MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • Karna Serial: ನಿಜ ಜೀವನದಲ್ಲಿಯೂ ಕರ್ಣನೇ ನಟ ಕಿರಣ್​ ರಾಜ್​- ವಿಡಿಯೋ ನೋಡಿ ಮಹಾರಾಜರೂ ಭಾವುಕ

Karna Serial: ನಿಜ ಜೀವನದಲ್ಲಿಯೂ ಕರ್ಣನೇ ನಟ ಕಿರಣ್​ ರಾಜ್​- ವಿಡಿಯೋ ನೋಡಿ ಮಹಾರಾಜರೂ ಭಾವುಕ

'ಕರ್ಣ' ಧಾರಾವಾಹಿ ಖ್ಯಾತಿಯ ನಟ ಕಿರಣ್ ರಾಜ್ ತೆರೆಯ ಮೇಲೆ ಮಾತ್ರವಲ್ಲ, ನಿಜ ಜೀವನದಲ್ಲಿಯೂ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅನಾಥಾಶ್ರಮಕ್ಕೆ ಸಹಾಯ, ಮಕ್ಕಳ ವಿದ್ಯಾಭ್ಯಾಸದ ಜವಾಬ್ದಾರಿ ಹಾಗೂ ಬಾಲಕನ ಹೃದಯ ಶಸ್ತ್ರಚಿಕಿತ್ಸೆಗೆ ನೆರವಾದ ಅವರ ಸೇವೆ ಜೀ ಪ್ರಶಸ್ತಿ ವೇದಿಕೆಯಲ್ಲಿ ಭಾವುಕರನ್ನಾಗಿಸಿತು.

2 Min read
Suchethana D
Published : Oct 19 2025, 12:13 PM IST
Share this Photo Gallery
  • FB
  • TW
  • Linkdin
  • Whatsapp
17
ಅಲ್ಲೂ ಕರ್ಣ ಇಲ್ಲೂ ಕರ್ಣ
Image Credit : Instagram

ಅಲ್ಲೂ ಕರ್ಣ ಇಲ್ಲೂ ಕರ್ಣ

ಒಬ್ಬ ಮನುಷ್ಯ ಇಷ್ಟೆಲ್ಲಾ ಒಳ್ಳೆಯವನಾಗೋದು ಸಾಧ್ಯನಾ, ಇದ್ಯಾಕೋ ಸ್ವಲ್ಪ ಅತಿಯಾಯಿತು ಎನ್ನಿಸುತ್ತದೆ ಎಂದು Karna Serialನ ಕರ್ಣ ಪಾತ್ರಧಾರಿಯನ್ನು ನೋಡಿದಾಗ ಹಲವಾರು ಮಂದಿ ಕಮೆಂಟ್​ ಮಾಡಿರುವುದು ಉಂಟು. ಜೀವನದಲ್ಲಿ ಇಷ್ಟು ಒಳ್ಳೆಯವರಾಗುವುದು ಸರಿಯಲ್ಲ ಎಂದೂ, ಯಾರು ಎಷ್ಟೇ ನೋವು ಕೊಟ್ಟರೂ ಅದನ್ನು ಖುಷಿಯಿಂದ ಸ್ವೀಕರಿಸುವ ಕ್ಯಾರೆಕ್ಟರ್​ ಬಹುಶಃ ನಿಜ ಜೀವನದಲ್ಲಿ ಯಾರಿಗೂ ಇರಲು ಸಾಧ್ಯವೇ ಇಲ್ಲ ಬಿಡಿ ಇದ್ಯಾಕೋ ಸ್ವಲ್ಪ ಹೆಚ್ಚೇ ಅನ್ನಿಸ್ತಿದೆ ಎನ್ನುವ ಮಾತುಗಳೂ ಕೇಳಿಬರುತ್ತಿವೆ. ಆದರೆ ಸೀರಿಯಲ್​ ಪಾತ್ರದಲ್ಲಿ ಏನು ಬೇಕಾದರೂ ಆಗಬಹುದು, ಆದರೆ ಅದೇ ನಿಜ ಜೀವನದಲ್ಲಿ ಅಂಥದ್ದೇ ವ್ಯಕ್ತಿತ್ವ ಇರುವುದು ತುಂಬಾ ತುಂಬಾ ಕಡಿಮೆಯೇ.

27
ಕರ್ಣ ಪಾತ್ರಧಾರಿಯ ರಿಯಲ್​​ ಸ್ಟೋರಿ
Image Credit : Instagram

ಕರ್ಣ ಪಾತ್ರಧಾರಿಯ ರಿಯಲ್​​ ಸ್ಟೋರಿ

ಆದರೆ, ನಿಜ ಜೀವನದಲ್ಲಿಯೂ ಬೇರೆಯವರಿಗೆ ಬೆಳಕಾಗಿದ್ದಾರೆ ಇದೇ ಕರ್ಣ ಪಾತ್ರಧಾರಿ ನಟ ಕಿರಣ್​ ರಾಜ್​ (Kiran Raj). ಅದಕ್ಕೆ ಸಾಕ್ಷಿಯಾದದ್ದು, ಅವರ ನಿಜ ಜೀವನದ ಕಥೆ ಅನಾವರಣಗೊಂಡಿದ್ದು ಜೀ ಕುಟುಂಬ ಅವಾರ್ಡ್​ನಲ್ಲಿ.  ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ, ನೆಚ್ಚಿನ ನಾಯಕ ಪ್ರಶಸ್ತಿ ಪಡೆದರು ಕಿರಣ್​ ರಾಜ್. ಈ ಸಂದರ್ಭದಲ್ಲಿ ​ ಅವರು ಮಾಡ್ತಿರೋ ಸೇವೆಯ ಬಗ್ಗೆ ಪ್ರಶಸ್ತಿ ನೀಡಲು ಬಂದ ಮೈಸೂರು ಮಹಾರಾಜ ಯದುವೀರ ದತ್ತ ಅವರ ಎದುರು ವಿಟಿ ಮೂಲಕ ತೋರಿಸಿದಾಗ, ವೇದಿಕೆಯಲ್ಲಿದ್ದ ಪ್ರತಿಯೊಬ್ಬರ ಕಣ್ಣಿನಲ್ಲಿಯೂ ನೀರು ಬಂದಿದೆ.

Related Articles

Related image1
Brahmagantu: ಚಿರು- ದಿಶಾ ಕ್ಯೂಟ್​ ಫೋಟೋಶೂಟ್​: ದೀಪಾಗೆ ತೋರಿಸ್ಬೇಡಿ, ಹುಷಾರ್​ ಎಂದ ಫ್ಯಾನ್ಸ್​
Related image2
ಅತ್ಯುತ್ತಮ ಖಳನಟಿ ಪ್ರಶಸ್ತಿ ಪಡೆದ Brahmagantu ಸೌಂದರ್ಯ ರಿಯಲ್​ ಫ್ಯಾಮಿಲಿ ಜೊತೆ ಕಾಣಿಸಿಕೊಂಡಾಗ
37
ಸಮಾಜ ಸೇವೆಯಲ್ಲಿ ಕಿರಣ್​ ರಾಜ್​
Image Credit : Instagram

ಸಮಾಜ ಸೇವೆಯಲ್ಲಿ ಕಿರಣ್​ ರಾಜ್​

ನಟ ಕಿರಣ್ ರಾಜ್ ಅವರು ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅವರು ತಮ್ಮ ಆದಾಯದ ಒಂದು ಭಾಗವನ್ನು ಮೀಸಲಿಟ್ಟಿದ್ದಾರೆ. ಅವರು ಅನಾಥಾಶ್ರಮ, ಬಡವರಿಗೆ, ಮತ್ತು ಬೀದಿ ಬದಿಯ ಜನರಿಗೆ ಆಹಾರ, ಊಟ, ಬಟ್ಟೆ, ನೋಟ್‌ಬುಕ್‍ಗಳಂತಹ ಅಗತ್ಯ ವಸ್ತುಗಳನ್ನು ವಿತರಿಸುತ್ತಾರೆ. ಅವರು ಹಬ್ಬಗಳ ಸಂದರ್ಭಗಳಲ್ಲಿ ವಿಶೇಷವಾಗಿ ಸಹಾಯ ಮಾಡುತ್ತಾರೆ ಮತ್ತು ಕೋವಿಡ್‌-19 ಸಮಯದಲ್ಲಿಯೂ ಅವರು ಸಾಕಷ್ಟು ಸೇವೆ ಮಾಡಿದ್ದಾರೆ.

47
ಪ್ರತಿ ತಿಂಗಳೂ ರೇಷನ್​
Image Credit : Instagram

ಪ್ರತಿ ತಿಂಗಳೂ ರೇಷನ್​

ಅನಾಥಾಶ್ರಮ ಒಂದಕ್ಕೆ ಕಿರಣ್​ ರಾಜ್​ ಕಡೆಯಿಂದ ಪ್ರತಿತಿಂಗಳೂ ರೇಷನ್​ ಬರುತ್ತದೆ. 25 ಮಕ್ಕಳ ಸ್ಕೂಲ್​ ಫೀಸ್​ ತುಂಬುತ್ತಿದ್ದಾರೆ. ಆಶ್ರಮದ ಮಕ್ಕಳನ್ನು ಟೂರ್​ಗೂ ಕರೆದುಕೊಂಡು ಹೋಗ್ತಾರೆ. ಈ ಬಗ್ಗೆ ಖುದ್ದು ಆಶ್ರಮವಾಸಿಗಳು ಭಾವುಕರಾಗಿ ನುಡಿದಿದ್ದಾರೆ.

57
ಆ ದಿನಗಳ ನೆನೆದ ನಟ
Image Credit : INstagram

ಆ ದಿನಗಳ ನೆನೆದ ನಟ

ಈ ಬಗ್ಗೆ ಮಾತನಾಡಿದ ಕಿರಣ್​ ರಾಜ್ ಅವರು, ಲೈಫ್​ನಲ್ಲಿ ಒಂದು ಸನ್ನಿವೇಶ ಬಂದಿತ್ತು. ದಾರಿನೇ ಇರಲಿಲ್ಲ. ಆಗ ಅನ್ನಿಸ್ತಿತ್ತು. ದೇವರು ಕಷ್ಟ ಅರ್ಥಮಾಡಿಕೊಂಡು ನನಗೆ ಸಪೋರ್ಟ್​ ಮಾಡಿಬಿಡಲಿ ಎಂದು. ಆದರೆ ಅದು ಸಾಧ್ಯ ಆಗಲಿಲ್ಲ. ನನಗಂತೂ ಆಗಲಿಲ್ಲ. ಆದರೆ ಬೇರೆಯವರಿಗೆ ನನ್ನಿಂದ ನೆರವಾಗಲಿ ಎಂದುಕೊಂಡೆ. ಇಂದು ಆರ್ಥಿಕವಾಗಿ ಸದೃಢ ಆಗಿದ್ದೇನೆ. ಆದರೆ ಇವರ ಸ್ಲೈಲ್​ ನೋಡಿದಾಗ ಅದರ ಮುಂದೆ ಎಲ್ಲವೂ ಗೌಣವಾಗುತ್ತದೆ ಎಂದಿದ್ದಾರೆ.

67
ವೇದಿಕೆಯ ಮೇಲೆ ಮಕ್ಕಳು
Image Credit : Instagram

ವೇದಿಕೆಯ ಮೇಲೆ ಮಕ್ಕಳು

ಇದೇ ವೇಳೆ ಆಶ್ರಮದ ವಾಸಿಗಳು, ಮಕ್ಕಳು ಎಲ್ಲರೂ ವೇದಿಕೆಯ ಮೇಲೆ ಹಾಜರು ಇದ್ದರು. ಆ್ಯಂಕರ್​ ಅನುಶ್ರೀ ಅವರು ನಿಮ್ಮಲ್ಲಿ ನಾವು ಅಪ್ಪು ಸರ್​ ಅವರನ್ನು ಕಂಡ್ವಿ ಎಂದು ಭಾವುಕರಾದರು. ಇದೇ ವೇದಿಕೆಯಲ್ಲಿ ಕಿರಣ್​ ರಾಜ್ ಹಾರ್ಟ್​ ಸರ್ಜರಿ ಮಾಡಲು ನೆರವಾದ ಕಾರಣಕ್ಕೆ ಬದುಕುಳಿದ ಬಾಲಕ ಕೂಡ ಹಾಜರಿದ್ದ.

77
ಮಹಾರಾಜರಿಂದಲೂ ಸಹಾಯ
Image Credit : Instagram

ಮಹಾರಾಜರಿಂದಲೂ ಸಹಾಯ

ಇದನ್ನು ನೋಡಿದ ಯದುವೀರ ದತ್ತ ಒಡೆಯರ್​ ಅವರು, ಇದು ತುಂಬಾ ಸಂತೋಷದ ಸಂಗತಿ. ನೀವು ಎಲ್ಲಕ್ಕಿಂತ ಮೇಲೆ ಹೋಗಿದ್ದೀರಿ ಎಂದು ನಟನನ್ನು ಪ್ರಶಂಸಿಸಿ ನಮ್ಮ ಪ್ರತಿಷ್ಠಾನದ ಕಡೆಯಿಂದಲೂ ಈ ಅನಾಥಾಶ್ರಮಕ್ಕೆ ಕೈಜೋಡಿಸುತ್ತೇವೆ ಎಂದು ಹೇಳಿದರು.

 
 
 
 
View this post on Instagram
 
 
 
 
 
 
 
 
 
 
 

A post shared by Zee Kannada (@zeekannada)

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಕರ್ಣ ಧಾರಾವಾಹಿ
ಜೀ ಕನ್ನಡ
ಕಿರಣ್ ರಾಜ್
ಸಾಮಾಜಿಕ ಮಾಧ್ಯಮ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved