ಶ್ರೀನಗರ: ಏ.22ರಂದು ಜಮ್ಮು ಕಾಶ್ಮೀರದ ಪಹಲ್ಗಾಂನಲ್ಲಿ ಪಾಕ್ ಉಗ್ರರು ನಡೆಸಿದ ನರಮೇಧದ ವೇಳೆ ಭಯೋತ್ಪಾದಕರಿಗೆ ಲಾಜಿಸ್ಟಿಕ್ ನೆರವು ನೀಡಿದ ಆರೋಪದಲ್ಲಿ ಜಮ್ಮು ಕಾಶ್ಮೀರ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ. ಕುಲ್ಗಾಮ್ ನಿವಾಸಿ 26 ವರ್ಷದ ಮೊಹಮ್ಮದ್ ಯೂಸುಫ್ ಕಟಾರಿಯಾ ಎಂಬಾತ ಬಂಧಿತ. ಪಾಕಿಸ್ತಾನ ಬೆಂಬಲಿತ ದಿ ರೆಸಿಸ್ಟೆನ್ಸ್ ಫ್ರಂಟ್ ( ಟಿಆರ್ಎಫ್) ಉಗ್ರರಿಗೆ ಸಹಾಯ ಮಾಡಿರುವ ಆರೋಪ ಈತನ ಮೇಲಿದೆ. ಪಹಲ್ಗಾಂ ನರಮೇಧದಲ್ಲಿ ಭಾಗಿಯಾಗಿದ್ದ ಮೂವರು ಭಯೋತ್ಪಾದಕರನ್ನು ಸೇನೆಯು ಆಪರೇಷನ್ ಮಹಾದೇವ್ ಕಾರ್ಯಾಚರಣೆ ನಡೆಸಿ ಹತ್ಯೆಗೈದ ಬಳಿಕ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿತ್ತು. ಅವುಗಳ ವಿಧಿವಿಜ್ಞಾನ ತನಿಖೆಯ ಆಧಾರದಲ್ಲಿ ಈತನ ಬಂಧನವಾಗಿದೆ.ಗುತ್ತಿಗೆ ಕೆಲಸ ಮಾಡುತ್ತಿದ್ದ ಈತ, ಸ್ಥಳೀಯ ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದ.

09:39 PM (IST) Sep 25
Man Finds Wife's Boyfriend Hidden Inside Wedding Gift Bed ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಡಿಯೋವೊಂದು ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಮದುವೆಯ ಉಡುಗೊರೆಯಾಗಿ ಸಿಕ್ಕ ಬಾಕ್ಸ್ ಮಂಚವನ್ನು ಯಾರಿಗೂ ಮುಟ್ಟಲು ಬಿಡದ ವಧುವಿನ ರಹಸ್ಯವನ್ನು ಪತಿ ಬಯಲು ಮಾಡಿದ್ದಾನೆ.
09:32 PM (IST) Sep 25
ಬರೋಬ್ಬರಿ ₹67,270 ಕೋಟಿ ಹಕ್ಕುದಾರರಿಲ್ಲದ ಠೇವಣಿಯನ್ನು ಮರಳಿ ನೀಡಲು ಆರ್ಬಿಐ ವಿಶೇಷ ಜಾಗೃತಿ ಅಭಿಯಾನ ಆರಂಭಿಸಿದೆ. UDGAM ಪೋರ್ಟಲ್ ಮತ್ತು ಸ್ಥಳೀಯ ಭಾಷೆಯ ಪ್ರಚಾರಗಳ ಮೂಲಕ ಹಣ ಪತ್ತೆಹಚ್ಚಲು ಸಹಾಯ ಮಾಡಲಾಗುತ್ತಿದೆ.
09:28 PM (IST) Sep 25
Man Eats Spoons:ದುಶ್ಚಟಗಳಿಗೆ ದಾಸನಾಗಿದ್ದ ವ್ಯಕ್ತಿಯೊಬ್ಬನನ್ನು ಆತನ ಮನೆಯವರು ವ್ಯಸನಮುಕ್ತ ಶಿಬಿರಕ್ಕೆ ಸೇರಿಸಿದ್ದರು. ಆದರೆ ಅಲ್ಲಿ ಆತನಗೆ ತೀವ್ರ ಹೊಟ್ಟೆನೋವು ಆಗಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಿ, ಸ್ಕ್ಯಾನಿಂಗ್ ಮಾಡಿದ ವೈದ್ಯರು ಒಳಗಿರೋದು ನೋಡಿ ಬೆಚ್ಚಿ ಬಿದ್ದಿದ್ದರು.
08:20 PM (IST) Sep 25
Daycare Nightmare: ಪ್ಲೇ ಹೋಮ್ ಒಂದರಲ್ಲಿ, ಹಾಡು ಹೇಳುವಾಗ ಚಪ್ಪಾಳೆ ತಟ್ಟಲಿಲ್ಲ ಎಂಬ ಕಾರಣಕ್ಕೆ ಶಿಕ್ಷಕಿಯೊಬ್ಬರು ಪುಟ್ಟ ಮಗುವಿನ ಕೆನ್ನೆಗೆ ಹೊಡೆದಿದ್ದಾರೆ. ಈ ಅಮಾನವೀಯ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರವಷ್ಟೇ ಘಟನೆ ಪೋಷಕರ ಗಮನಕ್ಕೆ ಬಂದಿದೆ.
07:43 PM (IST) Sep 25
DA Hike 2025: No Announcement by Govt Employees Disappointed ದಸರಾ ಹಬ್ಬದ ಮುನ್ನ ತುಟ್ಟಿಭತ್ಯೆ (ಡಿಎ) ಹೆಚ್ಚಳದ ನಿರೀಕ್ಷೆಯಲ್ಲಿದ್ದ ಕೇಂದ್ರ ಸರ್ಕಾರಿ ನೌಕರರಿಗೆ ನಿರಾಸೆಯಾಗಿದೆ. ಸೆ.24ರ ಸಂಪುಟ ಸಭೆಯಲ್ಲಿ ಈ ಬಗ್ಗೆ ಯಾವುದೇ ಘೋಷಣೆ ಮಾಡಿಲ್ಲ.
06:55 PM (IST) Sep 25
EPFO to Allow ATM Withdrawals of PF Funds by Jan 2026 ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ತನ್ನ ಸದಸ್ಯರಿಗೆ ಜನವರಿ 2026 ರೊಳಗೆ ಎಟಿಎಂಗಳ ಮೂಲಕ ತಮ್ಮ ಪಿಎಫ್ ನಿಧಿಯ ಒಂದು ಭಾಗವನ್ನು ಹಿಂಪಡೆಯಲು ಅನುಮತಿ ನೀಡುವ ಸಾಧ್ಯತೆಯಿದೆ.
06:27 PM (IST) Sep 25
ಹುಟ್ಟಿ 15 ದಿನಗಳಷ್ಟೇ ತುಂಬಿದ್ದ ಮುಗ್ಧ ನವಜಾತ ಶಿಶುವಿನ ಬಾಯಿಗೆ ಕಲ್ಲು ತುಂಬಿ, ತುಟಿಗೆ ಗಮ್ ಹಾಕಿ ಕಾಡಿನಲ್ಲಿ ಬಿಟ್ಟು ಹೋದಂತಹ ಅಮಾನವೀಯ ಘಟನೆ ರಾಜಸ್ಥಾನದಲ್ಲಿ ನಡೆದಿದ್ದು ಈ ಘಟನೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.
05:55 PM (IST) Sep 25
TCS share price H-1B Visa Rule Changesಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (TCS) ಷೇರುಗಳು 52 ವಾರಗಳ ಕನಿಷ್ಠ ಮಟ್ಟಕ್ಕೆ ಕುಸಿದಿವೆ. ಹೊಸ H-1B ವೀಸಾ ನಿಯಮಗಳ ಘೋಷಣೆಯು ಭಾರತೀಯ ಐಟಿ ಕಂಪನಿಗಳ ಮೇಲೆ ತೀವ್ರ ಪರಿಣಾಮ ಬೀರಿದೆ.
04:30 PM (IST) Sep 25
Sameer Wankhede sues Shah Rukh Khan: ಡ್ರಗ್ ಕೇಸಲ್ಲಿ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ನನ್ನು ಬಂಧಿಸಿ ವಿಚಾರಣೆ ನಡೆಸಿದ ಮಾಜಿ ಎನ್ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ಅವರು ನಟ ಶಾರುಖ್ ಖಾನ್ ಮತ್ತು ನೆಟ್ಫ್ಲಿಕ್ಸ್ ವಿರುದ್ಧ ದೆಹಲಿ ಹೈಕೋರ್ಟ್ನಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
04:30 PM (IST) Sep 25
Tata Motors Stock Falls as JLR Cyberattack Causes £2 Billion Loss ಟಾಟಾ ಮೋಟಾರ್ಸ್ನ ಅಂಗಸಂಸ್ಥೆಯಾದ ಜಾಗ್ವಾರ್ ಲ್ಯಾಂಡ್ ರೋವರ್ (ಜೆಎಲ್ಆರ್) ಮೇಲೆ ನಡೆದ ಸೈಬರ್ ದಾಳಿಯಿಂದಾಗಿ ಕಂಪನಿಗೆ ₹23,860 ಕೋಟಿಗೂ ಅಧಿಕ ನಷ್ಟವಾಗುವ ಸಾಧ್ಯತೆಯಿದೆ.
04:27 PM (IST) Sep 25
71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ 'ಜವಾನ್' ಚಿತ್ರಕ್ಕಾಗಿ ಶಾರುಖ್ ಖಾನ್ಗೆ ಪ್ರಶಸ್ತಿ ತಂದುಕೊಟ್ಟ ತೀರ್ಪುಗಾರರಲ್ಲಿ ಒಬ್ಬರಾದ ನಟಿ ಪ್ರಕೃತಿ ಮಿಶ್ರಾ, ಶಾರುಖ್ ತಮ್ಮ ಕೈಕುಲುಕಿದ ನಂತರ ಆ ಕೈಯನ್ನು ತೊಳೆದುಕೊಂಡಿಲ್ಲ ಎಂದು ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದಾರೆ.
03:10 PM (IST) Sep 25
Headmaster's belt treatment: ಶಿಕ್ಷಣಾಧಿಕಾರಿಯ ಮೇಲೆ ಮುಖ್ಯ ಶಿಕ್ಷಕರೊಬ್ಬರು ಅವರ ಕಚೇರಿಯಲ್ಲೇ ಬೆಲ್ಟ್ನಿಂದ ಹಲ್ಲೆ ನಡೆಸಿದ್ದಾರೆ. ಸಿಸಿ ಕ್ಯಾಮರಾದಲ್ಲಿ ಈ ದೃಶ್ಯ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
01:55 PM (IST) Sep 25
Wife Bites Husband Ear: ಉತ್ತರ ಪ್ರದೇಶದ ಕಾನ್ಪುರದಲ್ಲಿ ಗಂಡ-ಹೆಂಡತಿಯ ಜಗಳ ವಿಕೋಪಕ್ಕೆ ತಿರುಗಿದ್ದು, ಪತ್ನಿ ತನ್ನ ಪತಿಯ ಕಿವಿಯನ್ನು ಕಚ್ಚಿ ಗಾಯಗೊಳಿಸಿದ್ದಾಳೆ. 8 ವರ್ಷಗಳ ಹಿಂದೆ ಈ ದಂಪತಿ ಪ್ರೀತಿಸಿ ಮದ್ವೆಯಾಗಿದ್ದರು.
01:41 PM (IST) Sep 25
ಆಧಾರ್ ಕಾರ್ಡ್ ದೇಶದ ನಾಗರಿಕರಿಗೆ ಅತ್ಯಂತ ಪ್ರಮುಖ ದಾಖಲೆಯಾಗಿದ್ದು, ಅದರಲ್ಲಿನ ತಪ್ಪು ಮಾಹಿತಿಗಳು ಹಲವು ಸಮಸ್ಯೆಗಳಿಗೆ ಕಾರಣವಾಗಬಹುದು. ಈ ಲೇಖನವು UIDAI ಅಧಿಕೃತ ವೆಬ್ಸೈಟ್ ಬಳಸಿ, ಮನೆಯಲ್ಲೇ ಕುಳಿತು ಆನ್ಲೈನ್ ಮೂಲಕ ನಿಮ್ಮ ಆಧಾರ್ ವಿವರಗಳನ್ನು ಹಂತ-ಹಂತವಾಗಿ ಸರಿಪಡಿಸುವ ಮಾಹಿತಿ ಇಲ್ಲಿದೆ.
01:03 PM (IST) Sep 25
"Too Much" ಚಾಟ್ ಶೋನಲ್ಲಿ ನಟ ಸಲ್ಮಾನ್ ಖಾನ್ ಶೀಘ್ರದಲ್ಲೇ ತಾನು ಅಪ್ಪನಾಗುವುದಾಗಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಈ ವಿಷಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದ್ದು, ಆಕೆ ಯಾರಿರಬಹುದು ಎಂಬ ಕುತೂಹಲ ಮೂಡಿಸಿದೆ.
12:06 PM (IST) Sep 25
youtube affiliate marketing ಯುಟ್ಯೂಬ್ ಕಂಟೆಂಟ್ ಕ್ರಿಯೇಟರ್ಗಳು ತಮ್ಮ ಆದಾಯವನ್ನು ಹಲವು ವಿಧಗಳಲ್ಲಿ ಹೆಚ್ಚಿಸಿಕೊಳ್ಳಬಹುದು. ಜಾಹೀರಾತುಗಳ ಜೊತೆಗೆ, ಚಾನೆಲ್ ಮೆಂಬರ್ಶಿಪ್, ಸ್ಪಾನ್ಸರ್ ಕಂಟೆಂಟ್ ಮತ್ತು ವಿಶೇಷ ಲಿಂಕ್ಗಳ ಮೂಲಕ ಹಣ ಗಳಿಸುವ ಮಾರ್ಗಗಳ ಬಗ್ಗೆ ಈ ಲೇಖನದಲ್ಲಿ ವಿವರಿಸಲಾಗಿದೆ.
11:52 AM (IST) Sep 25
Pandit Deendayal Upadhyaya: ಪಂಡಿತ ದೀನದಯಾಳರು ತ್ಯಾಗಮಯ ಜೀವನದ ಮೂಲಕ ರಾಷ್ಟ್ರಸೇವೆಗೆ ತಮ್ಮನ್ನು ಅರ್ಪಿಸಿಕೊಂಡರು. ಪಾಶ್ಚಾತ್ಯ ಸಿದ್ಧಾಂತಗಳಿಗೆ ಪರ್ಯಾಯವಾಗಿ ಭಾರತೀಯ ಸಂಸ್ಕೃತಿ ಬೇರುಗಳಿಂದ ‘ಏಕಾತ್ಮ ಮಾನವ ದರ್ಶನ’ ನೀಡಿದರು. 'ಅಂತ್ಯೋದಯ'ದ ಚಿಂತನೆಯೇ ಇಂದಿನ ಬಿಜೆಪಿಯ ನೀತಿಗಳಿಗೆ ಬೌದ್ಧಿಕ ಬುನಾದಿ
11:31 AM (IST) Sep 25
ಆರ್ಬಿಐನ ಹೊಸ ನಿಯಮದ ಪ್ರಕಾರ, PhonePe, Paytm ನಂತಹ ಅಪ್ಲಿಕೇಶನ್ಗಳಲ್ಲಿ ಕ್ರೆಡಿಟ್ ಕಾರ್ಡ್ ಬಳಸಿ ಬಾಡಿಗೆ ಪಾವತಿಸುವುದನ್ನು ನಿಲ್ಲಿಸಲಾಗಿದೆ. ವಂಚನೆ ತಡೆಗಟ್ಟಲು ಈ ಕ್ರಮ ಕೈಗೊಳ್ಳಲಾಗಿದ್ದು, ಇದರಿಂದಾಗಿ ಅನೇಕ ಫಿನ್ಟೆಕ್ ಕಂಪನಿಗಳು ತಮ್ಮ ಬಾಡಿಗೆ ಪಾವತಿ ಸೇವೆಗಳನ್ನು ಸ್ಥಗಿತಗೊಳಿಸಿವೆ.
11:04 AM (IST) Sep 25
today's gold price drop: ಸತತ ಎರಡನೇ ದಿನವೂ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದ್ದು, 22 ಮತ್ತು 24 ಕ್ಯಾರಟ್ ಚಿನ್ನದ ದರಗಳು ಕುಸಿದಿವೆ. ಈ ಲೇಖನವು ದೇಶದ ಪ್ರಮುಖ ನಗರಗಳಲ್ಲಿನ ಇಂದಿನ ಚಿನ್ನದ ದರಗಳು ಮತ್ತು ಬೆಳ್ಳಿ ಬೆಲೆಯ ಸ್ಥಿರತೆಯ ಬಗ್ಗೆ ಮಾಹಿತಿ ನೀಡುತ್ತದೆ..