ಕಲಬುರಗಿ (ಆ.29): ಬಿಜೆಪಿಯ 2 ವರ್ಷಗಳ ಆಡಳಿತದಲ್ಲಿ ಕರ್ನಾಟಕ ರೇಪ್ ರಾಜ್ಯವಾಗಿದೆ. ಈ ಅವಧಿಯಲ್ಲಿ ರಾಜ್ಯದಲ್ಲಿ 1,136 ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಬಿಜೆಪಿ ಆಡಳಿತವನ್ನು ದೂರಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಆಳ್ವಿಕೆಯಲ್ಲಿ ರಾಜ್ಯದಲ್ಲಿ ಮಹಿಳೆಯರಿಗೆ ಭದ್ರತೆಯೇ ಇಲ್ಲದಂತಾಗಿದೆ. ಮೈಸೂರು ಪ್ರಕರಣದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ವರ್ತನೆ ನೋಡಿದರೆ ಅಳಬೇಕೋ ನಗಬೇಕೋ ಗೊತ್ತಾಗುತ್ತಿಲ್ಲ.
ನೆಹರೂ ಹುಕ್ಕಾ ಬಾರ್ V/S ವಾಜಪೇಯಿ ಬಾರ್: ಖರ್ಗೆ ಮಾತಿಗೆ ಖಂಡ್ರೆ ಸಾಥ್
ತಮ್ಮ ವೈಫಲ್ಯ ಮುಚ್ಚಿಟ್ಟುಕೊಳ್ಳಲು ಮಹಿಳೆಯರಿಗೆ ಹೊರಗೇ ಬರಬೇಡಿ ಎಂದು ಉಪದೇಶ ನೀಡುತ್ತಿದ್ದಾರೆ. ಗೃಹ ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ. ಬಿಜೆಪಿ ಅದ್ಹೇಗೆ ಜ್ಞಾನೇಂದ್ರ ಅವರ ವಿಚಾರದಲ್ಲಿ ಮೌನವಾಗಿದೆಯೋ? ಸಂಘ ಪರಿವಾರದ ಬೆದರಿಕೆ ಕಾರಣವೇ ಎಂದು ಲೇವಡಿ ಮಾಡಿದರು.