Photos| ಚೀರಾಡಲೂ ಅವಕಾಶವಿಲ್ಲ, ಕ್ಷಣಾರ್ಧದಲ್ಲಿ 7 ಮಂದಿ ಸಜೀವ ದಹನ!
First Published Feb 17, 2020, 12:01 PM ISTಲಕ್ನೋ- ಆಗ್ರಾ ಎಕ್ಸ್ ಪ್ರೆಸ್ ವೇನಲ್ಲಿರುವ ಬಂಗಾರ್ ಮೌ ಕಟ್ ಬಳಿ ಹರ್ದೋಯಿ ಕಡೆ ತೆರಳುತ್ತಿದ್ದ ವ್ಯಾನ್ ಒಂದರ ಟಯರ್ ಸಿಡಿದ ಪರಿಣಾಮ ನಿಯಂತ್ರಣ ಕಳೆದುಕೊಂಡು, ಮುಂಬದಿಯಲ್ಲಿ ಬರುತ್ತಿದ್ದ ಟ್ರಕ್ ಗೆ ಡಿಕ್ಕಿ ಹೊಡೆದಿದೆ. ವ್ಯಾನ್ ಟ್ರಕ್ ಗೆ ಡಿಕ್ಕಿ ಹೊಡೆದ ಬಳಿಕ ಭಯಾನಕ ಘಟನೆ ನಡೆದಿದೆ. ಯಾಕೆಂದರೆ ಗ್ಯಾಸ್ ಸಿಲಿಂಡರ್ ಹೊಂದಿದ್ದ ವ್ಯಾನ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಒಳಗಿದ್ದ ಜನರುಇ ತಮ್ಮನ್ನು ತಾವು ರಕ್ಷಿಸಿಕೊಳ್ಳುವುದಕ್ಕೂ ಮೊದಲೇ ಸುಟ್ಟು ಕರಕಲಾಗಿದ್ದಾರೆ. ರಕ್ಷಿಸಲು ಧಾವಿಸಿದ್ದ ಜನರೂ ಬೆಂಕಿಯನ್ನು ಕಂಡು ಹೆಜ್ಜೆ ಮುಂದಿಡಲು ಭಯ ಬಿದ್ದಿದ್ದಾರೆ. ಅಗ್ನ ನರ್ತನ ಎಷ್ಟಿತ್ತೆಂದರೆ ಒಳಗಿದ್ದ 7 ಮಂದಿಗೆ ಚೀರಾಡಲೂ ಅವಕಾಶ ಸಿಗದೆ ಜೀವಂತ ಸುಟ್ಟು ಕರಕಲಾಗಿದ್ದಾರೆ.