ಇಸ್ರೇಲ್ನಲ್ಲಿ ನಡೆಯುತ್ತಿರುವ ಯುದ್ಧದ ನಡುವೆಯೇ ಪ್ರಧಾನಿ ನೆತನ್ಯಾಹು ಅವರ ಸಮ್ಮಿಶ್ರ ಸರ್ಕಾರಕ್ಕೆ ಆಘಾತ ಎದುರಾಗಿದೆ. ಸರ್ಕಾರಕ್ಕೆ ಬೆಂಬಲ ನೀಡಿದ್ದ ಪ್ರಮುಖ ಪಕ್ಷವೊಂದು ಹಿಂದೆ ಸರಿಯುವ ನಿರ್ಧಾರ ಪ್ರಕಟಿಸಿದೆ.
- Home
- News
- India News
- India latest news live: ಅಧಿಕಾರ ಕಳೆದುಕೊಳ್ತಾರಾ ಇಸ್ರೇಲ್ ಪ್ರಧಾನಿ ನೆತನ್ಯಾಹು? ಗುಡ್ ಬೈ ಹೇಳಿದ ಸಮ್ಮಿಶ್ರ ಸರ್ಕಾರದ ಪ್ರಮುಖ ಪಕ್ಷ!
India latest news live: ಅಧಿಕಾರ ಕಳೆದುಕೊಳ್ತಾರಾ ಇಸ್ರೇಲ್ ಪ್ರಧಾನಿ ನೆತನ್ಯಾಹು? ಗುಡ್ ಬೈ ಹೇಳಿದ ಸಮ್ಮಿಶ್ರ ಸರ್ಕಾರದ ಪ್ರಮುಖ ಪಕ್ಷ!

ಕ್ಯಾಲಿಫೋರ್ನಿಯಾ: ಭೂಮಿಗೆ 18 ದಿನ ಕಳೆದ ನಂತರ ಬಂದಿರುವ ಶುಭಾಂಶು ಶುಕ್ಲಾ ಹಾಗೂ ಇತರ ಗಗನಯಾನಿಗಳು ಕೆಲವು ದಿನ ಸವಾಲಿನ ಸ್ಥಿತಿ ಎದುರಿಸಲಿದ್ದಾರೆ. ನಿರ್ವಾತ ಪ್ರದೇಶ ವಾಸದಿಂದ ಗುರುತ್ವಾಕರ್ಷಣೆಯಿರುವ ಮಾತೃಗ್ರಹಕ್ಕೆ ಬಂದಿರುವ ಶುಭಾಂಶು, ಇಲ್ಲಿನ ವಾತಾವರಣಕ್ಕೆ ಒಗ್ಗಿಕೊಳ್ಳುವಲ್ಲಿ ಕೆಲವು ಸವಾಲು ಎದುರಿಸಬೇಕಾಗುತ್ತದೆ. ಹೀಗಾಗಿ ಎಲ್ಲ ಯಾತ್ರಿಕರಿಗೆ 1 ವಾರ ಪುನಶ್ವೇತನ ಶಿಬಿರ ಹಮ್ಮಿ ಕೊಳ್ಳಲಾಗಿದೆ. ನಂತರ ಅವರು ಶಿಬಿರದಿಂದ ಹೊರಬಂದು ಸಾರ್ವಜನಿಕರ ಜತೆ ಬೆರೆಯಲಿದ್ದಾರೆ. ಗಗನಯಾನದಿಂದ ಬಂದ ನಂತರ ಯಾತ್ರಿಗಳು ತಲೆ ಸುತ್ತುವಿಕೆ, ವಾಕರಿಕೆ, ಅಸ್ಥಿರ ನಡಿಗೆ, ತೊದಲುವಿಕೆಯಂತಹ ಸಮಸ್ಯೆಗಳನ್ನು ಎದುರಿಸುವ ಅಪಾಯವಿರುತ್ತದೆ. ಗಗನಯಾನಿಗಳ ಸ್ನಾಯುಗಳಲ್ಲಿ ಜೀವಕೋಶಗಳ ನಷ್ಟವಾಗುತ್ತದೆ. ಅಂತೆಯೇ, ಬೆನ್ನು, ಸೊಂಟ, ತೊಡೆ ಎಲುಬುಗಳ ಶೇ.1ರಷ್ಟು ಸಾಂದ್ರತೆ ಕಳೆದುಕೊಳ್ಳುತ್ತಾರೆ. ಗುರುತ್ವಾಕರ್ಷಣೆ ಕೊರತೆಯಿಂದ ದೇಹದ ದ್ರವಗಳು ಗಗನಯಾತ್ರಿಗಳ ತಲೆ ಭಾಗದಲ್ಲಿ ಶೇಖರಣೆಯಾಗಿ ಅದು ಊದಿ ಕೊಂಡಿರುವ ಸಾಧ್ಯತೆ ಇರುತ್ತದೆ. ದೇಹದ ಕೆಳಭಾಗದಲ್ಲಿ ದ್ರವಗಳ ಕೊರತೆಯಿಂದಾಗಿ ಕಾಲುಗಳು ಕೃಶ ಮತ್ತು ಬಲಹೀನವಾಗಿರುತ್ತವೆ. ಜೊತೆಗೆ, ಪಾದದ ಚರ್ಮದ ಪದರ ಕಿತ್ತುಹೋಗಿ, ಅದು ತೆಳ್ಳಗೆ ಹಾಗೂ ಮೃದು ವಾಗುತ್ತದೆ. ಪರಿಣಾಮವಾಗಿ ಭೂಮಿಗೆ ಮರಳುತ್ತಿದ್ದಂತೆ ಗಗನಯಾತ್ರಿಗಳು ನಡೆಯಲು
ಕಷ್ಟಪಡುವಂತಾಗುತ್ತದೆ. ಈ ಪುನಶ್ಚೇತನ ಶಿಬಿರ ಅವರಿಗೆ ಆರೈಕೆ ನೀಡಲಿದೆ.
India latest news live 15th july 2025ಅಧಿಕಾರ ಕಳೆದುಕೊಳ್ತಾರಾ ಇಸ್ರೇಲ್ ಪ್ರಧಾನಿ ನೆತನ್ಯಾಹು? ಗುಡ್ ಬೈ ಹೇಳಿದ ಸಮ್ಮಿಶ್ರ ಸರ್ಕಾರದ ಪ್ರಮುಖ ಪಕ್ಷ!
India latest news live 15th july 2025'ಜೈಲಿಗೆ ಹೋಗೋದನ್ನ ತಪ್ಪಿಸಲು ಮೋದಿ-ಶಾಗೂ ಸಾಧ್ಯವಿಲ್ಲ - ರಾಹುಲ್ ಗಾಂಧಿ ಹೇಳಿಕೆಗೆ ಅಸ್ಸಾ ಸಿಎಂ ತಿರುಗೇಟು!
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರನ್ನು ಭ್ರಷ್ಟರು ಎಂದು ಕರೆದ ರಾಹುಲ್ ಗಾಂಧಿ, ಅವರು ಶೀಘ್ರದಲ್ಲೇ ಜೈಲಿಗೆ ಹೋಗುತ್ತಾರೆ ಎಂದು ಹೇಳಿದ್ದಾರೆ. ಶರ್ಮಾ ಅವರು ಅಸ್ಸಾಂನ ಭೂಮಿಯನ್ನು ಕದಿಯುತ್ತಿದ್ದಾರೆ ಎಂದು ಆರೋಪಿಸಿದರು.
India latest news live 15th july 2025ದೆಹಲಿಯ ಸೇಂಟ್ ಥಾಮಸ್ ಶಾಲೆಗೆ ಬಾಂಬ್ ಬೆದರಿಕೆ ಹಾಕಿದ್ದು ಹಿಂದೆ 12 ವರ್ಷದ ಬಾಲಕ! ಕಾರಣ ಕೇಳಿ ಬೆಚ್ಚಿಬಿದ್ದ ಪೊಲೀಸರು!
India latest news live 15th july 2025ಇಪಿಎಫ್ಓನಿಂದ ಉದ್ಯೋಗಿಗಳಿಗೆ ಮತ್ತೊಂದು ಬಂಪರ್ ನ್ಯೂಸ್, ಪಿಂಚಣಿ ಹಣಕ್ಕೆ 58 ವರ್ಷ ಕಾಯಬೇಕಂತಿಲ್ಲ!
ಪರಿಗಣಿಸಲಾಗುತ್ತಿರುವ ಬದಲಾವಣೆಗಳನ್ನು ಜಾರಿಗೆ ತಂದರೆ, ಉದ್ಯೋಗಿಗಳು ತಮ್ಮ 30 ರ ಹರೆಯದಲ್ಲೂ ತಮ್ಮ ಸಂಪೂರ್ಣ ಇಪಿಎಫ್ಓ ನಿಧಿಯನ್ನು ಹಿಂಪಡೆಯಲು ಅವಕಾಶ ನೀಡಲಾಗುತ್ತದೆ.
India latest news live 15th july 2025ಭಾರತದ ರಾಗಿಗಳ ರಾಣಿ - 30 ಅಪರೂಪದ ರಾಗಿ ತಳಿಗಳ ರಕ್ಷಿಸಿದ್ದಾರೆ ಈ ಬುಡಕಟ್ಟು ಮಹಿಳೆ
30 ವಿಧದ ಅಪರೂಪದ ರಾಗಿ ತಳಿಗಳನ್ನು ರಕ್ಷಿಸಿ, ನೂರಾರು ಮಹಿಳೆಯರಿಗೆ ತರಬೇತಿ ನೀಡಿರುವ ಒಡಿಶಾದ ಬುಡಕಟ್ಟು ಮಹಿಳೆ ರೈಮತಿ ಘಿಯುರಿಯಾ ಅವರ ಸಾಹಸಗಾಥೆ ಇಲ್ಲಿದೆ.
India latest news live 15th july 2025ಭಾರತೀಯರು ಮಾಂಸಾಹಾರಿ ಹಾಲು ಒಪ್ಪಿಕೊಳ್ಳಲ್ಲ - ಅಮೆರಿಕಾಗೆ ಕಡ್ಡಿ ಮುರಿದಂತೆ ಹೇಳಿದ ಭಾರತ
ಅಮೆರಿಕದ ಹಾಲಿನ ಉತ್ಪನ್ನಗಳ ಆಮದು ವಿಚಾರದಲ್ಲಿ ಭಾರತ ಮತ್ತು ಅಮೆರಿಕದ ನಡುವೆ ಭಿನ್ನಾಭಿಪ್ರಾಯ ಉಂಟಾಗಿದೆ. ಮಾಂಸಾಹಾರಿ ಆಹಾರ ಸೇವಿಸುವ ಹಸುಗಳ ಹಾಲನ್ನು ಭಾರತ ಒಪ್ಪಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
India latest news live 15th july 2025ಜೀವ ಬೆದರಿಕೆ ಬೆನ್ನಲ್ಲೇ, ಜನಪ್ರಿಯ ಬಾಂದ್ರಾ ಅಪಾರ್ಟ್ಮೆಂಟ್ ದುಬಾರಿ ಬೆಲೆಗೆ ಮಾರಾಟ ಮಾಡಿದ ಸಲ್ಮಾನ್ ಖಾನ್!
ಈ ಅಪಾರ್ಟ್ಮೆಂಟ್ ಶಿವ ಆಸ್ಥಾನ್ ಹೈಟ್ಸ್ ಪುನರಾಭಿವೃದ್ಧಿ ಯೋಜನೆಯಲ್ಲಿದೆ, ಇದನ್ನು ದಿವಂಗತ ಡೆವಲಪರ್ ಮತ್ತು ರಾಜಕಾರಣಿ ಬಾಬಾ ಸಿದ್ದಿಕ್ ನಿರ್ಮಿಸಿದ್ದರು.
India latest news live 15th july 2025ಎನ್ಆರ್ಐಗಳಿಗೆ ಅಲರ್ಟ್, ಐಪಿಟಿವಿಯಿಂದ ನೀವು ಸಮಸ್ಯೆಗೆ ಒಳಗಾಗಬಹುದು
ಕಡಿಮೆ ಬೆಲೆಯ ಭಾರತೀಯ ಚಾನೆಲ್ಗಳು ಮತ್ತು ಒಟಿಟಿ ಕಂಟೆಂಟ್ಗಳನ್ನು ನೀಡುವ ಐಪಿಟಿವಿಗಳು ವಿದೇಶದಲ್ಲಿರುವ ಭಾರತೀಯರನ್ನು ಸಮಸ್ಯೆಗೆ ಸಿಲುಕಿಸುತ್ತಿವೆ. ಕಾನೂನುಬಾಹಿರವಾಗಿ ಕಂಟೆಂಟ್ ಕದ್ದು ಮಾರಾಟ ಮಾಡುವ ಐಪಿಟಿವಿ ಮಾಫಿಯಾವನ್ನು ಪೊಲೀಸರು ಬೇಟೆಯಾಡುತ್ತಿದ್ದಾರೆ.
India latest news live 15th july 2025ತೂಕ ಇಳಿಸಿಕೊಳ್ಳಲು ಹೋಗಿ ಪ್ರಾಣವನ್ನೇ ಕಳೆದುಕೊಂಡ ಬಿಜೆಪಿ ನಾಯಕನ ಸೋದರಿ
Weight Loss Treatment: ನಗರದ ಖಾಸಗಿ ಆಸ್ಪತ್ರೆಯಲ್ಲಿ ತೂಕ ಇಳಿಕೆ ಶಸ್ತ್ರಚಿಕಿತ್ಸೆ ವೇಳೆ ಬಿಜೆಪಿ ನಾಯಕನ ಸೋದರಿ ರಜನಿ ದೇವಿ ಸಾವನ್ನಪ್ಪಿದ್ದಾರೆ. ಆಸ್ಪತ್ರೆಯ ನಿರ್ಲಕ್ಷ್ಯದಿಂದ ಸಾವು ಸಂಭವಿಸಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
India latest news live 15th july 2025ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ 2025 ಪ್ರಶಸ್ತಿ, ಅರ್ಜಿ ಸಲ್ಲಿಕೆಗೆ ಜು.31 ಕೊನೇ ದಿನ!
India latest news live 15th july 2025ಮರಳಿ ಮಣ್ಣಿಗೆ - ಇಂಜಿನಿಯರಿಂಗ್ ವೃತ್ತಿ ತೊರೆದು ಕೃಷಿಗೆ ಮರಳಿದ ಈಕೆ ಈಗ ಕೋಟ್ಯಾಧಿಪತಿ
ಕಂಪ್ಯೂಟರ್ ಸೈನ್ಸ್ನಲ್ಲಿ ಎಂಜಿನಿಯರಿಂಗ್ ಮತ್ತು ಎಂಬಿಎ ಪದವಿ ಪಡೆದ ಸ್ಮರಿಕಾ ಚಂದ್ರಕರ್, ಐದು ವರ್ಷಗಳ ಕಾಲ ಕಾರ್ಪೊರೇಟ್ ಉದ್ಯೋಗ ಮಾಡಿದ ನಂತರ ಕೃಷಿಯತ್ತ ಮುಖ ಮಾಡಿದರು. ಈಗ ವಿವಿಧ ತರಕಾರಿಗಳನ್ನು ಬೆಳೆದು ವಾರ್ಷಿಕ 1.5 ಕೋಟಿ ರೂ. ವಹಿವಾಟು ನಡೆಸುತ್ತಿದ್ದಾರೆ.
India latest news live 15th july 2025ಅಪಾರ್ಟ್ಮೆಂಟ್ನಲ್ಲಿ 14 ವರ್ಷದ ಬಾಲಕಿಯ ಗ್ಯಾಂಗ್ರೇಪ್ ಮಾಡಿದ 4 ಅಪ್ರಾಪ್ತ ಹುಡುಗರು!
ಆರೋಪಿಗಳಲ್ಲಿ ಒಬ್ಬ ಗಾಜಿಯಾಬಾದ್ನಲ್ಲಿ ಹನ್ನೊಂದನೇ ತರಗತಿಯ ವಿದ್ಯಾರ್ಥಿ ಆಗಿದ್ದಾನೆ. ಹಲ್ಲೆ ನಡೆಸುವ ಎರಡು ದಿನಗಳ ಮೊದಲು ಇನ್ಸ್ಟಾಗ್ರಾಮ್ನಲ್ಲಿ ಬಾಲಕಿಗೆ ಕಿರುಕುಳ ನೀಡುತ್ತಿದ್ದ ಎಂದು ತಂದೆಯ ದೂರಿನಲ್ಲಿ ತಿಳಿಸಲಾಗಿದೆ.
India latest news live 15th july 2025ವಿದೇಶದ ಜೈಲಿನಲ್ಲಿದ್ದಾರೆ 10 ಸಾವಿರಕ್ಕೂ ಅಧಿಕ ಭಾರತೀಯರು, ಯಾವ ದೇಶದಲ್ಲಿ ಗರಿಷ್ಠ?
ಸೌದಿ ಅರೇಬಿಯಾ, ಯುಎಇ, ನೇಪಾಳ ಸೇರಿದಂತೆ ವಿವಿಧ ದೇಶಗಳ ಜೈಲುಗಳಲ್ಲಿ ಸಾವಿರಾರು ಭಾರತೀಯರು ಶಿಕ್ಷೆ (indians in foreign Jail) ಅನುಭವಿಸುತ್ತಿದ್ದಾರೆ. ಯಾವ ದೇಶದಲ್ಲಿ ಎಷ್ಟು ಮಂದಿ ಭಾರತೀಯರು ಜೈಲುವಾಸ ಅನುಭವಿಸುತ್ತಿದ್ದಾರೆ ಎಂಬ ಮಾಹಿತಿ ಇಲ್ಲಿದೆ.
India latest news live 15th july 2025ಸೆಪ್ಟೆಂಬರ್ನಿಂದ ATMನಲ್ಲಿ 500 ರೂ, ನೋಟುಗಳು ಸಿಗಲ್ಲವಾ? RBI ನೀಡಿದ ಸ್ಪಷ್ಟನೆ ಏನು?
Rs 500 notes: ಸೆಪ್ಟೆಂಬರ್ ನಿಂದ ₹500 ರದ್ದತಿ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪೋಸ್ಟ್ಗಳ ಬಗ್ಗೆ ಪಿಐಬಿ ಸ್ಪಷ್ಟನೆ ನೀಡಿದೆ.
India latest news live 15th july 2025ಅಪ್ಪಾ ಎಂದು ಕರೆದಿದ್ದಕ್ಕೆ 4 ವರ್ಷದ ಮಗಳನ್ನ ಕೊಂದು ಸಮುದ್ರಕ್ಕೆ ಎಸೆದ ತಂದೆ
ನಾಲ್ಕು ವರ್ಷದ ಬಾಲಕಿಯನ್ನು ಕೊಲೆ ಮಾಡಿ ಸಮುದ್ರಕ್ಕೆ ಎಸೆದ ಘಟನೆ ನಡೆದಿದೆ. ಮಲತಂದೆಯೇ ಕೊಲೆಗೈದಿದ್ದು, ಮಗು ತನ್ನನ್ನು 'ಅಪ್ಪಾ' ಎಂದು ಕರೆದಿದ್ದಕ್ಕೆ ಕೋಪಗೊಂಡು ಈ ಕೃತ್ಯ ಎಸಗಿರುವುದಾಗಿ ತಿಳಿದುಬಂದಿದೆ.
India latest news live 15th july 2025ಶ್ರೀಮಂತಿಕೆ ನೆಮ್ಮದಿ ಕೊಡಲ್ಲ, ಕೋಟಿ ಗಳಿಸಿದ್ರೂ ನೆಮ್ಮದಿ ಇಲ್ಲ ಎಂದ ಉದ್ಯಮಿ
28 ವರ್ಷದ ಯುವ ಉದ್ಯಮಿಯೊಬ್ಬರು ಕೋಟಿ ಸಂಪಾದಿಸುತ್ತಿದ್ದರೂ ನೆಮ್ಮದಿ ಇಲ್ಲ ಎಂದು ಹೇಳಿಕೊಂಡಿದ್ದಾರೆ. ಆರೋಗ್ಯ ಹದಗೆಟ್ಟಿದೆ, ಆಯಾಸದಿಂದ ಬಳಲುತ್ತಿದ್ದಾರೆ ಎಂದು ಅವರು ಬರೆದುಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ಪೋಸ್ಟ್ ಭಾರಿ ಚರ್ಚೆಗೆ ಗ್ರಾಸವಾಗಿದೆ.
India latest news live 15th july 2025ನಿಮಿಷಾ ಪ್ರಿಯಾ ಬಿಡುಗಡೆಗೆ ಹೋರಾಟ ನಡೆಸ್ತಿರೋ ಮುಸ್ಲಿಂ ಧರ್ಮಗುರು ಕಾಂತಪುರಂ ಮುಸ್ಲಿಯಾರ್ ಯಾರು?
Who is Kanthapuram AP Aboobacker Musliyar: ಯೆಮೆನ್ನಲ್ಲಿ ಮರಣದಂಡನೆ ಶಿಕ್ಷೆಗೆ ಗುರಿಯಾಗಿರುವ ನಿಮಿಷಾ ಪ್ರಿಯಾಳನ್ನು ಬಿಡುಗಡೆ ಮಾಡಿಸಲು ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ಪ್ರಯತ್ನಿಸುತ್ತಿದ್ದಾರೆ.
India latest news live 15th july 2025ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದ ಕಮಲ್ ಹಾಸನ್.. ರಜನಿಕಾಂತ್ ಮನೆಗೆ ಭೇಟಿ ನೀಡಿದ್ಯಾಕೆ?
ಚೆನ್ನೈನ ಪೋಯಸ್ ಗಾರ್ಡನ್ನಲ್ಲಿರುವ ರಜನಿಕಾಂತ್ ಅವರ ಮನೆಗೆ ಕಮಲ್ ಹಾಸನ್ ಭೇಟಿ ನೀಡಿ, ಅವರ ಜೊತೆ ತೆಗೆದ ಫೋಟೋಗಳನ್ನು ಎಕ್ಸ್ನಲ್ಲಿ ಹಂಚಿಕೊಂಡಿದ್ದಾರೆ.
India latest news live 15th july 2025PM Kisan Yojana - 'ಪ್ರಧಾನಿ ಮಂತ್ರಿ ಕಿಸಾನ್ ಯೋಜನೆ'ಯ ಹಣ ಬರುತ್ತಿಲ್ವಾ? ಕೂಡಲೇ ಹೀಗೆ ಮಾಡಿ
ಬಡ ರೈತರಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಆರಂಭಿಸಲಾಗಿರುವ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಹಣ ನಿಮಗೆ ಬರುತ್ತಿಲ್ವಾ? ಹಾಗಿದ್ದರೆ ಕೂಡಲೇ ಹೀಗೆ ಮಾಡಿ...
India latest news live 15th july 2025ದಾಖಲೆ ಬೆಲೆಗೆ ಮಾರಾಟವಾದ ಅಪರೂಪದ ಮಹಾತ್ಮ ಗಾಂಧೀಜಿ ಫೋಟೋ
ಲಂಡನ್ ಹರಾಜಿನಲ್ಲಿ ಮಹಾತ್ಮ ಗಾಂಧೀಜಿಯವರ ಅಪರೂಪದ ಆಯಿಲ್ ಪೇಂಟಿಂಗ್ ದಾಖಲೆ ಬೆಲೆಗೆ ಮಾರಾಟವಾಗಿದೆ. ಟ್ರಾವೆಲ್ ಮತ್ತು ಎಕ್ಸ್ಪ್ಲೋರೇಷನ್ ಆನ್ಲೈನ್ ಮಾರಾಟದಲ್ಲಿ ಇದುವರೆಗಿನ ಅತ್ಯಧಿಕ ಬೆಲೆ ಇದಾಗಿದೆ.