ಏರ್ಟೆಲ್ ಗ್ರಾಹಕರಿಗೆ ಗುಡ್ ನ್ಯೂಸ್, ಕ್ಲೌಡ್ ಸುರಕ್ಷತೆ, ಸ್ಟೋರೇಜ್ಗಾಗಿ ಐಬಿಎಂ ಜೊತೆ ಪಾಲುದಾರಿಕೆ, ಕ್ಲೌಡ್ ಸುರಕ್ಷತೆ, ಸಾಮರ್ಥ್ಯ ಹೆಚ್ಚಳ, ವರ್ಕ್ಲೋಡ್ ಸೇರಿದಂತೆ ಹಲವು ತಾಂತ್ರಿಕ ಸಂಬಂಧ ಈ ಒಪ್ಪಂದ ಭಾರಿ ಮಹತ್ವ ಪಡೆದಿದೆ
- Home
- News
- India News
- India News Live: ಏರ್ಟೆಲ್ ಗ್ರಾಹಕರಿಗೆ ಗುಡ್ ನ್ಯೂಸ್, ಕ್ಲೌಡ್ ಸುರಕ್ಷತೆ, ಸ್ಟೋರೇಜ್ಗಾಗಿ ಐಬಿಎಂ ಜೊತೆ ಪಾಲುದಾರಿಕೆ
India News Live: ಏರ್ಟೆಲ್ ಗ್ರಾಹಕರಿಗೆ ಗುಡ್ ನ್ಯೂಸ್, ಕ್ಲೌಡ್ ಸುರಕ್ಷತೆ, ಸ್ಟೋರೇಜ್ಗಾಗಿ ಐಬಿಎಂ ಜೊತೆ ಪಾಲುದಾರಿಕೆ

ನವದೆಹಲಿ (ಅ.18): 'ಇಂದು ಜಗತ್ತು ಹಲವಾರು ರಸ್ತೆತಡೆ, ವೇಗಪ್ರತಿಬಂಧಕಗಳನ್ನು ಹೊಂದಿದೆ. ಆದರೆ ಭಾರತ ನಿಲ್ಲುವ ಮನಃಸ್ಥಿತಿಯಲ್ಲಿಲ್ಲ. ಅದು ನಿಲ್ಲುವುದೂ ಇಲ್ಲ, ನಿಧಾನವಾಗುವುದೂ ಇಲ್ಲ. 140 ಕೋಟಿ ಭಾರತೀಯರು ಪೂರ್ಣ ಆವೇಗದೊಂದಿಗೆ ಒಟ್ಟಾಗಿ ಮುಂದೆ ಸಾಗುತ್ತಾರೆ' ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಭಾರತದ ಮೇಲೆ ತೆರಿಗೆ ಹಾಕಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೊಂದರೆ ನೀಡುತ್ತಿರುವಾಗಲೇ ಮೋದಿ ಈ ಹೇಳಿಕೆ ನೀಡಿದ್ದಾರೆ. ಅದರೊಂದಿಗೆ ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್ಟೇನ್ಮೆಂಟ್ನ ಸುದ್ದಿಗಳ ವಿವರಗಳ ಲೈವ್ ಬ್ಲಾಗ್..
India News Live 18th October: ಏರ್ಟೆಲ್ ಗ್ರಾಹಕರಿಗೆ ಗುಡ್ ನ್ಯೂಸ್, ಕ್ಲೌಡ್ ಸುರಕ್ಷತೆ, ಸ್ಟೋರೇಜ್ಗಾಗಿ ಐಬಿಎಂ ಜೊತೆ ಪಾಲುದಾರಿಕೆ
India News Live 18th October: ಹಣತೆಗೆ ಯಾಕೆ ಖರ್ಚು ಮಾಡುತ್ತೀರಿ? ಅಯೋಧ್ಯೆ ದೀಪೋತ್ಸವ ಕುರಿತು ಅಖಿಲೇಶ್ ಯಾದವ್ ವಿವಾದ
ಹಣತೆಗೆ ಯಾಕೆ ಖರ್ಚು ಮಾಡುತ್ತೀರಿ? ಅಯೋಧ್ಯೆ ದೀಪೋತ್ಸವ ಕುರಿತು ಅಖಿಲೇಶ್ ಯಾದವ್ ವಿವಾದ, ಕ್ರೈಸ್ತರಿಂದ ಕಲಿಯಿರಿ ಎಂದ ಉತ್ತರ ಪ್ರದೇಶ ಸರ್ಕಾರಕ್ಕೆ ಸೂಚಿಸಿದ್ದಾರೆ. ಅಖಿಲೇಶ್ ಮಾತಿಗೆ ಬಿಜೆಪಿ ತಿರುಗೇಟು ನೀಡಿದ್ದರೆ, ಹಿಂದೂ ಸಮುದಾಯದಿಂದ ಭಾರಿ ಆಕ್ರೋಶ ವ್ಯಕ್ತವಾಗಿದೆ.
India News Live 18th October: ಬುರ್ಖಾ ನಿಷೇಧ ಬಿಲ್ಗೆ ಸಂಸತ್ತಿನಲ್ಲಿ ಅನುಮೋದನೆ, ತಪ್ಪಿದ್ರೆ 4 ಲಕ್ಷ ರೂ ದಂಡ ಎಂದ ಪೋರ್ಚುಗಲ್
ಬುರ್ಖಾ ನಿಷೇಧ ಬಿಲ್ಗೆ ಸಂಸತ್ತಿನಲ್ಲಿ ಅನುಮೋದನೆ, ತಪ್ಪಿದ್ರೆ 4 ಲಕ್ಷ ರೂ ದಂಡ ಎಂದ ಪೋರ್ಚುಗಲ್, ಒತ್ತಾಯ ಪೂರ್ವಕವಾಗಿ ಅಥವಾ ಷಡ್ಯಂತ್ರದ ಭಾಗವಾಗಿ ಬುರ್ಖಾ ಹಾಕಲು ಪ್ರೇರೇಪಿಸಿದರ 3 ವರ್ಷ ಜೈಲು ಶಿಕ್ಷೆ ವಿಧಿಸುವ ಎಚ್ಚರಿಕೆ ನೀಡಿದೆ.
India News Live 18th October: GST 2.0 - ದೀಪಾವಳಿ ಹಬ್ಬಕ್ಕೆ ಸಮೃದ್ಧಿ ತಂದಿದೆ; ಲಕ್ಷ್ಮಿ ದೇವಿ ಪ್ರತಿ ಮನೆಗೂ ತಲುಪಿದ್ದಾಳೆ - ನಿರ್ಮಲಾ ಸೀತಾರಾಮನ್
GST 2.0 India tax reform: ದೀಪಾವಳಿ ಹಬ್ಬಕ್ಕೆ ಸಮೃದ್ಧಿ ತಂದಿದೆ; ಲಕ್ಷ್ಮಿ ದೇವಿ ಪ್ರತಿ ಮನೆಗೂ ತಲುಪಿದ್ದಾಳೆ ಎಂದು ಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು. ಅವರು 'ಜಿಎಸ್ಟಿ ಉಳಿತಾಯ ಹಬ್ಬ' ಎಂದು ಕರೆಯಲ್ಪಡುವ ಜಿಎಸ್ಟಿ 2.0 ಅನ್ನು ಜಾರಿಗೆ ತಂದಿದ್ದಾರೆ. ಸುದ್ದಿಗೋಷ್ಠಿಯ ವಿವರ ಇಲ್ಲಿದೆ.
India News Live 18th October: ಪತ್ರಕರ್ತ ರಾಜದೀಪ್ ಸರ್ದೇಸಾಯಿಗೆ ಪ್ರೊಸ್ಟೇಟ್ ಕ್ಯಾನ್ಸರ್, ನಾಲ್ಕು ತಿಂಗಳಿಂದ ಹೋರಾಟ
ಪತ್ರಕರ್ತ ರಾಜದೀಪ್ ಸರ್ದೇಸಾಯಿಗೆ ಪ್ರೊಸ್ಟೇಟ್ ಕ್ಯಾನ್ಸರ್, ನಾಲ್ಕು ತಿಂಗಳಿಂದ ಹೋರಾಟ, ಈ ಕುರಿತು ಸ್ವತಃ ರಾಜ್ದೀಪ್ ಮಾತನಾಡಿದ್ದಾರೆ. ಕಳೆದ ನಾಲ್ಕು ತಿಂಗಳಿನಿಂದ ಕ್ಯಾನ್ಸರ್ ಹೋರಾಟದ ಕುರಿತು ಹೇಲಿಕೊಂಡಿದ್ದಾರೆ.
India News Live 18th October: ಈ ಬಾರಿ ಮುಕೇಶ್ ಅಂಬಾನಿಗೆ ದೀಪಾವಳಿ ಗಿಫ್ಟ್, ರಿಲಯನ್ಸ್ ಇಂಡಸ್ಟ್ರಿಗೆ 22 ಸಾವಿರ ಕೋಟಿ ಲಾಭ
ಈ ಬಾರಿ ಮುಕೇಶ್ ಅಂಬಾನಿಗೆ ದೀಪಾವಳಿ ಗಿಫ್ಟ್, ರಿಲಯನ್ಸ್ ಇಂಡಸ್ಟ್ರಿಗೆ 22 ಸಾವಿರ ಕೋಟಿ ಲಾಭ ಮಾಡಿದೆ. ಪ್ರತಿ ದೀಪಾವಳಿಗೆ ಗ್ರಾಹಕರಿಗೆ ಉಡುಗೊರೆ ನೀಡುತ್ತಿದ್ದ ಅಂಬಾನಿಗೆ ಈ ಬಾರಿ ಕಂಪನಿ ಭರ್ಜರಿ ಲಾಭದ ಉಡುಗೊರೆ ನೀಡಿದೆ.
India News Live 18th October: ಕೇವಲ 40 ನಿಮಿಷದಲ್ಲಿ ಅಚ್ಚರಿ, ವಂದೇ ಭಾರತ್ ರೈಲಿನ ಅನುಭವ ಹಂಚಿಕೊಂಡ ಡಾಕ್ಟರ್
ಕೇವಲ 40 ನಿಮಿಷದಲ್ಲಿ ಅಚ್ಚರಿ, ವಂದೇ ಭಾರತ್ ರೈಲಿನ ಅನುಭವ ಹಂಚಿಕೊಂಡ ಡಾಕ್ಟರ್, ರೈಲು ಪ್ರಯಾಣದ ವೇಳೆ ವಾಶ್ರೂಂನಲ್ಲಿ ನಡೆದ ಘಟನೆ ಹಾಗೂ ಮನೆಗೆ ಬಂದ ಬಳಿಕ ನಡೆದ ಘಟನೆಯನ್ನು ಡಾಕ್ಟರ್ ವಿವರಿಸಿದ್ದಾರೆ. ಅಷ್ಟಕ್ಕೂ 40 ನಿಮಿಷದ ಘಟನೆ ಏನು?
India News Live 18th October: ಗಂಡು ಮಕ್ಕಳೇ ಇಂತಹ ಸ್ನೇಹಿತರಿದ್ದರೆ ಬರ್ತ್ಡೇ ಆಗುತ್ತೆ ಡೆತ್ ಡೇ ಎಚ್ಚರ - ವೀಡಿಯೋ ವೈರಲ್
Birthday Prank Gone Wrong: ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವೀಡಿಯೋವೊಂದರಲ್ಲಿ, ಯುವಕನೊಬ್ಬನ ಹುಟ್ಟುಹಬ್ಬವನ್ನು ಆತನ ಸ್ನೇಹಿತರು ಅತ್ಯಂತ ಅಪಾಯಕಾರಿಯಾಗಿ ಆಚರಿಸಿದ್ದಾರೆ. ಯುವಕನನ್ನು ಕುರ್ಚಿಗೆ ಕಟ್ಟಿ, ಮುಖಕ್ಕೆ ಫೋಮ್ ಎರಚಿ ಉಸಿರುಗಟ್ಟಿಸುವಂತಹ ಕ್ರೌರ್ಯ ಮೆರೆದಿದ್ದಾರೆ.
India News Live 18th October: ಡಾನ್ಸ್ನಲ್ಲಿ Shilpa Shettyಯನ್ನೇ ಸುಸ್ತು ಮಾಡಿದ ಪುಟಾಣಿ - ಸೋಲೊಪ್ಪಿಕೊಂಡ ನಟಿ-ವಿಡಿಯೋ ವೈರಲ್
ಸೂಪರ್ ಡ್ಯಾನ್ಸರ್ ಶೋನಲ್ಲಿ ಪುಟಾಣಿ ಬಾಲಕಿಯೊಬ್ಬಳ ಡಾನ್ಸ್ಗೆ ಶಿಲ್ಪಾ ಶೆಟ್ಟಿ ಸೋಲೊಪ್ಪಿಕೊಂಡಿದ್ದಾರೆ. ಮತ್ತೊಂದೆಡೆ, ಶಿಲ್ಪಾ ಮತ್ತು ಪತಿ ರಾಜ್ ಕುಂದ್ರಾ ವಿರುದ್ಧ 60 ಕೋಟಿ ರೂ. ವಂಚನೆ ಆರೋಪ ಕೇಳಿಬಂದಿದ್ದು, ಈ ಪ್ರಕರಣದಲ್ಲಿ ಬಿಪಾಶಾ ಬಸು ಮತ್ತು ನೇಹಾ ಧೂಪಿಯಾ ಹೆಸರು ಕೂಡ ಉಲ್ಲೇಖವಾಗಿದೆ.
India News Live 18th October: ಪೊಲೀಸರ ಮುಂದೆಯೇ ಪ್ರೊಫೆಸರ್ಗೆ ಕಪಾಳಮೋಕ್ಷ ಮಾಡಿದ ವಿದ್ಯಾರ್ಥಿನಿ
Professor Slapped by Student: ದೆಹಲಿ ವಿಶ್ವವಿದ್ಯಾಲಯದ ಡಾ. ಭೀಮ್ ರಾವ್ ಅಂಬೇಡ್ಕರ್ ಕಾಲೇಜಿನಲ್ಲಿ, ವಿದ್ಯಾರ್ಥಿ ಸಂಘಟನೆಗಳ ನಡುವಿನ ವಿವಾದಕ್ಕೆ ಸಂಬಂಧಿಸಿದ ಸಭೆಯ ವೇಳೆ ವಿದ್ಯಾರ್ಥಿನಿಯೊಬ್ಬಳು ಪೊಲೀಸರ ಸಮ್ಮುಖದಲ್ಲೇ ಪ್ರೊಫೆಸರ್ಗೆ ಕಪಾಳಮೋಕ್ಷ ಮಾಡಿದ ಘಟನೆ ನಡೆದಿದೆ.
India News Live 18th October: ರಣಜಿ ಟ್ರೋಫಿ ಮೊದಲ ಪಂದ್ಯದಲ್ಲೇ ಮಿಂಚಿ ಮತ್ತೆ ಅಗರ್ಕರ್ ಬಾಯಿ ಮುಚ್ಚಿಸಿದ ಶಮಿ!
India News Live 18th October: ಬರೋಬ್ಬರಿ 149 ಕೋಟಿ ರೂಗೆ 186 ಲಕ್ಷುರಿ ಕಾರು ಖರೀದಿಸಿದ ಜೈನ್ಸ್, ಸಿಕ್ಕಿತು 21 ಕೋಟಿ ರೂ ಡಿಸ್ಕೌಂಟ್
ಬರೋಬ್ಬರಿ 149 ಕೋಟಿ ರೂಗೆ 186 ಲಕ್ಷುರಿ ಕಾರು ಖರೀದಿಸಿದ ಜೈನ್ಸ್, ಸಿಕ್ಕಿತು 21 ಕೋಟಿ ರೂ ಡಿಸ್ಕೌಂಟ್ , ವಿಶೇಷ ಅಂದರೆ ಈ ರೀತಿ ಏಕಕಾಲಕ್ಕೆ 186 ಐಷಾರಾಮಿ ಕಾರು ಖರೀದಿಸಿದ ಕಾರಣ ಒಟ್ಟು 21 ಕೋಟಿ ರೂಪಾಯಿ ಡಿಸ್ಕೌಂಟ್ ಸಿಕ್ಕಿದೆ.
India News Live 18th October: ಕೌನ್ ಬನೇಗಾ ಕರೋರ್ಪತಿಯಲ್ಲಿ Rishab Shetty ಗೆದ್ದ ಹಣವೆಷ್ಟು? ಎಡವಿದ್ದೆಲ್ಲಿ? ಉತ್ತರ ಗೊತ್ತಾ?
ಕೌನ್ ಬನೇಗಾ ಕರೋರ್ಪತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಟ ರಿಷಬ್ ಶೆಟ್ಟಿ, 12 ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಿ 12.50 ಲಕ್ಷ ರೂ. ಗೆದ್ದರು. ಈ ಹಣವನ್ನು ತಮ್ಮ ಫೌಂಡೇಷನ್ಗೆ ನೀಡುವುದಾಗಿ ಘೋಷಿಸಿದ ಅವರು, 'ಸೂಪರ್ ಸಂಧೂಕ್' ಸುತ್ತಿನಲ್ಲಿ ಸುಲಭ ಪ್ರಶ್ನೆಯೊಂದಕ್ಕೆ ತಪ್ಪು ಉತ್ತರ ನೀಡಿದರು,
India News Live 18th October: ದೆಹೆಲಿ ಸಂಸದರ ಫ್ಲ್ಯಾಟ್ನಲ್ಲಿ ಹೊತ್ತಿಕೊಂಡ ಬೆಂಕಿ, ಸ್ಥಳಕ್ಕೆ ದೌಡಾಯಿಸಿದ 6 ಅಗ್ನಿಶಾಮಕದಳ
ದೆಹೆಲಿ ಸಂಸದರ ಫ್ಲ್ಯಾಟ್ನಲ್ಲಿ ಹೊತ್ತಿಕೊಂಡ ಬೆಂಕಿ, ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕದಳ, ಭಾರಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯ ತೀವ್ರತೆಗೆ ಫ್ಲ್ಯಾಟ್ ಸಂಪೂರ್ಣ ಸುಟ್ಟುಕರಕಲಾಗಿದೆ. ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಯುತ್ತಿದೆ.
India News Live 18th October: K Annamalai - ನನಗೆ ಅದೆಲ್ಲಾ ಇಷ್ಟವಾಗಲ್ಲ ಪ್ಲೀಸ್ - ಅಭಿಮಾನಿಗಳಿಗೆ ಅಣ್ಣಾಮಲೈ ವಿಶೇಷ ಮನವಿ
K Annamalai request to fans: ತಮಿಳುನಾಡು ಬಿಜೆಪಿ ನಾಯಕ ಕೆ. ಅಣ್ಣಾಮಲೈ ಇಂತಹ ಚಟುವಟಿಕೆಗಳನ್ನು ತಕ್ಷಣವೇ ನಿಲ್ಲಿಸುವಂತೆ ಮತ್ತು ತಮ್ಮ ಕುಟುಂಬದ ಕಡೆಗೆ ಗಮನ ಹರಿಸುವಂತೆ ಅಣ್ಣಾಮಲೈ ತಮ್ಮ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.
India News Live 18th October: ಮದ್ವೆ ದಿನ ವಧುವಿನಂತೆ ವೇಷ ಧರಿಸಿ ವರನ ಕಾಡಿಸಿದ ಸ್ನೇಹಿತರು - ವೀಡಿಯೋ ಭಾರಿ ವೈರಲ್
Funny Wedding Video: ಸ್ನೇಹಿತರ ಉಪಸ್ಥಿತಿ ಮದುವೆಯಂತಹ ಕ್ಷಣಗಳನ್ನು ಅವಿಸ್ಮರಣೀಯವಾಗಿಸುತ್ತದೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವೀಡಿಯೋವೊಂದರಲ್ಲಿ, ಸ್ನೇಹಿತರು ವಧುವಿನಂತೆ ವೇಷ ಧರಿಸಿ ಮದುಮಗನಿಗೆ ತಮಾಷೆ ಮಾಡಿದ್ದಾರೆ. ಈ ವೀಡಿಯೋ ಭಾರಿ ವೈರಲ್ ಆಗಿದೆ.
India News Live 18th October: ಅತ್ಯಂತ ಮೌಲ್ಯಯುತ ಐಪಿಎಲ್ ತಂಡ - ಆರ್ಸಿಬಿ ನಂ.1 ಆಗಿದ್ದು ಹೇಗೆ?
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಮೊದಲ ಬಾರಿ ಟೈಟಲ್ ಗೆದ್ದ ನಂತರ $269 ಮಿಲಿಯನ್ ಬ್ರ್ಯಾಂಡ್ ಮೌಲ್ಯದೊಂದಿಗೆ ಐಪಿಎಲ್ನಲ್ಲಿ ಮುಂಬೈ ಮತ್ತು ಚೆನ್ನೈ ತಂಡಗಳನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದೆ. ಇದು ಸಾಧ್ಯವಾಗಿದ್ದು ಹೇಗೆ ಎನ್ನುವುದನ್ನು ನೋಡೋಣ ಬನ್ನಿ.
India News Live 18th October: ಭಾರತ ಎದುರಿನ ಏಕದಿನ ಸರಣಿಗೂ ಮುನ್ನ ಆಸ್ಟ್ರೇಲಿಯಾ ಪಡೆಗೆ ಬಿಗ್ ಶಾಕ್! ಸ್ಟಾರ್ ಆಲ್ರೌಂಡರ್ ಔಟ್
ಪರ್ತ್: ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಗೂ ಮುನ್ನ ಆತಿಥೇಯ ಆಸ್ಟ್ರೇಲಿಯಾ ತಂಡಕ್ಕೆ ಬಿಗ್ ಶಾಕ್ ಎದುರಾಗಿದ್ದು, ತಂಡದ ಪ್ರಮುಖ ಆಲ್ರೌಂಡರ್ ಭಾರತ ಎದುರಿನ ಸರಣಿಯಿಂದಲೇ ಹೊರಬಿದ್ದಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.
India News Live 18th October: ವರನ ಒಂದು ನಗುವಿಗೆ ಮುರಿದುಬಿತ್ತು ಮದುವೆ - ಮದ್ವೆ ಮನೇಲಿ ನಡೆದಿದ್ದೇನು?
Bride Calls Off Wedding: ವಾರಣಾಸಿಯಲ್ಲಿ, ವರನ ಸ್ನೇಹಿತರು ತನ್ನ ಗೆಳತಿಯರನ್ನು ಅವಮಾನಿಸಿದ್ದನ್ನು ಕಂಡು ವಧುವೊಬ್ಬಳು ಮದುವೆಯನ್ನೇ ನಿಲ್ಲಿಸಿದ್ದಾಳೆ. ತನ್ನ ಸ್ನೇಹಿತರನ್ನು ನಿಯಂತ್ರಿಸುವಂತೆ ವರನಿಗೆ ಹೇಳಿದಾಗ ಆತ ನಕ್ಕಿದ್ದರಿಂದ ವಧು ಮದ್ವೆಯನ್ನೇ ಮುರಿದಿದ್ದಾಳೆ.