ನವದೆಹಲಿ (ಜ.26): ಈ ಬಾರಿ 77ನೇ ಗಣರಾಜ್ಯೋತ್ಸವವನ್ನು ವಂದೇ ಮಾತರಂ ಪರಿಕಲ್ಪನೆಯಲ್ಲಿ ಆಚರಿಸಲಾಗುತ್ತಿದ್ದು, ಪ್ರಜಾಪ್ರಭುತ್ವದ ಸಂಭ್ರಮ, ಸೇನಾ ಶಕ್ತಿ ಹಾಗೂ ವೈವಿಧ್ಯತೆಯ ಅನಾವರಣಕ್ಕೆ ಇಡೀ ದೇಶ ಸಾಕ್ಷಿಯಾಗಲಿದೆ. ಈ ವರ್ಷ ವಿದೇಶಿ ಅತಿಥಿಯಾಗಿ ಯುರೋಪಿಯನ್ ಕಮಿಷನ್ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇನ್ ಮತ್ತು ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಆಂಟೋನಿಯಾ ಕೋಸ್ಟಾ ಭಾಗಿಯಾಗಲಿದ್ದಾರೆ. ಅದರೊಂದಿಗೆ ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್ಟೇನ್ಮೆಂಟ್ನ ಸುದ್ದಿಗಳ ವಿವರಗಳ ಲೈವ್ ಬ್ಲಾಗ್..
01:19 PM (IST) Jan 26
ಗಂಡನಿಂದ ವಿಚ್ಛೇದನ ಪಡೆಯುವ ಉದ್ದೇಶದಿಂದ, ಮಹಿಳೆಯೊಬ್ಬಳು ತನ್ನ ಬಾಯ್ಫ್ರೆಂಡ್ ಜೊತೆ ಸೇರಿ ಪತಿಯ ಕಾರಿನಲ್ಲಿ ಗೋಮಾಂಸವಿಟ್ಟು ಆತನನ್ನು ಜೈಲಿಗಟ್ಟಲು ಸಂಚು ರೂಪಿಸಿದ್ದಾಳೆ. ಈ ಹಿಂದೆ ಇದೇ ರೀತಿ ಯತ್ನಿಸಿ ಆತನನ್ನು ಒಮ್ಮೆ ಜೈಲಿಗಟ್ಟಿದ್ದ ಆಕೆ ಆತ ವಾಪಸ್ ಬರುತ್ತಿದ್ದಂತೆ ಮತ್ತೊಂದು ಪ್ಲಾನ್ ಮಾಡಿದ್ದಾಳೆ.
01:05 PM (IST) Jan 26
12:42 PM (IST) Jan 26
Republic Day Parade 2026: 77ನೇ ಗಣರಾಜ್ಯೋತ್ಸವದಂದು ಕರ್ತವ್ಯ ಪಥದಲ್ಲಿ ನಡೆದ ಮೆರವಣಿಗೆಯಲ್ಲಿ ಮಹಾರಾಷ್ಟ್ರದ ಸ್ತಬ್ಧಚಿತ್ರವು ಗಣೇಶೋತ್ಸವವನ್ನು ಪ್ರದರ್ಶಿಸಿತು. ಗಣೇಶೋತ್ಸವದ ಸಾಂಸ್ಕೃತಿಕ ವೈಭವ, ಆರ್ಥಿಕ ವಹಿವಾಟು ಮತ್ತು ಸ್ವಾವಲಂಬಿ ಭಾರತ ಅಭಿಯಾನಕ್ಕೆ ನೀಡುವ ಕೊಡುಗೆಯನ್ನು ಬಿಂಬಿಸಿತು.
12:33 PM (IST) Jan 26
ಡಿಜಿಟಲ್ ಮಾಧ್ಯಮಗಳ ಪ್ರಭಾವದಿಂದಾಗಿ ಟಿವಿ ಚಾನೆಲ್ಗಳು ತೀವ್ರ ಸಂಕಷ್ಟ ಎದುರಿಸುತ್ತಿವೆ. ವೀಕ್ಷಕರ ಸಂಖ್ಯೆ ಕುಸಿತ ಮತ್ತು ಜಾಹೀರಾತು ಆದಾಯ ಡಿಜಿಟಲ್ಗೆ ವರ್ಗಾವಣೆ ಆಗುತ್ತಿರುವ ಕಾರಣ, 50 ಚಾನೆಲ್ಗಳು ತಮ್ಮ ಪರವಾನಗಿಯನ್ನು ವಾಪಸ್ ನೀಡಿ, ಬಾಗಿಲು ಮುಚ್ಚಲು ಮುಂದಾಗಿವೆ. ಇದರ ಡಿಟೇಲ್ಸ್ ಇಲ್ಲಿದೆ.
12:06 PM (IST) Jan 26
77ನೇ ಗಣರಾಜ್ಯೋತ್ಸವದಂದು ಕರ್ತವ್ಯಪಥದಲ್ಲಿ ನಡೆದ ಭವ್ಯ ಪರೇಡ್ನಲ್ಲಿ, ಭಾರತವು 'ಆಪರೇಷನ್ ಸಿಂಧೂರ್'ನ ರಹಸ್ಯವನ್ನು ಜಗತ್ತಿಗೆ ಅನಾವರಣಗೊಳಿಸಿತು. ಪಾಕಿಸ್ತಾನದ ಮೇಲಿನ ದಾಳಿಯಲ್ಲಿ ಬಳಸಲಾಗಿದ್ದ ರಫೇಲ್, ಸುಖೋಯ್-30 ಎಂಕೆಐ, ಮಿಗ್-29 ಹಾಗೂ ಜಾಗ್ವಾರ್ ಯುದ್ಧವಿಮಾನಗಳ ಮಿಶ್ರ ಫಾರ್ಮೇಷನ್ ಪ್ರದರ್ಶಿಸಿತು.
12:05 PM (IST) Jan 26
11:27 AM (IST) Jan 26
ಭಾರತದ ಎರಡನೇ ಗಗನಯಾತ್ರಿ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರು 77ನೇ ಗಣರಾಜ್ಯೋತ್ಸವದಂದು ರಾಷ್ಟ್ರಪತಿಗಳಿಂದ ಅಶೋಕ ಚಕ್ರ ಪ್ರಶಸ್ತಿ ಸ್ವೀಕರಿಸಿದರು. ಭಾರತದ ಜನರ ಸಾಮೂಹಿಕ ಆಶೀರ್ವಾದವೆಂದು ಬಣ್ಣಿಸಿದ ಅವರು, ಭವಿಷ್ಯದ ಮಾನವ ಬಾಹ್ಯಾಕಾಶ ಯಾತ್ರೆಗಳಿಗೆ ತಮ್ಮ ಬದ್ಧತೆಯನ್ನು ವ್ಯಕ್ತಪಡಿಸಿದ್ದಾರೆ.
10:12 AM (IST) Jan 26
ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೂ ಮುನ್ನ ಸಂಪ್ರದಾಯದ ಪ್ರಕಾರ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರೀಯ ಯುದ್ಧ ಸ್ಮಾರಕ್ಕೆ ಭೇಟಿ ನೀಡಿ, ಹುತಾತ್ಮ ಸೈನಿಕರಿಗೆ ನಮನ ಸಲ್ಲಿಸಿದರು. ಷುಷ್ಪನಮನ ಸಲ್ಲಿಸಿದ ಬಳಿಕ 2 ನಿಮಿಷ ಮೌನಾಚರಣೆ ಮಾಡಿದರು.
10:08 AM (IST) Jan 26
10:05 AM (IST) Jan 26
10:01 AM (IST) Jan 26
ದೇಶವು ತನ್ನ 77ನೇ ಗಣರಾಜ್ಯೋತ್ಸವವನ್ನು ಆಚರಿಸುತ್ತಿದ್ದು, ದೆಹಲಿಯ ಕರ್ತವ್ಯ ಪಥದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಧ್ವಜಾರೋಹಣ ನೆರವೇರಿಸಲಿದ್ದಾರೆ. ಈ ವರ್ಷದ ಮೆರವಣಿಗೆಯು 'ವಂದೇ ಮಾತರಂ' ಮತ್ತು 'ಆತ್ಮನಿರ್ಭರ ಭಾರತ' ಥೀಮ್ನಡಿಯಲ್ಲಿ ನಡೆಯಲಿದೆ.
09:43 AM (IST) Jan 26
Man Divorces Wife After 16 Years Due to Her Hair Loss in China 16 ವರ್ಷಗಳ ಕಾಲ ಮದುವೆಯಾಗಿದ್ದ ದಂಪತಿ ಇತ್ತೀಚೆಗೆ ಬೇರೆಬೇರೆಯಾಗಿದ್ದಾರೆ. ಹೆಂಡ್ತಿಯ ಕೂದಲು ವಿಪರೀತವಾಗಿ ಉದುರಿದ್ದ ಕಾರಣಕ್ಕೆ ವಿಚ್ಛೇದನ ನೀಡಿರುವುದಾಗಿ ಪತಿ ಹೇಳಿದ್ದಾನೆ.
07:58 AM (IST) Jan 26
ಟಿ20 ವಿಶ್ವಕಪ್ ಬಹಿಷ್ಕರಿಸುವ ಪೊಳ್ಳು ಬೆದರಿಕೆ ಹಾಕಿದ ಪಾಕಿಸ್ತಾನಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಖಡಕ್ ಎಚ್ಚರಿಕೆ ನೀಡಿದೆ. ಒಂದು ವೇಳೆ ಟೂರ್ನಿಯಲ್ಲಿ ಆಡದಿದ್ದರೆ, ದ್ವಿಪಕ್ಷೀಯ ಸರಣಿ, ಪಿಎಸ್ಎಲ್ ಮತ್ತು ಏಷ್ಯಾಕಪ್ನಿಂದಲೂ ಹೊರಹಾಕುವುದಾಗಿ ಎಚ್ಚರಿಸಿದೆ.
07:57 AM (IST) Jan 26
ನ್ಯೂಜಿಲೆಂಡ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಭಾರತ 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿ, 5 ಪಂದ್ಯಗಳ ಸರಣಿಯನ್ನು 3-0 ಅಂತರದಲ್ಲಿ ವಶಪಡಿಸಿಕೊಂಡಿದೆ. ಅಭಿಷೇಕ್ ಶರ್ಮಾ ಅವರ 14 ಎಸೆತಗಳ ಸ್ಫೋಟಕ ಅರ್ಧಶತಕ ಮತ್ತು ಸೂರ್ಯಕುಮಾರ್ ಉತ್ತಮ ಬ್ಯಾಟಿಂಗ್ ನೆರವಿನಿಂದ ಭಾರತ ಐತಿಹಾಸಿಕ ಗೆಲುವು ದಾಖಲಿಸಿತು.
07:57 AM (IST) Jan 26
77ನೇ ಗಣರಾಜ್ಯೋತ್ಸವಕ್ಕೆ ದೇಶ ಸಜ್ಜಾಗಿದೆ. ದೇಶದ ಸೇನಾ, ಸಾಂಸ್ಕೃತಿಕ ಸಾಮರ್ಥ್ಯವನ್ನು ಜಗತ್ತಿನೆದುರಿಗೆ ತೆರೆದಿಡುವ ಕಾರ್ಯಕ್ರಮಕ್ಕೆ ಈ ಬಾರಿ ವಂದೇ ಮಾತರಂ ಪರಿಕಲ್ಪನೆ ಇನ್ನಷ್ಟು ಮೆರಗು ನೀಡಲಿದೆ.
07:57 AM (IST) Jan 26
ರಾಷ್ಟ್ರೀಯ ಜನತಾ ದಳದ (ಆರ್ಜೆಡಿ) ನೂತನ ರಾಷ್ಟ್ರೀಯ ಕಾರ್ಯಾಧ್ಯಕ್ಷರಾಗಿ ಬಿಹಾರ ವಿಪಕ್ಷ ನಾಯಕ ತೇಜಸ್ವಿ ಯಾದವ್ ಅವರನ್ನು ನೇಮಿಸಲಾಗಿದೆ. ಇದು ಪಕ್ಷದ ನಂ.2 ಹುದ್ದೆ ಆಗಿದ್ದು, ತನ್ಮೂಲಕ ತೇಜಸ್ವಿ ಅವರು ತಮ್ಮ ಉತ್ತರಾಧಿಕಾರಿ ಎಂದು ಪಕ್ಷದ ಅಧ್ಯಕ್ಷ ಲಾಲು ಪ್ರಸಾದ್ ಯಾದವ್ ಪರೋಕ್ಷವಾಗಿ ಸಾರಿದ್ದಾರೆ.
07:56 AM (IST) Jan 26
ಈ ಬಾರಿ 77ನೇ ಗಣರಾಜ್ಯೋತ್ಸವವನ್ನು ವಂದೇ ಮಾತರಂ ಪರಿಕಲ್ಪನೆಯಲ್ಲಿ ಆಚರಿಸಲಾಗುತ್ತಿದ್ದು, ಪ್ರಜಾಪ್ರಭುತ್ವದ ಸಂಭ್ರಮ, ಸೇನಾ ಶಕ್ತಿ ಹಾಗೂ ವೈವಿಧ್ಯತೆಯ ಅನಾವರಣಕ್ಕೆ ಇಡೀ ದೇಶ ಸಾಕ್ಷಿಯಾಗಲಿದೆ.
07:56 AM (IST) Jan 26
ಬಿಬಿಸಿ ಭಾರತದ ಮುಖ್ಯಸ್ಥರಾಗಿ 22 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಹೆಸರಾಂತ ಹಿರಿಯ ಪತ್ರಕರ್ತ, ಪದ್ಮಭೂಷಣ ಬ್ರಿಟಿಷ್ ಸಂಜಾತ ಭಾರತೀಯ ಪತ್ರಕರ್ತ ಮಾರ್ಕ್ ಟಲ್ಲಿ (90) ಅವರು ಭಾನುವಾರ ದೆಹಲಿಯಲ್ಲಿ ನಿಧನರಾದರು.