ಬೆಂಗಳೂರು: ರಾಜ್ಯದಲ್ಲಿ ಮಳೆ ಕೊರತೆ ನೀಗಿಸಲು ರಾಜ್ಯ ಸರ್ಕಾರ ಸೋಮವಾರದಿಂದ ವಿವಿಧೆಡೆ ಆರಂಭಿಸಲು ಉದ್ದೇಶಿಸಿದ್ದ ಮೋಡಬಿತ್ತನೆ ಕಾರ್ಯ ಒಂದೆರಡು ದಿನ ತಡವಾಗಲಿದೆ.
ಕರ್ನಾಟಕ ನೀರಾವರಿ ನಿಗಮ (ಕೆಎನ್ಎನ್ಎಲ್) ಮತ್ತು ಮೋಡಬಿತ್ತನೆ ನಡೆಸುವ ಗುತ್ತಿಗೆ ಪಡೆದ ಕಂಪನಿಯೊಂದಿಗೆ ಸೋಮವಾರ ಅಧಿಕೃತ ಒಡಂಬಡಿಕೆ ಆಗಲಿದೆ. ನಂತರದಲ್ಲಿ ಈ ಪ್ರಕ್ರಿಯೆ ಆರಂಭವಾಗಲಿದೆ. ಬಹುತೇಕ ಮುಂದಿನ ಎರಡು ದಿನಗಳಲ್ಲಿ ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ(ಕೆಎಸ್ಎನ್ಡಿಎಂಸಿ) ಸಹಯೋಗದಲ್ಲಿ ಪ್ರಕ್ರಿಯೆ ಆರಂಭಗೊಳ್ಳುವ ನಿರೀಕ್ಷೆ ಇದೆ ಎಂದು ಜಲಸಂಪನ್ಮೂಲ ಇಲಾಖೆ ಮೂಲಗಳು ತಿಳಿಸಿವೆ.
ಈಗಾಗಲೇ ಕೆಲ ಶಾಸಕರು ಸ್ಥಳೀಯವಾಗಿ ತಮ್ಮ ಅನುದಾನದಲ್ಲಿ ಮಳೆ ಕೊರತೆ ನೀಗಿಸಲು ಖಾಸಗಿ ಕಂಪನಿಯಿಂದ ಮೋಡಬಿತ್ತನೆ ಮಾಡಿಸಿದ್ದಾರೆ. ಅದರ ಮುಂದುವರಿದ ಭಾಗವಾಗಿ ಸರ್ಕಾರವೇ ಈಗ ಕೈಗೆತ್ತಿಕೊಳ್ಳಲು ಉದ್ದೇಶಿಸಿದೆ.
ಈಗಾಗಲೇ ನಿರ್ಧರಿಸಿದಂತೆ ಒಂದು ವಿಮಾನದ ಮೂಲಕ 60 ದಿನಗಳ ಅವಧಿಗೆ 200 ಗಂಟೆಗಳ ವೈಮಾನಿಕ ಹಾರಾಟವನ್ನು ನಡೆಸಲಾಗುತ್ತದೆ. ಖ್ಯಾತಿ ಕ್ಲೈಮೇಟ್ ಮಾಡಿಫಿಕೇಷನ್ ಕನ್ಸಲ್ಟೆಂಟ್ಸ್ ಈ ಯೋಜನೆಯನ್ನು ಅನುಷ್ಠಾನಗೊಳಿಸಲಿದ್ದು, ಒಟ್ಟು 28.52 ಕೋಟಿ ರು. ವೆಚ್ಚಕ್ಕೆ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
10:33 AM (IST) Aug 24
10:01 AM (IST) Aug 24
09:39 AM (IST) Aug 24
08:46 AM (IST) Aug 24
08:37 AM (IST) Aug 24
08:31 AM (IST) Aug 24
08:28 AM (IST) Aug 24
07:24 AM (IST) Aug 24
07:15 AM (IST) Aug 24
07:11 AM (IST) Aug 24
06:40 AM (IST) Aug 24
06:27 AM (IST) Aug 24
06:20 AM (IST) Aug 24
05:57 AM (IST) Aug 24