ಗಣೇಶ ವಿಸರ್ಜನೆ ತಮಟೆ ಶಬ್ದಕ್ಕೆ ಹೆಜ್ಜೆ ಹಾಕಿದವನಿಗೆ ಗೊತ್ತು ಅದರ ಮಹಿಮೆ!

Published : Sep 23, 2018, 09:52 PM ISTUpdated : Sep 23, 2018, 09:57 PM IST
ಗಣೇಶ ವಿಸರ್ಜನೆ ತಮಟೆ ಶಬ್ದಕ್ಕೆ ಹೆಜ್ಜೆ ಹಾಕಿದವನಿಗೆ ಗೊತ್ತು ಅದರ ಮಹಿಮೆ!

ಸಾರಾಂಶ

ಅಂದು ಸ್ವಾತಂತ್ರ್ಯ ಚಳವಳಿಗೆ ಜನರನ್ನು ಒಗ್ಗೂಡಿಸಲು ಬಾಲಗಂಗಾಧರ ತಿಲಕರು ಹಾಕಿಕೊಟ್ಟ ಗಣೇಶ ಉತ್ಸವದ ಮಾರ್ಗ ಇಂದು ದೇಶದ ಪರಂಪರೆಯಾಗಿದೆ. ಬದಲಾದ ಪರಿಸ್ಥಿತಿಯಲ್ಲಿ ಗಣೇಶೋತ್ಸವದ ಸಂಭ್ರಮವೂ ಇಮ್ಮಡಿಯಾಗಿದೆ. ಗಣೇಶ ವಿಸರ್ಜನೆ ವೇಳೆ ಹಾಕುವ ಹೆಜ್ಜೆಗಳು ಹಾಗೆ...

ಇಲ್ಲಿ ತಾಳ-ಲಯ ಇದಕ್ಕೆಲ್ಲ ಅವಕಾಶ ಇಲ್ಲ. ಮನಸ್ಸನ್ನು ಮುಕ್ತವಾಗಿರಿಸಿ ಮನಸಿಗೆ ಬಂದ ಸ್ಟೆಪ್ ಹಾಕಿದರೆ ಮುಗಿಯಿತು. ತಮಟೆಯ ಶಬ್ದ ಕಿವಿಗೆ ಬಿದ್ದರೆ ಮೊದಲು ಮನಸು ಕುಣಿಯುತ್ತದೆ. ನಂತರ ಕಾಲುಗಳು ನಮಗೆ ಗೊತ್ತಿಲ್ಲದಂತೆ ಹೆಜ್ಜೆ ಹಾಕಲು ಆರಂಭಿಸುತ್ತದೆ. ಇದೇ ಅಲ್ಲವೆ ತಲ್ಲೀನವಾಗುವುದು? ಎಂಬುದಕ್ಕೆ ಅರ್ಥ!

ಈ ಗಣೇಶನಿಗೆ ನಗರ, ಪಟ್ಟಣ, ಹಳ್ಳಿ, ಮಹಾನಗರ ಎಂಬ ಯಾವ ತಾರತಮ್ಯವೂ ಇಲ್ಲ. ಎಲ್ಲರ ಮನೆಗೆ ಬರುತ್ತಾನೆ.. ಎಲ್ಲ ಗಲ್ಲಿಯಲ್ಲೂ ಕುಳಿತುಕೊಳ್ಳುತ್ತಾನೆ. ಭಕ್ತರು ಹಾಕುವ ಹಾಡು, ಆರ್ಕೆಸ್ಟ್ರಾ ಸಾಂಗ್ ಗಳಿಗೂ ತಲೆದೂಗುತ್ತಾನೆ.

ಗಣೇಶ ವಿಸರ್ಜನೆಯೇ ಒಂದು ವಿಶಿಷ್ಟ ಸಂಭ್ರಮ. ಅಲ್ಲಿ ಕುಣಿತ ಹಾಕದವರಿಗೆ ಜಾಗವಿಲ್ಲ. ಆ ಕುಣಿತದ ಮಹಿಮೆಯನ್ನು ಅನುಭವಿಸಿಯೇ ನೋಡಬೇಕು. ತಮಟೆ-ಡೊಳ್ಳಿನ ಶಬ್ದಕ್ಕೆ ತಕ್ಕಂತೆ ಹೆಜ್ಜೆ ಹಾಕಿದರೆ ಎಲ್ಲವನ್ನು ಮರೆಯುವ ಅವಕಾಶ.

ಗಣೇಶ ಉತ್ಸವಕ್ಕೆ 1893ರಲ್ಲಿ ಬಾಲಗಂಗಾಧರ್ ತಿಲಕ್ ಅವರು ಮಹಾರಾಷ್ಟ್ರದಲ್ಲಿ  ಹೊಸ ಸ್ವರೂಪ ನೀಡಿದರು ನಂತರ ಅದು ರಾಷ್ಟ್ರೀಯ ಹಬ್ಬವಾಗಿ  ಬದಲಾಯಿತು. 

ಆದರೆ ಗಣೇಶನ ಹೆಸರಿನಲ್ಲಿ ಇಂದು ವಂತಿಗೆ-ವಸೂಲಿ ನಡೆಯುತ್ತಿರುವ ಕಟು ಸತ್ಯವನ್ನು ಒಪ್ಪಿಕೊಳ್ಳಬೇಕು. ಪ್ಯಾರಿಸ್ ಫ್ಲಾಸ್ಟರ್ ಅನಾಹುತ ಗೊತ್ತಾಗಿ ಜನ ಮತ್ತೆ ಜೇಡಿಮಣ್ಣಿನ ಗಣೇಶನ ಮೊರೆ ಹೋಗುತ್ತಿರುವುದು ಉತ್ತಮ ಬೆಳವಣಿಗೆ. ಒಟ್ಟಿನಲ್ಲಿ ಗಣೇಶ ಹಬ್ಬ ಒಂದು ಹಬ್ಬವಾಗಿ ಉಳಿದಿಲ್ಲ. ಇದೊಂದು ಸಂಪ್ರದಾಯವಾಗಿದೆ. ಜನರು ಸಂಪೂರ್ಣವಾಗಿ ಇದರಲ್ಲಿ ಪಾಲ್ಗೊಳ್ಳುತ್ತಾರೆ. ಬನ್ನಿ ನೀವು ಎರಡು ಸ್ಟೆಪ್ ಹಾಕಿ ಬನ್ನಿ...

"

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೊಪ್ಪಳದಲ್ಲಿ ಭೀಕರ ಅಪಘಾತ, ಬೈಕ್‌ನಲ್ಲಿದ್ದ ಮೂವರು ಸ್ಥಳದಲ್ಲೇ ಸಾವು
ವನ್ಯಜೀವಿ-ಮಾನವ ಸಂಘರ್ಷ ಶಾಶ್ವತ ಪರಿಹಾರಕ್ಕೆ ಕ್ರಮ: ಸಚಿವ ಈಶ್ವರ್‌ ಖಂಡ್ರೆ