ಘಾಟಿಯಲ್ಲಿ ಉರುಳಿ ಬಿದ್ದ ಬಸ್ : 35 ಮಂದಿ ದುರ್ಮರಣ

Jul 28, 2018, 4:48 PM IST

ರಾಯಘಡ್(ಜು.28): ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಬಸ್ಸೊಂದು ಅತೀ ಆಳದ ಕಂದಕ್ಕೆ ಉರುಳಿ ಬಿದ್ದು 35ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 

ಮಹಾರಾಷ್ಟ್ರದ ರಾಯಘಡ್‌ದ ಮಹಾಬಲ್ಲೇಶ್ವರ್ ಪ್ರದೇಶದಲ್ಲಿ ಈ ದುರ್ಘಟನೆ ಸಂಭವಿಸಿದೆ. ಅಂಬೋಲಿ ಘಾಟ್‌ನ ಪರ್ವತ ಪ್ರದೇಶದಲ್ಲಿ  ತೆರಳುತ್ತಿದ್ದ ವೇಳೆ  ಬಸ್  250 ರಿಂದ 300 ಅಡಿ ಆಳದ ಕಂದಕಕ್ಕೆ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದೆ. 
 
ಇಲ್ಲಿನ ದೀಪೋಲಿ ಕೃಷಿ ವಿವಿಯ  ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಬಸ್‌ನಲ್ಲಿದ್ದರು. ದುರ್ಘಟನೆ ಸಂಭವಿಸುತ್ತಿದ್ದಂತೆ ಸ್ಥಳಕ್ಕೆ ಎನ್‌ಡಿಆರ್‌ಎಫ್ ಪಡೆ ಆಗಮಿಸಿದ್ದು, ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದೆ. 

ಬಸ್‌ನಲ್ಲಿ 60 ಕ್ಕೂ ಅಧಿಕ ಮಂದಿ ಪ್ರಯಾಣಿಸುತ್ತಿದ್ದು,  ಅಧಿಕ ಮಂದಿ ಗಾಯಗೊಂಡಿದ್ದು ಗಾಯಾಳುಗಳನ್ನು ರಿಶಿಕೇಶದ ಆಸ್ಪತ್ರೆಗೆ ಸಾಗಿಸಲಾಗಿದೆ.  ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋ ನೋಡಿ..