Published : Aug 02, 2025, 06:33 AM ISTUpdated : Aug 02, 2025, 11:12 PM IST

India Latest News Live: ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಿ - ಸಚಿವ ಈಶ್ವರ್ ಖಂಡ್ರೆ

ಸಾರಾಂಶ

ಮುಂಬೈ: ಗುರುವಾರವಷ್ಟೇ ತೀರ್ಪು ಪ್ರಕಟವಾದ ಮಾಲೇಗಾಂವ್ ಸ್ಫೋಟ ಪ್ರಕರಣದಲ್ಲಿ, ಆರ್‌ಎಸ್‌ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನೂ ಬಂಧಿಸುವಂತೆ ಹಿರಿಯ ಅಧಿಕಾರಿಗಳು ನನ್ನ ಮೇಲೆ ಒತ್ತಡ ಹೇರಿದ್ದರು ಎಂದು ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳದ (ಎಟಿಎಸ್) ಮಾಜಿ ಅಧಿಕಾರಿ ಯೊಬ್ಬರು ಗಂಭೀರ ಆರೋಪ ಮಾಡಿದ್ದಾರೆ. ಈ ಕುರಿತು ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿದ ನಿವೃತ್ತ ಅಧಿಕಾರಿ ಮೆಹಬೂಬ್ ಮುಜಾವರ್, ಭಾರತದಲ್ಲಿ ಕೇಸರಿ ಭಯೋತ್ಪಾದನೆಯ ನಿರೂಪಣೆಯನ್ನು ಸೃಷ್ಟಿಸುವ ಗುರಿ ಹೊಂದಲಾಗಿತ್ತು. ಆಗ ನನ್ನ ಮೇಲಧಿಕಾರಿಯಾಗಿದ್ದ ಈ ಹಿಂದಿನ ಮುಂಬೈ ಪೊಲೀಸ್‌ ಆಯುಕ್ತ ಮತ್ತು ಅಂದಿನ ಮಾಲೇಗಾಂವ್‌ ಪ್ರಕರಣದ ತನಿಖಾಧಿಕಾರಿ ಪರಮ್ ಬೀರ್ ಸಿಂಗ್ ಅವರಿಂದ ಮೋಹನ್‌ ಭಾಗವತ್‌ ಅವರನ್ನು ಬಂಧಿಸುವಂತೆ ನಿರ್ದೇಶನ ಬಂದಿತ್ತುಎಂದು ಆರೋಪಿಸಿದರು.ಆದರೆ ವಿನಾಕಾರಣ ಭಾಗವತ್ ಅವರಂಥ ಪ್ರಭಾವಿ ವ್ಯಕ್ತಿಯನ್ನು ಬಂಧಿಸುವುದು ನನ್ನ ಕೈ ಮೀರಿ ಆಗಿತ್ತು. ಇದಕ್ಕೆ ನಾನು ನಿರಾಕರಿಸಿದೆ. ಬಳಿಕ ನನ್ನನ್ನು ಸುಳ್ಳು ಆರೋಪ ಮಾಡಿ ಹುದ್ದೆಯಿಂದ ತೆಗೆದು ಹಾಕಲಾಗಿತ್ತು. ಆದೆಲ್ಲ ಈಗ ಸುಳ್ಳೆಂದು ಸಾಬೀತಾಗಿದೆ ಎಂದರು.

 

11:12 PM (IST) Aug 02

ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈಜೋಡಿಸಿ - ಸಚಿವ ಈಶ್ವರ್ ಖಂಡ್ರೆ

ಇಂದಿನ ಮಕ್ಕಳು ಚಿಕ್ಕ ವಯಸ್ಸಿನಲ್ಲೇ ದುಶ್ಚಟಗಳಿಗೆ ಒಳಪಡುತ್ತಿದ್ದಾರೆ ಈ ಕುರಿತಂತೆ ಅವರಲ್ಲಿ ಅರಿವು ಮೂಡಿಸುವುದು ಬಹಳ ಮುಖ್ಯವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ತಿಳಿಸಿದರು.

Read Full Story

10:56 PM (IST) Aug 02

ದುಬೈ, ಅಬುಧಾಬಿಯಲ್ಲಿ ಏಷ್ಯಾಕಪ್‌ ಟಿ20, ಸೆ.14ಕ್ಕೆ ಭಾರತ-ಪಾಕ್‌ ಪಂದ್ಯ

ಸೆಪ್ಟೆಂಬರ್ 9 ರಿಂದ 28 ರವರೆಗೆ ದುಬೈ ಮತ್ತು ಅಬುಧಾಬಿಯಲ್ಲಿ ಏಷ್ಯಾಕಪ್ ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ. ಭಾರತೀಯ ಕಾಲಮಾನ ಸಂಜೆ 7:30ಕ್ಕೆ ಪಂದ್ಯಗಳು ಆರಂಭವಾಗಲಿದ್ದು, ಒಟ್ಟು 19 ಪಂದ್ಯಗಳು ನಡೆಯಲಿವೆ. ಭಾರತ ಮತ್ತು ಪಾಕಿಸ್ತಾನ ತಂಡಗಳು ಸೂಪರ್-4 ಹಂತದಲ್ಲಿ ಸೆ. 21ರಂದು ಮುಖಾಮುಖಿಯಾಗಲಿವೆ.
Read Full Story

10:26 PM (IST) Aug 02

ಇಂಗ್ಲೆಂಡ್‌-ಇಂಡಿಯಾ ಟೆಸ್ಟ್‌ ಮ್ಯಾಚ್‌ನಲ್ಲಿ ಕಾಮೆಂಟರಿ ಮಾಡಿದ ಗೂಗಲ್‌ ಸಿಇಒ ಸುಂದರ್‌ ಪಿಚೈ!

ಗೂಗಲ್ ಸಿಇಒ ಸುಂದರ್ ಪಿಚೈ ಇಂಗ್ಲೆಂಡ್-ಇಂಡಿಯಾ ಟೆಸ್ಟ್ ಪಂದ್ಯದಲ್ಲಿ ಕಾಮೆಂಟರಿ ಮಾಡಿದ್ದಾರೆ. ವಿರಾಟ್ ಕೊಹ್ಲಿ ಅವರ ನಾಯಕತ್ವ ಮತ್ತು ಆಕ್ರಮಣಕಾರಿ ಮನೋಭಾವವನ್ನು ಮೆಚ್ಚಿದ್ದಾರೆ. ಟೆಸ್ಟ್ ಕ್ರಿಕೆಟ್ ಪ್ರಿಯರೆಂದು ಹೇಳಿಕೊಂಡಿದ್ದಾರೆ.
Read Full Story

10:08 PM (IST) Aug 02

ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ತರುವ ಸಂಕಲ್ಪ ಮಾಡಿರುವೆ - ಬಿ.ಎಸ್‌.ಯಡಿಯೂರಪ್ಪ

ಕರ್ನಾಟಕ ರಾಜ್ಯದ ಉದ್ದ ಅಗಲಕ್ಕೆ ಮತ್ತೊಮ್ಮೆ ಪ್ರವಾಸ ನಡೆಸಿ ರಾಜ್ಯದ ಅಭಿವೃದ್ಧಿಗಾಗಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಸಂಕಲ್ಪ ಮಾಡಿರುವುದಾಗಿ ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ತಿಳಿಸಿದರು.

Read Full Story

10:00 PM (IST) Aug 02

ಆಲಮಟ್ಟಿ ಡ್ಯಾಂ ಬಗ್ಗೆ ಮಹಾರಾಷ್ಟ್ರದ ವಾದಕ್ಕೆ ಅರ್ಥವಿಲ್ಲ - ಸಚಿವ ಎಂ.ಬಿ.ಪಾಟೀಲ್‌

ಆಲಮಟ್ಟಿ ಅಣೆಕಟ್ಟು ಎತ್ತರಿಸುವುದರಿಂದ ಮಹಾರಾಷ್ಟ್ರದ ಸಾಂಗ್ಲಿ ಮತ್ತು ಕೊಲ್ಹಾಪುರ ಜಿಲ್ಲೆಗಳಲ್ಲಿ ಪ್ರವಾಹ ಸೃಷ್ಟಿಯಾಗುತ್ತದೆ ಎನ್ನುವುದು ಅರ್ಥವಿಲ್ಲದ ವಾದವಾಗಿದೆ ಎಂದು ಸಚಿವ ಎಂ.ಬಿ.ಪಾಟೀಲ್‌ ತಿಳಿಸಿದ್ದಾರೆ.

Read Full Story

09:46 PM (IST) Aug 02

ಧಾರವಾಡದಲ್ಲಿ ಪಿಒಪಿ ಗಣೇಶ ವಿಗ್ರಹಗಳಿಗೆ ಕಟ್ಟುನಿಟ್ಟಿನ ನಿಷೇಧ - ಜಿಲ್ಲಾಧಿಕಾರಿ ದಿವ್ಯ ಪ್ರಭು ಎಚ್ಚರಿಕೆ

ಗಣಪತಿ ವಿಗ್ರಹ ಮಾರಾಟಗಾರರು ಪರಿಸರಸ್ನೇಹಿ ಮಣ್ಣಿನ ಗಣಪತಿಗಳನ್ನು ಮಾತ್ರ ಮಾರಾಟ ಮಾಡಬೇಕೆಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು.

Read Full Story

09:26 PM (IST) Aug 02

ರೈತರ ಬಗ್ಗೆ ಸಿಎಂ ಸಿದ್ದರಾಮಯ್ಯಗೆ ತಾತ್ಸಾರ - ಬಿ.ವೈ.ವಿಜಯೇಂದ್ರ

ರಾಜ್ಯದಲ್ಲಿ ಮಳೆಗಾಲ ಚೆನ್ನಾಗಿ ಆಗಿದೆ. ಆದರೆ, ರೈತರು ರಸಗೊಬ್ಬರಕ್ಕಾಗಿ ಪರದಾಡುತ್ತಿದ್ದಾರೆ. ರೈತರ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿರುವ ಸಿದ್ದರಾಮಯ್ಯನವರೇ ರೈತರ ಬಗ್ಗೆ ತಾತ್ಸಾರ ಯಾಕೆ? ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರಶ್ನಿಸಿದ್ದಾರೆ.

Read Full Story

09:07 PM (IST) Aug 02

ರಾಷ್ಟ್ರೀಯ ಜೀವನೋಪಾಯದಡಿ ಮಾದಕ ದ್ರವ್ಯ ಮುಕ್ತ ಕರ್ನಾಟಕ ಅಭಿಯಾನ - ಶ್ರೀವಿದ್ಯಾ

ರಾಜ್ಯಾದ್ಯಂತ ಎರಡು ತಿಂಗಳ ಸಮಗ್ರ "ಮಾದಕ ದ್ರವ್ಯ ಮುಕ್ತ ಕರ್ನಾಟಕ ಅಭಿಯಾನ"ವನ್ನು ಆರಂಭಿಸಲಾಗಿದೆ ಎಂದು ರಾಷ್ಟ್ರೀಯ ಜೀವನೋಪಾಯ ಅಭಿಯಾನ ನಿರ್ದೇಶಕಿ ಶ್ರೀವಿದ್ಯಾ ತಿಳಿಸಿದ್ದಾರೆ.

Read Full Story

08:54 PM (IST) Aug 02

ಜೈವಿಕ ಇಂಧನ ಕ್ಷೇತ್ರದಲ್ಲಿ ಬೆಳವಣಿಗೆಯನ್ನು ಸಾಧಿಸಲು ಸಂಶೋಧನೆ-ತಾಂತ್ರಿಕ ಸಂಸ್ಥೆಗಳಿಂದ ಸಾಧ್ಯ - ಎಸ್.ಈ.ಸುಧೀಂದ್ರ

ಜವಹರಲಾಲ್ ನೆಹರು ಕಾಲೇಜ್ ಆಫ್ ಇಂಜಿನಿಯರಿಂಗ್ ಸಂಸ್ಥೆಯ ಬಗ್ಗೆ ಮಾತನಾಡುತ್ತಾ, ಈ ತಾಂತ್ರಿಕ ಸಂಸ್ಥೆ ಸ್ವಾತಂತ್ರ್ಯ ಪೂರ್ವ1946 ರಲ್ಲಿ ಪ್ರಾರಂಭವಾಗಿದ್ದು,44 ವರ್ಷಗಳ ಇತಿಹಾಸವನ್ನು ಹೊಂದಿದೆ.

Read Full Story

08:29 PM (IST) Aug 02

ಅಂಗಾಂಗ ದಾನದಲ್ಲಿ ಕರ್ನಾಟಕಕ್ಕೆ ಮೂರನೇ ಸ್ಥಾನ - ಸಚಿವ ದಿನೇಶ್‌ ಗುಂಡೂರಾವ್‌

ಅಂಗಾಂಗ ದಾನದಲ್ಲಿ ಕರ್ನಾಟಕಕ್ಕೆ ಮೂರನೇ ಸ್ಥಾನವಿದೆ. ದಕ್ಷಿಣದ ಇತರೇ ರಾಜ್ಯಗಳು ಈ ಅಂಗಾಂಗ ದಾನದಲ್ಲಿ ಮುಂಚೂಣಿಯಲ್ಲಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

Read Full Story

08:02 PM (IST) Aug 02

ಇನ್‌ಸ್ಟಾಗ್ರಾಂ ನಿಮಯದಲ್ಲಿ ಮಹತ್ವದ ಬದಲಾವಣೆ, ಈ ಬಳಕೆದಾರರಿಗೆ ಲೈವ್ ಅವಕಾಶವಿಲ್ಲ

ಇನ್‌ಸ್ಟಾಗ್ರಾಂ ಸೋಶಿಯಲ್ ಮೀಡಿಯಾ ಬಹುತೇಕರು ಬಳಸುತ್ತಾರೆ. ಇದೀಗ ಇನ್‌ಸ್ಟಾ ತನ್ನ ನಿಯಮದಲ್ಲಿ ಕೆಲ ಬದಲಾವಣೆ ಮಾಡಿದೆ.ಎಲ್ಲರಿಗೂ ಲೈವ್ ಅವಕಾಶವಿಲ್ಲ. ಇದರ ಜೊತೆಗೆ ಬದಲಾವಣೆಯಾಗಿರುವ ನಿಯಮವೇನು?

Read Full Story

07:21 PM (IST) Aug 02

ಕಣ್ಣೀರಿಡುತ್ತಾ ಪರಪ್ಪನ ಅಗ್ರಹಾರ ಜೈಲಿಗೆ ಜೀವಾವಧಿ ಶಿಕ್ಷೆಗೆ ಗುರಿಯಾದ ಪ್ರಜ್ವಲ್ ರೇವಣ್ಣ

ಅತ್ಯಾ*ರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣನ ಪರಪ್ಪನ ಅಗ್ರಹಾರ ಜೈಲಿಗೆ ಪೊಲೀಸರು ಕರೆದೊಯ್ದಿದ್ದಾರೆ. ಕಣ್ಣೀರಿಡುತ್ತಾ ಪರಪ್ಪನ ಅಗ್ರಹಾರ ಜೈಲಿನತ್ತ ಪ್ರಜ್ವಲ್ ರೇವಣ್ಣ ಸಾಗಿದ್ದಾರೆ.

Read Full Story

07:13 PM (IST) Aug 02

ದೂರವಾದಾಗಲೇ ಬೆಲೆ ತಿಳಿಯೋದು ವಿಚ್ಚೇದನ ಹಿಂಪಡೆದು ಮತ್ತೆ ಒಂದಾಗುತ್ತೇವೆಂದ ಸೈನಾ ನೆಹ್ವಾಲ್ ದಂಪತಿ

ವಿಚ್ಛೇದನದ ನಿರ್ಧಾರದಿಂದ ಹಿಂದೆ ಸರಿದ ಸೈನಾ ನೆಹ್ವಾಲ್ ಮತ್ತು ಪರುಪಳ್ಳಿ ಕಶ್ಯಪ್. ಏಳು ವರ್ಷಗಳ ದಾಂಪತ್ಯದ ನಂತರ ಬೇರೆಯಾಗಲು ನಿರ್ಧರಿಸಿದ್ದ ಜೋಡಿ ಮತ್ತೆ ಒಂದಾಗುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
Read Full Story

07:02 PM (IST) Aug 02

ಸ್ವರಾಜ್‌ ಮಾಜ್ದಾ ಲಿಮಿಟೆಡ್‌ Isuzu ಖರೀದಿ ಮಾಡಿದ ಮಹೀಂದ್ರಾ ಇನ್ನುಂದೆ SML Mahindra!

ಮಹೀಂದ್ರಾ & ಮಹೀಂದ್ರಾ ಲಿಮಿಟೆಡ್, SML ಇಸುಜು ಲಿಮಿಟೆಡ್‌ನಲ್ಲಿ 58.96% ಪಾಲನ್ನು ಸ್ವಾಧೀನಪಡಿಸಿಕೊಂಡಿದೆ. ಈ ಸ್ವಾಧೀನವು ಭಾರತದ ವಾಣಿಜ್ಯ ವಾಹನ ವಿಭಾಗದಲ್ಲಿ ತನ್ನ ಸ್ಥಾನವನ್ನು ಬಲಪಡಿಸಲು ಮಹೀಂದ್ರಾಗೆ ಸಹಾಯ ಮಾಡುತ್ತದೆ. ಕಂಪನಿಯನ್ನು SML ಮಹೀಂದ್ರಾ ಲಿಮಿಟೆಡ್ ಎಂದು ಮರುನಾಮಕರಣ ಮಾಡಲಾಗುವುದು.
Read Full Story

06:16 PM (IST) Aug 02

ಧರ್ಮಸ್ಥಳದಲ್ಲಿ ನಾಳೆ ಉತ್ಖನನ ಕಾರ್ಯಾಚರಣೆ ಬಹುತೇಕ ಡೌಟ್, ಕಾರಣವೇನು?

ಧರ್ಮಸ್ಥಳದಲ್ಲಿ ಎಸ್ಐಟಿ ನಡೆಸುತ್ತಿರುವ ಉತ್ಖನನ ಕಾರ್ಯಾಚರಣೆ 5 ದಿನ ಪೂರ್ಣಗೊಳಿಸಿದೆ. ಆದರೆ ನಾಳೆ (ಆ.02) ಉತ್ಖನನ ಕಾರ್ಯಾಚರಣೆ ಅನುಮಾನವಾಗಿದೆ.

 

Read Full Story

06:01 PM (IST) Aug 02

ಪ್ರಜ್ವಲ್ ರೇವಣ್ಣಗೆ ಕೋರ್ಟ್ ಆವರಣದಲ್ಲಿ ತನ್ನದೇ ಅಶ್ಲೀಲ ವಿಡಿಯೋ ವೀಕ್ಷಣೆ ಮಾಡಿದ ಅಪರಾಧಿ!

ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಅತ್ಯಾಚಾ*ರ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗಿರುವ ಮೊಬೈಲ್ ಅನ್ನು ವಾಪಸ್ ಕೊಡಲು ನ್ಯಾಯಾಲಯ ನಿರಾಕರಿಸಿದೆ. ಆದರೆ, ಕೋರ್ಟ್‌ನಲ್ಲಿಯೇ ವಿಡಿಯೋ ಮತ್ತು ಫೋಟೋಗಳನ್ನು ವೀಕ್ಷಿಸಲು ಅವಕಾಶ ನೀಡಲಾಗಿದೆ. ಪ್ರಜ್ವಲ್ ಎಫ್‌ಎಸ್‌ಎಲ್ ವರದಿ ಪ್ರಶ್ನಿಸಿದ್ದರು.

Read Full Story

05:42 PM (IST) Aug 02

ಧರ್ಮಸ್ಥಳದ ಪಾಯಿಂಟ್ 10ರ ಕಾರ್ಯಾಚರಣೆ ಅಂತ್ಯ, ಸಿಗಲಿಲ್ಲ ಕಳೇಬರ

ಧರ್ಮಸ್ಥಳದಲ್ಲಿ ದೂರುದಾರ ಗುರುಸಿತಿದ 10ನೇ ಪಾಯಿಂಟ್ ಕಾರ್ಯಾಚರಣೆ ಅಂತ್ಯಗೊಂಡಿದೆ. ಅನಾಮಿಕ 10ನೇ ಪಾಯಿಂಟ್‌ನಲ್ಲಿ ಮೂರು ಶವ ಹೂತಿಟ್ಟಿರುವುದಾಗಿ ಹೇಳಿದ್ದಾನೆ. ಆದರೆ ಯಾವುದೇ ಕಳೇಬರ ಪತ್ತೆಯಾಗಿಲ್ಲ

Read Full Story

05:16 PM (IST) Aug 02

ರಾಜ್ಯಾದ್ಯಂತ ಅಕ್ರಮ ರಸಗೊಬ್ಬರ, ಕೀಟನಾಶಕ ಮಾರಾಟದ ಮೇಲೆ ದಾಳಿ; 8 ಟ್ರೇಡರ್ಸ್ ಪರವಾನಗಿ ರದ್ದು

ರಾಜ್ಯದಾದ್ಯಂತ ರಸಗೊಬ್ಬರ ಮತ್ತು ಕೀಟನಾಶಕ ಮಾರಾಟದಲ್ಲಿ ನಡೆಯುತ್ತಿರುವ ಉಲ್ಲಂಘನೆಗಳ ವಿರುದ್ಧ ಕೃಷಿ ಇಲಾಖೆ ಕಠಿಣ ಕ್ರಮ ಕೈಗೊಂಡಿದೆ. ಬನ್ನೂರು, ನಂಜನಗೂಡು ಮತ್ತು ದಾವಣಗೆರೆಯಲ್ಲಿ ದಾಳಿ ನಡೆಸಿ, ಅನಧಿಕೃತ ಉತ್ಪನ್ನಗಳನ್ನು ಜಪ್ತಿ ಮಾಡಲಾಗಿದೆ ಮತ್ತು ಲೈಸೆನ್ಸ್‌ಗಳನ್ನು ರದ್ದುಗೊಳಿಸಲಾಗಿದೆ.
Read Full Story

04:52 PM (IST) Aug 02

ಎಲ್ಟು ಮುತ್ತಾ ಸಿನಿಮಾ ವಿಮರ್ಶೆ - ಸಾವಿನ ಹಾಡಿಯಲ್ಲಿ ನವಿಲು ಕುಣಿತ, ಮನುಷ್ಯನ ದುರಾಸೆ

ಅಲ್ಲೊಂದು ಗುಂಪು. ನವಿಲಿನ ಮುಗ್ಧತೆ ಮತ್ತು ರೋಷ ಎರಡನ್ನೂ ಮೈಗೂಡಿಸಿಕೊಂಡಿರುವ ಆ ಗುಂಪಿನ ನಾಯಕ. ಆತನ ಹೆಸರು ಮುತ್ತಾ.

Read Full Story

04:49 PM (IST) Aug 02

ಗಂಡನಿಗೆ 'ನಪುಂಸಕ' ಅಂದ್ರೆ ಮಾನಹಾನಿಯೇ? ಹೈಕೋರ್ಟ್ ತೀರ್ಪು

Defamation Lawsuit in Mumbai: ವಿಚ್ಛೇದನ ಅರ್ಜಿಯಲ್ಲಿ ಗಂಡನನ್ನ 'ನಪುಂಸಕ' ಅಂತ ಕರೆಯೋದು ಮಾನಹಾನಿಯೇ ಎಂಬುದರ ಕುರಿತು ಹೈಕೋರ್ಟ್ ಮಹತ್ವದ ತೀರ್ಪನ್ನು ನೀಡಿದೆ.

Read Full Story

04:47 PM (IST) Aug 02

ಪ್ರಳಯದ ಸೂಚನೆ ನೀಡಿತಾ ಮೆಗಾಫ್ಲಾಶ್, ಬರೋಬ್ಬರಿ 829 ಕಿ.ಮಿ ವ್ಯಾಪ್ತಿಯಲ್ಲಿ ಅಪ್ಪಳಿಸಿದ ಮಿಂಚು

ಇದೇ ಮೊದಲ ಬಾರಿಗೆ ಅತೀ ದೊಡ್ಡ ಮಿಂಚು ಅಪ್ಪಳಿಸಿದೆ. ಬರೋಬ್ಬರಿ 829 ಕಿಲೋಮೀಟರ್ ವ್ಯಾಪ್ತಿಯಲ್ಲಿ ಮಿಂಚು ಕಾಣಿಸಿಕೊಂಡಿದೆ. ಇದು ಮತ್ತೊಂದು ಪ್ರಾಕೃತಿಕ ವಿಕೋಪದ ಮುನ್ಸೂಚನೆಯೇ?

Read Full Story

04:46 PM (IST) Aug 02

ಹಠಾತ್ ಬ್ರೇಕ್ ಹಾಕಿದ ಖಾಸಗಿ ಬಸ್‌ - ತಾಯಿ ಕೈ ಜಾರಿ ರಸ್ತೆಗೆ ಬಿದ್ದ ಮಗು

ವಿರುಧುನಗರದಲ್ಲಿ ಬಸ್ ಚಾಲಕ ಹಠಾತ್ ಬ್ರೇಕ್ ಹಾಕಿದ ಪರಿಣಾಮ ಮಗುವೊಂದು ಬಸ್ಸಿನಿಂದ ಹೊರಗೆ ಬಿದ್ದಿದೆ. ಈ ಆಘಾತಕಾರಿ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಗುವಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದೆ.
Read Full Story

04:34 PM (IST) Aug 02

ಮೊಮ್ಮಗ ಪ್ರಜ್ವಲ್‌ಗೆ ಜೀವಾವಧಿ ಶಿಕ್ಷೆ ನೋಡಿ ಕಣ್ಣೀರಿಟ್ಟ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ!

ಮಾಜಿ ಸಂಸದ ಪ್ರಜ್ವಲ್‌ ರೇವಣ್ಣಗೆ ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಶಿಕ್ಷೆ ಪ್ರಕಟವಾದಾಗ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ ಕಣ್ಣೀರಿಟ್ಟರು.
Read Full Story

04:32 PM (IST) Aug 02

ಧರ್ಮಸ್ಥಳ 9ನೇ ಸಮಾಧಿಯಲ್ಲೂ ಸಿಗಲಿಲ್ಲ ತುಂಡು ಮೂಳೆ; 10ನೇ ಸಮಾಧಿಯಲ್ಲಿ 3 ಶವಗಳಿವೆ ಎಂದ ಅನಾಮಿಕ!

ಧರ್ಮಸ್ಥಳದಲ್ಲಿ ಅನಾಮಿಕ ವ್ಯಕ್ತಿ ತೋರಿಸಿದ 9ನೇ ಸಮಾಧಿ ಸ್ಥಳದ ಉತ್ಖನನದಲ್ಲಿ ಯಾವುದೇ ಮೂಳೆಗಳು ಪತ್ತೆಯಾಗಿಲ್ಲ. ಆದರೆ, 10ನೇ ಸ್ಥಳದಲ್ಲಿ 3 ಶವಗಳಿವೆ ಎಂದು ಆತ ಹೇಳಿದ್ದಾನೆ. ಎಸ್‌ಐಟಿ ತಂಡ 10ನೇ ಸ್ಥಳದ ಉತ್ಖನನ ಕಾರ್ಯ ಆರಂಭಿಸಿದೆ.
Read Full Story

04:25 PM (IST) Aug 02

ಮಲೆ ಮಹದೇಶ್ವರ ಬೆಟ್ಟದ ಸಾಲೂರು ಮಠದ ಶಿಕ್ಷಣ ಸಂಸ್ಥೆಯೊಡನೆ 4.77 ಕೋಟಿ ಎಂಒಯು ಸಹಿ ಹಾಕಿದ ಎಚ್ಎಎಲ್

ಇಂದಿನ ಆಧುನಿಕ ಡಿಜಿಟಲ್ ಯುಗದಲ್ಲೂ, ಮಲೆ ಮಹದೇಶ್ವರ ಬೆಟ್ಟ ಪ್ರದೇಶದ 18 ಹಳ್ಳಿಗಳು ವಿದ್ಯುತ್ ಮತ್ತು ರಸ್ತೆಯಂತಹ ಮೂಲಭೂತ ಸೌಕರ್ಯಗಳ ಕೊರತೆ ಅನುಭವಿಸುತ್ತಿವೆ.

Read Full Story

04:15 PM (IST) Aug 02

ಬೆಂಗಳೂರು ಸಬರ್ಬನ್‌ ರೈಲ್ವೇ ಪ್ರಾಜೆಕ್ಟ್‌ ಒಪ್ಪಂದ ರದ್ದು ಮಾಡಿದ L&T, 505 ಕೋಟಿಯ ಲೀಗಲ್‌ ನೋಟಿಸ್‌!

ಬೆಂಗಳೂರು ಉಪನಗರ ರೈಲ್ವೆ ಯೋಜನೆಯ ಮಲ್ಲಿಗೆ ಮಾರ್ಗದ ನಿರ್ಮಾಣ ಒಪ್ಪಂದವನ್ನು ಎಲ್&ಟಿ ರದ್ದುಗೊಳಿಸಿದೆ. ಭೂಸ್ವಾಧೀನ ವಿಳಂಬವನ್ನು ಕಾರಣವಾಗಿ ಉಲ್ಲೇಖಿಸಿ, ಕಂಪನಿಯು 505 ಕೋಟಿ ರೂ.ಗಳನ್ನು ಮರಳಿಸುವಂತೆ ಕೆ-ರೈಡ್‌ಗೆ ಬೇಡಿಕೆ ಇಟ್ಟಿದೆ. ಈ ಕ್ರಮವು ಯೋಜನೆಗೆ ಹಿನ್ನಡೆಯಾಗಿದೆ.
Read Full Story

04:12 PM (IST) Aug 02

ದೀಪಾವಳಿಗೆ ಆರ್‌ಬಿಐ ಬಂಪರ್ ಗಿಫ್ಟ್, ರೆಪೋ ದರ 25 bps ಕಡಿತ ಸಾಧ್ಯತೆ

ಸಾಲು ಸಾಲು ಹಬ್ಬಗಳು ಆಗಮಿಸುತ್ತಿದೆ. ಇದರ ಬನ್ನಲ್ಲೇ ಆರ್‌ಬಿಐ ಬಂಪರ್ ಗಿಫ್ಟ್ ನೀಡಲು ಮುಂದಾಗಿದೆ. ಆರ್‌ಬಿಐ ಈ ಬಾರಿ 25 bps ರೆಪೊ ದರ ಕಡಿತ ಮಾಡುವ ಸಾಧ್ಯತೆ ಇದೆ. ಇದರಿಂದ ಜನಸಾಮಾನ್ಯರಿಗೆ ಪ್ರಯೋಜನವೇನು?

Read Full Story

03:50 PM (IST) Aug 02

ಟ್ರಂಪ್ ಟ್ಯಾರಿಫ್‌ನಿಂದ ಭಾರತಕ್ಕಿಂತ ಅಮೇರಿಕಾ ಕುಟುಂಬಗಳಿಗೇ ಭಾರಿ ಆಘಾತ! ಒಬ್ಬೊಬ್ಬರಿಗೆ ₹4 ಲಕ್ಷ ಹೊರೆ!

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಧಿಸಿರುವ ತೆರಿಗೆಗಳು ಅಮೆರಿಕನ್ ಕುಟುಂಬಗಳ ಮೇಲೆ ವರ್ಷಕ್ಕೆ ಸುಮಾರು 2,400 ಡಾಲರ್ ಹೆಚ್ಚುವರಿ ವೆಚ್ಚ ಉಂಟುಮಾಡಲಿದೆ ಎಂದು SBI ವರದಿ ಅಂದಾಜಿಸಿದೆ. ಬಡವರಿಗೆ ಹೆಚ್ಚು ಹೊರೆಯಾಗಲಿದ್ದು, ಶ್ರೀಮಂತರಿಗೆ ಕಡಿಮೆ ಆಗಲಿದೆ. ಭಾರತದ ಮೇಲೆಯೂ ಕಡಿಮೆ ಪರಿಣಾಮ ಬೀರಲಿದೆ.

Read Full Story

03:39 PM (IST) Aug 02

ಮರಣ ಬಾವಿಯಲ್ಲಿ ಬೈಕ್ ಸಾಹಸ - ಚಾಲಕನಿಲ್ಲದೆ ಒಂದು ಗಂಟೆ ಓಡಿದ ಬೈಕ್ - ವೀಡಿಯೋ

ಉತ್ತರ ಪ್ರದೇಶದ ಜಾತ್ರೆಯೊಂದರಲ್ಲಿ ಮರಣ ಬಾವಿಯಲ್ಲಿ ಸ್ಟಂಟ್ ಮಾಡುವಾಗ ಬೈಕ್ ಸವಾರ ನಿಯಂತ್ರಣ ಕಳೆದುಕೊಂಡು ಬಿದ್ದ ಘಟನೆ ನಡೆದಿದೆ. ಆಶ್ಚರ್ಯಕರವಾಗಿ, ಚಾಲಕನಿಲ್ಲದ ಬೈಕ್ ಒಂದು ಗಂಟೆಗಳ ಕಾಲ ಬಾವಿಯ ಗೋಡೆಯ ಮೇಲೆ ಓಡುತ್ತಲೇ ಇತ್ತು.
Read Full Story

03:39 PM (IST) Aug 02

ಐ ಫೆಲ್ ಲವ್ ಇನ್ ಬೆಂಗಳೂರು, ಭಾವುಕಳಾಗಿ ವಿಮಾನ ಹತ್ತಿದ ವಿದೇಶಿ ಮಹಿಳೆ

ವಿದೇಶದಿಂದ ಪ್ರವಾಸಕ್ಕೆ ಬೆಂಗಳೂರಿಗೆ ಆಗಮಿಸಿದ ಮಹಿಳೆ, ಇದೀಗ ಸಿಲಿಕಾನ್ ಸಿಟಿಗೆ ಮಾರು ಹೋಗಿದ್ದಾರೆ. ನಗರ, ಇಲ್ಲಿನ ಜನ, ಸಂಸ್ಕೃತಿ, ದೇವಸ್ಥಾನ, ಆಹಾರ ಎಲ್ಲವೂ ವಿದೇಶಿ ಮಹಿಳೆಯನ್ನು ಆಕರ್ಷಿಸಿದ್ದು ಮಾತ್ರವಲ್ಲ, ಸ್ವದೇಶಕ್ಕೆ ತೆರಳುವಾಗ ಭಾವುಕರಾಗಿದ್ದಾರೆ.

Read Full Story

03:33 PM (IST) Aug 02

ದೆಹಲಿಯಿಂದ 52 ದಿನಗಳವರೆಗೆ ಹಾರಿ ಮಂಡ್ಯದ ಒಡೆಯನ ಸೇರಿದ ಪಾರಿವಾಳದ ರೋಚಕ ಸ್ಟೋರಿ...

ಮಂಡ್ಯದ ಪಾರಿವಾಳವೊಂದು ದೆಹಲಿಯಿಂದ 52 ದಿನಗಳ ಕಾಲ ಪ್ರಯಾಣ ಬೆಳೆಸಿ 1,790 ಕಿಲೋ ಮೀಟರ್​ ಹಾರಿ ಬಂದು ದಾಖಲೆ ಬರೆದಿದೆ. ಏನಿದು ಪಾರಿವಾಳದ ಸ್ಟೋರಿ?

 

Read Full Story

03:14 PM (IST) Aug 02

ತಿಮ್ಮಪ್ಪನ ಚಿನ್ನದ ಭಂಡಾರ 11000 ಕೆಜಿಗೆ ಏರಿಕೆ; ಇದರ ಮೌಲ್ಯವೆಷ್ಟು? ದಿನದ ಹುಂಡಿ ಹಣ ಎಷ್ಟು?

Thimmappa's gold treasure: ತಿಮ್ಮಪ್ಪನ ಚಿನ್ನದ ಭಂಡಾರ ಈಗ 11,000 ಕೆಜಿ ದಾಟಿದೆ ಮತ್ತು ಫಿಕ್ಸೆಡ್ ಡೆಪಾಸಿಟ್ ₹18,000 ಕೋಟಿಗೂ ಹೆಚ್ಚಿದೆ. ತಿಮ್ಮಪ್ಪನ ಚಿನ್ನದ ಭಂಡಾರದ ಒಟ್ಟು ಮೌಲ್ಯ, ಫಿಕ್ಸೆಡ್ ಡೆಪಾಸಿಟ್ ನಿಂದ ಬರುವ ಬಡ್ಡಿ ಎಷ್ಟು?

Read Full Story

03:02 PM (IST) Aug 02

Bihar Election 2025 - 'ಕರಡು ಮತದಾರರ ಪಟ್ಟಿಯಲ್ಲಿ ನನ್ನ ಹೆಸರೇ ಕಾಣ್ತಿಲ್ಲ' ತೇಜಸ್ವಿ ಯಾದವ್ ಆರೋಪ; 416ನೇ ಸ್ಥಾನದಲ್ಲಿದೆ ಸರಿಯಾಗಿ ನೋಡಿ ಎಂದ ಚುನಾವಣಾ ಆಯೋಗ!

ತೇಜಸ್ವಿ ಪ್ರಸಾದ್ ಯಾದವ್ ಅವರ ಹೆಸರು ಮತದಾರರ ಪಟ್ಟಿಯಲ್ಲಿ ಇಲ್ಲ ಎಂಬ ಆರೋಪ. ಚುನಾವಣಾ ಆಯೋಗದಿಂದ ಸ್ಪಷ್ಟನೆ ಮತ್ತು ಹಕ್ಕು-ಆಕ್ಷೇಪಣೆಗೆ ಕಾಲಾವಕಾಶ.
Read Full Story

02:53 PM (IST) Aug 02

BSNLನಿಂದ ಫ್ರೀಡಂ ಆಫರ್; 1 ರೂಪಾಯಿಗೆ 62GB ಡೇಟಾ, 400 ಎಸ್‌ಎಂಎಸ್, ಅನ್‌ಲಿಮಿಟೆಡ್ ಕಾಲ್

BSNL New Offer: ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಬಿಎಸ್‌ಎನ್‌ಎಲ್ ಕೇವಲ 1 ರೂಪಾಯಿಗೆ ಹೊಸ ಸಿಮ್ ಕಾರ್ಡ್‌ಗಳನ್ನು ನೀಡುತ್ತಿದೆ. ಈ ಆಫರ್‌ನಲ್ಲಿ ಗ್ರಾಹಕರಿಗೆ ತಿಂಗಳ ವ್ಯಾಲಿಡಿಟಿಯಲ್ಲಿ 62GB ಡೇಟಾ ಸಿಗಲಿದೆ. ಈ ಆಫರ್ ಆಗಸ್ಟ್ 1 ರಿಂದ 31 ರವರೆಗೆ ಮಾನ್ಯವಾಗಿರುತ್ತದೆ.

Read Full Story

02:33 PM (IST) Aug 02

ನಮ್ಮ ಮೆಟ್ರೋದಲ್ಲಿ ಜೀವರಕ್ಷಕ ಯಕೃತ್ತು ಸಾಗಣೆ; ಅಂಗಾಂಗ ಸಾಗಣೆ ಮಾಡಿದ ದೇಶದ 2ನೇ ಮೆಟ್ರೋ!

ಬೆಂಗಳೂರು ಮೆಟ್ರೋದಲ್ಲಿ ಮೊದಲ ಬಾರಿಗೆ ಮಾನವ ಯಕೃತ್ತನ್ನು ಅಂಗಾಂಗ ಕಸಿಗಾಗಿ ಸಾಗಿಸಲಾಗಿದೆ. ವೈದೇಹಿ ಆಸ್ಪತ್ರೆಯಿಂದ ರಾಜರಾಜೇಶ್ವರಿ ನಗರದ ಸ್ಪರ್ಶ ಆಸ್ಪತ್ರೆಗೆ ಯಕೃತ್ತನ್ನು ಯಶಸ್ವಿಯಾಗಿ ಸಾಗಿಸಲಾಯಿತು. ಈ ಕಾರ್ಯಾಚರಣೆಯಲ್ಲಿ ಮೆಟ್ರೋ ಸಿಬ್ಬಂದಿ ಮತ್ತು ಭದ್ರತಾ ಅಧಿಕಾರಿಗಳು ಸಹಕರಿಸಿದರು.
Read Full Story

02:33 PM (IST) Aug 02

ಅಕ್ರಮವಾಗಿ ಭಾರತದಲ್ಲಿ ನೆಲೆಸಿದ್ದ ಬಾಂಗ್ಲಾದೇಶಿ ಮಾಡೆಲ್ ಅರೆಸ್ಟ್, ನಕಲಿ ಆಧಾರ್ ವಶಕ್ಕೆ

2023ರಲ್ಲಿ ಭಾರತಕ್ಕೆ ಬಂದ ಬಾಂಗ್ಲಾದೇಶಿ ಮಾಡೆಲ್ ಬಳಿಕ ಇಲ್ಲೇ ನೆಲೆಸಿದ್ದಾಳೆ. ನಕಲಿ ಆಧಾರ್ ಕಾರ್ಡ್, ನಕಲಿ ರೇಶನ್ ಕಾರ್ಡ್ ಕೂಡ ಪಡೆದುಕೊಂಡಿದ್ದಾಳೆ. ಮನೆ ಬಾಡಿಗೆ ಪಡೆದು ಭಾರತದಲ್ಲೇ ನೆಲೆಸಿದ್ದ ಮಾಡೆಲ್ ಇದೀಗ ಅರೆಸ್ಟ್ ಆಗಿದ್ದಾಳೆ.

Read Full Story

02:23 PM (IST) Aug 02

ಗೆಳೆಯನಿಗೆ ಕೊಟ್ಟ ಮಾತು ಉಳಿಸಿಕೊಳ್ಳಲು ಶವದ ಮುಂದೆ ಕಣ್ಣೀರಿಡುತ್ತಲೇ ಡಾನ್ಸ್ ಮಾಡಿದ ಸ್ನೇಹಿತ

ಸಾವಿನ ವೇಳೆ ಯಾರು ಡಾನ್ಸ್ ಮಾಡುವುದಿಲ್ಲ, ಆದ್ರೂ ಗೆಳೆಯನಿಗೆ ಕೊಟ್ಟ ಮಾತು ಮೀರಲಾಗದೆ ವ್ಯಕ್ತಿಯೊಬ್ಬರು ಆತನ ಅಂತಿಮಯಾತ್ರೆ ವೇಳೆ ಕಣ್ಣೀರಿಡುತ್ತಲೇ ಡಾನ್ಸ್ ಮಾಡಿದ ಮನಮಿಡಿಯುವ ಘಟನೆ ಮಧ್ಯಪ್ರದೇಶದ ಮಂಡ್ಸುರ್‌ ಜಿಲ್ಲೆಯ ಜವಸಿಯ ಗ್ರಾಮದಲ್ಲಿ ನಡೆದಿದೆ.

Read Full Story

02:03 PM (IST) Aug 02

'ಭಾರತ ಶೀಘ್ರದಲ್ಲೇ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆ..' ಟ್ರಂಪ್‌ರ 'ಡೆಡ್ ಎಕಾನಮಿ' ಹೇಳಿಕೆಗೆ ಮೋದಿ ತಿರುಗೇಟು!

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರ 'ಭಾರತ ಸತ್ತ ಆರ್ಥಿಕತೆ' ಎಂಬ ಹೇಳಿಕೆಗೆ ಪ್ರಧಾನಿ ಮೋದಿ ತಿರುಗೇಟು ನೀಡಿದ್ದಾರೆ. ಭಾರತ ಶೀಘ್ರದಲ್ಲೇ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸ್ವದೇಶಿ ಚಳವಳಿಗೆ ಕರೆ ನೀಡಿದ್ದಾರೆ.
Read Full Story

01:38 PM (IST) Aug 02

ಒಂದೇ ಶಾಲೆಯ ಶಿಕ್ಷಕಿ, ವಿದ್ಯಾರ್ಥಿನಿ, ಪ್ರಿನ್ಸಿಪಾಲ್, ಸೂಪರ್‌ವೈಸರ್‌ನ್ನ ಮದುವೆಯಾದ ವ್ಯಕ್ತಿ

ಸೌದಿ ವ್ಯಕ್ತಿಯೊಬ್ಬರು ಒಂದೇ ಶಾಲೆಯಲ್ಲಿ ನಾಲ್ವರು ಮಹಿಳೆಯರನ್ನು ವಿವಾಹವಾದ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಸುದ್ದಿಯ ಹಿಂದಿನ ಸತ್ಯಾಸತ್ಯತೆ ಏನು ಎಂಬುದನ್ನು ತಿಳಿದುಕೊಳ್ಳೋಣ.

Read Full Story

01:33 PM (IST) Aug 02

ನಟಿ ರಮ್ಯಾಗೆ ಅಶ್ಲೀಲ ಮೆಸೇಜ್ ಕಳಿಸಿದ್ದ ಇಬ್ಬರು ದರ್ಶನ್ ಅಭಿಮಾನಿಗಳು ಅರೆಸ್ಟ್; ಮೂಲ ಎಲ್ಲಿಯವರು ಗೊತ್ತಾ?

ನಟಿ ರಮ್ಯಾ ಅವರಿಗೆ ಅಶ್ಲೀಲ  ಕಾಮೆಂಟ್‌ಗಳನ್ನು ಮಾಡಿದ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಬಗ್ಗೆ ರಮ್ಯಾ ಮಾಡಿದ್ದ ಪೋಸ್ಟ್‌ಗೆ ಪ್ರತಿಕ್ರಿಯೆಯಾಗಿ ಈ ಘಟನೆ ನಡೆದಿದೆ. ಐಪಿ ಅಡ್ರೆಸ್ ಮೂಲಕ ಆರೋಪಿಗಳನ್ನು ಪತ್ತೆ ಹಚ್ಚಲಾಗಿದೆ.

Read Full Story

More Trending News