Asianet Suvarna News Asianet Suvarna News

ಈ ಮಕ್ಕಳು ಆಡುವ ಆಟ ಹೇಗಿದೆ ನೋಡಿ...ಅಬ್ಬಾ..! ನೋಡಿದ್ರೆ ಮೈ ಜುಮ್‌ ಎನ್ನುತ್ತೆ..!

ಪ್ರವಾಹದ ನೀರಲ್ಲಿ ಮಕ್ಕಳು ಲೈಟ್ ಕಂಬ ಹತ್ತಿ, ಈಜಲು ನದಿಗೆ ಹಾರುತ್ತಿರುವುದು ಸೇರಿದಂತೆ ಇನ್ನೂ ಹಲವು ಸ್ಪೆಷಲ್‌ ಸುದ್ದಿಗಳು ಇಲ್ಲಿವೆ..
 

ಏಷ್ಯಾನೆಟ್‌ ಸುವರ್ಣ ನ್ಯೂಸ್‌ನ ಸೂಪರ್‌ ಸ್ಪೆಷಲ್‌ ನ್ಯೂಸ್‌ನಲ್ಲಿ(Super special news) ಹಲವಾರು ಇಂಟ್ರಸ್ಟಿಂಗ್ ಸುದ್ದಿಗಳು ಇವೆ. ಇದರ ಮೊದಲ ಸುದ್ದಿ ಎಂದರೇ, ಪ್ರವಾಹದ ನೀರಲ್ಲಿ ಮಕ್ಕಳು ಲೈಟ್ ಕಂಬ ಹತ್ತಿ, ಈಜಲು ನದಿಗೆ ಹಾರುತ್ತಿರುವುದು. ಈ ಘಟನೆ ಉತ್ತರ ಪ್ರದೇಶದಲ್ಲಿ(Uttarapradesh) ನಡೆದಿದೆ. ಇನ್ನೂ ಮತ್ತೊಂದೆಡೆ ಭಾರೀ ಮಳೆಗೆ(Rain) ರಸ್ತೆಯಲ್ಲಿ ನೀರು ನಿಂತರೂ ಕುಡುಕನೊಬ್ಬ ಕುಡಿಯಲು ಮರದ ದಿಂಬೆ ಮೇಲೆ ಕೂತು, ವೈನ್‌ ಶಾಪ್‌ಗೆ(wine shop)vಬಂದು ಕುಡಿದಿದ್ದಾನೆ. ಈ ಘಟನೆ ಹಿಮಾಚಲ ಪ್ರದೇಶದಲ್ಲಿ ನಡೆದಿದೆ. ಇನ್ನೂ ಮಹಾರಾಷ್ಟ್ರದಲ್ಲಿ ದೈವಾರಾಧಕನೊಬ್ಬ ದೇವರ ಹೆಸರಿನಲ್ಲಿ ಪುಟ್ಟ ಪುಟ್ಟ ಮಕ್ಕಳ ಮೇಲೆ ಹತ್ತಿ ನಿಲ್ಲುವ ಮೂಲಕ ಹಿಂಸೆಯನ್ನು ನೀಡುತ್ತಿದ್ದಾನೆ. ಇದರಿಂದ ಆ ಮಕ್ಕಳು ಎಷ್ಟು ನೋವು ಪಡುತ್ತಿದ್ದವೋ ಏನೋ ಗೊತ್ತಿಲ್ಲ. ಇದರಿಂದ ಮಕ್ಕಳಿಗೆ ಮುಂದೆ ಬರುವ ಮಹಾಮಾರಿ ರೋಗಗಳಿಂದ ಆರೋಗ್ಯವಾಗಿರುತ್ತವೆ ಎಂಬುದು ನಂಬಿಕೆಯಾಗಿದೆ. 

ಇದನ್ನೂ ವೀಕ್ಷಿಸಿ:  Today Horoscope: ಇಂದು ಆಷಾಢ ಮಾಸದ ಕೊನೆ ಶುಕ್ರವಾರ...ಮಹಾಲಕ್ಷ್ಮೀ ಆರಾಧನೆ ಹೀಗೆ ಮಾಡಿ..