ಜೀವಂತ ಹಾವಿನ ಸಮೇತ ಟೀ ಕುಡಿಯಲು ಬಂದ ಯುವಕ

First Published Apr 22, 2018, 9:54 AM IST
Highlights

ಜೀವಂತ ಹಾವಿನ ಸಮೇತ ಟೀ ಕುಡಿಯಲು ಬಂದ ಯುವಕನನ್ನು ನೋಡಿ  ಸಾರ್ವಜನಿಕರು ಆವಾಕ್ಕಾಗಿರುವ ಘಟನೆ ಜಯಪುರ ನಗರದ ರಜಪೂತ ಗಲ್ಲಿಯಲ್ಲಿ ನಡೆದಿದೆ.  

ವಿಜಯಪುರ (ಏ. 22):  ಜೀವಂತ ಹಾವಿನ ಸಮೇತ ಟೀ ಕುಡಿಯಲು ಬಂದ ಯುವಕನನ್ನು ನೋಡಿ  ಸಾರ್ವಜನಿಕರು ಆವಾಕ್ಕಾಗಿರುವ ಘಟನೆ ಜಯಪುರ ನಗರದ ರಜಪೂತ ಗಲ್ಲಿಯಲ್ಲಿ ನಡೆದಿದೆ.  

ಶೇಖರ್ ಎಂಬಾತ ಹಾವು ಹಿಡಿದುಕೊಂಡು ಟೀ ಕುಡಿಯಲು ಬಂದಿದ್ದಾರೆ. ಅವರ ಕೈಯಲ್ಲಿದ್ದ ಹಾವನ್ನು ನೋಡಿ ಸಾರ್ವಜನಿಕರು ಭಯಗೊಂಡಿದ್ದಾರೆ.  ರಜಪೂತ ಗಲ್ಲಿಯ ಮನೆಯೊಂದರಲ್ಲಿ ಕಾಣಿಸಿಕೊಂಡ ಕೇರೆ ಹಾವು ಕಾಣಿಸಿಕೊಂಡಿತ್ತು. 
ಹಾವು ಹಿಡಿದುಕೊಂಡು ನೇರವಾಗಿ ಟೀ ಅಂಗಡಿಗೆ ಬಂದಿದ್ದಾರೆ.  ನಂತರ ಹೊರವಲಯಕ್ಕೆ ಹಾವು ಬಿಟ್ಟಿದ್ದಾರೆ. 

ಕಳೆದ ಹಲವು ವರ್ಷಗಳಿಂದ ಶೇಖರ್  ಹಾವು ಹಿಡಿಯುತ್ತಿದ್ದಾರೆ. 

click me!