ಹಳೇ ದ್ವೇಷ: ಜಿಮ್ ಟ್ರೈನರ್‌ನನ್ನ ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರ ಹತ್ಯೆ

By Kannadaprabha NewsFirst Published Jun 19, 2020, 8:03 AM IST
Highlights

ರಾಜೀ ಮಾಡುವ ನೆಪದಲ್ಲಿ ಜಿಮ್ ಟ್ರೈನರ್‌ ಕೊಲೆ| ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಬನ್ನೇರುಘಟ್ಟ ಠಾಣಾ ವ್ಯಾಪ್ತಿಯ ರಾಮಸಂದ್ರದಲ್ಲಿ ನಡೆದ ಘಟನೆ| ಕೊಲೆಗೆ ಹಳೇ ದ್ವೇಷವೇ ಕಾರಣ ಎಂಬ ಪೊಲೀಸರು ಶಂಕೆ| 

ಆನೇಕಲ್(ಜೂ.19): ರಾಜೀ ಮಾಡುವ ನೆಪದಲ್ಲಿ ಜಿಮ್ ಟ್ರೈನರ್‌ವೊಬ್ಬನನ್ನು ಮಾತುಕತೆಗೆ ಕರೆಯಿಸಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬನ್ನೇರುಘಟ್ಟ ಠಾಣಾ ವ್ಯಾಪ್ತಿಯ ರಾಮಸಂದ್ರದಲ್ಲಿ ನಡೆದಿದೆ. ಬನ್ನೇರುಘಟ್ಟ ಸಮೀಪದ ಕಲ್ಕೆರೆ ನಿವಾಸಿ ಕಿರಣ್ಕೊಲೆಯಾದ ಯುವಕ. 

ಕೊಲೆಗೆ ಹಳೇ ದ್ವೇಷವೇ ಕಾರಣ ಇರಬಹುದೆಂದು ಪೊಲೀಸರು ಶಂಕಿಸಿದ್ದು, ತನಿಖೆ ಚುರುಕುಗೊಳಿಸಿದ್ದಾರೆ. ಮಾತುಕತೆ ನೆಪದಲ್ಲಿ ಕಿರಣ್ನನ್ನು ಕರೆಸಿಕೊಂಡ ಆರೋಪಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಆತನನ್ನು ಕೊಲೆ ಮಾಡಿದ್ದಾರೆ. 

ವಿಮೆ ಹಣಕ್ಕಾಗಿ ತನ್ನ ಹತ್ಯೆಗೆ ತಾನೇ ಸುಪಾರಿ ಕೊಟ್ಟ ಉದ್ಯಮಿ!

ಕಿರಣ್‌ನ ಮೊಬೈಲ್‌ ಕರೆಗಳ ಪರಿಶೀಲನೆ ನಡೆಸಲಾಗುತ್ತಿದ್ದು ಶೀಘ್ರದಲ್ಲೇ ಆರೋಪಿಗಳ ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.

click me!