ಬೆಂಗಳೂರು (ಮಾ.11): ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಚರ್ಚೆಯಲ್ಲಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ (ಜಾತಿಗಣತಿ ವರದಿ-2015) ವರದಿ ಶುಕ್ರವಾರದ ಸಚಿವ ಸಂಪುಟ ಸಭೆಯಲ್ಲಿ ಮಂಡನೆಯಾಗಲಿದ್ದು, ವರದಿಗೆ ಬಹುತೇಕ ಅನುಮೋದನೆ ದೊರೆಯುವ ಸಾಧ್ಯತೆಗಳಿವೆ. ಇದರ ನಡುವೆ ಅಮೆರಿಕದಿಂದ ಭಾರತಕ್ಕೆ ಕರೆತಂದಿರುವ ಉಗ್ರ ತಹಾವೂರ್ ರಾಣಾನನ್ನು 20 ದಿನಗಳ ಕಾಲ ವಶಕ್ಕೆ ನೀಡುವಂತೆ ಎನ್ಐಎ ಪಟಿಯಾಲ ಕೋರ್ಟ್ ಎದುರು ಅರ್ಜಿ ಸಲ್ಲಿಕೆ ಮಾಡಿದೆ.

11:39 PM (IST) Apr 11
ಅಮೆರಿಕದ ಗುಪ್ತಚರ ನಿರ್ದೇಶಕರು ಇವಿಎಂ ಹ್ಯಾಕ್ ಆಗುವ ಸಾಧ್ಯತೆ ಬಗ್ಗೆ ಎಚ್ಚರಿಸಿದ್ದಾರೆ. ಆದರೆ ಭಾರತದ ಚುನಾವಣಾ ಆಯೋಗವು ಭಾರತದ ಇವಿಎಂಗಳು ಸುರಕ್ಷಿತ ಮತ್ತು ಹ್ಯಾಕ್ ಮಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.
ಪೂರ್ತಿ ಓದಿ11:05 PM (IST) Apr 11
ಮಹಾರಾಷ್ಟ್ರ ಸೈಬರ್ ಸೆಲ್ ಘಿಬ್ಲಿ ಶೈಲಿಯ ಕಲೆ ರಚಿಸುವ AI ಪ್ಲಾಟ್ಫಾರ್ಮ್ಗಳ ಬಗ್ಗೆ ಎಚ್ಚರಿಕೆ ನೀಡಿದೆ. ಈ ಪ್ಲಾಟ್ಫಾರ್ಮ್ಗಳು ವೈಯಕ್ತಿಕ ಡೇಟಾವನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಇದೆ ಎಂದು ತಿಳಿಸಿದೆ.
ಪೂರ್ತಿ ಓದಿ10:52 PM (IST) Apr 11
ರಾಜ್ಯದ ಜಾತಿ ಗಣತಿ ವರದಿಗೆ ಯಾರದ್ದೂ ವಿರೋಧ ಬಂದಿಲ್ಲ. ಈ ವರದಿಯಲ್ಲಿನ ಅಂಶಗಳ ಬಗ್ಗೆ ಸದ್ಯಕ್ಕೆ ಯಾರಿಗೂ ತಿಳಿದಿಲ್ಲ, ಅಧ್ಯಯನದ ಬಳಿಕ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಪೂರ್ತಿ ಓದಿ10:43 PM (IST) Apr 11
ಸೀಮಾ ಹೈದರ್ ಮೊನ್ನೆಯಷ್ಟೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಈಗ ಅವರು ತಮ್ಮ ಮಗುವಿಗೆ ಭಾರ್ತಿ ಮೀನಾ ಎಂದು ಹೆಸರಿಟ್ಟಿದ್ದಾರೆ.
ಪೂರ್ತಿ ಓದಿ10:34 PM (IST) Apr 11
Gold price today: ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿವೆ. ಅಮೆರಿಕ-ಚೀನಾ ಸುಂಕ ಯುದ್ಧ ಮತ್ತು ಜಾಗತಿಕ ಅನಿಶ್ಚಿತತೆಯಿಂದಾಗಿ ಈ ಏರಿಕೆ ಕಂಡುಬಂದಿದೆ.
ಪೂರ್ತಿ ಓದಿ10:16 PM (IST) Apr 11
ಕಾಮುಕರ ಕೈಗೆ ಸಿಕ್ಕು ನಲುಗಿರುವ ಹೆಣ್ಣುಮಕ್ಕಳ ಬಟ್ಟೆಗಳನ್ನು ಪ್ರದರ್ಶನಕ್ಕೆ ಇಡಲಾಗಿದ್ದು, ಇಂಥ ಕೃತ್ಯಕ್ಕೆ ಬಟ್ಟೆಗಳು ಕಾರಣವಲ್ಲ ಎನ್ನುವುದನ್ನು ತೋರಿಸಲಾಗುತ್ತಿದೆ.
10:08 PM (IST) Apr 11
ಸಾಲ ಕೊಟ್ಟ ಹಣವನ್ನು ವಾಪಸ್ ಪಡೆಯಲು ಪರದಾಡುತ್ತಿದ್ದೀರಾ? ಹಾಗಾದರೆ, ಸಾಲ ಕೊಟ್ಟ ಹಣವನ್ನು ವಾಪಸ್ ಪಡೆಯುವುದು ಹೇಗೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
ಪೂರ್ತಿ ಓದಿ10:06 PM (IST) Apr 11
ವಿಮಾನ ಪ್ರಯಾಣದ ಸಮಯದಲ್ಲಿ ಯಾವ ರೀತಿಯ ಬಟ್ಟೆಗಳನ್ನು ಧರಿಸಬೇಕು ಎಂಬುದರ ಬಗ್ಗೆ ಅನೇಕ ಜನರಿಗೆ ತಿಳಿದಿಲ್ಲ. ಒಂದು ವೇಳೆ ಗೊತ್ತಿದ್ದರೂ, ಕೆಲವು ಬಟ್ಟೆಗಳನ್ನು ಧರಿಸಬಾರದು ಎಂದು ಅವರು ಏಕೆ ಹೇಳುತ್ತಾರೆಂದು ಸ್ಪಷ್ಟವಾಗಿಲ್ಲ. ಲೆಗ್ಗಿಂಗ್ಸ್ ವಿಮಾನದಲ್ಲಿ ಧರಿಸಬಾರದ ಬಟ್ಟೆಗಳಲ್ಲಿ ಒಂದಾಗಿದೆ. ಇದಕ್ಕೆ ಕಾರಣವೇನೆಂದು ತಿಳಿದುಕೊಳ್ಳೋಣ.
ಪೂರ್ತಿ ಓದಿ09:49 PM (IST) Apr 11
ಬೆಂಗಳೂರಿನ ಕೆ.ಆರ್. ಪುರಂನಲ್ಲಿ ತಡರಾತ್ರಿ ಶೂ ಕಳ್ಳನೊಬ್ಬ ಬ್ರಾಂಡೆಡ್ ಶೂಗಳನ್ನು ಕದ್ದಿದ್ದಾನೆ. ಸಿಸಿಟಿವಿಯಲ್ಲಿ ಕೃತ್ಯ ಸೆರೆಯಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪೂರ್ತಿ ಓದಿ09:42 PM (IST) Apr 11
ಸಿಲಿಂಡರ್ ಬ್ಲಾಸ್ಟ್ ಆದ ಸಮಯದಲ್ಲಿ, ಬಚಾವಾದ ವಿದ್ಯಾರ್ಥಿನಿಯೊಬ್ಬಳು ಹಿಜಾಬ್ಗಾಗಿ ಹಠ ಹಿಡಿದು ಪ್ರಾಣ ಕಳೆದುಕೊಂಡಿರುವ ಘಟನೆ ನಡೆದಿದೆ. ಆದದ್ದೇನು?
09:17 PM (IST) Apr 11
'ಹರ್ಷಿತಾ, ನೀನು ತಪ್ಪು ಮಾಡಿದೆ ಮಗಳೇ, ನಾನು ಹೋಗುತ್ತಿದ್ದೇನೆ'. ಭಾರತದ ಸಂವಿಧಾನವೂ ತಪ್ಪಾಗಿದೆ, ಇದು ಹುಡುಗಿಯರು ವಯಸ್ಕರಾದಾಗ ತಂದೆಯಿಂದ ಎಲ್ಲಾ ಹಕ್ಕುಗಳನ್ನು ಕಸಿದುಕೊಳ್ಳುತ್ತದೆ.
ಪೂರ್ತಿ ಓದಿ09:07 PM (IST) Apr 11
Benefits of Sabja Seeds: ಬೇಸಿಗೆಯಲ್ಲಿ ಸಬ್ಜಾ ಬೀಜಗಳನ್ನು ಸೇವಿಸುವುದರಿಂದ ದೇಹವನ್ನು ತಂಪಾಗಿಡಬಹುದು, ಚರ್ಮಕ್ಕೆ ಕಾಂತಿ ನೀಡಬಹುದು ಮತ್ತು ತೂಕವನ್ನು ನಿಯಂತ್ರಿಸಬಹುದು. ಕೇವಲ 7 ದಿನಗಳಲ್ಲಿ ಇದರ ಫಲಿತಾಂಶಗಳನ್ನು ಅನುಭವಿಸಿ.
ಪೂರ್ತಿ ಓದಿ09:06 PM (IST) Apr 11
ಕೆಎಫ್ಸಿ ತನ್ನ ಫ್ರೈಡ್ ಚಿಕನ್ ಫ್ಲೇವರ್ನ ಟೂತ್ಪೇಸ್ಟ್ ಅನ್ನು ಬಿಡುಗಡೆ ಮಾಡಿದೆ. ಬಳಕೆದಾರರೊಬ್ಬರು ಇದನ್ನು ಪ್ರಯತ್ನಿಸಿದ್ದು ಅವರು ಏನು ಹೇಳಿದ್ದಾರೆ ನೋಡಿ..
ಪೂರ್ತಿ ಓದಿ08:29 PM (IST) Apr 11
ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಜೀವನ ವೆಚ್ಚ, ನಿಶ್ಚಲ ವೇತನಗಳು ಮತ್ತು ಸಂಚಾರ ದಟ್ಟಣೆಯು ನಗರವನ್ನು ದುಬಾರಿಯನ್ನಾಗಿ ಮಾಡುತ್ತಿದೆ. ಹಾಲಿನಿಂದ ಹಿಡಿದು ಬಾಡಿಗೆಯವರೆಗೆ ಎಲ್ಲದರ ಬೆಲೆ ಏರಿಕೆಯಾಗಿದ್ದು, ಮಧ್ಯಮ ವರ್ಗದವರ ಬದುಕು ದುಸ್ತರವಾಗಿದೆ.
ಪೂರ್ತಿ ಓದಿ08:29 PM (IST) Apr 11
ಸಲ್ಮಾನ್ ಖಾನ್ ಫಿಟ್ನೆಸ್ ವಿಡಿಯೋ ವೈರಲ್! 59ರ ವಯಸ್ಸಿನಲ್ಲೂ ಮರ ಏರಿ ಹಣ್ಣು ಕಿತ್ತರು. ಫ್ಯಾನ್ಸ್ ಫುಲ್ ಫಿದಾ, ವಿಡಿಯೋ ಸಖತ್ ವೈರಲ್ ಆಗಿದೆ.
ಪೂರ್ತಿ ಓದಿ07:56 PM (IST) Apr 11
ಮೈಸೂರು ಮಹಾರಾಜರಿಗೆ ಸೇರಿದ ಜಾಗ ಖಾತೆ ಮಾಡಿಕೊಡುವಂತೆ ರಾಣಿ ಪ್ರಮೋದಾದೇವಿ ಪತ್ರ ಬರೆದಿದ್ದಾರೆ. ಇದರಿಂದ ಸಿದ್ದಯ್ಯನಪುರ ಗ್ರಾಮಸ್ಥರು ಆತಂಕಿತರಾಗಿದ್ದು, ಊರು ಖಾಲಿ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಸರ್ಕಾರ ರಕ್ಷಣೆಗೆ ಧಾವಿಸುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಪೂರ್ತಿ ಓದಿ07:29 PM (IST) Apr 11
ಗುಜರಾತ್ನ ಅಪಾರ್ಟ್ಮೆಂಟ್ನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ತಾಯಿಯೊಬ್ಬರು ಮಕ್ಕಳನ್ನು ರಕ್ಷಿಸಲು ಬಾಲ್ಕನಿಯಿಂದ ಕೆಳಗಿಳಿಸಿದ ಘಟನೆ ನಡೆದಿದೆ.
ಪೂರ್ತಿ ಓದಿ07:07 PM (IST) Apr 11
46 ವರ್ಷದ ಮಹಿಳೆಯೊಬ್ಬರು 25 ವಾರಗಳ ಗರ್ಭಾವಸ್ಥೆಯಲ್ಲಿ 3 ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಾರೆ. ತಾಯಿ ಮತ್ತು ಮಕ್ಕಳು 225 ದಿನಗಳ ತೀವ್ರ ನಿಗಾ ಘಟಕದ ಆರೈಕೆಯ ನಂತರ ಆರೋಗ್ಯವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಪೂರ್ತಿ ಓದಿ07:00 PM (IST) Apr 11
ಹುಬ್ಬಳ್ಳಿಯಲ್ಲಿ ಶಾಸಕ ವಿಜಯಾನಂದ ಕಾಶಪ್ಪನವರ್ ಅವರು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಶ್ರೀ ಜಯ ಮೃತ್ಯುಂಜಯ ಸ್ವಾಮೀಜಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸ್ವಾಮೀಜಿ ಮತ್ತು ಯತ್ನಾಳ್ ವಿರುದ್ಧ ಭ್ರಷ್ಟಾಚಾರ, ಸ್ವಯಂ ಘೋಷಿತ ನಾಯಕತ್ವ ಮತ್ತು ಸಮಾಜಕ್ಕೆ ದ್ರೋಹದ ಆರೋಪಗಳನ್ನು ಮಾಡಿದ್ದಾರೆ.
ಪೂರ್ತಿ ಓದಿ06:09 PM (IST) Apr 11
ಹಕ್ಕಿಗಳು/ಹದ್ದುಗಳು ಮನುಷ್ಯರ ಕೈಯಲ್ಲಿರುವುದನ್ನು ಕಸಿಯುವುದಕ್ಕೆ ಬರುವುದು ತೀರಾ ಅಪರೂಪ. ಆದರೆ ಇಲ್ಲೊಂದು ಅಚ್ಚರಿಯ ಘಟನೆ ನಡೆದಿದೆ. ಪರೀಕ್ಷೆಯ ಗಾಬರಿಯಲ್ಲಿದ್ದ ಪರೀಕ್ಷಾರ್ಥಿಗೆ ಹಕ್ಕಿಯೊಂದು ಮತ್ತಷ್ಟು ಆತಂಕಕ್ಕೀಡು ಮಾಡುವಂತೆ ಮಾಡಿದೆ. ಹಾಗಿದ್ರೆ ಹಕ್ಕಿ ಮಾಡಿದ್ದೇನು ನೋಡಿ...
ಪೂರ್ತಿ ಓದಿ06:07 PM (IST) Apr 11
ವಾಟ್ಸಾಪ್ನಲ್ಲಿ ಬಂದ ಫೋಟೋ ಓಪನ್ ಮಾಡಿದ ವ್ಯಕ್ತಿಯೊಬ್ಬರು ಎರಡು ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಏನಿದು ಹೊಸ ವಂಚನೆ? ತಡೆಯುವುದು ಹೇಗೆ?
06:04 PM (IST) Apr 11
ತಮಿಳುನಾಡಿನಲ್ಲಿ 2026ರ ವಿಧಾನಸಭೆ ಚುನಾವಣೆಗೆ AIADMK-BJP ಮೈತ್ರಿ ಬಹುತೇಕ ಖಚಿತವಾಗಿದೆ. ಅಮಿತ್ ಶಾ ಚೆನ್ನೈಗೆ ಭೇಟಿ ನೀಡಿ ಎಡಪ್ಪಾಡಿ ಪಳನಿಸ್ವಾಮಿ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. 2026ರ ಚುನಾವಣೆಯಲ್ಲಿ ಮೈತ್ರಿ ಸರ್ಕಾರ ರಚನೆಯಾಗಲಿದೆ ಎಂದು ಅಮಿತ್ ಶಾ ಹೇಳಿದ್ದಾರೆ.
ಪೂರ್ತಿ ಓದಿ06:03 PM (IST) Apr 11
2025ರವರೆಗೆ ರೇಷನ್ ಕಾರ್ಡ್ ಹೊಂದಿರುವವರು ಕಡ್ಡಾಯವಾಗಿ ಇ-ಕೆವೈಸಿ ಮಾಡಿಸಬೇಕು. ಇಲ್ಲದಿದ್ದರೆ, ಉಚಿತ ರೇಷನ್ ಸೌಲಭ್ಯ ರದ್ದಾಗಬಹುದು. ನಿಮ್ಮ ಇ-ಕೆವೈಸಿ ಸ್ಥಿತಿಯನ್ನು ಆನ್ಲೈನ್ನಲ್ಲಿ ಪರಿಶೀಲಿಸಿ ಮತ್ತು ಪೂರ್ಣಗೊಳಿಸದಿದ್ದರೆ ತಕ್ಷಣವೇ ಹತ್ತಿರದ ಕೇಂದ್ರದಲ್ಲಿ ಮಾಡಿಸಿ.
ಪೂರ್ತಿ ಓದಿ05:39 PM (IST) Apr 11
ಕುಸ್ತಿಪಟು ವಿನೇಶ್ ಫೋಗಟ್ಗೆ ಹರಿಯಾಣ ಸರ್ಕಾರ 4 ಕೋಟಿ ರೂಪಾಯಿ ನಗದು ಬಹುಮಾನ ನೀಡಿದೆ. ಒಲಿಂಪಿಕ್ ಬೆಳ್ಳಿ ಪದಕ ವಿಜೇತರಿಗೆ ನೀಡುವ ಸೌಲಭ್ಯಕ್ಕೆ ಸಮನಾದ ಸೌಲಭ್ಯವನ್ನು ಸರ್ಕಾರ ನೀಡಿದೆ.
ಪೂರ್ತಿ ಓದಿ05:37 PM (IST) Apr 11
ಟಿಸಿಎಸ್ 2025 ಕ್ಕೆ ನೌಕರರ ವೇತನ ಏರಿಕೆಯನ್ನು ಮುಂದೂಡಿದೆ. ವ್ಯವಹಾರದ ಅಸ್ಥಿರ ವಾತಾವರಣವೇ ಇದಕ್ಕೆ ಕಾರಣ. ನಾಲ್ಕನೇ ತ್ರೈಮಾಸಿಕದಲ್ಲಿ ₹ 12,224 ಕೋಟಿ ನಿವ್ವಳ ಲಾಭ ಗಳಿಸಿದೆ.
ಪೂರ್ತಿ ಓದಿ05:28 PM (IST) Apr 11
ಸರ್ಕಾರದಿಂದ ಮಂಜೂರಾಗಿದ್ದ ಜಮೀನನ್ನು ಮಾರಾಟ ಮಾಡಿದ ಬಳಿಕ ಹಕ್ಕು ಮರುಸ್ಥಾಪನೆಗೆ ಕೋರಿದ್ದ ಪರಿಶಿಷ್ಟ ಜಾತಿ ಕುಟುಂಬಕ್ಕೆ ಹೈಕೋರ್ಟ್ 25 ಸಾವಿರ ರೂ. ದಂಡ ವಿಧಿಸಿದೆ. ಪಿಟಿಸಿಎಲ್ ಕಾಯ್ದೆಯಡಿ ಅರ್ಜಿಗಳ ಶೀಘ್ರ ವಿಲೇವಾರಿಗೆ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.
ಪೂರ್ತಿ ಓದಿ05:14 PM (IST) Apr 11
ಬ್ರೇಕಪ್ ಆದ್ಮೇಲೂ ಈ ರೀತಿ ಸೇಡು ತೀರಿಸಿಕೊಳ್ಳಬಹುದು ಎಂದು ತೋರಿಸಿಕೊಟ್ಟ ಹುಡುಗ ಈಗ ಜೈಲಿಗೆ ಹೋಗಿ ಬಂದಿದ್ದಾನೆ.
05:14 PM (IST) Apr 11
ಪುತ್ತೂರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ತಲವಾರು ಪ್ರದರ್ಶಿಸಿ ಪೋಸ್ ನೀಡಿದ್ದ ಇಬ್ಬರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ ಸುಮೊಟೋ ಕೇಸ್ ದಾಖಲಿಸಲಾಗಿದೆ. ಚಿನ್ನದ ಸರ ಸುಲಿಗೆ ಪ್ರಕರಣದಲ್ಲಿಯೂ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ.
ಪೂರ್ತಿ ಓದಿ05:10 PM (IST) Apr 11
12 ವರ್ಷದ ಬಾಲಕನೋರ್ವ ಪರೀಕ್ಷೆಯಲ್ಲಿ ಶಿಕ್ಷಕರಿಗೆ ಸಿಕ್ಕಿಬಿದ್ದ, ನಂತರ ಕಬ್ಬಿಣದ ರಾಡ್ನಿಂದ ಶಿಕ್ಷಕನ ಮೇಲೆ ಹಲ್ಲೆ ಮಾಡಿದ್ದಾನೆ. ಇಂತಹ ಆಘಾತಕಾರಿ ಘಟನೆ ನೆರೆಯ ರಾಜ್ಯ ತೆಲಂಗಾಣದಲ್ಲಿ ನಡೆದಿದೆ.
ಪೂರ್ತಿ ಓದಿ05:08 PM (IST) Apr 11
ನೀತಾ ಅಂಬಾನಿ ಐಷಾರಾಮಿ ಜೀವನಶೈಲಿಗಾಗಿ ಹೆಸರುವಾಸಿಯಾಗಿದ್ದಾರೆ. ಅವರ ಬಳಿ ಇರುವ ಕೆಲವು ವಿಶೇಷ ವಸ್ತುಗಳು ಭಾರತದಲ್ಲಿ ಬೇರೆ ಯಾರ ಬಳಿಯೂ ಇಲ್ಲ. ಅವುಗಳ ಬಗ್ಗೆ ತಿಳಿಯೋಣ.
ಪೂರ್ತಿ ಓದಿ04:54 PM (IST) Apr 11
Tahawwur Rana Extradition updates: 26/11 ದಾಳಿಯ ಆರೋಪಿ ತಹವ್ವೂರ್ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಲಾಗಿದೆ. ಈ ಯಶಸ್ಸಿನ ಕೀರ್ತಿಗಾಗಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಪೈಪೋಟಿ ನಡೆದಿದೆ. ಉಭಯ ಪಕ್ಷಗಳು ಪರಸ್ಪರ ಆರೋಪ-ಪ್ರತ್ಯಾರೋಪಗಳನ್ನು ಮಾಡುತ್ತಿವೆ.
ಪೂರ್ತಿ ಓದಿ04:27 PM (IST) Apr 11
ಬಿಗ್ ಬಾಸ್ ನಿವೇದಿತಾ ಗೌಡ ಅವರು ಹಠಕ್ಕೆಂದೇ ಬಾತ್ರೂಮ್ನಲ್ಲೇ ಮತ್ತೆ ವಿಡಿಯೋ ಮಾಡಿದ್ದಾರೆ. ಇದಕ್ಕೂ ಕಾರಣ ಇದೆಯಂತೆ.
04:26 PM (IST) Apr 11
ತಮಿಳು ನಟ ಅಜಿತ್ ಕುಮಾರ್ ಅಭಿನಯದ 'ಗುಡ್ ಬ್ಯಾಡ್ ಅಗ್ಲಿ' ಚಿತ್ರದಲ್ಲಿನ ಅನುಭವಗಳನ್ನು ನಟಿ ಪ್ರಿಯಾ ವಾರಿಯರ್ ಹಂಚಿಕೊಂಡಿದ್ದಾರೆ. ಅಜಿತ್ ಅವರ ಪ್ರೀತಿ ಮತ್ತು ಕಾಳಜಿಯನ್ನು ಅವರು ಎಂದಿಗೂ ಮರೆಯುವುದಿಲ್ಲ ಎಂದು ಹೇಳಿದ್ದಾರೆ.
ಪೂರ್ತಿ ಓದಿ04:25 PM (IST) Apr 11
ಬೆಂಗಳೂರಿನಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ನಿರ್ವಹಣೆಯ ಬಗ್ಗೆ ಸ್ವಚ್ಛ ಭಾರತ್ ಮಿಷನ್ ತಂಡವು ಪರಿಶೀಲನೆ ನಡೆಸಿತು. ಕಸ ವಿಲೇವಾರಿ ಕುರಿತು ಅಧಿಕಾರಿಗಳು ಸಲಹೆಗಳನ್ನು ನೀಡಿದರು ಮತ್ತು ಘಟಕಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಪೂರ್ತಿ ಓದಿ04:23 PM (IST) Apr 11
ಬಾಗಲಕೋಟೆಯಲ್ಲಿ ರಾಮತೀರ್ಥ ದೇವಸ್ಥಾನದ ಬಳಿ ಕರಪತ್ರ ಹಂಚಿ ಮತಾಂತರಕ್ಕೆ ಪ್ರಚೋದನೆ ನೀಡಿದ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ. ಮುಸ್ತಾಫ, ಸುಲೇಮಾನ್, ಮತ್ತು ಅಲಿಸಾಬ್ ಎಂಬುವರ ವಿರುದ್ಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪೂರ್ತಿ ಓದಿ04:12 PM (IST) Apr 11
ಚೋರಿ 2 ನಟಿ, ಸೈಫ್ ಅಲಿ ಖಾನ್ ಸೋದರಿ ಸೋಹಾ ಅಲಿ ಖಾನ್ ಅವರು ತಮ್ಮ ಮಗಳು ಇನಾಯಾಳನ್ನು ಪಿತೃಪ್ರಧಾನವಾಗಿರುವ ಈ ಸಮಾಜದಲ್ಲಿ ಬೆಳೆಸುವುದಕ್ಕೆ ತೀವ್ರ ಚಿಂತೆಯಾಗುತ್ತಿದೆ ಎಂದು ಹೇಳಿಕೊಂಡಿದ್ದಾರೆ.
ಪೂರ್ತಿ ಓದಿ04:10 PM (IST) Apr 11
ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆರ್ಸಿಬಿ 6 ವಿಕೆಟ್ಗಳಿಂದ ಸೋತಿದೆ. ಫಿಲ್ ಸಾಲ್ಟ್ ರನೌಟ್ ಪಂದ್ಯದ ದಿಕ್ಕನ್ನು ಬದಲಾಯಿಸಿತು, ನಂತರ ಆರ್ಸಿಬಿ ಬ್ಯಾಟಿಂಗ್ ಕುಸಿತ ಕಂಡಿತು. ವಿರಾಟ್ ಕೊಹ್ಲಿ ಐಪಿಎಲ್ ಇತಿಹಾಸದಲ್ಲಿ 32 ಬಾರಿ ರನೌಟ್ಗೆ ಸಾಕ್ಷಿಯಾಗಿದ್ದಾರೆ.
ಪೂರ್ತಿ ಓದಿ03:52 PM (IST) Apr 11
ವಿಧಾನಸೌಧದಲ್ಲಿ ಮಾತನಾಡಿದ ಆರ್.ಅಶೋಕ, ಕಾಂಗ್ರೆಸ್ ದಲಿತರನ್ನು ತುಳಿದಿದೆ ಎಂದು ಆರೋಪಿಸಿದರು. ಕಾಂಗ್ರೆಸ್ ಬಾಬಾ ಸಾಹೇಬ್ ಅಂಬೇಡ್ಕರ್ ಹೆಸರನ್ನು ದುರುಪಯೋಗಪಡಿಸಿಕೊಂಡಿದೆ ಎಂದರು.
ಪೂರ್ತಿ ಓದಿ03:42 PM (IST) Apr 11
ಆರ್ಸಿಬಿ ವಿರುದ್ಧ ಗೆಲುವು ಸಾಧಿಸಿದ ಬಳಿಕ ಕೆ ಎಲ್ ರಾಹುಲ್ ಅವರ ಸಂಭ್ರಮಾಚರಣೆ ಸಾಕಷ್ಟು ಸದ್ದು ಮಾಡಿದೆ. ಈ ಬಗ್ಗೆ ಮಾತನಾಡುತ್ತ ರಾಹುಲ್ ಅವರು ಕಾಂತಾರ ಸಿನಿಮಾವನ್ನು ನೆನಪಿಸಿಕೊಂಡಿದ್ದಾರೆ.
03:39 PM (IST) Apr 11
ಬೆಂಗಳೂರಿನ ಚಂದ್ರಾ ಲೇಔಟ್ನಲ್ಲಿ ಯುವಕ-ಯುವತಿಗೆ ಹಲ್ಲೆ ನಡೆಸಿದ ಪ್ರಕರಣದಲ್ಲಿ 5 ಮಂದಿ ಮುಸ್ಲಿಂ ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ನೈತಿಕ ಪೊಲೀಸ್ಗಿರಿಯನ್ನು ಸಹಿಸುವುದಿಲ್ಲ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಪೂರ್ತಿ ಓದಿ