ಗುಟ್ಕಾ ವ್ಯಾಪಾರಿ ಹತ್ಯೆ ಕೇಸ್‌ ನಲ್ಲಿ ದಂಪತಿ ಸೆರೆ

By Kannadaprabha NewsFirst Published Jul 13, 2022, 9:06 AM IST
Highlights
  •  ಗೆಳೆಯನ ಪತ್ನಿ ಮೇಲೆ ಅತ್ಯಾಚಾರ ಎಸಗಿದ್ದವನ ಹತ್ಯೆ; ಮೂವರ ಸೆರೆ
  •  ವಿಡಿಯೋ ಮಾಡಿಟ್ಟುಕೊಂಡು ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದ ಆರೋಪ

 ಬೆಂಗಳೂರು (ಜು.13):ತನ್ನ ಪತ್ನಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ವಿಡಿಯೋ ಮಾಡಿಕೊಂಡು ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದ ಸ್ನೇಹಿತನನ್ನು ಹತ್ಯೆಗೈದು ಪರಾರಿಯಾಗಿದ್ದ ದಂಪತಿ ಸೇರಿ ಮೂವರನ್ನು ಕಾಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.ಬೆಳತ್ತೂರು ನಿವಾಸಿ ವಿಶಾಲ್‌ ಪ್ರಜಾಪತಿ, ರುಬಿ ಪ್ರಜಾಪ್ರತಿ ಹಾಗೂ ಗುಂಜಾ ದೇವಿ ಬಂಧಿತರಾಗಿದ್ದು, ಇತ್ತೀಚಿಗೆ ವೈಯಕ್ತಿಕ ವಿಚಾರವಾಗಿ ತಮ್ಮ ಸ್ನೇಹಿತ ಓಂನಾಥ್‌ ಸಿಂಗ್‌ನನ್ನು (48) ಪ್ರಜಾಪತಿ ದಂಪತಿ ಹತ್ಯೆ ಮಾಡಿದ್ದರು. ಈ ಕೃತ್ಯ ಎಸಗಿದ ಬಳಿಕ ಬೆಳತ್ತೂರು-ಕೊಡಿಗೇಹಳ್ಳಿ ಮುಖ್ಯರಸ್ತೆಯ ಅಯ್ಯಪ್ಪಸ್ವಾಮಿ ದೇವಾಲಯದ ಚರಂಡಿ ಬಳಿ ಮೃತದೇಹ ಬಿಸಾಡಿ ಆರೋಪಿಗಳು ಪರಾರಿಯಾಗಿದ್ದರು. ತನಿಖೆ ನಡೆಸಿದ ಕಾಡುಗೋಡಿ ಠಾಣೆ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ಮಂಗಳೂರಿನಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಿ ಕರೆತಂದಿದ್ದಾರೆ ಎಂದು ವೈಟ್‌ಫೀಲ್ಡ್‌ ವಿಭಾಗದ ಡಿಸಿಪಿ ಎಸ್‌.ಗಿರೀಶ್‌ ತಿಳಿಸಿದ್ದಾರೆ.

ಉಂಗುರ ಆಧರಿಸಿ ಕೊಲೆ ಪ್ರಕರಣ ಬೇಧಿಸಿದ ಪೊಲೀಸರು

ಪತ್ನಿ ಜತೆ ಸರಸವಾಡಿದ ಸ್ನೇಹಿತ: ಉತ್ತರಪ್ರದೇಶ ಮೂಲದ ವಿಶಾಲ್‌ ಪ್ರಜಾಪತಿ, ರುಬಿ ಪ್ರಜಾಪ್ರತಿ, ಗುಂಜಾದೇವಿ ಹಾಗೂ ಬಿಹಾರದ ಓಂನಾಥ್‌ ಸಿಂಗ್‌, ಹದಿನೈದು ದಿನಗಳ ಹಿಂದಷ್ಟೇ ನಗರಕ್ಕೆ ಬಂದಿದ್ದರು. ಬಳಿಕ ಬೆಳತ್ತೂರಿನ ನೆರೆಹೊರೆಯಲ್ಲಿ ಈ ನಾಲ್ವರು ನೆಲೆಸಿದ್ದರು. ಅಂಗಡಿಗಳಿಗೆ ಓಂನಾಥ್‌ ಗುಟ್ಕಾ ಪೂರೈಸುವ ಕೆಲಸ ಮಾಡಿದರೆ, ಗಾರ್ಮೆಂಟ್ಸ್‌ನಲ್ಲಿ ವಿಶಾಲ್‌ ಟೈಲರ್‌ ಆಗಿ ದುಡಿಯುತ್ತ ಜೀವನ ಸಾಗಿಸುತ್ತಿದ್ದ. ವಿಶಾಲ್‌ಗೆ ತಿಳಿಯದಂತೆ ಆತನ ಪತ್ನಿ ರುಬಿ ಜತೆ ಓಂನಾಥ್‌ ‘ಆತ್ಮೀಯತೆ’ ಬೆಳೆದಿತ್ತು. ತನ್ನೊಂದಿಗೆ ರುಬಿ ಏಕಾಂತದಲ್ಲಿದ್ದ ಕ್ಷಣಗಳನ್ನು ಓಂನಾಥ್‌ ಮೊಬೈಲ್‌ನಲ್ಲಿ ವಿಡಿಯೋ ಮಾಡಿದ್ದ. ಈ ವಿಡಿಯೋ ಮುಂದಿಟ್ಟು ರುಬಿಗೆ ಆತ ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದ ಎನ್ನಲಾಗಿದೆ.

Ramanagara: ಬಾಂಗ್ಲಾ ಪ್ರಜೆಗಳ ಬಂಧನ: ಜನರಲ್ಲಿ ಹೆಚ್ಚಿದ ಆತಂಕ

ಬೆಂಗಳೂರಿಗೆ ಬಂದ ನಂತರ ಗೆಳೆಯನ ಜತೆ ಪತ್ನಿ ಸಲುಗೆ ವಿಚಾರ ಗೊತ್ತಾಗಿ ವಿಶಾಲ್‌ ಗಲಾಟೆ ಮಾಡಿದ್ದ. ಆಗ ತನಗೆ ಚಹಾದಲ್ಲಿ ನಿದ್ರೆ ಮಾತ್ರೆ ಬೆರೆÜಸಿಕೊಟ್ಟು ಅತ್ಯಾಚಾರ ನಡೆಸಿ ಓಂನಾಥ್‌ ವಿಡಿಯೋ ಮಾಡಿಕೊಂಡಿದ್ದಾನೆ. ಆತ ಹೇಳಿದಂತೆ ಕೇಳದೆ ಹೋದರೆ ವಿಡಿಯೋ ಬಹಿರಂಗಪಡಿಸುವುದಾಗಿ ಬೆದರಿಸಿದ್ದಾನೆ ಎಂದು ಪತಿ ಬಳಿ ರುಬಿ ಹೇಳಿಕೊಂಡು ಕಣ್ಣೀರಿಟ್ಟಿದ್ದಳು. ಜು.3ರಂದು ಮಾತುಕತೆ ನೆಪದಲ್ಲಿ ಮನೆಗೆ ಕರೆಸಿ ಓಂನಾಥ್‌ನ ಕುತ್ತಿಗೆಯನ್ನು ದುಪ್ಪಟ್ಟದಿಂದ ಬಿಗಿದು ಹತ್ಯೆಗೈದ ದಂಪತಿ, ಬಳಿಕ ಮೃತದೇಹವನ್ನು ಮೂಟೆ ಕಟ್ಟಿಬೆಳತ್ತೂರು- ಕೊಡಿಗೇಹಳ್ಳಿ ಮುಖ್ಯರಸ್ತೆಯಲ್ಲಿ ಬಿಸಾಡಿ ಪರಾರಿಯಾಗಿದ್ದರು.

click me!