14ರ ಎಳೆ ವಯಸ್ಸಲ್ಲಿ ಇದೆಂಥಾ ಕ್ರೌರ್ಯ: ಫೋನ್ ಬಳಸ್ಬೇಡ ಎಂದ ಅಣ್ಣನ ಕೊಡಲಿಯಿಂದ ಕೊಚ್ಚಿ ಕೊಂದ ತಂಗಿ

By Suvarna NewsFirst Published May 5, 2024, 3:40 PM IST
Highlights

ಜಾಸ್ತಿ ಮೊಬೈಲ್ ಫೋನ್‌ನಲ್ಲಿ ಹುಡುಗರ ಜೊತೆ ಮಾತನಾಡಬೇಡ ಎಂದು ಬುದ್ದಿ ಹೇಳಿದ್ದಕ್ಕೆ  ಅಣ್ಣನನ್ನೇ 14 ವರ್ಷದ ತಂಗಿ ಬರ್ಬರವಾಗಿ ಕೊಲೆ ಮಾಡಿದ ಆಘಾತಕಾರಿ ಘಟನೆ ಛತ್ತೀಸ್‌ಘಡ ರಾಜ್ಯದಲ್ಲಿ ನಡೆದಿದೆ.

ರಾಯ್‌ಪುರ: ಜಾಸ್ತಿ ಮೊಬೈಲ್ ಫೋನ್‌ನಲ್ಲಿ ಹುಡುಗರ ಜೊತೆ ಮಾತನಾಡಬೇಡ ಎಂದು ಬುದ್ದಿ ಹೇಳಿದ್ದಕ್ಕೆ  ಅಣ್ಣನನ್ನೇ 14 ವರ್ಷದ ತಂಗಿ ಬರ್ಬರವಾಗಿ ಕೊಲೆ ಮಾಡಿದ ಆಘಾತಕಾರಿ ಘಟನೆ ಛತ್ತೀಸ್‌ಘಡ ರಾಜ್ಯದಲ್ಲಿ ನಡೆದಿದೆ. ಯಾವಾಗಲೂ ಮೊಬೈಲ್ ಫೋನ್‌ನಲ್ಲಿ ಹುಡುಗ್ರ ಜೊತೆ ಮಾತಾಡ್ತಾ ಕುಳಿತಿದ್ದ ತಂಗಿಗೆ ಅಣ್ಣ ಹೆಚ್ಚು ಮೊಬೈಲ್ ಫೋನ್ ಬಳಸದಂತೆ ತಾಕೀತು ಮಾಡಿದ್ದಾನೆ. ಅಷ್ಟಕ್ಕೆ ಕುಪಿತಗೊಂಡ ಬಾಲಕಿ ಅಣ್ಣನ ಕತೆಯನ್ನೇ ಮುಗಿಸಿದ್ದಾಳೆ. ಛತ್ತೀಸ್‌ಘಡದ ಕೆಸಿಜಿ (Khairagarh Chhuikhadan Gandai) ಖೈರಾಘರ್ ಚುಯಿಖಾದನ್ ಗಂಡೈ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಮೇ. 3 ರಂದು ಘಟನೆ ನಡೆದಿದ್ದು, ಬಾಲಕಿಯನ್ನು ಪೊಲೀಸರು ಕಸ್ಟಡಿಗೆ ಪಡೆದಿದ್ದಾರೆ. 

ಆಘಾತಕಾರಿ ವಿಚಾರ ಎಂದರೆ ಬಾಲಕಿ ಮಚ್ಚಿನಿಂದ ಕೊಚ್ಚಿ ತನ್ನ ಹಿರಿಯ ಅಣ್ಣನನ್ನು ಹತ್ಯೆ ಮಾಡಿದ್ದಾಳೆ. ಬಾಲಕಿ ಪೊಲೀಸರಿಗೆ ನೀಡಿದ ಹೇಳಿಕೆಯ ಪ್ರಕಾರ ಘಟನೆ ನಡೆಯುವ ವೇಳೆ ಆಕೆ ಹಾಗೂ ಆಕೆಯ 18 ವರ್ಷದ ಅಣ್ಣ ಮಾತ್ರ ಮನೆಯಲ್ಲಿದ್ದರು. ಕುಟುಂಬದ ಇತರ ಸದಸ್ಯರು ಬೇರೆ ಕೆಲಸಕ್ಕಾಗಿ ಮನೆಯಿಂದ ಹೊರಗೆ ಹೋಗಿದ್ದರು. ಹುಡುಗರ ಜೊತೆ ತಂಗಿ ಫೋನ್‌ನಲ್ಲಿ ಹರಟೆ ಹೊಡೆಯುತ್ತಿದ್ದಿದ್ದನ್ನು ನೋಡಿದ ಅಣ್ಣ ಹುಡುಗರೊಂದಿಗೆ ಫೋನ್‌ನಲ್ಲಿ ಹರಟುವುದನ್ನು ನಿಲ್ಲಿಸುವಂತೆ ಹೇಳಿ ಬಳಿಕ ಸ್ವಲ್ಪ ಹೊತ್ತಿನಲ್ಲಿ ನಿದ್ದೆಗೆ ಜಾರಿದ್ದಾನೆ. ಆದರೆ ಆತನ ಬೈಗುಳದಿಂದ ಕುದಿಯುತ್ತಿದ್ದ ತಂಗಿ ಮಾತ್ರ ಅಣ್ಣ ಮಲಗಿದ್ದ ಸಮಯ ನೋಡಿ ಕೊಡಲಿ ತಂದು ಸೀದಾ ಆತನ ಕತ್ತಿಗೆ ಕಡಿದಿದ್ದಾಳೆ. ಪರಿಣಾಮ ಆತ ಸ್ಥಳದಲ್ಲೇ ತೀವ್ರ ರಕ್ತ ಸೋರಿಕೆ ಆಗಿ ಸಾವನ್ನಪ್ಪಿದ್ದಾನೆ. 

ಅಣ್ಣನ ಕೊಲೆಗೆ ರಿವೇಂಜ್ ತೀರಿಸಿಕೊಂಡ ತಮ್ಮ: ಕೋರ್ಟ್ ಕಲಾಪ ಮುಗಿಸಿಕೊಂಡು ಬರುತ್ತಿದ್ದಾಗ ಮರ್ಡರ್!

ಬಳಿಕ ಸ್ನಾನ ಮಾಡಿದ ಆಕೆ ರಕ್ತದಿಂದ ತೊಯ್ದಿದ್ದ ಬಟ್ಟೆಯನ್ನು ತೊಳೆದು ಹಾಕಿದ್ದಾಳೆ. ಇದಾದ ಬಳಿಕ ಮೆಲ್ಲನೆ ಪಕ್ಕದ ಮನೆಯವರಿಗೆ ತನ್ನ ಸೋದರನ ಕೊಲೆ ಆಗಿದೆ ಎಂದು ತಿಳಿಸಿದ್ದಾಳೆ.  ಬಳಿಕ ಗ್ರಾಮಸ್ಥರು ಪೊಲೀಸರಿಗೆ ವಿಚಾರ ತಿಳಿಸಿದ್ದು, ಸ್ಥಳಕ್ಕೆ ಬಂದ ಪೊಲೀಸರು ಘಟನೆ ಬಗ್ಗೆ ಪ್ರಶ್ನಿಸಿದ್ದಾರೆ. ವಿಚಾರಣೆ ವೇಳೆ ಬಾಲಕಿ ಸೋದರನನ್ನು ತಾನೇ ಕೊಲೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾಳೆ.  ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಘಟನೆಯ ಸಂಪೂರ್ಣ ವಿವರ ಪಡೆಯಲು ಮುಂದಾಗಿದ್ದಾರೆ. ಅಲ್ಲದೇ ಬಾಲಕಿಯನ್ನು ಬಂಧಿಸಿ ಬಾಲಾಪರಾಧಿ ಕೇಂದ್ರಕ್ಕೆ ಕಳುಹಿಸಿದ್ದಾರೆ. 

ಆಸ್ತಿಗಾಗಿ ಕಲಹ: ಹೊಲದಲ್ಲಿ ಕೆಲಸ ಮಾಡ್ತಿದ್ದ ಅಣ್ಣನನ್ನು ಕೊಂದ ತಮ್ಮ

click me!