ರಾಜ್ಯದ ಶಾಸಕರಿಂದ ಎಂಥಾ ಮಾತು...ಮೇಲ್ವರ್ಗದವರಿಗೆ ಸಾರಾಯಿ ಕುಡಿಸ್ಬೇಕಂತೆ!

Aug 27, 2018, 9:51 PM IST

ಶಾಸಕ ಬಿ.ನಾರಾಯಣರಾವ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಹಿಂದುಳಿದವರನ್ನು ಸಮರ್ಥನೆ ಮಾಡಿಕೊಳ್ಳುವ ಭರದಲ್ಲಿ ತಮ್ಮತನವನ್ನು ಹರಾಜು ಹಾಕಿಕೊಂಡಿದ್ದಾರೆ. ಬ್ರಹ್ಮಶ್ರೀ ನಾರಾಯಣಗುರು ಜಯಂತಿಯಲ್ಲಿ ಭಾಷಣದ ವೇಳೆ ಈಡಿಗ ಸಮಾಜದವರಿಗೆ ಸರಾಯಿ ಕುಡಿಯಬೇಡಿ ಎಂದು ಉಪದೇಶ ಮಾಡುವ ವೇಳೆ ವಿವಾದಿತ ಹೇಳಿಕೆ ನೀಡಿದ್ದಾರೆ. ಮೇಲ್ವರ್ಗದ ಜನರಿಗೆ ಸಾರಾಯಿ ಕುಡಿಸಿ, ಅವರು ಸಾರಾಯಿ ಕುಡಿದರೆ ಮಾತ್ರ ಮನೆ-ಮಠ, ಆಸ್ತಿ-ಪಾಸ್ತಿ ಮಾರಿಕೊಳ್ಳುತ್ತಾರೆ ಎಂದು ಹೇಳಿದ್ದು ಹೊಸ ವಿವಾದ ಎಬ್ಬಿಸಿದೆ.