ಸ್ವಾತಂತ್ರ್ಯ ದಿನದ ಈ ಸಂದರ್ಭದಲ್ಲಿ ರಸ್ತೆ ಸುರಕ್ಷತೆಗಳ ಬಗ್ಗೆ ಬಾಲಿವುಡ್ ನಟ ಅಕ್ಷಯ್ ಕುಮಾರ್ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ತಮ್ಮ ಸಿನಿಮಾಳಿಂದ ಸದಾ ಒಂದಿಲ್ಲೊಂದು ಸಂದೇಶ ನೀಡುವ ಅಕ್ಷಯ್ ಕುಮಾರ್ ಇಲ್ಲಿಯೂ ಒಂದು ತಿಳಿವಳಿಕೆ ನೀಡುತ್ತಿದ್ದಾರೆ.
ಸಂಚಾರ ನಿಯಮಗಳ ಅರಿವು ಮೂಡಿಸಲು ಕೇಂದ್ರ ಸಾರಿಗೆ ಇಲಾಖೆ ಅಭಿಯಾನ ಹಮ್ಮಿಕೊಂಡಿದ್ದು ಅಕ್ಷಯ್ ಕುಮಾರ್ ಟ್ರಾಫಿಕ್ ಇನ್ಸ್ ಪೆಕ್ಟರ್ ಆಗಿ ಕಾಣಿಸಿಕೊಂಡಿದ್ದಾರೆ. ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಮೂರು ವಿಡಿಯೋಗಳನ್ನು ಲಾಂಚ್ ಮಾಡಿದ್ದ ಸೋಶಿಯಲ್ ಮೀಡಿಯಾದಲ್ಲೂ ಟ್ರೆಂಡ್ ಆಗುತ್ತಿದೆ.
'ರಸ್ತೆ ನಿಮ್ಮ ಅಪ್ಪಂದ್ ಅಲ್ಲ' ಎನ್ನುವ ಡೈಲಾಗ್ ಸಖತ್ ಫೇಮಸ್ ಆಗುತ್ತಿದೆ. ಒಂದು ರೀತಿಯ ಹಾಸ್ಯದಂತೆ ವಿಡಿಯೋ ಗೋಚರವಾದರೂ ವ್ಯಂಗ್ಯದೊಂದಿಗೆ ವಿಡಂಬನೆಯ ತಿವಿತ ಇದೆ.
गाड़ी मे सीट बेल्ट का इस्तेमाल अवश्य करे.. pic.twitter.com/nSxTnALjEF
— Nitin Gadkari (@nitin_gadkari)