LIVE NOW
Published : Jul 20, 2026, 06:27 AM ISTUpdated : Jul 20, 2026, 11:46 PM IST

National News Live: ಪವನ್ ಕಲ್ಯಾಣ್ 'ಕಣ್ಣಪ್ಪ' ಸಿನಿಮಾ ಯಾಕೆ ಮಾಡಲಿಲ್ಲ? ತನಿಕೆಳ್ಳ ಭರಣಿ ಬಿಚ್ಚಿಟ್ರು ಆ ಸತ್ಯ!

ಸಾರಾಂಶ

ಮುಂಗಾರು ಅಧಿವೇಶನ ಇಂದಿನಿಂದ ಆರಂಭಗೊಳ್ಳುತ್ತಿದೆ. ಕೇಂದ್ರ ಸರ್ಕಾರವನ್ನು ಸದನದಲ್ಲಿ ಇಕ್ಕಟ್ಟಿಗೆ ಸಿಲುಕಿಸಲು ವಿಪಕ್ಷಗಳು ಸಜ್ಜಾಗಿದೆ. ರಾಮ ಮಂದಿರ ದೇಣಿಗೆ ಕಳ್ಳತನ, ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ, ಸೋನಂ ವಾಂಗ್ಚುಕ್ ಸೇರಿದಂತೆ ಸಿಜೆಪಿ ಪ್ರತಿಭಟನೆ, ಬೆಲೆ ಏರಿಕೆ, ಯುದ್ಧ ಸೇರಿದಂತೆ ಹಲವು ವಿಚಾರಗಳ ಮುಂದಿಟ್ಟು ಕೇಂದ್ರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ವಿಪಕ್ಷಗಳು ಸಜ್ಜಾಗಿದೆ. ಇತ್ತ ಸಂಸತ್ ಚಲೋ ಪ್ರತಿಭಟೆಯನ್ನು ಸಿಜೆಪಿ ಹಮ್ಮಿಕೊಂಡಿದ್ದು, ತೀವ್ರ ಕೋಹಾಲ ಸೃಷ್ಟಿಯಾಗುವ ಸಾಧ್ಯತೆ ಇದೆ. ಮುಂಗಾರು ಅಧಿವೇಶನ, ಭಾರತದಲ್ಲೂ ಫಿಫಾ ವಿಶ್ವಕಪ್ ಟ್ರೋಫಿ ಸಂಭ್ರಮ ಸೇರಿದಂತೆ ದೇಶ ವಿದೇಶಗಳ ನ್ಯೂಸ್ ಲೈವ್ ಅಪ್‌ಡೇಟ್ ಇಲ್ಲಿದೆ.

Pawan Kalyan

11:46 PM (IST) Jul 20

ಪವನ್ ಕಲ್ಯಾಣ್ 'ಕಣ್ಣಪ್ಪ' ಸಿನಿಮಾ ಯಾಕೆ ಮಾಡಲಿಲ್ಲ? ತನಿಕೆಳ್ಳ ಭರಣಿ ಬಿಚ್ಚಿಟ್ರು ಆ ಸತ್ಯ!

ಪವರ್ ಸ್ಟಾರ್ ಪವನ್ ಕಲ್ಯಾಣ್, ಶಿವಭಕ್ತ 'ಕಣ್ಣಪ್ಪ'ನ ಪಾತ್ರದಲ್ಲಿ ನಟಿಸಬೇಕಿತ್ತು. ಶಿವಭಕ್ತನಾಗಿ ನಟಿಸಬೇಕೆಂಬ ಆಸೆ ಅವರಿಗೂ ಇತ್ತು. ಈ ಬಗ್ಗೆ ನಟ ತನಿಕೆಳ್ಳ ಭರಣಿ ಹಂಚಿಕೊಂಡಿರುವ ಮಾತುಗಳು ಈಗ ವೈರಲ್ ಆಗಿವೆ.

Read Full Story

11:18 PM (IST) Jul 20

FIFA World Cup 2026 ಕನಸಿನ ಸಂಭಾವ್ಯ ತಂಡ ಪ್ರಕಟ; ರೋಡ್ರಿ ಕ್ಯಾಪ್ಟನ್, ಸ್ಪೇನ್ ಆಟಗಾರರದ್ದೇ ಪಾರುಪತ್ಯ!

ಅರ್ಜೆಂಟೀನಾವನ್ನು ಸೋಲಿಸಿ ಸ್ಪೇನ್ ವಿಶ್ವಕಪ್ ಗೆದ್ದ ನಂತರ, ಟೂರ್ನಮೆಂಟ್‌ನ ಅತ್ಯುತ್ತಮ ಆಟಗಾರರನ್ನು ಸೇರಿಸಿ ಒಂದು ಡ್ರೀಮ್ ಟೀಮ್ ಅನ್ನು ಆಯ್ಕೆ ಮಾಡಿದರೆ, ಅದರಲ್ಲಿ ಯಾರೆಲ್ಲಾ ಇರುತ್ತಾರೆ? ಇಲ್ಲಿದೆ ಸಂಭಾವ್ಯ ತಂಡ.

Read Full Story

10:51 PM (IST) Jul 20

ಫಿಫಾ ವಿಶ್ವಕಪ್ ಗೆದ್ದ ಸ್ಪೇನ್‌ಗೆ ಡಬಲ್ ಧಮಾಕ - ಫಿಫಾ ರ‍್ಯಾಂಕಿಂಗ್‌ನಲ್ಲೂ ನಂ.1, ಕುಸಿದ ಮೆಸ್ಸಿ ನೇತೃತ್ವದ ಅರ್ಜೆಂಟೀನಾ

ಫಿಫಾ ವಿಶ್ವಕಪ್ ಗೆದ್ದ ಸ್ಪೇನ್, ಫುಟ್ಬಾಲ್ ರ‍್ಯಾಂಕಿಂಗ್‌ನಲ್ಲಿ ಅರ್ಜೆಂಟೀನಾವನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದೆ. ಈ ಗೆಲುವಿನೊಂದಿಗೆ, ಮೊರಾಕ್ಕೊ ಆರನೇ ಸ್ಥಾನಕ್ಕೆ ಲಗ್ಗೆ ಇಟ್ಟರೆ, ನಾರ್ವೆ 12 ಸ್ಥಾನಗಳ ಭರ್ಜರಿ ಜಿಗಿತ ಕಂಡು 19ನೇ ಸ್ಥಾನಕ್ಕೇರಿದೆ. ಫೈನಲ್‌ನಲ್ಲಿ ಸೋತ ಅರ್ಜೆಂಟೀನಾ ಎರಡನೇ ಸ್ಥಾನಕ್ಕೆ ಕುಸಿದಿದೆ.
Read Full Story

10:30 PM (IST) Jul 20

Rajamouli - ಹಾಲಿವುಡ್‌ ಸಿನಿಮಾ ಮಾಡಿದ್ರೆ ರಾಜಮೌಳಿ ಹೀರೋ ಯಾರು? ಜಕ್ಕಣ್ಣ ಉತ್ತರ ಹೀಗಿತ್ತು!

ಈಗಂತೂ ಹಾಲಿವುಡ್ ಮಂದಿ ಕೂಡ ತೆಲುಗು ಸಿನಿಮಾಗಳ ಬಗ್ಗೆ ಮಾತನಾಡುತ್ತಿದ್ದಾರೆ. ರಾಜಮೌಳಿ ನಿರ್ದೇಶನದ RRR ಚಿತ್ರ ವಿಶ್ವಾದ್ಯಂತ ಸಂಚಲನ ಸೃಷ್ಟಿಸಿತ್ತು. ಭವಿಷ್ಯದಲ್ಲಿ ರಾಜಮೌಳಿ ಹಾಲಿವುಡ್ ಸಿನಿಮಾ ಮಾಡುವ ಸಾಧ್ಯತೆ ಇದೆಯೇ? ಈ ಕುರಿತ ಕುತೂಹಲಕಾರಿ ಮಾಹಿತಿ ಇಲ್ಲಿದೆ.

Read Full Story

10:20 PM (IST) Jul 20

ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತೆ ಟೀಂ ಇಂಡಿಯಾ ಪರ ಮೈದಾನಕ್ಕಿಳಿಯೋದು ಯಾವಾಗ? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್

ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯ ಶತಕದ ಜೊತೆಯಾಟದ ಹೊರತಾಗಿಯೂ ಭಾರತ ಸೋಲು ಕಂಡಿತು. ಟಿ20 ಮತ್ತು ಟೆಸ್ಟ್‌ನಿಂದ ನಿವೃತ್ತರಾಗಿರುವ ಈ ಜೋಡಿ, ಈಗ ಕೇವಲ ಏಕದಿನ ಪಂದ್ಯಗಳನ್ನಾಡುತ್ತಿದ್ದು, ಅವರ ಮುಂದಿನ ಸರಣಿ ಯಾವಾಗ ಎಂಬ ಮಾಹಿತಿ ಇಲ್ಲಿದೆ.
Read Full Story

09:29 PM (IST) Jul 20

ಆ ಆಟಗಾರನಿಗೆ ಯಾಕಿಂಗೆ ಮಾಡ್ತಿದ್ದೀರಾ? ಟೀಂ ಮ್ಯಾನೇಜ್‌ಮೆಂಟ್ ವಿರುದ್ಧ ರವಿಚಂದ್ರನ್ ಅಶ್ವಿನ್ ಗರಂ

ಟೀಂ ಇಂಡಿಯಾ ಸ್ಪಿನ್ನರ್ ಕುಲ್ದೀಪ್ ಯಾದವ್ ಅವರನ್ನು ಪದೇ ಪದೇ ತಂಡದಿಂದ ಹೊರಗಿಡುತ್ತಿರುವುದಕ್ಕೆ ಆರ್. ಅಶ್ವಿನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಂಗ್ಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲೂ ಕುಲ್ದೀಪ್‌ಗೆ ಅವಕಾಶ ನೀಡದ ಟೀಂ ಮ್ಯಾನೇಜ್‌ಮೆಂಟ್ ನಿರ್ಧಾರವನ್ನು ಪ್ರಶ್ನಿಸಿರುವ ಅವರು, ಇದು ಆಟಗಾರನ ಆತ್ಮವಿಶ್ವಾಸಕ್ಕೆ ಧಕ್ಕೆ ತರುತ್ತದೆ ಎಂದು ಎಚ್ಚರಿಸಿದ್ದಾರೆ.
Read Full Story

08:48 PM (IST) Jul 20

ಇದು ಚಿನ್ನದ ಕಾಫಿ, ಟೀ! ಒಂದು ಕಪ್​ಗೆ ಒಂದು ಲಕ್ಷ - ಡಾ. ಬ್ರೋ ಕುಡಿದ 5 ಸಾವಿರ ರೂ. ಕಾಫಿ ಕಥೆ ಕೇಳಿ

ದುಬೈನಲ್ಲಿ ಡಾ.ಬ್ರೋ ಕುಡಿದ 5 ಸಾವಿರ ರೂಪಾಯಿ ಬಂಗಾರದ ಕಾಫಿ ಹಾಗೂ ಭಾರತೀಯ ಮಹಿಳೆ ನಡೆಸುತ್ತಿರುವ ಕೆಫೆಯಲ್ಲಿ ಸಿಗುವ ಒಂದು ಲಕ್ಷ ರೂಪಾಯಿ ಮೌಲ್ಯದ 24 ಕ್ಯಾರೆಟ್ ಚಿನ್ನ ಲೇಪಿತ ಚಹಾದ ಬಗ್ಗೆ ಈ ಲೇಖನ ವಿವರಿಸುತ್ತದೆ. ಈ ದುಬಾರಿ ಪಾನೀಯಗಳನ್ನು ಬೆಳ್ಳಿಯ ಲೋಟದಲ್ಲಿ ನೀಡಲಾಗುತ್ತದೆ.
Read Full Story

08:10 PM (IST) Jul 20

ಕೋಟ್ಯಧಿಪತಿಗಳ ಮನೆ ಬಾಗಿಲಿಗೆ ಪಕ್ಕದ್ಮನೆಯವರ ಹಾಲು, ಮೊಸರು - ಮುಲಾಜಿಲ್ಲದೇ ಕುಡಿದು-ತೇಗಿದ್ರು

ನೋಯ್ಡಾದಲ್ಲಿ ಮಹಿಳೆಯೊಬ್ಬರು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ ದಿನಸಿ ಸಾಮಗ್ರಿಗಳನ್ನು ಡೆಲಿವರಿ ಹುಡುಗ ತಪ್ಪಾಗಿ ಬೇರೊಂದು ಮನೆಗೆ ತಲುಪಿಸಿದ್ದಾನೆ. ಆ ಮನೆಗೆ ಹೋಗಿ ನೋಡಿದಾಗ, ಕೋಟ್ಯಧಿಪತಿಗಳಾಗಿದ್ದ ಆ ಮನೆಯವರು, ತಮ್ಮದಲ್ಲದಿದ್ದರೂ ಆ ವಸ್ತುಗಳನ್ನು ಬಳಸುತ್ತಿರುವುದು ಕಂಡುಬಂದಿದೆ. ಈ ಘಟನೆಯು ಶ್ರೀಮಂತರ ಸಣ್ಣತನವನ್ನು ತೋರಿಸುತ್ತದೆ ಮತ್ತು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
Read Full Story

06:51 PM (IST) Jul 20

ಧ್ರುವ್ ವಿಕ್ರಮ್ ಜೊತೆ ಬ್ರೇಕಪ್? ನಟಿ ಅನುಪಮಾ ಪೋಸ್ಟ್‌ನಿಂದ ಕನ್ಫ್ಯೂಸ್ ಆದ ಫ್ಯಾನ್ಸ್!

Anupama Parameswaran Instagram: ನಟಿ ಅನುಪಮಾ ಪರಮೇಶ್ವರನ್ ಇನ್ಮುಂದೆ ಯಾರ ಅನುಮತಿಗೂ ಕಾಯಬೇಕಿಲ್ಲ ಎಂದು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಾಕಿದ್ದಾರೆ. ಇದು ಅಭಿಮಾನಿಗಳಲ್ಲಿ ಗೊಂದಲ ಸೃಷ್ಟಿಸಿದೆ.

Read Full Story

06:42 PM (IST) Jul 20

70 ನಿಲ್ದಾಣ ದಾಟಿದ್ರೂ ಎಲ್ಲೂ ನಿಲ್ಲದ ಭಾರತದ ಏಕೈಕ ರೈಲು; 5 ರಾಜ್ಯ ಸಂಪರ್ಕಿಸೋ ಟ್ರೈನ್

Indian Railways Superfast Train: ಈ ರೈಲು 70ಕ್ಕೂ ಹೆಚ್ಚು ನಿಲ್ದಾಣಗಳನ್ನು ದಾಟಿದರೂ, ಪ್ರಯಾಣಿಕರಿಗಾಗಿ ಎಲ್ಲಿಯೂ ನಿಲುಗಡೆ ಮಾಡುವುದಿಲ್ಲ. ಈ ಕಾರಣದಿಂದ ಇದು ಭಾರತೀಯ ರೈಲ್ವೆಯ ವಿಶೇಷ ರೈಲುಗಳಲ್ಲಿ ಒಂದಾಗಿದೆ.

Read Full Story

06:04 PM (IST) Jul 20

ಧೂಳು, ಮಳೆ, ನೀರಿನಲ್ಲಿ ಬಿದ್ರೂ ಸೇಫ್‌ ಆಗಿರೋ ಬೆಸ್ಟ್ ಮೂರು ಸ್ಮಾರ್ಟ್‌ಫೋನ್‌ಗಳು ಇಲ್ಲಿವೆ

ಸ್ಮಾರ್ಟ್‌ಫೋನ್ ಖರೀದಿಸುವಾಗ ಅದರ ಧೂಳು ಮತ್ತು ನೀರಿನ ಸುರಕ್ಷತೆಯನ್ನು ಪರಿಗಣಿಸುವುದು ಮುಖ್ಯ. IP ರೇಟಿಂಗ್ ಈ ಸುರಕ್ಷತೆಯನ್ನು ಸೂಚಿಸುತ್ತದೆ, ಇದರಲ್ಲಿ IP69 ಅತ್ಯುನ್ನತ ಮಟ್ಟವಾಗಿದೆ. ಈ ಲೇಖನದಲ್ಲಿ IP69 ರೇಟಿಂಗ್ ಹೊಂದಿರುವ ಒನ್‌ಪ್ಲಸ್ ಮತ್ತು ಒಪ್ಪೋ ಸ್ಮಾರ್ಟ್‌ಫೋನ್‌ಗಳ ಬಗ್ಗೆ ಮಾಹಿತಿ ನೀಡಲಾಗಿದೆ.
Read Full Story

04:49 PM (IST) Jul 20

ರಿಷಬ್ ಶೆಟ್ಟಿ ಶಿವಾಜಿ ಚಿತ್ರಕ್ಕೆ 'Game of Thrones' ತಂಡ - ಯುದ್ಧ ದೃಶ್ಯಗಳ ಮೇಲೆ ಭಾರೀ ನಿರೀಕ್ಷೆ!

ರಾಷ್ಟ್ರ ಪ್ರಶಸ್ತಿ ವಿಜೇತ ನಟ ರಿಷಬ್ ಶೆಟ್ಟಿ ಅಭಿನಯಿಸುತ್ತಿರುವ ಬಹುನಿರೀಕ್ಷಿತ ಐತಿಹಾಸಿಕ ಸಿನಿಮಾ 'ದಿ ಪ್ರೈಡ್ ಆಫ್ ಭಾರತ್: ಛತ್ರಪತಿ ಶಿವಾಜಿ ಮಹಾರಾಜ್' ಚಿತ್ರಕ್ಕೆ ಅಂತರರಾಷ್ಟ್ರೀಯ ಖ್ಯಾತಿಯ ಆಕ್ಷನ್ ತಂಡ ಸೇರ್ಪಡೆಯಾಗಿದೆ.

Read Full Story

04:47 PM (IST) Jul 20

Tecno Camon 50 Ultra ಲಾಂಚ್; 50MP ಕ್ಯಾಮೆರಾ, 6500mAh ಬ್ಯಾಟರಿಯ ಸ್ಮಾರ್ಟ್‌ಫೋನ್

ಟೆಕ್ನೋ ಭಾರತದ ಮಾರುಕಟ್ಟೆಗೆ ತನ್ನ ಹೊಸ ಕ್ಯಾಮೆರಾ-ಕೇಂದ್ರಿತ ಸ್ಮಾರ್ಟ್‌ಫೋನ್ Tecno Camon 50 Ultra ಅನ್ನು ಬಿಡುಗಡೆ ಮಾಡಿದೆ. ಈ ಫೋನ್ 50MP ಸೋನಿ ಪ್ರೈಮರಿ ಕ್ಯಾಮೆರಾ, 6500mAh ಸಾಮರ್ಥ್ಯದ ಬ್ಯಾಟರಿ ಮತ್ತು MediaTek Dimensity 7400 ಅಲ್ಟಿಮೇಟ್ ಪ್ರೊಸೆಸರ್‌ನಂತಹ ಪ್ರಮುಖ ವೈಶಿಷ್ಟ್ಯಗಳನ್ನು ಹೊಂದಿದೆ.
Read Full Story

04:35 PM (IST) Jul 20

Water Tank Cleaning Tips - ಟ್ಯಾಂಕ್ ಒಳಗೆ ಇಳಿಬೇಕು ಅಂತೇನಿಲ್ಲ; ಹಾಗೆ ಕ್ಲೀನ್‌ ಮಾಡಬಹುದು!

Cleaning Your Water Tank: ನೀರಿನ ಟ್ಯಾಂಕ್ ಒಳಗೆ ಇಳಿಯದೆ, ಕೆಲವೇ ನಿಮಿಷಗಳಲ್ಲಿ ಅದನ್ನು ಸ್ವಚ್ಛಗೊಳಿಸುವುದು ಹೇಗೆ? ಟೆಲಿಸ್ಕೋಪಿಕ್ ಕ್ಲೀನರ್ ಮತ್ತು ಸಬ್ಮರ್ಸಿಬಲ್ ಪಂಪ್ ಬಳಸುವ ಸ್ಮಾರ್ಟ್ ಟಿಪ್ಸ್ ಹೀಗಿದೆ..

Read Full Story

04:29 PM (IST) Jul 20

ಟೀಂ ಇಂಡಿಯಾ ಏಕದಿನ ಸರಣಿ ಸೋಲಿಗೆ ಇದೊಂದೇ ನೇರ ಕಾರಣ! ಇನ್ನಾದರೂ ಬುದ್ದಿ ಕಲಿತಾರಾ ಗಂಭೀರ್-ಅಗರ್ಕರ್?

ಇಂಗ್ಲೆಂಡ್ ವಿರುದ್ಧದ ನಿರ್ಣಾಯಕ ಏಕದಿನ ಪಂದ್ಯದಲ್ಲಿ ಭಾರತ 27 ರನ್‌ಗಳ ಸೋಲನುಭವಿಸಿ ಸರಣಿ ಕಳೆದುಕೊಂಡಿದೆ. ಕೋಚ್ ಗೌತಮ್ ಗಂಭೀರ್ ಮತ್ತು ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಅವರ ಪ್ರಯೋಗಾತ್ಮಕ ತಂಡದ ಆಯ್ಕೆಯೇ ಈ ಸೋಲಿಗೆ ಕಾರಣವೆಂದು ವಿಶ್ಲೇಷಿಸಲಾಗಿದೆ. ಅನುಭವಿ ವೇಗಿಗಳಾದ ಶಮಿ ಮತ್ತು ಭುವನೇಶ್ವರ್ ಕುಮಾರ್ ಅವರನ್ನು ಕಡೆಗಣಿಸಿ, ಅನನುಭವಿ ಬೌಲರ್‌ಗಳಿಗೆ ಅವಕಾಶ ನೀಡಿದ್ದು ತಂಡಕ್ಕೆ ಮುಳುವಾಯಿತು.
Read Full Story

04:06 PM (IST) Jul 20

ಫಿಫಾ ವಿಶ್ವಕಪ್ ಇತಿಹಾಸದಲ್ಲೇ ಮೂರನೇ ಸಲ ಅತ್ಯಂತ ಕೆಟ್ಟ ದಾಖಲೆ ಬರೆದ ಅರ್ಜೇಂಟೀನಾ!

ಫಿಫಾ ವಿಶ್ವಕಪ್ ಫೈನಲ್‌ನಲ್ಲಿ ಸ್ಪೇನ್ ವಿರುದ್ಧ ಸೋತ ಅರ್ಜೆಂಟೀನಾ, 60 ವರ್ಷಗಳ ಇತಿಹಾಸದಲ್ಲಿ ಫೈನಲ್ ಪಂದ್ಯದಲ್ಲಿ ಒಂದೇ ಒಂದು ಶಾಟ್ ಗುರಿಯತ್ತ ಹೊಡೆಯಲು ವಿಫಲವಾದ ಕೆಟ್ಟ ದಾಖಲೆಯನ್ನು ನಿರ್ಮಿಸಿದೆ. ಇದು ಅರ್ಜೆಂಟೀನಾ ತಂಡಕ್ಕೆ ಇಂತಹ ಮೂರನೇ ಅಪಖ್ಯಾತಿಯಾಗಿದ್ದು, ತಂಡದ ಆಕ್ರಮಣಕಾರಿ ಆಟ ಸಂಪೂರ್ಣ ವಿಫಲವಾಯಿತು.
Read Full Story

02:46 PM (IST) Jul 20

ದೆಹಲಿಯಲ್ಲಿ ಹಿಂಸಾತ್ಮಕ ರೂಪ ತಾಳಿದ ಪ್ರತಿಭಟನೆ, ಸಂಸತ್ತಿಗೆ ಪ್ರತಿಭಟನಾಕಾರರು ಮುತ್ತಿಗೆ ಮೆಟ್ರೋ ಬಂದ್, ಇಂಟರ್ನೆಟ್ ಸ್ಥಗಿತ!

ನೀಟ್ ಪರೀಕ್ಷಾ ಅಕ್ರಮ ಖಂಡಿಸಿ 'ಕಾಕ್ರೋಚ್ ಜನತಾ ಪಕ್ಷ' ನವದೆಹಲಿಯಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆ ಹಿಂಸಾತ್ಮಕ ರೂಪ ಪಡೆದಿದೆ. ಸಂಸತ್ ಭವನದತ್ತ ಸಾಗುತ್ತಿದ್ದ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ಮತ್ತು ಅಶ್ರುವಾಯು ಪ್ರಯೋಗಿಸಿದ್ದು, ಇಡೀ ಪ್ರದೇಶ ರಣರಂಗವಾಗಿದೆ.

Read Full Story

02:35 PM (IST) Jul 20

Expensive Rice - ದುಬಾರಿ ದುನಿಯಾ - ಈ ಅಕ್ಕಿಯ 1 ಕೆಜಿ ಬೆಲೆಗೆ 3 ತಿಂಗಳ ದಿನಸಿ ಖರೀದಿಸಬಹುದು!

Rice Cost: ನಮ್ಮ ದೇಶದಲ್ಲಿ, ಅದರಲ್ಲೂ ದಕ್ಷಿಣ ಭಾರತದ ಜನರಿಗೆ ಅನ್ನವಿಲ್ಲದೆ ಊಟವೇ ಇಲ್ಲ. ನಾವು ದಿನದ ಮೂರು ಹೊತ್ತೂ ಅನ್ನವನ್ನೇ ತಿನ್ನುತ್ತೇವೆ. ಸಾಮಾನ್ಯವಾಗಿ ಒಂದು ಕೆಜಿ ಅಕ್ಕಿಗೆ 50 ರಿಂದ 100 ರೂ. ಇರಬಹುದು. ಆದರೆ ಜಗತ್ತಿನಲ್ಲೇ ಅತ್ಯಂತ ದುಬಾರಿ ಅಕ್ಕಿಯೊಂದಿದೆ.

Read Full Story

01:21 PM (IST) Jul 20

ಗರ್ಭಿಣಿಯರು ಕ್ರಾಪ್ ಟಾಪ್ ಹಾಕಂಗಿಲ್ವಾ? ಭಾರತದಲ್ಲಿ ರಷ್ಯಾ ಯುವತಿ ಎದುರಿಸಿದ ಸವಾಲುಗಳು

ಭಾರತದಲ್ಲಿ ವಾಸವಿರುವ ರಷ್ಯಾ ಮೂಲದ ಸೋಫಿಯಾ, ತಮ್ಮ ಗರ್ಭಾವಸ್ಥೆಯ ಅನುಭವಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಸಂಪೂರ್ಣ ವಿಶ್ರಾಂತಿ, ಬಟ್ಟೆಯ ಆಯ್ಕೆ, ಭಾಷೆಯ ಸಮಸ್ಯೆ ಮತ್ತು ಇಲ್ಲಿನ ಹವಾಮಾನದಂತಹ ವಿಷಯಗಳಲ್ಲಿ ತಮಗಾದ ವಿಚಿತ್ರ ಅನುಭವ ಹಾಗೂ ಸವಾಲುಗಳ ಬಗ್ಗೆ ಅವರು ವಿವರಿಸಿದ್ದಾರೆ.
Read Full Story

12:01 PM (IST) Jul 20

ದೋಸೆ ಮಾರಿ ತಿಂಗಳಿಗೆ 12 ಲಕ್ಷ ಗಳಿಸುತ್ತಿದ್ದ ಮಾಲೀಕನ ಕಣ್ಣೀರ ಕತೆ.. ಯಾಕೆ ಹೀಗೆ ಆಯ್ತು..?

ಹೋಟೆಲ್ ಉದ್ಯಮ ಅಂದ ಕೂಡಲೇ ನೆನಪಿಗೆ ಬರುವುದು ಭರ್ಜರಿ ಲಾಭ. ಆದರೆ ಯಾವುದೇ ವ್ಯವಹಾರದಲ್ಲಿ ಏರಿಳಿತಗಳು ಸಹಜ. ಇದಕ್ಕೆ ತಾಜಾ ಉದಾಹರಣೆ ಮಹಾರಾಷ್ಟ್ರದ ಥಾಣೆಯ ಈ ದೋಸೆ ರೆಸ್ಟೋರೆಂಟ್ ಮಾಲೀಕ.

Read Full Story

07:35 AM (IST) Jul 20

'ರೋಹಿತ್ ಶತಕ ಬಾರಿಸಿಯೂ ಬ್ಯಾಟ್ ಎತ್ತಲಿಲ್ಲ' ಇದು ಕೊನೆಯ ODI ಆಗಿತ್ತಾ? ಗಿಲ್ ಹೇಳಿದ್ದೇನು?

ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ ಲಾರ್ಡ್ಸ್ ಅಂಗಳದಲ್ಲಿ ಐತಿಹಾಸಿಕ ಶತಕ ಸಿಡಿಸಿದರು. ಅವರ ಈ ಅಮೋಘ ಆಟದ ಹೊರತಾಗಿಯೂ ಭಾರತ ಸೋತರೂ, ತಮ್ಮ ಮೇಲಿನ ಟೀಕೆಗಳಿಗೆ ಬ್ಯಾಟ್ ಮೂಲಕವೇ ರೋಹಿತ್ ಖಡಕ್ ಉತ್ತರ ನೀಡಿದ್ದಾರೆ.
Read Full Story

06:27 AM (IST) Jul 20

ಪ್ರಮುಖ ಬಿಲ್ ಮಂಡನೆ

ಮುಂಗಾರು ಅಧಿವೇಶನದಲ್ಲಿ ಕೇಂದ್ರ ಸರ್ಕಾರ ಹಲವು ಬಿಲ್ ಮಂಡಿಸಲು ಮುಂದಾಗಿದೆ. ರಾಷ್ಟ್ರಗೀತೆ ಜನಗಣ ಮನಗಿರುವ ಸ್ಟೇಟಸ್ ವಂದೇ ಮಾತರಂಗೆ ನೀಡುವ ಮಸೂದೆ, ಜನನ ಮರಣ ತಿದ್ದುಪಡಿ ಬಿಲ್, ಆದಾಯ ತೆರಿಗೆ ತಿದ್ದುಪಡಿ ಬಿಲ್, ಒಂದು ರಾಷ್ಟ್ರ ಒಂದು ಚುನಾವಣೆ, ಏಕರೂಪ ನಾಗರೀಕ ನೀತಿ ಸಂಹಿತೆ ಸೇರಿದಂತೆ ಹಲವು ಬಿಲ್ ಈ ಅಧಿವೇಶನದಲ್ಲಿ ಮಂಡನೆಯಾಗಲಿದೆ.


More Trending News