ಅಯ್ಯೋ ‘ಜನಾರ್ದನ’!: ರೆಡ್ಡಿ ಬಂಧಿಸಲು ಸಿಸಿಬಿ ಪ್ಲ್ಯಾನ್!

By Web DeskFirst Published Nov 7, 2018, 8:13 AM IST
Highlights

ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಹೊಸ ಸಂಕಟ! ರೆಡ್ಡಿ ಬಂಧನಕ್ಕೆ ಮುಂದಾದ ಸಿಸಿಬಿ ಪೊಲೀಸರು! ರೆಡ್ಡಿಗೆ ಸಂಕಷ್ಟ ತಂದಿಟ್ಟ ಹಳೆಯ ಡೀಲ್ ಪ್ರಕರಣ! ರೆಡ್ಡಿ ಮತ್ತು ಆಪ್ತ ಅಲಿಖಾನ್ ಬಂಧನಕ್ಕೆ ಸಿದ್ಧತೆ! ದೆಹಲಿ, ಹೈದರಾಬಾದ್ ಗೆ ತೆರಳಿದ ಸಿಸಿಬಿ ಪೊಲೀಸರ ತಂಡ

ಬೆಂಗಳೂರು(ನ.7): ಬಳ್ಳಾರಿ ಲೋಕಸಭಾ ಉಪ ಚುನಾವಣೆ ಮುಗಿಯುತ್ತಿದ್ದಂತೇ ಗಣಿಧಣಿ ಜನಾರ್ದನ ರೆಡ್ಡಿಗೆ ಸಂಕಟ ಶುರುವಾಗಿದೆ. ಉಪ ಚುನಾವಣೆ ಸಂದರ್ಭದಲ್ಲಿ ರಾಜಾರೋಷವಾಗಿ ಹೇಳಿಕೆ ನೀಡುತ್ತಿದ್ದ ರೆಡ್ಡಿ ಇದೀಗ ಜೈಲು ಸೇರುವ ಸಂಭವ ಅಧಿಕವಾಗಿದೆ.

ಹೌದು, ಹಳೆಯ ಡೀಲ್ ಪ್ರಕರಣವೊಂದು ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಉರುಳಾಗುವ ಸಾಧ್ಯತೆ ಇದೆ. ಈ ಕಾರಣಕ್ಕಾಗಿ ರೆಡ್ಡಿಯನ್ನು ಬಂಧಿಸಲು ಸಿಸಿಬಿ ಪೊಲೀಸರು ಬಲೆ ಬೀಸಿದ್ದಾರೆ.

ಜನಾರ್ದನ ರೆಡ್ಡಿ ಹಾಗೂ ಆಪ್ತ ಅಲಿಖಾನ್ ಬಂಧನಕ್ಕೆ ಸಿಸಿಬಿ ಪೊಲೀಸರು ಬಲೆ ಬೀಸಿದ್ದು, ಈಗಾಗಲೇ ದೆಹಲಿ, ಹೈದರಾಬಾದ್ ನಗರಕ್ಕೆ ಸಿಸಿಬಿ ಪೊಲೀಸರ ತಂಡ ರವಾನೆಯಾಗಿದೆ.  
 

click me!