ಅಷ್ಟಕ್ಕೂ ಸಿಎಂಗೆ ಈ ಕಾಂಗ್ರೆಸ್ ಮುಖಂಡರ ಜೊತೆ ಏನ್ ಕೆಲಸ?

By Web DeskFirst Published Oct 9, 2018, 10:46 AM IST
Highlights

ಅಹ್ಮದ್‌ ಭಾಯಿ ಪಟೇಲ ಸೋನಿಯಾ ಗಾಂಧಿಯವರ ಆಪ್ತ ಕಾರ್ಯದರ್ಶಿ | ಜೆಡಿಎಸ್ ನಾಯಕರು ದೆಹಲಿಗೆ ಹೋಗಿದ್ದಾಗ ಆಗಾಗ ಇವರನ್ನು ಭೇಟಿ ಆಗ್ತಾರಂತೆ | ಸಿಎಂ ಕುಮಾರಸ್ವಾಮಿ ಆಗಾಗ ಭೇಟಿ ಆಗ್ತಾ ಇರ್ತಾರಂತೆ 

ಬೆಂಗಳೂರು (ಅ. 09): ದಿಲ್ಲಿ ಕಾಂಗ್ರೆಸ್‌ ವಲಯದಲ್ಲಿ ಭಾಯಿ ಎಂದರೆ ಒಬ್ಬರೇ. ಅವರು ಅಹ್ಮದ್‌ ಭಾಯಿ ಪಟೇಲ್.  

20 ವರ್ಷ ಸೋನಿಯಾ ಗಾಂಧಿಯವರಿಗೆ ರಾಜಕೀಯ ಕಾರ್ಯದರ್ಶಿ ಆಗಿದ್ದು ಈಗ ರಾಹುಲ್ ಗಾಂಧಿ ಕಾಲದಲ್ಲಿ ಕಾಂಗ್ರೆಸ್‌ನ ಹಣಕಾಸು ವ್ಯವಹಾರ ನೋಡಿಕೊಳ್ಳುತ್ತಿದ್ದಾರೆ ಅಹ್ಮದ್‌ ಭಾಯಿ. ಹಿಂದೆ ಸಿದ್ದರಾಮಯ್ಯ ಮತ್ತು ಕೆ ಜೆ ಜಾರ್ಜ್  ದಿಲ್ಲಿಗೆ ಬಂದಾಗ ಒಮ್ಮೆ ಹೇಗೆ ಮೋತಿಲಾಲ್ ವೋರಾ ಅವರನ್ನು ನೋಡಿ ಬರುತ್ತಿದ್ದರೋ ಹಾಗೆಯೇ ಈಗ ಕುಮಾರಸ್ವಾಮಿ ರಾಜಧಾನಿಗೆ ಬಂದಾಗ ಒಬ್ಬರೇ ರಾತ್ರಿ ಅಹ್ಮದ್‌ ಭಾಯಿ ಮನೆಗೆ ಹೋಗಿ ಬರುತ್ತಾರೆ.

Latest Videos

ಮುಖ್ಯಮಂತ್ರಿಗಳ ಆಪ್ತರ ಬಳಿ ಅಹ್ಮದ್‌ ಭಾಯಿ ಜೊತೆ ಜೆಡಿಎಸ್‌ನವರಿಗೇನು ಕೆಲಸ ಎಂದರೆ ಸರ್ಕಾರ ನಡೀಬೇಕಲ್ವಾ ಎಂದು ಮುಗುಮ್ಮಾಗಿ ನಗುತ್ತಾರೆ. ಅಂದಹಾಗೆ ಜಿ ಪರಮೇಶ್ವರ್‌, ಡಿ ಕೆ ಶಿವಕುಮಾರ್‌, ಆರ್‌ ವಿ ದೇಶಪಾಂಡೆ ಅವರನ್ನು ಅಹ್ಮದ್‌ ಪಟೇಲ್ ಪ್ರತಿ ತಿಂಗಳು ಕರೆಸಿಕೊಳ್ಳುತ್ತಾರೆ.  ಖಜಾಂಚಿ ಯಾಕೆ ಕರೆದು ಏನು ಮಾತನಾಡುತ್ತಾರೆ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ ತಾನೇ?

-ಪ್ರಶಾಂತ್ ನಾತು 

ರಾಜಕಾರಣದ ಸುದ್ದಿಗಾಗಿ ಇಂಡಿಯಾ ಗೇಟ್  ಕ್ಲಿಕ್ ಮಾಡಿ 

click me!