು ಈಗ ಬೇಡ ಆಮೇಲೆ ಮಾತಾಡೋಣ ಎಂದು ಹೇಳುವರೂ ಇದ್ದಾರೆ.
05:18 PM (IST) Jul 25
ನಾನು ಚಿತ್ರರಂಗದಲ್ಲಿ ಗುರುತಿಸಿಕೊಳ್ಳಲು ಸುಮಾರು 15 ವರ್ಷ ಶ್ರಮ ಪಟ್ಟಿದ್ದೇನೆ. ಸಿನಿಮಾ ಕೆಲಸ ಇಲ್ಲದೇ ಇದ್ದಾಗ ಕೆ.ವಿ. ಜಯರಾಮ್ ಜೊತೆ ಕುಳಿತು ಕತೆ ಮಾಡಿದ್ದೇನೆ, ಸ್ಕ್ರಿಪ್ಟ್ ಮಾಡಿದ್ದೇನೆ ಎಂದರು ಅನಂತ್ ನಾಗ್.
04:48 PM (IST) Jul 25
ನಾನು ಕೇಳಿದ ಮೊದಲ ಕಥೆ ರಾಮಾಯಣ. ಬಹಳ ಚಿಕ್ಕವನಿದ್ದಾಗ ರಾತ್ರಿ ಮಲಗುವ ಮುಂಚೆ ಅಜ್ಜ ಈ ಕಥೆ ಹೇಳುತ್ತಿದ್ದರು. ಇಂದು ಅದೇ ಕಥೆಯನ್ನು ಜಗತ್ತಿನ ಮುಂದೆ ಹೇಳಲು ಹೊರಟಿದ್ದೇನೆ ಎಂದರು ಯಶ್.
04:35 PM (IST) Jul 25
Karavali Movie Review: ಕಂಬಳದ ವೈಭವದಂತೆ ಚಿತ್ರದಲ್ಲೂ ವೈಭವವಿದೆ. ಹಸಿರು, ಮಳೆ, ಸಮುದ್ರ, ಬೆಟ್ಟ, ಗದ್ದೆ ಸೇರಿ ಸೊಗಸಾದ ವಾತಾವರಣದಲ್ಲಿ ಕತೆ ನಡೆಯುತ್ತದೆ. ನೋಡುತ್ತಾ ನೋಡುತ್ತಾ ಮನಸ್ಸು ತಂಪಾಗುತ್ತದೆ.
04:17 PM (IST) Jul 25
03:21 PM (IST) Jul 25
ಏಷ್ಯನ್ ಗೇಮ್ಸ್ ಮತ್ತು ವೆಸ್ಟ್ ಇಂಡೀಸ್ ಸರಣಿಗಳು ಒಂದೇ ಸಮಯದಲ್ಲಿ ನಡೆಯುವುದರಿಂದ, ಬಿಸಿಸಿಐ ಎರಡು ವಿಭಿನ್ನ ತಂಡಗಳನ್ನು ಕಣಕ್ಕಿಳಿಸಲು ನಿರ್ಧರಿಸಿದೆ. ಶ್ರೇಯಸ್ ಅಯ್ಯರ್ ನೇತೃತ್ವದ ಪ್ರಬಲ ತಂಡ ಏಷ್ಯನ್ ಗೇಮ್ಸ್ಗೆ ತೆರಳಲಿದ್ದು, ಈ ಕಾರಣದಿಂದ 8 ಪ್ರಮುಖ ಆಟಗಾರರು ವಿಂಡೀಸ್ ಸರಣಿಗೆ ಅಲಭ್ಯರಾಗಲಿದ್ದಾರೆ.
03:04 PM (IST) Jul 25
ಟೀ ಅಂದರೆ ಚಹಾದಲ್ಲಿ ಬಹಳಷ್ಟು ಇತರೆ ರುಚಿಕರ ಐಟಂಗಳನ್ನು ಸೇರಿಸಬಹುದು. ಏಲಕ್ಕಿ, ಹಲವು ಮಸಾಲಾ ಸೇರಿಸಿದ 'ಮಸಾಲಾ ಟೀ', ಜಿಂಜರ್ ಟೀ ಸೇರಿದಂತೆ ಹತ್ತು ಹಲವು ಟೀಗಳಿವೆ. ಅದರೆ ಕಾಫಿ ಎಂದರೆ ಕಾಫಿ ಪುಡಿ ಅಷ್ಟೇ ಸೇರಿಸೋದು. ಆಫ್ಕೋರ್ಸ್.. ಕಾಫಿಗೆ ಹಾಲು, ಸಕ್ಕರೆ ಸೇರಿಸಿಯೇ ಮಾಡಲಾಗುತ್ತದೆ. ಏಕೆ ಹೀಗೆ? ಈ ಸ್ಟೋರಿ ನೋಡಿ..
01:31 PM (IST) Jul 25
01:15 PM (IST) Jul 25
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಅಗತ್ಯವಿಲ್ಲ ಎಂದು ಶ್ರೀರಾಮಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ. ವಿದ್ಯಾರ್ಥಿಗಳ ಹೋರಾಟವನ್ನು ವಿದೇಶಿ ಶಕ್ತಿಗಳು, ಸಿಜೆಪಿ ಮತ್ತು ಖಾಲಿಸ್ತಾನಿಗಳು ಹೈಜಾಕ್ ಮಾಡಿವೆ ಎಂದು ಆರೋಪಿಸಿದರು.
01:13 PM (IST) Jul 25
01:01 PM (IST) Jul 25
ಝೈದ್ ಖಾನ್, ರಚಿತಾ ರಾಮ್ ಹಾಗೂ ಮಲೈಕಾ ವಸುಪಾಲ್ ನಟನೆಯ 'ಕಲ್ಟ್' ಸಿನಿಮಾ 23 ಜನವರಿ 2026 ರಂದು ತೆರೆಗೆ ಬಂದಿತ್ತು. ಈ ಸಿನಿಮಾ ಒಂದು ರೋಮ್ಯಾಂಟಿಕ್ ಆಕ್ಷನ್ ಡ್ರಾಮಾ ಚಲನಚಿತ್ರ. ಇದು ಜುಲೈ 26, 2026ರಂದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಯಾವ ಟೈಂಗೆ ಅಂತ ಇಲ್ಲಿ ನೋಡಿ..
11:42 AM (IST) Jul 25
09:49 AM (IST) Jul 25
09:35 AM (IST) Jul 25
08:45 AM (IST) Jul 25
ಕಾಂಗ್ರೆಸ್ ನಾಯಕ, ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಅವರ ಮಾವ ಮಾಜಿ ಸಚಿವರಾಗಿದ್ದ ವೀರಪ್ಪ ನಿಧನರಾಗಿದ್ದಾರೆ. ತುಮಕೂರು ಜಲ್ಲೆಯ ಕೊರಟಗೆರೆಯ ತೋಟದ ಮನೆಯಲ್ಲಿ ರಾತ್ರಿ ನಿಧನರಾಗಿರುವ ಮಾಹಿತಿ ಲಭ್ಯವಾಗಿ
08:42 AM (IST) Jul 25
‘ಕೃಷಿ ಕೆಲಸ ಮಾಡಿ ದಣಿದು ಬಂದ ಕಾರ್ಮಿಕರಿಗೆ ನೀಡಲು ಪ್ರಾವಿಷನ್ ಸ್ಟೋರ್ ನಲ್ಲಿ ಬಿಯರ್-ಲಿಕ್ಕರ್ ಇರಿಸಲಾಗಿತ್ತು...’ ಎಂಬ ವಾದ ಕೇಳಿ ಅಚ್ಚರಿಗೊಂಡ ಹೈಕೋರ್ಟ್, ಇಂಥ ಕೆಲಸವನ್ನು ಸ್ಕಾಟ್ ಲ್ಯಾಂಡ್ ನಲ್ಲಿ ವಿಸ್ಕಿ ಕಂಡುಹಿಡಿದಾಗ ಮಾಡಲಾಗುತ್ತಿತ್ತು. ಆ ಪದ್ಧತಿ ಭಾರತದಲ್ಲಿ ಮಾಡಬೇಕಿಲ್ಲ ಎಂದು ನುಡಿಯಿತು.
08:16 AM (IST) Jul 25
08:13 AM (IST) Jul 25
ಪ್ರಸಕ್ತ ಸಾಲಿನಲ್ಲಿ ತುಂಗಭದ್ರಾ ಜಲಾಶಯದಲ್ಲಿ ನೀರಿನ ಮಟ್ಟ ತೀವ್ರವಾಗಿ ಕುಸಿದಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಕೇವಲ 29 ಟಿಎಂಸಿ ನೀರು ಮಾತ್ರ ಸಂಗ್ರಹವಾಗಿದೆ. ಜಲಾನಯನ ಪ್ರದೇಶದಲ್ಲಿ ಮಳೆ ಕೊರತೆಯೇ ಇದಕ್ಕೆ ಕಾರಣವಾಗಿದ್ದು, ಸದ್ಯ, ಜಲಾಶಯದ ನೀರು ಕೇವಲ ಕುಡಿಯುವ ಉದ್ದೇಶಕ್ಕಾಗಿ ಮಾತ್ರ ಬಳಕೆ!
08:05 AM (IST) Jul 25
07:52 AM (IST) Jul 25
07:42 AM (IST) Jul 25
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧದ ಪ್ರತಿಭಟನೆಯಿಂದ ಮುಂದೂಲ್ಪಟ್ಟಿರುವ ರಾಜ್ಯ ಸಚಿವ ಸಂಪುಟ ವಿಸ್ತರಣೆ ಯಾವ ಸಂದರ್ಭದಲ್ಲಾದರೂ ಆಗಬಹುದು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ತಿಳಿಸಿದರು.