ರಾಜನಂತೆ ಬದುಕಿ, ರಾಜನಂತೆಯೇ ಹೋದ್ರು ಅಂಬಿ: ಸಿಎಂ

Nov 30, 2018, 1:32 PM IST

ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಗಲಿದ ನಾಯಕನಿಗೆ ಶ್ರದ್ಧಾಂಜಲಿ ಅರ್ಪಿಸಿದೆ. ಅಂಬೇಡ್ಕರ್ ಭವನದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಿಎಂ ಸೇರಿದಂತೆ ಸ್ಯಾಂಡಲ್ ವುಡ್ ಕಲಾವಿದರು, ತಂತ್ರಜ್ಞರು ಅಗಲಿದ ನಾಯಕನಿಗೆ ಶ್ರದ್ಧಾಂಜಲಿ ಅರ್ಪಿಸಿದರು. ಈ ಸಂದರ್ಭದಲ್ಲಿ ಸಿಎಂ ಕುಮಾರಸ್ವಾಮಿ ಅಂಬರೀಶ್ ಬಗ್ಗೆ ಮಾತನಾಡಿದರು. ಅಂಬಿ ರಾಜನಾಗಿಯೇ ಬದುಕಿದ್ರು, ರಾಜನಂತೆಯೇ ಹೊರಟು ಹೋದ್ರು. ಒರಟುತನ ಅನ್ನೋದು ಅವರ ರಕ್ತದಲ್ಲಿಯೇ ಇತ್ತು ಎಂದು ಹೇಳಿದರು.