LIVE NOW
Published : Jul 14, 2026, 05:16 AM ISTUpdated : Jul 14, 2026, 06:59 AM IST

India Latest News Live: ಗೃಹಲಕ್ಷ್ಮೀ ರೀತಿಯ ಸ್ಕೀಂನಿಂದ 92 ಲಕ್ಷ ಜನಕ್ಕೆ ಶಾಕ್; 14000 ಪುರುಷರಿಗೂ ಯೋಜನೆ ಲಾಭ

ಸಾರಾಂಶ

ಗೋರಖ್‌ಪುರ: ಅಯೋಧ್ಯೆ ರಾಮ ಮಂದಿರ ದೇಣಿಗೆ ಅಕ್ರಮದ ಬಗ್ಗೆ ವಿವಾದಾತ್ಮಕ ಪೋಸ್ಟರ್‌ ಹಾಕಿದ್ದ ಸಮಾಜವಾದಿ ಪಕ್ಷ (ಎಸ್‌ಪಿ) ನಾಯಕ ಅರವಿಂದ್ ಉಪೇಂದ್ರ ಶುಕ್ಲಾ ಸೇರಿ ಮೂವರನ್ನು ಬಂಧಿಸಲಾಗಿದೆ. ಶುಕ್ಲಾ ಜೊತೆಗೆ, ಕಾರ್ಮಿಕ ಭರತ್ ನಿಶಾದ್ ಮತ್ತು ವರ್ಣಚಿತ್ರಕಾರ ರಾಮಚಂದ್ರ ಮೌರ್ಯ ಅವರನ್ನು ಈ ಸಂಬಂಧ ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. ಈ ಪೋಸ್ಟರ್‌ನಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮತ್ತು ಉತ್ತರ ಪ್ರದೇಶ ಸರ್ಕಾರವನ್ನು ಗುರಿಯಾಗಿಸಿಕೊಂಡು ಘೋಷಣೆಗಳಿದ್ದವು. ಅಂತಹ ಎಲ್ಲಾ ಬ್ಯಾನರ್‌ಗಳನ್ನು ತೆಗೆದುಹಾಕಲಾಗಿದೆ.

ladki bahin yojana

06:59 AM (IST) Jul 14

ಗೃಹಲಕ್ಷ್ಮೀ ರೀತಿಯ ಸ್ಕೀಂನಿಂದ 92 ಲಕ್ಷ ಜನಕ್ಕೆ ಶಾಕ್; 14000 ಪುರುಷರಿಗೂ ಯೋಜನೆ ಲಾಭ

ಕರ್ನಾಟಕದ ಗೃಹಲಕ್ಷ್ಮಿ ಮಾದರಿಯ, ಮಹಾರಾಷ್ಟ್ರದ ‘ಮಾಝಿ ಲಡ್ಕಿ ಬಹಿನ್‌ ಯೋಜನೆ’ಯ ಪುನರ್‌ ಪರಿಶೀಲನೆ ನಡೆಸಲಾಗಿದೆ. ಈ ಪರಿಶೀಲನೆ ಬಳಿಕ, 14,000 ಪುರುಷರು ಸೇರಿದಂತೆ ಒಟ್ಟು 92 ಲಕ್ಷ ಅನರ್ಹ ಫಲಾನುಭವಿಗಳನ್ನು ಯೋಜನೆಯಿಂದ ಕೈಬಿಡಲಾಗಿದೆ.
Read Full Story

06:48 AM (IST) Jul 14

ಮಾಜಿ ಉಗ್ರರ ಸಂದರ್ಶನದಲ್ಲಿ ಬೆಳಕಿಗೆ ಬಂದ ವಿಷಯ ಕೇಳಿ ಇಡೀ ವಿಶ್ವವೇ ಶಾಕ್; ಆಘಾತಕಾರಿ ಸತ್ಯ

ಐಸಿಸ್, ಅಲ್‌ ಖೈದಾ, ಬೋಕೊ ಹರಾಮ್‌ನಂತಹ ಉಗ್ರ ಸಂಘಟನೆಗಳು ಬಾಂಬ್‌ ತಯಾರಿಕೆ, ಶಸ್ತ್ರಾಸ್ತ್ರಗಳ ಉತ್ಪಾದನೆ ಹಾಗೂ ದಾಳಿಗಳನ್ನು ಸಂಘಟಿಸಲು ಎಐ ಚಾಟ್‌ಬಾಟ್‌ಗಳನ್ನು ಬಳಸುತ್ತಿವೆ. ಮಾಜಿ ಉಗ್ರರ ಸಂದರ್ಶನವನ್ನು ಆಧರಿಸಿದ ಅಧ್ಯಯನವೊಂದು ಈ ಆಘಾತಕಾರಿ ಸತ್ಯವನ್ನು ಬಹಿರಂಗಪಡಿಸಿದ್ದು, ಉಗ್ರರಿಗೆ ಎಐ ಬಳಕೆಯ ಬಗ್ಗೆ ವಿಶೇಷ ತರಬೇತಿಯನ್ನೂ ನೀಡಲಾಗುತ್ತಿದೆ.
Read Full Story

06:20 AM (IST) Jul 14

ಅಯೋಧ್ಯೆ ರಾಮಮಂದಿರ ದೇಣಿಗೆ ಕಳ್ಳತನ ಪ್ರಕರಣ - ಟ್ರಸ್ಟ್‌ಗೆ ಸುಪ್ರೀಂ ಕೋರ್ಟ್ ತನಿಖಾಸ್ತ್ರ

ಅಯೋಧ್ಯೆ ರಾಮಮಂದಿರ ದೇಣಿಗೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ, ಎಸ್‌ಐಟಿಯಿಂದ ತನಿಖಾ ವರದಿ ಕೇಳಿರುವ ಸುಪ್ರೀಂ ಕೋರ್ಟ್‌, ಟ್ರಸ್ಟ್‌ಗೆ ನೋಟಿಸ್ ಜಾರಿ ಮಾಡಿದೆ. ಈ ವಿವಾದದ ನಡುವೆಯೇ, ಟ್ರಸ್ಟ್‌ ಸಿಇಒ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಮತ್ತೊಂದೆಡೆ ಟ್ರಸ್ಟ್‌ನ ಪ್ರಮುಖರ ವಿರುದ್ಧ ಎಫ್‌ಐಆರ್‌ ದಾಖಲಿಸಲು ವಕೀಲರು ನ್ಯಾಯಾಲಯದ ಮೊರೆ ಹೋಗಿದ್ದಾರೆ.
Read Full Story

05:56 AM (IST) Jul 14

ಚೀನಾಗೆ ಸೆಡ್ಡು ಹೊಡೆದ ಬೆಂಗ್ಳೂರು ಸ್ಟಾರ್ಟಪ್‌; ಮ್ಯಾಗ್ನೆಟ್‌ ಇಲ್ಲದ EV ಮೋಟರ್‌ ಉತ್ಪಾದನೆ

ಬೆಂಗಳೂರು ಮೂಲದ 'ವಿಮಾಗ್‌ ಲ್ಯಾಬ್ಸ್‌' ಸ್ಟಾರ್ಟಪ್, ಅಯಸ್ಕಾಂತ ರಹಿತ ಇವಿ ಮೋಟರ್ ಅಭಿವೃದ್ಧಿಪಡಿಸಿದೆ. ಅಪರೂಪದ ಖನಿಜಗಳಿಗಾಗಿ ಚೀನಾದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಗುರಿಯೊಂದಿಗೆ, ಈ ತಂತ್ರಜ್ಞಾನವು ತಾಮ್ರದ ಸುರುಳಿಗಳು ಮತ್ತು ಸಾಫ್ಟ್‌ವೇರ್ ಬಳಸಿ ಕಾರ್ಯನಿರ್ವಹಿಸುತ್ತದೆ, ಇದು ಭಾರತದ ಇವಿ ಉದ್ಯಮದಲ್ಲಿ ಸ್ವಾವಲಂಬನೆಗೆ ದೊಡ್ಡ ಹೆಜ್ಜೆಯಾಗಿದೆ.
Read Full Story

05:46 AM (IST) Jul 14

ಫುಟ್ಬಾಲ್‌ ವಿಶ್ವಕಪ್‌ ಫೈನಲ್‌ ನಡೆಯುವ ಮೈದಾನದ ಹುಲ್ಲು ಮಾರಾಟಕ್ಕಿಟ್ಟ ಫಿಫಾ! ಬೆಲೆ ಎಷ್ಟು?

2026ರ ಫಿಫಾ ವಿಶ್ವಕಪ್ ಫೈನಲ್ ಪಂದ್ಯ ನಡೆಯುವ ನ್ಯೂಯಾರ್ಕ್‌ ಕ್ರೀಡಾಂಗಣದ ಹುಲ್ಲನ್ನು ಫಿಫಾ ಸಂಗ್ರಹಣಾ ವಸ್ತುವಾಗಿ ಮಾರಾಟ ಮಾಡುತ್ತಿದೆ. ಅಕ್ರಿಲಿಕ್ ಕ್ಯೂಬ್‌ನಲ್ಲಿ ಸಂರಕ್ಷಿಸಲಾದ ಈ ಹುಲ್ಲಿನ ತುಣುಕುಗಳು ವಿವಿಧ ಪ್ಯಾಕೇಜ್‌ಗಳಲ್ಲಿ ಲಭ್ಯವಿದೆ.

Read Full Story

More Trending News