ನವದೆಹಲಿ: ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನತೆಯ ಪರಿಣಾಮವು ಅಮೂಲ್ಯ ಲೋಹಗಳ ಮೇಲೆ ಜಾಗತಿಕವಾಗಿ ಬಿದ್ದಿದೆ. ಬೆಂಗಳೂರಿನಲ್ಲಿ 1 ಕೆ.ಜಿ. ಬೆಳ್ಳಿ ಬೆಲೆಯಲ್ಲಿ ಒಮ್ಮೆಲೆ 20,000 ರು. ಏರಿಕೆಯಾಗಿ 3,15,000 ರು. ಆಗಿದೆ. 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ 2350 ರು. ತಗ್ಗಿ, 15,630 ರು. ಆಗಿದೆ. 25 ಕ್ಯಾರಟ್ನ ಹೊನ್ನಿನ ದರದಲ್ಲೂ 2,580 ರು. ಇಳಿಕೆಯಾಗಿ 17,051 ರು ಆಗಿದೆ.
ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಬೆಳ್ಳಿಯ ಬೆಲೆಯೂ 3,15,000 ರು. ಆಗಿದೆ. 22 ಮತ್ತು 24 ಕ್ಯಾರಟ್ನ ಚಿನ್ನದ ಬೆಲೆಯಲ್ಲಿ ಕ್ರಮವಾಗಿ 2350 ರು. ಮತ್ತು 2570 ರು. ಕಡಿಮೆಯಾಗಿ 15,645 ರು. ಮತ್ತು 17,066 ರು. ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿಯೂ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಭಾರೀ ಏರಿಕೆ ಕಂಡಿದೆ.
ರುಪಾಯಿ ಮೌಲ್ಯ 41 ಪೈಸೆ ಕುಸಿದು 91.49ಕ್ಕೆ ಅಂತ್ಯ
ಮುಂಬೈ: ಮಧ್ಯಪ್ರಾಚ್ಯ ಸಂಘರ್ಷದ ಹಿನ್ನೆಲೆಯಲ್ಲಿ ಅಮೆರಿಕ ಕರೆನ್ಸಿಗೆ ಬೇಡಿಕೆ ಹೆಚ್ಚಾಗಿದ್ದು, ಸೋಮವಾರ ಡಾಲರ್ ಎದುರು ರುಪಾಯಿ ಮೌಲ್ಯ 41 ಪೈಸೆಗಳಷ್ಟು ಕುಸಿತವಾಗಿ 91.49ಕ್ಕೆ ಅಂತ್ಯವಾಗಿದೆ. ದಿನದ ಆರಂಭದಲ್ಲಿ ರುಪಾಯಿ ಮೌಲ್ಯ 91.23 ಇತ್ತು. ದಿನದ ಮಧ್ಯಕ್ಕೆ ಮತ್ತಷ್ಟು ಕುಸಿದು 91.65ಕ್ಕೆ ತಲುಪಿತು. ಆದರೆ ದಿನದಂತ್ಯಕ್ಕೆ 91.49ರಲ್ಲಿ ನೆಲೆಗೊಂಡಿತು
10:43 PM (IST) Mar 03
ನೇಮಕಗೊಂಡ ಒಂದೇ ದಿನಕ್ಕೆ ಇರಾನ್ ನೂತನ ರಕ್ಷಣಾ ಸಚಿವ ಸಯ್ಯೆದ್ ಮಜೀದ್ ಹತ್ಯೆ ವರದಿಯಾಗಿದೆ. ಇಸ್ರೇಲ್ ಹಾಗೂ ಅಮೆರಿಕ ನಡೆಸಿದ ಜಂಟಿ ದಾಳಿ ನಡೆಸಿದೆ. ಈ ವೇಳೆ ಪ್ರಯಾಣಿಕರ ವಿಮಾನವೂ ಧ್ವಂಸಗೊಂಡಿದೆ.
10:03 PM (IST) Mar 03
ಅರ್ಜುನ್ ತೆಂಡೂಲ್ಕರ್ ಸಾನಿಯಾ ಮೆಹಂದಿ ಸೆರಮನಿ ಮೊದಲ ವಿಡಿಯೋ ಬಹಿರಂಗ, ಸಚಿನ್ ತೆಂಡೂಲ್ಕರ್ ಕುಟುಂಬ, ಆಪ್ತರು, ಸ್ನೇಹಿತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಅದ್ಧೂರಿ ಕಾರ್ಯಕ್ರಮದ ವಿಡಿಯೋ ಇಲ್ಲಿದೆ.
09:03 PM (IST) Mar 03
ವಿಧಾನಸಭೆ ಚುನಾವಣೆಗೆ 42 ಅಭ್ಯರ್ಥಿಗಳ ಮೊದಲ ಪಟ್ಟಿ ಪ್ರಕಟಿಸಿದ ಕಾಂಗ್ರೆಸ್, ಅಧಿಕಾರಕ್ಕೇರಲೇಬೇಕು ಎಂದು ಪಣತೊಟ್ಟಿರುವ ಅಸ್ಸಾಂ ಕಾಂಗ್ರೆಸ್ ಅಳೆದು ತೂಗಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ.
08:38 PM (IST) Mar 03
ಸ್ಪ್ಯಾನಿಷ್ ನಟಿ ಆನಾ ಓಬ್ರೀಗಾನ್, ಕ್ಯಾನ್ಸರ್ನಿಂದ ಮೃತಪಟ್ಟ ತನ್ನ 27 ವರ್ಷದ ಮಗನ ಕೊನೆಯ ಆಸೆಯನ್ನು ಈಡೇರಿಸಲು ಮಗುವನ್ನು ಪಡೆದಿದ್ದಾರೆ. ಮಗನ ವೀರ್ಯಾಣು ಬಳಸಿ ಜನಿಸಿದ ಈ ಮಗು, ವಾಸ್ತವದಲ್ಲಿ ಆಕೆಗೆ ಮೊಮ್ಮಗಳಾಗಿದ್ದು, ಕಾನೂನುಬದ್ಧವಾಗಿ ಮಗಳಾಗಿದ್ದಾಳೆ.
08:32 PM (IST) Mar 03
ದಾಳಿ ಬೆನ್ನಲ್ಲೇ 750 ಕೋಟಿ ರೂ ಖಾಸಗಿ ಜೆಟ್ನಲ್ಲಿ ಸೌದಿ ತೊರೆದ ಕ್ರಿಸ್ಟಿಯಾನೋ ರೋನಾಲ್ಡ್, ಇರಾನ್ ಡ್ರೋನ್ ನೇರವಾಗಿ ರಿಯಾದ್ ಎಂಬಸಿ ಮೇಲೆ ದಾಳಿ ಮಾಡಿದೆ. ಇದರ ಪರಿಣಾಮ ರೋನಾಲ್ಡೋ ಸುರಕ್ಷಿತ ಸ್ಥಳಕ್ಕೆ ತೆರಳಿದ್ದಾಳೆ.
08:10 PM (IST) Mar 03
ಅಮೆರಿಕಾ-ಇಸ್ರೇಲ್ ದಾಳಿಯ ನಂತರ ಇರಾನ್, ಹಾರ್ಮುಜ್ ಜಲಸಂಧಿಯನ್ನು ಮುಚ್ಚಿದ್ದರಿಂದ ಜಾಗತಿಕ ತೈಲ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಈ ಇಂಧನ ಬಿಕ್ಕಟ್ಟನ್ನು ನಿಭಾಯಿಸಲು, ಭಾರತವು ಅಮೆರಿಕಾದೊಂದಿಗಿನ ರಾಜತಾಂತ್ರಿಕ ಒತ್ತಡದ ನಡುವೆಯೂ ರಷ್ಯಾದಿಂದ ಕಚ್ಚಾ ತೈಲ ಖರೀದಿಯನ್ನು ಹೆಚ್ಚಿಸುವ ಸಾಧ್ಯತೆಯಿದೆ.
07:18 PM (IST) Mar 03
07:17 PM (IST) Mar 03
ತಿರುಪತಿ ತಿಮ್ಮಪ್ಪನ ದರ್ಶನ ಕ್ಯೂನಲ್ಲಿ ಭಕ್ತರ ಜಟಾಪಟಿ, ಬೆಲ್ಟ್ ಬಿಚ್ಚಿ ಹೊಡೆದು ರಂಪಾಟ ಮಾಡಲಾಗಿದೆ. ಮಹಿಳೆಯರು ಮಕ್ಕಳು ಸೇರಿದಂತೆ ಭಕ್ತರು ಇದ್ದ ದರ್ಶನ ಸಾಲಿನಲ್ಲೇ ಈ ಘಟನೆ ನಡೆದಿದೆ.
06:50 PM (IST) Mar 03
ಡ್ಯಾಡಿ ಡ್ಯೂಟಿ, ಲಂಡನ್ನಲ್ಲಿ ಪ್ರತಿ ದಿನ ಮಗನ ಶಾಲೆಗೆ ಕರೆದುಕೊಂಡು ಹೋಗ್ತಾರೆ ಕೊಹ್ಲಿ, ಕೊಹ್ಲಿ ಆಕಾಯ್ನನ್ನ ಶಾಲೆಗೆ ಕರೆದುಕೊಂಡು ಬರುತ್ತಿರುವ ದೃಶ್ಯವೊಂದು ಸದ್ದು ಮಾಡುತ್ತಿದೆ. ಫ್ಯಾಮಿಲಿಗೆ ಸಂಪೂರ್ಣ ಸಮಯ ನೀಡಿದ್ದಾರೆ.
06:48 PM (IST) Mar 03
Ayatollah Khamenei and Family Killed in US-Israel Airstrikes: Reports ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ನಡೆಸಿದ ಬೃಹತ್ ವಾಯುದಾಳಿಯಲ್ಲಿ, ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಮತ್ತು ಅವರ ಕುಟುಂಬ ಸದಸ್ಯರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
06:37 PM (IST) Mar 03
ಮಧ್ಯಪ್ರಾಚ್ಯದಲ್ಲಿ ಇರಾನ್-ಇಸ್ರೇಲ್ ಸಂಘರ್ಷದಿಂದಾಗಿ ಹಾರ್ಮುಜ್ ಜಲಸಂಧಿಯನ್ನು ಮುಚ್ಚಲಾಗಿದ್ದು, ತೈಲ ಸಾಗಾಟಕ್ಕೆ ಅಡ್ಡಿಯಾಗಿದೆ. ಆದಾಗ್ಯೂ, ಭಾರತವು ಸಾಕಷ್ಟು ಕಚ್ಚಾ ತೈಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ದಾಸ್ತಾನು ಹೊಂದಿದ್ದು ಸದ್ಯಕ್ಕೆ ಯಾವುದೇ ಆತಂಕವಿಲ್ಲ ಎಂದಿದೆ.
06:07 PM (IST) Mar 03
ಬೆಂಗಳೂರು: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು ನಿರ್ಣಾಯಕ ಘಟ್ಟದಲ್ಲಿದ್ದು, ಇದೀಗ ಸೆಮಿಫೈನಲ್ ಪಂದ್ಯಗಳಿಗೆ ಕ್ಷಣಗಣನೆ ಶುರುವಾಗಿದೆ. ಹೀಗಿರುವಾಗಲೇ ಫೈನಲ್ ಪ್ರವೇಶಿಸುವುದು ಯಾರು ಎನ್ನುವ ಬಗ್ಗೆ ಇಬ್ಬರು ದಿಗ್ಗಜ ಕ್ರಿಕೆಟಿಗರು ಭವಿಷ್ಯ ನುಡಿದಿದ್ದಾರೆ.
05:31 PM (IST) Mar 03
05:13 PM (IST) Mar 03
ವೆಸ್ಟ್ ಇಂಡೀಸ್ ವಿರುದ್ಧ ಗೆಲುವು ತಂದುಕೊಟ್ಟ ಸಂಭ್ರಮದಲ್ಲಿ ಹೆಲ್ಮೆಟ್ ಬಿಸಾಡಿದ ಸಂಜು ಸ್ಯಾಮ್ಸನ್ ಐಸಿಸಿ ಶಿಸ್ತು ಕ್ರಮ ಎದುರಿಸುವ ಸಾಧ್ಯತೆಯಿದೆ. ಇದು 'ಲೆವೆಲ್ 1' ಅಪರಾಧವಾದ್ದರಿಂದ, ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯಕ್ಕೆ ನಿಷೇಧ ಹೇರುವ ಸಾಧ್ಯತೆ ಕಡಿಮೆ.
04:59 PM (IST) Mar 03
ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಸಂಘರ್ಷವು ಭಾರತದ ಆರ್ಥಿಕತೆಗೆ ಅಪಾಯವನ್ನುಂಟುಮಾಡಿದೆ. ದೇಶದ ಆಮದು ಅವಲಂಬನೆಯನ್ನು ಎತ್ತಿ ತೋರಿಸಿರುವ ಉದ್ಯಮಿ ಅನಿಲ್ ಅಗರ್ವಾಲ್ಸ್ವಾ ವಲಂಬನೆ ಸಾಧಿಸಲು ದೇಶೀಯ ಸಂಪನ್ಮೂಲಗಳ ಉತ್ಪಾದನೆಯನ್ನು ತುರ್ತಾಗಿ ಹೆಚ್ಚಿಸಬೇಕೆಂದು ಸಲಹೆ ನೀಡಿದ್ದಾರೆ.
04:58 PM (IST) Mar 03
ಖಮೇನಿ ಹತ್ಯೆ, ಭಾರತ ತೊರೆದು ಇರಾನ್ನಲ್ಲಿ ನೆಲೆಸಲು ಸಿದ್ಧ ಎಂದ ಬಿಗ್ ಬಾಸ್ ಮಾಜಿ ಸ್ಪರ್ಧಿ, ಸರ್ವೋಚ್ಚ ನಾಯಕನ ಹತ್ಯೆ ಬೆನ್ನಲ್ಲೇ ತಾನು ಭಾರತ ತೊರೆದು ಇರಾನ್ಗೆ ಮರಳಲು ಸಿದ್ದ ಎಂದಿದ್ದಾರೆ.
04:56 PM (IST) Mar 03
ತಮಿಳು ನಟ ದಳಪತಿ ವಿಜಯ್ ಮತ್ತು ಪತ್ನಿ ಸಂಗೀತಾ ಅವರ ವಿಚ್ಛೇದನದ ಸುದ್ದಿಯ ನಡುವೆ ನಟಿ ತ್ರಿಷಾ ಹೆಸರು ಕೇಳಿಬರುತ್ತಿದೆ. ತ್ರಿಷಾ ಅವರದ್ದು ಎನ್ನಲಾದ ವೈರಲ್ ಪೋಸ್ಟ್ ಇದಕ್ಕೆ ಕಾರಣ ಎನ್ನಲಾಗಿದ್ದು, ಅದು ಎಡಿಟ್ ಮಾಡಲಾದ ಸುಳ್ಳು ಪೋಸ್ಟ್ ಎಂಬುದು ಬಹಿರಂಗವಾಗಿದೆ.
04:24 PM (IST) Mar 03
04:01 PM (IST) Mar 03
Blood Moon ಇಂದು ಏಕಕಾಲಕ್ಕೆ ಸೂರ್ಯ ಚಂದ್ರ ಗೋಚರ, ಖಗ್ರಾಸ ಗ್ರಹಣದ ಅಪರೂಪದ ವಿದ್ಯಮಾನ, ಸಾಮಾನ್ಯವಾಗಿ 180 ಡಿಗ್ರಿ ವಿರುದ್ದ ದಿಕ್ಕಿನಲ್ಲಿರುವ ಸೂರ್ಯ ಹಾಗೂ ಚಂದ್ರ ಇಂದು ಏಕಕಾಲಕ್ಕೆ ಗೋಚರವಾಗುತ್ತಾರೆ.
03:57 PM (IST) Mar 03
ತಂದೆಯ ನಿಧನದಿಂದಾಗಿ ರಿಂಕು ಸಿಂಗ್ ಜಿಂಬಾಬ್ವೆ ವಿರುದ್ಧದ ಪಂದ್ಯದಿಂದ ಹೊರಗುಳಿದಿದ್ದರು. ಆ ಜಾಗದಲ್ಲಿ ಬಂದ ಸಂಜು ಸ್ಯಾಮ್ಸನ್ಗೆ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ. ಆದರೂ, ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯಕ್ಕೆ ರಿಂಕು ಲಭ್ಯವಿದ್ದರೂ ಸಂಜು ಅವರನ್ನೇ ಯಾಕೆ ಆಡಿಸಲಾಯಿತು ಗೊತ್ತಾ?
03:54 PM (IST) Mar 03
ಹರಿಯಾಣ ವಿಧಾನಸಭಾ ಚುನಾವಣೆಯ ಟಿಕೆಟ್ ಹಂಚಿಕೆಯಲ್ಲಿ ಕೋಟ್ಯಂತರ ರೂಪಾಯಿ ಭ್ರಷ್ಟಾಚಾರ ನಡೆದಿದೆ ಎಂದು ಬಿಜೆಪಿ ಆರೋಪಿಸಿದೆ. ಕಾಂಗ್ರೆಸ್ ನಾಯಕಿಯ ಪತಿ ಬಿಡುಗಡೆ ಮಾಡಿದ ವಾಟ್ಸಾಪ್ ಚಾಟ್ಗಳನ್ನು ಆಧರಿಸಿ, ಗಾಂಧಿ ಕುಟುಂಬ ಮತ್ತು ಕೆ.ಸಿ. ವೇಣುಗೋಪಾಲ್ ಹಣ ವಸೂಲಿ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
03:19 PM (IST) Mar 03
ಖಮೇನಿ ಹತ್ಯೆಗೆ ಇಸ್ರೇಲ್ ನಡೆಸಿತ್ತು 1 ವರ್ಷ ಕಾರ್ಯಾಚರಣೆ, ಟ್ರಾಫಿಕ್ ಕ್ಯಾಮೆರಾ ಸೇರಿ ಎಲ್ಲವೂ ಹ್ಯಾಕ್ ಮಾಡಲಾಗಿದೆ. ವರ್ಷಗಳಿಂದ ಖಮೇನಿ ರಹಸ್ಯವಾಗಿ ಹಿಂಬಾಲಿಸಿದ್ದ ಇಸ್ರೇಲ್ ನಿಖರ ಗುರಿಯಿಟ್ಟಿದೆ. ರೋಚಕ ಕಾರ್ಯಾಚರಣೆ ಬಹಿರಂಗವಾಗಿದೆ.
03:14 PM (IST) Mar 03
ಪಾಕಿಸ್ತಾನಿ ತಜ್ಞ ಸಾಜಿದ್ ತರಾರ್, ಇರಾನ್-ಇಸ್ರೇಲ್ ಯುದ್ಧದ ಹಿನ್ನೆಲೆಯಲ್ಲಿ ಮುಸ್ಲಿಂ ಜಗತ್ತು ಇಸ್ರೇಲ್ಗೆ ಶರಣಾಗಬೇಕು ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ಯುದ್ಧವು ಜಾಗತಿಕ ಆರ್ಥಿಕತೆ ಮತ್ತು ತೈಲ ಬೆಲೆಗಳ ಮೇಲೆ ತೀವ್ರ ಪರಿಣಾಮ ಬೀರಲಿದೆಯೇ ಮುಂದೆ ಓದಿ
02:51 PM (IST) Mar 03
02:15 PM (IST) Mar 03
02:03 PM (IST) Mar 03
ಟಿ20 ವಿಶ್ವಕಪ್ 2026ರ ಎರಡನೇ ಸೆಮಿಫೈನಲ್ನಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಲಿವೆ. ಮಾರ್ಚ್ 5 ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಈ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಎರಡೂ ತಂಡಗಳ ಬಲಾಬಲ, ರೆಕಾರ್ಡ್ಸ್ ಹೇಗಿದೆ? ಪಂದ್ಯದ ಗತಿ ಬದಲಿಸಬಲ್ಲ ಆಟಗಾರರು ಯಾರು? ಇಲ್ಲಿದೆ ಮಾಹಿತಿ.
01:21 PM (IST) Mar 03
ಇರಾನ್ನ ಗೆರಾಶ್ನಲ್ಲಿ ಸಂಭವಿಸಿದ ಭೂಕಂಪವು, ಇಸ್ರೇಲ್-ಅಮೆರಿಕ ದಾಳಿಗೆ ಪ್ರತಿಯಾಗಿ ನಡೆಸಿದ ರಹಸ್ಯ ಅಣ್ವಸ್ತ್ರ ಪರೀಕ್ಷೆಯೇ ಎಂಬ ಅನುಮಾನವನ್ನು ಹುಟ್ಟುಹಾಕಿದೆ. ಇದೇ ಸಮಯದಲ್ಲಿ, ಇರಾನ್ನ ನಟಾಂಜ್ ಪರಮಾಣು ಸ್ಥಾವರದ ಮೇಲೆ ದಾಳಿ ಆಗಿರುವ ಉಪಗ್ರಹ ಚಿತ್ರಗಳು ಹೊರಬಂದಿವೆ.
01:17 PM (IST) Mar 03
12:47 PM (IST) Mar 03
ತಮಿಳುನಾಡು ಚುನಾವಣೆಗೆ ಮುನ್ನ ಡಿಎಂಕೆ ಮತ್ತು ಕಾಂಗ್ರೆಸ್ ನಡುವಿನ ಸೀಟು ಹಂಚಿಕೆ ಮಾತುಕತೆ ಸ್ಥಗಿತಗೊಂಡಿದೆ. ಡಿಎಂಕೆ 25 ಸ್ಥಾನಗಳ ಆಫರ್ ನೀಡಿದ್ದು, ಕಾಂಗ್ರೆಸ್ 41 ಸ್ಥಾನಗಳಿಗೆ ಬೇಡಿಕೆಯಿಟ್ಟಿದೆ. ಡಿಎಂಕೆ ತನ್ನ ಆಫರ್ ಒಪ್ಪಿಕೊಳ್ಳಲು ಡೆಡ್ಲೈನ್ ನೀಡಿದೆ.
12:27 PM (IST) Mar 03
ಇರಾನ್ ಸರ್ವೋಚ್ಚ ನಾಯಕ ಅಯತೊಲ್ಲಾ ಖಮೇನಿ ಅವರ ಸಾವಿಗೆ ಭಾರತ ಸರ್ಕಾರ ಸಂತಾಪ ಸೂಚಿಸದಿರುವುದಕ್ಕೆ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಟೀಕಿಸಿದ್ದು, ಭಾರತದ ಈ ನಿಲುವು ಸರಿಯಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
12:20 PM (IST) Mar 03
ಟಿ20 ವಿಶ್ವಕಪ್ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಅಜೇಯ 97 ರನ್ ಸಿಡಿಸಿ ಭಾರತವನ್ನು ಸೆಮಿಫೈನಲ್ಗೆ ತಲುಪಿಸಿದ ಸಂಜು ಸ್ಯಾಮ್ಸನ್ಗೆ ಸಾಮಾಜಿಕ ಜಾಲತಾಣದಲ್ಲಿ ಜನಾಂಗೀಯ ನಿಂದನೆ ಎದುರಾಗಿದೆ. ಈ ಕುರಿತು ಕೇರಳ ಕಾಂಗ್ರೆಸ್ ಘಟಕವು ಕೇಂದ್ರ ಸಚಿವರಿಗೆ ದೂರು ನೀಡಿದೆ.
11:46 AM (IST) Mar 03
ಕೆಐಐಟಿ ವಿಶ್ವವಿದ್ಯಾಲಯದಲ್ಲಿ ವಾಲಿಬಾಲ್ ವರ್ಲ್ಡ್ ಬೀಚ್ ಪ್ರೊ ಟೂರ್ನಿ ಮಾರ್ಚ್ 4ರಿಂದ 8 ರವರೆಗೆ ನಡೆಯಲಿದೆ. ಇದರೊಂದಿಗೆ ಟೂರ್ನಿಗೆ ಆತಿಥ್ಯ ವಹಿಸಿದ ಭಾರತದ ಮೊದಲ ವಿಶ್ವವಿದ್ಯಾಲಯ ಎಂಬ ಕೀರ್ತಿಗೆ ಕೆಐಐಟಿ ಪಾತ್ರವಾಗಲಿದೆ.
10:44 AM (IST) Mar 03
Gold And Silver Price Today 3rd March 2026: ಮಧ್ಯಪ್ರಾಚ್ಯದಲ್ಲಿ ಯುದ್ಧದ ಸನ್ನಿವೇಶದಿಂದ ಕಚ್ಚಾತೈಲ ಬೆಲೆ ಏರಿಕೆಯಾಗುತ್ತಿದೆ. ಆದ್ರೆ ಚಿನ್ನದ ಬೆಲೆಯಲ್ಲಿ ಇಳಿಕೆಯಾಗುತ್ತಿದೆ.
10:44 AM (IST) Mar 03
ನವದೆಹಲಿ: ಐಸಿಸಿ ಟಿ20 ವಿಶ್ವಕಪ್ ಬಳಿಕ ಕ್ರಿಕೆಟಿಗರು 19ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇದಾದ ಬಳಿಕ ಆಫ್ಘಾನ್ ಎದುರು ಭಾರತ ತಂಡವು ತವರಿನಲ್ಲಿ ಒಂದು ಟೆಸ್ಟ್ ಹಾಗೂ 3 ಪಂದ್ಯಗಳ ಏಕದಿನ ಸರಣಿ ಆಡಲಿದೆ. ಏಕದಿನ ಸರಣಿಯಲ್ಲಿ ಕೊಹ್ಲಿ-ರೋಹಿತ್ ಕಣಕ್ಕಿಳಿಯಲಿದ್ದಾರೆ
10:00 AM (IST) Mar 03
08:58 AM (IST) Mar 03
ಬೆಂಗಳೂರು: ರಜತ್ ಪಾಟೀದಾರ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಮುಂಬರುವ ಐಪಿಎಲ್ ಟೂರ್ನಿಯನ್ನು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿಯೇ ಆಡುವ ಸಾಧ್ಯತೆ ದಟ್ಟವಾಗಿದೆ. ಈ ಕುರಿತಾದ ಮಹತ್ವದ ಅಪ್ಡೇಟ್ಸ್ ಇಲ್ಲಿದೆ ನೋಡಿ
08:20 AM (IST) Mar 03
10ನೇ ಆವೃತ್ತಿಯ ಟಿ20 ವಿಶ್ವಕಪ್ನ ಸೆಮಿಫೈನಲ್ಗೆ ಅಖಾಡ ಸಿದ್ಧವಾಗಿದ್ದು, ಭಾರತವು ಇಂಗ್ಲೆಂಡ್ ತಂಡವನ್ನು ಮತ್ತು ದಕ್ಷಿಣ ಆಫ್ರಿಕಾವು ನ್ಯೂಜಿಲೆಂಡ್ ತಂಡವನ್ನು ಎದುರಿಸಲಿದೆ. ಈ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ಮಾತ್ರ ಅಜೇಯವಾಗಿ ಉಳಿದಿದೆ.
07:12 AM (IST) Mar 03
ಕಾನೂನಿನ ಪ್ರಕಾರ ಚಿನ್ನವನ್ನು ಯಾವುದೇ ದಾಖಲೆಗಳಿಲ್ಲದೆ ಇಟ್ಟುಕೊಳ್ಳಬಹುದು. ಈ ಮಿತಿಯು ಕೇವಲ ಆಭರಣಗಳಿಗೆ ಅನ್ವಯಿಸುತ್ತದೆ ಮತ್ತು ನಾಣ್ಯಗಳು ಅಥವಾ ಬಾರ್ಗಳಿಗೆ ಅಲ್ಲ. ಬಳುವಳಿಯಾಗಿ ಬಂದ ಚಿನ್ನಕ್ಕೆ ವಿವರಗಳನ್ನು ದಾಖಲಿಸುವುದು ಅವಶ್ಯಕ.