Sexual Relationship: ಮನೆಯಲ್ಲಿ ಯಾರೂ ಇಲ್ಲದ ವೇಳೆ ಮಗಳೊಂದಿಗೆ ಸರಸ: ನೆರೆಮನೆ ಯುವಕನ ಹತ್ಯೆ

By Kannadaprabha NewsFirst Published Dec 5, 2021, 9:39 AM IST
Highlights

*  ನೆರೆ ಮನೆಯಲ್ಲೇ ವಾಸವಿದ್ದ ನಿವೇಶ್‌
*  ಕೆಲಸಕ್ಕೆ ಹೋಗಿದ್ದ ಆಟೋ ಚಾಲಕ
*  ದೊಡ್ಡಪ್ಪನಿಂದ ಹುಡುಕಾಟ
 

ಬೆಂಗಳೂರು(ಡಿ.05):  ಮನೆಯಲ್ಲಿ ಮಗಳೊಂದಿಗೆ ಸರಸ ಸಲ್ಲಾಪದಲ್ಲಿ(Sex) ತೊಡಗಿದ್ದ ಆಕೆಯ ಪ್ರಿಯಕರನ ಮೇಲೆ ಹಲ್ಲೆಗೈದು ಹತ್ಯೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ವಿಶ್ವೇಶ್ವರಪುರಂ ಠಾಣೆ ಪೊಲೀಸರು(Police) ಬಂಧಿಸಿದ್ದಾರೆ. ವಿನೋಬಾನಗರದ ಆಟೋ ಚಾಲಕ ನಾರಾಯಣ್‌ (46) ಬಂಧಿತ. ನ.28ರಂದು ಮನೆಯಲ್ಲಿ ಮಗಳೊಂದಿಗೆ ಸರಸದಲ್ಲಿ ತೊಡಗಿದ್ದ ಆಕೆಯ ಪ್ರಿಯಕರ ನೆರ ಮನೆಯ ನಿವೇಶ್‌ ಕುಮಾರ್‌(19) ಎಂಬಾತನ ತಲೆಗೆ ಕಟ್ಟಿಗೆಯಿಂದ ಹೊಡೆದು ಹತ್ಯೆ(Murder) ಮಾಡಿದ್ದ. ಈ ಸಂಬಂಧ ದಾಖಲಾಗಿದ್ದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ(Arrest) ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ನಾರಾಯಣ್‌ ಪುತ್ರಿ ಅರ್ಧಕ್ಕೆ ವ್ಯಾಸಂಗ ಮೊಟಕುಗೊಳಿಸಿ ಮನೆಯಲ್ಲೇ ಇದ್ದಳು. ನೆರ ಮನೆಯ ನಿವಾಸಿ ನಿವೇಶ್‌ ಕುಮಾರ್‌ನನ್ನು ಪ್ರೀತಿಸುತ್ತಿದ್ದಳು(Love). ಇವರ ಪ್ರೇಮಕ್ಕೆ ಯುವತಿಯ ತಂದೆ ನಾರಾಯಣ್‌ ವಿರೋಧವಿತ್ತು. ನ.28ರಂದು ಮುಂಜಾನೆ ನಾರಾಯಣ್‌ ಎಂದಿನಂತೆ ಕೆಲಸಕ್ಕೆ ತೆರಳಿದ್ದರು. ಈ ವೇಳೆ ಪಕ್ಕದ ಮನೆಯ ಪ್ರಿಯಕರ ನಿವೇಶ್‌, ನಾರಾಯಣ್‌ ಮನೆಗೆ ಬಂದು ಪ್ರೇಯಸಿಯ ಜತೆಗೆ ಸರಸದಲ್ಲಿ ತೊಡಗಿದ್ದ. ಕೆಲವೇ ಹೊತ್ತಿನಲ್ಲಿ ನಾರಾಯಣ್‌ ಮನೆಗೆ ವಾಪಾಸಾದಾಗ ಪುತ್ರಿಯ ಜತೆಗೆ ನಿವೇಶ್‌ ಇರುವುದು ಕಂಡು ಬಂದಿದೆ. ಇದರಿಂದ ಆಕ್ರೋಶಗೊಂಡ ನಾರಾಯಣ್‌, ನಿವೇಶ್‌ನೊಂದಿಗೆ ಜಗಳಕ್ಕೆ ಬಿದ್ದಿದ್ದಾನೆ. ಜಗಳ ವಿಕೋಪಕ್ಕೆ ಹೋಗಿ ಕೋಪೋದ್ರಿಕ್ತ ನಾರಾಯಣ್‌, ಕಟ್ಟಿಗೆ ತೆಗೆದು ನಾರಾಯಣ್‌ ತೆಲೆಗೆ ಹೊಡೆದಿದ್ದ. ಇದರಿಂದ ತೀವ್ರ ಗಾಯಗೊಂಡ ನಿವೇಶ್‌, ವಿಕ್ಟೋರಿಯಾ ಆಸ್ಪತ್ರೆಗೆ ಬಂದು ದಾಖಲಾಗಿದ್ದ. ತಲೆಗೆ ತೀವ್ರ ಪೆಟ್ಟು ಬಿದ್ದಿದ್ದರಿಂದ ಚಿಕಿತ್ಸೆ ಫಲಿಸದೇ ಅಂದು ಬೆಳಗ್ಗೆ 9.30ರ ಸುಮಾರಿಗೆ ಮೃತಪಟ್ಟಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

Illicit Relationship:ಯುವಕನ ಜತೆ 2 ಮಕ್ಕಳ ತಾಯಿ ಲವ್ವಿ-ಡವ್ವಿ, ಊರೆಲ್ಲ ಸುದ್ದಿ

ಮೃತದೇಹದ(Deadbody) ವೈದ್ಯಕೀಯ ಪರೀಕ್ಷೆಯಲ್ಲಿ(Post Mortem) ನಿವೇಶ್‌ ತಲೆಗೆ ಹಾಗೂ ಮೈಗೆ ಬಲವಾದ ಪೆಟ್ಟು ಬಿದ್ದಿರುವುದು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ತನಿಖೆಗೆ ಮುಂದಾದ ಪೊಲೀಸರು, ಇದು ಅಸಹಜ ಸಾವಲ್ಲ. ಬದಲಾಗಿ ಹತ್ಯೆ ಎಂಬುದು ಗೊತ್ತಾಗಿತ್ತು. ಮೃತನ ದೊಡ್ಡಪ್ಪ ನೀಡಿದ ದೂರಿನ ಮೇರೆಗೆ ಹತ್ಯೆಯ ಜಾಡು ಹಿಡಿದು ಆರೋಪಿ ನಾರಾಯಣ್‌ನನ್ನು ಬಂಧಿಸಲಾಗಿದೆ.

ದೊಡ್ಡಪ್ಪನಿಂದ ಹುಡುಕಾಟ

ಹತ್ಯೆಯಾದ ನಿವೇಶ್‌ ವಿನೋಬಾನಗರದ ದೊಡ್ಡಪ್ಪನ ಮನೆಯಲ್ಲಿ ನೆಲೆಸಿದ್ದ. ನ.13ರಂದು ಆತನ ದೊಡ್ಡಪ್ಪ ಲೋಕನಾಥನ್‌ ಅವರ ಸಂಬಂಧಿ ಮೃತಪಟ್ಟಿದ್ದರಿಂದ ಕುಟುಂಬದ ಸಹಿತ ತಮಿಳುನಾಡಿಗೆ(Tamil Nadu) ತೆರಳಿದ್ದರು. ಹೀಗಾಗಿ ನಿವೇಶ್‌ ಮನೆಯಲ್ಲಿ ಒಬ್ಬನೇ ಇದ್ದ. ನ.29ರಂದು ಲೋಕನಾಥನ್‌ ಕುಟುಂಬ ಮನೆಗೆ ವಾಪಸಾದಾಗ ನಿವೇಶ್‌ ಮನೆಯಲ್ಲಿ ಇರಲಿಲ್ಲ. ಮೊಬೈಲ್‌ಗೆ ಕರೆ ಮಾಡಿದರೂ ಸಂಪರ್ಕಕ್ಕೆ ಸಿಗಲಿಲ್ಲ. ಹೀಗಾಗಿ ಆತನ ಫೋಟೋ ಹಿಡಿದುಕೊಂಡು ನಗರದ ಹಲವೆಡೆ ಹುಡುಕಾಟ ನಡೆಸಿದ್ದರು. ಬಳಿಕ ಅನ್ಯ ಮಾರ್ಗವಿಲ್ಲದೆ, ಡಿ.2ರಂದು ವಿಶ್ವೇಶ್ವರಪುರದ ಪೊಲೀಸ್‌ ಠಾಣೆಗೆ ಬಂದು ನಾಪತ್ತೆ ಬಗ್ಗೆ ಮಾಹಿತಿ ನೀಡಿದ್ದರು. 

ಈ ವೇಳೆ ಪೊಲೀಸರು ಲೋಕನಾಥನ್‌ ತಂದಿದ್ದ ಫೋಟೋ ಹಾಗೂ ಮೃತ ನಿವೇಶ್‌ ಫೋಟೋ ಎರಡಕ್ಕೂ ಹೋಲಿಕೆ ಇತ್ತು. ಹೀಗಾಗಿ ಲೋಕನಾಥನ್‌ ಅವರು ಮೃತದೇಹ ತೋರಿಸಿದಾಗ ಅದು ನಿವೇಶ್‌ನ ಗುರುತು ಪತ್ತೆಯಾಗಿತ್ತು.

ಗಂಡನೊಂದಿಗೆ ಅಕ್ರಮ ಸಂಬಂಧ: ಹೆಂಡ್ತಿಯಿಂದ ಮಹಿಳೆಯ ಕಿಡ್ನಾಪ್‌..!

ಅನೈತಿಕ ಸಂಬಂಧ ಪ್ರಶ್ನಿಸಿದ್ದಕ್ಕೆ ತಾಯಿ ಪ್ರಿಯಕರನಿಂದ ಮಗನ ಬರ್ಬರ ಹತ್ಯೆ

ತನ್ನ ತಾಯಿ ಜತೆಗಿನ ಅನೈತಿಕ ಸಂಬಂಧವನ್ನು ಪ್ರಶ್ನಿಸಿದ್ದ ಮಗನನ್ನು ತಾಯಿಯ ಪ್ರಿಯಕರ ಚಾಕುವಿನಿಂದ ಕೊಂದಿರುವ ಘಟನೆ ಹಲಸೂರು ಸಮೀಪ ನಡೆದಿದೆ. 

ಮರ್ಫಿ ಟೌನ್‌ ನಿವಾಸಿ ನಂದು(17) ಕೊಲೆಯಾದ ದುರ್ದೈವಿ. ಈ ಪ್ರಕರಣ ಸಂಬಂಧ ಆರೋಪಿ ಬಾಗಲೂರು ಸಮೀಪದ ನಿವಾಸಿ ಶಕ್ತಿವೇಲುನನ್ನು ಬಂಧಿಸಿದ ಪೊಲೀಸರು,(Police) ಮೃತನ ತಾಯಿ ಗೀತಾಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಮರ್ಫಿ ಟೌನ್‌ನಲ್ಲಿರುವ ಗೀತಾ ಮನೆಗೆ ಶಕ್ತಿವೇಲು ಸೋಮವಾರ ರಾತ್ರಿ ಬಂದಾಗ ಈ ಕೊಲೆ ನಡೆದಿದೆ.
 

click me!