MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • Karna Serial: ನಾಲ್ಕು ಗೋಡೆಯಲ್ಲಿ ನಡೆದ ಗುಟ್ಟು ರಟ್ಟು, ನಿಟ್ಟುಸಿರು ಬಿಟ್ಟ ಪ್ರೇಕ್ಷಕರು

Karna Serial: ನಾಲ್ಕು ಗೋಡೆಯಲ್ಲಿ ನಡೆದ ಗುಟ್ಟು ರಟ್ಟು, ನಿಟ್ಟುಸಿರು ಬಿಟ್ಟ ಪ್ರೇಕ್ಷಕರು

ಜೀ ಕನ್ನಡದ ಕರ್ಣ ಧಾರಾವಾಹಿಯಲ್ಲಿ ಅನಿರೀಕ್ಷಿತ ತಿರುವು ಎದುರಾಗಿದ್ದು, ಕರ್ಣ ತನ್ನ ಪ್ರೀತಿಯನ್ನು ತ್ಯಾಗ ಮಾಡಿ ನಿತ್ಯಾಳನ್ನು ಮದುವೆಯಾಗುವ ಪರಿಸ್ಥಿತಿ ಬಂದಿದೆ. ಆದರೆ, ನಿತ್ಯಾ ತಾನೇ ತಾಳಿ ಕಟ್ಟಿಕೊಳ್ಳುವ ಮೂಲಕ ಕಥೆಗೆ ಹೊಸ ರೂಪ ನೀಡಲಾಗಿದೆ.

1 Min read
Mahmad Rafik
Published : Oct 19 2025, 11:57 AM IST
Share this Photo Gallery
  • FB
  • TW
  • Linkdin
  • Whatsapp
15
 ಕರ್ಣ ಸೀರಿಯಲ್ ರೋಚಕ ತಿರವು
Image Credit : Zee Kannada

ಕರ್ಣ ಸೀರಿಯಲ್ ರೋಚಕ ತಿರವು

ಜೀ ಕನ್ನಡದ ಕರ್ಣ ಸೀರಿಯಲ್ ರೋಚಕ ತಿರವು ಪಡೆದುಕೊಂಡಿದೆ. ಮದುವೆಯೇ ಬೇಡ ಅಂತಿದ್ದ ಕರ್ಣನ ಹೃದಯದಲ್ಲಿ ಪ್ರೀತಿ ಹೂ ಅರಳುತ್ತಿರುವಾಗಲೇ ವಿಧಿಯಾಟ ಎಲ್ಲವನ್ನು ಬದಲಿಸಿದೆ. ಮದುವೆ ಮಂಟಪದಿಂದ ತೇಜಸ್ ಪಲಾಯನ ಮಾಡಿದ್ದರಿಂದ ನಿತ್ಯಾಳನ್ನು ಮದುವೆಯಾಗುವಂತೆ ಕರ್ಣನಿಗೆ ಅಜ್ಜಿ ಹೇಳುತ್ತಾರೆ.

25
ಕರ್ಣ ಮತ್ತು ನಿತ್ಯಾ ನಡುವೆ ನಡೆದ ಒಪ್ಪಂದ
Image Credit : Zee Kannada

ಕರ್ಣ ಮತ್ತು ನಿತ್ಯಾ ನಡುವೆ ನಡೆದ ಒಪ್ಪಂದ

ಅಜ್ಜಿ ಮಾತಿನಂತೆ ತನ್ನ ಪ್ರೀತಿಯನ್ನು ತ್ಯಾಗ ಮಾಡಿ ನಿತ್ಯಾಳನ್ನು ಮದುವೆಯಾಗುತ್ತಿರುವ ಪ್ರೋಮೋ ತೋರಿಸಲಾಗಿತ್ತು. ಆದ್ರೆ ಇಂದಿನ ಪ್ರೋಮೋದಲ್ಲಿ ನಾಲ್ಕು ಗೋಡೆ ನಡುವೆ ಕರ್ಣ ಮತ್ತು ನಿತ್ಯಾ ನಡುವೆ ನಡೆದ ಒಪ್ಪಂದವನ್ನು ತೋರಿಸಲಾಗಿದೆ. ತಾಳಿ ಹಿಡಿದು ನಿತ್ಯಾ ಕೋಣೆಗೆ ಹೋಗುವ ಕರ್ಣ, ತಾನೂ ಯಾರಿಗೂ ಮೋಸ ಮಾಡಲಾರೆ ಎಂದು ಹೇಳುತ್ತಾನೆ.

Related Articles

Related image1
Karna Serial: ಕರ್ಣ-ನಿಧಿ ಖುಷಿ ಹಾಳು ಮಾಡಲು ಪಣ ತೊಟ್ಟಿರೋ ಸಂಜಯ್‌ ಪಾತ್ರಧಾರಿ ಯಾರು?
Related image2
ಇಬ್ರನ್ನೂ ಮದ್ವೆ ಆಗ್ತಾನಾ ಕರ್ಣ? ಮುಂದೇನಾಗತ್ತೆ? ನೇರಪ್ರಸಾರದಲ್ಲಿ Karna Serial ನಟರು ಹೇಳಿದ್ದೇನು ಕೇಳಿ
35
ನಿಧಿ ಹುಚ್ಚಿಯಾಗಿ ಕಣ್ಣೀರು
Image Credit : Zee Kannada

ನಿಧಿ ಹುಚ್ಚಿಯಾಗಿ ಕಣ್ಣೀರು

ಅಜ್ಜಿಯ ಮಾತು ತಪ್ಪದ ಕರ್ಣ ತನ್ನ ಭಾವನೆಗಳನ್ನು ನಿತ್ಯಾಳೊಂದಿಗೆ ಹಂಚಿಕೊಂಡಿದ್ದಾನೆ. ಅಂತಿಮವಾಗಿ ತಾನೇ ಕೊರಳಿಗೆ ತಾಳಿ ಕಟ್ಟಿಕೊಂಡ ನಿತ್ಯಾ ಹೊರಗೆ ಬಂದಿದ್ದಾಳೆ. ಇತ್ತ ಅಕ್ಕನ ಜೊತೆಯಲ್ಲಿ ತನ್ನ ಪ್ರಿಯಕರನ ಮದುವೆಯಾಗಿರುವ ವಿಷಯ ತಿಳಿದು ನಿಧಿ ಹುಚ್ಚಿಯಾಗಿ ಕಣ್ಣೀರು ಹಾಕಿದ್ದಾಳೆ.

45
ಶಾಂತಿ ಅಜ್ಜಿ
Image Credit : Zee Kannada

ಶಾಂತಿ ಅಜ್ಜಿ

ಮತ್ತೊಂದೆಡೆ ಸಪ್ತಪದಿ ತುಳಿಯುವಾಗಲೇ ನಿತ್ಯಾ ಗರ್ಭಿಣಿ ಅನ್ನೋ ವಿಷಯ ಡಾಕ್ಟರ್ ಕರ್ಣನಿಗೆ ಗೊತ್ತಾಗಿದೆ. ನಿತ್ಯಾ ಜೊತೆ ಕರ್ಣ ಸಪ್ತಪದಿ ತುಳಿದಿರೋದನ್ನು ನೋಡಿ ಶಾಂತಿ ಅಜ್ಜಿ ಖುಷಿಯಾಗಿದ್ದಾರೆ. ಗೆಳತಿಯ ಮನೆಗೆ ಮೊಮ್ಮಗಳು ಹೋಗುತ್ತಿರೋದಕ್ಕೆ ಶಾಂತಿ ಖುಷಿಯಾಗಿದ್ದಾರೆ.

ಇದನ್ನೂ ಓದಿ: ಮದುವೆ ಮೇಕಿಂಗ್ ವಿಡಿಯೋ ರಿಲೀಸ್‌ ಮಾಡಿ Karna ಸೀರಿಯಲ್ ವೀಕ್ಷಕರ ತಲೆಗೆ ಹುಳ ಬಿಟ್ಟ ನಿರ್ದೇಶಕರು

55
ಯಾರಿಗೂ ಮೋಸ ಆಗಿಲ್ಲ
Image Credit : Zee Kannada

ಯಾರಿಗೂ ಮೋಸ ಆಗಿಲ್ಲ

ಇಂದಿನ ಪ್ರೋಮೋ ನೋಡಿದ ವೀಕ್ಷಕರು, ಇಲ್ಲಿ ಯಾರಿಗೂ ಮೋಸ ಆಗಿಲ್ಲ. ನಿರ್ದೇಶಕರು ಕಥೆಯನ್ನು ಸರಿಯಾಗಿ ತೆಗೆದುಕೊಂಡು ಹೋಗುತ್ತಿದ್ದಾರೆ. ಆದ್ರೆ ಈ ಸತ್ಯ ಆದಷ್ಟು ಬೇಗ ನಿಧಿಗೆ ಗೊತ್ತಾಗುವಂತೆ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಕರ್ಣ ನಿಧಿಯನ್ನೇ ಮದ್ವೆ ಆಗ್ಲೇಬೇಕು ಅಂತಿರೋದ್ಯಾಕೆ?; ವೀಕ್ಷಕರಿಂದಲೇ ಬಂತು ಹೃದಯಸ್ಪರ್ಶಿ ಕಾಮೆಂಟ್ಸ್

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಕರ್ಣ ಧಾರಾವಾಹಿ
ಕನ್ನಡ ಧಾರಾವಾಹಿ
ಜೀ ಕನ್ನಡ
ಮನರಂಜನಾ ಸುದ್ದಿ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved