ಗೌರಿ ಹತ್ಯೆ ಆರೋಪಿಗಳಿಗೆ ‘ಜಿಂದಾಬಾದ್’!

Sep 5, 2018, 7:12 PM IST

ಬೆಂಗಳೂರು(ಸೆ.5): ಗೌರಿ ಲಂಕೇಶ್​ ಹತ್ಯೆ ಹಂತಕರ ಪರವಾಗಿ ಹಿಂದೂ ಜನಜಾಗೃತಿ ಸಮಿತಿ ಧ್ವನಿ ಎತ್ತಿದೆ. ಗೌರಿ ಹತ್ಯೆ ವಿಚಾರದಲ್ಲಿ ಪೊಲೀಸರು ಹಿಂದೂ ಕಾರ್ಯಕರ್ತರಿಗೆ ಕಿರುಕುಳ ನೀಡುತ್ತಿದ್ದು, ಕೂಡಲೇ ಈ ಅನ್ಯಾಯ ಸರಿಪಡಿಸುವಂತೆ ಸಮಿತಿ ಆಗ್ರಹಿಸಿದೆ. 

ನಗರದಲ್ಲಿ ಇಂದು ಗೌರಿ ಹತ್ಯೆ ಆರೋಪಿಗಳ ಪರವಾಗಿ ಪ್ರತಿಭಟನೆ ನಡೆಸಿದ ಸಮಿತಿ ಕಾರ್ಯಕರ್ತರು, ಪ್ರತಿಭಟನಾ ಮೆರವಣಿಗೆಯಲ್ಲಿ ಕೊಲೆ ಆರೋಪಿಗಳಿಗೆ ಜಿಂದಾಬಾದ್ ಎಂದು ಘೋಷಣೆ ಕೂಗಿದರು.

ಗೌರಿ ಹತ್ಯೆಯ ಪ್ರಮುಖ ಆರೋಪಿಗಳಾದ ಪರಶುರಾಮ್ ವಾಗ್ಮೋರೆ ಜಿಂದಾಬಾದ್, ಕೆ ಟಿ ನವೀನ ಕುಮಾರ್ ಪರ ಪ್ರತಿಭಟನಾಕಾರರು ಜಿಂದಾಬಾದ್ ಘೋಷಣೆ ಕೂಗಿದ್ದಾರೆ.