LIVE NOW
Published : Mar 08, 2026, 06:43 AM ISTUpdated : Mar 08, 2026, 11:54 AM IST

India Latest News Live: ಮಧ್ಯಪ್ರಾಚ್ಯ ಸಂಘರ್ಷ - ಇರಾನ್‌ ತೈಲ ಡಿಪೋಗಳ ಮೇಲೆ ಇಸ್ರೇಲ್ ಬಾಂಬ್ ದಾಳಿ - ಆಕಾಶದೆತ್ತರಕ್ಕೆ ಎದ್ದ ಬೆಂಕಿ ಜ್ವಾಲೆ

ಸಾರಾಂಶ

ಜೆರುಸಲೇಂ: ‘ಪ್ರಧಾನಿ ನರೇಂದ್ರ ಮೋದಿ ಅವರ ಇಸ್ರೇಲ್ ಭೇಟಿ ಮುಗಿದ ನಂತರವೇ ಇರಾನ್ ವಿರುದ್ಧ ದಾಳಿಯ ನಿರ್ಧಾರ ತೆಗೆದುಕೊಳ್ಳಲಾಯಿತು. ಹಾಗಾಗಿ ಅವರಿಗೆ ಈ ಬಗ್ಗೆ ಮಾಹಿತಿ ನೀಡಲಾಗಲಿಲ್ಲ’ ಎಂದು ಇಸ್ರೇಲ್‌ ವಿದೇಶಾಂಗ ಸಚಿವ ಗಿಡಿಯಾನ್ ಸಾರ್ ಶುಕ್ರವಾರ ಹೇಳಿದ್ದಾರೆ. ಮೋದಿ ಅವರಿಗೆ ದಾಳಿಯ ಬಗ್ಗೆ ಮಾಹಿತಿ ಇತ್ತು ಆರೋಪಗಳ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಸಚಿವ ಸಾರ್‌, ‘ಇಸ್ರೇಲ್ ಮೋದಿ ಮತ್ತು ಭಾರತದೊಂದಿಗೆ ಉತ್ತಮ ಸಂಬಂಧ ಹೊಂದಿದೆ. ಅದು ಇತ್ತೀಚಿನ ವರ್ಷಗಳಲ್ಲಿ ಗಾಢವಾಗಿದೆ. ಆದರೆ ಯುದ್ಧದ ನಿರ್ಧಾರವನ್ನು ಫೆ.28ರ ಮುಂಜಾನೆ ತೆಗೆದುಕೊಳ್ಳಲಾಗಿದ್ದರಿಂದ ಪ್ರಧಾನಿ ಮೋದಿಯವರಿಗೆ ಇದರ ಬಗ್ಗೆ ಮಾಹಿತಿ ನೀಡಲು ಸಾಧ್ಯವಾಗಲಿಲ್ಲ’ ಎಂದರು. ಮೋದಿಯವರ 2 ದಿನಗಳ ಇಸ್ರೇಲ್‌ ಭೇಟಿ ಫೆ.26ಕ್ಕೆ ಮುಗಿದಿತ್ತು. ಫೆ.28ರಂದು ಅಮೆರಿಕ-ಇಸ್ರೇಲ್‌ ಜಂಟಿಯಾಗಿ ಇರಾನ್‌ ಮೇಲೆ ವೈಮಾನಿಕ ದಾಳಿ ಮಾಡಿದ್ದವು

IDF Bombs Oil Depots In Tehran

11:54 AM (IST) Mar 08

ಮಧ್ಯಪ್ರಾಚ್ಯ ಸಂಘರ್ಷ - ಇರಾನ್‌ ತೈಲ ಡಿಪೋಗಳ ಮೇಲೆ ಇಸ್ರೇಲ್ ಬಾಂಬ್ ದಾಳಿ - ಆಕಾಶದೆತ್ತರಕ್ಕೆ ಎದ್ದ ಬೆಂಕಿ ಜ್ವಾಲೆ

ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ತೀವ್ರಗೊಳ್ಳುತ್ತಿದ್ದಂತೆ, ಇಸ್ರೇಲ್ ರಕ್ಷಣಾ ಪಡೆಯಾದ ಐಡಿಎಫ್ ಶನಿವಾರ ಇರಾನ್‌ನ ಟೆಹ್ರಾನ್‌ನಲ್ಲಿರುವ ಹಲವಾರು ಇರಾನಿನ ಇಂಧನ ಡಿಪೋಗಳ ಮೇಲೆ ವೈಮಾನಿಕ ದಾಳಿ ನಡೆಸಿದೆ ಎಂದು ವರದಿಯಾಗಿದೆ.

Read Full Story

11:19 AM (IST) Mar 08

ತಾಳಿ ಕಟ್ಟೋವಾಗ ಮದುವೆ ಮಂಟಪಕ್ಕೆ ಪ್ರಿಯಕರನ ಎಂಟ್ರಿ, ಕೊನೆಯ ಕ್ಷಣದಲ್ಲಿ ವಧು ಮಾಡಿದ್ದೇನು? ಇದು ಸಿನಿಮಾ ಅಲ್ಲ, ರಿಯಲ್ ಸ್ಟೋರಿ

ಸಿನಿಮಾಗಳಲ್ಲಿ ನೋಡುವಂಥಾ ದೃಶ್ಯವೊಂದು ಆಂಧ್ರಪ್ರದೇಶದಲ್ಲಿ ನಿಜವಾಗಿಯೂ ನಡೆದಿದೆ. ಹಿರಿಯರು ನಿಶ್ಚಯಿಸಿದ ಮದುವೆಗೆ ಒಪ್ಪಿಕೊಂಡಿದ್ದ ವಧು, ತಾಳಿ ಕಟ್ಟುವ ಕೊನೇ ಕ್ಷಣದಲ್ಲಿ ಪ್ರಿಯಕರನ ಜೊತೆ ಹೋಗಲು ನಿರ್ಧರಿಸಿದಳು. ಮದುವೆ ಮಂಟಪದಲ್ಲಿ ನಡೆದ ಈ ಘಟನೆ ಎಲ್ಲರನ್ನೂ ಬೆಚ್ಚಿಬೀಳಿಸಿದೆ.
Read Full Story

10:01 AM (IST) Mar 08

Shoe Offer - 1 ರೂಪಾಯಿಗೆ ಶೂ! ಮುಗಿಬಿದ್ದ ಜನ, ಪೊಲೀಸರು ಲಾಠಿಚಾರ್ಜ್, ಅಂಗಡಿ ಮಾಲೀಕರು ಅರೆಸ್ಟ್

ಕೇರಳದ ಕೋಯಿಕ್ಕೋಡ್‌ನಲ್ಲಿ ಕೇವಲ 1 ರೂಪಾಯಿಗೆ ಶೂ ನೀಡುವುದಾಗಿ ಅಂಗಡಿಯೊಂದು ಆಫರ್ ಕೊಟ್ಟಿತ್ತು. ಈ ಸುದ್ದಿ ಕೇಳಿ ನಸುಕಿನಲ್ಲೇ ಸಾವಿರಾರು ಜನ ಅಂಗಡಿ ಮುಂದೆ ಜಮಾಯಿಸಿದ್ದರಿಂದ ಗಲಾಟೆ ಶುರುವಾಗಿದೆ. ಜನರನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ.
Read Full Story

09:18 AM (IST) Mar 08

ಬೇಸಿಗೆಯಲ್ಲಿ ಚಿಲ್ ಆಗೋಕೆ ಬಿಯರ್ ಖರೀದಿಸಿದ್ರೆ ಸಿಕ್ತು ಜೀವಂತ ಮೀನು; ಗ್ರಾಹಕ ಶಾಕ್

ವ್ಯಕ್ತಿಯೊಬ್ಬರು ಖರೀದಿಸಿದ ಕಿಂಗ್‌ಫಿಶರ್ ಬಿಯರ್ ಬಾಟಲಿಯೊಳಗೆ ಜೀವಂತ ಮೀನಿನ ಮರಿ ಪತ್ತೆಯಾಗಿದೆ. ಸೀಲ್ ತೆಗೆಯದ ಬಾಟಲಿಯೊಳಗೆ ಮೀನು ಕಂಡು ಗ್ರಾಹಕ ದಂಗಾಗಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾಲ್ಲಿ ವೈರಲ್ ಆಗುತ್ತಿದೆ.

Read Full Story

08:59 AM (IST) Mar 08

ವರ್ಷದ 8 ದಿನ ಬಿಟ್ಟು ಉಳಿದೆಲ್ಲಾ ದಿನ ಸಾಲ ಮಾಡಿದ ಆಂಧ್ರ ಸರ್ಕಾರ - 2024-25ನೇ ಸಿಎಜಿ ವರದಿಯಲ್ಲಿ ಬಹಿರಂಗ

2024-25ರ ಹಣಕಾಸು ವರ್ಷದಲ್ಲಿ ಆಂಧ್ರಪ್ರದೇಶ ಸರ್ಕಾರವು ಬಹುತೇಕ ಪೂರ್ತಿ ವರ್ಷವನ್ನು 1.72 ಲಕ್ಷ ಕೋಟಿ ರೂ. ಸಾಲ ಮತ್ತು ಮುಂಗಡಗಳ ಮೇಲೆ ನಡೆಸಿದೆ ಎಂದು ಸಿಎಜಿ ವರದಿ ಬಹಿರಂಗಪಡಿಸಿದೆ. ವಿತ್ತೀಯ ಕೊರತೆಯು ಮಿತಿ ಮೀರಿದ್ದರಿಂದ ರಾಜ್ಯವು ದೈನಂದಿನ ಕಾರ್ಯನಿರ್ವಹಣೆಗೂ ಸಾಲ ಪಡೆಯುವಂತಾಗಿದೆ.

Read Full Story

08:41 AM (IST) Mar 08

ಯುದ್ಧಗ್ರಸ್ತ ಇಸ್ರೇಲ್‌ನಲ್ಲಿ ಸ್ನಾನಕ್ಕೆ ಸೂಕ್ತ ಸಮಯ ಸೂಚಿಸುವ ಆ್ಯಪ್‌ ಸಿದ್ಧ; ಇರಾನ್‌ನ ಮಾಸ್ಟರ್‌ಪ್ಲಾನ್

ಇರಾನ್ ದಾಳಿಯ ಭೀತಿಯಿಂದಾಗಿ, ಸ್ನಾನ ಮಾಡಲು ಸುರಕ್ಷಿತ ಸಮಯವನ್ನು ತಿಳಿಸಲು ಇಸ್ರೇಲ್ ಹೊಸ ಆ್ಯಪ್ ಅಭಿವೃದ್ಧಿಪಡಿಸಿದೆ. ಇದೇ ವೇಳೆ, ಇರಾನ್ ನಕಲಿ ಹೆಲಿಕಾಪ್ಟರ್‌ಗಳನ್ನು ಬಳಸಿ ಇಸ್ರೇಲ್‌ನ ದುಬಾರಿ ಕ್ಷಿಪಣಿಗಳನ್ನು ವ್ಯರ್ಥವಾಗುವಂತೆ ಮಾಡುವ ಮೂಲಕ ತಿರುಗೇಟು ನೀಡುತ್ತಿದೆ.
Read Full Story

08:24 AM (IST) Mar 08

ಯುದ್ಧಕ್ಕೆ ಧುಮುಕಲು ರೆಡಿ ಎಂದ ಪಾಕಿಸ್ತಾನ - ಇರಾನ್ ಸಂಘರ್ಷದ ನಡುವೆ ಆಪ್ತ ದೇಶ ಸೌದಿಗೆ ಪಾಕ್ ನೆರವಿನ ಅಭಯ

ಇರಾನ್‌ನಿಂದ ಸೌದಿ ಅರೇಬಿಯಾ ಮೇಲೆ ನಿರಂತರ ದಾಳಿ ನಡೆಯುತ್ತಿರುವ ಹಿನ್ನೆಲೆಯಲ್ಲಿ, ಪಾಕಿಸ್ತಾನವು ಸೌದಿಗೆ ಸಂಪೂರ್ಣ ಸೇನಾ ಮತ್ತು ವ್ಯೂಹಾತ್ಮಕ ನೆರವು ನೀಡುವುದಾಗಿ ಭರವಸೆ ನೀಡಿದೆ. ಆದರೆ ಈ ಭರವಸೆಯು ಇರಾನ್‌ನೊಂದಿಗೆ ಗಡಿ ಹಂಚಿಕೊಂಡಿರುವ ಪಾಕಿಸ್ತಾನವನ್ನು ಅಡಕತ್ತರಿಯಲ್ಲಿ ಸಿಲುಕಿಸಿದೆ.

Read Full Story

07:28 AM (IST) Mar 08

Tamilnadu Election - ಸ್ತ್ರೀಯರಿಗೆ ₹2500, ಮದ್ವೆಗೆ ಚಿನ್ನ, ಫ್ರೀ ಎಲ್‌ಪಿಜಿ - ವಿಜಯ್‌ ಘೋಷಣೆ

ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಅಧ್ಯಕ್ಷ ನಟ ವಿಜಯ್, ಮಹಿಳೆಯರಿಗೆ ಮಾಸಿಕ ಸಹಾಯಧನ ಮತ್ತು ಉಚಿತ ಎಲ್‌ಪಿಜಿ ಸಿಲಿಂಡರ್‌ಗಳಂತಹ ಭರವಸೆಗಳನ್ನು ಘೋಷಿಸಿದ್ದಾರೆ. ಇದೇ ಸಮಯದಲ್ಲಿ, ಪತ್ನಿ ಸಂಗೀತಾ ಅವರು ವಿವಾಹೇತರ ಸಂಬಂಧದ ಆರೋಪದ ಮೇಲೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.

Read Full Story

More Trending News