ಸಿಂದಗಿ: ಹಳೆ ವೈಷಮ್ಯ, ಕಬ್ಬಿಣ ರಾಡ್‌ಗಳಿಂದ ಹೊಡೆದು ಬರ್ಬರ ಹತ್ಯೆ

By Kannadaprabha NewsFirst Published Jun 28, 2020, 11:40 AM IST
Highlights

ವ್ಯಕ್ತಿಯೊಬ್ಬನನ್ನು ಕಬ್ಬಿಣದ ರಾಡ್‌ಗಳಿಂದ ಹೊಡೆದು ಕೊಲೆ|ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಚಾಂದಕವಟೆ ಗ್ರಾಮದ ಸಮೀಪದಲ್ಲಿ ನಡೆದ ಘಟನೆ| ನಾಲ್ಕೈದು ವರ್ಷಗಳ ಹಿಂದೆ ಕೊಲೆ ಮಾಡಿದ ಆಪಾದನೆ ಮೇಲೆ ಈ ಜೈಲಿನಲ್ಲಿದ್ದ| ಕೆಲ ದಿನಗಳ ಹಿಂದೆ ಮರಳಿ ಊರಿಗೆ ಬಂದಿದ್ದ ಈತನನ್ನು ಕಬ್ಬಿಣದ ರಾಡ್‌ಗಳಿಂದ ಹೊಡೆದು ಕೊಲೆ|

ಸಿಂದಗಿ(ಜೂ.28): ಹಳೆ ವೈಷಮ್ಯ ಹಿನ್ನಲೆಯಲ್ಲಿ ವ್ಯಕ್ತಿಯೊಬ್ಬನನ್ನು ಕಬ್ಬಿಣದ ರಾಡ್‌ಗಳಿಂದ ಹೊಡೆದು ಕೊಲೆ ಮಾಡಿರುವ ಘಟನೆ ತಾಲೂಕಿನ ಚಾಂದಕವಟೆ ಗ್ರಾಮದ ಸಮೀಪದಲ್ಲಿ ಶನಿವಾರ ಸಂಭವಿಸಿದೆ. ತಾಲೂಕಿನ ಚಾಂದಕವಟೆ ಗ್ರಾಮದ ಈರಣ್ಣ ಸುಭಾಷ ಧರಿಕಾರ (38) ಕೊಲೆಗೀಡಾದ ವ್ಯಕ್ತಿ. 

ನಾಲ್ಕೈದು ವರ್ಷಗಳ ಹಿಂದೆ ಕೊಲೆ ಮಾಡಿದ ಆಪಾದನೆ ಮೇಲೆ ಈ ಜೈಲಿನಲ್ಲಿದ್ದ. ಕೆಲ ದಿನಗಳ ಹಿಂದೆ ಮರಳಿ ಊರಿಗೆ ಬಂದಿದ್ದ ಈತನನ್ನು ಕಬ್ಬಿಣದ ರಾಡ್‌ಗಳಿಂದ ಹೊಡೆದು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. 

ಅಕ್ರಮ ಸಂಬಂಧ: ನಾದಿನಿ ಕತ್ತು ಹಿಸುಕಿ ಹತ್ಯೆಗೈದ ಭಾವ..!

ಸ್ಥಳಕ್ಕೆ ಹೆಚ್ಚುವರಿ ವರಿಷ್ಠಾಧಿಕಾರಿ ಆರ್‌.ಎಲ್‌.ಅರಸಿದ್ದಿ, ಡಿವೈಎಸ್ಪಿ ಎಂ.ಬಿ.ಸುಂಕದ, ಇಂಡಿ ಸಿಪಿಐ ಆರ್‌.ಎಸ್‌. ಬಡದೇಸಾರ, ಪಿಎಸೈ ಎಸ್‌.ಎಚ್‌.ಹೊಸಮನಿ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
 

click me!