‘ಖರ್ಗೆ ಚುನಾವಣಾ ಸ್ಟಂಟ್ ಮಾಡೋದನ್ನ ಬಿಡ್ಬೇಕು’

Sep 1, 2018, 5:45 PM IST

ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ. ಕಲಬುರಗಿಯ ವಿಮಾನ ನಿಲ್ದಾಣವನ್ನು ಮಂಜೂರು ಮಾಡಿದ್ದು ನಾನು, ಆದರೆ ಕಾಮಾಗಾರಿ ಪೂರ್ಣವಾಗುವ ಮುನ್ನ ಹಾರಾಟ ನಡೆಸಿ, ಚುನಾವಣಾ ಲಾಭ ಪಡೆಯಲು ಖರ್ಗೆ ಯತ್ನಿಸುತ್ತಿದ್ದಾರೆ ಎಂದು ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.