Published : Nov 10, 2025, 07:08 AM ISTUpdated : Nov 10, 2025, 10:41 PM IST

karnataka news live: Karna - ನಿತ್ಯಾ ಒಡಲ ಸತ್ಯ ತಾರಾಗೆ ಗೊತ್ತಾಗಿ ಹೋಯ್ತಾ? ಗರ್ಭಿಣಿ ರಹಸ್ಯದ ಗುಟ್ಟು ರಟ್ಟು?

ಸಾರಾಂಶ

ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಸೇರಿ ದಕ್ಷಿಣ ಕರ್ನಾಟಕದ 7 ಬರಪೀಡಿತ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವ ಉದ್ದೇಶ ಹೊಂದಿರುವ ಎತ್ತಿನಹೊಳೆ ಏತ ನೀರಾವರಿ ಯೋಜನೆಯ ಮುಂದಿನ ಹಂತಕ್ಕೆ ಕೇಂದ್ರ ಸರ್ಕಾರ ಬ್ರೇಕ್‌ ಹಾಕಿದೆ. ಯೋಜನೆಯ ಮೊದಲ ಹಂತದಲ್ಲಿ ಹಲವು ಕಾಮಗಾರಿಗಳು ಅನಧಿಕೃತವಾಗಿದೆ. ಇಂಥ ಕಾಮಗಾರಿಗಳಿಂದ ಪರಿಸರದ ಮೇಲೆ ಭಾರೀ ಅನಾಹುತವಾಗಿದೆ ಎಂದು ಹೇಳಿರುವ ಕೇಂದ್ರ ಪರಿಸರ ಇಲಾಖೆಯ ಸಲಹಾ ಸಮಿತಿಯು, ಕೆಲಸಗಳನ್ನು ಆಳವಾಗಿ ಪರಿಶೀಲಿಸದ ಹೊರತೂ ಯೋಜನೆಯ ಮುಂದುವರೆದ ಭಾಗಕ್ಕೆ ಅನುಮತಿ ನೀಡದಂತೆ ಸಲಹೆ ನೀಡಿದೆ. ಅ.27ರಂದು ನಡೆದ ನಡೆದ ಕೇಂದ್ರ ಪರಿಸರ ಇಲಾಖೆಯ ಸಭೆಯಲ್ಲಿ ಎತ್ತಿನಹೊಳೆ ಮೊದಲ ಹಂತದ ಯೋಜನೆಯ ಕುರಿತು ದಾಖಲಾದ ಹಲವು ಆರೋಪಗಳ ಕುರಿತು ಸಲಹಾ ಸಮಿತಿ ಬೆಳಕು ಚೆಲ್ಲಿದೆ. ಅದರಲ್ಲಿ, ಮೊದಲ ಹಂತದ ಯೋಜನೆಯಿಂದಾಗಿಯೇ ಜೈವಿಕವಾಗಿ ಅತ್ಯಂತ ಸೂಕ್ಷ್ಮ ಪ್ರದೇಶವಾಗಿರುವ ಪಶ್ಚಿಮ ಘಟ್ಟದ ಹಲವು ಪ್ರದೇಶಗಳಲ್ಲಿ ಭೂಕುಸಿದಂಥ ಘಟನೆ ಸಂಭವಿಸಿದೆ. ಇಷ್ಟೆಲ್ಲ ಕಾಮಗಾರಿ ಹೊರತಾಗಿಯೂ ನಿಗದಿತ ಪ್ರದೇಶಕ್ಕೆ ಕುಡಿಯುವ ನೀರು ಪೂರೈಕೆ ಮಾಡುವುದು ಸಾಧ್ಯವಾಗಿಲ್ಲ. ಹೀಗಾಗಿ ಯೋಜನೆಗೆ ಮತ್ತಷ್ಟು ಅನುಮತಿಗೂ ಮುನ್ನ, ಈಗಾಗಲೇ ಕೈಗೊಂಡಿರುವ ಕಾಮಗಾರಿಯ ಪೂರ್ವಾಪರ ಪರಿಶೀಲನೆ ಅತ್ಯಂತ ಅಗತ್ಯ’ ಎಂದು ಹೇಳಿದೆ.

Karna Serial

10:41 PM (IST) Nov 10

Karna - ನಿತ್ಯಾ ಒಡಲ ಸತ್ಯ ತಾರಾಗೆ ಗೊತ್ತಾಗಿ ಹೋಯ್ತಾ? ಗರ್ಭಿಣಿ ರಹಸ್ಯದ ಗುಟ್ಟು ರಟ್ಟು?

ಹನಿಮೂನ್ ನಾಟಕವಾಡಿ ಮನೆಗೆ ಮರಳಿದ ಕರ್ಣ ಮತ್ತು ನಿತ್ಯಾಗೆ ಮನೆಯವರಿಂದ ಅನಿರೀಕ್ಷಿತ ಪ್ರಶ್ನೆಗಳು ಎದುರಾಗುತ್ತವೆ. ಇದೇ ವೇಳೆ ಹೊಟ್ಟೆನೋವಿನಿಂದ ಬಳಲುತ್ತಿರುವ ನಿತ್ಯಾಳ  ರಹಸ್ಯವು ನಾಡಿ ಪರೀಕ್ಷೆಯ ಮೂಲಕ బయಲಾಗುವ ಆತಂಕಕಾರಿ சூழல் ನಿರ್ಮಾಣವಾಗಿದೆ.

Read Full Story

10:08 PM (IST) Nov 10

Amruthadhaare - ಮಕ್ಕಳ ಜಗಳದಿಂದ ಗೌತಮ್​- ಭೂಮಿಕಾಗೆ ಸಂಕಷ್ಟ! ಶಾಲೆಯಿಂದ ಬುಲಾವ್​- ಮುಂದೇನಾಯ್ತು?

ಅಮೃತಧಾರೆ ಧಾರಾವಾಹಿಯಲ್ಲಿ, ಎದುರುಬದುರು ಮನೆಯಲ್ಲಿ ವಾಸವಿರುವ ಗೌತಮ್ ಮತ್ತು ಭೂಮಿಕಾಗೆ ತಮ್ಮ ಸಂಬಂಧದ ಸತ್ಯ ತಿಳಿದಿರುವುದಿಲ್ಲ. ಅವರ ಮಕ್ಕಳಾದ ಆಕಾಶ್ ಮತ್ತು ಮಿಂಚು ಶಾಲೆಯಲ್ಲಿ ಜಗಳವಾಡಿದ್ದಕ್ಕಾಗಿ, ಪ್ರಿನ್ಸಿಪಾಲ್ ಇಬ್ಬರನ್ನೂ ಶಾಲೆಗೆ ಕರೆಸುತ್ತಾರೆ, ಇದು ಮುಜುಗರದ ಸನ್ನಿವೇಶವನ್ನು ಸೃಷ್ಟಿಸುತ್ತದೆ.
Read Full Story

09:42 PM (IST) Nov 10

RO ವಾಟರ್​ನಿಂದ ಗಿಡ ಒಣಗತ್ತೆ, ಮೀನು ಸಾಯತ್ತೆ, ಹಸು ಹಾಲೇ ಕೊಡಲ್ಲ- ಶುದ್ಧ ನೀರೆಂದು ಕುಡೀತಿದ್ದೀರಾ? ಹಾಗಿದ್ರೆ ಇಲ್ಲಿ ನೋಡಿ

ಶುದ್ಧ ನೀರು ಎಂದು ಭಾವಿಸಿ ಸೇವಿಸುವ RO ವಾಟರ್, ದೇಹಕ್ಕೆ ಬೇಕಾದ ಕ್ಯಾಲ್ಸಿಯಂ ಮತ್ತು ಮೆಗ್ನೀಶಿಯಂನಂತಹ ಅಗತ್ಯ ಖನಿಜಗಳನ್ನು ತೆಗೆದುಹಾಕುತ್ತದೆ. ತಜ್ಞರು ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಈ ನೀರು ಮೀನು ಮತ್ತು ಗಿಡಗಳಿಗೆ ಹಾನಿಕಾರಕವಾಗಿದ್ದು, ಮನುಷ್ಯರ ಮೇಲೆ ನಿಧಾನ ವಿಷದಂತೆ ಪರಿಣಾಮ ಬೀರಬಹುದು

Read Full Story

09:23 PM (IST) Nov 10

RSS ಟೀಕಿಸೋ ಭರದಲ್ಲಿ ಪ್ರಿಯಾಂಕ್‌ ಖರ್ಗೆ ಇದೆಂಥ ಎಡವಟ್ಟು? ಸಂವಿಧಾನದ ಬಗ್ಗೆ ಹೀಗೆ ಹೇಳೋದಾ? ಟ್ರೋಲಿಗರು ಬಿಡ್ತಾರಾ?

ಆರ್‌ಎಸ್‌ಎಸ್‌ 100 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ, ಸಚಿವ ಪ್ರಿಯಾಂಕ್‌ ಖರ್ಗೆಯವರು ಸಂವಿಧಾನಕ್ಕೆ ಅಗೌರವ ತೋರಿ 100 ವರ್ಷಗಳಾಗಿವೆ ಎಂದು ಟ್ವೀಟ್ ಮಾಡಿದ್ದಾರೆ. ಆದರೆ, ಸಂವಿಧಾನ ಜಾರಿಯಾಗಿ 75 ವರ್ಷಗಳಾಗಿರುವುದರಿಂದ, ಈ ವರ್ಷದ ವ್ಯತ್ಯಾಸದಿಂದಾಗಿ ಅವರು ಜಾಲತಾಣಗಳಲ್ಲಿ ಭಾರಿ ಟ್ರೋಲ್‌ಗೆ ಒಳಗಾಗಿದ್ದಾರೆ.

Read Full Story

08:50 PM (IST) Nov 10

ದೆಹಲಿ ಬ್ಲಾಸ್ಟ್ ಪ್ರಕರಣ, ಬೆಂಗಳೂರು ಸೇರಿ ಕರ್ನಾಟಕದಲ್ಲಿ ಹೈ ಅಲರ್ಟ್ ಘೋಷಣೆ

ದೆಹಲಿ ಬ್ಲಾಸ್ಟ್ ಪ್ರಕರಣ, ಬೆಂಗಳೂರು ಸೇರಿ ಕರ್ನಾಟಕದಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಅನುಮಾನಸ್ಪದ ವ್ಯಕ್ತಿಗಳು, ಸ್ಥಳಗಳ ಮೇಲೆ ನಿಗಾ ಇಡುವಂತೆ ಸೂಚನೆ ನೀಡಲಾಗಿದೆ. ವಾಹನ ತಪಾಸಣೆ ಸೇರಿದಂತೆ ಎಲ್ಲಾ ಕಡೆ ಕಟ್ಟೆಚ್ಚರ ವಹಿಸಲು ಸೂಚನೆ

Read Full Story

06:29 PM (IST) Nov 10

ವಿಡಿಯೋ ಮಾಡ್ಸಿದ್ದು ನಾನಲ್ಲ, ಪರಪ್ಪನ ಅಗ್ರಹಾರ ಪ್ರಕರಣದಲ್ಲಿ ನಟ ಧನ್ವೀರ್‌ಗೆ ಪೊಲೀಸ್ ಡ್ರಿಲ್

ವಿಡಿಯೋ ಮಾಡ್ಸಿದ್ದು ನಾನಲ್ಲ, ಶೇರ್ ಮಾತ್ರ;ಪರಪ್ಪನ ಅಗ್ರಹಾರ ಪ್ರಕರಣದಲ್ಲಿ ನಟ ಧನ್ವೀರ್‌ಗೆ ಪೊಲೀಸ್ ಡ್ರಿಲ್, ಈ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದೆ. ನಟ ಧನ್ವೀರ್ ಮೊಬೈಲ್ ಫೋನ್ ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದ್ದಾರೆ.

 

Read Full Story

05:28 PM (IST) Nov 10

ಸಿಹಿ ಕಹಿ ಚಂದ್ರು-ಗೀತಾ ದಾಂಪತ್ಯಕ್ಕೆ 35 ವಸಂತಗಳ ಸಂಭ್ರಮ - ಖುಷಿ ಹಂಚಿಕೊಂಡ ಜೋಡಿ!

ಸಿಹಿ ಕಹಿ ಚಂದ್ರು ಮತ್ತು ಗೀತಾ ಅವರ ಜೋಡಿ ಕನ್ನಡದ ಕಿರುತೆರೆಯಲ್ಲಿ ಹಲವು ಯಶಸ್ವೀ ಧಾರಾವಾಹಿಗಳನ್ನು ನಿರ್ಮಿಸಿ ದಾಖಲೆ ಬರೆದಿದ್ದಾರೆ. ಅವರ ನಿರ್ಮಾಣ ಸಂಸ್ಥೆ ಕಿರುತೆರೆ ರಂಗದಲ್ಲಿ ಅಚ್ಚಳಿಯದ ಹೆಸರು ಮಾಡಿರೋ ಸಂಸ್ಥೆ ಎಂಬುದನ್ನು ಯಾರೂ ಎಂದೂ ಮರೆಯಲಾಗದು. ಹೆಚ್ಚಿನ ಮಾಹಿತಿಗೆ ಈ ಸ್ಟೋರಿ ನೋಡಿ..

Read Full Story

05:15 PM (IST) Nov 10

BBK 12 - ಧ್ರುವಂತ್‌ಗೆ ಮಾತೇ ಮುಳ್ಳಾಯ್ತು; ತಿರುಗಿಬಿದ್ದ ರಾಶಿಕಾ ಶೆಟ್ಟಿ, ಕಾವ್ಯ ಶೈವ

Bigg Boss Kannada Season 12 Show: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಧ್ರುವಂತ್‌ ಅವರಿಗೆ ಮಾತೇ ಮುಳ್ಳಾದಂತಿದೆ. ಗಿಲ್ಲಿ ನಟ, ಕಾವ್ಯ ಶೈವ, ರಕ್ಷಿತಾ ಶೆಟ್ಟಿ ವಿರುದ್ಧ ಮಾತನಾಡಿರುವ ಧ್ರುವಂತ್‌ ಈಗ, ರಾಶಿಕಾ ಶೆಟ್ಟಿ ವಿರುದ್ಧ ಮಾತನಾಡಿ ಸಿಕ್ಕಿ ಹಾಕಿಕೊಂಡಿದ್ದಾರೆ.

Read Full Story

05:03 PM (IST) Nov 10

ಜೆಡಿಎಸ್ 25ರ ಸಂಭ್ರಮದಲ್ಲಿ ಜಿಟಿ ದೇವೇಗೌಡಗೆ ಶಾಕ್ ಕೊಟ್ಟ HDK, ಕೋರ್ ಕಮಿಟಿಯಿಂದ ಔಟ್

ಜೆಡಿಎಸ್ 25ರ ಸಂಭ್ರಮದಲ್ಲಿ ಜಿಟಿ ದೇವೇಗೌಡಗೆ ಶಾಕ್ ಕೊಟ್ಟ HDK, ಕೋರ್ ಕಮಿಟಿಯಿಂದ ಔಟ್ , ಹೊಸ ಕೋರ್ ಕಮಿಟಿ ಸದಸ್ಯರು, ಅಧ್ಯಕ್ಷರನ್ನು ನೇಮಕ ಮಾಡಲಾಗಿದೆ. ಜೆಡಿಎಸ್‌ಗೆ ಪುನ್ಚೇತನ ನೀಡುವ ನಿಟ್ಟಿನಲ್ಲಿ ಹೊಸ ತಂಡ ಕಟ್ಟಲಾಗಿದೆ.

Read Full Story

03:41 PM (IST) Nov 10

Exclusive Photos - ತಾಳಿ ಕಟ್ಟಲು ಅನುಮತಿ ಕೇಳಿದ ಅರುಣ್‌ ಗೌಡ; ನಾಚಿ ನೀರಾದ ರಜಿನಿ!

ಅಮೃತವರ್ಷಿಣಿ ಧಾರಾವಾಹಿಯ ಅಮೃತಾ ಪಾತ್ರಧಾರಿ ನಟಿ ರಜಿನಿ ಅವರು ಮದುವೆಯಾಗಿದ್ದಾರೆ. ಬೆಂಗಳೂರಿನ ಜೆಪಿ ನಗರದಲ್ಲಿರುವ ಆಂಜನೇಯ ದೇವಸ್ಥಾನದಲ್ಲಿ ಮದುವೆಯಾಗಿದೆ, ಮದುವೆಯ ಸುಂದರ ಫೋಟೋಗಳು ಇವೆ. ಫೋಟೋಗಳನ್ನು ನೋಡಿ..

Read Full Story

03:35 PM (IST) Nov 10

ಪತ್ನಿ ಕಿರುಕುಳಕ್ಕೆ ಗಂಡನ ದುರಂತ ಅಂತ್ಯ ಪ್ರಕರಣ, ಅನೈತಿಕ ಸಂಬಂಧ ಆರೋಪದಲ್ಲೂ ಟ್ವಿಸ್ಟ್

ಪತ್ನಿ ಕಿರುಕುಳಕ್ಕೆ ಗಂಡನ ದುರಂತ ಅಂತ್ಯ ಪ್ರಕರಣ, ಅನೈತಿಕ ಸಂಬಂಧ ಆರೋಪದಲ್ಲೂ ಟ್ವಿಸ್ಟ್, ಆರೋಪಗಳು ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ಪತ್ನಿ ಕಿರುಕುಳ ಆರೋಪವನ್ನು ನಿರಾಕರಿಸಿದ್ದಾರೆ. ಆದರೆ ಅನೈತಿಕ ಸಂಬಂಧ ಆರೋಪ ಹಿಂದೆ ಹಲವು ಅನುಮಾನ ಕಾಡುತ್ತಿದೆ.

 

Read Full Story

03:31 PM (IST) Nov 10

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಮಾಜ್‌ ಮಾಡಿದ ಗುಂಪು - ವೀಡಿಯೋ ವೈರಲ್

Namaz at Bengaluru airport: ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ರಲ್ಲಿ ಮುಸ್ಲಿಂ ಸಮುದಾಯದವರು ನಮಾಜ್ ಮಾಡಿದ ವೀಡಿಯೋ ವೈರಲ್ ಆಗಿದೆ. ಅತ್ಯಂತ ಭದ್ರತೆಯ ಪ್ರದೇಶದಲ್ಲಿ ಇದಕ್ಕೆ ಹೇಗೆ ಅವಕಾಶ ನೀಡಲಾಯಿತು ಎಂದು ಬಿಜೆಪಿ ರಾಜ್ಯ ಸರ್ಕಾರವನ್ನು ಪ್ರಶ್ನಿಸಿದೆ.

Read Full Story

02:16 PM (IST) Nov 10

ಮಹಿಳಾ ವಿಶ್ವಕಪ್ ಗೆದ್ದ ಸ್ಮೃತಿ ಮಂಧನಾ ಅವರ ಒಟ್ಟು ಸಂಪತ್ತು ಇಷ್ಟೊಂದಾ?

ಭಾರತೀಯ ಮಹಿಳಾ ಕ್ರಿಕೆಟ್ ತಂಡಕ್ಕೆ 2025ರ ವಿಶ್ವಕಪ್ ಗೆಲ್ಲಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ ಸ್ಮೃತಿ ಮಂಧನಾ ಅವರ ನಿವ್ವಳ ಆಸ್ತಿ ಮೌಲ್ಯ ಎಷ್ಟು ಗೊತ್ತಾ? ಮ್ಯಾಚ್ ಫೀಸ್, ಬಿಸಿಸಿಐ ಕಾಂಟ್ರ್ಯಾಕ್ಟ್, ಡಬ್ಲ್ಯುಪಿಎಲ್, ಬ್ರ್ಯಾಂಡ್ ಎಂಡಾರ್ಸ್‌ಮೆಂಟ್‌ಗಳ ಮೂಲಕ..

Read Full Story

01:46 PM (IST) Nov 10

ಬೆಂಗಳೂರು - ಎಂಟು ತಿಂಗಳ ಹಿಂದೆ ಮದುವೆ, ಪತ್ನಿಯ ಕಿರುಕುಳಕ್ಕೆ ಬೇಸತ್ತು ಪತಿ ನೇಣಿಗೆ ಶರಣು!

ಬೆಂಗಳೂರಿನ ಗಿರಿನಗರದಲ್ಲಿ, ಪತ್ನಿಯ ಕಿರುಕುಳದಿಂದ ಬೇಸತ್ತು ಬ್ಯಾಂಕ್ ಉದ್ಯೋಗಿ ಗಗನ್ ರಾವ್ ಆತ್ಮ೧ಹತ್ಯೆ ಮಾಡಿಕೊಂಡಿದ್ದಾರೆ. ಎಂಟು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ಇವರ ಸಾವಿಗೆ ಪತ್ನಿಯೇ ಕಾರಣ ಎಂದು ಮೃತನ ಕುಟುಂಬಸ್ಥರು ದೂರು ನೀಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Read Full Story

12:40 PM (IST) Nov 10

BBK 12 - ಜನರ ಮನಸ್ಸಿನಲ್ಲಿ ಇರೋದನ್ನು ಯಥಾವತ್ತಾಗಿ ಕಿಚ್ಚ ಸುದೀಪ್‌ ಮುಂದೆ ಬಿಚ್ಚಿಟ್ಟ ಅಶ್ವಿನಿ ಗೌಡ; ಹೇಗೆ ಗೊತ್ತಾಯ್ತು?

Bigg Boss Kannada Season 12: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಹೊರಗಡೆ ಜನರ ಅಭಿಪ್ರಾಯ ಏನಿದೆ ಎನ್ನೋದನ್ನು ಅಶ್ವಿನಿ ಗೌಡ ಅವರು ಕಿಚ್ಚ ಸುದೀಪ್‌ ಮುಂದೆ ಹೇಳಿದ್ದಾರೆ. ಇದು ಸೂರಜ್‌, ರಾಶಿಕಾ ಶೆಟ್ಟಿಗೆ ತುಂಬ ಮುಖ್ಯವಾದ ವಿಷಯ ಎನ್ನಬಹುದು.

Read Full Story

11:59 AM (IST) Nov 10

ರಾಯಚೂರು - ಪತ್ನಿ ಜೊತೆ ಅನೈತಿಕ ಸಂಬಂಧ ಶಂಕೆ; ಕೊಡಲಿಯಿಂದ ತಮ್ಮನ ಭೀಕರ ಹತ್ಯೆ!

ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನಲ್ಲಿ, ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾನೆಂಬ ಶಂಕೆಯಿಂದ ಅಣ್ಣನೊಬ್ಬ ತನ್ನ ಸ್ವಂತ ತಮ್ಮನನ್ನೇ ಕೊಡಲಿಯಿಂದ ಕೊಚ್ಚಿ ಕೊಂದಿದ್ದಾನೆ. ಕುಡಿದ ಮತ್ತಿನಲ್ಲಿದ್ದಾಗ ನಡೆದ ಜಗಳವು ಈ ಘೋರ ಕೃತ್ಯಕ್ಕೆ ಕಾರಣವಾಗಿದ್ದು, ಪೊಲೀಸರು ಆರೋಪಿ ಅಣ್ಣನನ್ನು ಬಂಧಿಸಿದ್ದಾರೆ.
Read Full Story

11:27 AM (IST) Nov 10

ಗಾಸಿಪ್‌ ನಿಜವಾಯ್ತು; ಸದ್ದಿಲ್ಲದೆ ಮದುವೆಯಾದ Amruthavarshini Serial ನಟಿ ರಜಿನಿ

Amruthavarshini Serial Actress Rajini Marriage: 'ಅಮೃತವರ್ಷಿಣಿ', ‘ನೀ ಇರಲು ಜೊತೆಯಲಿ’ ಧಾರಾವಾಹಿ ನಟಿ ರಜಿನಿ ಅವರು ಸದ್ದಿಲ್ಲದೆ ಮದುವೆಯಾಗಿದ್ದಾರೆ. ಅರುಣ್‌ ಗೌಡ ಹಾಗೂ ರಜಿನಿ ಅವರು ಮದುವೆಯಾಗಿರುವ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗ್ತಿದೆ.

Read Full Story

11:23 AM (IST) Nov 10

RCB ತಂಡಕ್ಕೆ ಬಿಗ್ ಶಾಕ್; ನಾಯಕ ರಜತ್ ಪಾಟೀದಾರ್ 4 ತಿಂಗಳು ಕ್ರಿಕೆಟ್‌ನಿಂದ ಔಟ್! ಏನಾಯ್ತು?

ಮುಂಬರುವ ಐಪಿಎಲ್ ಸೀಸನ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಹೊಸ ಮಾಲೀಕರು ಮತ್ತು ಹೊಸ ನಾಯಕನ ನೇತೃತ್ವದಲ್ಲಿ ಆಡುವ ಸಾಧ್ಯತೆ ದಟ್ಟವಾಗಿದೆ. ಆರ್‌ಸಿಬಿ ನಾಯಕ ರಜತ್ ಪಾಟಿದಾರ್ ಐಪಿಎಲ್ 2026 ರಲ್ಲಿ ಆಡುವುದು ಕಷ್ಟ ಎನ್ನಲಾಗಿದೆ. ಏನಾಯಿತು ಎಂಬ ಪೂರ್ತಿ ವಿವರ ಇಲ್ಲಿದೆ.

 

Read Full Story

11:02 AM (IST) Nov 10

ಪ್ರೀತಿಸಿ ಮದುವೆಯಾಗಿದ್ದ ಗರ್ಭಿಣಿ ಪತ್ನಿಯ ಮೇಲೆ ಮಾರಣಾಂತಿ ಹಲ್ಲೆ, ಹೊಟ್ಟೆಯಲ್ಲೇ ಶಿಶು ಸಾವು

ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನಲ್ಲಿ, ನಾಲ್ಕು ವರ್ಷ ಪ್ರೀತಿಸಿ ಮದುವೆಯಾಗಿದ್ದ ಪತಿಯೇ ತನ್ನ ಆರು ತಿಂಗಳ ಗರ್ಭಿಣಿ ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಈ ಘೋರ ಕೃತ್ಯದಿಂದಾಗಿ ಗರ್ಭದಲ್ಲಿದ್ದ ಶಿಶು ಮೃತಪಟ್ಟಿದ್ದು, ಗಂಭೀರವಾಗಿ ಗಾಯಗೊಂಡಿರುವ ಪತ್ನಿ ಆಸ್ಪತ್ರೆಯಲ್ಲಿ ಚಿಕಿತ್ಸೆ.

Read Full Story

09:59 AM (IST) Nov 10

ಹಳೆ ವಸ್ತು ಗುಜರಿಗೆ - ಸರ್ಕಾರಕ್ಕೆ ಭರ್ಜರಿ ₹800 ಕೋಟಿ ಆದಾಯ! ಇದು ಚಂದ್ರಯಾನ-3 ವೆಚ್ಚಕ್ಕಿಂತಲೂ ಹೆಚ್ಚು ಆದಾಯ

ಕೇಂದ್ರ ಸರ್ಕಾರದ ಸ್ವಚ್ಛತಾ ಅಭಿಯಾನ 5.0 ಅಡಿಯಲ್ಲಿ, ಸರ್ಕಾರಿ ಕಚೇರಿಗಳ ಅನುಪಯುಕ್ತ ವಸ್ತುಗಳನ್ನು ಮಾರಾಟ ಮಾಡಿ 800 ಕೋಟಿ ರೂ. ಆದಾಯ ಗಳಿಸಲಾಗಿದೆ. ಈ ಮೊತ್ತವು ಇಸ್ರೋದ ಚಂದ್ರಯಾನ-3 ಯೋಜನೆಗೆ ತಗುಲಿದ ವೆಚ್ಚಕ್ಕಿಂತ ಹೆಚ್ಚಾಗಿದ್ದು, ಈ ಅಭಿಯಾನದಲ್ಲಿ ಸುಮಾರು 232 ಲಕ್ಷ ಚದರ ಅಡಿ ಜಾಗ ತೆರವು.

Read Full Story

09:26 AM (IST) Nov 10

ಬೆಂಗಳೂರು - ದಿಲ್ಲಿ ಔತಣಕೂಟಕ್ಕೆ ಕರೆದಿಲ್ಲ,ನಾನು ಹೋಗೋಲ್ಲ - ಪರಂ

ದೆಹಲಿಯಲ್ಲಿ ಸಂಸದ ರಾಜಶೇಖರ್‌ ಹಿಟ್ನಾಳ್‌ ಏರ್ಪಡಿಸಿರುವ ಔತಣ ಕೂಟಕ್ಕೆ ತಮಗೆ ಆಹ್ವಾನವಿಲ್ಲ ಮತ್ತು ತಾವು ಹೋಗುವುದಿಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ. ರಾಜ್ಯದಲ್ಲಿ ದಲಿತ ಸಿಎಂ ಚರ್ಚೆಯ ಕುರಿತ ಪ್ರಶ್ನೆಗೆ, ಅಂತಹ ಪ್ರಶ್ನೆಗಳು ಖುಷಿ ಕೊಡುತ್ತವೆ ಎಂದರು.

Read Full Story

08:56 AM (IST) Nov 10

BBK 12 - ಗಿಲ್ಲಿ ನಟ ಬಡವ ಅಂತ ನಾಟಕ ಮಾಡ್ತಾರೆ; ವಿಷ ಕಾರಿದ ಧ್ರುವಂತ್, ಸೇಡು ತೀರಿಸಿಕೊಂಡ್ರು

Bigg Boss Kannada Season 12 Show Update: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಗಿಲ್ಲಿ ನಟ, ರಕ್ಷಿತಾ ಶೆಟ್ಟಿ ಕಂಡರೆ ಧ್ರುವಂತ್‌ಗೆ ಆಗೋದಿಲ್ಲ. ಧ್ರುವಂತ್‌ಗೆ ಗಿಲ್ಲಿ ನಟ, ರಕ್ಷಿತಾ ಶೆಟ್ಟಿ ಅವರು ಒಂದೆರಡು ಪಟ್ಟ ಕೊಟ್ಟಿದ್ದರು. ಈಗ ಧ್ರುವಂತ್‌ ಅವನ್ನು ತಿರುಗಿಸಿ ಕೊಟ್ಟಿದ್ದಾರೆ.

Read Full Story

08:52 AM (IST) Nov 10

ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಗಾದಿ ಯಾರಿಗೆ?

Belagavi DCC Bank: ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದ್ದು, ಜಾರಕಿಹೊಳಿ ಬಣ ಸ್ಪಷ್ಟ ಬಹುಮತ ಹೊಂದಿದೆ. ಆದಾಗ್ಯೂ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರವೇಶ, ಕತ್ತಿ-ಸವದಿ ಬಣದ ಲಿಂಗಾಯತ ಕಾರ್ಡ್ ಬಳಕೆ ಪ್ರಯತ್ನ ಚುನಾವಣೆ ತೀವ್ರ ಕುತೂಹಲ ಕೆರಳಿಸಿದೆ. 

Read Full Story

08:33 AM (IST) Nov 10

BBK 12 - ಆಟ ಬಿಡ್ರೀ.. ಕಿಚ್ಚ ಸುದೀಪ್, ಕೊನೆಗೂ ಯಾವ ವಿಷಯ ಮಾತಾಡಬೇಕಿತ್ತೋ ಅದೇ ಮಾತಾಡಲಿಲ್ಲ‌, ಯಾಕೆ?

Bigg Boss Kannada Season 12: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಅಶ್ವಿನಿ ಗೌಡ ಅವರ ಬಗ್ಗೆ ವಾರ ಪೂರ್ತಿ ಒಂದಲ್ಲ ಒಂದು ಆರೋಪ ಇರುತ್ತದೆ. ಈ ಬಾರಿ ಬಹುಮುಖ್ಯವಾದ ವಿಚಾರವನ್ನು ಕಿಚ್ಚ ಸುದೀಪ್‌ ಅವರು ಮಾತನಾಡಿಲ್ಲ, ಅದಕ್ಕೂ ಕಾರಣ ಇದೆ.

Read Full Story

08:31 AM (IST) Nov 10

ಕಾಂಗ್ರೆಸ್ ಸರ್ಕಾರ ದೇಶಕ್ಕೆ ಮಾದರಿ, 2028ಕ್ಕೆ ಪುನಃ ನಮ್ಮದೇ ಸರ್ಕಾರ - ಡಿಕೆ ಶಿವಕುಮಾರ್

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೂಡ್ಲಿಗಿಯಲ್ಲಿ 74 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಚಾಲನೆ ನೀಡಿದರು. 2028ರಲ್ಲಿ ಮತ್ತೆ ಅಧಿಕಾರಕ್ಕೆ ಬರುವ ವಿಶ್ವಾಸ ವ್ಯಕ್ತಪಡಿಸಿದ ಅವರು, ಈ ಭಾಗದಲ್ಲಿ ರೇಷ್ಮೆ ಮಾರುಕಟ್ಟೆ ಸ್ಥಾಪಿಸಿ ರೈತರನ್ನು ಬದುಕಿಸುವ ಕೆಲಸ ಮಾಡುವುದಾಗಿ ಭರವಸೆ ನೀಡಿದರು.
Read Full Story

07:57 AM (IST) Nov 10

BBK 12 - ಹೆಣ್ಣು ಮಕ್ಕಳ ವಿಷಯದಲ್ಲಿ ಸೆನ್ಸಿಬಿಲಿಟಿ ಕಳ್ಕೊಂಡ ಗಿಲ್ಲಿ ನಟ; ಕ್ಲಾಸ್‌ ತಗೊಂಡ ಕಿಚ್ಚ ಸುದೀಪ್

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ರಿಷಾ ಗೌಡ, ಗಿಲ್ಲಿ ನಟ ನಡುವೆ ಆಗಾಗ ಜಗಳ ಆಗುತ್ತಿರುತ್ತದೆ. ಇತ್ತೀಚೆಗೆ ನಡೆದ ಘಟನೆಯಲ್ಲಿ ಬಿಗ್‌ ಬಾಸ್‌ ನಿಯಮದ ಉಲ್ಲಂಘನೆ ಆಗಿದೆ. ಅಷ್ಟೇ ಅಲ್ಲದೆ ಹುಡುಗಿ ವಿಚಾರದಲ್ಲಿ ಗಿಲ್ಲಿ ನಟ ಸರಿ ಅಲ್ಲ ಎಂದು ಕಿಚ್ಚ ಸುದೀಪ್‌ ತಿಳಿ ಹೇಳಿದ್ದಾರೆ.

Read Full Story

07:42 AM (IST) Nov 10

ರಿಪೋರ್ಟರ್ಸ್‌ ಡೈರಿ - ಡಿಜಿಟಲ್‌ ಆಟದಿಂದ ಕೋಟಿ ರು. ಕಿತ್ತ ಪ್ರೇಮಿಗಳು!

ದೀಪಾವಳಿ ಇಸ್ಪೀಟ್ ಆಟದಲ್ಲಿ ಡಿಜಿಟಲ್ ಕಾರ್ಡ್ ಬಳಸಿ ಕೋಟ್ಯಂತರ ರೂಪಾಯಿ ಮೋಸ ಮಾಡಿದ ಘಟನೆ, ಪಕ್ಷದ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಪ್ರೋಟೋಕಾಲ್ ಪಾಠ ಹೇಳಿದ್ದು ಹಾಗೂ ಕೂಡ್ಲಿಗಿಯ ಕಾರ್ಯಕ್ರಮದಲ್ಲಿ ಮೈಕ್ ಕೈಕೊಟ್ಟ ಪ್ರಸಂಗಗಳ ಕುರಿತಾದ ರಸಾರಸನಿಮಿಷಗಳು ಇಲ್ಲಿವೆ.
Read Full Story

07:37 AM (IST) Nov 10

ಕನ್ನಡ ಹೋರಾಟಗಾರರ ಹತ್ತಿಕ್ಕಲು ಕೇಸ್‌ ಅಸ್ತ್ರ

ಸರ್ಕಾರಗಳ ದುರಾಡಳಿತ, ಕನ್ನಡದ ಕಾಯ್ದೆಗಳು ಅನುಷ್ಠಾನಗೊಳ್ಳದಂತೆ ವಿಫಲಗೊಳಿಸುತ್ತಿರುವ ವ್ಯವಸ್ಥೆ ವಿರುದ್ಧ ಹೋರಾಡದಂತೆ ಕನ್ನಡಪರ ಹೋರಾಟಗಾರರ ಮೇಲೆ ಕೇಸುಗಳೆಂಬ ಅಸ್ತ್ರಗಳನ್ನು ಬಳಕೆ ಮಾಡಲಾಗುತ್ತಿದೆ ಎಂದು ಹೋರಾಟಗಾರರು ಆರೋಪಿಸಿದ್ದಾರೆ.

Read Full Story

More Trending News