ಇಂದಿರಾನಗರದಲ್ಲಿ ಕಾಂಪ್ಲೆಕ್ಸ್ ಬೇಡವೇ ಬೇಡ: ರಾಜೀವ್ ಚಂದ್ರಶೇಖರ್

Aug 13, 2018, 11:00 PM IST

ಪರಿಸರ ಸಂರಕ್ಷಣೆ ಕುರಿತಾದ ತಮ್ಮ ಹೋರಾಟವನ್ನು ಸಂಸದ ರಾಜೀವ್ ಚಂದ್ರಶೇಖರ್ ಮುಂದುವರಿಸಿದ್ದಾರೆ. ಇಂದಿರಾ ನಗರದಲ್ಲಿ ಬಿಡಿಎ ಕಾಂಪ್ಲೆಕ್ಸ್ ಕಟ್ಟಬಾರದು ಎಂದು ಪ್ರತಿಭಟನೆ ಮಾಡಿದ್ದ ಸ್ಥಳೀಯರು ಬಿಡಿಎ ಆಯುಕ್ತರನ್ನು ಭೇಟಿ ಮಾಡಿದ್ದಾರೆ. ಪಬ್-ಬಾರ್ ಗೆ ಅವಕಾಶ ಮಾಡಿಕೊಡುವ ಈ ಕಾಂಪ್ಲೆಕ್ಸ್ ನಿರ್ಮಾಣಕ್ಕೆ ಅವಕಾಶ ಕೊಡಬಾರದು ಎಂದು ಸಂಸದ ರಾಜೀವ್ ಚಂದ್ರಶೇಖರ್ ಆಗ್ರಹಿಸಿದ್ದಾರೆ. ಈ ಮರು ಅಭಿವೃದ್ಧಿ ಯೋಜನೆಯು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ಸೂಚನೆ ಉಲ್ಲಂಘನೆಯಾಗುತ್ತದೆ ಎಂದಿದ್ದಾರೆ.