MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • ಮಲ್ಲಿ ಕೋಳಿ ಜಗಳದಿಂದ ರೋಚಕ ತಿರುವು; ಅಮೃತಧಾರೆ ಈ ಟ್ವಿಸ್ಟ್ ನೋಡಿದ್ರೆ ಹಾರ್ಟ್‌ ಅಟ್ಯಾಕ್ ಫಿಕ್ಸ್!

ಮಲ್ಲಿ ಕೋಳಿ ಜಗಳದಿಂದ ರೋಚಕ ತಿರುವು; ಅಮೃತಧಾರೆ ಈ ಟ್ವಿಸ್ಟ್ ನೋಡಿದ್ರೆ ಹಾರ್ಟ್‌ ಅಟ್ಯಾಕ್ ಫಿಕ್ಸ್!

Zee Kannada Serial Amruthadhaare: ಮಲ್ಲಿಯ ಜಗಳದಿಂದ ಹಳೆಯ ಮನೆ ಖಾಲಿ ಮಾಡಿದ ಭೂಮಿಕಾಗೆ, ಗೌತಮ್ ಮತ್ತೆ ಎದುರಾಗುತ್ತಾನೆ. ಇತ್ತ ಜೈದೇವ್ ಆಸ್ತಿಗಾಗಿ ಇವರಿಬ್ಬರನ್ನು ಹುಡುಕುತ್ತಿದ್ದು, ಕಥೆ ರೋಚಕ ತಿರುವು ಪಡೆದಿದೆ.

1 Min read
Mahmad Rafik
Published : Oct 13 2025, 10:29 AM IST
Share this Photo Gallery
  • FB
  • TW
  • Linkdin
  • Whatsapp
15
 ಅಮೃತಧಾರೆ ಸೀರಿಯಲ್ ಮತ್ತೊಂದು ರೋಚಕ ತಿರುವು
Image Credit : Zee Kannnada

ಅಮೃತಧಾರೆ ಸೀರಿಯಲ್ ಮತ್ತೊಂದು ರೋಚಕ ತಿರುವು

ಜೀ ಕನ್ನಡದಲ್ಲಿ ಪ್ರಸಾರವಾಗುವ ಅಮೃತಧಾರೆ ಸೀರಿಯಲ್ ಸಾಲು ಸಾಲು ರೋಚಕ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ದೂರದ ಹಳ್ಳಿಯಲ್ಲಿದ್ದ ಭೂಮಿಕಾ, ಮಲ್ಲಿ ಮತ್ತು ಅಪ್ಪು ಬೆಂಗಳೂರಿಗೆ ಹಿಂದಿರುಗಿದ್ದಾರೆ. ಇತ್ತ ಗೌತಮ್ ಮನೆಗೆ ಅದೃಷ್ಟ ದೇವತೆಯ ಆಗಮನವಾಗಿದೆ. ಇದೀಗ ಮಲ್ಲಿಯ ಜಗಳದಿಂದ ಅಮೃತಧಾರೆ ಸೀರಿಯಲ್ ಮತ್ತೊಂದು ರೋಚಕ ತಿರುವು ಪಡೆದುಕೊಂಡಿದೆ.

25
ಗೌತಮ್‌ನಿಂದ ದೂರ
Image Credit : Zee Kannnada

ಗೌತಮ್‌ನಿಂದ ದೂರ

ಗೌತಮ್‌ನಿಂದ ದೂರವಿರಬೇಕು ಅನ್ನೋದು ಭೂಮಿಕಾ ಉದ್ದೇಶ. ಇದೀಗ ಗೌತಮ್ ವಾಸವಾಗಿರುವ ವಠಾರಕ್ಕೆ ಭೂಮಿಕಾ ಎಂಟ್ರಿಯಾಗಿದೆ. ತಮ್ಮ ವಠಾರಕ್ಕೆ ಹೊಸದಾಗಿ ಬಂದಿರುವ ಅತಿಥಿಗಳಿಗೆ ಟೀ ಮಾಡಿಕೊಂಡು ಕೊಡಲು ಗೌತಮ್ ಹೋಗಿದ್ದು, ಮತ್ತೆ ಭೂಮಿಕಾ ಅವರನ್ನು ನೋಡುವಂತಾಗಿದೆ.

Related Articles

Related image1
ಅಮೃತಧಾರೆ ಸೀರಿಯಲ್ ಮಲ್ಲಿ ಮದುವೆ; ಹುಡುಗನ ಬಗ್ಗೆ ಅನ್ವಿತಾ ಸಾಗರ್ ಮಾತು
Related image2
ಬಾಲ್ಯದ ಗೆಳೆಯನ ಜೊತೆ ಹಸೆಮಣೆ ಏರಲು ರೆಡಿಯಾದ್ರು ಅಮೃತಧಾರೆ ನಟಿ…. ಮೇಘಾ ಶೆಣೈ Pre Wedding Photos
35
 ಓನರ್ ಜೊತೆ ಮಲ್ಲಿ ಕೋಳಿ ಜಗಳ
Image Credit : Zee Kannnada

ಓನರ್ ಜೊತೆ ಮಲ್ಲಿ ಕೋಳಿ ಜಗಳ

ಮನೆಯಲ್ಲಿ ನೀರು ಬರುತ್ತಿಲ್ಲ ಎಂದು ಓನರ್ ಜೊತೆ ಮಲ್ಲಿ ಕೋಳಿ ಜಗಳ ಮಾಡಿಕೊಂಡಿದ್ದಾರೆ. ಇದರಿಂದ ಕೋಪಗೊಂಡ ಓನರ್ ಮನೆ ಖಾಲಿ ಮಾಡುವಂತೆ ಹೇಳಿದ್ದಾರೆ. ಇದೀಗ ಭೂಮಿಕಾಗೆ ಗೆಳತಿಯ ಸಹಾಯದಿಂದ ವಠಾರದಲ್ಲಿ ಬಾಡಿಗೆ ಮನೆ ಸಿಕ್ಕಿದೆ. ಆದ್ರೆ ಇದೇ ವಠಾರದಲ್ಲಿ ಗೌತಮ್ ವಾಸವಾಗಿರುವ ವಿಷಯ ಭೂಮಿಕಾಗೆ ತಿಳಿದಿಲ್ಲ.

45
 ಟ್ವಿಸ್ಟ್
Image Credit : Zee Kannnada

ಟ್ವಿಸ್ಟ್

ಇಂದು ಈ ಪ್ರೋಮೋ ಬಿಡುಗಡೆಯಾಗಿದ್ದು ನೆಟ್ಟಿಗರು ತರೇಹವಾರಿಯಾಗಿ ಕಮೆಂಟ್ ಮಾಡಿದ್ದಾರೆ. ಅಯ್ಯೋ ಏನ್ರೀ ಡೈರೆಕ್ಟರ್ ಇದು ನೀವು ಕೊಡೋ ಟ್ವಿಸ್ಟ್ ಗಳು ನೋಡಿದ್ರೆ ನಮಗೆ ಹಾರ್ಟ್ ಅಟ್ಟ್ಯಾಕ್ ಆಗುತ್ತೆ. ಭೂಮಿ ಗುಂಡಗಿದೆ ಎನ್ನುವುದಕ್ಕೆ ಇದೇ ಸಾಕ್ಷಿ. ಗೌತಮ್ ನೀನು ತುಂಬಾ ಒಳ್ಳೆಯವನಾಗಬೇಡಪ್ಪಾ. ಏನ್ ಏನ್ ಟ್ವಿಸ್ಟ್ ಕೊಡ್ತೀರಾ ಮಾರಾಯ ನೀವು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಇದನ್ನೂ ಓದಿ: ಸ್ಪಂದನಾ ಜೊತೆಗಿನ ಜಗಳದ ವೇಳೆ ಸತ್ಯ ಬಿಚ್ಚಿಟ್ರಾ ಧ್ರುವಂತ್?

55
ಭೂಮಿಕಾ ಮತ್ತು ಗೌತಮ್‌ಗಾಗಿ ಹುಡುಕಾಟ
Image Credit : Zee Kannnada

ಭೂಮಿಕಾ ಮತ್ತು ಗೌತಮ್‌ಗಾಗಿ ಹುಡುಕಾಟ

ಇತ್ತ ಭೂಮಿಕಾ ಮತ್ತು ಗೌತಮ್‌ಗಾಗಿ ಜೈದೇವ್ ಹುಡುಕಾಟ ನಡೆಸಿದ್ದಾನೆ. ಆಸ್ತಿಯನ್ನು ಸಂಪೂರ್ಣವಾಗಿ ತನ್ನದಾಗಿಸಿಕೊಳ್ಳಲು ಜೈದೇವ್ ಮತ್ತು ಶಕುಂತಲಾ ಪ್ಲಾನ್ ಮಾಡಿದ್ದಾರೆ. 600 ಕೋಟಿ ರೂಪಾಯಿ ಸಾಲದಿಂದ ಪಾರಾಗಲು ಸಂಚು ರೂಪಿಸುತ್ತಿದ್ದಾರೆ.

ಇದನ್ನೂ ಓದಿ: Karna Serial: ನಿಧಿ-ಕರ್ಣರನ್ನು ದೂರ ಮಾಡೋಕೆ ಅಸಲಿ ಕಾರಣ ಕೊಟ್ಟ ರಮೇಶ್!‌ ಎಂಥ ಕುತಂತ್ರಿಯೋ ನೀನು

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಅಮೃತಧಾರೆ
ಜೀ ಕನ್ನಡ
ಕನ್ನಡ ಧಾರಾವಾಹಿ
ಮನರಂಜನಾ ಸುದ್ದಿ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved