ವಲಸಿಗರ ವಿರುದ್ಧ ಗುಡುಗಿದ್ದ ಮಮತಾ!

Aug 5, 2018, 5:30 PM IST

ಬೆಂಗಳೂರು(ಆ.5): ಎನ್‌ಆರ್‌ಸಿ ಕುರಿತು ಈ ಹಿಂದೆ ವಿಪಕ್ಷಗಳು ಏನು ನಿಲುವು ಹೊಂದಿದ್ದವು ಎಂಬುದು ವಿಕಿಲೀಕ್ಸ್ ಮಾಹಿತಿಯಿಂದ ಬಹಿರಂಗವಾಗಿದೆ. ಎನ್ ಅರ್ ಸಿ ಜಾರಿ ಮಾಡಲು ಹಿಂದೇಟು ಹಾಕಿದ್ದ ಸೋನಿಯಾ, ಚುನಾವಣಾ ಪ್ರಚಾರವೊಂದರಲ್ಲಿ ಅಕ್ರಮ ಬಾಂಗ್ಲಾ ವಲಸಿಗರ ಹಿತರಕ್ಷಣೆ ಮಾಡುವುದಾಗಿ ಬಹಿರಂಗವಾಗಿ ಘೋಷಿಸಿದ್ದರು.

ಅಲ್ಲದೇ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಈ ಹಿಂದೆ ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಗುಡುಗಿದ್ದರು. ಅಕ್ರಮ ಬಾಂಗ್ಲಾ ವಲಸಿಗರಿಂದ ದೇಶದ ಭದ್ರತೆಗೆ ಅಪಾಯವಿದೆ ಎಂದು ಅಬ್ಬರಿಸಿದ್ದ ಮಮತಾ, ವಿಧಾನಸಭೆಯಲ್ಲಿ ಮೈಕ್ ಕಿತ್ತೆಸೆದು ತಮ್ಮ ಅಕ್ರೋಶ ವ್ಯಕ್ತಪಡಿಸಿದ್ದರು.

ಈ ಕುರಿತು ನಿಮ್ಮ ಸುವರ್ಣನ್ಯುಸ್ ನ ಲೆಫ್ಟ್ ರೈಟ್ ಆ್ಯಂಡ್ ಸೆಂಟರ್ ನಲ್ಲಿ ನಡೆದ ವಿಸ್ತೃತ ಚರ್ಚೆಯ ಸಂಪೂರ್ಣ ವಿವರ ಇಲ್ಲಿದೆ..