ಪಾನ್‌ಕಾರ್ಡ್‌ ಕುರಿತು ಹುಷಾರಾಗಿರಿ..ಗುಜರಾತ್‌ನ ಚಾಯ್‌ವಾಲಾಗೆ ಬಂತು 49 ಕೋಟಿಯ ಐಟಿ ನೋಟಿಸ್‌!

Published : May 20, 2024, 08:27 PM IST
ಪಾನ್‌ಕಾರ್ಡ್‌ ಕುರಿತು ಹುಷಾರಾಗಿರಿ..ಗುಜರಾತ್‌ನ ಚಾಯ್‌ವಾಲಾಗೆ ಬಂತು 49 ಕೋಟಿಯ ಐಟಿ ನೋಟಿಸ್‌!

ಸಾರಾಂಶ

ನಿಮ್ಮ ಪಾನ್‌ಕಾರ್ಡ್‌ಗಳನ್ನು ಲಿಂಕ್‌ ಮಾಡಿದಾಗ ಹಾಗೂ ಆದಾಯ ತೆರಿಗೆ ಇಲಾಖೆಯ ಯಾವುದೇ ನೋಟಿಸ್‌ ಬಂದಾಗ ಅದನ್ನು ಅಸಡ್ಡೆ ಮಾಡಬೇಡಿ. ಇಂಥ ಅಸಡ್ಡೆ ಮಾಡಿದ್ದಕ್ಕೆ ಗುಜರಾತ್‌ನ ಚಾಯ್‌ವಾಲಾಗೆ ಈಗ 49 ಕೋಟಿಯ ಐಟಿ ನೋಟಿಸ್‌ ಬಂದಿದೆ.  

ನವದೆಹಲಿ (ಮೇ.20): ಗುಜರಾತ್‌ನ ಪಟಾನ್‌ ಪಾಲಿಕೆಯ ಚಾಯ್‌ವಾಲಾಗೆ ಆದಾಯ ತೆರಿಗೆ ಇಲಾಖೆ 49 ಕೋಟಿಯ ನೋಟಿಸ್‌ ಕಳಿಸಿದೆ. ಹಾಗಂತ ಇದು ಆದಾಯ ತೆರಿಗೆ ತಪ್ಪಾಗಿ ಕಳಿಸಿದ ನೋಟಿಸ್‌ ಅಲ್ಲ. ಚಾಯ್‌ವಾಲಾನ ಅಕೌಂಟ್‌ನಿಂದ ಆಗಿರುವ ವ್ಯವಹಾರದ ಕಾರಣಕ್ಕಾಗಿ ಐಟಿ ಅಧಿಕಾರಿಗಳು ಈ ನೋಟಿಸ್‌ ಜಾರಿ ಮಾಡಿದ್ದಾರೆ. ಇದನ್ನು ಕಂಡು ಚಾಯ್‌ವಾಲಾ ಹೌಹಾರಿ ಹೋಗಿದ್ದಾರೆ. ಚಾಯ್‌ವಾಲಾನ ಅಕೌಂಟ್‌ನಲ್ಲಿ ದಾಖಲಾದ ಒಟ್ಟು 34 ಕೋಟಿಯ ಅಕ್ರಮ ವ್ಯವಹಾರಕ್ಕೆ 49 ಕೋಟಿ ರೂಪಾಯಿ ದಂಡವನ್ನು ಪಾವತಿ ಮಾಡುವಂತೆ ಐಟಿ ಇಲಾಖೆ ನೋಟಿಸ್‌ನಲ್ಲಿ ತಿಳಿಸಿದೆ. ಕೊನೆಗೆ ಗೊತ್ತಾಗಿದ್ದೇನೆಂದರೆ, ಇದೇ ಚಾಯ್‌ವಾಲಾ ಅಂದಾಜು ಒಂದು ದಶಕದಿಂದ ಇಬ್ಬರು ಸಹೋದರರಿಗೆ ಪ್ರತಿ ದಿನ ಚಹಾ ನೀಡುತ್ತಿದ್ದ. ಇವರು ಈ ಚಾಯ್‌ವಾಲಾನ ಸಹಿ ಹಾಗೂ ಪಾನ್‌ಕಾರ್ಡ್‌ಗಳನ್ನು ಮೋಸದಿಂದ ಬಳಸಿಕೊಂಡಿದ್ದಲ್ಲದೆ, ಆ ಮೂಲಕ ಅಕ್ರಮ ಚಟುವಟಿಕೆ ಕೂಡ ನಡೆಸಿದ್ದಾರೆ.

ಪಟಾನ್ ಬಿ ವಿಭಾಗದ ಪೊಲೀಸರ ಎಫ್‌ಐಆರ್ ಪ್ರಕಾರ, ಬನಸ್ಕಾಂತದ ಕಾಂಕ್ರೇಜ್‌ನ ಖೇಮರಾಜ್ ದವೆ 2014 ರಿಂದ ಪಟಾನ್ ಸರಕು ಮಾರುಕಟ್ಟೆಯಲ್ಲಿ ತನ್ನ ಟೀ ಸ್ಟಾಲ್ ಅನ್ನು ನಡೆಸುತ್ತಿದ್ದಾನೆ. 2014 ರಿಂದ ದವೆ ಮೆಹ್ಸಾನಾದ ಉಂಜಾದಿಂದ ಅಲ್ಪೇಶ್ ಪಟೇಲ್ ಮತ್ತು ವಿಪುಲ್ ಪಟೇಲ್ ಅವರ ಕಚೇರಿಗೆ ಚಹಾವನ್ನು ನೀಡುತ್ತಿದ್ದ. 2014 ರಲ್ಲಿ, ದವೆ ತನ್ನ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಮತ್ತು ಎಂಟು ಫೋಟೋಗಳನ್ನು ನೀಡಿ ತನ್ನ ಬ್ಯಾಂಕ್ ಖಾತೆಯೊಂದಿಗೆ ತನ್ನ ಪ್ಯಾನ್ ಕಾರ್ಡ್ ಅನ್ನು ಲಿಂಕ್ ಮಾಡಲು ಅಲ್ಪೇಶ್ ಸಹಾಯವನ್ನು ಕೇಳಿದ್ದ. ಮರುದಿನ, ಅಲ್ಪೇಶ್ ಪಟೇಲ್‌, ದವೆಎ ಅವರ ಟೀ ಸ್ಟಾಲ್‌ಗೆ ಭೇಟಿ ನೀಡಿ, ಅನೇಕ ದಾಖಲೆಗಳಿಗೆ ಸಹಿ ಹಾಕಿಸಿಕೊಂಡಿದ್ದರು ಮತ್ತು ನಂತರ ದವೆಯ ಆಧಾರ್ ಕಾರ್ಡ್ ಅನ್ನು ಫೋಟೋಕಾಪಿ ತೆಗೆದುಕೊಳ್ಳುವಾಗ ಐ-ಟಿ ಇಲಾಖೆಯ ಅವಶ್ಯಕತೆಗಳನ್ನು ಉಲ್ಲೇಖಿಸಿ ಹಿಂದಿರುಗಿಸಿದರು.

ಸುಮಾರು ಒಂದು ದಶಕದ ನಂತರ, ದವೆ ಎರಡು ಐಟಿ ನೋಟೀಸ್‌ಗಳನ್ನು ಸ್ವೀಕರಿಸಿದರು. ಆದರೆ, ಈ ನೋಟಿಸ್‌ಗಳು ಇಂಗ್ಲೀಷ್‌ನಲ್ಲಿ ಇದ್ದ ಕಾರಣ ಅವರು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಆಗಸ್ಟ್ 2023 ರಲ್ಲಿ, ಅವರಿಗೆ ಮೂರನೇ ನೋಟಿಸ್ ನೀಡಿದಾಗ, ಅವರು ವಕೀಲ ಸುರೇಶ್ ಜೋಶಿ ಅವರ ಬಳಿ ಇದನ್ನು ವಿಚಾರಿಸಿದ್ದಾರೆ. ಅವರು 2014-15 ಮತ್ತು 2015-16 ರ ಹಣಕಾಸು ವರ್ಷಗಳಲ್ಲಿ ಅಕ್ರಮ ವಹಿವಾಟುಗಳಿಗೆ ಹಾಕಿರುವ ತೆರಿಗೆ ದಂಡ ಎಂದು ತಿಳಿಸಿದ್ದಾರೆ. ಆದರೆ, ತಾವು ಅಂಥ ಯಾವುದೇ ವ್ಯವಹಾರಗಳನ್ನು ನಡೆಸಿಲ್ಲ ಎನ್ನುವ ಕಾರಣಕ್ಕೆ ಪಟಾನ್‌ನಲ್ಲಿ ಐಟಿ ಅಧಿಕಾರಿಯನ್ನು ಭೇಟಿಯಾಗಿದ್ದರು. ಈ ವೇಳೆ ಇವರ ಹೆಸರಿನಲ್ಲಿ ಬೇರೊಬ್ಬರು ಖಾತೆ ತೆರೆದು ಅದನ್ನು ಬಳಸುತ್ತಿದ್ದರು ಎಂದು ಐಟಿ ಅಧಿಕಾರಿ ಬಹಿರಂಗಪಡಿಸಿದ್ದಾರೆ.

'ಬೆತ್ತಲಾಗೋಕು ರೆಡಿ, ಐಟಂ ಡಾನ್ಸ್‌ಗೂ ಸೈ..' ನಿರ್ದೇಶಕರಿಗೆ Bold ಆಫರ್‌ ನೀಡಿದ ಯುವನಟಿ!

ದವೆ ದೂರು ದಾಖಲಿಸಿದಾಗ, ಅಲ್ಪೇಶ್ ಮತ್ತು ಅವರ ಸಹೋದರ ವಿಪುಲ್ ಅವರ ಅವರ ಅಕ್ರಮಗಳು ಬಹಿರಂಗವಾಗಿದೆ.. ಆರೋಪಿಗಳ ವಿರುದ್ಧ ನಂಬಿಕೆ ದ್ರೋಹ, ವಂಚನೆ, ಫೋರ್ಜರಿ, ವಂಚನೆ ಉದ್ದೇಶದಿಂದ ನಕಲಿ ದಾಖಲೆ ಸೃಷ್ಟಿಸುವುದು, ಅಸಲಿ, ಕ್ರಿಮಿನಲ್ ಸಂಚು, ಕುಮ್ಮಕ್ಕು ನೀಡಿದ ಆರೋಪದ ಮೇಲೆ ಪಟಾಣ್ ನಗರ ಬಿ ವಿಭಾಗದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಹೋದರರನ್ನು ವಿಚಾರಣೆಗೊಳಪಡಿಸಲಾಗಿದೆ ಆದರೆ ಇನ್ನೂ ಬಂಧಿಸಲಾಗಿಲ್ಲ ಎಂದು ದವೆ ಪರ ವಕೀಲ ಸುರೇಶ್ ಜೋಶಿ ತಿಳಿಸಿದ್ದಾರೆ.

'ನೀವ್‌ ಬರ್ತಿರಿ ಅಂತಾ ರೆಡ್‌ ಕಾರ್ಪೆಟ್‌ ಹಾಕೋಕೆ ಆಗೋದಿಲ್ಲ..' ಚುನಾವಣಾ ಆಯೋಗವನ್ನ ಟೀಕಿಸಿದ ನಟಿಗೆ ನೆಟ್ಟಿಗರ ಕ್ಲಾಸ್‌!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರಲ್ಲಿ ಹೊಟ್ಟೆಪಾಡಿಗೆ ಕಳ್ಳತನ ಮಾಡ್ತಿದ್ದ ಕಳ್ಳನನ್ನೇ ರಾಬರಿ ಮಾಡಿದ ಖತರ್ನಾಕ್ ಕಿತಾಪತಿಗಳು!
ಸಿದ್ದೇಶ್ವರ್‌ ಎಕ್ಸ್‌ಪ್ರೆಸ್‌ನಲ್ಲಿ ನಿದ್ದೆಗೆ ಜಾರಿದ ಚಿನ್ನದ ವ್ಯಾಪಾರಿಗೆ ಆಘಾತ: 5.53 ಕೋಟಿ ಮೊತ್ತದ ಚಿನ್ನ ಮಾಯ