MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • Karna Serial: ಕರ್ಣನ ನಗು ಕಿತ್ತುಕೊಂಡ್ರು ನೀಚರಿಗೆ ತೃಪ್ತಿಯಾಗಲಿಲ್ವಾ? ನಿತ್ಯಾ, ನಿಧಿಗೆ ಶಾಕ್‌ ಮೇಲೆ ಶಾಕ್

Karna Serial: ಕರ್ಣನ ನಗು ಕಿತ್ತುಕೊಂಡ್ರು ನೀಚರಿಗೆ ತೃಪ್ತಿಯಾಗಲಿಲ್ವಾ? ನಿತ್ಯಾ, ನಿಧಿಗೆ ಶಾಕ್‌ ಮೇಲೆ ಶಾಕ್

Karna saves Nidhi from fire: ಶಾಂತಿ ಅಜ್ಜಿಯ ಮನೆಗೆ ಬೆಂಕಿ ಬಿದ್ದು, ನಿಧಿ ಮತ್ತು ಅಜ್ಜಿ ಬೀದಿಗೆ ಬಂದಿದ್ದಾರೆ. ಹೊತ್ತಿ ಉರಿಯುತ್ತಿರುವ ಮನೆಯೊಳಗೆ ಸಿಲುಕಿದ ನಿಧಿಯನ್ನು ಕರ್ಣ ರಕ್ಷಿಸಿದ್ದಾನೆ. ಈಗ ಮನೆ ಕಳೆದುಕೊಂಡ ಪ್ರೇಯಸಿ ಮತ್ತು ಅಜ್ಜಿಗೆ ಆಶ್ರಯ ನೀಡುವ ಜವಾಬ್ದಾರಿ ಕರ್ಣನ ಮೇಲಿದೆ.

1 Min read
Mahmad Rafik
Published : Oct 20 2025, 10:05 PM IST
Share this Photo Gallery
  • FB
  • TW
  • Linkdin
  • Whatsapp
15
ಶಾಕ್‌ ಮೇಲೆ ಶಾಕ್
Image Credit : Zee kannada

ಶಾಕ್‌ ಮೇಲೆ ಶಾಕ್

ಅಜ್ಜಿ ಮತ್ತು ತಾಯಿಯನ್ನು ಹೊರತುಪಡಿಸಿ ಮನೆಯ ಎಲ್ಲಾ ಸದಸ್ಯರು ಕರ್ಣನನ್ನು ತುಂಬಾ ಕೀಳಾಗಿ ನೋಡುತ್ತಾರೆ. ತಂದೆ, ಅತ್ತೆ, ಚಿಕ್ಕಮ್ಮ, ಚಿಕ್ಕಪ್ಪ ಮತ್ತು ಸೋದರ ಕೊಂಕು ಮಾತುಗಳನ್ನಾಡುತ್ತಿದ್ರೂ ಕರ್ಣ ಮುಖದಲ್ಲಿನ ನಗು ಮಾಯವಾಗಿರಲಿಲ್ಲ. ಯಾರು ಏನೇ ಅಂದ್ರೂ ಕರ್ಣ ನಗುತ್ತಿದ್ದನು. ಕುತಂತ್ರದಿಂದ ನಿತ್ಯಾಳನ್ನು ಕರ್ಣ ಮದುವೆಯಾಗಿದ್ದಾನೆ.

25
ಮತ್ತೊಂದು ಆಘಾತಕಾರಿ ಸುದ್ದಿ
Image Credit : Zee Kannada

ಮತ್ತೊಂದು ಆಘಾತಕಾರಿ ಸುದ್ದಿ

ಕರ್ಣನ ನಗು ಕಿತ್ತುಕೊಂಡ ನೀಚರಿಗೆ ಇಷ್ಟಾದ್ರು ತೃಪ್ತಿಯಾಗಿಲ್ಲ. ಮದುವೆ ಮುರಿದು ಇಷ್ಟವಿಲ್ಲದ ವ್ಯಕ್ತಿ ಕರ್ಣನ ಜೊತೆ ನಿತ್ಯಾ ಸಪ್ತಪದಿ ತುಳಿದಿದ್ದಾಳೆ. ಪ್ರೀತಿ ಕಳೆದುಕೊಂಡು ನಿಧಿ ಭಗ್ನಪ್ರೇಮಿಯಾಗಿ ಕಿರುಚುತ್ತಾ ಕಣ್ಣೀರು ಹಾಕಿದ್ದಾಳೆ. ಈ ಎಲ್ಲದರ ನಡುವೆ ನಿಧಿ ಮತ್ತು ನಿತ್ಯಾಗೆ ಮತ್ತೊಂದು ಆಘಾತಕಾರಿ ಸುದ್ದಿ ಬಂದಿದೆ. ನಿತ್ಯಾಳ ಮದುವೆಯಾಯ್ತು ಅಂತ ಖುಷಿಯಲ್ಲಿದ್ದ ಶಾಂತಿ ಅಜ್ಜಿ ಇರೋ ಒಂದು ಆಸರೆಯನ್ನು ಕಳೆದುಕೊಂಡಿದ್ದಾಳೆ.

Related Articles

Related image1
Karna Serial: ನಾಲ್ಕು ಗೋಡೆಯಲ್ಲಿ ನಡೆದ ಗುಟ್ಟು ರಟ್ಟು, ನಿಟ್ಟುಸಿರು ಬಿಟ್ಟ ಪ್ರೇಕ್ಷಕರು
Related image2
Karna Serial: ನಿಜ ಜೀವನದಲ್ಲಿಯೂ ಕರ್ಣನೇ ನಟ ಕಿರಣ್​ ರಾಜ್​- ವಿಡಿಯೋ ನೋಡಿ ಮಹಾರಾಜರೂ ಭಾವುಕ
35
ಮನೆಗೆ ಬೆಂಕಿ ಹಾಕಿದ್ಯಾರು?
Image Credit : Zee Kannada

ಮನೆಗೆ ಬೆಂಕಿ ಹಾಕಿದ್ಯಾರು?

ಹೌದು ಶಾಂತಿ ಅಜ್ಜಿಗೆ ಆಸರೆಯಾಗಿದ್ದ ಮನೆಗೆ ಬೆಂಕಿ ಬಿದ್ದಿದೆ. ಬೆಂಕಿ ಬಿದ್ದಿರುವ ವಿಷಯ ತಿಳಿಯುತ್ತಿದ್ದಂತೆ ಎಲ್ಲರೂ ಮದುವೆ ಮಂಟಪದಿಂದ ಮನೆಯತ್ತ ಓಡಿ ಹೋಗಿದ್ದಾರೆ. ಕಣ್ಮುಂದೆಯೇ ಹೊತ್ತಿ ಉರಿಯುತ್ತಿರುವ ಮನೆ ನೋಡಿ ಶಾಂತಿ, ನಿತ್ಯಾ ಕಣ್ಣೀರು ಹಾಕಿದ್ದಾರೆ. ಇದೆಲ್ಲದರ ನಡುವೆಯೇ ಹೊತ್ತಿ ಉರಿಯುತ್ತಿರುವ ಮನೆಯೊಳಗೆ ನಿಧಿ ಹೋಗಿದ್ದಾಳೆ.

45
ನಿಧಿಯನ್ನು ರಕ್ಷಿಸಿದ ಕರ್ಣ
Image Credit : Zee Kannada

ನಿಧಿಯನ್ನು ರಕ್ಷಿಸಿದ ಕರ್ಣ

ನಿಧಿ ಬರ್ತ್‌ ಡೇಗೆ ಕರ್ಣ ಮುದ್ದಾದ ಪಿಂಕ್ ಡಾಲ್ ನೀಡಿದ್ದನು. ತನ್ನ ಪ್ರೀತಿಯ ಸಂಕೇತವಾಗಿರುವ ಗೊಂಬೆಯನ್ನು ಕಾಪಾಡಿಕೊಳ್ಳಲು ಮನೆಯೊಳಗೆ ಹೋದ ನಿಧಿ ಬೆಂಕಿಯಲ್ಲಿ ಸಿಲುಕಿಕೊಂಡಿದ್ದಾಳೆ. ನಿಧಿ ಹಿಂದೆಯೇ ಒಳಗೆ ಹೋದ ಕರ್ಣ ನಿಮ್ಮನ್ನು ಕಳೆದುಕೊಳ್ಳಲು ನನಗಿಷ್ಟ ಇಲ್ಲ ಎಂದು ಪ್ರೇಯಸಿಯನ್ನು ರಕ್ಷಿಸಿದ್ದಾನೆ.

ಇದನ್ನೂ ಓದಿ: ಕರ್ಣ ನಿಧಿಯನ್ನೇ ಮದ್ವೆ ಆಗ್ಲೇಬೇಕು ಅಂತಿರೋದ್ಯಾಕೆ?; ವೀಕ್ಷಕರಿಂದಲೇ ಬಂತು ಹೃದಯಸ್ಪರ್ಶಿ ಕಾಮೆಂಟ್ಸ್

55
ಕರ್ಣನ ಮನೆಯಲ್ಲಿ ಸಿಗುತ್ತಾ ಆಶ್ರಯ?
Image Credit : Zee Kannada

ಕರ್ಣನ ಮನೆಯಲ್ಲಿ ಸಿಗುತ್ತಾ ಆಶ್ರಯ?

ಮನೆ ಕಳೆದುಕೊಂಡು ಶಾಂತಿ ಅಜ್ಜಿ ಮತ್ತು ನಿಧಿ ಬೀದಿಗೆ ಬಂದಿದ್ದಾರೆ. ನಿತ್ಯಾ ಜೊತೆಯಲ್ಲಿಯೇ ನಿಧಿ ಮತ್ತು ಅಜ್ಜಿಯನ್ನು ಕರ್ಣ ತನ್ನ ಮನೆಗೆ ಕರೆದುಕೊಂಡು ಹೋಗುವ ಸಾಧ್ಯತೆಗಳಿವೆ. ನಿಧಿ ಮನೆಗೆ ಬೆಂಕಿ ಬಿದ್ದಿರುವ ಹಿಂದೆ ಕರ್ಣನ ತಂದೆ ರಮೇಶ್‌ನ ಕೈವಾಡ ಇರೋ ಸಾಧ್ಯತೆಗಳಿವೆ. ಇದಕ್ಕೆಲ್ಲಾ ಕಾರಣ ಯಾರು ಅನ್ನೋದು ಮುಂದಿನ ಸಂಚಿಕೆಯಲ್ಲಿ ತಿಳಿಯಲಿದೆ.

ಇದನ್ನೂ ಓದಿ: ತಾಳಿ ಕಟ್ಟಲಿಲ್ಲ, ಗಂಡನಾಗಲಿಲ್ಲ; ನಿತ್ಯಾ ಹೊಟ್ಟೆಯಲ್ಲಿ ಬೆಳೆಯುವ ಮಗುವಿಗೆ ಅಪ್ಪನಾಗ್ತಾನಾ ಕರ್ಣ?

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಕರ್ಣ ಧಾರಾವಾಹಿ
ಕನ್ನಡ ಧಾರಾವಾಹಿ
ಜೀ ಕನ್ನಡ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved