LIVE NOW
Published : Feb 17, 2026, 06:50 AM ISTUpdated : Feb 17, 2026, 11:54 AM IST

Karnataka News Live: ಪ್ರಿಯಾ ಸುದೀಪ್ ಗೆ ಕಾರ್ ರೇಸ್ ಹುಚ್ಚು ಹಿಡಿಸಿದ್ದು ಯಾರು? ಇಂಟರೆಸ್ಟಿಂಗ್ ವಿಷ್ಯ ಹೊರ ಹಾಕಿದ ಕಿಚ್ಚನ ಮಡದಿ

ಸಾರಾಂಶ

ಧಾರವಾಡ: ದೇಶಾದ್ಯಂತ ಸಂಚಲನ ಮೂಡಿಸಿದ್ದ ಹುಬ್ಬಳ್ಳಿಯ ನೇಹಾ ಹಿರೇಮಠ ಹ*ತ್ಯೆ ಪ್ರಕರಣದಲ್ಲಿ ಹೈಕೋರ್ಟ್‌ನಲ್ಲಿ ಜಾಮೀನು ಕೇಳಿದ್ದ ಆರೋಪಿ ಫಯಾಜ್‌ಗೆ ಮತ್ತೊಮ್ಮೆ ಹಿನ್ನಡೆಯಾಗಿದೆ. ಈಗಾಗಲೇ ಎರಡು ಬಾರಿ ಆರೋಪಿ ಫಯಾಜ್ ಜಾಮೀನು ನೀಡುವಂತೆ ಅರ್ಜಿ ಸಲ್ಲಿಸಿದ್ದ. ನ್ಯಾಯಾಲಯ ವಿಚಾರಣೆ ನಡೆಸಿ ಅರ್ಜಿ ತಿರಸ್ಕರಿಸಿತ್ತು. ಇದೀಗ 3ನೇ ಬಾರಿಯೂ ಸಲ್ಲಿಸಿದ ಅರ್ಜಿಯನ್ನು ಹೈಕೋರ್ಟ್ ಪೀಠವು ತಿರಸ್ಕರಿಸಿದೆ. 2024ರ ಏ.18ರಂದು ಹುಬ್ಬಳ್ಳಿಯ ಬಿವಿಬಿ ಕಾಲೇಜು ಆವರಣದಲ್ಲಿ ಫಯಾಜ್ ನೇಹಾಳನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಕೊ*ಲೆ ಮಾಡಿದ್ದ.

ಆರೋಪಿ ಫಯಾಜ್‌ ಸಲ್ಲಿಸಿದ್ದ ಜಾಮೀನು ಅರ್ಜಿ ವಜಾಗೊಂಡಿದ್ದು ನ್ಯಾಯಕ್ಕೆ‌ ಸಂದ ಜಯ. ಸಂಪೂರ್ಣವಾಗಿ ನ್ಯಾಯಾಂಗ ಬಗ್ಗೆ ವಿಶ್ವಾಸವಿದೆ. ಆರೋಪಿ ನ್ಯಾಯಾಲಯದ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದು, ಇದರಿಂದಾಗಿ ವಿಚಾರಣೆಯಲ್ಲಿ ತುಸು ವಿಳಂಬವಾಗುತ್ತಿದೆ. ಇಷ್ಟಾಗಿಯೂ ನ್ಯಾಯ ನಮ್ಮ ಪರವಾಗಿದೆ ಎಂಬ ವಿಶ್ವಾಸವಿದೆ ಎಂದು ನೇಹಾ ಕುಟುಂಬದ ಪರ ನ್ಯಾಯವಾದಿ ರಾಘವೇಂದ್ರ ಮುತ್ತಗಿಕರ ಮಾಧ್ಯಮಗಳಿಗೆ ತಿಳಿಸಿದರು.

11:54 AM (IST) Feb 17

ಪ್ರಿಯಾ ಸುದೀಪ್ ಗೆ ಕಾರ್ ರೇಸ್ ಹುಚ್ಚು ಹಿಡಿಸಿದ್ದು ಯಾರು? ಇಂಟರೆಸ್ಟಿಂಗ್ ವಿಷ್ಯ ಹೊರ ಹಾಕಿದ ಕಿಚ್ಚನ ಮಡದಿ

ಕಿಚ್ಚನ ಪ್ರೀತಿಯ ಮಡದಿ ಪ್ರಿಯಾ ಸುದೀಪ್ ಎಲ್ಲದ್ರಲ್ಲೂ ಎತ್ತಿದ ಕೈ. ಸಿನಿಮಾ, ಕ್ರಿಕೆಟ್ ನಲ್ಲಿ ಮಾತ್ರವಲ್ಲ ಕಾರ್ ರೇಸ್ ನಲ್ಲೂ ಆಸಕ್ತಿ ಹೊಂದಿರುವ ಪ್ರಿಯಾ ಸುದೀಪ್ ಗೆ ಇಷ್ಟವಾಗುವ ಕಾರ್ ಯಾವ್ದು ಗೊತ್ತಾ?

Read Full Story

11:39 AM (IST) Feb 17

ಪ್ರತ್ಯೇಕ ಅಗ್ನಿ ಅವಘಡ - ದಾವಣಗೆರೆಯಲ್ಲಿ ಕಾರುಗಳು, ಇಳಕಲ್‌ನಲ್ಲಿ ಬೈಕ್‌ಗಳು ಸುಟ್ಟು ಕರಕಲು - ಲಕ್ಷಾಂತರ ರೂ. ಹಾನಿ!

ದಾವಣಗೆರೆ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ಅಗ್ನಿ ದುರಂತಗಳಲ್ಲಿ ಗ್ಯಾರೇಜ್‌ಗಳಲ್ಲಿದ್ದ ವಾಹನಗಳು ಸುಟ್ಟು ಕರಕಲಾಗಿವೆ. ದಾವಣಗೆರೆಯಲ್ಲಿ ಕಾರುಗಳು ಭಸ್ಮವಾದರೆ, ಇಳಕಲ್‌ನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಬೈಕ್‌ಗಳು ಬೆಂಕಿಗಾಹುತಿಯಾಗಿವೆ.
Read Full Story

11:28 AM (IST) Feb 17

ಬಿಎಂಟಿಸಿ ನಿವೃತ್ತ ಕಂಡಕ್ಟರ್ ಗೆ ಕೋಟಿಗಟ್ಟಲೆ ಆಸ್ತಿ ತಂದ ಕುತ್ತು, ಇಂದಿರಾನಗರದಲ್ಲಿ ಮಕ್ಕಳಿಂದಲೇ ತಂದೆ ಹತ್ಯೆ!

ಬೆಂಗಳೂರಿನ ಇಂದಿರಾನಗರದಲ್ಲಿ ಕೋಟ್ಯಾಂತರ ಮೌಲ್ಯದ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ, ನಿವೃತ್ತ ಬಿಎಂಟಿಸಿ ಕಂಡಕ್ಟರ್ ಮುನಿಕೃಷ್ಣಪ್ಪ ಅವರನ್ನು ಅವರ ಮಕ್ಕಳೇ ಹಾಕಿ ಸ್ಟಿಕ್ ಮತ್ತು ಕಬ್ಬಿಣದ ರಾಡ್‌ನಿಂದ ಹಲ್ಲೆ ಮಾಡಿ ಹತ್ಯೆ ಮಾಡಿದ್ದಾರೆ.

Read Full Story

11:15 AM (IST) Feb 17

ಇವತ್ತು ಜಿಂಬಾಬ್ವೆ ಎದುರು ಐರ್ಲೆಂಡ್ ಗೆಲ್ಲಲಿ ಎಂದು ಬೇಡಿಕೊಳ್ಳುತ್ತಿದೆ ಆಸ್ಟ್ರೇಲಿಯಾ! ಕಾಂಗರೂ ಪಡೆಗೆ ಇದೆಂಥಾ ಪರಿಸ್ಥಿತಿ

ಬೆಂಗಳೂರು: 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಈಗಾಗಲೇ ಹಲವು ಅಚ್ಚರಿ ಫಲಿತಾಂಶಗಳು ಹೊರಬಿದ್ದಿವೆ. ಇದೀಗ ಮಾಜಿ ನಾಯಕ ಆಸ್ಟ್ರೇಲಿಯಾ, ಇಂದು ನಡೆಯಲಿರುವ ಪಂದ್ಯದಲ್ಲಿ ಜಿಂಬಾಬ್ವೆ ಎದುರು ಐರ್ಲೆಂಡ್ ಗೆಲ್ಲಲಿ ಎಂದು ಬೇಡಿಕೊಳ್ಳುವ ಪರಿಸ್ಥಿತಿಗೆ ಬಂದು ನಿಂತಿದೆ.

 

Read Full Story

10:58 AM (IST) Feb 17

Bengaluru - ಪೊಲೀಸ್ ಯುನಿಫಾರ್ಮ್ ಧರಿಸಿ 20 ಲಕ್ಷ ರು. ನಗದು, 500 ಗ್ರಾಂ ಚಿನ್ನಾಭರಣ ಸುಲಿಗೆ

ಬೆಂಗಳೂರಿನ ಬ್ಯಾಡರಹಳ್ಳಿ ವ್ಯಾಪ್ತಿಯಲ್ಲಿ, ಪೊಲೀಸ್ ಸಮವಸ್ತ್ರ ಧರಿಸಿ ಬಂದ ಇಬ್ಬರು ದುಷ್ಕರ್ಮಿಗಳು ಮನೆಯೊಂದಕ್ಕೆ ನುಗ್ಗಿದ್ದಾರೆ. ಚಾಕು ತೋರಿಸಿ ದಂಪತಿಯನ್ನು ಬೆದರಿಸಿ, 20 ಲಕ್ಷ ರು. ನಗದು ಹಾಗೂ 500 ಗ್ರಾಂ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.
Read Full Story

10:37 AM (IST) Feb 17

2ನೇ ಪತ್ನಿ, ಮೊದಲ ಪತ್ನಿ ಮಗಳು ಗೌರಿ ನಡುವಿನ ಸಂಬಂಧ ಹೇಗಿದೆ? ಎಸ್‌ ಮಹೇಂದರ್‌ ಮಾತು ಕೇಳಿದ್ರೆ ದಿಗ್ಬ್ರಮೆ ಆಗುತ್ತೆ

Director S Mahendar: ಕನ್ನಡದ ಅನೇಕ ಸಿನಿಮಾಗಳಿಗೆ ನಿರ್ದೇಶನ ಮಾಡಿರುವ ಎಸ್‌ ಮಹೇಂದರ್‌ ಅವರು ನಟ ಕೂಡ ಹೌದು, ಅವರು ಎರಡನೇ ಮದುವೆಯಾಗಿ, ಮಗ ಕೂಡ ಇದ್ದಾನೆ. ಈಗ ಎಸ್‌ ಮಹೇಂದರ್‌ ಅವರು ಎರಡನೇ ಪತ್ನಿ ಹಾಗೂ ಮಗಳು ಗೌರಿ ನಡುವಿನ ಸಂಬಂಧದ ಬಗ್ಗೆ ಮಾತನಾಡಿದ್ದಾರೆ.

 

Read Full Story

10:29 AM (IST) Feb 17

ಏನಾಗ್ತಿದೆ ರಾಜ್ಯದಲ್ಲಿ? ಒಂದಲ್ಲ ಎರಡಲ್ಲ, ಮಂಡ್ಯ ಸೇರಿ 10 ನ್ಯಾಯಾಲಯಗಳಿಗೆ ಬಾಂಬ್ ಬೆದರಿಕೆ!

ಮಂಡ್ಯ ನ್ಯಾಯಾಲಯಕ್ಕೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದ ಹಿನ್ನೆಲೆಯಲ್ಲಿ ತೀವ್ರ ಆತಂಕ ಸೃಷ್ಟಿಯಾಗಿತ್ತು. ನ್ಯಾಯಾಧೀಶರು, ವಕೀಲರು ಸೇರಿದಂತೆ ಎಲ್ಲರನ್ನೂ ಹೊರಕಳುಹಿಸಿ, ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನ ದಳದಿಂದ ತಪಾಸಣೆ ನಡೆಸಲಾಯಿತು. ತಪಾಸಣೆ ಬಳಿಕ ಇದೊಂದು ಹುಸಿ ಬೆದರಿಕೆ ಎಂದು ಖಚಿತಪಟ್ಟಿದ್ದು, 

Read Full Story

10:23 AM (IST) Feb 17

ಚಿರಂಜೀವಿ ಜತೆ ರೊಮ್ಯಾನ್ಸ್ ಅನ್ನು ಎಂಜಾಯ್ ಮಾಡಲು ನನಗೆ ಆಗುತ್ತಿರಲಿಲ್ಲ ಎಂದ ನಟಿ! ಯಾರು ಆ ನಟಿ? ಏನದು ಘಟನೆ?

ಚಿರಂಜೀವಿ ಜೊತೆ ಡಾನ್ಸ್ ಮಾಡುವಾಗ ಒಬ್ಬ ನಟಿ ಸಖತ್ ಪೈಪೋಟಿ ನೀಡುತ್ತಿದ್ದರಂತೆ. ಇದನ್ನು ಗಮನಿಸಿದ ಚಿರಂಜೀವಿ, ಆಕೆಗೆ ಒಂದು ಸ್ವೀಟ್ ವಾರ್ನಿಂಗ್ ಕೊಟ್ಟಿದ್ದರು. ಅಷ್ಟಕ್ಕೂ ಆ ನಟಿ ಯಾರು? ಏನಿದು ಘಟನೆ? ಇಲ್ಲಿದೆ ವಿವರ.
Read Full Story

10:14 AM (IST) Feb 17

ಬಾಂಗ್ಲಾ ಸರ್ಕಾರ ಕೆಡವಿದ ಜೆನ್‌-ಝೀಗಳೇನಾದರು ?

ಬಾಂಗ್ಲಾದೇಶದ ಸಾರ್ವತ್ರಿಕ ಚುನಾವಣೆಯ ಫಲಿತಾಂಶವನ್ನು ಒಂದು ಸಾಲಿನಲ್ಲಿ ಈ ರೀತಿ ವಿಶ್ಲೇಷಿಸಬಹುದು. ಅಲ್ಲಿ ಕಳೆದ ವಾರ ನಡೆದ ಚುನಾವಣೆಗೆ ಪ್ರಮುಖ ಕಾರಣವೇ- 2024ರ ಆಗಸ್ಟ್‌ನ ಜೆನ್‌-ಝೀ ಹೋರಾಟ.

Read Full Story

09:57 AM (IST) Feb 17

ಪದೇ ಪದೇ‌ ಕಾರ್ತಿಕ್‌ ಮಹೇಶ್‌ ಜೊತೆ ಲವ್‌ ಗಾಸಿಪ್; ಕೊನೆಗೂ ಸತ್ಯ ಹೇಳಿದ Karna Serial ನಮ್ರತಾ ಗೌಡ

Actress Namratha Gowda Love Gossip: ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ಸ್ಪರ್ಧಿಗಳಾದ ನಮ್ರತಾ ಗೌಡ ಹಾಗೂ ಕಾರ್ತಿಕ್‌ ಮಹೇಶ್‌ ಅವರು ಲವ್‌ನಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಈಗ ಈ ಬಗ್ಗೆ ನಮ್ರತಾ ಗೌಡ ಅವರು ಸೋಶಿಯಲ್‌ ಮೀಡಿಯಾದಲ್ಲಿಯೇ ಪ್ರತಿಕ್ರಿಯೆ ನೀಡಿದ್ದಾರೆ.

Read Full Story

09:56 AM (IST) Feb 17

ಸುರಂಗ ಮಾರ್ಗ, ಫ್ಲೈಓವರ್ ಆಗುಂಬೆ ಘಾಟಿಗೆ ಮಹಾ ಯೋಜನೆ? ಬದಲಾಗಲಿದೆ ಮಲೆನಾಡಿನ ದಾರಿ

ಮಲೆನಾಡು-ಕರಾವಳಿ ಸಂಪರ್ಕದ ಕೊಂಡಿಯಾಗಿರುವ ಆಗುಂಬೆ ಘಾಟಿ ರಸ್ತೆಯನ್ನು ಸುರಂಗ ಅಥವಾ ಫ್ಲೈಓವರ್ ಮೂಲಕ ವಿಸ್ತರಿಸುವ ಯೋಜನೆ ಸಿದ್ಧವಾಗಿದೆ. ತೀರ್ಥಹಳ್ಳಿ ಪಟ್ಟಣದಲ್ಲಿ ಪ್ರಯಾಣಿಕರ ತಂಗುದಾಣ, ಬೈಪಾಸ್ ರಸ್ತೆ ಮತ್ತು ಹೆದ್ದಾರಿ ವಿಸ್ತರಣೆಯಂತಹ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ.

Read Full Story

09:54 AM (IST) Feb 17

ನಟ ವಿಜಯ್‌ - ತ್ರಿಶಾ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಕೀಳು ಹೇಳಿಕೆ ವಿವಾದ, ವಿಷಾಧ

ಚುನಾವಣಾ ಹೊಸ್ತಿಲಿನಲ್ಲಿರುವ ತಮಿಳುನಾಡಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನೈನಾರ್‌ ನಾಗೇಂದ್ರನ್‌ ಟಿವಿಕೆ ಪಕ್ಷದ ಮುಖ್ಯಸ್ಥ ನಟ ವಿಜಯ್‌ ಮತ್ತು ನಟಿ ತ್ರಿಶಾ ಕೃಷ್ಣನ್‌ ಸಂಬಂಧದ ಬಗ್ಗೆ ಕೀಳು ಹೇಳಿಕೆ ನೀಡಿದ್ದು ವಿವಾದಕ್ಕೆ ಕಾರಣವಾಗಿದೆ.

Read Full Story

09:34 AM (IST) Feb 17

KMF - ಗ್ರಾಹಕರೇ ಆತಂಕ ಬೇಡ; ನಂದಿನಿ ಹಾಲು ಸಂಪೂರ್ಣ ಸುರಕ್ಷಿತ, ತಪ್ಪು ಮಾಹಿತಿ ಹರಡಿದ್ರೆ ಕಾನೂನು ಕ್ರಮ ಎಚ್ಚರಿಕೆ

ಸಾಮಾಜಿಕ ಜಾಲತಾಣಗಳಲ್ಲಿ ನಂದಿನಿ ಉತ್ಪನ್ನಗಳ ಗುಣಮಟ್ಟದ ಕುರಿತು ಹರಡುತ್ತಿರುವ ವದಂತಿಗಳನ್ನು ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್) ತಳ್ಳಿಹಾಕಿದೆ. ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳು FSSAI ಮಾನದಂಡಗಳ ಅಡಿ ಸಂಪೂರ್ಣ ಸುರಕ್ಷಿತವಾಗಿದ್ದು, ಗ್ರಾಹಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಸ್ಪಷ್ಟನೆ

Read Full Story

09:33 AM (IST) Feb 17

Bengaluru - ರಾಜಧಾನಿಗೆ ಬಂದ ಜಮ್ಕೋ - ಪರಿಣಿತ ಎಂಜಿನಿಯರಿಂಗ್‌ ಉದ್ಯೋಗಿಗಳಿಗೆ ಸುವರ್ಣವಕಾಶ

ವಿಮಾನ ಕ್ಯಾಬಿನ್‌ ಒಳಾಂಗಣ ಬಿಡಿಭಾಗ ತಯಾರಿಕಾ ಸಂಸ್ಥೆಯಾದ ಜಮ್ಕೋ, ಬೆಂಗಳೂರಿನಲ್ಲಿ ತನ್ನ ಉತ್ಪನ್ನ ಎಂಜಿನಿಯರಿಂಗ್‌ ಕೇಂದ್ರವನ್ನು ಸ್ಥಾಪಿಸಲು ಮುಂದಾಗಿದೆ.  ಪರಿಣಿತ ಎಂಜಿನಿಯರಿಂಗ್‌ ಉದ್ಯೋಗಿಗಳು ಮತ್ತು ಉತ್ತಮ ವೈಮಾಂತರಿಕ್ಷ ವಾತಾವರಣದಿಂದಾಗಿ ಈ ಹೂಡಿಕೆಗೆ ಸಂಸ್ಥೆ ಆಸಕ್ತಿ ತೋರಿದೆ. 

Read Full Story

09:16 AM (IST) Feb 17

Naa Ninna Bidalaare Serial ಅಂಬಿ ಪಾತ್ರಧಾರಿ ನೀತಾ ಅಶೋಕ್‌ಗೆ ಸರ್ಜರಿ; ಸದ್ಯ ಶೂಟಿಂಗ್‌ನಲ್ಲಿ ಭಾಗವಹಿಸಲ್ಲ!

Naa Ninna Bidalaare Kannada Serial Episode: ನಾ ನಿನ್ನ ಬಿಡಲಾರೆ ಧಾರಾವಾಹಿಯಲ್ಲಿ ಶೂಟಿಂಗ್‌ ಮಾಡುವಾಗ, ಅಂಬಿಕಾ ಪಾತ್ರಧಾರಿ ನೀತಾ ಅಶೋಕ್‌ ಅವರ ಕಾಲಿಗೆ ಗಾಯ ಆಗಿದೆ, ಹೀಗಾಗಿ ಸರ್ಜರಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

 

Read Full Story

09:10 AM (IST) Feb 17

ಅಮೆರಿಕದ ದೈತ್ಯ ಆ್ಯಂಥ್ರೋಪಿಕ್‌ಗೆ ಬೆಳಗಾವಿ ಸಂಸ್ಥೆಯ ಸವಾಲು; ಸಮನ್ಸ್‌ ನೀಡಿದ ನ್ಯಾಯಾಲಾಯ

ಬೆಳಗಾವಿ ಮೂಲದ ಅಂಥ್ರೋಪಿಕ್‌ ಸಾಫ್ಟ್‌ವೇರ್‌ ಪ್ರೈ.ಲಿ. ಕಂಪನಿಯು, ತನ್ನದೇ ಹೆಸರು ಬಳಸುತ್ತಿರುವ ಅಮೆರಿಕದ ಪ್ರಸಿದ್ಧ ಎಐ ಸಂಸ್ಥೆ ಅಂಥ್ರೋಪಿಕ್‌ ಪಿಬಿಸಿ ವಿರುದ್ಧ ಮೊಕದ್ದಮೆ ಹೂಡಿದೆ. ಭಾರತದಲ್ಲಿ 'ಅಂಥ್ರೋಪಿಕ್‌' ಹೆಸರಿನ ಮೇಲಿನ ಪ್ರಾಥಮಿಕ ಹಕ್ಕು ತಮಗೇ ಸೇರಿದೆ ಎಂದು ಹೇಳಿದೆ.

Read Full Story

08:48 AM (IST) Feb 17

ನೀವು ಗಮನಿಸಬೇಕಾದ ಹಣ ದಂಡ ಮಾಡುವ 9 ಬಗೆಗಳು

ಎರಿಕ್‌ ಸ್ಕಡರ್‌ ಎಂಬ ಆರ್ಥಿಕ ತಜ್ಞ, ‘ ನನ್ನ ಕ್ಲೈಂಟ್‌ಗಳಿಗೆ ಹಣ ಎಲ್ಲಿ ಖರ್ಚಾಗುತ್ತೆ ಅಂತ ನಾನು ತೋರಿಸಿದಾಗ; ಅಯ್ಯೋ, ಇದಕ್ಕೆಲ್ಲ ಇಷ್ಟು ಹಣ ಖರ್ಚು ಮಾಡ್ತಿದ್ದೀನಿ ಅಂತ ಗೊತ್ತೇ ಇರಲಿಲ್ಲ ಎಂದು ಉದ್ಗರಿಸುತ್ತಾರೆ. ಆದರೆ ಇಂಥಾ ಸೂಕ್ಷ್ಮ ಎಚ್ಚರ ನಾಳೆಗಳ ಟೆನ್ಶನ್‌ ಅನ್ನು ಅರ್ಧ ಕಡಿಮೆ ಮಾಡುತ್ತದೆ’

Read Full Story

08:43 AM (IST) Feb 17

ಅವನಿಗೆ ಐಶ್ವರ್ಯಾ, ಇವನಿಗೆ ರೇಣುಕಾ, ಮತ್ತೊಬ್ಬನಿಗೆ ಆರೋಹಿ - ಮೂರು ಹೆಸರಿನ ಧಾರವಾಡದ ಸುಂದ್ರಿ

ಧಾರವಾಡದ ಯುವತಿಯೊಬ್ಬಳು ಐಶ್ವರ್ಯಾ, ರೇಣುಕಾ, ಆರೋಹಿ ಎಂದು ಹೆಸರು ಬದಲಾಯಿಸಿಕೊಂಡು ಯುವಕರಿಗೆ ಪ್ರೀತಿಯ ನಾಟಕವಾಡಿ ಲಕ್ಷಾಂತರ ರೂಪಾಯಿ ವಂಚಿಸಿದ್ದಾಳೆ. ಈಕೆಯ ಮೋಸದಿಂದ ನೊಂದ ಯುವಕನೊಬ್ಬ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಸದ್ಯ ಯುವತಿಯನ್ನು ಪೊಲೀಸರ ವಶಕ್ಕೆ ನೀಡಲಾಗಿದೆ.
Read Full Story

08:27 AM (IST) Feb 17

'ಬೇರೆಯವರಿಗೂ ಮಕ್ಕಳಿದ್ದಾರೆ..' - ಮಗಳ ಪರೀಕ್ಷೆಗಾಗಿ 20 ದಿನ ಬೇಲ್ ಕೋರಿದ್ದ ಪವಿತ್ರಾಗೌಡ ಅರ್ಜಿ ವಜಾ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ, ಮಗಳ ಪರೀಕ್ಷೆಯ ಕಾರಣ ನೀಡಿ ನಟಿ ಪವಿತ್ರಾ ಗೌಡ ಸಲ್ಲಿಸಿದ್ದ 20 ದಿನಗಳ ಮಧ್ಯಂತರ ಜಾಮೀನು ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ. ಪ್ರಕರಣದ ಇತರ ಆರೋಪಿಗಳಿಗೂ ಮಕ್ಕಳಿದ್ದಾರೆ ಎಂದು ಅಭಿಪ್ರಾಯಪಟ್ಟ ಕೋರ್ಟ್, ದರ್ಶನ್ ಸೇರಿ ಏಳು ಆರೋಪಿಗಳ ನ್ಯಾಯಾಂಗ ಬಂಧನ ವಿಸ್ತರಿಸಿದೆ.

Read Full Story

08:26 AM (IST) Feb 17

Bhagyalakshmi Serial - ಬಿಲ್ಡಿಂಗ್‌ನಿಂದ ಹಾರಿ ಆತ್ಮ*ಹತ್ಯೆ ಮಾಡ್ಕೊಂಡ ಶ್ರೇಷ್ಠ; ಪಾತ್ರ ಮುಗಿದೋಯ್ತಾ?

Bhagyalakshmi Kannada Serial Episode: ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಕೊನೆಗೂ ತಾಂಡವ್‌ನನ್ನು ಭಾಗ್ಯ ಮನೆಯೊಳಗಡೆ ಕರೆದಳು. ಶ್ರೇಷ್ಠ ಇದನ್ನೆಲ್ಲ ತಡೆಯೋಕೆ ಎಷ್ಟೇ ಪ್ರಯತ್ನಪಟ್ಟರೂ ಕೂಡ ಆಗಲೇ ಇಲ್ಲ. ಈಗ ಶ್ರೇಷ್ಠ ತನ್ನನ್ನು ತಾನೇ ಮುಗಿಸಿಕೊಳ್ಳೋಕೆ ನೋಡುತ್ತಿದ್ದಾಳೆ.

 

Read Full Story

07:58 AM (IST) Feb 17

ಮಣ್ಣಾಗಿದ್ದ ಗೋಡೆಗಳಿಗೆ ಸ್ವಂತ ಹಣದಲ್ಲೇ ಬಣ್ಣ ತುಂಬಿದ ಕನಕಗಿರಿ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳು!

ಕೊಪ್ಪಳ ಜಿಲ್ಲೆಯ ಕನಕಗಿರಿ ಕರ್ನಾಟಕ ಪಬ್ಲಿಕ್ ಶಾಲೆಯ 10ನೇ ತರಗತಿ ವಿದ್ಯಾರ್ಥಿಗಳು ಸ್ವಂತ ಹಣವನ್ನು ಸಂಗ್ರಹಿಸಿ, ತಮ್ಮ ಶಾಲಾ ಕೊಠಡಿಗಳಿಗೆ ತಾವೇ ಬಣ್ಣ ಹಚ್ಚಿದ್ದಾರೆ. ಸಂಗ್ರಹವಾದ ಹಣವು ಕಾರ್ಮಿಕರ ಕೂಲಿಗೆ ಸಾಕಾಗದ ಕಾರಣ, 'ಶಾಲೆಗಾಗಿ ನಾವು' ಎಂಬ ಧ್ಯೇಯದಡಿ ವಿದ್ಯಾರ್ಥಿಗಳೇ ಬಣ್ಣ ಹಚ್ಚಿದ್ದಾರೆ.

Read Full Story

07:54 AM (IST) Feb 17

ಚಿಕ್ಕಮಗಳೂರಿನಲ್ಲಿ ಕೋಮು ಘರ್ಷಣೆ; ಇಡೀ ನಗರ ಬೂದಿ ಮುಚ್ಚಿದ ಕೆಂಡ - ರಾತ್ರೋರಾತ್ರಿ ನಡೆದಿದ್ದೇನು?

ಚಿಕ್ಕಮಗಳೂರು ನಗರದ ವಿಜಯಪುರ ಬಡಾವಣೆಯಲ್ಲಿ ಹಿಂದೂಗಳ ಮನೆ ಮೇಲೆ ಅನ್ಯಕೋಮಿನ ಯುವಕರು ಕಲ್ಲು ತೂರಾಟ ನಡೆಸಿದ ಆರೋಪದ ಮೇಲೆ ಕೋಮು ಘರ್ಷಣೆ ಉಂಟಾಗಿದೆ. ಈ ಘಟನೆಯಿಂದಾಗಿ ಎರಡೂ ಕೋಮಿನ ಯುವಕರು ಪೊಲೀಸ್ ಠಾಣೆ ಹಾಗೂ ಆಸ್ಪತ್ರೆ ಮುಂದೆ ಜಮಾಯಿಸಿದ್ದು, ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.
Read Full Story

07:52 AM (IST) Feb 17

ಉ.ಕೊರಿಯಾ - ಕಿಮ್‌ ಪಟ್ಟಕ್ಕಾಗಿ 13 ವರ್ಷದ ಪುತ್ರಿ, ಸಹೋದರಿ ನಡುವೆ ಜಟಾಪಟಿ

ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್‌ ಉಂಗ್‌ ಜಾನ್‌, ಉತ್ತರಾಧಿಕಾರಿ ಸ್ಥಾನಕ್ಕೆ, ಕಿಮ್‌ರ ಪುತ್ರಿ ಕಿಮ್‌ ಜು ಆಯೆ ಮತ್ತು ಸಹೋದರಿ ಕಿಮ್ ಯೋ-ಜಾಂಗ್‌ ನಡುವೆ ಕಲಹ ಆರಂಭವಾಗಿದೆ ಎಂದು ವರದಿಗಳು ತಿಳಿಸಿವೆ.

Read Full Story

07:37 AM (IST) Feb 17

BEL Missile Integration Unit ಬಿಇಎಲ್‌ನ ಹೈಟೆಕ್ ಕ್ಷಿಪಣಿ ಸಂಯೋಜನಾ ಸಂಕೀರ್ಣಕ್ಕೆ ರಾಜನಾಥ್‌ ಸಿಂಗ್ ಚಾಲನೆ

BEL Missile Integration Unit Bengaluru ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಬೆಂಗಳೂರಿನ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ನಲ್ಲಿ ನೂತನ 'ಕ್ಷಿಪಣಿ ಸಂಯೋಜನಾ ಘಟಕ' ಉದ್ಘಾಟಿಸಿದರು. ಈ ಸಂದರ್ಭ, 'ಆಕಾಶ್' ಕ್ಷಿಪಣಿ ವ್ಯವಸ್ಥೆ 'ಫೈರ್ ಕಂಟ್ರೋಲ್ ರಾಡಾರ್' ಅನ್ನು ಅನಾವರಣಗೊಳಿಸಿದರು.

Read Full Story

07:20 AM (IST) Feb 17

ಸಿಬಿಎಸ್‌ಇ 10ನೇ ಕ್ಲಾಸ್‌ಗೆ 2 ಎಕ್ಸಾಂ - ಮೊದಲನೇ ಪರೀಕ್ಷೆ ಹಾಜರಿ ಕಡ್ಡಾಯ

ರಾಷ್ಟ್ರೀಯ ಶಿಕ್ಷಣ ನೀತಿಯಡಿ (ಎನ್‌ಇಪಿ) ಈ ವರ್ಷದಿಂದ 2 ಹಂತಗಳಲ್ಲಿ 10ನೇ ತರಗತಿಯ ಪರೀಕ್ಷೆ ನಡೆಸಲು ಆರಂಭಿಸಿರುವ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ(ಸಿಬಿಎಸ್‌ಇ), ಅದಕ್ಕೆ ಸಂಬಂಧಿಸಿದ ನಿರ್ದೇಶನಗಳನ್ನು ಜಾರಿ ಮಾಡಿದೆ.

Read Full Story

07:16 AM (IST) Feb 17

India-US trade deal - ಇದು ವ್ಯಾಪಾರವಲ್ಲ, ದೇಶದ ರೈತರ ಮರಣ ಶಾಸನ! ಮುಖ್ಯಮಂತ್ರಿ ಚಂದ್ರು ಕಿಡಿ

ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಭಾರತ-ಅಮೆರಿಕ ವಾಣಿಜ್ಯ ಒಪ್ಪಂದ ವಿರೋಧಿಸಿ ಪ್ರತಿಭಟನೆ ನಡೆಯಿತು. ಅಮೆರಿಕದ ಕೃಷಿ ಉತ್ಪನ್ನಗಳಿಗೆ ಕಡಿಮೆ ಸುಂಕದಲ್ಲಿ ಭಾರತೀಯ ಮಾರುಕಟ್ಟೆ ನೀಡುವುದರಿಂದ ದೇಶದ ರೈತರಿಗೆ ಮರಣ ಶಾಸನವಾಗಲಿದೆ ಎಂದು ಆರೋಪಿಸಿದರು.

Read Full Story

07:03 AM (IST) Feb 17

ಕಾಂಗ್ರೆಸ್‌ಗೆ ದೊಡ್ಡ ಆಘಾತ - 36 ವರ್ಷಗಳಿಂದ ಪಕ್ಷಕ್ಕಾಗಿ ಶ್ರಮಿಸಿದ ನಾಯಕ ರಾಜೀನಾಮೆ

ಅಸ್ಸಾಂನಲ್ಲಿ ಕಾಂಗ್ರೆಸ್‌ಗೆ ದೊಡ್ಡ ಆಘಾತ . 2021-25ರ ಅವಧಿಯಲ್ಲಿ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದ ಭೂಪೇನ್‌ ಬೊಹ್ರಾ, 36 ವರ್ಷಗಳಿಂದ ಪಕ್ಷಕ್ಕಾಗಿ ಶ್ರಮಿಸಿದ ತಮ್ಮನ್ನು ಪಕ್ಷದಲ್ಲಿ ಕಡೆಗಣಿಸಲಾಗುತ್ತಿದೆ. ರಾಜ್ಯದಲ್ಲಿ ಪಕ್ಷದ ಭವಿಷ್ಯ ಕಳವಳಕಾರಿಯಾಗಿದೆ ಎಂದು ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

Read Full Story

More Trending News