Published : Nov 30, 2025, 07:02 AM ISTUpdated : Nov 30, 2025, 11:54 PM IST

India Latest News Live: ಲಾರೆನ್ಸ್ ಬಿಷ್ಣೋಯ್ ಕುಟುಂಬ ಮುಗಿಸುವುದಾಗಿ ಬೆದರಿಕೆ ಹಾಕಿದ ಶೆಹಜಾದ್ ಭಟ್ಟಿ ಯಾರು?

ಸಾರಾಂಶ

ಲೂಧಿಯಾನ: ಕಮಿಡಿಯನ್ ಕಪಿಲ್ ಶರ್ಮಾ ಅವರ ಕೆನಡಾದಲ್ಲಿರುವ ಕ್ಯಾಪ್ಸ್ ಕೆಫೆ ಮೇಲೆ 3 ಬಾರಿ ಗುಂಡಿನ ದಾಳಿ ನಡೆಸಿದ್ದ ಭೂಗತ ಪಾತಕಿಗಳು, ಒಂದು ವೇಳೆ ಕಪಿಲ್ ಹಣ ಕೊಡದೇ ಹೋದಲ್ಲಿ ಅವರ ಹತ್ಯೆಗೂ ಸಂಚು ರೂಪಿಸಿದ್ದರು ಎಂಬ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ಗುಂಡಿನ ದಾಳಿ ಪ್ರಕರಣ ಸಂಬಂಧ ಬಂಧಿತ ಬಂದು ಮಾನ್ ಸಿಂಗ್ ವಿಚಾರಣೆ ವೇಳೆ ಇಂಥದ್ದೊಂದು ವಿಷಯ ಬಾಯಿಬಿಟ್ಟಿದ್ದಾನೆ. ಈತ ಭೂಗತ ಪಾತಕಿ ಗೋಲ್ಡಿ ಧಿಲ್ಲೋನ್ ಗ್ಯಾಂಗ್‌ನ ಆಪ್ತ. ಜುಲೈನಲ್ಲಿ ಕೆಫೆ ಆರಂಭವಾದ ಬಳಿಕ 3 ಬಾರಿ ದಾಳಿ ನಡೆದಿದೆ.

Who is Shahzad Bhatti the Gangster Threatening Lawrence Bishnoi Family

11:54 PM (IST) Nov 30

ಲಾರೆನ್ಸ್ ಬಿಷ್ಣೋಯ್ ಕುಟುಂಬ ಮುಗಿಸುವುದಾಗಿ ಬೆದರಿಕೆ ಹಾಕಿದ ಶೆಹಜಾದ್ ಭಟ್ಟಿ ಯಾರು?

ಪಾಕಿಸ್ತಾನದ ಕುಖ್ಯಾತ ದರೋಡೆಕೋರ ಶೆಹಜಾದ್ ಭಟ್ಟಿ ಗ್ಯಾಂಗ್‌ನ ಮೂವರು ಉಗ್ರರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಭಟ್ಟಿ ಸಿರ್ಸಾ ಮತ್ತು ಗುರುದಾಸ್‌ಪುರ ಗ್ರೆನೇಡ್ ದಾಳಿಯಲ್ಲಿ ಭಾಗಿಯಾಗಿದ್ದಾನೆ. ಲಾರೆನ್ಸ್ ಬಿಷ್ಣೋಯ್ ಸಹೋದರ ಅನ್ಮೋಲ್ ಮತ್ತು ಆತನ ಕುಟುಂಬಕ್ಕೆ ಭಟ್ಟಿ ಜೀವ ಬೆದರಿಕೆ ಹಾಕಿದ್ದಾನೆ.

Read Full Story

11:49 PM (IST) Nov 30

ಬೈಕ್ ಓಡಿಸ್ತಿದ್ದಾಗ ಚೈನೀಸ್ ಮಾಂಜಾ ಕತ್ತಿಗೆ ಸಿಲುಕಿ ವಿದ್ಯಾರ್ಥಿ ಸಾವು

Dangerous Chinese kite string: ಬೈಕ್‌ನಲ್ಲಿ ಸಂಚರಿಸುತ್ತಿದ್ದ ವೇಳೆ ಎಲ್ಲಿಂದಲೋ ಬಂದ ಚೈನೀಸ್ ಮಾಂಜಾ(ಗಾಳಿಪಟದ ದಾರ) ಕತ್ತಿಗೆ ಸಿಲುಕಿ 16ರ ಹರೆಯದ ವಿದ್ಯಾರ್ಥಿಯೋರ್ವ ಸಾವನ್ನಪ್ಪಿದ ಆಘಾತಕಾರಿ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ.

Read Full Story

09:32 PM (IST) Nov 30

ತಮಿಳುನಾಡು - ದಿತ್ವಾಆರ್ಭಟಕ್ಕೆ 3 ಬಲಿ - 149 ಪ್ರಾಣಿಗಳು ಸಾವು 234 ಮನೆ ನಾಶ, 57000 ಹೆಕ್ಟೇರ್ ಕೃಷಿಭೂಮಿ ಜಲಾವೃತ

Cyclone Ditwah:ಶ್ರೀಲಂಕಾದಲ್ಲಿ ವಿನಾಶ ಸೃಷ್ಟಿಸಿದ ದಿತ್ವಾ ಚಂಡಮಾರುತವು ತಮಿಳುನಾಡಿಗೆ ಅಪ್ಪಳಿಸಿದ್ದು, ಮೂವರ ಸಾವಿಗೆ ಕಾರಣವಾಗಿದೆ ಮತ್ತು ಅಪಾರ ಹಾನಿಯನ್ನುಂಟುಮಾಡಿದೆ. ಹವಾಮಾನ ಇಲಾಖೆಯು ತಮಿಳುನಾಡಿನಲ್ಲಿ ರೆಡ್ ಅಲರ್ಟ್ ಘೋಷಿಸಿದ್ದು, ಆಂಧ್ರಪ್ರದೇಶಕ್ಕೂ ಭಾರೀ ಮಳೆಯ ಎಚ್ಚರಿಕೆ ನೀಡಿದೆ. 

Read Full Story

08:13 PM (IST) Nov 30

ತಮಿಳುನಾಡಿನ ಕಾರೈಕುಡಿ ಬಳಿ 2 ಬಸ್‌ಗಳ ಮಧ್ಯೆ ಭೀಕರ ಅಪಘಾತ - 12 ಮಂದಿ ಸಾವು

ತಮಿಳುನಾಡಿನ ಶಿವಗಂಗಾ ಜಿಲ್ಲೆಯ ಕಾರೈಕುಡಿಯಲ್ಲಿ ಎರಡು ಸರ್ಕಾರಿ ಬಸ್‌ಗಳ ನಡುವೆ ಭೀಕರ ಅಪಘಾತ ಸಂಭವಿಸಿದೆ. ಈ ದುರಂತದಲ್ಲಿ 12 ಜನರು ಸಾವನ್ನಪ್ಪಿದ್ದು, 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಅಪಘಾತದ ತೀವ್ರತೆಗೆ ಒಂದು ಬಸ್ ಸಂಪೂರ್ಣ ನಜ್ಜುಗುಜ್ಜಾಗಿದೆ.
Read Full Story

07:55 PM (IST) Nov 30

ಬೇರೆ ಜಾತಿ ಎಂದು ಪ್ರೇಮಿಯ ಹೊಡೆದು ಕೊಂದ ಮನೆಯವರು - ಆತನ ಶವವನ್ನೇ ವರಿಸಿದ ಯುವತಿ

Nanded honor killing: ಮಹಾರಾಷ್ಟ್ರದ ನಾಂದೇಡ್‌ನಲ್ಲಿ, ಬೇರೆ ಜಾತಿಯ ಯುವಕನನ್ನು ಪ್ರೀತಿಸಿದ್ದಕ್ಕೆ ಯುವತಿಯ ಕುಟುಂಬದವರೇ ಆತನನ್ನು ಹತ್ಯೆ ಮಾಡಿದ್ದಾರೆ. ಈ ಘಟನೆಯಿಂದ ಆಘಾತಕ್ಕೊಳಗಾದ ಯುವತಿ, ತನ್ನ ಪ್ರಿಯಕರನ ಶವವನ್ನೇ ಮದುವೆಯಾಗಿದ್ದಾಳೆ.

Read Full Story

06:33 PM (IST) Nov 30

ಸಂಸತ್ ಅಧಿವೇಶನಕ್ಕೆ ಮುನ್ನವೇ ಸೋನಿಯಾ-ರಾಹುಲ್ ವಿರುದ್ಧ ಹೊಸ FIR; ಕಾಂಗ್ರೆಸ್ ಕಿಡಿ!

ಸಂಸತ್ತಿನ ಚಳಿಗಾಲದ ಅಧಿವೇಶನಕ್ಕೂ ಮುನ್ನ, ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿರುದ್ಧ ಹೊಸ ಎಫ್‌ಐಆರ್ ದಾಖಲು. ಇದನ್ನು ರಾಜಕೀಯ ಪ್ರೇರಿತ ಎಂದು ಕಾಂಗ್ರೆಸ್ ಖಂಡಿಸಿದ್ದು, ಈ ಬೆಳವಣಿಗೆಯು ಸಂಸತ್ತಿನಲ್ಲಿ ವಿಪಕ್ಷಗಳ ಒಗ್ಗಟ್ಟಿನ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.

Read Full Story

06:32 PM (IST) Nov 30

ಶಿಕ್ಷಣಕ್ಕೂ, ಯಶಸ್ಸಿಗೂ ಸಂಬಂಧವೇ ಇಲ್ಲ ಎನ್ನೋ 500 ಕೋಟಿ ಒಡತಿ ದೀಪಿಕಾ ಪಡುಕೋಣೆ ಕಲಿತದ್ದು ಎಷ್ಟು ಗೊತ್ತಾ?

ಪಾಲಕರು ಮತ್ತು ಶಿಕ್ಷಣ ಸಂಸ್ಥೆಗಳ ಅಂಕಗಳ ಮೇಲಿನ ಒತ್ತಡದಿಂದ ಯುವಕರು ಖಿನ್ನತೆಗೆ ಜಾರುತ್ತಿದ್ದಾರೆ. ಆದರೆ, ಕಡಿಮೆ ಓದಿರುವ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ  ಮ್ಮ ಪರಿಶ್ರಮದಿಂದ ಯಶಸ್ಸಿನ ಶಿಖರವೇರಿದ್ದಾರೆ. ಇದು ಯಶಸ್ಸಿಗೆ ಅಂಕಗಳೇ ಅಂತಿಮವಲ್ಲ, ಬದಲಾಗಿ ಗುರಿ ಮತ್ತು ಛಲ ಮುಖ್ಯ ಎಂಬುದನ್ನು ಸಾರುತ್ತದೆ.

Read Full Story

06:24 PM (IST) Nov 30

ಸ್ವಂತ ಕ್ಯೂ ಆರ್ ಕೋಡ್ ಇಟ್ಕೊಂಡು ವಸೂಲಿಗಿಳಿದ ಟ್ರಾಫಿಕ್ ಪೊಲೀಸ್ - ಸಿಕ್ಕಿಬಿದ್ದಿದ್ದು ಹೇಗೆ?

ಜೈಪುರದಲ್ಲಿ, ಟ್ರಾಫಿಕ್ ಚಲನ್ ನೀಡದೆ ವಾಹನ ಸವಾರರಿಂದ ಲಂಚ ವಸೂಲಿ ಮಾಡಲು ಸ್ವಂತ ಕ್ಯೂಆರ್ ಕೋಡ್ ಬಳಸುತ್ತಿದ್ದ ಟ್ರಾಫಿಕ್ ಕಾನ್ಸ್‌ಟೇಬಲ್‌ನನ್ನು ಬಂಧಿಸಲಾಗಿದೆ. ಈತನ ಜೊತೆ ಇನ್ನಿಬ್ಬರನ್ನು ಬಂಧಿಸಿದ್ದು ಇವರು ಸಿಕ್ಕಿಬಿದ್ದಿದ್ದು ಹೇಗೆ ಎಂಬ ಡಿಟೇಲ್ ಸ್ಟೋರಿ ಇಲ್ಲಿದೆ…

Read Full Story

05:52 PM (IST) Nov 30

ಇದೇ ನೋಡಿ ಟೀಂ ಇಂಡಿಯಾದ ಅತಿದೊಡ್ಡ ವೀಕ್ನೆಸ್ ಎಂದ ಹರ್ಭಜನ್ ಸಿಂಗ್!

ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತ ವೈಟ್‌ವಾಶ್ ಆಗಿದೆ. ತಂಡದಲ್ಲಿ ಸ್ಪೆಷಲಿಸ್ಟ್ ಆಫ್-ಸ್ಪಿನ್ನರ್ ಇಲ್ಲದಿರುವ ಬಗ್ಗೆ ಹರ್ಭಜನ್ ಸಿಂಗ್ ಕಳವಳ ವ್ಯಕ್ತಪಡಿಸಿದ್ದಾರೆ. ವಾಷಿಂಗ್ಟನ್ ಸುಂದರ್ ಅವರನ್ನು ಹೆಚ್ಚು ಬಳಸಿಕೊಳ್ಳಬೇಕು ಎಂದಿದ್ದಾರೆ.  

Read Full Story

05:33 PM (IST) Nov 30

ರಾಂಚಿಯಲ್ಲಿ ವಿರಾಟ್ ಕೊಹ್ಲಿ ಶತಕದ ಆರ್ಭಟ; ಹರಿಣಗಳಿಗೆ ಕಠಿಣ ಗುರಿ ನೀಡಿದ ಭಾರತ!

ರಾಂಚಿಯಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ, ವಿರಾಟ್ ಕೊಹ್ಲಿಯವರ ಭರ್ಜರಿ ಶತಕ (135) ಹಾಗೂ ರೋಹಿತ್ ಶರ್ಮಾ (57) ಮತ್ತು ನಾಯಕ ಕೆಎಲ್ ರಾಹುಲ್ (60) ಅವರ ಅರ್ಧಶತಕಗಳ ನೆರವಿನಿಂದ ಭಾರತ ತಂಡ 8 ವಿಕೆಟ್‌ಗೆ 349 ರನ್ ಗಳಿಸಿತು. ಈ ಮೂಲಕ ದಕ್ಷಿಣ ಆಫ್ರಿಕಾ ತಂಡಕ್ಕೆ 350 ರನ್‌ಗಳ ಕಠಿಣ ಗುರಿ ನೀಡಿದೆ.

Read Full Story

05:17 PM (IST) Nov 30

ಈಗ ಭಾರತ ಮಾತ್ರವಲ್ಲ ಲಂಡನ್ ಬೀದಿಯಲ್ಲೂ ಪಾನ್ ಮಸಾಲಾದ ಮದರಂಗಿ - ಇಲ್ಲಿ ಉಗುಳ್ತಿರೋರು ಭಾರತೀಯರಾ?

ಭಾರತದಲ್ಲಿ ಸಾಮಾನ್ಯವಾದ ಪಾನ್ ಉಗುಳುವಿಕೆಯು ಈಗ ಲಂಡನ್‌ನ ಸಾರ್ವಜನಿಕ ಸ್ಥಳಗಳನ್ನೂ ಗಬ್ಬೆಬ್ಬಿಸುತ್ತಿದೆ. ದಕ್ಷಿಣ ಏಷ್ಯಾದ ಸಮುದಾಯಗಳಿಂದ ಬಂದ ಈ ಅಭ್ಯಾಸವು ನಗರದ ಬೀದಿಗಳಲ್ಲಿ ತೆಗೆಯಲು ಕಷ್ಟವಾದ ಕೆಂಪು ಕಲೆಗಳನ್ನು ಸೃಷ್ಟಿಸುತ್ತಿದ್ದು, ಸ್ಥಳೀಯ ಸ್ವಚ್ಛತಾ ಮಂಡಳಿಗಳಿಗೆ ಇದು ದೊಡ್ಡ ಸವಾಲಾಗಿದೆ.
Read Full Story

05:08 PM (IST) Nov 30

ಶಾಲೆಯಲ್ಲಿ ದಡ್ಡನಾಗಿದ್ದ ಬಾಲಕ, AI ಜ್ಞಾನದಿಂದ ಆದ ತ್ರಿಭಾಷಾ ಪಂಡಿತ; ಇದೀಗ ಕೃತಕ ಮಾಡೆಲ್ ತಯಾರಿಸುವ ಸಾಧಕ!

ಶಾಲಾ ಶಿಕ್ಷಣದಲ್ಲಿ ದಡ್ಡನಾಗಿದ್ದ 15 ವರ್ಷದ ಅಜ್ಸಲ್, ಕೃತಕ ಬುದ್ಧಿಮತ್ತೆ (AI) ಬಳಸಿ ಜ್ಞಾನ ಪಡೆದು ತ್ಯಾಜ್ಯ ವಸ್ತುಗಳಿಂದ ಅದ್ಭುತ ವರ್ಕಿಂಗ್ ಮಾಡೆಲ್‌ಗಳನ್ನು ನಿರ್ಮಿಸುತ್ತಿದ್ದಾನೆ. ಯೂಟ್ಯೂಬ್ ಮತ್ತು AI ಸಹಾಯದಿಂದ ಸ್ವಯಂ-ಕಲಿತು, ಭವಿಷ್ಯದಲ್ಲಿ ವಿಜ್ಞಾನಿಯಾಗುವ ಕನಸು ಕಾಣುತ್ತಿದ್ದಾನೆ.

Read Full Story

04:53 PM (IST) Nov 30

ಶಾಹಿದ್ ಅಫ್ರಿದಿ ಸಿಕ್ಸರ್ ರೆಕಾರ್ಡ್ ನುಚ್ಚುನೂರು ಮಾಡಿದ ರೋಹಿತ್ ಶರ್ಮಾ! ಈಗ ಹಿಟ್‌ಮ್ಯಾನ್ ನಂ.1

ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಸಿಕ್ಸರ್‌ಗಳ ಸುರಿಮಳೆಗೈದ ರೋಹಿತ್ ಶರ್ಮಾ, ಪಾಕಿಸ್ತಾನದ ಶಾಹಿದ್ ಅಫ್ರಿದಿ ದಾಖಲೆಯನ್ನು ಮುರಿದಿದ್ದಾರೆ.

Read Full Story

04:25 PM (IST) Nov 30

ಧೋನಿ ತವರಲ್ಲಿ ಕಿಂಗ್ ಕೊಹ್ಲಿ ಅಬ್ಬರದ ಶತಕ; ಬೃಹತ್ ಮೊತ್ತದತ್ತ ಭಾರತ!

ರಾಂಚಿಯಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ತಮ್ಮ 52ನೇ ಶತಕ ಸಿಡಿಸಿ ಮಿಂಚಿದ್ದಾರೆ. ರೋಹಿತ್ ಶರ್ಮಾ ಅವರ ಅರ್ಧಶತಕ ಹಾಗೂ ಕೊಹ್ಲಿ ಜೊತೆಗಿನ ಶತಕದ ಜೊತೆಯಾಟದ ನೆರವಿನಿಂದ ಟೀಂ ಇಂಡಿಯಾ ಬೃಹತ್ ಮೊತ್ತದತ್ತ ಸಾಗುತ್ತಿದೆ.
Read Full Story

04:08 PM (IST) Nov 30

52 ಬಾರಿ ಸಾರಿ ಕೇಳಿ 3ನೇ ಮಹಡಿಯಿಂದ ಜಿಗಿದ 8ನೇ ಕ್ಲಾಸ್ ವಿದ್ಯಾರ್ಥಿ, ರಾಷ್ಟ್ರಮಟ್ಟದ ಸ್ಕೇಟಿಂಗ್ ಆಟಗಾರ

ಮಧ್ಯಪ್ರದೇಶದಲ್ಲಿ, ರಾಷ್ಟ್ರೀಯ ಮಟ್ಟದ ಸ್ಕೇಟಿಂಗ್ ಆಟಗಾರನಾದ 8ನೇ ತರಗತಿ ವಿದ್ಯಾರ್ಥಿಯೊಬ್ಬ ಶಾಲಾ ಕಟ್ಟಡದಿಂದ ಜಿಗಿದು ಆತ್ಮ*ಹತ್ಯೆಗೆ ಯತ್ನಿಸಿದ ಘಟನೆ ನಡೆದಿದ್ದು, ಕೃತ್ಯವೆಸಗುವ ಮೊದಲು ಆತ 52 ಬಾರಿ ಕ್ಷಮೆ ಕೇಳಿದ್ದಾನೆ ಎಂದು ವರದಿಯಾಗಿದೆ.

Read Full Story

03:25 PM (IST) Nov 30

IPL 2026 ಮಿನಿ ಹರಾಜಿಗೂ ಮುನ್ನ ಅಚ್ಚರಿ ನಿರ್ಧಾರ ಕೈಗೊಂಡ ಆಂಡ್ರೆ ರಸೆಲ್! ಐಪಿಎಲ್‌ಗೆ ದಿಢೀರ್ ಗುಡ್‌ ಬೈ

ಬೆಂಗಳೂರು: 19ನೇ ಆವೃತ್ತಿಯ ಐಪಿಎಲ್ ಟೂರ್ನಿಗೂ ಮುನ್ನ ಅಚ್ಚರಿಯ ತೀರ್ಮಾನಗಳು ಹೊರಬರುತ್ತಿವೆ. ಫಾಫ್ ಡು ಪ್ಲೆಸಿಸ್‌ ಐಪಿಎಲ್‌ನಿಂದ ಹಿಂದೆ ಸರಿದ ಬೆನ್ನಲ್ಲೇ ಇದೀಗ ಸ್ಟಾರ್ ಆಲ್ರೌಂಡರ್ ಆಂಡ್ರೆ ರಸೆಲ್ ಅಚ್ಚರಿಯ ರೀತಿಯಲ್ಲಿ ಐಪಿಎಲ್‌ಗೆ ಗುಡ್‌ ಬೈ ಹೇಳಿದ್ದಾರೆ.

 

Read Full Story

01:17 PM (IST) Nov 30

ಯುವ ಜೋಡಿಯ 'ಆ 19 ನಿಮಿಷ'ದ MMS ಲೀಕ್​ ಆಯ್ತು! ಹಲ್​ಚಲ್​ ಸೃಷ್ಟಿಸಿರೋ ವಿಡಿಯೋದ ಅಸಲಿಯತ್ತೇನು?

ಸೋಷಿಯಲ್ ಮೀಡಿಯಾದಲ್ಲಿ 19 ನಿಮಿಷದ ವಿಡಿಯೋವೊಂದು ವೈರಲ್ ಆಗಿದ್ದು, ಅದರಲ್ಲಿರುವ ಯುವತಿ ತಾನೇ ಎಂದು ತಪ್ಪಾಗಿ ಭಾವಿಸಿದ್ದರಿಂದ 'ಸ್ವೀಟ್ ಜನ್ನತ್' ಎಂಬ ಡಿಜಿಟಲ್ ಕ್ರಿಯೇಟರ್​ನ ಫಾಲೋವರ್ಸ್​ ಸಂಖ್ಯೆ ದಿಢೀರ್ ಹೆಚ್ಚಾಗಿದೆ. ಲೈವ್​ಗೆ ಬಂದು ಸ್ಪಷ್ಟನೆ ನೀಡಿರುವ ಆಕೆ, ಅದು ತಾನಲ್ಲ ಎಂದಿದ್ದಾಳೆ.

Read Full Story

01:16 PM (IST) Nov 30

ಭಾರತ ಎದುರು ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಬೌಲಿಂಗ್ ಆಯ್ಕೆ; ಟೀಂ ಇಂಡಿಯಾದಲ್ಲಿ ಮೇಜರ್ ಚೇಂಜ್

ರಾಂಚಿಯಲ್ಲಿ ನಡೆಯುತ್ತಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ತಂಡಕ್ಕೆ ಮರಳಿದ್ದು, ಋತುರಾಜ್ ಗಾಯಕ್ವಾಡ್ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಸಿಕ್ಕಿದೆ.

Read Full Story

12:28 PM (IST) Nov 30

ಭಾರತ vs ದಕ್ಷಿಣ ಆಫ್ರಿಕಾ ಏಕದಿನ ಸರಣಿ ಇಂದಿನಿಂದ; ಕೊಹ್ಲಿ-ರೋಹಿತ್ ಮೇಲೆ ಎಲ್ಲರ ಕಣ್ಣು!

ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿ ಸೋಲಿನ ಬಳಿಕ, ಕೆ.ಎಲ್. ರಾಹುಲ್ ನಾಯಕತ್ವದ ಭಾರತ ತಂಡ ಏಕದಿನ ಸರಣಿಯಲ್ಲಿ ಸೇಡು ತೀರಿಸಿಕೊಳ್ಳಲು ಸಜ್ಜಾಗಿದೆ. ಈ ಸರಣಿಯಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಪ್ರದರ್ಶನ ನಿರ್ಣಾಯಕವಾಗಿದ್ದು, ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ.
Read Full Story

10:57 AM (IST) Nov 30

11 ಸಿಕ್ಸರ್, 7 ಬೌಂಡರಿ ಕೇವಲ 32 ಎಸೆತಗಳಲ್ಲೇ ಶತಕ ಚಚ್ಚಿದ ಅಭಿಷೇಕ್ ಶರ್ಮಾ!

ಹೈದರಾಬಾದ್‌ನಲ್ಲಿ ನಡೆಯುತ್ತಿರುವ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಮತ್ತೊಂದು ಅದ್ಭುತ ನಡೆದಿದೆ. ಕೇವಲ 32 ಎಸೆತಗಳಲ್ಲಿ ಶತಕ ಸಿಡಿಸಿ ಯುವ ಆಟಗಾರ ಅಭಿಷೇಕ್ ಶರ್ಮಾ ಕ್ರಿಕೆಟ್ ಜಗತ್ತಿನ ಗಮನ ಸೆಳೆದಿದ್ದಾರೆ.

 

Read Full Story

10:35 AM (IST) Nov 30

ಕೆಎಸ್‌ಸಿಎ ಚುನಾವಣೆ - ಶಾಂತಕುಮಾರ್ ಸ್ಪರ್ಧೆಗೆ ಕೋರ್ಟ್ ಅನುಮತಿ!

₹200 ಹಿಂಬಾಕಿ ಕಾರಣಕ್ಕೆ ನಾಮಪತ್ರ ತಿರಸ್ಕೃತಗೊಂಡಿದ್ದ ಪತ್ರಕರ್ತ ಕೆ.ಎನ್‌.ಶಾಂತಕುಮಾರ್‌ ಅವರಿಗೆ ಕೆಎಸ್‌ಸಿಎ ಅಧ್ಯಕ್ಷ ಸ್ಥಾನದ ಚುನಾವಣೆಗೆ ಸ್ಪರ್ಧಿಸಲು ಹೈಕೋರ್ಟ್‌ ಅನುಮತಿ ನೀಡಿದೆ. ಇದರಿಂದಾಗಿ ಅವಿರೋಧ ಆಯ್ಕೆಯ ಕನಸು ಭಗ್ನಗೊಂಡಿದೆ.

Read Full Story

09:28 AM (IST) Nov 30

BBK 12 - ವ್ಯಂಗ್ಯ ಮಾಡಿದ ರಜತ್‌, ಚೈತ್ರಾ ಕುಂದಾಪುರಗೆ ಸುದೀಪ್‌ ಮುಂದೆ ಬಿಸಿ ಬಿಸಿ ಬಹುಮಾನ ಕೊಟ್ಟ ಗಿಲ್ಲಿ ನಟ

Bigg Boss Kannada 12 Updates: ಬಿಗ್‌ ಬಾಸ್‌ ಕನ್ನಡ 12 ಶೋನಲ್ಲಿ ಸೀಸನ್‌ 11 ಸ್ಪರ್ಧಿಗಳು ಬಂದಿದ್ದೇ ಬಂದಿದ್ದು, ಆಟದ ವೈಖರಿ ಬದಲಾಗಿದೆ. ಗಿಲ್ಲಿ ನಟ ಅವರೇ ಇನ್ನಷ್ಟು ಹೈಲೈಟ್‌ ಆಗಿದೆ. ಸಂಡೇ ವಿಥ್‌ ಸುದೀಪ ಶೋನಲ್ಲಿ ಗಿಲ್ಲಿ v/s ರಜತ್‌ ಎನ್ನುವ ಹಾಗೆ ಆಗಿದೆ. ಹಾಗಾದರೆ ಈ ವಾರ ಏನಾಯ್ತು?

 

Read Full Story

09:03 AM (IST) Nov 30

Actor Umesh Death - ಇತ್ತೀಚೆಗೆ ಆಸ್ಪತ್ರೆ ಬೆಡ್‌ ಮೇಲಿದ್ದಾಗಲೂ ಕಾಮಿಡಿ ಮಾಡಿದ್ದ ಹಿರಿಯ ನಟ ಉಮೇಶ್‌ ವಿಧಿವಶ

Kannada Actor Umesh: ಇತ್ತೀಚೆಗೆ ಆಸ್ಪತ್ರೆ ಬೆಡ್‌ ಮೇಲಿದ್ದಾಗಲೂ ಕಾಮಿಡಿ ಮಾಡಿದ್ದ ಹಿರಿಯ ನಟ ಉಮೇಶ್‌ ಅವರು ವಿಧಿವಶರಾಗಿದ್ದಾರೆ. 350ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ಅವರು ಕಾಲನ ಕರೆಗೆ ಓಗುಟ್ಟಿದ್ದಾರೆ. ಚಿತ್ರರಂಗದ ಗಣ್ಯರು ಉಮೇಶ್‌ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

 

Read Full Story

08:04 AM (IST) Nov 30

ವೈವಾಹಿಕ ಜೀವನಕ್ಕೆ ಕಾಲಿಡಲಿರೋ 'ಶ್ರೀರಸ್ತು ಶುಭಮಸ್ತು ಧಾರಾವಾಹಿ' ನಟ ಶ್ರೀರಾಮ್; ಹುಡುಗಿ ಯಾರು?

Shrirasthu Shubhamasthu Kannada Serial:  ‘ಶ್ರೀರಸ್ತು ಶುಭಮಸ್ತು’, ‘ಇಷ್ಟದೇವತೆ’ ಮುಂತಾದ ಧಾರಾವಾಹಿ ಖ್ಯಾತಿಯ ನಟ ಶ್ರೀರಾಮ್‌ ಅವರು ಇಂದು ಮದುವೆ ಆಗಲಿದ್ದಾರೆ. ಈಗಾಗಲೇ ಅವರು ಕನ್ನಡ ಚಿತ್ರರಂಗದ ಗಣ್ಯರಿಗೆ ಆಹ್ವಾನ ನೀಡಿದ್ದಾರೆ.

Read Full Story

More Trending News