ನವದೆಹಲಿ: ಗೃಹಬಳಕೆಯ ಎಲ್ಪಿಜಿ ಸಿಲಿಂಡರ್ ವಿತರಕರ ಸೇವೆಯಿಂದ ಬೇಸತ್ತಿದ್ದಲ್ಲಿ, ಗ್ರಾಹಕರು ಇನ್ನು ತಮ್ಮಿಷ್ಟದ ಕಂಪನಿಗಳಿಂದ ಸೇವೆ ಪಡೆಯುವ ವ್ಯವಸ್ಥೆ ಶೀಘ್ರ ಜಾರಿಗೆ ಬರುವ ನಿರೀಕ್ಷೆಯಿದೆ. ಇದರಿಂದ ಕೊಳ್ಳುಗರಿಗೆ ಹೆಚ್ಚಿನ ಆಯ್ಕೆಗಳು ಸಿಗಲಿದೆ. ಪ್ರಸ್ತುತ ಅದೇ ಕಂಪನಿಯ ಯಾವ ಡೀಲರ್ ಅನ್ನು ಬೇಕಾದರೂ ಆರಿಸಿಕೊಳ್ಳುವ ಸ್ವಾತಂತ್ರವಿತ್ತು. ಉದಾಹರಣೆಗೆ, ಎಚ್.ಪಿ ಗ್ಯಾಸ್ನ ಎ ವಿತರಕರಿಂದ ಕೊಳ್ಳುತ್ತಿದ್ದವರು ಬಿ ವಿತರಕರಿಂದ ಕೊಳ್ಳಬಹುದಿತ್ತು. ಆದರೆ ಇಂಡೇನ್ಗೆ ಬದಲಾಯಿಸಲು ಅವಕಾಶ ಇರಲಿಲ್ಲ. ಆದರೀಗ, ಡೀಲರ್ಗಳ ಬದಲಾವಣೆ ಜತೆಗೆ ಕಂಪನಿಯನ್ನೂ ಬದಲಾಯಿಸಲು (ಎಚ್.ಪಿಯಿಂದ ಇಂಡೇನ್ಗೆ) ಅನುವು ಮಾಡಿಕೊಡುವ ಬಗ್ಗೆ ಚಿಂತನೆ ನಡೆದಿದೆ.

10:55 PM (IST) Sep 29
PoK Protests Demand Azaadi from Pakistan ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ), ಅವಾಮಿ ಕ್ರಿಯಾ ಸಮಿತಿಯು ದಶಕಗಳ ನಿರ್ಲಕ್ಷ್ಯ, ಸಂಪನ್ಮೂಲಗಳ ಶೋಷಣೆ ಮತ್ತು ರಾಜಕೀಯ ಹಕ್ಕುಗಳ ನಿರಾಕರಣೆಯನ್ನು ವಿರೋಧಿಸಿ ಬೃಹತ್ ಮುಷ್ಕರಕ್ಕೆ ಕರೆ ನೀಡಿದೆ.
09:28 PM (IST) Sep 29
Dhanashree Verma on chahal ಕೆಲವು ತಿಂಗಳ ಹಿಂದೆ ರಾಜ್ ಶಮಾನಿ ಅವರ ಪಾಡ್ಕ್ಯಾಸ್ಟ್ನಲ್ಲಿ ಕಾಣಿಸಿಕೊಂಡಾಗ, ಚಾಹಲ್ ವಿಚ್ಛೇದನ ಪ್ರಕ್ರಿಯೆಯ ಸಮಯದಲ್ಲಿ "ವಂಚಕ" ಎಂದು ಧನಶ್ರಿ ಕರೆದಿದ್ದಳು ಎಂದಿದ್ದರು..
08:47 PM (IST) Sep 29
China's Three Gorges Dam Shifted Earth's Axis ಚೀನಾದ ಅತ್ಯಾಧುನಿಕ ತಂತ್ರಜ್ಞಾನವು ಭೂಮಿಯ ತಿರುಗುವಿಕೆಯ ವೇಗದ ಮೇಲೂ ಪರಿಣಾಮ ಬೀರಿದೆ. ಮಾನವ ಕ್ರಿಯೆಗಳು ಪ್ರಕೃತಿಯ ಪ್ರಕ್ರಿಯೆಗಳ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದಕ್ಕೆ ಇದು ಪ್ರಮುಖ ಉದಾಹರಣೆ ಎಂದು ನಾಸಾ ಹೇಳಿದೆ.
07:11 PM (IST) Sep 29
Actress Sohani Kumari Fiancé Sawai Singh Dies ನಟಿ ಸೋಹಾನಿ ಕುಮಾರಿ ಅವರ ನಿಶ್ಚಿತ ವರ ಸವಾಯಿ ಸಿಂಗ್ ಹೈದರಾಬಾದ್ನ ತಮ್ಮ ಫ್ಲಾಟ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾವಿಗೂ ಮುನ್ನ ಸೆಲ್ಫಿ ವಿಡಿಯೋ ಮಾಡಿದ್ದು, ಇದರಲ್ಲಿ ತನ್ನ ಹಿಂದಿನ ತಪ್ಪುಗಳ ಬಗ್ಗೆ ಮಾತನಾಡಿದ್ದಾರೆ.
07:03 PM (IST) Sep 29
US immigration crackdown: ಅಮೆರಿಕಾದಲ್ಲಿ ಅಕ್ರಮ ವಲಸಿಗರ ವಿರುದ್ಧ ಕಾರ್ಯಾಚರಣೆ ತೀವ್ರಗೊಂಡಿದ್ದು, ಚಿಕಾಗೋದಲ್ಲಿ ಫುಡ್ ಡೆಲಿವರಿ ಬಾಯ್ನನ್ನು ಅಧಿಕಾರಿಗಳು ಬೆನ್ನಟ್ಟಿದ ವೀಡಿಯೋ ವೈರಲ್ ಆಗಿದೆ. ಇದೇ ವೇಳೆ, ಯುನೈಟೆಡ್ ಕಿಂಗ್ಡಮ್ (ಯುಕೆ) ಕೂಡ ವಲಸೆ ಕಾನೂನುಗಳನ್ನು ಬಿಗಿಗೊಳಿಸಲು ಮುಂದಾಗಿದೆ.
06:21 PM (IST) Sep 29
ಏಷ್ಯಾಕಪ್ ಫೈನಲ್ನಲ್ಲಿ ಭಾರತ ಅದ್ಭುತ ಗೆಲುವು ಸಾಧಿಸಿದೆ. ಐದು ವಿಕೆಟ್ಗಳ ಅಂತರದಿಂದ ಗೆದ್ದು ಹೊಸ ಇತಿಹಾಸ ಸೃಷ್ಟಿಸಿದೆ. ಪಹಲ್ಗಾಮ್ ದಾಳಿಯ ನಂತರ ಉಭಯ ದೇಶಗಳ ನಡುವೆ ಉದ್ವಿಗ್ನ ವಾತಾವರಣ ಕ್ರೀಡಾಂಗಣದಲ್ಲೂ ಕಂಡುಬಂತು.
06:09 PM (IST) Sep 29
18-Month-Old Baby Kidnapped in Delhi ದೆಹಲಿಯ ಫುಟ್ಪಾತ್ನಿಂದ 18 ತಿಂಗಳ ಗಂಡು ಶಿಶುವನ್ನು ಅಪಹರಿಸಿ, ಉತ್ತರ ಪ್ರದೇಶದ ವ್ಯಕ್ತಿಯೊಬ್ಬನಿಗೆ 45 ಸಾವಿರ ರೂಪಾಯಿಗೆ ಮಾರಾಟ ಮಾಡಲಾಗಿದೆ.
06:03 PM (IST) Sep 29
2025ರ ಏಷ್ಯಾಕಪ್ ಫೈನಲ್ನಲ್ಲಿ ಪಾಕಿಸ್ತಾನವನ್ನು ಸೋಲಿಸಿದರೂ, ಭಾರತ ತಂಡವು ಪಾಕ್ ಸಚಿವ ಮೊಹ್ಸಿನ್ ನಖ್ವಿ ಅವರಿಂದ ಟ್ರೋಫಿ ಸ್ವೀಕರಿಸಲು ನಿರಾಕರಿಸಿದೆ. ಈ ಘಟನೆಯಿಂದಾಗಿ ನಖ್ವಿ ಟ್ರೋಫಿಯನ್ನು ತಮ್ಮೊಂದಿಗೆ ಹೋಟೆಲ್ಗೆ ಕೊಂಡೊಯ್ದಿದ್ದು, ಇದು ದೊಡ್ಡ ವಿವಾದಕ್ಕೆ ಕಾರಣವಾಗಿದೆ.
06:00 PM (IST) Sep 29
ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರ ಆತ್ಮಕತೆ 'ಐ ಆಮ್ ಜಾರ್ಜಿಯಾ'ದ ಭಾರತೀಯ ಆವೃತ್ತಿಗೆ ಪ್ರಧಾನಿ ನರೇಂದ್ರ ಮೋದಿ ಮುನ್ನುಡಿ ಬರೆದಿದ್ದಾರೆ. ಮೆಲೋನಿಯವರ ಜೀವನ ಪ್ರಯಾಣವನ್ನು 'ನಾರಿಶಕ್ತಿ'ಗೆ ಹೋಲಿಸಿರುವ ಮೋದಿ, ಅವರ ದೃಢ ನಾಯಕತ್ವವನ್ನು ಶ್ಲಾಘಿಸಿದ್ದಾರೆ.
04:35 PM (IST) Sep 29
Karur Stampede Vijay Delayed Arrival in Tamil nadu ಕರೂರಿನಲ್ಲಿ ನಡೆದ ಟಿವಿಕೆ ಮೆರವಣಿಗೆ ವೇಳೆ ಸಂಭವಿಸಿದ ಕಾಲ್ತುಳಿತಕ್ಕೆ ನಟ ವಿಜಯ್ ತಡವಾಗಿ ಬಂದಿದ್ದೇ ಪ್ರಮುಖ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಈ ದುರಂತದಲ್ಲಿ 41 ಮಂದಿ ಸಾವನ್ನಪ್ಪಿದ್ದಾರೆ.
04:26 PM (IST) Sep 29
Veer Sharma Tragic death: 'ವೀರ್ ಹನುಮಾನ್' ಧಾರಾವಾಹಿ ಖ್ಯಾತಿಯ ಬಾಲ ಕಲಾವಿದ ವೀರ್ ಶರ್ಮಾ ಮತ್ತು ಅವರ ಸಹೋದರ ಶೌರ್ಯ ಶರ್ಮಾ ಮನೆಯಲ್ಲಿ ಸಂಭವಿಸಿದ ಬೆಂಕಿ ಅನಾಹುತದಲ್ಲಿ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಪೋಷಕರು ಮನೆಯಲ್ಲಿಲ್ಲದಿದ್ದಾಗ ಈ ದುರಂತ ಸಂಭವಿಸಿದೆ.
04:07 PM (IST) Sep 29
2025ರ ಏಷ್ಯಾಕಪ್ ಫೈನಲ್ನಲ್ಲಿ ಪಾಕಿಸ್ತಾನವನ್ನು ಸೋಲಿಸಿ ಭಾರತ ಚಾಂಪಿಯನ್ ಆಗಿದೆ. ಆದರೆ, ಪಾಕ್ ಮೂಲದ ಎಸಿಸಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರಿಂದ ಟ್ರೋಫಿ ಸ್ವೀಕರಿಸಲು ಭಾರತೀಯ ತಂಡ ನಿರಾಕರಿಸಿದ್ದರಿಂದ ವಿವಾದ ಸೃಷ್ಟಿಯಾಗಿದೆ. ಇದರಿಂದ ಕೋಪಗೊಂಡ ನಖ್ವಿ ಟ್ರೋಫಿಯೊಂದಿಗೆ ಹೋಟೆಲ್ಗೆ ತೆರಳಿದರು.
03:31 PM (IST) Sep 29
Shahid Siddiqui on Azam Khan: ಭೂ ಆಕ್ರಮಣ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ ಮತ್ತು ಅವರ ಪುತ್ರನಿಗೆ ಜೈಲಿನಲ್ಲಿ ಸ್ಲೋ ಪಾಯಿಸನ್ ನೀಡಲಾಗುತ್ತಿತ್ತು ಎಂದು ಮಾಜಿ ರಾಜ್ಯಸಭಾ ಸದಸ್ಯ ಶಾಹೀದ್ ಸಿದ್ಧಿಕಿ ಆರೋಪಿಸಿದ್ದಾರೆ.
02:32 PM (IST) Sep 29
Bihar assembly election strategy: ಬಿಹಾರ ವಿಧಾನಸಭಾ ಚುನಾವಣೆಯನ್ನು ಗೆಲ್ಲಲು ಕಾಂಗ್ರೆಸ್, ಕರ್ನಾಟಕ ಮತ್ತು ತೆಲಂಗಾಣ ಮಾದರಿಯ 'ದಶ ಸೂತ್ರ' ರಣತಂತ್ರವನ್ನು ಸಿದ್ಧಪಡಿಸಿದೆ. ಇದು 5+1+4=10 ಲೆಕ್ಕಾಚಾರವಾಗಿದೆ.
02:27 PM (IST) Sep 29
01:56 PM (IST) Sep 29
TTD clerk Ravikumar case: ತಿರುಪತಿ ದೇವಸ್ಥಾನದಲ್ಲಿ 20 ವರ್ಷಗಳ ಕಾಲ ಕ್ಲಾರ್ಕ್ ಆಗಿದ್ದವ ಹುಂಡಿ ಹಣ ಕದ್ದು ಸಾವಿರ ಕೋಟಿಗೂ ಅಧಿಕ ಆಸ್ತಿ ಮಾಡಿದ್ದರು. ಸಿಕ್ಕಿಬಿದ್ದ ನಂತರ, ಕದ್ದ ಹಣದಿಂದ ಖರೀದಿಸಿದ ಕೆಲವು ಆಸ್ತಿಗಳನ್ನು ದೇವಸ್ಥಾನಕ್ಕೆ ದಾನ ಮಾಡಿದ್ದರು. ಮುಂದೇನಾಯ್ತು ಡಿಟೇಲ್ಡ್ ಸ್ಟೋರಿ ಇಲ್ಲಿದೆ.
01:23 PM (IST) Sep 29
12:24 PM (IST) Sep 29
ಟೈಮ್ಸ್ ನೌ ಮತ್ತು ಜೆವಿಸಿ ನಡೆಸಿದ ಬಿಹಾರ ವಿಧಾನಸಭಾ ಚುನಾವಣಾ ಪೂರ್ವ ಸಮೀಕ್ಷೆಯು ಒಂದು ಮೈತ್ರಿಕೂಟಕ್ಕೆ ಸ್ಪಷ್ಟ ಬಹುಮತವನ್ನು ಭವಿಷ್ಯ ನುಡಿದಿದೆ. ಆ ಮೈತ್ರಿ ಕೂಟ ಯಾವುದು ಎಂದು ನೋಡೋಣ ಬನ್ನಿ
12:17 PM (IST) Sep 29
Mother's Rage: ಮಹಾರಾಷ್ಟ್ರದ ಪಾಲ್ಘರ್ನಲ್ಲಿ, ಚಿಕನ್ ಕರಿ ಬೇಕೆಂದು ಹಠ ಮಾಡಿದ 7 ವರ್ಷದ ಮಗನನ್ನು ತಾಯಿಯೊಬ್ಬಳು ಲಟ್ಟಣಿಗೆಯಿಂದ ಹೊಡೆದು ಕೊಂದಿದ್ದಾಳೆ. ಈ ಘಟನೆಯಲ್ಲಿ 10 ವರ್ಷದ ಮಗಳು ಗಂಭೀರವಾಗಿ ಗಾಯಗೊಂಡಿದ್ದು, ಪೊಲೀಸರು ಆರೋಪಿ ತಾಯಿಯನ್ನು ಬಂಧಿಸಿ ಕೊಲೆ ಪ್ರಕರಣ ದಾಖಲಿಸಿದ್ದಾರೆ.
11:45 AM (IST) Sep 29
ಏಷ್ಯಾಕಪ್ ಫೈನಲ್ನಲ್ಲಿ ಪಾಕಿಸ್ತಾನವನ್ನು 5 ವಿಕೆಟ್ಗಳಿಂದ ಮಣಿಸಿದ ಭಾರತ, ದಾಖಲೆಯ 9ನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿದೆ. ಆರಂಭಿಕ ಕುಸಿತದ ಹೊರತಾಗಿಯೂ ತಿಲಕ್ ವರ್ಮಾ ಮತ್ತು ಶಿವಂ ದುಬೆ ಅವರ ಹೋರಾಟದಿಂದ ಟೀಂ ಇಂಡಿಯಾ ರೋಚಕ ಜಯ ಸಾಧಿಸಿತು.
11:13 AM (IST) Sep 29
Saving vs Living: ಜಪಾನ್ನ ಸುಜುಕಿ ಎಂಬ ವ್ಯಕ್ತಿ ಯೌವ್ವನದಲ್ಲಿ ತೀವ್ರ ಮಿತವ್ಯಯದಿಂದ ಬದುಕಿ ₹3.9 ಕೋಟಿ ಉಳಿತಾಯ ಮಾಡಿದ್ದರು. ಆದರೆ, 67ನೇ ವಯಸ್ಸಿನಲ್ಲಿ ಪತ್ನಿಯ ಸಾವಿನ ನಂತರ, ಹಣಕ್ಕಿಂತ ಜೀವನದ ಸುಂದರ ಕ್ಷಣಗಳು ಮತ್ತು ಅನುಭವಗಳಿಗೆ ಆದ್ಯತೆ ನೀಡದಿದ್ದಕ್ಕೆ ವಿಷಾದ ವ್ಯಕ್ತಪಡಿಸಿದ್ದಾರೆ.
10:50 AM (IST) Sep 29
ನವದೆಹಲಿ: 2025ರ ಏಷ್ಯಾಕಪ್ ಟೂರ್ನಿಯ ಫೈನಲ್ನಲ್ಲಿ ಬದ್ದ ಎದುರಾಳಿ ಪಾಕಿಸ್ತಾನವನ್ನು ಭಾರತ ಬಗ್ಗುಬಡಿಯುತ್ತಿದ್ದಂತೆಯೇ ಪ್ರಧಾನಿ ನರೇಂದ್ರ ಮೋದಿ, ನೆರೆಯ ಪಾಕಿಸ್ತಾನವನ್ನು ಕಾಲೆಳೆದಿದ್ದಾರೆ. ಈ ಮೂಲಕ ಸೋತ ಪಾಕ್ ಗಾಯದ ಮೇಲೆ ಬರೆ ಎಳೆಯುವ ಕೆಲಸ ಮಾಡಿದ್ದಾರೆ.
10:01 AM (IST) Sep 29
ದುಬೈ: 2025ರ ಏಷ್ಯಾಕಪ್ ಟೂರ್ನಿಯಲ್ಲಿ ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಂ ಇಂಡಿಯಾ ಬದ್ದ ಎದುರಾಳಿ ಪಾಕಿಸ್ತಾನ ತಂಡವನ್ನು ರೋಚಕವಾಗಿ ಮಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಇದರ ಜತೆಗೆ ಚಾಂಪಿಯನ್ ಆದರೂ ಟ್ರೋಫಿ ಸ್ವೀಕರಿಸಿದೇ ಪಾಕ್ಗೆ ಮತ್ತೆ ಮುಖಭಂಗ ಮಾಡಿದೆ.